ಸಂಕ್ರಾಂತಿ ಕಾವ್ಯ ಸುಗ್ಗಿ ಬಿಟ್ಟು ಯೋಚಿಸಬಹುದೇ..? ಸ್ಮಿತಾ ಅಮೃತರಾಜ್. ಸಂಪಾಜೆ ದಿನದ ಕನಸುಗಳೆಲ್ಲಾಗುಲಾಬಿ ಬಣ್ಣ ಮೆತ್ತಿದಬೊಂಬಾಯಿ ಮಿಠಾಯಿಸವಿಯುವ ಮುನ್ನವೇ ಕರಗಿಬರೇ ಅಂಟು ಜಿನುಗಷ್ಟೇಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿನೀ ಬಂದು ಮೈದಡವಿ ತಲೆನೇವರಿಸದೇ ಇರುತ್ತಿದ್ದರೆ..ನಾಳೆಯ ಕನಸುಗಳಿಗೆ ಬಣ್ಣಬಳಿಯಲು ನನ್ನ ಬಳಿ ರಂಗುಉಳಿಯುತ್ತಿತ್ತೇ? ಕಣ್ಣಾಲಿ ತೆರೆದಷ್ಟೂಸಂತೆ ನೆರೆಯುವ ಬಿನ್ನಾಣ ಲೋಕಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪಲೋಪವೇ ಇಲ್ಲದ ಬದುಕಿದೆ ಒಳಗೆಬಗೆದು ಕಂಡವರಿಲ್ಲ ಪಾಪ! ಆಳದಲ್ಲೆಲ್ಲೋ ಛಳಕ್ ಎಂದ ನೋವು..ಹೊತ್ತಿಗೆ ನೀ ಬಂದು ಮುಲಾಮುಹಚ್ಚದೇ ಹೋಗುತ್ತಿದ್ದರೆ..ಗಾಯವೇನೋ ಮಾಯುತ್ತಿತ್ತು.ನೋವು ಮಾಸುತ್ತಿತ್ತೇ..? ಮುದುಡಿಕೊಂಡಷ್ಟೂ ರೆಕ್ಕೆ ಬಿಚ್ಚಿಆಗಸಕ್ಕೆ ಬೆಟ್ಟು ನೆಟ್ಟು ಹಾರಲುಕಲಿಸುತ್ತಿರುವೆ.ಮರೆತಷ್ಟೂ ಮತ್ತೂ ಮತ್ತೂಗಾಳಿಯಂತೆ ಬೀಸುತ್ತಿರುವೆ. ಈ ಕ್ಷಣ ಪಕ್ಕಕ್ಕಿಟ್ಟು ನಿನ್ನಬಿಟ್ಟು ಯೋಚಿಸಬಹುದೇ..?ನಾನು ಆಲೋಚಿಸುತ್ತಿರುವೆ. ಧ್ಯಾನಕ್ಕೆ ಯಾರ ಕಾವಲೂ ಇಲ್ಲಅಪ್ಪಣೆಗೆ ಕಾಯಲೂ ಬೇಕಿಲ್ಲಕವಿತೆಯೇ..ಈಗ ಹೇಳುಅರೆ ಕ್ಷಣ ನಿನ್ನ ಬಿಟ್ಟು ನಾಯೋಚಿಸಬಲ್ಲೆನೇ…?ಇನ್ನು ನೀನೂ………..?!
ಸಂಕ್ರಾಂತಿ ಕಾವ್ಯ ಸುಗ್ಗಿ ನೀವಾದರೂ ಹೇಳಬಲ್ಲಿರಾ ? ನೂತನದೋಶೆಟ್ಟಿ ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆ ವಿಳಾಸ ಹೇಳುವಿರಾ?ಕವಿತೆ ಬರೆಯುವ ಕೈಗೆ ಪ್ರಶ್ನೆಗಳ ಸೂಜಿಮೊನೆಯ ಸೆಳಕು ಶನಿ, ರಾಹು, ಕೇತು ಗ್ರಹಣಗಳಗ್ರಹಚಾರ ಬಿಡಿಸಿಕೊಂಡಿರಲ್ಲಾಹೊಳೆವ ಉಂಗುರದ ಬೆರಳುಗಳು ಹಾಕಿದಕವಡೆಯಭೀತಿಗೆ ಏನು ಮಾಡುವಿರಿ ? ಪುರಭವನದೆದುರುಜೈಕಾರದಜಿದ್ದಾಜಿದ್ದಿನಲ್ಲಿನಸುಕಿನ ಕಸಪೊರಕೆಯ ಕೈಬಾಚುವ ಸತ್ತ ನಾಯಿಯ ವಾಕರಿಕೆಯಲ್ಲಿಉಣಲಾರದ ಸಂಕಟಕ್ಕೆಯಾರಕೈತುತ್ತು ? ಮಾತಿನಲ್ಲಿ ಮತದಘಾಟು ಹಿಡಿಯುವವರುಗಾಂಧಿ, ಬಸವ, ಅಂಬೇಡ್ಕರರನ್ನುಬೇಕಾದಾಗ ಅಷ್ಟಷ್ಟು ಬಳಸುತ್ತಾರೆಬಿಸಿಗೆ ಮಂಜುಕರಗಿದ್ದುಅರಿವಿಗೂ ಬಾರದಂತೆತತ್ವಗಳನ್ನು ಹೊದಿಕೆಯಿಂದಾಚೆಎಳೆಯುವವರ ಕಂಡಿರಾ? ಕವಿತೆಯದಾದರೂಅದೇಕಥೆರೊಚ್ಚು, ರಚ್ಚೆಗಳ ದಂಡಿಗೆಕೊAಬು, ಕಹಳೆಗಳ ದಾಂಗುಡಿಬರೆಯುವ ಕೈಗಳು ಕುಲುಕಿದ್ದುಉಂಟೇ ?ಸಿದ್ಧಾಂತದ ತಥ್ಯತೀಡಿದರೆತಾನೇ? ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆವಿಳಾಸ, ನೀವಾದರೂ ಹೇಳುವಿರಾ?ಕೇಳುತ್ತಿರುವುದು ನಾನೇ?ನಿಮ್ಮೆದೆಯ ಪ್ರಶ್ನೆಗೆಧ್ವನಿ ಮೂಡಿದೆ ಅಷ್ಟೇ .
ಸಂಕ್ರಾಂತಿ ಕಾವ್ಯ ಸುಗ್ಗಿ ಗೂಸಬಮ್ಸ ನಿರೀಕ್ಷೆಯಲ್ಲಿ ನಾಗರೇಖಾ ಗಾಂವಕರ್ ಕಡಲ ತಡಿಯಲ್ಲಿ ನಿಂತುವಿರುದ್ಧ ಮುಖವಾಗಿಚಿತ್ತೈಸಿದರೆ ಎಂಥ ಸಹಜತೆಲ್ಯಾಂಡಸ್ಕೇಪ್ ಮಾಡಿದಮಹಾನ್ ತೋಟಗಾರನೊಬ್ಬಅಂಚಂಚನ್ನು ಬಿಡದೆಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.ನೋಡುತ್ತ ಮೈಮೇಲೆಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದಏರುವ ಇಳಿಯುವಎಸ್ಕಲೇಟರಗಳ ಮೇಲೆಕಿರು ಸೊಂಟದಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನುಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರಜೀವ ಹೊತ್ತ ಗಜಗಾಮಿನಿಯರನ್ನುಕಂಡು ಅರೆರೆ.. ಎಂದುಕೊಳ್ಳುತ್ತಮೈ ರೋಮ ನಿಮಿರಿತೇ?ಕಾಣದೇ ವ್ಯಗ್ರಗೊಂಡೆ. ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿಸೂಟುಬೂಟು ಹಾಕಿದಮಿಂಚು ಕಂಗಳಸುಂದರಾಂಗರ ಕಣ್ಣಿನ ಸಂಚಲನೆಗೆಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದಸೆಳೆತಕ್ಕೆ ಮನಸ್ಸು ಜೋಲಿ ಹೊಡೆದುಕೈ ನೋಡಿದರೆರೋಮಾಂಚನ ವ್ಯಾಕ್ಸಾಯನ. ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾನನ್ನಪ್ಪನ ಮೈಮೇಲಿನ ಕರಿಕಪ್ಪುರೋಮನಿಮಿರಕೊಳ್ಳುತ್ತ ಅದ ನೋಡುತ್ತಎದೆಯಲ್ಲಾಡುವ ಅಂಜಿಕೆಯ ಕಪ್ಪೆನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದುಬರುವ ನನಗೆ ಪ್ರತಿವರ್ಷವೂಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ. ಸಂಜೆ ಗೋಧೂಳಿ ಹೊತ್ತುಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳುಬಾಲನೆಗರಿಸಿ ಓಡುತ್ತ ಬರುವಕರುಗಳ ಕಂಡುಕುಂಡೇ ಹರಿದ ಚಡ್ಡಿಯಲ್ಲಿಯೇರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳುತ್ತಿದ್ದ ನೆನೆಪುಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದ ನೆನೆಪು.ಇಲ್ಲಿ ಪಟ್ಟಣಗಳಲ್ಲಿಸಂಜೆಯಾಗುತ್ತದೆ ಅಷ್ಟೇರೋಮ ಸೆಟೆದುಕೊಳ್ಳುವುದಿಲ್ಲ. ಆದರೂ ಹೂವಿನ ದಳಗಳ ಮುಗುಳುಮೈಸೋಕಿಸಿಕೊಂಡು ತಟ್ಟನೆ ಏಳುವಮೈರೋಮಕ್ಕಾಗಿಕೃತಕಕಾತರಿಸುತ್ತಲೇ ಇದ್ದೇನೆ.
ಸಂಕ್ರಾಂತಿ ಕಾವ್ಯ ಸುಗ್ಗಿ ಉತ್ತರಾಯಣಕ್ಕೆ ಹೊರಟ ಸೂರ್ಯ ಅನಿತಾ ಪಿ. ಪೂಜಾರಿ ತಾಕೊಡೆ ಆ ವಸಂತ ಕಳೆದು ಈ ವಸಂತದವರೆಗೆಮೌನ ಧ್ಯಾನದ ತಪದೊಳಿದ್ದವಳುಕಳಚಿ ಬಂದಿಹಳು ತನ್ನ ತೋಳ ತೆಕ್ಕೆಯಲಿಆತುಕೊಂಡಿದ್ದ ಹಳೆಯ ನೆನಪಿನೆಲೆಗಳನು ಹಾಗೆ ಬಂದವಳೇಚಿಗುರು ಬದುಕಿನ ಮಾಧುರ್ಯಕೆ ಮುನ್ನುಡಿ ಬರೆದುಮೊಗ್ಗಿನ ಮೋಹದಿ ಅರಳಿನೊಡವೆಯ ತೊಟ್ಟುನವೋಲ್ಲಾಸದ ವಸಂತದಿ ಮೈದಳೆದು ನಿಂತಿಹಳು ಪ್ರಕೃತಿ,ತಿಳಿಹಸಿರಲಿ ಕೆಂಪು ಕುಸುರಿಯ ಸೀರೆಯನುಟ್ಟು ಸಿಹಿಗಾಳಿಯ ತಂಪು ತಳಿರು ಹೂವುಗಳಿಂಪಲಿಓಲಾಡಿ ನಲಿದಾಡಿ ವಿಹರಿಸಲೆಂದುಊರೂರಿಂದ ಅಲೆದಲೆದು ಬಂದಿಹವುಹೊಸಪುಕ್ಕ ಮೂಡಿದ ಹೊಸಭಾವದ ಹಕ್ಕಿ ಕರಿಮೋಡ ದೂರ ಸರಿದು ಬೆಳ್ಮುಗಿಲು ಸನಿಹ ಒಲಿದುಹೊನ್ನ ಚೆನ್ನಿಗ ನಡೆವ ಪಥದಲಿದೂರ ದೂರದವರೆಗೆ ನುಣ್ಣನೆ ಹಾಸಿಅಣಿಯಾಗಿಹವಲ್ಲಿ ಸಡಗರದ ಮೆರವಣಿಗೆಗೆ ಮುಂಜಾನೆ ಮಂಜು ಹುಲ್ಲೆಸಳ ಮೊನೆಯಲಿ ನಿಂದುಇನಿತಿನಿತು ಜಿನುಗಿ ಮಿರ ಮಿರನೆ ಮಿನುಗಿಸಂಕ್ರಾಂತಿಯೋಲಗದ ಅಧಿಪತಿಯನುಇಣುಕಿ ನೋಡುತಿಹವು ಮುಗಿಲಿನಾಚೆಗೆ ಮಕರ ಸಂಕ್ರಾಂತಿಯಿಂದಸ್ವರ್ಗದ ಬಾಗಿಲು ತೆರೆದಿರುವುದೆಂದುಭೀಷ್ಮನೂ ತಾಳಿಹನಂತೆ ಜೀವದುಸಿರನು ಹಿಡಿದುಗಂಗಾದೇವಿಯು ಧರೆಗಿಳಿದು ಬಂದುಭಗೀರಥನ ಹಿಂದೆ ಹಿಂದೆ ನಡೆದುಸಾಗರವ ಸೇರಿದಳಂತೆ ಇದೇ ದಿನದಂದು ಸಂಕ್ರಾಂತಿ ತನ್ನ ಹಬ್ಬವೆಂದು ಬೀಗಿಕೊಂಡುಜಪ ತಪ ಧ್ಯಾನ ಅನುಷ್ಠಾನಗಳ ವೈಭವದಲಿಹೊರಟು ನಿಂತಿಹನು ಸೂರ್ಯಉತ್ತರಾಯಣದ ಹಾದಿಯಲಿ ತಿರುಗುವ ಗತಿಯಲಿ ತಿಲ ತಿಲದಷ್ಟು ಅಗಲವಾಗಲುನಿಶೆಯು ಕುಗ್ಗಿ ಉಷೆಯು ಹಿರಿಹಿಗ್ಗಿ ಬೆಳೆಯುತಿಹಳು ಸಂಕ್ರಾಂತಿ ಮೇಳಕೆ ಇಳೆಯಲ್ಲೂ ಹರುಷಬಳುಕುವ ಬಣ್ಣ ಬಣ್ಣದ ಪತಾಕೆಗಳುತಿಲ, ತುಪ್ಪ, ಬೆಲ್ಲ, ಕಪ್ಪು ಉದ್ದಿನ ಹುಗ್ಗಿಯ ಸುಗ್ಗಿ‘ತೀಳ್ ಗೂಡ್ ಕಾವಾ ಗೋಡ್ ಗೋಡ್ ಬೋಲಾ’ಮನಸು ಮನಸುಗಳ ಸಂಬಂಧ ಬೆಸೆಯುವಮಂತ್ರಗಳು ಎಲ್ಲ
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಸಾತುಗೌಡ ಬಡಗೇರಿ ರೈತರ ಮೊಗದಿ ನಲಿವು ಕಾಣುವವರುಷದ ಮೊದಲ ಹಬ್ಬದಿನ.ಉತ್ತರಾಯಣದ ಪುಣ್ಯದ ಕಾಲವುಸಂಕ್ರಾಂತಿ ಹಬ್ಬದ ಈ ಸುದಿನ. ಬನ್ನಿ!ಬಂಧುಗಳೇ..ನಾಡ ಪ್ರಜೆಗಳೇಎಳ್ಳು ಬೆಲ್ಲದ ಸಿಹಿ ಸವಿಯೋಣ.ಹಳೆಯದು ಮರೆತು ಹೊಸ ಕನಸನ್ನುಕಟ್ಟುತ ಹರುಷದಿ ತೇಲೋಣ. ಗಿಡಮರ ಚಿಗುರಿ ಹೂವದು ಅರಳಿಕೇಳಲು ಕೋಗಿಲೆ ಇಂಚರವು.ನಾಡಜನತೆಯ ಮನೆಮನ ಪುಳಕವುಕಾಣಲು ಸಂಕ್ರಾಂತಿ ಸಡಗರವು. ಎತ್ತಿಗೆ ಬಣ್ಣದ ಚಿತ್ತಾರ ಬಳಿಯುತಹಬ್ಬದ ಖುಷಿಯ ಕಾಣುವರು.ಸಕಲರ ಮನೆಯಲಿ ರಂಗೋಲಿ ಹಾಕುತದೇವನ ಭಕ್ತಿಲಿ ಭಜಿಸುವರು. ಸಂಕ್ರಾಂತಿ ಸಡಗರ ಉಳಿಯಲಿ ಅನುದಿನನಾಡಿನ ಸಂಸ್ಕೃತಿ ಹಿರಿತನವು.ಸಕಲರ ಬಾಳು ನೆಮ್ಮದಿ ಕಾಣಲುದೈವದ ಅನುಗ್ರಹ ಬಯಸುವೆವು.
ಸಂಕ್ರಾಂತಿ ಕಾವ್ಯ ಸುಗ್ಗಿ ಖುಷಿ ಬೆಳೆಯಬಹುದು. ತಮ್ಮಣ್ಣ ಬೀಗಾರ ಅದೆಲ್ಲೋ ಕಾಣಿಸಿದಬಣ್ಣದ ಚಂಡಿನಂತಹುದೊಂದು ಟಿವಿಯಲ್ಲಿ ಕಾಣಿಸಿತುಮತ್ತೆ ಮತ್ತೆ ಕಾಣುತ್ತ ಜಗತ್ತನ್ನೇ ಆವರಿಸಿತುಜನರೆಲ್ಲ… ದಿಕ್ಕೆಟ್ಟು ಓಡತೊಡಗಿದರುಚಂಡು ಚಂಡಲ್ಲ… ಉದ್ಯೋಗವನ್ನು ಉಂಡುಹಾಕಿತುಯಾರು ಯಾರನ್ನೋ ಹಿಡಿದು ಬಡಿದು ಆಸ್ಪತ್ರೆ ಸೇರಿಸಿತುಮತ್ತೆ ಅದರದ್ದೇ ಸುದ್ದಿ ಹಾಗೂ ಲದ್ದಿವಿಮಾನ ನಿಲ್ಲಿಸಿ ರೈಲು ಬಂಧಿಸಿಬರಿಗಾಲಲ್ಲಿ ಓಡಿಸಿತು… ಜನರನ್ನು ಪೀಡಿಸಿತುಯಾರು ಯಾರೋ ಈ ಚಂಡನ್ನು ಹಿಡಿದುಗೋಲು ಹೊಡೆದರುಕೆಲವರು ಬಹುಮಾನ ಪಡೆದರು… ಇನ್ನೂ ಕೆಲವರುರೂಪಾಂತರಿಸಿ ಮಾರಿದರು… ಕರಾಳ ಚಿತ್ರ ಬರೆಸಿನಾಲ್ಕು ದಾರಿಯಲ್ಲಿ ನೆಟ್ಟು ಹೆದರಿಸಿದರುಬರಬರುತ್ತ ಚಂಡು ಸಹಜವಾಯಿತುಆದರೆ ಬದುಕು ಸಹಜವಾಗಲಿಲ್ಲಕೆಲವರ ಹೊಟ್ಟೆಯಲ್ಲಿ ಚಂಡು ಆಡುತ್ತಲೇ ಇದೆಈಗ ಅದಕ್ಕೆ ಸೂಜಿ ಚುಚ್ಚಿಪುಸ್ಸ್ಗೊಳಿಸಿ ಆಟ ನಿಲ್ಲಿಸುತ್ತಾರಂತೆಮತ್ತೆ ಸಂಕ್ರಾಂತಿಯ ಬಣ್ಣದ ಕಾಳಿನಂತೆಸವಿಮಾತು ಕೇಳುತ್ತಿದೆಸಕ್ಕರೆ ಕಾಳು ಕರಗಿದಂತೆ ಕಷ್ಟ ಕರಗಬಹುದುಅಥವಾ ಸವಿಮಾತೂ ಕರಗಬಹುದುಹಬ್ಬದ ಪ್ರೀತಿಯ ಬೆಸುಗೆ ನಮ್ಮಲ್ಲಿ ಇದ್ದರೆ…ಖುಷಿ ಬೆಳೆಯಬಹುದು.
ಸಂಕ್ರಾಂತಿ ಕಾವ್ಯ ಸುಗ್ಗಿ ಕತ್ತಲೆಯನ್ನು ಹಿಂಜಿ ಪಡೆದ ಬೆಳಕು ಹೇಮಾ ಸದಾನಂದ್ ಅಮೀನ್ ಕಣ್ಣೆದುರು ಹಾದುಹೋಗುವ ಚಿತ್ರಗಳನ್ನುದಂಗಾಗಿ ನೋಡುತ್ತಿದ್ದಂತೆ ಎಲ್ಲವೂಹೊಸದಾಗಿ ಕಾಣಿಸಿಕೊಳ್ಳುವವುಅಪರಿಚಿತ ನಗರದ ಸಂತೆಯಲ್ಲಿಮಾರಾಟದ ಸರಕುಗಳಾಗಿ ಹರಾಜಿಗೆಕಾದು ಕುಳಿತ ವಸ್ತುಗಳಲ್ಲಿಒಂದಿಷ್ಟು ಭಾವನೆಗಳೂ ತಿಳಿಯದಂತೆಮಾರಿ ಹೋಗುವುದು ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯಜೀವವೀಣೆ ತಳಿದು ಮಿಡಿದ ತಂತಿಯಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ‘ ಸಬ್ ಚಲ್ತಾ ಹೈ’ ಎಂಬ ದನಿಯಲಿಕರಗಿದ ಮೌನ ಆಗಾಗ ಮಿಸುಕಾಡಿದರೂಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು ಇದು ನಶೆ, ಇದ್ದುದ್ದನ್ನು ಮರೆತುಇಲ್ಲದರ ಹಿಂದೆ ಧಾವಿಸುವ ಮತ್ತುತೊದಲು ಹೆಜ್ಜೆಗಳನ್ನಿಡುತ್ತಾ ಕಂಪನದ ಕೈಗಳಿಂದಕತ್ತಲೆಯನು ಬಿಡಿ ಬಿಡಿಯಾಗಿ ಹಿಂಜಿಬೆಳಕಿನ ರೂಪ ಕೊಡುವ ಹುಚ್ಚು ಹಠದಲಿಗೆದ್ದವರು ಸೋತವರು ಒಂದೇ ಗ್ರಹದಒಂದೇ ಮನೆಯ ಜೀವಿಗಳೆಂದರೆ ,ನಿಮಗೂ ಆಶ್ಚರ್ಯವಾದಿತು!
ಸಂಕ್ರಾಂತಿ ಕಾವ್ಯ ಸುಗ್ಗಿ ಕಾಲನ ಬೆನ್ನೇರಿ ರೇಷ್ಮಾ ನಾಯ್ಕ ಕಾಲ ಎಂದರೆ ಶೂನ್ಯವಲ್ಲಅದು ಮಾನವನಆಸೆ ಆಕಾಂಕ್ಷೆಗಳ ಆಗರ. ಇದೋ ನೋಡು ಚಕ್ರದಂತೆವರುಷ ವರುಷ ಮೇಲಕ್ಕೇರುತ್ತಲೇತೀಕ್ಷ್ಣ ಕಣ್ಣಿಗೂಮಣ್ಣೆರೆಚಿ ಮಾಯ. ಒಮ್ಮೆಲೆ ಓಡಲಾರದೇಇಂದು ನಾನು, ನಾಳೆ ನೀನುಹುಟ್ಟು ಸಾವುಗಳಹಗಲು-ರಾತ್ರಿಯಆಟವಾಡುತ್ತದೆ. ಭೂತ , ಸೂರ್ಯನಿಂದಾಚಿನನೆರಳು..ವರ್ತಮಾನ, ಶ್ರಾವಣ ಹಬ್ಬಗಳಹೂರಣ..ಭವಿಷ್ಯ , ಮಿಂಚಿನಂಚಿನದಿಗಂತ. ನೂರು ಆಸೆಗಳೆಂಬಬಾನಕ್ಕಿಗಳು ರೆಕ್ಕೆಬೀಸಿ ಕರೆದಿವೆಮತ್ತದೇ ಪಯಣಕ್ಕೆ . ದೂರ ಸನಿಹಗಳು.,ಹಳತು ಹೊಸತುಗಳ.,ಕಾಲನ ಬೆನ್ನೇರಿ ಸರಿಯುತ್ತಿವೆ..ಕೈಗೆ ಸಿಕ್ಕು ಸಿಗದಂತೆಬೂರಲದ ಅರಳೆಯಂತೆ. ಹನ್ನೆರಡು ಅಂಕಿಗಳು.. ಗಂಟೆ, ನಿಮಿಷ , ಸೆಕೆಂಡುಗಳು..ಸಂಕ್ರಮಣದ ಹರಿವಿನತ್ತಸಾಗುವವು,ಜೀವದ ರಭಸದಬಂಡಿಯನೇರಿ. ನವ ವಸಂತಕ್ಕೆಹೊಸ ಭರವಸೆಯರಕ್ಷೆಯನಿಕ್ಕಿ ,ತೂಕಾಟ ತೇಕಾಟನೀಗದ ಜಂಜಾಟಕ್ಕೆನಿಶಬ್ಧದ ಬಾಗಿಲಿಕ್ಕಿ.
ಸಂಕ್ರಾಂತಿ ಕಾವ್ಯ ಸುಗ್ಗಿ ಬಂಜರು ತೊರೆಯಲಿ ರೇಶ್ಮಾಗುಳೇದಗುಡ್ಡಾಕರ್ ಮತ್ತೆ ಮತ್ತೆ ನೋಡಲುಏನಿದೆ ಇಲ್ಲಿ ಸಾಕಷ್ಟು ಬಂಜರುನೆಲದ ಬರಿದಾಗದೆಜೀವನದ ಭಾಗವೇ ಆಗುತ್ತಿದೆ …???ಹೊಸ ಹೊಸ ಮುಖವಾಡಗಳುಎದುರಾಗಿವೆ ತಮ್ಮ ಸ್ವರೂಪ ಬದಲಿಸಿಸ್ನೇಹ ಬೇಡುತ್ತವೆ ಕಳ್ಳ ಮನಸ್ಸಿನೊಂದಿಗೆ ..! ಮಾಡಿ ಗುಡ್ಡಹಾಕುವಷ್ಟು ವಾಸ್ತವ ಇದ್ದರುಕಾಣದ ಭವಿಷ್ಯದ ಕನಸು ಬೇಡ ಎಂದರುಕಾಡುವದು …..ಇರುವದೆಲ್ಲವ ಬಿಟ್ಟು ….. ನಡೆದಂತೆಆದರೆ ಸಾದ್ಯವಿಲ್ಲ ಅಲ್ಲವೇ ?ತಟ್ಟನೆ ಎಳೆಯುವದು ಸಾಂಧರ್ಭಿಕ ಬದುಕುಸಾಕು ನಿಲ್ಲಿಸು ನಿನ್ನ ತಲ್ಲಣವ ಎಂದು … ನೀರಿನಲ್ಲಿ ಬಣ್ಣಬಿಡುವ ಬಟ್ಟೆಯಂತೆಬಂಧ ಬದಲಾದಾಗಹುಡುಕಾಟ ಏತಕ್ಕೆ ? ಬಣ್ಣಕ್ಕೊಬಂಧಕ್ಕೊ ?ಮತ್ತದೆ ನೆನಪು , ಆಗಾಗ ಈಬದುಕಿಗೆ ಬೇಕು ಸುಂದರ ಮರೆವು !ಮಿಥ್ಯ ಅರಿಯಲುಮನವ ಗಟ್ಟಿ ಮಾಡಲು …. ದಿನಗಳು ಉರುಳುವವು ರಭಸವಾಗಿಹರಿದು ನದಿಯಂತೆಮತ್ತೆ ನೋಡ ನೊಡುತ್ತಲೆ ಹೊಸವಸಂತನ ಆಗಮನ ಆತ್ಮೀಯತೆಇದ್ದರೆ ವರ್ಷಗಳು ಕಾಪಿಡುತ್ತವೆಎದೆಯೊಳಗೆ ಬೆಚ್ಚಗೆ …..ಹೃದಯ ಕಲ್ಲಾಗಿ ಉಳಿದರೆದಿನದರ್ಶಿಕೆ ತೆಪ್ಪಗೆ ಒಂದೊಂದೆಮೂಲೆ ಸೇರುತ್ತದೆ ನಗುತ್ತಾ …..!ಮಾನವನ ಬರಗಾಲಕ್ಕೆ . ********************************************************
ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ವರುಷ ಅಕ್ಷತಾ ಜಗದೀಶ ಹೊಸ ವರುಷದ ಮೊದಲ ಹಬ್ಬಅದೇನೋ ಉಲ್ಲಾಸಹೊಸದೊಂದು ಚೈತನ್ಯಹೊಸ ಉಡುಗೆ ಉಟ್ಟುಮುಡಿ ತುಂಬ ಹೂ ಮುಡಿದುಸಖಿಯರೊಡನೆ ಕೂಡಿಕೊಂಡುಎಳ್ಳು ಬೆಲ್ಲ ಹಂಚುವ ಹಬ್ಬಬಂದಿದೆ ನೋಡು ಸಂಕ್ರಾಂತಿಹಬ್ಬ….. ಅಂಗಳದ ತುಂಬ ರಂಗವಲ್ಲಿ ಬಿಡಿಸಿಬಾನಂಗಳದಲ್ಲಿ ಗಾಳಿಪಟ ಹಾರಿಸಿಎತ್ತುಗಳಿಗೆ ಬಣ್ಣ ಹಚ್ಚಿಕಿಚ್ಚು ಹಾಯಿಸುವ ಹಬ್ಬಮರಳಿ ಬಂದಿದೆ ಸಂಕ್ರಾಂತಿ ಹಬ್ಬ.. ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯಪಥ ಬದಲಿಸುವ ಮುಹೂರ್ತವೇಮಕರ ಸಂಕ್ರಾಂತಿಈ ಕ್ಷಣವದು ರೈತನ ಮೊಗದಲ್ಲಿಮೂಡಿಸಿದೆ ಸುಗ್ಗಿ ಹಬ್ಬದಕಾಂತಿ.. ಧಾನ್ಯ ಸಿರಿಯನ್ನು ಬರಮಾಡಿಕೊಂಡುಎಳ್ಳು ಬೆಲ್ಲದ ಸವಿಯ ಉಂಡುಹೊಸ ಪಥದ ಕಡೆಗೆ ಸಾಗಲಿನಮ್ಮ ಪಯಣಬಾಳಲಿ ಮೂಡಲಿ ನಲಿವಿನಚರಣ..ಆಹಾ! ಸುಗ್ಗಿ ಸಂಭ್ರಮದ ಹಬ್ಬಮರಳಿ ಬಂದಿದೆ ಸಂಕ್ರಾಂತಿ ಹಬ್ಬ… **********************************









