ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅಸಹಾಯಕ ಆತ್ಮಗಳು

(‘ಅಸಹಾಯಕಆತ್ಮಗಳು’ ಎನ್ನುವ ಮಾಲಿಕೆಯಲ್ಲಿ ನಾನುಬರೆದಈಕತೆಗಳುನೈಜಜೀವನದಚಿತ್ರಗಳಾಗಿದ್ದು, ಸಂಬಂದಿಸಿದಹೆಣ್ಣುಮಕ್ಕಳನ್ನುಸಂದರ್ಶಿಸಿಅವರಬಾಯಿಂದಲೇಕೇಳಿಬರೆದಕತೆಗಳಾಗಿವೆ-)ನಿಮ್ಮಲೇಖಕ

Read Post »

ಕಾವ್ಯಯಾನ

ಕಾಯಕ ವೀರ ಕಾರ್ಮಿಕ

ಕಾವ್ಯಯಾನ ಕಾಯಕ ವೀರ ಕಾರ್ಮಿಕ ಚೈತ್ರಾ ತಿಪ್ಪೇಸ್ವಾಮಿ ಕಾಯಕಯೋಗಿ ಕಾರ್ಮಿಕ ಶ್ರೇಷ್ಠಕಾರ್ಖಾನೆಯೇ ಅವನ ಕರ್ಮಸ್ಥಾನದುಡಿಮೆಯ ಧರ್ಮವೇ ಜೀವಾಳ ಕಾರ್ಮಿಕ ಶ್ರಮದಿಂದ ದೇಶಕ್ಕೆ ಸರಕುಪಾಳಿಯ ಮೇಲೆ ಕೆಲಸವ ಮಾಡಿಲಾಭದ ಪ್ರಗತಿಗೆ ಕಾರಣವಾದ ಬೆವರು ಸುರಿಸಿ ದುಡಿವ ಶ್ರಮಿಕಯಂತ್ರಗಳೊಂದಿಗೆ ಕಾರ್ಯನಿರತಅರೆಕ್ಷಣ ತೊರೆಮನ ಕಾದಿದೆ ದುರಂತ ಕಾಯ ಸೋತರು ದೇಹ ದಣಿದರೂಕಾಯಕಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲಹಗಲಿರುಳು ದುಡಿದರೂ ಕೆಲಸಕ್ಕೆ ರಕ್ಷಣೆ ಇಲ್ಲ ನೊಂದ ಮನಕೆ ಬೇಕಿದೆ ಸಾಂತ್ವನಕಾಯಕಲ್ಪ ನೀಡಬೇಕಿದೆ ಸರ್ಕಾರಕಾನೂನು ಕೊಡಬೇಕಿದೆಸಬಲತೆಯ ಮಾಲೀಕನ ಪ್ರೀತಿ ಕಾರ್ಮಿಕರಿಗೆ ಇರಲಿಕಾರ್ಮಿಕರ ಜೀವಕ್ಕೆ ಭದ್ರತೆ ಇರಲಿಕಾರ್ಮಿಕರ ಕಲ್ಯಾಣವೇ ದೇಶಕ್ಕೆ ಹಿತವಾಗಲಿ ********************

ಕಾಯಕ ವೀರ ಕಾರ್ಮಿಕ Read Post »

ಕಾವ್ಯಯಾನ

ಒಲವ ಹಣತೆ

ಕಾವ್ಯಯಾನ ಒಲವ ಹಣತೆ ಭಾರತಿ ಕೇ ನಲವಡೆ ಅವಳು ಸುಂದರ ಮನಸಿನ ನಗುವ ಹೂವು ನನಗೆಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ ಮನಕೆಕನಸು ಯಾರಿಗೂ ಕೇಡು ಬಯಸದ ಮುಗುದೆದಿನಪೂರ್ಣವಾಗದು ಅವಳನು ನೋಡದೆ ಸದಾ// ಬಿರಿದ ಸುಮದಂತೆ ಹುಸಿಮುನಿಸಿನಲೂ ಅಮೃತಧಾರೆಒಲವ ತುಂಬುವ ಮುಂಗಾರು ಮಳೆಯ ಪುಳಕದಂತೆಸರಳ ನಡೆಯ ನೀಳಜಡೆಯ ಕೃಷ್ಣಸುಂದರಿ ನೀನುನೊಂದವರಿಗೆ ಸಾಂತ್ವನದ ಹೊಳೆಯ ಹರಿಸುತ// ಇಂದೇಕೋ ಅವಳ ಮನೆ ಮುಂದೆ ರಾಶಿ ಜನರ ಸಾಲುಕದ್ದು ನೋಡುವ ನಾನು ಬಳಿ ಸಾಗಿದರೆ ಉಸಿರು ಕಟ್ಟಿದ ದೃಶ್ಯಕೊರೋನಾ ಮಾರಿಗೆ ಬಲಿಯಾದ ತಂದೆಯ ಸೇವೆಗೆತಾನೆ ಮೊದಲು ಬಲಿಯಾದಳು ಕೋಮಲೆಹೃದಯ ಕರಗಿದ ಸಮಯವದು ಕಂಬನಿಯಾಗಿ ಹರಿದಿತ್ತು// ನಿತ್ಯ ಹಸಿರಾದ ಮನವಿಂದು ಮರುಭೂಮಿಯಾಗಿದೆ ಗೆಳತಿಒಲವ ಹಣತೆ ಪ್ರೀತಿ ತೈಲವಿಲ್ಲದೆ ನಂದಿದೆ ಇಂದುಹೇಗೆ ಬದುಕಲಿ ಪ್ರಿಯೆ ನೀನಿಲ್ಲದ ಈ ಲೋಕದಲಿ ನಾನುನಿನ್ನ ಚಿರನೆನಪೆ ಸಾಕು ನನ್ನ ಬದುಕಿಗೆ ಚೈತನ್ಯ ******************************************************

ಒಲವ ಹಣತೆ Read Post »

ಕಾವ್ಯಯಾನ

ಕವಿತೆಯೆಂದರೆ ಹೀಗೆ

ಕಾವ್ಯಯಾನ ಕವಿತೆಯೆಂದರೆ ಹೀಗೆ ವಿಶ್ವನಾಥ ಎನ್. ನೇರಳಕಟ್ಟೆ ಕವಿತೆಯೆಂದರೆ ಹೀಗೆ-ಕತ್ತಿ ಅಲಗಿನಲ್ಲರಳಿದಅಲರಿನ ಹಾಗೆಹೇಗೇ ಹುಟ್ಟಿದ್ದರೂ ಕೂಡಾಪರಿಮಳ ಬೀರುವುದನ್ನುನಿಲ್ಲಿಸುವುದೇ ಇಲ್ಲ ಕವಿತೆಯೆಂದರೆ ಹೀಗೆ-ಮೌನಗರ್ಭದೊಳಗಿಂದ ಹೊರಬಂದಮಾತಿನ ಪಿಂಡದಂತೆಹೊರಬರುವವರೆಗೂ ಯಮಯಾತನೆಆಮೇಲಿನ ಸಂತಸಕ್ಕೆಣೆಯಿಲ್ಲ ಕವಿತೆಯೆಂದರೆ ಹೀಗೆ-ಇರುವೆ ಕಿವಿ ಹೊಕ್ಕ ಹಾಗೆಒಂದಿಷ್ಟು ಕಚಗುಳಿ,ಒಂದಷ್ಟು ಕಾಟ ತಪ್ಪಿದ್ದೇ ಅಲ್ಲಒಳ ಇದ್ದಷ್ಟೂ ಹೊತ್ತು ಕವಿತೆಯೆಂದರೆ ಹೀಗೆ-ಭರಣಿಯಲ್ಲಿ ಅಮ್ಮ ತುಂಬಿಸಿಟ್ಟಮಿಡಿ ಉಪ್ಪಿನಕಾಯಿಯ ಹಾಗೆಹಳತಾದಷ್ಟೂ ರುಚಿ ಜಾಸ್ತಿ + ಕವಿತೆಯೆಂದರೆ ಹೀಗೆ-ಕನ್ನಡಿ ಎದುರು ನಿಂತ ಹಾಗೆತನ್ನನ್ನು ತಾನೇ ಕಾಣುವ ತವಕ

ಕವಿತೆಯೆಂದರೆ ಹೀಗೆ Read Post »

ಕಾವ್ಯಯಾನ

ಎಲ್ಲ…ತಿರಗಾ-ಮುರಗಾ.

ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ     ಅನುಭವ ಇಂದು ಎಲ್ಲ ತಿರಗಾ-ಮುರಗಾ.     ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ     ಎಲ್ಲ ತಿರಗಾ-ಮುರಗಾ.     ಆಲಯದಲ್ಲಿ ಬಯಲು,ಬಯಲಲ್ಲಿ ಆಲಯ     ಭೃಮೆ ವಾಸ್ತವಗಳ ನಡುವಿನ ಸೆಣಸಾಟ     ಹೋರಾಟವಿಂದು,     ಎಲ್ಲ…..ತಿರಗಾ-ಮುರಗಾ.     ನೀರಿದ್ದೆಡೆ ನೆಲ,ನೆಲವಿದ್ದೆಡೆ ನೀರು     ಬಾಗಿಲಿರುವೆಡೆಯಲ್ಲಿ ಗಟ್ಟಿ ಗೋಡೆ     ಗೋಡೆಯಿರುವೆಡೆ ತೆರೆದ ಬಾಗಿಲು,     ಎಲ್ಲ…..ತಿರಗಾ-ಮುರಗಾ.     ಕಣ್ಣ ತಣಿಸುವ ಹಸಿರ ತಂಪು ಬಸಿರ     ಉಸಿರಲ್ಲಿ ಸುಡು,ಸುಡು ಬೆಂಕಿ,     ಶಾಂತಿಯಾಗರ ಹ್ರದಯ ಸಾಗರದ     ಒಳಗೆ ಹೆಡೆಯೆತ್ತಿ ಭರ‍್ಗರೆವ     ಅಶಾಂತಿಯ ನಾಗರ,     ಎಲ್ಲ…..ತಿರಗಾ-ಮುರಗಾ.    ನಾನಂದು ‘ಕೊಂಡಿ’ದ್ದು,ಕೊಳ್ಳದ್ದು    ಸಾಧಿಸಿದ್ದು,ಸಾಧಿಸದ್ದು ,    ಆಚಾರ,ವಿಚಾರ,    ಎಲ್ಲ……..ತಿರಗಾ-ಮುರಗಾ.    ದೇವರೆಂದು ಕೊಂಡಲ್ಲಿ ದೆವ್ವ,    ದೆವ್ವವೆಂದು ಕೊಂಡಲ್ಲಿ ದೇವರು,    ಎಲ್ಲ….ತಿರಗಾ-ಮುರಗಾ.    ನನ್ನೊಳಗೆ ಇನ್ಯಾರೋ….?    ಇನ್ಯಾರದ್ದೋ ಒಳಗೆ ನಾನೋ….?    ಪರಕಾಯ ಪ್ರವೇಶ …ಗೊತ್ತಿಲ್ಲ,ಒಟ್ಟಾರೆ    ಎಲ್ಲ……ತಿರಗಾ-ಮುರಗಾ.    ನನ್ನ ನೋವಿಗೆ ಯಾರದ್ದೋ ನಗು,    ನಾ..ನಕ್ಕಾಗೆಲ್ಲಾ ಯಾರಿಗೋ ನೋವು,    ಕ಼ಣಕ್ಕೊಂದು ಆಯಾಮ    ಎಲ್ಲ….ತಿರಗಾ-ಮುರಗಾ.    ಬಿತ್ತಿದ್ದು ಮಾವು,ಬೆಳೆದದ್ದು ಬೇವು,    ಕಂಗಾಲು ರೈತ ನಾ…….    ಎಲ್ಲ…..ತಿರಗಾ-ಮುರಗಾ. *****************

ಎಲ್ಲ…ತಿರಗಾ-ಮುರಗಾ. Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಳುವಿನ ಕ್ಷೀಣ ಶಬ್ಧವನ್ನು ಹೊರತುಪಡಿಸಿ ಹೆಚ್ಚಿನ ಜನವೂ ಇಲ್ಲ, ಗದ್ದಲವೂ ಇಲ್ಲ. ಕನಿಷ್ಟ ದೇಹ ತ್ಯಜಿಸಿರುವ ಆತ್ಮಕ್ಕೆ ಸಲ್ಲಬೇಕಾದ ಅಶ್ರುತರ್ಪಣವೂ ಇಲ್ಲದೆ ವಿದಾಯ ಸಲ್ಲಿಸಬೇಕಾದ ದುಃಸ್ಥಿತಿ! ಒಂದು ಸಣ್ಣ ಅತಿ ಸಣ್ಣ ನೋವಿನೆಳೆ ಮಾತ್ರ ಇಡೀ ಜೀವವನ್ನೇ ಹಿಂಡುತ್ತಿದೆ

Read Post »

You cannot copy content of this page

Scroll to Top