ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ಬಣ್ಣಗಳ ದಂಡು

ಲಹರಿ ಬಣ್ಣಗಳ ದಂಡು ಶಿವಲೀಲಾ ಹುಣಸಗಿ ಹೇಗೆ ಹೇಳಲಿ ಮನದ ತಳಮಳವ ಸಖಾ.ಬಲ್ಲೆ ನೀನು ನನ್ನಂತರಂಗವ.ನಿನ್ನ ಕಾಣುವ ಕೌತುಕಕೇ ಮೋಡಗಳು ತೊರಣ ಕಟ್ಟಿದಂತೆ ಇಳೆಯತ್ತ ಬಾಗಿವೆ.ಮಿಂಚುಗಳು ಆಗಾಗ ಹೃದಯ ಕಂಪನ ಮಾಡಿ ನಸುನಕ್ಕಿವೆ.ಹನಿಗಳೋ ಮದಿರೆಯಗುಂಗಿನಲಿ ಅವಿತು ನನ್ನ ತಣಿಸಲು ತವಕಿಸು ತಿವೆ.ಬಾನಿಗೆಲ್ಲ ಹಣತೆ ಹಚ್ಚಿ ನನ್ನಾಗಮನಕೆ ಕಾದಂತಿದೆ. ಪ್ರೀತಿ ತುಂಬಿದ ಹೃದಯವ ಬೊಗಸೆಯಲ್ಲಿ ಹಿಡಿದು ನಿಂ ತಂತೆ.ನಯನಗಳ ಪ್ರತಿಬಿಂಬಕೆ ನಿನೊಂದೆ ಉತ್ತರ ಸಖಾ.ನಿನ್ನ ಪ್ರೇಮದ ಶರವೇಗಕೆ ಎದೆಗೂಡು ತಲ್ಲಣಿಸಿದೆ. ನಿನ್ನಧರದ ಅಬ್ಬರಕೆ ಜೇನಹನಿಗಳು ತೊಟ್ಟಿಕ್ಕುತ್ತಿವೆ. ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ. ಬಣ್ಣಗಳ ದಂಡು ಮುಂಬಾಗಿಲಿಗೆ ಬಂದಿದೆ.ರಂಗೇರುವ ಕ್ಷಣ ಗಣನೆ.ನೀ ಇಲ್ಲದೆ ಕೆನ್ನೆಗೆ ರಂಗು ಬರದು.ನಿನ್ನ ಸ್ಪರ್ಶವಿರದೇ ಯಾವ ಬಣ್ಣವು ನನ್ನ ಸಂತೈಸದು. ಅಂದು ನೀ  ಕೊಟ್ಟ ನವಿಲುಗರಿಯೊಂದು ಚಿಗುರೊಡೆದಿದೆ. ಮನದಲಿಗ ಮೈದೆಳೆದು ನವಿರಾಗಿ ಗರಿಬಿಚ್ಚಿದೆ.ಆಗೊಮ್ಮೆ ಈಗೊಮ್ಮೆ ಇಣುಕುವ ಸವಿನೆನಪಂತೆ.ತೂಗು ಮಂಚದಲಿ ಎದೆಗೊರಗಿ ಕಾಡಿದಾಗೆಲ್ಲ,ಗಲ್ಲದ ತುಂಬ ನನ್ನ ಬಣ್ಣ ಮೆತ್ತಿ ದ್ದು ನೆನಪಾಗದೇ ಸಖಾ? ಪುಟಗಳಾಚೆ ಇಣುಕಿ ನಗಿಸುವ ನೀನು ಹೊಂಬೆಳಕಂತೆ ನನಗೆ.ಓಕುಳಿಯಾಡುವ ಪಿಚಕಾರಿಯಲ್ಲಿ ಅವಿತಂತೆ ನೀನು.ಮೈಮನಕೆ ಸೋಕಿದಾಗ ಅದ್ಭುತ ಸಾಂಗತ್ಯ ನಮ್ಮದು.ಬಾನು,ಭೂವಿಯು ನಾಚಿ ನೀರಾದಂತೆ ನಮ್ಮ ಪ್ರೇಮದ ಸಿಂಚನ.ಹೃದಯಕ್ಕೊಂದು ಜೀವಮಿಡಿತ ನೀನು.ನಿನ್ನೆದೆಯ ತುಡಿತ ನಾನು. ಹಕ್ಕಿಯಂ ತೆ ಗರಿಗೆದರಿ ಬಾನೆತ್ತರಕ್ಕೆ ಹಾರುವಷ್ಟು.ಗೂಡಿನೊಳಗೊಂ ದು ಗೂಡು ನಮ್ಮದು.ಕಣ್ಣಿಗೆ ಕಾಣದ ಪ್ರೇಮಲೋಕ. ನಮ್ಮೊಳಗಿನ ಸ್ವಪ್ನಲೋಕ.ಕಾಮನ ಬಿಲ್ಲಿನ ಪಲ್ಲಕ್ಕಿಯಲಿ ನಮ್ಮ ಪ್ರೇಮೋತ್ಸವ.ಕಡುಬಣ್ಣದಲಿ ಗಾಢವಾದ ನಿತ್ಯೋತ್ಸವ.ಕಾದ ಗಳಿಗೆಯೆಲ್ಲವೂ ನಿನಗರ್ಪಿತ ಸಖಾ. ಪ್ರೇಮವೆಂದರೆ ಅಮೂರ್ತಗಳ ಹೂ ಗುಚ್ಛ.ನಿನ್ನಾತ್ಮದ ಪ್ರತಿಬಿಂಬದಂತೆ.ನಿನ್ನ ವಿರಹದ ತಾಪದಲಿ.ದಾರಿ ದೂರ ವಾದರೂ ತಡೆದೆನು.ಮನಸಿಗೆ ದೂರವಾದರೆ ಬದುಕ ಲಾರೆ.ಕಾಡುವ ಗಳಿಗೆಗೆ ನೀ ಬೆಂದಿರಬಹುದು.ನೆನಪಿನ ಮಲ್ಲಿಗೆಯ ಮುಡಿಸಿ ಮರೆಯಾಗದಿರು.ಮೂರ್ತ ರೂಪವಾಗಿ ಪ್ರಕೃತಿಯ ಬಣ್ಣವಾಗಿ ಮೇಳೈಸು….ಕಾದಿರುವೆ ನೆನಪುಗಳ ಜಪಮಾಲೆ ಜಪಿಸುತ….. **************************************

ಬಣ್ಣಗಳ ದಂಡು Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆಹಾರ, ಆಚಾರ, ವಿಚಾರ, ಬದುಕಿನ ಕ್ರಮ, ಧರ್ಮ, ತತ್ವ, ಸಿದ್ಧಾಂತ, ಅಭಿರುಚಿ, ಭಾಷೆ ಹೀಗೆ ಒಡೆಯುತ್ತಲೇ ಬದುಕುವ ನಮಗೆ ಬಸವಣ್ಣನವರ ವಚನವು ಮನುಷ್ಯರು ಒಗ್ಗೂಡಲು ಸಾವಿರ ಕಾರಣಗಳಿವೆ, ಅದಕ್ಕೆ ಮೂಲ ಆಂತರ್ಯದಲ್ಲಿ ಸಹಿಸಿಕೊಳ್ಳುವ ಗುಣ ಬೇಕಿದೆ ಎಂಬುದನ್ನು ತಿಳಿಸುತ್ತದೆ.

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************

ಗಜಲ್ Read Post »

ಇತರೆ, ದಾರಾವಾಹಿ

ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—18 ಆತ್ಮಾನುಸಂಧಾನ ಆಡುಂಬೊಲದಿಂದ ಅನ್ನದೇಗುಲಕ್ಕೆ! ನಾಡು ಮಾಸ್ಕೇರಿಯಲ್ಲಿ ಕಳೆದ ಪ್ರಾಥಮಿಕ ಶಿಕ್ಷಣದ ಕಾಲಾವಧಿ ಹಲವು ಬಗೆಯ ಜೀವನಾನುಭವಗಳಿಗೆ ಕಾರಣವಾಯಿತು. ಕೇರಿಯ ಯಾವ ಮನೆಯಲ್ಲಿ ಯಾರೂ ಹೊಟ್ಟೆ ತುಂಬ ಉಂಡೆವೆಂಬ ಸಂತೃಪ್ತಿಯನ್ನು ಕಾಣದಿದ್ದರೂ ಅಪರಿಮಿತವಾದ ಜೀವನೋತ್ಸಾಹಕ್ಕೆ ಕೊರತೆಯೆಂಬುದೇ ಇರಲಿಲ್ಲ. ಅಸ್ಪ್ರಶ್ಯತೆಯ ಬಗ್ಗಡವೊಂದು ಜಾತಿಗೇ ಅಂಟಿಕೊಂಡಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ನಾವೆಂದೂ ಪರಿಗಣಿಸಲಿಲ್ಲ. ಊರಿನ ದೇವಾಲಯಗಳಿಗೆ ಹೋದರೆ ಕಂಪೌಂಡಿನ ಆಚೆಯೇ ನಮ್ಮ ನೆಲೆಯೆಂಬ ಅರಿವು ಮಕ್ಕಳಾದ ನಮಗೂ ಇತ್ತು. ಚಹಾದಂಗಡಿಗಳಲ್ಲಿ ಬೇಲಿಯ ಗೂಟಕ್ಕೆ ಸಿಗಿಸಿಟ್ಟ ಗ್ಲಾಸುಗಳನ್ನು ನಾವೇ ತೊಳೆದುಕೊಂಡು ಮೇಲಿಂದ ಹೊಯ್ಯುವ ಚಹಾ ಕುಡಿಯುವುದು ನಮಗೆ ಸಹಜ ಅಭ್ಯಾಸವಾಗಿತ್ತು. ಕಿರಾಣಿ ಅಂಗಡಿಗಳಲ್ಲೂ ಬೇಕಾದ ಸಾಮಾನು ಪಡೆಯಲು ಮೇಲ್ಜಾತಿಯ ಗ್ರಾಹಕರಿದ್ದರೆ ಅವರಿಂದ ಮಾರು ದೂರದ ಅಂತರವಿಟ್ಟುಕೊಂಡೇ ನಮಗೆ ಬೇಕಾದ ವಸ್ತುಗಳನ್ನು ಕೊಂಡು ಬರುವುದು ನಮಗೆ ಸಹಜ ರೂಢಿಯಾಗಿತ್ತು. ನಮ್ಮನ್ನು ಎಲ್ಲರಿಗಿಂತ ಭಿನ್ನವಾಗಿ ಪ್ರತ್ಯೇಕವಾಗಿ ಸಮಾಜವು ಪರಿಗಣಿಸುತ್ತದೆ ಎಂಬ ಅರಿವೇ ಮೂಡದ ಅಪ್ರಬುದ್ಧ ವಯಸ್ಸಿನ ಹಂತವದು. ಇದೊಂದು ಸಹಜ ಸಾಮಾಜಿಕ ಕ್ರಿಯೆ ಎಂದು ಒಪ್ಪಿಕೊಂಡಿರುವುದರಿಂದ ನಾವು ಬಹುಶಃ ಆ ದಿನಗಳಲ್ಲಿ ಯಾವುದನ್ನೂ ಪ್ರಶ್ನಿಸದೇ ನಿರಾಳವಾಗಿದ್ದುದೇ ಬಾಲ್ಯದ ಬದುಕು ಅಷ್ಟೊಂದು ಉಲ್ಲಾಸದಾಯಕವಾಗಿಯೇ ಕಳೆದು ಹೋಯಿತು. ಸಮಾನ ವಯಸ್ಸಿನ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ಕೃಷ್ಣ ಮಾಣಿ, ನಾನು ಮತ್ತು ನನ್ನ ತಮ್ಮ ನಾಗೇಶ ಎಲ್ಲರೂ ಸೇರಿ ಕಷ್ಟ ಸುಖಗಳನ್ನು ಹಂಚಿಕೊಂಡೇ ಬೆಳೆದೆವು. ಕೇರಿಯ ಎಲ್ಲರ ಮನೆಗಳಲ್ಲಿಯೂ ಕ್ಷೀಣವಾದ ಹಸಿವಿನ ಆಕ್ರಂದನವೊಂದು ಸಹಜವೆಂಬಂತೆ ನೆಲೆಸಿತ್ತು. ಹಾಗಾಗಿಯೇ ಬಹುಶಃ ನಮ್ಮ ಗೆಳೆಯರ ಬಳಗ ನಿತ್ಯವೂ ಹೊರಗೆ ಏನನ್ನಾದರೂ ತಿಂದು ಖಾಲಿ ಹೊಟ್ಟಗೆ ಕೆಲಸ ಕೊಡುವ ತವಕದಲ್ಲಿಯೇ ಇರುತ್ತಿತ್ತು. ಬೆಳೆದು ನಿಂತ ಯಾರದೋ ಶೇಂಗಾ ಗದ್ದೆಗಳಲ್ಲಿನ ಶೇಂಗಾ ಗಿಡಗಳನ್ನು ಕಿತ್ತು ತಂದು ಸುಟ್ಟು ತಿನ್ನುವುದಾಗಲಿ, ಗೆಣಸಿನ ಹೋಳಿಗಳಿಂದ ಗೆಣಸು ಕಿತ್ತು ಬೇಯಿಸಿ ತಿನ್ನುವುದಾಗಲಿ, ಕೊಯ್ಲಿಗೆ ಬಂದ ಭತ್ತದ ಕದಿರನ್ನು ಕೊಯ್ದು ತಂದು ಹುರಿದು ಕುಟ್ಟಿ ಅವಲಕ್ಕಿ ಮಾಡಿ ಮೇಯುವುದಾಗಲಿ, ಗೇರು ಹಕ್ಕಲಿಗೆ ನುಗ್ಗಿ ಗೇರು ಬೀಜಗಳನ್ನು ಕದ್ದು ತರುವುದಾಗಲಿ, ಯಾರದೋ ಮಾವಿನ ತೋಪಿನಲ್ಲಿಯ ಮಾವಿನ ಕಾಯಿ ಹಣ್ಣುಗಳನ್ನು ಉದುರಿಸಿ ತಿನ್ನುವುದಾಗಲಿ, ಹಳ್ಳದ ದಂಡೆಗುಂಟ ಬೆಳೆದು ನಿಂತ ತೆಂಗಿನ ಮರಗಳನ್ನು ಹತ್ತಿ ಎಳೆನೀರು ಕೊಯ್ದು ಕುಡಿಯುವುದಾಗಲಿ ನಮಗೆ ಅಪರಾಧವೆಂದೇ ಅನಿಸುತ್ತಿರಲಿಲ್ಲ. ಸಂಬಂಧಪಟ್ಟವರು ಒಂದಿಷ್ಟು ಬೈದಿರಬಹುದಾದರೂ ಅದರಾಚೆಗೆ ಯಾವ ದೊಡ್ಡ ಶಿಕ್ಷಯೇನನ್ನೂ ಕೊಡುತ್ತಿರಲಿಲ್ಲ. ಇದರಿಂದ ನಮಗೆಲ್ಲ ಇದೊಂದು ಮಕ್ಕಳಾಟಿಕೆಯ ಸಹಜ ಕ್ರಿಯೆ ಎಂದೇ ಅನಿಸುತ್ತಿತ್ತು. ಹಾಗಾಗಿಯೇ ನಾವು ನಮ್ಮ ದಾಂದಲೆ, ವಿನೋದಗಳನ್ನು ನಿರಾತಂಕವಾಗಿಯೇ ಮುಂದುವರಿಸಿದ್ದೆವು. ನಮ್ಮ ಏಳನೆಯ ತರಗತಿಯ ಅಭ್ಯಾಸ ಪರೀಕ್ಷೆಗಳು ಮುಗಿಯುವವರೆಗೂ ನಾಡು ಮಾಸ್ಕೇರಿಯ ನಮ್ಮ ಬಾಲ್ಯದ ಸುಂದರ ಬದುಕಿಗೆ ಮಾಸ್ಕೇರಿ ಮತ್ತು ಅಲ್ಲಿನ ಕೆರೆ, ತೋಟ, ಬೇಣ, ಬಯಲುಗಳೆಲ್ಲ ನಮ್ಮೆಲ್ಲರ ಆಡುಂಬೊಲವಾದದ್ದು ನಿಜವೇ! 1965 ನೇ ಇಸ್ವಿ ಎಂದು ನೆನಪು. ನನ್ನ ಪ್ರಾಥಮಿಕ ಶಿಕ್ಷಣದ ಅವಧಿ ಮುಗಿದಿತ್ತು. ಮುಂದೆ ಹೈಸ್ಕೂಲು ಸೇರಬೇಕಿತ್ತು. ಅದೇ ಸಂದರ್ಭದಲ್ಲಿ ನಮ್ಮ ತಂದೆಯವರಿಗೆ ಅಂಕೋಲೆಯ ತೆಂಕಣಕೇರಿ ಎಂಬಲ್ಲಿಯ ಪ್ರಾಥಮಿಕ ಶಾಲೆಗೆ ವರ್ಗವಾಯಿತು. ನಾನು ಅಂಕೋಲೆಯಲ್ಲಿ ಹೈಸ್ಕೂಲು ಓದುವುದು ಸುಲಭವೇ ಆಯಿತು. ಆದರೆ ನಮ್ಮ ತಂದೆಯವರಿಗೆ ನಮ್ಮ ಗೆಳೆಯರ ಇಡಿಯ ಗುಂಪು ಶಿಕ್ಷಣ ಮುಂದುವರಿಸಬೇಕು ಎಂಬ ಇಚ್ಛೆಯಿತ್ತು. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ನಾರಾಯಣ ಮಾಣಿ ಎಂಬ ಗೆಳೆಯನನ್ನು ಬಿಟ್ಟು ಉಳಿದ ಎಲ್ಲರೂ ಪ್ರಾಥಮಿಕ ಶಿಕ್ಷಣದ ಕೊನೆಯ ಹಂತದಲ್ಲಿದ್ದರು. ನಾರಾಯಣ ವೆಂಕಣ್ಣ ಎಂಬುವವನು ಮಾತ್ರ ನನಗಿಂತ ಒಂದು ವರ್ಷ ಹಿರಿಯನಾಗಿದ್ದು ಹನೇಹಳ್ಳಿಯ ಆನಂದ್ರಾಶ್ರಮ ಹೈಸ್ಕೂಲು ಸೇರಿಕೊಂಡಿದ್ದ. ಆತನನ್ನು ಸೇರಿಸಿ ಎಲ್ಲರೂ ಅಂಕೋಲೆಯಲ್ಲಿ ಸರಕಾರಿ ವಿದ್ಯಾಥರ್ಿ ನಿಲಯಕ್ಕೆ ಸೇರಿ ಅಂಕೋಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ ಸರಿಹೋಗಬಹುದು ಎಂಬುದು ತಂದೆಯವರ ಲೆಕ್ಕಾಚಾರವಾಗಿತ್ತು. ಅದಕ್ಕಾಗಿ ಅವರು ಎಲ್ಲ ಮಕ್ಕಳ ತಾಯಿ ತಂದೆಯರ ಮನ ಒಲಿಸಿ ಅಂಕೋಲೆಯ ಹಿಂದುಳಿದ ವರ್ಗ ವಸತಿನಿಲಯಕ್ಕೆ ಸೇರಿಕೊಳ್ಳಲು ಅನುಮತಿ ಪಡೆದುಕೊಂಡರು. ಮತ್ತು ಅವರೆಲ್ಲರ ಜೊತೆಯಲ್ಲಿ ನಾನು ಮತ್ತು ನನ್ನ ತಮ್ಮ ನಾಗೇಶನೂ ವಿದ್ಯಾಥರ್ಿ ನಿಲಯದಲ್ಲಿಯೇ ಉಳಿದು ಅಭ್ಯಾಸ ಮುಂದುವರಿಸಬೇಕೆಂದೂ ತೀಮರ್ಾನಿಸಿದರು. ಗೆಳೆಯರೆಲ್ಲರೂ ಒಟ್ಟಾಗಿ ಒಂದೇ ಕಡೆಯಲ್ಲಿ ನೆಲೆ ನಿಂತು ಓದುವ ಉತ್ಸಾಹದೊಂದಿಗೆ ನಾವೆಲ್ಲ ಸನ್ನದ್ಧರಾದೆವು. ಅದೇ ವರ್ಷದ ಜೂನ್ ತಿಂಗಳು ಶಾಲೆಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ನಾವು ಹಾಸ್ಟೆಲ್ಲಿಗೆ ಹೊರಟು ನಿಂತೆವು. ಕೇರಿಯಲ್ಲಿ ಅದು ಒಂದು ಬಗೆಯಲ್ಲಿ ದುಗುಡ ಇನ್ನೊಂದು ಬಗೆಯಲ್ಲಿ ಉತ್ಸಾಹ ತುಂಬಿದ ದಿನ. ಕೇರಿಯ ಬಹುತೇಕ ಕುಟುಂಬಗಳಿಗೆ ಇದುವರೆಗೆ ತಮ್ಮ ಮಕ್ಕಳನ್ನು ಅಗಲಿ ಇದ್ದು ಅಭ್ಯಾಸ ಇರಲಿಲ್ಲ. ಇದೇ ಮೊದಲ ಬಾರಿಗೆ ಗಂಗಾವಳಿ ನದಿಯಾಚೆಗಿನ ಅಂಕೋಲೆಯಲ್ಲಿ ಬಿಟ್ಟು ಇರಬೇಕಾದ ಸಂಕಟದಲ್ಲಿ ತಾಯಿ ತಂದೆಯರು ನೊಂದುಕೊಂಡರು. ಆದರೆ ಅಕ್ಷರ ಕಲಿಕೆಯ ಆಸಕ್ತಿ ಎಲ್ಲ ತಾಯಂದಿರ ಹೃದಯದಲ್ಲಿ ಮೊಳಕೆಯೊಡೆಯುತ್ತಿದ್ದ ಕಾಲಮಾನದ ಪ್ರೇರಣೆ ಅವರೆಲ್ಲರ ಬಾಯಿ ಕಟ್ಟಿ ಹಾಕಿತ್ತು. ಅಂದು ಮುಂಜಾನೆ ಕಳೆದು, ಹೊತ್ತೇರುವ ಸಮಯಕ್ಕೆ ನಾವೆಲ್ಲ ನಮ್ಮ ನಮ್ಮ ಲಭ್ಯ ಬಟ್ಟೆ ಬರೆಗಳನ್ನು ಕೈ ಚೀಲದಲ್ಲಿ ತುಂಬಿ ಹೊರಟು ನಿಂತಾಗ ಕೇರಿಯ ಬಹುತೇಕ ಮಂದಿ ನಮ್ಮನ್ನು ಹಿಂಬಾಲಿಸಿ ಗಂಗಾವಳಿ ನದಿ ತೀರದವರೆಗೂ ನಡೆದು ಬಂದಿದ್ದರು. ಕಾಲುದಾರಿಯ ಪಯಣದುದ್ದಕ್ಕೂ ನಾವು ವಸತಿ ನಿಲಯದಲ್ಲಿ ಕೂಡಿ ಬಾಳುವ ಕುರಿತು ಓದಿನಲ್ಲಲ್ಲದೇ ಅನ್ಯ ವ್ಯವಹಾರಗಳಲ್ಲಿ ತೊಡಗದಿರುವಂತೆ, ಆರೋಗ್ಯದ ಕುರಿತು ಪರಸ್ಪರ ಕಾಳಜಿ ಪೂರ್ವಕ ಸಹಕರಿಸುವ ಸಲಹೆ ನೀಡುತ್ತಲೇ ಗಂಗಾವಳಿ ತೀರ ತಲುಪಿಸಿದ್ದರು. ನಾವೆಲ್ಲ ಒಂದು ಕತ್ತಲ ಲೋಕದ ಕರಾಳ ಬದುಕಿನಿಂದ ಬೆಳಕಿನ ಕಿರಣಗಳನ್ನು ಆಯ್ದುಕೊಳ್ಳಲು ನಕ್ಷತ್ರಲೋಕಕ್ಕೆ ಹೊರಟು ನಿಂತ ಯೋಧರೆಂಬಂತೆ ನಮ್ಮನ್ನು ಪ್ರೀತಿ ಅಭಿಮಾನ ಅಗಲಿಕೆಯ ವಿಷಾದ ತುಂಬಿದ ಕಣ್ಣುಗಳಿಂದ ನೋಡುತ್ತಲೆ ನಮ್ಮೆಲ್ಲರನ್ನು ದೋಣಿ ಹತ್ತಿಸಿ ನಾವೆಯು ಆಚೆ ದಡ ಸೇರುವವರೆಗೆ ಕಾದು ನಿಂತು, ನಾವು ಹತ್ತಿದ ಬಸ್ಸು ನಿರ್ಗಮಿಸುವವರೆಗೂ ನಮ್ಮ ಕಣ್ಣಳತೆಯಲ್ಲಿ ಕಾಣುತ್ತಲೇ ಇದ್ದರು. ಅಂಕೋಲೆಯ ಲಕ್ಷ್ಮೇಶ್ವರ ಎಂಬ ಭಾಗದಲ್ಲಿ ಇರುವ ‘ಆಯಿಮನೆ’ ಎಂಬ ಕಟ್ಟಡದ ಮಹಡಿಯ ಮೇಲೆ ಇರುವ ವಿದ್ಯಾಥರ್ಿ ನಿಲಯಕ್ಕೆ ಬಂದು ತಲುಪಿದ ಬಳಿಕ ಎಲ್ಲರಿಗೂ ಹೊಸತೊಂದು ಬದುಕಿನ ಮಗ್ಗಲು ಪ್ರವೇಶಿಸಿದಂತೆ ಮೂಕ ವಿಸ್ಮಿತರಾಗಿದ್ದೆವು. ಈಗ ‘ಆಯಿಮನೆ’ ಇರುವ ಸ್ಥಳದಲ್ಲಿ ‘ಅಮ್ಮ’ ಎಂಬ ಹೆಸರಿನ ಭವ್ಯ ಬಂಗಲೆಯೊಂದು ಎದ್ದು ನಿಂತಿದೆ. ವಸತಿ ನಿಲಯದ ಮೇಲ್ವಿಚಾರಕರು ಅಲ್ಲಿಯ ಸಹಾಯಕರು ಮತ್ತೆ ನಮಗಿಂತ ಮೊದಲೇ ಪ್ರವೇಶ ಪಡೆದಿದ್ದ ಸಹಪಾಠಿಗಳು ನಮ್ಮನ್ನು ಪ್ರೀತಿಯಿಂದಲೇ ಕಂಡರು. ನಮ್ಮ ನಮ್ಮ ಪಾಲಿಗೆ ದೊರೆತ ಹಾಸಿಗೆ ಹೊದಿಕೆ ಪಡೆದು ಕೊಠಡಿಗಳನ್ನು ಸೇರಿ ನಮ್ಮ ನಮ್ಮ ನೆಲೆಗಳನ್ನು ಗುರುತಿಸಿಕೊಂಡಾದ ಬಳಿಕ ಮಧ್ಯಾಹ್ನವೂ ಆಗಿ ಊಟದ ಪಂಕ್ತಿಯಲ್ಲಿ ಕುಳಿತು ಯಾವ ಸಂಕೋಚವೂ ಇಲ್ಲದೇ ಹೊಟ್ಟೆ ತುಂಬ ಉಣ್ಣುತ್ತಿದ್ದಂತೆ ನಮ್ಮೆಲ್ಲರ ಮನಸ್ಸಿನಲ್ಲಿಯೂ ನಾಡುಮಾಸ್ಕೇರಿಯ ಆಡೊಂಬಲದಿಂದ ನಿಜವಾಗಿಯೂ ಅನ್ನದೇಗುಲಕ್ಕೆ ಬಂದು ಸೇರಿದೆವು ಎಂಬ ಸಂತೃಪ್ತ ಭಾವ ಅರಳತೊಡಗಿತ್ತು. ********************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಇತರೆ

ಪದಗಳು

ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. ಒಂದೇ ಘಟನೆಯ ಮೇಲೆ ನಡೆಯುವ ಕಥನ ಗೀತೆಗೆ ಮಾತ್ರ ಇದನ್ನು ಅನ್ವಯಿಸಬಹುದು. ಆದರೆ ದೀರ್ಘಕಾವ್ಯಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ. ಆಶುರಚನೆ ಮತ್ತು ಸಂಪ್ರದಾಯಗಳು ಎರಡು ಸೂತ್ರಗಳು. ಲಾವಣಿ:- ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ (ಗುಲ್ಬರ್ಗಾ), ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ಲಾವಣಿ ಎಂಬ ಒಂದು ಪ್ರಕಾರವಿದ್ದರೂ ಉತ್ತರದಷ್ಟೂ ವೈವಿದ್ಯ ಅದಕ್ಕಿಲ್ಲ.      ಸಾಂಪ್ರದಾಯಿಕವಾಗಿ ಲಾವಣಿಗಳನ್ನು ಬಯಲು ಲಾವಣಿ ಮತ್ತು ಮೇಳ ಲಾವಣಿಯೆಂದೂ ಕರೆಯಲಾಗುತ್ತದೆ. ಬಯಲು ಲಾವಣಿಯಲ್ಲಿ ಹೆಸರೇ ಹೇಳುವಂತೆ ಒಬ್ಬನೇ ಲಾವಣಿಯನ್ನ ಹೇಳುತ್ತಾನೆ. ಅಂತಾ ಸಂದರ್ಭ ಈಗಲೂ ಇದೆ. ಆದರೆ ಮೇಳ ಲಾವಣಿಯಲ್ಲಿ ಡಪ್ಪು, ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.         ಇದು ಉತ್ತರ ಭಾಗದ ಒಂದು ಜನಪ್ರಿಯ ಸಂಪ್ರದಾಯ ಲಾವಣಿಗಳನ್ನು ಗೀಗಿ ಡಿಪ್ಪಿನ ಹಾಡು, ಹಾಡಕ್ಕಿ, ಶಾಯರಿ, ಹರದೇಶಿ – ನಾಗೇಶಿ, ಕಲ್ಗಿ – ತುರಾಯಿ, ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅವುಗಳಲ್ಲಿ ಹರದೇಶಿ -ನಾಗೇಶಿ ಸಂಪ್ರದಾಯವನ್ನೆ ಕಲ್ಲಿ ತುರಾ ಸವಾಲ್ – ಜವಾಬು ಪದಗಳು ಎಂದು ಕರೆಯಲಾಗುತ್ತದೆ. ಕನ್ನಡದ ಲಾವಣಿಯ ಇತಿಹಾಸವನ್ನು ಮರಾಠಿಯ ಪೇಶ್ವೆಯ ಕಾಲಕ್ಕೆ ಕೊಂಡೊಯ್ಯೊಲಾಗುತ್ತದೆ. ಪೇಶ್ವೆಯರ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಪೊವಾಡಗಳೆಂಬ ವೀರರ ಕಥನ ಕವನಗಳೇ ಆಗಿದೆ. ನಮ್ಮಲ್ಲಿಯೂ ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ, ಸರ್ಜಪ್ಪ ನಾಯಕ ಮುಂತಾದ ಅನೇಕ ಲಾವಣಿಗಳು ಈ ಮಾದರಿಯವು ಎಂದು ಮೇಲ್ಮಟ್ಟಕ್ಕೆ ಒಪ್ಪಿಕೊಳ್ಳಬಹುದಾದರೂ, ಮರಾಠಿಯ ಪೋವಾಡಗಳು ಕನ್ನಡದಲ್ಲಿರುವಂತೆ ಜಾನಪದೀಯ ರಚನೆಗಳು.        ಲಾವಣಿ ಹಾಡುಗಳು ಬಹಳ ವಿಸ್ತಾರವಾದವುಗಳಲ್ಲಿ ಮಹಾಕಾವ್ಯದ ವ್ಯಾಪ್ತಿ ಇದಕ್ಕೆ ಹೊರತಾದುದು. ಹೆಚ್ಚೆಂದರೆ ಒಂದು ಗಂಟೆಯ ಅವಧಿಯಲ್ಲಿ ಒಂದು ಸಖಿ ಮುಖ್ಯ. ಹಾಡು ಹಾಗೂ ಖ್ಯಾಲಿಯನ್ನು ಬಳಸಬೇಕಾಗುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು. ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ಅದು ಸವಾಲ್ ಜವಾಬ್ ವಿಚಾರದಲ್ಲಿ ಅದರ ಕಾಲವನ್ನು ಒಂದು ಗಂಟೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಂದರ್ಭಾನುಸಾರ ಬೆಳೆಯುತ್ತದೆ. ಲಾವಣಿ ಸಾಹಿತ್ಯ ಪರಂಪರೆಯಲ್ಲಿ ಬೀಬೀ ಇಂಗಳಗಿ ಭಾಗದ ಲಾವಣಿಕಾರರು, ತೇರದಾಳ ಭಾಗದ ಲಾವಣಿಕಾರರು, ಹಲಕುಂದ ಭಾಗದ ಲಾವಣಿಕಾರರು ಎಂಬ ಪ್ರದೇಶಿಕ ವಿವರಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಗೀಗೀಪದ :-         ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಗೀಯ ಗೀಯ ಗೀಗೀ ಹರೇ ಗೀಯ ಗಾ ಎಂಬ ಪಲ್ಲವಿಯೊಂದಿಗೆ ಹಾಡುವ ಒಂದು ಜನಪದ ಗೀತಸಂಪ್ರದಾಯ.          ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು. ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ           ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.          ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಮಹಿಳೆಯರು .ಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ… (ಸಂಗ್ರಹ) ಗೀಗೀ ಪದ ಬಂದಾರ ಬರ್ರಿ ತಂದೀನಿ ಕಥೆಯನ್ನಕಿವಿಗೊಟ್ಟು ಕೇಳ್ರಿ ಮಾತಾ, ಮರೆತ, ನೀವಾ ಮಾತಾ ಮರೆತಾssಗೀಯ ಗೀಯಾ ಗಾ ಗೀಯ ಗೀಯಾ|| ಚೀನಾಕ ಹುಟ್ಟಿ ವಿಶ್ವವನ್ನೆ ಮೆಟ್ಟಿ ನಿಂತಾ,ಬಣ್ಣದ್ಬದುಕು ಮಣ್ಣಾಗಿ ಹೋದ್ಹಂತ,ಕಂತಿ ಕುಂತಿ ಕನಸೆಲ್ಲ ಕದಡಿದ್ಹಾಂಗ ನೀರಾಗ,ನಾ ನೀ ಅನ್ನೊ ಸೊಕ್ಕಿನ ಮಂದೀಗಾ,ಮಿಗಿಲೀನ ಬಾಳಪಾಠ ಕಲಿಸಿದಂತಾ,ಕೊರೋನಾ  ಕಥಿಯನ್ನಾss,ಅರೇ!ಗೀಯ ಗೀಯಾ ಗಾಗಿಯ ಗೀಯಾ…||೧|| ಮುಟಿಗಿವಳಗ ಬಾಳ್ ಐತಿ ಮೂರಾದಿನದಾಗ ನಿಂತೈತಿಸಾವಿನ ಮುಂದ ಸಣ್ಣವರು ನಾವೆಲ್ಲ,ಮನೆ ಮಾರು ತೊರೆದ ಮಕ್ಕಳನ್ನಮರಳಿ ಮನೆಗೆ ಸೇರಿಸಿ,ಇರೋದ್ರಾಗ ನೆಮ್ಮದಿಯಾಗಿರಿಯಂತಾ, ಹೇಳಿದ ಕೊರೋನಾ ಕಥಿಯನ್ನಾss ಅರೆ! ಗೀಯ ಗೀಯಾ ಗಾಗಿಯ ಗೀಯಾ…||೨|| ಬಣ್ಣದ ಬದುಕು ಬಯಲಿಗಾತುಸುಣ್ಣದ ಬಾಳು ಸವಾಲಾಯ್ತುಮೇಲು ಕೀಳು ಬಡವ ಬಲ್ಲಿದಅಂಬೋ ಮಾತು ಬಲಿಯಾಯ್ತು,ನಾವೆಲ್ಲ ಒಂದೆಂಬ,ಮಾನವೀಯತೆಹರಿಸಿ, ಮನುಕುಲಕ ನಾವ್ಯರಂತ,ಹೇಳಿದ ಕೊರೋನಾ ಕಥಿಯನ್ನಾssಅರೆ! ಗೀಯ ಗೀಯಾ ಗಾಗಿಯ ಗೀಯಾ||೩|| ತಿಂದು ತೇಗಿದ ಮಂದಿಗೆ ಅರೆಹೊಟ್ಟೆ ಮಾಡಿ, ದುಡ್ಡೇ ದೊಡ್ಡಪ್ಪನಲ್ಲಾ,ಅತಿಯಾದ ಜೀವನದ್ಮತಿಗೆಅವನತಿಯೇ ಸೂತ್ರವಿದಂತ,ಮುಖಕೆ ನಿಜದ ಮುಖ್ವಾಡ ಹಾಕಿದೇಹ ಮನಸ್ಸು ಶುದ್ದ ಮಾಡೋ ,ಸರಳಾss ಸಮ್ಮಾನ ಸ್ಯಾನಿಟೈಸರ್ ಹಾಕಿದಂತಾssಕೊರೋನಾ ಕಥಿಯನ್ನಾssಅರೆ ಗೀಯ ಗೀಯ ಗಾಗಿಯ ಗೀಯಾ||೪|| ಕಹಿಸತ್ಯ ಆದ್ರೂನು ಸಿಹಿಯಾಗಿ ಉಣಬೇಕ್ರಿಜೀವದಾಗ ಏನೈತಿ,ಎನ್ ಕಟಕೊಂಡುಸಾಯೊದೈತಿ ,ನಂದಾs ಎಲ್ಲ ಅಂಬೋ ಮಾತು ಸುಳ್ಳೈತಿ, ಸರಳ ಸತ್ಯ ತಿಳಿರಿ,ನಂಬಿಕೇನೆ ಜೀವನದ ಜೀವಾಳಂತ ಬಾಳ ಗೆಲಿರೀ, ಹೇಳಿದ ಕೊರೋನಾ ಕಥಿಯನ್ನಾsss…||೫|| ಶಾರು *******************************************************

ಪದಗಳು Read Post »

You cannot copy content of this page

Scroll to Top