ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸ್ವಾರ್ಥ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

Abstract background of colorful paint on white background

ಗದ್ದುಗೆಯೇರಲು
ಹಣವನು ಎಸೆಯಿತು
ಗಳಿಕೆಯ ತೃಷೆಯಲಿ
ನಶೆಯ ನೀಡಿತು
ಸ್ವಾರ್ಥದ ಮತವನು ಮುತ್ತಿ

ಸಲಿಗೆಯ ಸುಲಿಗೆ ಮಾಡುತ
ಒಸರುವ ಬೆವರಿನ
ಬುತ್ತಿಯ ಕಟ್ಟಿತು
ನೆತ್ತರು ಹಿಚುಕಿ,ನೆಕ್ಕಿ ಕಾಡಿತು
ಕತ್ತಲು ಮುಕ್ಕಿ

ಅನುದಿನ ಮತ್ತಿನಲಿ
ಅಮೃತ ತುತ್ತಿನಲಿ
ಕಡಲಾದರೂ ಕುಡಿದು,
ಗತ್ತಿನಲಿ-ವಿಗತಿಯೆಡೆಗೆ
ಒಂದನ್ಹತ್ತು ಸೇರಿಸಿತು

ಸುಖದ ತಿರುಳ ಸವಿಯುತ
ಸೇವಕನೆಂಬುದ ಮರೆಯಿತು
ಅಡಿಗೊಮ್ಮೆ ಜೊಳ್ಳ ನುಡಿದು,
ಪರರ ಬಾದೆಯನರಿಯದೆ
ನ್ಯಾಯ ನೀತಿ ಮಾತಾಡಿತು

ಕೃತಕ ಕೀರ್ತಿಯ ಪಡೆಯಿತು
ವಿಕೃತ ಸೊಗದಲಿ ಹಾಡಿತು
ಸುಕೃತ ಭಾವವಿರದೆ
ಅಂಬರವೇರಿ
ಕೈ ಬೀಸಿ ಕರಗಿತು

ಯಾರೋ ಬಿತ್ತಿದ ಬೀಜ
ಹೂ-ಕಾಯಿಗಳ ಬಿಡದೆ ತಿಂದು,
ಒಳಗು ಹೊರಗೂ
ಗಿಡದ ಬುಡದ
ನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.
……************************

About The Author

1 thought on “ಸ್ವಾರ್ಥ”

  1. shivaleela hunasagi

    ವಾಸ್ತವ ಬಿಚ್ಚಿಟ್ಟ ಅಧ್ಬುತ ಭಾವಭಿತ್ತಿ ಹೊಂದಿದ ಕವಿತೆ….ಚೆನ್ನಾಗಿದೆ

Leave a Reply

You cannot copy content of this page

Scroll to Top