ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ ಬದುಕಿನ ಬಿಡಿಸಲಾಗದ ಬಂಧಮಿತಿ ಮೀರದೇ ಇದ್ದರೆ ಬೆಲೆ ಉಂಟು ಆಸೆಗೂ ಕಂದಾ. **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕಸಂಗಾತಿ

ಹೋಗಿ ಬಾ ಮಗಳೆ. ಹೋಗಿ ಬಾ ಮಗಳೇ ಲೇಖಕರು: ಡಾ||ವಿರೂಪಾಕ್ಷ ದೇವರಮನೆಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ಪುಸ್ತಕದ ಬೆಲೆ: ೧೫೦.೦೦ರೂ ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ. ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ. ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಆತಂಕದ ವಿಷಯವೇ. ಸಂಭ್ರಮದ ಜೊತೆಗೆ ಭವಿಷ್ಯದ ಕಾತರವು ಬೆರೆತಿರುತ್ತದೆ. ಪ್ರಸ್ತುತ ಪುಸ್ತಕದ ಲೇಖಕರು ತಮ್ಮ ಬಳಿ ಬರುವ ಬಹಳಷ್ಟು ಪಾತ್ರಗಳ ಮೂಲಕ ಜೀವನದ ವಿವಿಧ ಮಜಲುಗಳಲ್ಲಿ ಎದುರಾಗಬಹುದಾದ ಘಟನೆಗಳ ಸವಿಸ್ತಾರ ವಿವರಣೆ ಹಾಗೂ ಸೂಕ್ತ ಪರಿಹಾರವನ್ನು ನೀಡಿದ್ದಾರೆ. ಹೆಣ್ಣಾಗಿ ನಾನೂ ಕೂಡಾ ಮತ್ತೊಂದು ಮನೆಗೆ ಬಂದವಳು ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದವಳು. ಅಪ್ಪ -ಅಮ್ಮನ ಮನೆಗೆ ವಿಭಿನ್ನವಾದ ವಾತಾವರಣ , ಒಂದು ರೀತಿಯ ಅಳುಕು . ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಇದೇ ರೀತಿ. ಸೊಸೆ ಗಂಡನ ಮನೆಯಲ್ಲಿ  ಮದುವೆಯ ಮೊದಲಿನಿಂದಲೂ ಸೊಸೆಯೇ ಆಗಿರುತ್ತಾಳೆ. ಆದರೆ ಅಳಿಯನೆಂದರೆ ಹೆಂಡತಿಯ ಮನೆಯಲ್ಲಿ ವಿಶೇಷ ಗೌರವ, ಆದರಾತಿಥ್ಯ. ಬೇರೊಂದು ಮನೆಗೆ ಹೊಂದಿಕೊಳ್ಳುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ ಯಾರೂ ಸಮಯದ ಅವಕಾಶವೇ ಕೊಡುವುದಿಲ್ಲ.  ಲೇಖಕರು ಈಗಿನ ಸಮಾಜದಲ್ಲಿ ಮುರಿದುಬೀಳುವ ಅನೇಕ ವಿವಾಹ ಹಾಗೂ ಅವುಗಳ ತೊಳಲಾಟಗಳ ಮೂಲಕ ಮದುವೆ ಎಂದರೆ ಸಮಸ್ಯೆಯಲ್ಲ,‌ ಅದನ್ನು ನಿಭಾಯಿಸಲು ಒಂದಷ್ಟು ತಯಾರಿ ಮಾಡಿಸುವುದು ಹೆತ್ತವರಿಗೂ, ಗಂಡಿನ ಕಡೆಯವರಿಗೂ ಸೇರಿರುತ್ತದೆ. ಲೇಖಕರು ತಮ್ಮ ಈ ಪುಸ್ತಕ ರೂಪದ ದಾರಿದೀಪವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ೨೫ ಘಟಕಗಳು ಇದರಲ್ಲಿ ಸೇರಿದ್ದು , ನಮ್ಮನ್ನು ಓದಿಸಿಕೊಂಡು ಹೋಗುವ ಮಾರ್ಗದಲ್ಲಿ ಸ್ವ ಅನುಭವಗಳು , ಬೇಸರಿಕೆಗಳು, ಸಂಕಟಗಳು ಇಣುಕುತ್ತವೆ. ಮದುವೆಯ ವಯಸ್ಸಿನ ಕನಸಿನಿಂದ ಹಿಡಿದು ಮಕ್ಕಳ ಜವಾಬ್ದಾರಿ, ಮನೆಯವರೊಂದಿಗೆ ಹೊಂದಾಣಿಕೆ ಹೀಗೆ ಎಲ್ಲವನ್ನೂ ಸಾದೃಶ್ಯಗೊಳಿಸಿದ್ದಾರೆ. ಪತಿ ಹಾಗೂ ಪತ್ನಿ ಯಾರೂ ಹೆಚ್ಚು ಕಡಿಮೆ ಎಂಬ ತರ್ಕ ಕ್ಕೆ ಹೋಗಲೇಬಾರದೆಂಬ ಕಿವಿಮಾತು, ದಂಪತಿಗಳ ನಡುವೆ ಅನ್ಯರ ಪ್ರವೇಶ ಎಂದಿಗೂ ನಿಷಿದ್ಧ , ಅಪಾರ್ಥ ತರುವ ಮೌನಗಳಿಗಿಂತ ಅರ್ಥ ವಿರದ ಜಗಳಗಳೇ ವಾಸಿ, ಕ್ಷಮಿಸುವ ಮರೆಯುವ ಗುಣಗಳನ್ನು ಹೊಂದುವ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಟ್ಟಲು ಅಪ್ಪನಂಥ ಗೆಳೆಯನಿಂದ ಸಲಹೆ ಈ ಪುಸ್ತಕ ಎನಿಸಿತು. ಇಂಥ ಘಟನೆಗಳು ಸಾಮಾನ್ಯವಾಗಿ ಎನಿಸಿದರೂ ನಮಗೆ ಕಲಿಯುವ ಪಾಠ ಇದರಲ್ಲಿ ಅಡಗಿದೆ. ಅವಳಿಗೆ… ಅವನಿಗಿರದ ಪ್ರಾಕೃತಿಕ ಸವಾಲುಗಳು! ಅವನಿಗೆ .. ಅವಳಿಗಿರದ ಜವಾಬ್ದಾರಿಗಳು! ಎಂಥಾ ಅದ್ಭುತ ಅಲ್ಲವೇ  ಡಾಕ್ಟರ್ ಅವರ ಈ ನುಡಿಗಳು. ಹೆಣ್ಣು ಹಾಗೂ ಗಂಡು ವಿಭಿನ್ನ ದೈಹಿಕ, ಮಾನಸಿಕ ಕ್ಷಮತೆಯನ್ನು ಪಡೆದವರು. ಅವಳಿರಲಿ, ಅವನಿರಲಿ ಇಬ್ಬರೂ ಒಂದೇ ಆದರೂ ಭಿನ್ನ. ಆರೋಪಗಳ ಸರಮಾಲೆಯ ಮತ್ತೊಬ್ಬರಿಗೆ ಹಾಕುವ ಮುನ್ನ ಸ್ವ ವಿಮರ್ಶೆಗೆ ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಮನವ ತಟ್ಟಿದ ಪುಸ್ತಕ. ಥ್ಯಾಂಕ್ಯೂ ಡಾಕ್ಟರ್. ****************************************** ಸರಿತಾ ಮಧು

ಪುಸ್ತಕಸಂಗಾತಿ Read Post »

ಇತರೆ, ಲಹರಿ

ಕಾಡುವ ವಿಚಾರ…

ಕಾಡುವ ವಿಚಾರ… ವಸುಂಧರಾ ಕದಲೂರು               ಆ ದಿನ ನಿಜಕ್ಕೂ ಬಹಳ ಕಳವಳಪಟ್ಟಿದ್ದೆ. ಏನು ಮಾಡಿದರೂ ನನಗೆ ನಂಬಿಕೆ ಮೂಡುತ್ತಿರಲಿಲ್ಲ. ಏಕೋ ಎದೆಯಾಳದಲಿ ತೀವ್ರ ನೋವಾಗುತ್ತಿರುವ ಅನುಭವ. ಆ ಕ್ಷಣಕ್ಕೆ ಆಶಾಭಂಗದ ಅರ್ಥವೂ, ದಿಗ್ಭ್ರಮೆ ಎಂಬುದರ ಪರಿಚಯವೂ ಆಗಿಹೋಯಿತು. ಎಳೆ ಮನದ ಭಿತ್ತಿಯಲಿ  ಉದಿಸಿದ ದುಃಖ ಹಸಿ ನೆಲದಲ್ಲಿ ಬೇರೂರಿದ ಬೀಜದಂತಾಯ್ತು.       ಹೌದು, ಮೊದಲ ಬಾರಿಗೆ ಪ್ರೀತಿಯ ‘ಗಾಂಧಿ’ ಅವರ ಸಾವು ಹೇಗಾಯಿತೆಂದು ತಿಳಿದಾಗ ನನಗಾದ ಅನುಭವವೇ ಈ ಮೇಲಿನದ್ದು. ‘ಮಹಾತ್ಮ ಗಾಂಧೀಜೀ’ ಅಂತಹವರನ್ನೂ ಹೇಗೆ ಕೊಲ್ಲುವುದಕ್ಕೆ ಸಾಧ್ಯ? ಅದೂ ನಾವು ಭಾರತದವರೇ!ಬೆಚ್ಚಿ ಬಿದ್ದಿದ್ದೆ.       ದಿನಗಳು ಉರುಳುರುಳಿ ಸಾವಕಾಶದ ಪರದೆ ಸರಿದು ಅಗೋಚರ ಸಟೆಗಳೂ, ಉಳಿದ ಹಲವು ಸತ್ಯಗಳೂ ದೃಗ್ಗೋಚರವಾಗುತ್ತಾ ಆಗುತ್ತಾ ನನ್ನನ್ನು ಕಂಗೆಡಿಸಿದವು. ಸಮಾಧಾನ ಪಡೆಯುವ ಹಂಬಲಕೆ ಯಾರೂ ದಾರಿ ತೋರುತ್ತಿಲ್ಲ. ಹತಾಶೆ ಗೊಂದಲದ ಗೊಂಡಾರಣ್ಯ ಹೊಕ್ಕು ಸಿಕ್ಕ ಸಿಕ್ಕ ಸಿಕ್ಕುಗಳನು ಬಿಡಿಸುತ್ತಾ ಮತ್ತೆ ಹೆಣೆಯುತ್ತಾ ಅಬ್ಬೇಪಾರಿಯಾಗಿ ನಿಂತ ಭಾವ ನನ್ನದಾಗಿತ್ತು.      ಗಾಂಧಿ ಮಾತ್ರವೇ ಅಲ್ಲ, ಕೃಷ್ಣ(?), ಕ್ರಿಸ್ತ, ಬಸವಣ್ಣ…..!! ಏಕೆ ಈ ಜಗತ್ತು ನ್ಯಾಯಪರವಾಗಿರುವುದಿಲ್ಲ? ಬೆಳಕನ್ನು ಕಾಣಬಯಸದೇ ಕತ್ತಲಿನಲ್ಲಿ  ಕಡಲ ದಡದ ಬಂಡೆಗೆ ಅದೆಷ್ಟು ನಿರಂತರದ ಅಲೆಗಳ ಬಡಿದಂತೆ. ಕಣ್ಣ ಮುಂದೆಯೇ ಒಂದು ಸೊಗಸಾದ ಚಿತ್ರವನು ತಿರುಚಿ ಮುರುಟಿ ತಿಪ್ಪೆಗೆಸೆದಂತೆ. ಆಗ ತಿಳಿದ ಸತ್ಯಗಳೂ… ಆಮೇಲಿನ ದೊಂದಿ ಹಚ್ಚಿ ಕಾಣಿಸುವ ಸುಳ್ಳುಗಳೂ… ಈಗಲೂ ನನ್ನನ್ನು ಕಾಡುತ್ತಲೇ ಇವೆ. ಇದಾವುದರ ಗೊಡವೆಗೆ ಹೋಗದೇ ನಿರಾಳದಲ್ಲಿ ಸಮಾಧಿ ಆಗಿಹೋದ ನನ್ನ ಹಿರೀಕರು ನೆನಪಾಗುತ್ತಾರೆ. ಎಂಥಾ ನೆಮ್ಮದಿಯ ಬದುಕು ಅವರದ್ದಿತ್ತೆಂದು ಯಾವಾಗಲೂ ಅನಿಸುತ್ತದೆ. ಆದರೆ, ಬೆಳಕ ಕಿಡಿ ಕಂಡ ಮೇಲೂ ಅದಕ್ಕೆ ಬೆನ್ನು ತಿರುಗಿಸಿ ಪಾತಾಳದ ಆಳದಲಿ ಬದುಕುವುದು ನನಗೆ ಸಾಧ್ಯವಾದೀತೆ!?            ಸತ್ಯವು ತಿಳಿಯಲಾರದೆಂದಲ್ಲ, ತಿಳಿಯಾಗಲಾರದ ರಾಡಿಯಲ್ಲೇ ಈಗ ಬದುಕುತ್ತಿರುವಾಗ ಕನಸು ಹುಟ್ಟದ  ಕತ್ತಲಲ್ಲಿ ಸೊಗಸಾದ ನಿದ್ರೆಗಳನು ಕಾಣುವುದು ಹೇಗೆ?  ಅಪಾರ ನೆಮ್ಮದಿಯ ರಾತ್ರಿಗಳನ್ನು ಕಂಡಿದ್ದ ಪೂರ್ವಿಕರು  ಹೆಚ್ಚು ಒಳ್ಳೆಯ ಅಭಿರುಚಿ ಇದ್ದವರೆಂದೂ, ಸುಖಿಗಳೆಂದೂ, ಸಿರಿವಂತರೆಂದೂ ನಾನು ಗಟ್ಟಿಯಾಗಿ ನಂಬುತ್ತೇನೆ.       ನನ್ನನ್ನು ಕಾಡುವ ಇತಿಹಾಸಗಳು ನನ್ನ ಕನಸಿಗೂ ಕನ್ನ ಹಾಕುತ್ತಿವೆ. ಹಾಗಾದರೆ ಇತಿಹಾಸ ಓದಲೇ ಬಾರದೆ?  ಅಥವಾ ಓದಬಾರದ ಚರಿತ್ರೆಗಳೂ ಇವೆಯೇ?! ಗೊತ್ತಿಲ್ಲ. ಏಕೆಂದರೆ ಗಾಂಧಿ, ಬಸವಣ್ಣ ಅಂತಹವರ ಸಾವು ಹಾಗೂ ಅದರ ಕಾರಣಗಳು ಆಗ ನಾನು ಪಾಠ ಓದುವ ಹುಡುಗಿಯಾಗಿದ್ದಾಗ ಅಪಾರ ವೇದನೆಯೊಡನೆ ದಿಗ್ಭ್ರಮೆ ತಂದಿದ್ದರೆ, ಈಗ ಈ ನೆಲದ ಮೇಲೆ ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕೆಂದು ನಿಶ್ಚಯಿಸಿರುವಾಗ, ಇಲ್ಲಿ ಕಂಡುಬರುತ್ತಿರುವ ಹಲವು ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹೆಚ್ಚು ಕಾಡುತ್ತಿವೆ. ***********************************

ಕಾಡುವ ವಿಚಾರ… Read Post »

ಅಂಕಣ ಸಂಗಾತಿ, ದಿಕ್ಸೂಚಿ

ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು  ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ.  ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ.” ಎನ್ನುವ ಎಚ್ ಡಿ ಥೋರೇ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ  ನಾವು ತುಂಬಾ ದುರದೃಷ್ಟವಂತರು ಎಂದು ಕರಬುತ್ತೇವೆ.. ನಿಜ ಸಂಗತಿ ಎಂದರೆ “ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದಷ್ಟೆ.”ಮಾಡುವ ಕಾರ್ಯಗಳ ಬಗೆಗೆ ಹಳೆಯದರ ಆಧಾರದ ಮೇಲೆ ವಿಭಿನ್ನವಾಗಿ ವಿಚಾರ ಮಾಡಿ ಹೊಸ ರೀತಿಯಲ್ಲಿ ನಿರ್ವಹಿಸುವುದೇ ಸೃಜನಶೀಲತೆ ಎಂದು ಕರೆಸಿಕೊಳ್ಳುತ್ತದೆ. ಹಳೆಯ ಪದ್ದತಿಗಳನ್ನು ನಂಬಿಕೊಂಡು ಅದಕ್ಕೆ ಜೋತು ಬಿದ್ದು ಪಡೆದ ಜ್ಞಾನವನ್ನು ಅರಿವಾಗಿಸಿಕೊಳ್ಳದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಹೀಗಾಗುತ್ತಿದೆ. ಈ ಮನಸ್ಥಿತಿಯಿಂದ ನಾವಿಂದು ಹೊರಬರಲೇಬೇಕಿದೆ. ಇಂಥ ಮನೋಭಾವವನ್ನು  ಕಂಡು ಕಾಳಿದಾಸ “ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ.” ಎಂದು ಹೇಳಿ ಹಳೆಯದರ ಪರಿಮಿತಿಯೆಡೆಗೆ ನಮ್ಮ ಗಮನ ಸೆಳೆದಿದ್ದಾನೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ತಮ್ಮ ಹೆಸರು ದಾಖಲಿಸಿಕೊಂಡ ಅಲ್ಬರ್ಟ್ ಐನಸ್ಟೀನ್, ಸಿ ವಿ ರಾಮನ್ ಥಾಮಸ್ ಅಲ್ವಾ ಎಡಿಸನ್, ಸರ್ ಎಮ್ ವಿಶ್ವೇಶ್ವರಯ್ಯನವರಂಥವರ ಯಶಸ್ಸಿಗೆ ಸೃಜನಶೀಲತೆಯು ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸೃಜನಶೀಲತೆ ಎಂದರೆ. . . . .? “ಮಾಡುವ ಕೆಲಸ ಕಾರ್ಯಗಳನ್ನು ಸಾಮಾನ್ಯವಾಗಿ ಯೋಚಿಸದೇ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ ಹೊಸ ಸಂಶೋಧನೆಗಳಿಗೆ ಆವಿಷ್ಕಾರಗಳಿಗೆ ಮುನ್ನುಡಿ ಬರೆಯಲು ಸಹಕರಿಸುವ ಅಂಶವೇ ಸೃಜನಶೀಲತೆ ಎಂದು ಸೃಜನಶೀಲತೆಯು ನಮ್ಮನ್ನು ಇತರರಿಂದ  ವಿಭಿನ್ನ ಎಂದು ತೋರಿಸುತ್ತದೆ. ಜಗತ್ತಿನಲ್ಲಿ ಕುತೂಹಲಕಾರಿ ವಿಸ್ಮಯಕಾರಿ ಸಂಗತಿಗಳೆಡೆಗೆ ಕಣ್ಣರಳಿಸಿ ನೋಡುತ್ತ ಈ ಸತ್ಯ ಸಂಗತಿಗಳ ಬೆನ್ನು ಹತ್ತಿ ತಿಳಿದುಕೊಳ್ಳುವ ಹಂಬಲವನ್ನು ಮನದಲ್ಲಿ ತುಂಬಿಕೊಂಡು ನಾವೂ ಅಂಥ ಚಕಿತಗೊಳಿಸುವ ¸ಸಂಗತಿಗಳನ್ನು ಇದ್ದುದರಲ್ಲಿಯ ನ್ಯೂನತೆಗಳನ್ನು ತಿದ್ದಿ ಉತ್ತಮ ಪಡಿಸುವುದು ಹೇಗೆ ಎಂದು ನಿರಂತರವಾಗಿ ಯೋಚಿಸಿ ಊಹಿಸಿ ಕಲ್ಪನೆಗಳನ್ನು ಕಟ್ಟಿಕೊಂಡು ಆ ಕಲ್ಪನೆಗಳನ್ನು ನನಸಾಗಿಸುವುದೇ ಸೃಜನಶೀಲತೆ.ಹೊಸತನಕ್ಕೆ  ತುಡಿಯುವ ಮನ ಸಹಜವಾಗಿ ಸೃಜನಶೀಲತೆಯತ್ತ ವಾಲುತ್ತದೆ. ಇಂಥವರನ್ನು ಸೃಜನಶೀಲ ಮನಸ್ಸುಳ್ಳವರು ಎಂದು ಗುರುತಿಸಿ ಗೌರವಿಸುತ್ತೇವೆ. ನೀವೂ ಸೃಜನಶೀಲರಾಗಬೇಕೇ? ಹಾಗಾದರೆ ಈ ಅಂಶಗಳನ್ನು ನಿಮ್ಮದಾಗಿಸಿಕೊಳ್ಳಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ ಯಾರೋ ಏನೋ ಹೇಳಿದರು ಎಂದು ಸುಮ್ಮನೆ ನಂಬಿ ಬಿಡಬೇಡಿ. ಪ್ರಶ್ನಿಸಿಕೊಳ್ಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಉತ್ತರ ನಿಮಗೆ ಸಮಾಧಾನ ನೀಡುವವರೆಗೆ ಪ್ರಯತ್ನ ಮುಂದುವರೆಯಲಿ. ಕುತೂಹಲವಿರಲಿ ಮೂಲತಃ ಸೃಜನಶೀಲತೆ ನಿಂತಿರುವುದೇ ಕುತೂಹಲ ಪ್ರವೃತ್ತಿಯ ಮೇಲೆ. ಯಾವುದೇ ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿಯ ಅನುಭವಗಳನ್ನು ಕುತೂಹಲ ದೃಷ್ಟಿಯಲ್ಲಿಯೇ ನೋಡುವುದು. ಕುತೂಹಲಭರಿತರಾಗಿಯೇ ಆಸ್ವಾದಿಸುವುದನ್ನು ಮೈಗೂಡಿಸಿಕೊಳ್ಳಿ. ಸ್ವಂತಿಕೆಯ ಹಂಬಲವಿರಲಿ ಮತ್ತೊಬ್ಬರ ವಿಚಾರಗಳನ್ನು ಅಂಧಾನುಕರಣೆಯಂತೆ ಒಪ್ಪದಿರಿ. ಪರಾಮರ್ಶಿಸಿ ಸ್ವತಂತ್ರವಾದ ನಿಲುವುಗಳನ್ನು ತಳೆಯಿರಿ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಮಾನಸಿಕ ಸಂಘರ್ಷ ನಡೆಯುತ್ತದೆ. ನೀವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳಿಗೆ ಪ್ರಬಲವಾದ ಸಮರ್ಥನೆಗಳಿರಲಿ.ಅವು ವಾಸ್ತವಿಕತೆಯಿಂದ ಕೂಡಿರಲಿ. ಕಲ್ಪನಾಶಕ್ತಿ ಪುಟಿಗೊಳಿಸಿ ಊಹಿಸುವ ಸಾಮರ್ಥ್ಯವೇ ಕಲ್ಪನಾಶಕ್ತಿ. ಅಗಾಧವಾದ ಕಲ್ಪನಾಶಕ್ತಿಯನ್ನು ಪುಟಿಗೊಳಿಸಿ ಸಾಧಿಸಬೇಕೆನ್ನುವ ಕ್ಷೇತ್ರದಲ್ಲಿ ಪೂರ್ವ ನಿರ್ಧರಿತ ಪರಿಕಲ್ಪನೆಗಳನ್ನು ಬಳಸಬೇಕೆಂದರೆ ಕಲ್ಪನಾಶಕ್ತಿ ಅತ್ಯಗತ್ಯ. ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಂಡಷ್ಟು ವಿಷಯ ವಿಸ್ತರಿಸುವ ವಿಷ್ಲೇಶಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಸಣ್ಣ ಸಂಗತಿಯನ್ನೂ ವಿಭಿನ್ನ ಆಯಾಮದಿಂದ ನೋಡಿ ಅದಕ್ಕೆ ಹೊಸ ರೂಪವನ್ನು ನೀಡಲು ಸಾಧ್ಯವಾಗುವುದು. ಪ್ರಯೋಗಶೀಲತೆ ಇರಲಿ ಪ್ರಯೋಗಶೀಲತೆಯನ್ನು ಸೃಜನಶೀಲತೆಯ ತಾಯಿ ಎಂದು ಕರೆಯಬಹುದು. ಕೇಳಿದ ತಿಳಿದ ವಿಷಯಗಳ ಬಗ್ಗೆ ಗೋಚರ ಇಲ್ಲವೇ ಅಗೋಚರ ರೀತಿಯಲ್ಲಿ ಪ್ರಯೋಗಶೀಲತೆ ನಿರಂತರವಾಗಿ ನಡೆಸಿ. ಇದು ಅಪರೋಕ್ಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿಗೆ ಬೇಕಾದ ಅಸಾಧಾರಣ ಧೈರ್ಯವನ್ನು ತುಂಬುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ. ಚಿಂತನೆಯ ರೀತಿ ಬದಲಿಸಿ ಹೇಳಿದ್ದನ್ನು ಕೇಳಿದ್ದನ್ನು ಓದಿದ್ದನ್ನು ಬರೆದಿದ್ದನ್ನು ಏಕಮುಖೀ ರೀತಿಯಲ್ಲಿ ಯೋಚಿಸಿ ಒಪ್ಪಿಕೊಂಡು ಬಿಡದೇ ಯಾವುದೇ ಒಂದು ವಿಷಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದರೆ ಒಂದೇ ಕಾರ್ಯವನ್ನು ವಿವಿಧ ರೀತಿಯಲ್ಲಿ ಮಾಡಲು ಹಲವಾರು ಸಾಧ್ಯತೆಗಳು ಸಿಗುತ್ತವೆ. ಹೀಗೇ ನಿಮ್ಮ ಏಕ ಮುಖಿ ಚಿಂತನೆಯನ್ನು ಬಹುಮುಖಿ ಚಿಂತನಾ  ವಲಯಕ್ಕೆ ವಿಸ್ತರಿಸಿಕೊಳ್ಳಿ. ಹೊಸತನದ ಜೊತೆಗೆ ಮುಕ್ತತೆ ಇರಲಿ ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿಯೇ ಅಡಗಿದೆ. ನೊಡುವ ನೋಟದಲ್ಲಿ, ಕಾರ್ಯ ನಿರ್ವಹಣೆಯಲ್ಲಿ,ಚಿಂತನೆಯಲ್ಲಿ ವರ್ತನೆಯಲ್ಲಿ ಒಟ್ಟಿನಲ್ಲಿ ಪ್ರತಿಯೊಂದರಲ್ಲಿ ಹೊಸತನವೇ ಮಿಂಚುತಿರಲಿ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಒಂದು ನಿರ್ಧಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿಕೊಳ್ಳಬೇಡಿ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖರಾಗುವುದು ಉಚಿತ. ಉತ್ಸಾಹ ಚಿಮ್ಮುತಲಿರಲಿ ಉತ್ಸಾಹ ಹೊಸತನದ ಹೊಸ್ತಿಲಲ್ಲಿ ವಿವಿಧ ರೀತಿಯ ನೂತನ ವಿಚಾರಗಳಿಗೆ ನಾಂದಿ ಹಾಡುತ್ತದೆ. ಪ್ರತಿ ಬಾರಿ ಹೊಸತನಕ್ಕೆ ತುಡಿಯುವದರ ಜೊತೆಗೆ ಹಳೆಯದರಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ತೆಗೆಯಬೇಕು.ಅದನ್ನೇ ಬುನಾದಿಯನ್ನಾಗಿಸಿಕೊಂಡರೆ ಅವಿಷ್ಕಾರ ಪ್ರವೃತ್ತಿಯು ನಿಮ್ಮದಾಗುತ್ತದೆ. ಅವಿಷ್ಕಾರ ಪ್ರವೃತ್ತಿಯು ನಿಮ್ಮನ್ನು ಗೆಲುವಿನ ಶಿಖರದ ತುತ್ತ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ. ಪ್ರೇರೇಪಿಸಿಕೊಳ್ಳಿ ಸೃಜನಶೀಲತೆಗೆ ಎಲ್ಲಡೆಯೂ ಮಣೆ ಮನ್ನಣೆ ಹೊಗಳಿಕೆ ಇದ್ದೇ ಇದೆ. ಇದರಿಂದ ಬಹಿರಂಗ ಪ್ರೇರಣೆ ದೊರೆಯುವುದು ಖಚಿತ.  ಕೇವಲ ಬಹಿರಂಗ ಪ್ರೇರಣೆಯೊಂದೇ ಸಾಲದು. ಈ ಬಹಿರಂಗ ಪ್ರೇರಣೆ ಅಂತಃಪ್ರೇರಣೆಯಾಗಿ ಪರಿವರ್ತನೆಯಾಗಬೇಕು. ನಿಮ್ಮನ್ನು ಪ್ರೇರೇಪಿಸಿಕೊಂಡಾಗ ಮಾತ್ರ ಸೃಜನಶೀಲತೆ ಹೊರೆ ಹೊಮ್ಮುವುದು. ಸೃಜನಶೀಲತೆಯು ಎಲ್ಲರಿಗೂ ಎಟಕುವಂಥದ್ದು..ಏಕೆಂದರೆ  ಇದು ಮಾನವ ಸಹಜವಾದ ಗುಣ. ದಿನ ನಿತ್ಯದ ಬದುಕಿನಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡು ಸುತ್ತಮುತ್ತಲಿರುವ ಸಂಗತಿಗಳೆಡೆಗೆ ಆಸಕ್ತಿ ಯ ಕಂಗಳಿಂದ ನೋಡುವುದನ್ನು ರೂಢಿಸಿಕೊಂಡರೆ ಸೋಲಲ್ಲೂ ಸಂಭ್ರಮಿಸುವ ಗಳಿಗೆ ಸನ್ನಿಹಿತವಾಗುವುದು. ಸೋಲನ್ನು ಗೆಲುವಾಗಿ ಪರಿವರ್ತಿಸುವ ಗುಣ ಸೃಜನಶೀಲತೆಗಿದೆ. ಬದುಕಿನ ಎಲ್ಲ ಹಂತದ ಕಾರ್ಯಗಳ ಗೆಲುವಿಗೂ ಸೃಜನಶೀಲತೆ ಬೇಕೇ ಬೇಕು. ಸೃಜನಶೀಲತೆಯು ವಿವೇಕವನ್ನು ಹೆಚ್ಚಿಸುವುದು.ಎಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಸಹನೆ ಕಳೆದುಕೊಳ್ಳದೇ ಪರಿಹಾರ ಕಂಡುಕೊಳ್ಳುವ ಪಕ್ವತೆ ನೀಡುವ ಶಕ್ತಿ,ನಮ್ಮ ಎಲ್ಲ ಶಕ್ತಿಗಳನ್ನು ಸಮರ್ಥವಾಗಿ ಉಪಯೋಗಿಸಿ ಸರ್ವತೋಮುಖ ವ್ಯಕ್ತಿತ್ವ ನೀಡುವ ಶಕ್ತಿ ಸೃಜನಶೀಲತೆಗೆ ಮಾತ್ರ ಇದೆ. ನೀವು ಯಶಸ್ಸು ಗಳಿಸಬೇಕೆಂದರೆ ನೀವು ನೂತನ ದಾರಿಗಳನ್ನು ಆರಿಸಬೇಕು.ಈಗಾಗಲೇ ಒಪ್ಪಿರುವ ನಡೆದಾಡಿರುವ ದಾರಿಗಳನ್ನು ಹೊರತುಪಡಿಸಿ ಸೃಜನಶೀಲತೆಯು ವಿಶ್ವದಾದ್ಯಂತ ಬಂದೂಕಿನ ಗುಂಡುಗಳಿಗಿಂತ ಹೆಚ್ಚು ಶಬ್ದ ಮಾಡುತ್ತ ಸಾಗುತ್ತದೆ ಎನ್ನುವುದು ನೆನಪಿರಲಿ. ಹಾಗಾದರೆ ತಡವೇಕೆ ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ. *********************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು… ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.‌1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡರು.‌ಚಿತ್ರ ಕಲೆ ಸಹ ಇವರ ಮತ್ತೊಂದು ಅಭಿವ್ಯಕ್ತಿ ಮಾಧ್ಯಮ‌.‌ತಮ್ಮ ಪಾಡಿಗೆ ತಾವು ಇದ್ದು ಬಿಡುವವರು. ಗುಬ್ಬಚ್ಚಿ ಗೂಡು,ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಮಲ್ನಾಡೆ ಮತಾಡು ಇವರ ಕವನ ಸಂಕಲನ ಗಳು ,‌ಅಮ್ಮನ ಚಿತ್ರ ,ಪುಟ್ಟನ‌ ಕೋಳಿ ಮುಂತಾದವು ಮಕ್ಕಳಾ ಕಥಾ ಸಂಕಲನಗಳು. ಬಾವಲಿ ಗುಹೆ ಮಕ್ಕಳ ಕಾದಂಬರಿ.ಹಸಿರೂರು ಹುಡುಗ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ‌ ದತ್ತಿ ಪ್ರಶಸ್ತಿ ಸಿಕ್ಕಿದೆ. ಉತ್ತಮ ರಾಜ್ಯ ಶಿಕ್ಷಕ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ ಸಹ ಇವರಿಗೆ ಸಂದಿವೆ.‌ಪ್ರಜಾವಾಣಿ ಶಿಶು ಕಾವ್ಯಪ್ರಶಸ್ತಿ ಸಹ ಪಡೆದಿದ್ದಾರೆ. ಸಂಗಾತಿ ಕನ್ನಡ ವೆಬ್ ಗಾಗಿ ಮಕ್ಕಳ ಸಾಹಿತಿತಮ್ಮಣ್ಣ ಬೀಗಾರ ಅವರು ನಾಗರಾಜ ಹರನಹಳ್ಳಿ ಅವರ ಜೊತೆ ಈ ಸಲ ಮುಖಾಮುಖಿಯಾಗಿ ದ್ದಾರೆ…………………… ಕತೆ ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅವನುಕಂಡುಕೊಂಡ ಅನುಭವ, ಸತ್ಯ, ಸಂಕಷ್ಟಗಳನ್ನೆಲ್ಲಾ ಕರಗಿಸಿಕೊಂಡಿರುತ್ತಾನೆ. ಅಂತಹುಗಳನ್ನೆಲ್ಲ ತನ್ನ ಆಸಕ್ತಿ, ಅವಕಾಶ, ಸಾಧ್ಯತೆಗಳ ಮೇಲೆ ಅಭಿವ್ಯಕ್ತಿ ಪಡಿಸಲು ಪ್ರಯತ್ನಿಸುತ್ತಾನೆ. ಅದರಿಂದಾಗಿಯೇ ಕಲೆಗಳೆಲ್ಲ ಹುಟ್ಟಿಕೊಂಡಿದ್ದು ಅನಿಸುತ್ತದೆ. ನಾನು ನನ್ನಂತಹ ಅನೇಕರು ಕತೆ, ಕವಿತೆಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಕಂಡುಕೊಂಡಿದ್ದಾರೆ. ಅದೇ ರೀತಿ ನಾನು ಕೂಡಾ ನನ್ನಲ್ಲಿ ಕರಗಿರುವ ಸಂವೇದನೆಗಳನ್ನ ಅಭಿವ್ಯಕ್ತಿ ಪಡಿಸಲು ಕತೆ ಕವಿತೆಗಳನ್ನು ಬರೆಯುತ್ತೇನೆ ಅಂದುಕೊಂಡಿದ್ದೇನೆ. ಇಲ್ಲಿ ನನ್ನಿಂದ ಸಮಾಜದ ಒಳಿತಿನ ವಿಸ್ತಾರಕ್ಕೆ ಒಂದಿಷ್ಟು ಸಹಾಯ ಆಗಬೇಕು ಹಾಗೂ ಸಮಾಜದ ಪ್ರೀತಿ ನನಗೆ ಸಿಗಬೇಕು ಎಂಬ ಆಸೆಯೂ ಮೈಗೂಡಿದೆ ಎಂದು ಹೇಳಬಹುದು. ನಾನು ವ್ಯಂಗ್ಯಚಿತ್ರ ಹಾಗೂ ಇತರ ಕಲೆಗಳನ್ನೂ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿದ್ದೇನೆ ಅನ್ನುವ ಖುಷಿಯೂ ಸೇರಿದೆ. ಮಕ್ಕಳ ಸಾಹಿತ್ಯ ಕೃಷಿಗೆ ಒಲವು ಹೇಗೆ ಬಂತು, ಅಂತಹ ನಡೆಗೆ ಕಾರಣವೇನು? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರೀತಿಯಿಂದ ವೃತ್ತಿ ನಿರ್ವಹಿಸಿದವನು. ಶಿಕ್ಷಕನಾದವನಿಗೆ ಮಕ್ಕಳೊಡನೆಯ ಸಂಬಂಧ ಮತ್ತು ಆಪ್ತತೆ ಹೆಚ್ಚು. ಮಕ್ಕಳಿಗೆ ಕತೆ, ಕವಿತೆ ಕೇಳುವುದು, ಹೇಳುವುದು, ಚಿತ್ರ ಬರೆಯುವುದು ಎಲ್ಲ ತುಂಬಾ ಇಷ್ಟ. ಮಕ್ಕಳಿಗೆ ಕಥೆ ಹೇಳುತ್ತ ಜೊತೆಗೆ ನನ್ನದೇ ರಚನೆಯ ಕಥೆ ಹೇಳಲು ಪ್ರಾರಂಭಿಸಿದೆ. ಮಕ್ಕಳಿಗಾಗಿ ಚಿತ್ರ ಬರೆಯುತ್ತ ಕಲೆಯನ್ನೂ ಬೆಳೆಸಿಕೊಂಡೆ. ಹೀಗೆ ಕಥೆ ಕವನಗಳನ್ನು ಮಕ್ಕಳಿಗಾಗಿ ಬರೆಯುತ್ತ… ಅವುಗಳಿಗೆ ಅವರ ಖುಷಿಯ ಪ್ರತಿಕ್ರಿಯೆ ಕಾಣುತ್ತ ನಾನು ಮಕ್ಕಳ ಜಗತ್ತಿನಲ್ಲಿಯೇ ಇನ್ನಿಲ್ಲದ ಪ್ರೀತಿಯಿಂದ ತೊಡಗಿಕೊಂಡೆ. ಪ್ರಸ್ತುತ ಮಕ್ಕಳಿಗಾಗಿ ಇಪ್ಪತ್ತೆರಡು ಕೃತಿ ಪ್ರಕಟಿಸಿರುವ ನಾನು ಮಕ್ಕಳ ಖುಷಿ ಹಿಗ್ಗಿಸುವ, ಹೃದಯ ವಿಸ್ತರಿಸುವ ಪ್ರಯತ್ನದಲ್ಲಿ ಸದಾ ತೊಡಗಿಕೊಂಡಿದ್ದೇನೆ. ಶಿಕ್ಷಕ ವೃತ್ತಿ ಮತ್ತು ಮಕ್ಕಳ ಒಡನಾಟ ನಿಮ್ಮಲ್ಲಿ ಮಗುತನವನ್ನು ಪೋಷಿಸಿತೆ? ನಿಜ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಪ್ರೀತಿಯ ಧ್ಯಾನದಿಂದ ಸಿದ್ಧಿಸುವಂತಹದ್ದು. ಮಕ್ಕಳ ಸಾಹಿತ್ಯವೆನ್ನುವುದು ‘ಪ್ರಭುದ್ಧತೆಯ ಮೇಲೆ ಮುಗ್ಧತೆಯ ಸವಾರಿ’ ಎಂದು ಎಚ್. ಎಸ್. ವಿ. ಹೇಳಿದ್ದಾರೆ. ಮಗುತನವನ್ನು ನಮ್ಮಲ್ಲಿ ಪೋಷಿಸುವುದು ಮಕ್ಕಳ ಮೇಲಿನ ಪ್ರೀತಿಯೇ, ಅವರ ಒಡನಾಟವೇ. ಈಗ ನನಗೆ ಅರವತ್ತಾಗಿದ್ದರೂ ಮಕ್ಕಳಿಗಾಗಿ ಬರೆಯುತ್ತ… ಅವರೊಂದಿಗೆ ತಾದಾತ್ಮ್ಯ ಹೊಂದುವುದು, ಮಗುತನದ ಖುಷಿ ಅನುಭವಿಸುವುದು ಸಾಧ್ಯವಾಗಿದೆ. ಅದಕ್ಕೆ ವೃತ್ತಿ, ಮಕ್ಕಳ ಒಡನಾಟ ಪ್ರೀತಿಗಳೇ ಕಾರಣ. ಮಕ್ಕಳ ಮೇಲಿನ ಅಕ್ಷರ ಪ್ರಯೋಗದ ಸಾಧ್ಯತೆಗಳನ್ನು ನೀವು ಶಾಲಾ ಕೋಣೆಯಲ್ಲಿ ಮಾಡಿದಾಗ ವಿಶೇಷ ಅನುಭವ ಆಗಿದ್ದುಂಟೆ?    ನಾನು ಯಾವಾಗಲೂ ಮಕ್ಕಳು ಖುಷಿ ಖುಷಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತ ಅವರು ತಾನಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹಂಬಲಿಸಿದವನು. ಅದಕ್ಕಾಗಿ ಶಾಲೆಯಲ್ಲಿ ಅಂತಹ ಪರಿಸರ ಹಾಗೂ ಆಪ್ತತೆಯನ್ನು ಮೂಡಿಸುವುದು ಬಹು ಮುಖ್ಯವಾಗುತ್ತದೆ. ಮಕ್ಕಳಿಗಾಗಿ ಕಥೆ ಹೇಳುವುದು, ಅವರಿಂದಲೇ ಕಥೆ ಕವನ ಬರೆಯಿಸಿ ಹೊತ್ತಿಗೆ ತಯಾರಿಸುವುದು, ಚಿತ್ರ ಬರೆಯಿಸುವುದು, ಕಲಾಕೃತಿಗಳ ತಯಾರಿ, ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆ, ಎಲೆ ಕಲೆ, ಹಸಿರು ಶಾಲೆ, ಶೈಕ್ಷಣಿಕ ಉತ್ಸವ, ಕಲಾ ಪ್ರದರ್ಶನ ಹೀಗೆ ನನ್ನ ವೃತ್ತಿ ಉದ್ದಕ್ಕೂ ಮಾಡಿದ್ದೇನೆ. ಇದಕ್ಕೆ ಶಾಲಾ ಪರಿಸರವಷ್ಟೇ ಅಲ್ಲಕದೆ ಸಮಾಜದ ಎಲ್ಲ ಸ್ಥರದಿಂದಲೂ ಪ್ರೋತ್ಸಾಹ ಸಿಕ್ಕಿದ್ದು ಖುಷಿ ಉಂಟುಮಾಡುತ್ತದೆ. ಸರಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಹೆಮ್ಮೆ. ಕಥೆ ಅಥವಾ ಕವಿತೆ ಹುಟ್ಟುವ ಸಮಯ ಯಾವುದು? ಕಥೆ ಕವಿತೆಗಳು ಹುಟ್ಟುವ ಸಮಯ ಯಾವುದು ಎಂದು ನಿರ್ಧಿಷ್ಟವಾಗಿ ಹೇಳಲಾಗದು. ನಾವು ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತ ಅವುಗಳನ್ನು ನಾವು ಕಂಡುಕೊಂಡ ಸತ್ಯದ ಆಧಾರದ ಮೇಲೆ ಕರಗಿಸಿ ಕೊಂಡಿರುತ್ತೇವೆ. ಇಂತಹ ಕರಗಿರುವ ಸಂಗತಿಗಳೇ ಕಥೆ ಕವಿತೆಗಳಾಗಿ ಯಾವಾಗ ಬೇಕಾದರೂ ಹೊರ ಬರಬಹುದು. ಆದರೆ ಕಥೆ ಕವಿತೆಗಳನ್ನು ಬರೆಯುವವನ ಸಂವೇದನೆ, ಅಧ್ಯಯನ, ಪ್ರೀತಿ, ಆಸಕ್ತಿಗಳೆಲ್ಲ ಅವು ರೂಪುಗೊಳ್ಳುವಲ್ಲಿ ಮಹತ್ವ ಪಡೆದಿರುತ್ತವೆ.  ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಯಾವುದು, ಪದೇ ಪದೇ ಕಾಡುವ ವಿಷಯಗಳಾವವು?  ನಾನು ಮಕ್ಕಳ ಜಗತ್ತಿನವನು. ಮಕ್ಕಳು ಮತ್ತು ನಿಸರ್ಗ ನನ್ನ ಸಾಹಿತ್ಯದಲ್ಲಿ ನಿರಂತರವಾಗಿ ವಸ್ತುಗಳಾಗಿವೆ. ಮಕ್ಕಳ ಆಟ, ಖುಷಿ, ಸಿಟ್ಟು, ಸಂಕಟ ಎಲ್ಲವೂ ಅವರ ಸುತ್ತಲಿನ ಮನೆ, ಶಾಲೆ, ಹಸಿರಿನ ಪರಿಸರ ಮುಂತಾವುಗಳೊಡಗೂಡಿ ಕಾಣಿಸಿಕೊಂಡಿವೆ. ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ. ನೀವು ಬರೆದ ಕಥೆ ಕವಿತೆಗಳಲ್ಲಿ ನಿಮ್ಮ ಬಾಲ್ಯ, ಹರಯ ಇಣುಕಿದೆಯೇ?   ದಟ್ಟ ಅರಣ್ಯದಿಂದ ಕೂಡಿದ ಯಾವುದೇ ಆಧುನಿಕ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರದವನು ನಾನು. ಇಲ್ಲಿನ ಕಾಡು, ನೀರು, ಗುಡ್ಡ, ಬೆಟ್ಟ, ಆಗಿನ ಮಕ್ಕಳ ಸ್ವಾತಂತ್ರ್ಯ, ಆಟ, ಸಾಹಸಗಳೆಲ್ಲ ವಸ್ತುವಾಗಿ ನನ್ನ ಪುಸ್ತಕಗಳಲ್ಲಿ ಕಾಣಿಸಿ ಕೊಂಡಿವೆ. ನಂತರದ ವೃತ್ತಿ ಬದುಕಿನ ಉದ್ದಕ್ಕೂ ಪಡೆದ ಅನುಭವಗಳೂ ಸೇರಿವೆ. ನನ್ನ ‘ಹಸಿರೂರಿನ ಹುಡುಗ’ ಪುಸ್ತಕದಲ್ಲಿ ಬಾಲ್ಯದ ಕಥೆಗಳನ್ನು ಮೊಗೆದು ಇಟ್ಟಿದ್ದೇನೆ. ಎಲ್ಲ ಪುಸ್ತಕಗಳಲ್ಲೂ ಬಾಲ್ಯ ರೂಪಾಂತರದ ಮೂಲಕ ಇಣುಕುತ್ತಲೇ ಇರುತ್ತದೆ. ಪ್ರತಿಯೊಬ್ಬ ಲೇಖಕರಿಗೂ ಅವರ ಸಾಹಿತ್ಯದಲ್ಲಿ ಬಾಲ್ಯ ಹಾಗೂ ಅವರ ಪರಿಸರ ಪ್ರಭಾವಿಸುತ್ತಲೇ ಇರುತ್ತದೆ ಎಂದು ನನಗೆ ಅನಿಸುತ್ತದೆ.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?  ನಾನು ಮಕ್ಕಳ ಮೇಲೆ ಬಹಳ ವಿಶ್ವಾಸ ಇಡುತ್ತೇನೆ. ಮಕ್ಕಳ ಹೃದಯ, ಮನಸ್ಸುಗಳು ವಿಸ್ತಾರ ಆಗುವುದರಿಂದ ಒಳ್ಳೆಯ ಸಮಾಜ ಮತ್ತು ಆಡಳಿತ ವ್ಯವಸ್ತೆಯ ನಿರ್ಮಾಣ ಆಗುತ್ತದೆ. ರಾಜಕೀಯ ಸೇರಿದಂತೆ ಎಲ್ಲರಿಗೂ ತಮ್ಮ ನಡೆಯ ಕುರಿತಾಗಿ ಮುಕ್ತ ಆತ್ಮಾವಲೋಕನ ಇರಬೇಕು. ನಮ್ಮ ನಾಯಕರ ನಡೆಗಳು ಸಮಾಜದ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ… ಇದರಿಂದಾಗುವ ಒಳಿತು ಮತ್ತು ಸಂಕಟಗಳ ಅರಿವು ಎಲ್ಲರಿಗೆ ಇರುವುದು ಅಗತ್ಯ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನಮ್ಮ ವೃತ್ತಿಯಲ್ಲಿ ಪ್ರೀತಿಯಿಂದ ತೊಡಗಿಕೊಳ್ಳುತ್ತ, ಎಲ್ಲರನ್ನೂ ಗೌರವದಿಂದ ಕಾಣುತ್ತ ಪ್ರೀತಿ, ಸ್ನೇಹದ ಭಾವಗಳನ್ನು ವಿಸ್ತಾರ ಗೊಳಿಸುತ್ತ ಬದುಕುವುದೇ ದೇವರು ಪೂಜೆ ,ಧರ್ಮ ಎಲ್ಲವೂ ಆಗುತ್ತದೆ ಎಂದುಕೊಂಡಿದ್ದೇನೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?  ಮೊದಲಿನಂತಹ ಸಾಂಸ್ಕøತಿಕ ವಾತಾವರಣ ಇಲ್ಲ ಎಂದು ಹೇಳುತ್ತೇವೆ. ಆದರೂ ನಮ್ಮ ಸಮಾಜದಲ್ಲಿ ಸಾಂಸ್ಕøತಿಕ ಚಿಂತನೆ, ಚಟುವಟಿಕೆಗಳು ನಡೆಯುತ್ತಲೇ ಇವೆ. ಅದು ಹೆಚ್ಚಬೇಕು.  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ.   ಮೊದಲಿನಿಂದಲೂ ನನ್ನಷ್ಟಕ್ಕೆ ನಾನು ಬರೆಯುತ್ತಾ ಬಂದಿದ್ದೇನೆ. ನನಗೆ ಆರ್.ವಿ. ಭಂಡಾರಿ. ಆರ್.ಪಿ.ಹೆಗಡೆ, ಸನದಿ, ವಿಷ್ಣು ನಾಯ್ಕ, ಆನಂದ ಪಾಟೀಲ ಮುಂತಾದ ಅನೇಕ ಹಿರಿಯ ಸಾಹಿತಿಗಳು ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಾದ್ಯಂತ ನನ್ನ ಪುಸ್ತಕ ಓದುವ ಪ್ರೀತಿಯ ಬಳಗ ಬೆಳೆದಿದೆ. ರಾಜಕೀಯದ ಕುರಿತು ನಾನು ಯೋಚಿಸಿಲ್ಲ .  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ?  ನಮ್ಮ ದೇಶದ ಸಾಹಿತ್ಯ, ಸಾಂಸ್ಕೃತಿಕ ಹಿರಿಮೆ ಇದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಂವಿಧಾನ ನೀಡಿದೆ. ವಿಜ್ಞಾನ, ತಂತ್ರಜ್ಞಾನ ಒಟ್ಟಾರೆ ಅಭಿವೃದ್ಧಿಗಳಲ್ಲಿ ಪ್ರಗತಿ ಇದೆ. ಇದನ್ನೆಲ್ಲಾ ಬಳಸಿಕೊಂಡು ಪ್ರೀತಿ ,ಸ್ನೇಹದ ಅಡಿಯಲ್ಲಿ ನಡೆಯಬೇಕು ಎಂದುಕೊಳ್ಳುತ್ತೇನೆ.  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?  ಮಕ್ಕಳಿಗಾಗಿ ಹೆಚ್ಚು ಬರೆಯುತ್ತೇನಾದ್ದರಿಂದ ಮಕ್ಕಳ ಸಾಹಿತ್ಯದ ಕುರಿತೇ ಹೇಳುವುದಾದರೆ… ಮಕ್ಕಳಿಗೆ ಇಷ್ಟ ಆಗುವ ಹಾಗೂ ಅವರಿಗೆ ಒಳಿತಾಗುವ  ಪುಸ್ತಕಗಳು ಹೆಚ್ಚು ಹೆಚ್ಚು ಬರಬೇಕು. ಈಗ ಹೊಸ ಕಾಲದ ಹೊಸ ವಸ್ತು ಸಂವೇದನೆಗಳ ಪುಸ್ತಕಗಳು ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಬರುತ್ತಿವೆ. ಅದನ್ನು ಆಕರ್ಷಕವಾಗಿ ಪ್ರಕಟಿಸುವ ಪ್ರಕಾಶಕರು ಬೇಕು ಹಾಗೂ ಮಕ್ಕಳಿಗೆ ತಲುಪುವಂತಾಗಬೇಕು. ಮಕ್ಕಳು ಓದಿಗೆ ತೆರೆದುಕೊಂಡರೆ ಸಮಾಜದ ಒಳಿತಿನ ನಡೆ ಬಲಗೊಳ್ಳುತ್ತದೆ. ನಿಮ್ಮ ನಿಚ್ಚಿನ ಸಾಹಿತಿಗಳಾರು? ತೇಜಸ್ವಿಯವರ ಪರಿಸರ ಪ್ರೀತಿಯ ಪುಸ್ತಕಗಳು ನನಗೆ ತುಂಬಾ ಆಪ್ತ. ಇಂಗ್ಲೀಷ ಓದು ಕಡಿಮೆ. ರಸ್ಕಿನ ಬಾಂಡ್ ಇಂಗ್ಲೀಷಿನಲ್ಲಿ ಮಕ್ಕಳಿಗಾಗಿ ಬರೆಯುತ್ತಾರೆ. ಅವರದೂ ಪರಿಸರದ ಮಧ್ಯ ಅರಳಿದ ಕಥೆಗಳೇ ಆಗಿವೆ. ಅವರ ಕಥೆಗಳನ್ನೂ ಓದಿದ್ದೇನೆ. ಈಗ ಚದುರಂಗರ ‘ವೈಶಾಖ’ ಓದುತ್ತಿದ್ದೇನೆ.  ಹೆಚ್ಚು ಸಂತೋಷದ ಕ್ಷಣ ಯಾವುದು? ಮಕ್ಕಳ ಖುಷಿ ಹೆಚ್ಚಿಸುವ ಕೆಲಸದಲ್ಲಿ ತೊಡಗುವುದು. ನಿಮ್ಮ ನೆಚ್ಚನ ತಾಣ ಯಾವುದು? ನಮ್ಮ ಜಿಲ್ಲೆಯ ಎಲ್ಲ ಹಸಿರು ತಾಣಗಳು. ……………. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಕಾವ್ಯಯಾನ

ಕಾವ್ಯಯಾನ

ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು ಹೇಳಿದ್ದಾರೆ. ಜನಪದ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆ ಸಂವಾದಿಯಾದ ವ್ಯಕ್ತಿಯು ಮಾತ್ರ ಇಂತಹದೊಂದು ವಿಶಿಷ್ಟವಾದ ಕೃತಿಯನ್ನು ರಚಿಸಬಲ್ಲರು. ಅವರ ಸ್ಮೃತಿಪಟಲದಲ್ಲಿ ಇದರಿಂದ ಮೂಡಿರುವ ಘಟನೆಗಳು, ಪಾತ್ರಗಳೊಂದಿಗೆ ಸಮ್ಮಿಳಿತಗೊಂಡು ಚೆಂದನೆಯ ಕೊಲಾಜ್ ಇಲ್ಲಿ ನಿರ್ಮಾಣಗೊಂಡಿದೆ. ಈ ಪುಸ್ತಕದ ತಮ್ಮ ಮನದ ಮಾತಿನಲ್ಲಿ, ಹೋಮ್ ಸಿಕ್ನೆಸ್ ಅನ್ನು ‘ಹುಟ್ಟೂರಿನ ಹಂಬಲ’ ಎಂದು ಅನುವಾದಿಸುವಲ್ಲೇ ಶಿವಾನಂದರ ಸಕಾರಾತ್ಮಕ ನೋಟದ ನಿಲುವು, ಒಲವು ಓದುಗನಿಗೆ ದಕ್ಕುತ್ತದೆ. ‌ಕಳವೆಯವರ ಜೇನಿನ ಕುರಿತು ಆಸಕ್ತಿ, ನಾಟಿ ವೈದ್ಯರ ಸಮೀಕ್ಷೆ, ಕಾಡಿನ ಪ್ರೀತಿ, ಪ್ರಾಣಿಗಳೆಡೆಗಿನ ಪ್ರೇಮ ( ಗೌರಿ ಜಿಂಕೆಯ ಆತ್ಮಕಥೆ ಕೃತಿ), ಜೀವಲೋಕದ ಸಸ್ಯಗಳ ಖಜಾನೆಯ ಕುತೂಹಲ ಮತ್ತು ಭಾಷೆಯೆಡೆಗಿನ ಮಮತೆಗಳ ಒಟ್ಟೂ ಮೊತ್ತವೇ ಕಾದಂಬರಿಯಾಗಿರಬಹುದು. ಸ್ಥಳೀಯ ಭಾಷೆ, ನಿರೂಪಣೆ ಮತ್ತು ಕಥೆಯ ಬಂಧ ಈ ಕಾದಂಬರಿಯ ಶಕ್ತಿಯಾಗಿದೆ. ಇಲ್ಲಿನ ನಾಣ್ಣುಡಿಗಳು, ತಮಾಷೆಗಳು, ಆರ್ದ್ರ ಘಟನೆಗಳು ಗಮನ ಸೆಳೆಯುತ್ತವೆ. ‘ಪರೂರ ಹೊಳೆ ಮತ್ತು ಊರ ಸ್ಮಶಾನ ಹೆದರಿಸುತ್ತದೆ’ ಎಂದು ಹೇಳುತ್ತಾ, ಕಥನ ಮಾರ್ಗದ ‘ದಾಟುಸಾಲು’ ಹುಡುಕುತ್ತಿದ್ದೇನೆ ಎಂಬ ವಿನಮ್ರತೆಯಿಂದ ಕಳವೆಯವರು, ಕೇರಳದ ಕೊಟ್ಟಾಯಂ ಕೋಶಾಂಬುಲಿಯಿಂದ ನೂರಾರು ಮೈಲಿ ದೂರವನ್ನು ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ಕಾಲ್ನಡಿಗೆಯಲ್ಲಿ ಶಿರಸಿ ಸಮೀಪದ ಮಧ್ಯಘಟ್ಟಕ್ಕೆ, ಮಗಳು ಶ್ರೀದೇವಿಯನ್ನು ಕಾಣಲು ಬರುವ ಭೂದೇವಿಯ ಪ್ರಯಾಣದಿಂದ ಕಾದಂಬರಿಯನ್ನು ಆರಂಭಿಸುತ್ತಾರೆ. ಶಿರಸಿ ಭಾಗದಲ್ಲಿ ಈಗ ಮತ್ತೆ ಶುರುವಾಗಿರುವಂತೆ, ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ‘ತಿರಾ’ ( ವಧುದಕ್ಷಿಣೆ) ತೆತ್ತು ಲಗ್ನವಾಗುವ ಪ್ರಸಂಗ ಇದ್ದಾಗ ಗೋಪಯ್ಯ ಹೆಗಡೆ ಕುಂಬಳದ ಹೆಣ್ಣು ಶ್ರೀದೇವಿಯನ್ನು ವರಿಸುತ್ತಾರೆ. ಮದುವೆಯಾಗುವ ಹಂಬಲಕ್ಕೆ ಬಿದ್ದು ಸಾಲಮಾಡಿ ಜಮೀನು ಕಳೆದುಕೊಂಡವರ ಉಲ್ಲೇಖ ಕೂಡ ಇಲ್ಲಿ ಬರುತ್ತದೆ. ಒಂದು ಕೊಳಗ ಗೋಟಡಿಕೆಗೆ ಮಗುವನ್ನು ನೀಡುವ ತಾಯಿಯ ಚಿತ್ರಣ ಆ ಕಾಲದ ಪರಿಸ್ಥಿತಿಯ ಭೀಕರತೆಯನ್ನು ಸೂಚ್ಯವಾಗಿ ಹೇಳುತ್ತದೆ. ತಿರಸಿ (ಶಿರಸಿ) ಯಲ್ಲಿ ಮನುಷ್ಯರ ತಿಂಬುವ ಜನ ಇದ್ವಡ ಎಂಬ ಮಾತು ಕೇಳಿ ಹೊರಟ ಭೂದೇವಿಯ ಪ್ರಯಾಣದ ಜೊತೆಗೆ ಪುಡಿಯಮ್ಮ ಎಂಬ ನಸ್ಯ ಸೇದುವ ಕುಂಬಳೆ ಕಡೆಯ ಮತ್ತೊಂದು ಹೆಂಗಸಿನ ಕಥೆ ಸಾಥ್ ಪಡೆದು ಸಾಗುತ್ತದೆ. ಮಧ್ಯಘಟ್ಟದಲ್ಲಿ ಭತ್ತದ ಗದ್ದೆಗಳಿಲ್ಲದೇ ಅಕ್ಕಿ ದುಬಾರಿ. ಹಾಗಾಗಿ ಅವರು ಹಲಸು ಮತ್ತು ಬಾಳೆಯನ್ನು ಅವಲಂಬಿಸಿದ್ದ ಸನ್ನಿವೇಶದ ಚಿತ್ರಣ ಕಾಡುತ್ತದೆ. ಕೇಮು ಮರಾಠಿ ಭೂದೇವಿಗೆ ಮಗಳ ಮನೆಗೆ ದಾರಿ ತೋರಿಸುವವ ಮಾತ್ರವಾಗದೇ, ಮಗುವಾಗದ ಶ್ರೀದೇವಿ ಮತ್ತು ಗೋಪಯ್ಯ ಹೆಗಡೆ ದಂಪತಿಗೆ ನಾಟಿ ಮದ್ದು ನೀಡುವ ಆಪತ್ಬಾಂಧವನೂ ಆಗುತ್ತಾನೆ. ಹೀಗೆ ಈ ಕೃತಿ ಹವ್ಯಕರ ಬದುಕಿನ ಕಥನವಾಗದೇ ಗೌಳಿ, ಸಿದ್ಧಿ, ಕುಣಬಿ,ಕರೆವೊಕ್ಕಲಿಗ, ಕುಮರಿ ಮರಾಠಿಗರ ಜೀವನಗಾಥೆಯೂ ಆಗಿ ಗಮನ ಸೆಳೆಯುತ್ತದೆ. ದೇವಕಾನಿನ ನೀರ ನಡಿಗೆಯ ಜೊತೆಗೆ ಹೊಸಕಟ್ಟಿನ ಹೆರಿಗಮನೆಯ ದೃಶ್ಯವನ್ನು ನೋಡುವುದೇ ಇಲ್ಲಿಯ ಸೊಗಸಾಗಿದೆ. ಅಮಟೆ ಮರವನ್ನು ಮನುಷ್ಯನ ಬದುಕಿಗೆ ಹೋಲಿಸಿ ಮಾತನಾಡುವ ರೀತಿಯೇ ಕಾಡುನೆಲೆಯ ಮಧ್ಯಘಟ್ಟದ ಅದ್ಭುತವೆಂದು ಕೃತಿಕಾರ ಪಾತ್ರದ ಮೂಲಕ ಹೇಳುವುದು ಸತ್ಯವೂ ಹೌದು. ಅದಕ್ಕೆ ಕೆಂಪೆತ್ತಿನ ಕಾಯಿಯಂತಹ ಹೆಸರುಗಳು ಸಾಕ್ಷಿ. ಮನೆಗೆ ಸೋಗೆ ಹೊಚ್ಚುವ ಕಂಬಳ, ಅಡಿಕೆ ಮರದಲ್ಲಿ ಕೊನೆಗೆ ಕೊಟ್ಟೆ ಕಟ್ಟುವ ಕಂಬಳ, ಆಲೆಮನೆ ಹಬ್ಬ; ಇವೆಲ್ಲ ಇಂದಿನ ದಿನಗಳಲ್ಲಿ ಇಲ್ಲವೇ ಆಗಿಹೋಗಿದ್ದರೂ, ಈ ಅಧ್ಯಾಯಗಳನ್ನು ಓದುವಾಗ ಕೃತಿಯ ಕಾಲದ ಸ್ತಂಭನ ಮಾಡುವುದು ಕಾದಂಬರಿಯ ಪರಿಣಾಮಕ್ಕೆ ಸಾಕ್ಷಿ!ಇದರಲ್ಲಿ ಬರುವ ಗಂಜಿ ಕುಳಿ ಪ್ರಸಂಗದಂತವು ಸಂಕಟವನ್ನುಂಟು ಮಾಡುತ್ತವೆ. ಗಮಯನ ಗಿಣ್ಣು, ಚಾಂದ್ ಷಾ ಶಿಕಾರಿ, ಹುಲಿಯಜ್ಜನ ಅವತಾರ, ನಳಿನಮನೆ ಬೆಟ್ಟದ ಹುಲಿ ಬೇಟೆ ಅಧ್ಯಾಯಗಳು ಬೆರಗನ್ನು ಮೂಡಿಸುತ್ತವೆ. ಗಿಡ್ಡೂ ಮರಾಠಿಯ ಸಾವು ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಮುಖವನ್ನು ಬಯಲಿಗೆ ಎಳೆಯುತ್ತದೆ. ಚಾಂದ್ ಷಾ ತಾವೇ ಗುಂಡು ಹಾರಿಸಿಕೊಂಡು ಸಾಯುವ ಸನ್ನಿವೇಶದಲ್ಲಿ ಎದೆ ಝಲ್ ಎನ್ನುತ್ತದೆ. ಉಗ್ರಾಣಿ ಧರ್ಮನ ರಹಸ್ಯ ಶೋಧ ಮತ್ತು ಡೊಳ್ಳು ಹೊಟ್ಟೆಯ ಭಟ್ಟರ ಹಾವು ಅಧ್ಯಾಯಗಳು, ಹಾಸ್ಯದ ಧಾಟಿಯಲ್ಲಿ ಮನುಷ್ಯನ ಕ್ರೂರತೆಯನ್ನು ಬಿಚ್ಚಿಡುತ್ತವೆ.ತಾಂಮ್ರ ಕಲ್ಲಂಟೆಯ ಕುಂಟಭೂತ, ಗುಂಡಟ್ಲಕಾನಿನ ಗಿರಿಜಮ್ಮನ ಕಥೆ ಮತ್ತು ಆಲೆ ಬಯಲಿನ ದೆವ್ವಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಕ್ಕಲಿಗರ – ಮತ್ತಿಮರದ ಸಂಬಂಧ, ಕುಮರಿ ಮರಾಠಿಗರ – ತಾಳೆ ಮರ ಸಂಬಂಧ, ಕನ್ನೆಕುಡಿ, ಹಲಸು, ಅಪ್ಪೆ ಮಾವಿನ ಜೊತೆ ಹವ್ಯಕರ ಸಂಬಂಧ ಈ ಹೊತ್ತಿಗೆಯಲ್ಲಿ ಅಪರೂಪದ ಹೊಳಹನ್ನು ನೀಡುತ್ತದೆ. ‘ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಲಾಗ, ನೋಡಿದ್ದೆಲ್ಲ ಕೆದಕಲಾಗ’ ಎಂಬ ವರದಪ್ಪಣ್ಣನ ಮಾತು ಕೃತಿಯ ಆಶಯವೂ ಆಗಿದೆ. ಪಟಾನ್ಸ್ ರಾಮ, ವಾಚು ತಂದ ವೈದ್ಯರು, ಎತ್ತಿನ ಗಾಡಿಯ ಕಾಲಚಕ್ರ, ಕಲ್ಲಂಟೆಯ ಕಳ್ಳರ ಮಾಳ ಅಧ್ಯಾಯಗಳು ಮಧ್ಯಘಟ್ಟ ಪ್ರಗತಿಯ ದಾರಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ. ಕಾದಂಬರಿಯ ಕೊನೆಯಲ್ಲಿರುವ ಆಯ್ದ ಪದಗಳ ಅರ್ಥ, ಜೀವಲೋಕದ ಖಜಾನೆ, ಕೃಷಿ ಮೂಲದ ಸಸ್ಯಗಳು, ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಪ್ರಾಣಿಗಳ ಪಟ್ಟಿ ಓದುಗನಿಗೆ ಅನುಕೂಲವಾಗುವಂತಿದೆ.ನೆನಪಿನ ಜೇನಿನ ರೊಟ್ಟಿನಿಂದ ಮಧುರವಾದ ತುಪ್ಪವನ್ನು ಆಸ್ವಾದಿಸಲು, ಪರಿಸರದ ಅಧ್ಯಯನ, ಜಾನಪದದ ಮಾಹಿತಿ ಕುರಿತು, ಅದೆಲ್ಲಕ್ಕಿಂತ ಮುಖ್ಯವಾಗಿ ರಸ ಸ್ಪುರಣೆಯ ದೃಷ್ಟಿಯಿಂದ ಓದಲೇಬೇಕಾದ ಮಹತ್ವದ ಕೃತಿ ‘ ಮಧ್ಯಘಟ್ಟ’ ಎಂದು ನಿಶ್ಚಿತವಾಗಿ ಹೇಳಬಹುದು.********************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಇತರೆ

ನೆಲೆ ಸಂಭ್ರಮ – 2020

ನೆಲೆ ಸಂಭ್ರಮ – 2020 ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ಪ್ರಾದೇಶಿಕ ನೆಲೆಯಿಂದ ಸಾಹಿತ್ಯ ಪರಿಚಾರಿಕೆಯ ಕೆಲಸವನ್ನು ಮಾಡುತ್ತ ಬಂದಿದೆ. ಇದೀಗ ಕೊರೋನಾ ಪರಿಣಾಮವಾಗಿ ಪ್ರತಿವರ್ಷವೂ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದ ನೆಲೆ ಸಂಸ್ಥೆ ಈ ಬಾರಿ ಫೇಸ್ಬುಕ್ ಲೈವ್ ನ ಮೂಲಕ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯ, ದೇಶ ಹಾಗೂ ದೇಶದಾಚೆಗೂ ಪಸರಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಗಿ ನಿಂತಿದೆ. ಆಕರ್ಷಕ ಮಾದರಿಯಲ್ಲಿ ಆರಂಭವಾದ ನೆಲೆ ಸಂಭ್ರಮವು ವಿವಿಧ ಹಿರಿಯ ಚಿಂತಕರಾದ ಜಯಂತ್ ಕಾಯ್ಕಿಣಿ(ಹಿರಿಯ ಕವಿ, ಕತೆಗಾರರು ), ಪ್ರೊ. ಸಿ ಎಸ್. ಭೀಮರಾಯ (ಸಿ ಎಸ್ಪಿ- ಕವಿ ವಿಮರ್ಶಕರು), ಡಾ. ರಾಜಶೇಖರ ಮಠಪತಿ (ರಾಗಂ – ಹಿರಿಯ ಕವಿಗಳು ), ಡಾ. ಶ್ರೀರಾಮ ಇಟ್ಟಣ್ಣವರ ( ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಬಯಲಾಟ ಅಕಾಡೆಮಿ ಬೀಳಗಿ ), ಡಾ. ಬಾಳಾಸಾಹೇಬ ಲೋಕಾಪುರ(ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು – ನವದೆಹಲಿ) ಮುಂತಾದವರ ಆಶಯ ನುಡಿಗಳೊಂದಿಗೆ ಕಾರ್ಯಕ್ರಮದ ರಂಗೇರಿಸಿತು. ಜುಲೈ 19 ರಿಂದ ಆಗಸ್ಟ್ 11 ರವರೆಗೆ ನಿರಂತರವಾಗಿ ಫೇಸ್ಬುಕ್ ಲೈವ್ ಮೂಲಕ ಅಚ್ಚುಕಟ್ಟಾದ ನಿರ್ವಹಣೆಯೊಂದಿಗೆ ಆರಂಭವಾದ “ನೆಲೆ ಸಂಭ್ರಮ -2020” ಅತ್ಯಂತ ಯಶಸ್ವಿಯಾಗಿ ನಡೆದು ಇದರಲ್ಲಿ ಭಾಗವಹಿಸಿದ ಎಲ್ಲಾ ಉತ್ಕೃಷ್ಟ ಕವಿಮನಸುಗಳ ಸವಿನೆನಪುಗಳನ್ನು ಶಾಶ್ವತವಾಗಿಸಲು ಇದೀಗ ಮೂರು ಕೃತಿಗಳನ್ನು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿಸಲು ಅಣಿಗೊಳಿಸಲಾಗುತ್ತಿದೆ. ಕ್ರಮವಾಗಿ “ಬಯಲ ರೆಕ್ಕೆಗಳು”, “ಕಥಾ ಕಾಲಕ್ಷೇಪ”‘ ಹಾಗೂ “ಸಂಕಥನ” ಎಂಬ ಬಹುಕಾಲ ಗಟ್ಟಿಯಾಗಿ ಉಳಿಯಬಲ್ಲ ಮೂರು ಮಹತ್ವದ ಕೃತಿಗಳನ್ನು ದೇವು ಮಾಕೊಂಡ, ಮನು ಪತ್ತಾರ ಹಾಗೂ ಡಾ. ಶ್ರೀಶೈಲ ನಾಗರಾಳ ರವರುಗಳು ಸಂಪಾದಿಸಿದ್ದಾರೆ. ನೆಲೆ ಸಾಹಿತ್ಯ ಸಂಭ್ರಮ-2020 ಕಾವ್ಯ ಕಂತು, ಕಥಾ ಸಪ್ತಾಹ ಹಾಗೂ ಚಿಂತನಾ ಸಪ್ತಾಹವೆಂದು ಮೂರು ಹಂತಗಳಲ್ಲಿ ನಡೆಯಿತು. ಕಾವ್ಯಸಪ್ತಾಹವು 7 ಕಂತುಗಳಲ್ಲಿ ನಡೆದು ನಾಡಿನ ವಿವಿಧ ಮೂಲೆಗಳಿಂದ ಹಾಗೂ ಅನ್ಯ ರಾಜ್ಯ, ಅನ್ಯ ದೇಶದಿಂದಲೂ ಒಟ್ಟು 41ಕ್ಕೂ ಹೆಚ್ಚು ಕವಿಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಇದರಲ್ಲಿ ಒಂದು ಗಜಲ್ ಗೋಷ್ಠಿಯನ್ನು ಕೂಡ ಆಯೋಜಿಸಲಾಗಿತ್ತು. ಜುಲೈ 19 – 2020 ರಿಂದ ಆರಂಭವಾದ ಕಾವ್ಯಗೋಷ್ಠಿಯ ಜೊತೆಜೊತೆಗೆ “ಕಾವ್ಯದಲ್ಲಿ ಶೋಧದ ದಾರಿ” ಕುರಿತು ಡಾ. ರಾಜಶೇಖರ ಮಠಪತಿಯವರು, “ಸಾಮಾಜಿಕ ಜವಾಬ್ದಾರಿ ಮತ್ತು ಕಾವ್ಯ” ಕುರಿತು ಪ್ರೊ. ಎಲ್. ಎನ್. ಮುಕುಂದರಾಜ್ ರವರು, “ವರ್ತಮಾನದ ಕಾವ್ಯದ ಅನುಸಂಧಾನ” ಕುರಿತು ಡಾ. ದೇವೇಂದ್ರಪ್ಪ ಜಾಜಿಯವರು, “ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ರೂಪಕ ಮತ್ತು ಪ್ರತಿಮೆ” ಗಳ ಕುರಿತು ಡಾ. ಸುರೇಶ ನಾಗಲಮಡಿಕೆಯವರು, “ಕಾವ್ಯದ ಸ್ವರೂಪ -ಓದುವ ಬಗೆಗಳು” ಕುರಿತು ಡಾ.ಎನ್ ದುಂಡಪ್ಪ ರವರು, “ಸರಕು ಸಮಾಜದಲ್ಲಿ ಕಾವ್ಯ ವ್ಯವಸಾಯ” ಕುರಿತು ಪ್ರೊ. ಕಮಲಾಕರ ಭಟ್ ಅಹ್ಮದ್ ನಗರ ಹಾಗೂ “ಗಾಲಿಬ್ ಗಜಲ್ ನಲ್ಲಿ ವಸ್ತು ವೈವಿದ್ಯತೆ” ಕುರಿತಾಗಿ ಗಿರೀಶ್ ಜಕಾಪುರೆಯವರು ಹೀಗೆ ಅತ್ಯಂತ ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ತದನಂತರ ಕಥಾ ಸಪ್ತಾಹದ ಸರಣಿಯಲ್ಲಿ ಹಲವಾರು ಪ್ರಸಿದ್ಧ ಕತೆಗಾರರು ಭಾಗವಹಿಸಿದ್ದರು.. ಅವರಲ್ಲಿ ಡಾ. ಕೇಶವ ಮಳಗಿಯವರು “ಕನ್ಯಾಗತ ಕತೆ”, ಡಾ. ಬಸು ಬೇವಿನಗಿಡದರವರು “ನೆರಳಿಲ್ಲದ ಮರ” ಕತೆಯನ್ನು, ನಟ ಮಂಡ್ಯ ರಮೇಶ್ ರವರು ಚದುರಂಗ ಅವರ “ಸಾವಿನ ಮನೆ” ಕತೆಯನ್ನು, ದೀಪ್ತಿ ಭದ್ರಾವತಿಯವರು “ನೆರಳಿನಾಚೆ” ಕತೆಯನ್ನು, ಅನುಪಮಾ ಪ್ರಸಾದ್ ರವರು “ಸೈತಾನನ ಬಲೆ” ಕತೆಯನ್ನು, ರಾಜಶೇಖರ ಹಳೆಮನೆ ಅವರು ” ಗೋಡೆಯ ಚಿತ್ರ”, ಚೀಮನಹಳ್ಳಿ ರಮೇಶಬಾಬು ಅವರು “ಹುಣಸೆ ಮರ”, ಆನಂದ ಕುಂಚನೂರು ಅವರು “ಗಂಧರ್ವ ಪಟ್ಟಣ” ಮತ್ತು ಕೊನೆಯದಾಗಿ ಕಪಿಲ್ ಹುಮನಾಬಾದ್ ರವರು “ನಿರೋಷ”.. ಹೀಗೆ ಎಲ್ಲಾ ಕಥೆಗಳು ವಿಭಿನ್ನ ಕಥಾವಸ್ತುಗಳನ್ನು ಒಳಗೊಂಡಿದ್ದು ಕತೆಗಾರರು ಮನೋಜ್ಞವಾಗಿ ಮನ ಮುಟ್ಟುವಂತೆ ವಾಚಿಸಿದರು. ನಂತರದಲ್ಲಿ ಚಿಂತನಾ ಸಪ್ತಾಹದಲ್ಲೂ ಮೇರು ಚಿಂತಕರು ಪಾಲ್ಗೊಂಡು ವಿವಿಧ ಆಯಾಮಗಳಲ್ಲಿ ತಮ್ಮ ಚಿಂತನಾ ಲಹರಿಗಳನ್ನು ಹರಿಯಬಿಟ್ಟರು. ಅವರಲ್ಲಿ ಡಾ. ರಹಮತ್ ತರೀಕೆರೆಯವರು “ತತ್ವಪದದಲ್ಲಿ ಅರಿವಿನ ನೆಲೆ”, ಡಾ. ಜಿ. ಪಿ. ಬಸವರಾಜುರವರು “ಬೊಗಸೆಯಲ್ಲಿ ಬುದ್ಧ”, ಡಾ. ಬಾಳಾಸಾಹೇಬ ಲೋಕಾಪುರರವರು “ಪ್ರಪ್ರಾಚೀನ ಜೈನ ಕಥೆಗಳು ಮತ್ತು ಲೋಕಪ್ರಜ್ಞಪ್ತಿ”, ಡಾ. ನಟರಾಜ್ ಬೂದಾಳ್ ರವರು “”ನಾಗಾರ್ಜುನನೆಂಬ ಜ್ಞಾನಸೂರ್ಯ” ಕುರಿತು, ಡಾ. ಪುರುಷೋತ್ತಮ ಬಿಳಿಮಲೆಯವರು “ತುಳು ಜಾನಪದ”, ಡಾ. ಬಸವರಾಜ ಡೋಣೂರ ಅವರು “ಬೇಂದ್ರೆ -ಕೀಟ್ಸ್ ತೌಲನಿಕ ಅಧ್ಯಯನ” ಕುರಿತಾಗಿ, ಡಾ. ಶ್ರೀಶೈಲ ನಾಗರಾಳ ಅವರು “ಜಾನಪದ ಲೋಕರೂಢಿ”… ಹೀಗೆ ವಿವಿಧ ವಸ್ತುವಿಷಯಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿದರು. ಇಷ್ಟೂ ದಿನಗಳು ನಡೆದಂತಹ ಸಾಹಿತ್ಯಸುಗ್ಗಿಯ ಸಂಭ್ರಮವನ್ನು ಕುರಿತು, ನೆಲೆ ಪ್ರಕಾಶನ ಸಂಸ್ಥೆಯ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗೆ ನಡೆದುಬಂದ ಪಯಣ, ನೆಟ್ಟ ಹೆಜ್ಜೆಗಳು ಮುಂತಾದ ವಿಷಯಗಳ ಕುರಿತು ಡಾ. ಶ್ರೀರಾಮ ಇಟ್ಟಣ್ಣನವರ ಅವರು ತಮ್ಮ ಸಮಾರೋಪ ನುಡಿಗಳಲ್ಲಿ ಸವಿಸ್ತಾರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತಾ ನುಡಿಗಳನ್ನು ಈ ಸಂಸ್ಥೆಯ ಆಧಾರ ಸ್ಥoಭಗಳಾದ ಡಾ. ಎಂ. ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು ತಿಳಿಸಿದರು. ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅಂತೆಯೇ ಒಂದು ಯಶಸ್ವಿ ಕಾರ್ಯಕ್ರಮದ ಹಿಂದೆ ಹಲವಾರು ಕಾಣದ ಕೈಗಳ ಸಹಕಾರ, ಪರಿಶ್ರಮವಿರುತ್ತದೆ, ಗೆಳೆಯರ ಬಳಗವಿರುತ್ತದೆ, ಹಿರಿಯರ ಮಾರ್ಗದರ್ಶನವಿರುತ್ತದೆ. ಹೀಗೆ ಎಲ್ಲವನ್ನೂ ಒಗ್ಗೂಡಿಸಿ ದೇಶದೆಲ್ಲೆಡೆ ಮಹಾಮಾರಿಯಾಗಿ ಹರಡಿ ಜನರನ್ನು ಕಾಡುತ್ತಿರುವ ಈ ಕೊರೋನಾ ಕಾಲದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಆಯೋಜಿಸಲಾಗಿದ್ದ ನೆಲೆ ಸಂಭ್ರಮ -2020 ಸಾಹಿತ್ಯಾತ್ಮಕ ಕಾರ್ಯಕ್ರಮವು ಈಗ ಮಗದೊಂದು ಹೆಜ್ಜೆಗುರುತನ್ನು ಮೂಡಿಸಿರುವುದು ಸ್ತುತ್ಯಾರ್ಹ. ಇನ್ನು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತ ದೇವು ಮಾಕೊಂಡ ರವರು ಕಾರ್ಯಕ್ರಮದ ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮೂಡಿಬರುವಂತೆ ಕಾಳಜಿ ವಹಿಸಿ, ಇಂತಹ ಒಂದು ಕಾರ್ಯಕ್ರಮವನ್ನು ಸವಿಯಲು ಅನುವು ಮಾಡಿಕೊಟ್ಟು ಹಲವು ಪ್ರತಿಭೆಗಳಿಗೆ ಆನ್ಲೈನ್ ಮೂಲಕವೇ ವೇದಿಕೆ ಒದಗಿಸಿಕೊಟ್ಟು ಯಶಸ್ವಿಗೊಳಿಸಿದ್ದು ಆದರ್ಶನೀಯ. ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳು ಇನ್ನು ಮುಂದೆಯೂ ಜರುಗಲಿ.. ಕನ್ನಡಮ್ಮನ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನೆರಡು ಅಭಿಮಾನದ ನುಡಿಗಳಿಗೆ ವಿರಾಮ ನೀಡುತ್ತಿದ್ದೇನೆ. ********************************** ತೇಜಾವತಿ ಹೆಚ್.ಡಿ.

ನೆಲೆ ಸಂಭ್ರಮ – 2020 Read Post »

ಅನುವಾದ

ಅನುವಾದ ಸಂಗಾತಿ

ಚಿತ್ರಗಳು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇಂಗ್ಲೀಷಿಗೆ:ಪಂ. ರವಿಕಿರಣ್ ಮಣಿಪಾಲ ಚಿತ್ರಗಳು ನನ್ನ  ಮನದಲ್ಲೆಷ್ಟೋ ಚಿತ್ರಗಳಿವೆ ಬಿಡಿಸ ಹೋದರೆ ಅವು ಹಾಳೆಗಳಲ್ಲಿ ನಿರ್ಜೀವ ಹೆಣಗಳಂತೆ ಬೋರಲು ಬೀಳುತ್ತವೆ ಇನ್ನು ಕೆಲವು ಬೆನ್ನಡಿಯಾಗಿ ಬಿದ್ದ ಜಿರಳೆಗಳಂತೆ ಅಸಹಾಯಕವಾಗಿಕೈಕಾಲಾಡಿಸುತ್ತ ಕಪ್ಪು ಕಂಗಳಲ್ಲಿ ಚಂದ್ರನನ್ನೇ ನೋಡುತ್ತಿರುತ್ತವೆ. ನನ್ನ ಮನದ ಚಿತ್ರಗಳು ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತ  ಕೆಂಪು ಕೆಂಪಾದ ಹಸಿಗಾಯದ ಮೇಲೆ ಯಾರ್ಯಾರೋ ಗೀರಿದಂತೆ ನೆತ್ತರಲ್ಲಿತೊಯ್ದಿರುತ್ತವೆ. ನನ್ನ ಮನದ ಚಿತ್ರಗಳು ಬದುಕಿನತಿಪ್ಪೆಯಲ್ಲಿ ಅವನು ಬಿಸಾಕಿದ ಎಂಜಲು ಅನ್ನಕ್ಕಾಗಿ ಕಚ್ಚಾಡುತ್ತಿರುತ್ತವೆ ಹಸಿವಲ್ಲಿ ಲೋಕ ಕಾಣದೆ ಇನ್ನಾರದ್ದೋ ಹಸಿದ ಮುಖವನ್ನೇ ಹಸಿ ರೊಟ್ಟಿಯೆಂದುಕೊಳ್ಳುತ್ತ ಒಡಲ ಬೆಂಕಿಯಲಿ ಸುಟ್ಟುತಿನ್ನಲು ಕೈಚಾಚುತ್ತ ಹೊಟ್ಟೆ ಬೆನ್ನಿಗೆ ಅಂಟಿ ರೊಟ್ಟಿಯೇ ಆಗಿ ಇನ್ನಾರದ್ದೋ ತುತ್ತಾಗುತ್ತವೆ ಇನ್ನು ಕೆಲವು ತಮ್ಮ ಮುಖಗಳನ್ನೇ ರೊಟ್ಟಿಯೆಂದುಕೊಳ್ಳುತ್ತ ಹೊಟ್ಟೆಯೊಳಗೇ ಎಳೆದುಕೊಳ್ಳುತ್ತವೆ ರಾಹು…ಚಂದ್ರನನ್ನೇರಾವುಹಿಡಿದಂತೆ ನುಂಗುತ್ತಿರುತ್ತದೆ ಅವನು ಮಾತ್ರ ಹಳೆಮೊಳೆಗೆ ತೂಗು ಹಾಕಿದ ಹೊಸ ಕ್ಯಾಲೆಂಡರಿನಲ್ಲಿ ನಗುತ್ತಿರುತ್ತಾನೆ ಕಪ್ಪು ಚಿತ್ರಗಳು  ಕಪ್ಪು ಮಣ್ಣಲಿ ಹೂತು ಬಿಳಿಹತ್ತಿ ಬೆಳೆದು ಬತ್ತಿಯಾಗಿ ಭಕ್ತಿಯ ಹಣತೆ ಹಚ್ಚುತ್ತವೆ ಬಿಳಿಚಿತ್ರಗಳು ಬಿಳಿಗಂಗೆಯಲ್ಲಿ ಮುಳುಗಿ ಅಸ್ಥಿವಿಸರ್ಜಿಸಿ  ಕಾಗೆಯಾಗಿ ಮಾಲಯದಲ್ಲಿ ಪಿಂಡಕಾಯುತ್ತವೆ ನನ್ನ ಮನದ ಚಿತ್ರಗಳು ಹಾಳೆಗೆ ಬಿದ್ದೊಡನೆ ಹೃದಯದ ತೊಟ್ಟಲ್ಲೊಂದು ಆಸೆಯ ಮೊಗ್ಗನ್ನುಅಪ್ಪಿಕೊಂಡು ಹುಳುಹಿಡಿದ ದಾಸವಾಳ ಗಿಡದಂತೆ ಮುರುಟಿ ಹೋಗುತ್ತವೆ ಬಿಸಿಲಿನ ಝಳಕ್ಕೆ ಬಾಡಿಹೋದ ಕುಂಬಳದ ಬಳ್ಳಿಯಂತೆ ಮತ್ತೆ ಮರವನ್ನಪ್ಪಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತ ಬೇಡದ ಬಸಿರು ಹೊತ್ತು ತೆವಳುತ್ತವೆ ಬೀದಿಯಲ್ಲಿ ಬಿಸುಟ ಕೂಸುಗಳು ಗಂಟಲಲ್ಲಿ ನಾಲಗೆ ಇಡದೆ ಬೆಕ್ಕಿನಂತೆ ಅಳುತ್ತಿರುತ್ತವೆ ಭಗ್ನಗೊಂಡ ನಗ್ನ ಶಿಲ್ಪಗಳು ತಮ್ಮದೇ ದೇಹದ  ತುಂಡುಗಳನ್ನು ತಮ್ಮೊಳಗೇ ಹುಡುಕುತ್ತ ತಮ್ಮದಲ್ಲದ ಜಾತ್ರೆಯಲ್ಲಿ ತಮ್ಮದಲ್ಲದ ನಗುವನ್ನು ನಗುತ್ತವೆ ಅವನು ಆ ದೇವರೆಂಬವನು ಚಿತ್ರಿಸಿದ ಈ ನನ್ನಂತೆಯೇ ನನ್ನ ಮನದ ಚಿತ್ರಗಳು ಚೆಲ್ಲಾಪಿಲ್ಲಿ ಹಾಳೆಯ ಮೇಲೆ ಬಿದ್ದು ಬಿದ್ದಲ್ಲಿಂದಲೇ ಎದ್ದು ತಮ್ಮದೇ ಭೂಮಿಯಿದು ಎಂದುಕೊಂಡು ಮನೆ ಕಟ್ಟಿಕೊಳ್ಳುತ್ತವೆ ತಮ್ಮದು ಎಂದುಕೊಳ್ಳಲೆಂದೇ ಮದುವೆಯಾಗಿ ಮಕ್ಕಳು ಮರಿಗಳನ್ನು ಮಾಡುತ್ತ ತಮ್ಮದೆಂದುಕೊಂಡೇ ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತಿರುತ್ತವೆ ಕೊನೆಗೆ ತಮ್ಮದಲ್ಲದ ಭೂಮಿಯನ್ನು ಬಿಟ್ಟು ಹೋಗುತ್ತವೆ ಹಾಳೆಯಲ್ಲಿ ಮುಷ್ಟಿಕಟ್ಟಿದ ಮನೆ ಬಣ್ಣ ಪೇಲವವಾಗಿ ಬಿಳಿಚಿ ಹಲ್ಲಿಲ್ಲದ ಮುದುಕನಂತೆ ಬೊಚ್ಚುಬಾಯಿಯನ್ನು ಆ ಎಂದುತೆರೆದುಕೊಂಡು ಆಗಸವನ್ನೇ ದಿಟ್ಟಿಸುತ್ತಿರುತ್ತದೆ ಸರಳಿಲ್ಲದ ಒಟ್ಟೆ ಕಂಗಳಿಂದ… ನೋಟದಲ್ಲಿ ಶೂನ್ಯ ತುಂಬಿಕೊಂಡು ಇವೆಲ್ಲದರ ಗೋಜೇ ಇಲ್ಲದಂತೆ ನನ್ನ ಮನದ ಮೂಲೆಯಲ್ಲೊಂದು ಮಗು ತನ್ನೊಳಗೇ ಮಾತನಾಡುತ್ತ ಹಾಳೆಯಲ್ಲಿ ಗೀಚುತ್ತ ಬಣ್ಣತುಂಬುತ್ತಿರುತ್ತದೆ ನೇತು ಹಾಕಿದ ಲಾಂಟಾನಿನಲ್ಲಿ ಅದರ ಕಪ್ಪು ದ್ರಾಕ್ಷಿ ಹಣ್ಣಿನಂತಹ ಕಂಗಳಿಂದ ನಕ್ಷತ್ರಗಳು ಉದುರಿ ಹಾಳೆಯ ತುಂಬ ನಕ್ಕು ಕತ್ತಲನ್ನು ತುಂಬಿಕೊಳ್ಳುತ್ತವೆ ಅದರ ಪುಟ್ಟಚಿಗುರು ಬೆರಳುಗಳು ಎಳೆಯುವ ಚಿತ್ರಗಳಿಗೆ ಎಲ್ಲೋ ಮೂಡುವ ಕಣ್ಣುಜೀವತುಂಬುತ್ತದೆ ಗಿಡ ಮರ ಬಳ್ಳಿ ಹೂವುಗಳೆಲ್ಲ ಜೀವಂತವಾಗಿ ಆಗಸವನ್ನೇ ನೋಡುತ್ತಿರುತ್ತವೆ ಹಕ್ಕಿಯಂತೆರೆಕ್ಕೆ ಬಿಚ್ಚಿ. ಅವು ದೇವರೊಡನೆ ಮಾತನಾಡುತ್ತವೆ. *** The pictures There are numourous Pictures in my mind If I try to sketch them They fall upside down On the sheets A few like cocroaches Fell on their back Helplessly move their Limbs and gaze the moon With dark eyes The pictures of my mind Live lives that do not Belong to them but Somebody else And are soaked with Blood as if a fresh wound Has been scraped by Someone My mind’s pictures  Squabble for left out Food in the garbage Of life Desperate with hunger Delude somebody’s face As Roti Extend their hands To catch it and roast it In the fire of the body And to eat A few delude their Faces as Rotis And pull them inside the Stomach Like the moon devoured By Rahu But he laughs in the New calendar hanged By a old nail Black pictures Are seeded in black earth White cotton grows And becomes a whip That lightens the Lamp of devotion White pictures drown In the white Ganges Discard their corporeal Remnants and become Crows waiting for the Pinda in Mahalaya The pictures of my mind As they fall on a sheet Carry a bud of desire In the foot stalk Of the heart Shrivel like a hibiscus Plant eaten by worms Like a pumpkin creeper Withered in the hot son Do fruitless efforts To embrace the tree And crawl carrying Unwanted womb The infants thrown to Streets weep relentlessly Like cats Broken naked sculptures Search their broken Limbs within themselves Smile somebody else’s Smile at somebody else’s Festival Like me who has been Painted by someone Knows as god My mind’s pictures also Fall and Scatter on sheets And get up Deluding the sheet As their earth Build castles Give birth to Children and Grand children And live life that Is not theirs but Someone else’s And at the end Leave the earth that is Not theirs The tight fisted home Drwan on the sheet Gets faded and bleached And gazes the sky Like an old man With teethless mouth And with a sight Of emptiness Regardless of the above A child at the corner Of my mind Is talking to itself And scribbling the sheet And filling colors In the light of the lantern Stars drop from its black Grape eyes On the sheet and laugh And embody the Darkness The pictures drawn by Its tender fingers get an Eye somewhere That fills life to them Plants, trees, creepers, Flowers gaze the heaven With life Extend their wings like A bird and Converse with god *************************

ಅನುವಾದ ಸಂಗಾತಿ Read Post »

You cannot copy content of this page

Scroll to Top