ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ವಸುಂಧರಾ ಕದಲೂರು ಹೊಸ ಅಂಕಣ ‘ತೊರೆಯ ಹರಿವು’

ಸಮೂಹ ಪ್ರಜ್ಞೆ ಜಾಗೃತವಾಗಬೇಕಾದರೆ, ಸಾಮಾಜಿಕರ ವೈಯಕ್ತಿಕವಾದ ನಿಲವುಗಳು ಸ್ಪಷ್ಟವಾಗಿರಬೇಕು. ತರ್ಕಬದ್ಧವಾಗಿರಬೇಕು. ದೈನಂದಿನ ವಿವರಗಳಲ್ಲಿ ವಿಜ್ಞಾನವನ್ನು ಕೇವಲ ಉಪಯೋಗಿತ ಉಪಕರಣಗಳಿಗೆ ಸೀಮಿತಗೊಳಿಸಿಕೊಳ್ಳದೇ, ವಿವೇಚನೆಗೆ ಮೂಲ ಇಂಧನವಾಗಿಸಿ ಕೊಳ್ಳಬೇಕು

Read Post »

ಕಾವ್ಯಯಾನ

ಆತ್ಮಸಖಿ ಅಕ್ಕಾ

ಆತ್ಮಸಖಿ ಅಕ್ಕಾ ಸುಮಾವೀಣಾ ಆತ್ಮಸಖಿ ನೀ.. ಅಕ್ಕಾಮಹಾಮನೆಯ ಮಹಾದೇವಿನೀ ವಸುಂಧರೆಯ ಆತ್ಮಸಖಿ!ಸಾವಿಲ್ಲದ ಸೀಮೆಯಿಲ್ಲದ ಮಲ್ಲ್ಲಿಕನಿಗೊಲಿದನಿನ್ನ ಸೀಮಾತೀತ ಭಾವಕ್ಕೆ ಜಗವೇ…ಜಗವೆ ಬಾರಿಸುತಿದೆ ಜಂಗಮದ ಗಂಟೆಯನು!ಸ್ತ್ರೀಕುಲವ ನೋಡುವ ಸೀಮೆಯಬದಲಾಯಿಸಿದ ನೀ ನಮ್ಮ ಆತ್ಮ ಸಖೀ!ನಿತ್ಯ ಸ್ಮರಣಕೆ ಬಂದು ನಿಲುವ ಮಹಾದೇವಿ ನೀಅಕ್ಕಾ.. ಮಹಾದೇವನಾ ಮಹಾದೇವಿಗಂಡುಹೆಣ್ಣೆಂಬ ಸೂತಕ ಕಳೆದ ಸೌಖ್ಯ ದೇವಿ!ನರನಾರೀ ಹೃದಯಗಳ ಪತಿತಭಾವದಿಂದಲೇಭಾಂಧವ್ಯ ಬೆಸೆದ ನೀ ಶರಣೆಯರ ಆತ್ಮಸಖೀ!ಸ್ತ್ರೀಕುಲದ ಸಚಿಜೀವಿನಿ. ಹೂವ ತರುವರಮನೆಗೆ ಹುಲ್ಲ ತಾರದ ನಿನ್ನ ಸೌಧರ್ಮಿಕಕೆಯಆ ಹೊನ್ನುಡಿ ನಮಗೆ ಬೆನ್ನುಡಿ,ಚೆನ್ನುಡಿ!ಆತ್ಮಬಲಕ್ಕೆ ಸಾಕ್ಷಿಯಾದ ಅಕ್ಕಾ ನೀಆತ್ಮಸಂವರ್ಧನೆಯ ತವನಿಧಿ, ಲೋಕಬಂಧುಗಳ ಆತ್ಮಸಖೀ..ಲೋಕದಾ ಸಿರಿಗೊಲಿಯದ ನಿನ್ನಶ್ರೀಶೈಲದಾ ನಾಡುಹೆಣ್ಮಕ್ಕಳ ನಿಜ ತವರು. ಉಡಿತುಂಬಾ ತುಂಬಿರುವೆನೀ ನುಡಿಬಾಗಿನವನ್ನೇ ಬೇಕಿಲ್ಲ ನಮಗೇನಿನ್ನು..ಕರೆದಾಗಲೆಲ್ಲಾ ಬರುವೆಯಾ ನೀನು ?ಬರುವೆಖಂಡಿತಾ ಬರುವೆ. ನೀ ನಮ್ಮ ಆತ್ಮಸಖೀ…ವಿಚಾರವಂತಿಕೆಯ ಮಡಿವಂತಿಕೆಯಲೆ ಎಲ್ಲರನು ತವಿಸಿರುವೆನೀ ನಮಗೆ ಆತ್ಮಸಖೀ.. ಆತ್ಮಸುಖೀನೀ ಬರೆ ಹೆಣ್ಣಲ್ಲ! ನೀ ಬರೆ ಶರಣೆಯಲ್ಲಾ!ಶರಣಾರ್ಥಿಗಳ ನಿತ್ಯ ಸ್ಮರಣಾರ್ಥೀವಸುಂಧರೆಯ ಆತ್ಮ ಸಖೀ… ಆತ್ಮ ಸುಖೀ… ******************************

ಆತ್ಮಸಖಿ ಅಕ್ಕಾ Read Post »

ಕಾವ್ಯಯಾನ

ಜಗದ ಜ್ಯೋತಿ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲಕೊರಳಿಗೆ ತಾಳಿಯನೂ ಬಿಗಿಯಲಿಲ್ಲಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲಮದುವೆಯ ಹಂದರವು ಹರಿವಿರಲಿಲ್ಲಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆಹೆಣ್ಣೆಂದು ಅವಕಾಶವಾದಿಯಾಗದೆಅಲ್ಲಮರ ಮಂಟಪದ ಜ್ಯೋತಿಯಾದೆಉಡತಡಿ ಉಡುಗೊರೆಯಾಗಿ ಉದಯಿಸಿದೆಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನಅಲ್ಲಮರ ಸಮ ಸಂವೇದನಶೀಲಳುಅನುಭಾವಿಯುಕ್ತ ಮೇರು ಸಾಹಿತಿವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆಮನವು ಚಂಚಲದಿ ಬೆತ್ತಲಾಗಿದೆಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆಭೌತಿಕ ಭೋಗ ಬಂಧನದಲಿದೆಯಂದೆಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನಕರ್ಮಠ ಯೋಗಿಣಿಯಾಗಿ ಸಾಧನಯೋಗಾಂಗ ತ್ರಿವಿಧಿಯ ಅನುಷ್ಠಾನಅಲ್ಲಮರಿಂದ ಧೀರ ನುಡಿ ತಾಯಿ ನಮನಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳುಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳುಕೇಶಾಂಬರವು ಜಗದ ಜನರ ಹಂಗಿಗೆಂದವಳುಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳುಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು **********************************

ಜಗದ ಜ್ಯೋತಿ Read Post »

ಕಾವ್ಯಯಾನ, ಗಝಲ್

ಗಜಲ್

ಅಕ್ಕಮಹಾದೇವಿ ಜನುಮದಿನದ ವಿಶೇಷ ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾಯಾ ಮೋಹದ ಬಟ್ಟೆಯನು ಕಳಚಿ ಎಸೆದವಳುವೈರಾಗ್ಯದ ಬಟ್ಟೆಯನು ಅರಸುತ್ತಾ ಹೊರಟವಳು ಅರಮನೆಯ ವೈಭವದ ಸುಖ ದಿಕ್ಕರಿಸಿದವಳುಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದವಳು ಹಸಿವು ತೃಷೆ ಭಾದೆಗಳನು ಕಪೂ೯ರದಂತೆ ದಹಿಸಿದವಳುಅಂಗ ಚೇಷ್ಟೆ ಕಾಮ ಕ್ರೋಧ ಗಳ ಕವಚ ಕಳಿಚಿದವಳು ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದವಳುಸ್ತ್ರೀ ಸಂಕುಲನಕೆ ಆತ್ಮಸ್ಥೈರ್ಯ ತುಂಬಿದವಳು ಶರಣ ಸಮೋಹದಲಿ ಅಗ್ರ ರತ್ನವಾಗಿ ಬೆಳಗಿದವಳುನಿರಾಕಾರನ ಪಡೆಯಲು ಸರ್ವವನು ತ್ಯಜಿಸಿದವಳು ಅಲ್ಲಮನ ಪ್ರಶ್ನೆಗೆ ಉತ್ತರಿಸಿ ಲೋಕ ಗೆದ್ದವಳುಸಾವಿಲ್ಲದ ಕೇಡಿಲ್ಲದ ಚೆಲುವನನು ಮೆಚ್ಚಿದವಳು ಬೆಟ್ಟ ಹಳ್ಳ ಕಣವೆ ಗಳ ದಾಟುತ್ತಾ ಮುನ್ನಡಿದವಳುಬಯಲ”ಪ್ರಭೆ”ಯ ಅರಸುತ್ತಾ ಕದಳಿಗೆ ನಡೆದವಳು **********************************************

ಗಜಲ್ Read Post »

ಕಾವ್ಯಯಾನ

ನಾವು ನಿಮ್ಮ ಭಕ್ತರು

ಕವಿತೆ ನಾವು ನಿಮ್ಮ ಭಕ್ತರು ಶಿವರಾಜ್.ಡಿ ನಾವು ನಿಮ್ಮ ಭಕ್ತರುನೀವು ಕಟ್ಟುವ ಪುತ್ಥಳಿಗಳಿಗೆ,ಕ್ರೀಡಾಂಗಣಗಳಿಗೆ,ಮಹಲುಗಳಿಗೆದೇಶಭಕ್ತರ ಹೆಸರಿಡಲುಹೋರಾಟ ಮಾಡುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ದೇಶಭಕ್ತಿಯ ಮಾತುಗಳಿಗೆಅಚ್ಚೆ ದಿನದ ಆಡಂಬರದ ಸುದ್ದಿಗಳಿಗೆಬಂಗಾರದ ಕಿವಿಯಾಗುತ್ತೇವೆ. ನಾವು ನಿಮ್ಮ ಭಕ್ತರುಪೆಟ್ರೋಲ್, ಡೀಸೆಲ್, ದಿನಸಿಧಾನ್ಯಗಳ ಬೆಲೆ ಏರಿದರೂದುಬಾರಿ ಜಿಎಸ್ಟಿ ತೆರಿಗೆ ಕಟ್ಟುತ್ತೇವೆ. ನಾವು ನಿಮ್ಮ ಭಕ್ತರುಚಪ್ಪಾಳೆ ತಟ್ಟುತ್ತೇವೆ,ಗಂಟೆ ಬಡಿಯುತ್ತೇವೆಕ್ಯಾಂಡಲ್ ಹಚ್ಚಿ ಕರೋನಾ ಓಡಿಸುತ್ತೇವೆ. ನಾವು ನಿಮ್ಮ ಭಕ್ತರುಆಕ್ಸಿಜನ್ ಕೊರತೆಯಾದರೂಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹೋದರುನಗು ನಗುತ್ತಾ ಸಾಯುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ಮನದ ಮಾತು ಕೇಳುತ್ತಾನಿಮ್ಮನ್ನು ಆರಾಧಿಸುತ್ತೇವೆನೀವು ಸುಮ್ಮನೇಮಾತಾಡಿ …ಮಾತಾಡಿ …ಮಾತನಾಡುತ್ತಲೇ ಇರಿ.. *************************************

ನಾವು ನಿಮ್ಮ ಭಕ್ತರು Read Post »

ಕಾವ್ಯಯಾನ

ನನ್ನದೇ ಎಲ್ಲ ನನ್ನವರೆ ಎಲ್ಲ

ಕವಿತೆ ನನ್ನದೇ ಎಲ್ಲ ನನ್ನವರೆ ಎಲ್ಲ ಚೈತ್ರಾ ತಿಪ್ಪೇಸ್ವಾಮಿ ನಾನು ನನ್ನದೆಲ್ಲ ನನ್ನದುನನ್ನ ಬಳಿಯಿರುವವರೆಲ್ಲನನ್ನವರೆಂಬ ಭಾವ ನಿನ್ನದು ಹೆಣ್ಣೇ ಒ ಹೆಣ್ಣೇಜೀವ ತುಂಬಿ ಭುವಿಗೆ ತಂದತಂದೆ ತಾಯಿ ನನ್ನವರುತಾಯಿ ಮಡಿಲ ಹಂಚಿಕೊಂಡಅಗ್ರಜ ಅನುಜರೆಲ್ಲ ನನ್ನವರುಕುಲ ಬಂಧು ಬಳಗವೆಲ್ಲ ನನ್ನವರುಮನೋಮಂದಿರ ಅಂಗಳದಒಡನಾಡಿಗಳೆಲ್ಲ ನನ್ನವರುಜೀವನಕ್ಕೆ ಹೊಸ ಭಾಷ್ಯೆಬರೆದ ಸಂಗಾತಿ ನನ್ನವರುಹೊಸ ಜೀವನಕ್ಕೆ ಅಡಿಯಿಟ್ಟಮನೆಯೆಲ್ಲ ನನ್ನದುಮದುವೆ ಬಂಧ ಬೆಸೆದ ಮನೆಯಬಂಧು ಬಳಗವೆಲ್ಲ ನನ್ನವರುಬಸಿರ ತುಂಬಿ ಬಂದ ಜೀವ ನನ್ನದೆಮಮತೆಯ ಮಕ್ಕಳು ನನ್ನವರುನನ್ನವರು ನನ್ನವರು ಎಂದುನನ್ನವರಿಗಾಗಿ ಬದುಕಿದ ಜನನಿ…..ಮನೆಯ ಮಗುವಾಗಿ ಬಾಲಕಿಯಾಗಿ ಕುಲವಧುವಾಗಿ ಮಡದಿಯಾಗಿ ಸೊಸೆಯಾಗಿತಾಯಿಯಾಗಿ ಮನೆಯ ಒಡತಿಯಾಗಿ ತನ್ನಲ್ಲಿರುವ ನನ್ನತನವ ತನ್ನವರಿಗರ್ಪಿಸಿಹೆಣ್ತನಕೆ ಹಿರಿಮೆಯ ಗರಿಮೆ ತಂದವಳೆನಾನು ನನ್ನದು ಎನ್ನದೆನನ್ನವರು ನನ್ನುಸಿರು ಎಂದವಳೆಎಲ್ಲರಲಿ ಎನ್ನತನವ ಬೆರೆಸಿತಾನು ಬೆಳೆದು ತನ್ನವರ ಬೆಳೆಸುವವಳೆಹೆಣ್ಣು ಹೆಣ್ಣು ಹೆಣ್ಣು ಹೆಣ್ಣು………. ******************************************

ನನ್ನದೇ ಎಲ್ಲ ನನ್ನವರೆ ಎಲ್ಲ Read Post »

ಕಾವ್ಯಯಾನ

ಮರಗಳ ಸ್ವಗತ ಸಾಂತ್ವಾನ

ಕವಿತೆ ಮರಗಳ ಸ್ವಗತ ಸಾಂತ್ವಾನ ಅಭಿಜ್ಞಾ ಪಿಎಮ್ ಗೌಡ ಹೇ ಮನುಜ.! ನಿನ್ನ ಸ್ವಾರ್ಥಕಾಗಿಪ್ರಕೃತಿಯನ್ನೆ ವಿಕೃತಿಗೈದುಇಳೆಯೊಡಲ ಬರಿದುಗೊಳಿಸಿಮಾರಣ ಹೋಮ ಮಾಡುತಧರೆಯ ಬಂಜರಾಗಿಸಿದ್ದು ನ್ಯಾಯವೆ.?ನಿನಗರಿವಿಲ್ಲದೆ ಅವಳೊಡಲನುಅಳಿವಿನಂಚಿನಲಿ ನಿಲ್ಲಿಸಿತರುಲತೆಗಳ ಕತ್ತನು ಹಿಚುಕಿಮಾರಾಟಕಿಳಿಸಿರುವೆಯಲ್ಲನೀನೆಂತಹ ಗೋಮುಖ ವ್ಯಾಘ್ರಿ.!! ಮೊಳಕೆಯಿಂದಿಡಿದು ಮರದವರೆಗೂಗಾಳಿ ನೆರಳು ನೀಡಿ ಮಳೆಯಲ್ಲಿಆಸರೆಯಾದರೆ ನನ್ನೆ ಕೊಂದುಅಹಂನ ಗದ್ದುಗೆಯಲಿ ತೇಲುತಿರುವೆಒಮ್ಮೆ ಯೋಚಿಸು ಓ.! ಮನುಜ…ಮಳೆಯಿಲ್ಲದೆ ಇಳೆ ಇರುವುದೆ.?ಇಳೆಯಿಲ್ಲದೆ ನೀನಿರುವೆಯಾ.?ನಿನ್ನ ಲಲಾಟಕೆ ನನ್ನೆ ಗುರಿಮಾಡಿರುವೆನಿನ್ನಾಟಿಕೆಯ ಅಲಂಕಾರಕೇಕೆನನ್ನ ಕಡಿದು ಮಾರಾಟಕಿಟ್ಟಿರುವೆ.? ಹವಾಮಾನ ವೈಪರಿತ್ಯಗಳುಂಟಾಗುವುದೆನಮ್ಮಿಂದ ಹೇ.!ಮನುಜ ನೀ ತಿಳಿಮಳೆ ಗಾಳಿ ನೀರಿನ ಉತ್ಪಾನ್ನದ ಮೂಲನಾವಲ್ಲವೇ.? ,ನಮ್ಮಿರುವಿಕೆಯಪ್ರಭಾವ ಮಳೆ ಬೆಳೆಯ ಸೊಬಗು!ಹೀಗಿರುವಾಗ ಕಾಡುಗಳಕಡಿದು ಕಾಂಕ್ರೀಟ್ ನಗರಗಳನಿರ್ಮಿಸಿದರೆ ಉಳಿಗಾಲವಿದೆಯೆ.?ಇಳೆಗೆ ಅನಾವೃಷ್ಟಿಯ ಭೀತಿ ಎದುರಾಗಿನಿಮ್ಮ ಕುಲದೊಂದಿಗೆ ಸಕಲಜೀವಿಗಳ ವಿನಾಶದಂಚಿಗೆ ತಳ್ಳುತಿರುವೆ.!! ಈಗಲಾದರು ಬಿಟ್ಟು ಬಿಡು ನಿನ್ನ ಸ್ವಾರ್ಥನಿಸ್ವಾರ್ಥ ನಿಷ್ಕಲ್ಮಶದಿ ಮುನ್ನಡೆದುಪರಿಸರ ಉಳಿಸಿ ಅನಾಹುತಗಳ ಆವಾರತಪ್ಪಿಸು.! ಇಲ್ಲದಿರೆ ಅನುಭವಿಸುಘನಘೋರ ಪರಿಸ್ಥಿತಿ ಅಲೆಗಳ ಆರ್ಭಟವನಾಡ ಉಳಿಸಲು ಪ್ರಯತ್ನಿಸುನಿನಗಷ್ಟೆ ಅಲ್ಲ ಈ ಪ್ರಕೃತಿ ಪರಿಸರನಿನ್ನ ಮುಂದಿನ ಪೀಳಿಗೆಗು ಉಳಿಸುತಪರಿಸರ ಸುರಕ್ಷತೆಯ ಜಾಗೃತಿ ಮೂಡಿಸಿನಾಡು ಉಳಿಸಿ ಕಾಡನ್ನು ಬೆಳಸು ಮನುಜ|| *************************************

ಮರಗಳ ಸ್ವಗತ ಸಾಂತ್ವಾನ Read Post »

ಕಾವ್ಯಯಾನ

ತೆವಳುವುದನ್ನುಮರೆತ ನಾನು

ಕವಿತೆ ತೆವಳುವುದನ್ನುಮರೆತ ನಾನು ವಿಶ್ವನಾಥಎನ್. ನೇರಳಕಟ್ಟೆ ನಾನು ತೆವಳುತ್ತಾ ಸಾಗುತ್ತಿದ್ದೆ‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು ಎದ್ದು ನಿಂತೆಅವರ ಬಾಯಿಗಳು ಸದ್ದು ಮಾಡಿದವು‘ನಿಂತರೆಸಾಲದು, ನಡೆಯಬೇಕು’ ನಡೆಯುತ್ತಾ ಹೊರಟೆ ಮತ್ತುಎಡವಿದೆ‘ಎಡವದೆಯೇನಡೆ’ ಎಂಬ ಸಲಹೆ ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’ ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು ಮೀನಿನ ಅಪ್ಪನಂತೆ ಈಜಿದೆಮತ್ತು ಅವರ ಮುಖ ನೋಡಿದೆಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು‘ಹಾರಲಾರೆ ನೀನು’ ಸವಾಲೇ ರೆಕ್ಕೆಗಳಾದವು ನನಗೆಹಾರತೊಡಗಿದೆ ಮತ್ತುಹಾರುತ್ತಲೇ ಇದ್ದೆ ಕೆಳಗನ್ನು ನೋಡಿದರೆಮತ್ತೆ ತುಟಿಗಳ ಪಿಟಿಪಿಟಿ-‘ಈಗ ತೆವಳುನೀನು, ಸಾಧ್ಯವಾದರೆ’ ತೆವಳ ಹೊರಟ ನಾನೀಗ ಪರಾಜಿತಏಕೆಂದರೆ, ಹಾರುವ ತರಾತುರಿಯಲ್ಲಿಮರೆತೇಬಿಟ್ಟಿದ್ದೇನೆ- ತೆವಳುವುದನ್ನು

ತೆವಳುವುದನ್ನುಮರೆತ ನಾನು Read Post »

You cannot copy content of this page

Scroll to Top