ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೆಲವರು ಹಾಗೆ

ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರು‌ಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****

ಕೆಲವರು ಹಾಗೆ Read Post »

ಇತರೆ, ಜೀವನ

ನಮ್ಮ ಮಕ್ಕಳು ಮಕ್ಕಳಲ್ಲ

ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಮಾವ ಅತ್ತೆ, ಚಿಕ್ಕಪ್ಪ ಚಿಕ್ಕಮ್ಮ ,ಅಣ್ಣ ಅಕ್ಕ , ಅಪ್ಪ ಅಮ್ಮ ರೊಂದಿಗೆ ನಲಿವಿನ ಸಮಯ ಕಳೆಯಲು ಅವಕಾಶವಿತ್ತು. ಹಗಲಿನಲ್ಲಿ ಹಾಡುವ ಹಕ್ಕಿಯೂ,ಓಡುವ ಎಳೆಗರುವೂ, ಮೂಡಣದ ಸೂರ್ಯ, ಹಸಿರೆಲೆಯ ಗಿಡಮರಗಳು, ಬಣ್ಣ ಬಣ್ಣದ ಹೂಗಳು, ಮಕರಂದ ಹೀರುವ ದುಂಬಿಗಳು ಒಂದಲ್ಲ ಎರಡಲ್ಲ . ಎಂಥ ಚಂದವಿತ್ತು ನಮ್ಮ ಬಾಲ್ಯ.ಸಂಜೆಯಾದೊಡನೆ ತಿಂಗಳ ಬೆಳಕಿನ ಅಂಗಳದಲ್ಲಿ ಅಜ್ಜನೇ ಮೇಷ್ಟ್ರು. ಅವನ ಬಾಯಿ ಲೆಕ್ಕಾಚಾರದ ಮುಂದೆ ಈಗಿನ ಕ್ಯಾಲ್ಕುಲೇಟರ್ ಸಹಾ ಹಿಂದೆಬೀಳುತ್ತಿತ್ತು.ಎಷ್ಟು ಸರಾಗವಾಗಿ ಮಗ್ಗಿಗಳನ್ನು ನನ್ನಜ್ಜ ಹೇಳುತ್ತಿದ್ದ. ಅಜ್ಜಿಯೇ ಕಥೆಯ ನಿರೂಪಕಿಯಾಗಿ ಲಾಲಿ ಹಾಡುವವರೆಗೂ ರಾತ್ರಿಯ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ.    ಟಿವಿ, ಮೊಬೈಲ್ ಗಳ  ಹಾವಳಿಯಿಲ್ಲದ ನಿರಾತಂಕ ಜೀವನ. ಐದು ವರ್ಷಗಳ ನಂತರವೇ ಊರಿನ ಕನ್ನಡ ಶಾಲೆಗೆ ಹೋಗುವುದು. ಹೆಚ್ಚಿನ ಹೊರೆಯಿಲ್ಲದ ಸರಳ ಕಲಿಕೆ ಆದರೂ ಶಾಶ್ವತ ಕಲಿಕೆಯಾಗಿತ್ತು.   ಬದಲಾದ ಕಾಲಕ್ಕೆ ಎಲ್ಲವೂ ಮರೆಯಾಯಿತು.ಈಗಂತೂ ಹುಟ್ಟುವ ಮೊದಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರು ನೊಂದಾಯಿಸಿ ತಮ್ಮ ಮಗುವಿಗೆ ಸೀಟೊಂದನ್ನು ಕಾಯ್ದಿರಿಸಲಾಗುತ್ತದೆ. ರಾತ್ರಿಯಿಡೀ ಸರತಿಸಾಲಿನಲ್ಲಿ ನಿಂತು ತಾವು ಕಷ್ಟಪಟ್ಟ ಅನೇಕ ವರ್ಷಗಳ ದುಡಿಮೆಯನ್ನು ಕೇವಲ ಒಂದು ವರ್ಷದ ಶಾಲಾ ಶುಲ್ಕಕ್ಕಾಗಿ ಖರ್ಚುಮಾಡುತ್ತೇವೆ. ಎರಡೂವರೆ ಮೂರು ವರ್ಷದ ಮಕ್ಕಳ ಬೆನ್ನಿಗೆ ಬಣ್ಣದ ಬ್ಯಾಗನ್ನು ಏರಿಸಿ, ಕೈಗೊಂದು ಊಟದ ಬ್ಯಾಗನ್ನು ಇಳಿಬಿಟ್ಟು, ಹಳದಿ ಬಣ್ಣದ ಬಸ್ಸನ್ನು ಅವಸರದಿಂದಲೇ ಹತ್ತಿಸಿ ಟಾಟಾ, ಬೈಬೈ ಹೇಳಿ ನಿಟ್ಟುಸಿರು ಬಿಡುತ್ತೇವೆ. ಅಲ್ಲಿಗೆ ಒಂದು ದಿನದ ಮಗುವಿನ ಪಯಣ ಯಶಸ್ವಿಗೊಳಿಸಿದ ನಿರಾಳತೆ. ಆದರೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟ ಮಗುವಿನ ಮನಸ್ಸು ಅರಿಯಲು ನಾವು ವಿಫಲವಾದೆವಲ್ಲ! ಬಾಲ್ಯದ ಚಿಗುರುವ ಕನಸುಗಳ ಅಲ್ಲಿಯೇ ಹೊಸಕಿಹಾಕಿಬಿಟ್ಟೆವಲ್ಲ.ನಮ್ಮ ನಿರೀಕ್ಷೆಗಳಿಗಾಗಿ ಅವರ ಕನಸುಗಳನ್ನು ಸೀಲ್ ಮಾಡಿಬಿಟ್ಟೆವಲ್ಲ. ಖಲೀಲ್ ಗಿಬ್ರಾನ್ ಒಬ್ಬ ಅಮೆರಿಕದ ಕವಿ ತನ್ನ ಕವಿತೆಯೊಂದರಲ್ಲಿ ಹೇಳುವಂತೆ:    Your children are not children   They are the sons and daughters of life’s longing for itself   They come through you but not from you   And though they are with you ,   Yet they belong not to you “     ಹೀಗೆ ಸಾಗುವ ಪದ್ಯವೊಂದರಲ್ಲಿ “ನಿಮ್ಮ ಮಕ್ಕಳು , ಮಕ್ಕಳಲ್ಲ ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ನಿಮ್ಮಿಂದಲ್ಲ ನಿಮ್ಮ ಜೊತೆ ಇರುವುದಾದರೂ ನಿಮಗೆ ಸೇರಿದವರಲ್ಲ”   ಹೌದು ಮಕ್ಕಳ ಮೇಲೆ ನಮ್ಮ ನಿರೀಕ್ಷೆ ಎಂದೂ ಅತಿಯಾಗಬಾರದು.ನಮ್ಮ ಕನಸುಗಳ ಈಡೇರಿಕೆಗೆ ಅವರನ್ನು ಬಳಸಿಕೊಳ್ಳಬಾರದು.ನಾವೆಂದೂ ಅವರನ್ನು ನಮ್ಮಂತೆ ಮಾಡಲು ಪ್ರಯತ್ನಿಸಬಾರದು.ಕಾರಣ ಅವರ ಕನಸಿನೊಳಗೆ ನಮ್ಮ ಪ್ರವೇಶವಿರಕೂಡದು.ನಮ್ಮ ಪ್ರೀತಿಯನ್ನು ಮಕ್ಕಳಿಗೆ ನೀಡಬೇಕೇ ಹೊರತು ಆಲೋಚನೆಗಳನ್ನಲ್ಲ.   ಡಾ||ಸಿ.ಆರ್.ಚಂದ್ರಶೇಖರ್ ರವರು ತಮ್ಮ ಮನಸ್ಸೇ ನೀ ಪ್ರಶಾಂತವಾಗಿರು ಪುಸ್ತಕದಲ್ಲಿ(ಪು.74) ಹೇಳುತ್ತಾರೆ ನಿರೀಕ್ಷೆಗಳನ್ನು ತಗ್ಗಿಸಿ, ಸಾಧ್ಯವಾದರೆ ನಿವಾರಿಸಿಕೊಳ್ಳಿ. ಅವರ ಮಾತಿನಂತೆ ಖಂಡಿತವಾಗಿ ನಿರೀಕ್ಷೆಗಳಿಂದ ನಿರಾಸೆಯೂ, ನಿರ್ಲಿಪ್ತತೆಯಿಂದ ನೆಮ್ಮದಿಯೂ ದೊರೆಯುತ್ತದೆ. ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ,ಮದುವೆ, ಉದ್ಯೋಗ ಎಲ್ಲವೂ ನಮ್ಮ ಕರ್ತವ್ಯ. ಆದರೆ ಇದಕ್ಕೆ ಪ್ರತಿಫಲವಾಗಿ ಪ್ರೀತಿ, ಆಸರೆ,ಹಣ,ವೃದ್ಧಾಪ್ಯದಲ್ಲಿ ನೆರವನ್ನು ನಿರೀಕ್ಷಿಸಬೇಡಿ ಎನ್ನುತ್ತಾರೆ ಡಾಕ್ಟರ್. ಹಾಗಿದ್ದರೆ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ್ದಕ್ಕೆ ನಿರೀಕ್ಷೆ ಇರಬಾರದೇ?        ಇರಲಿ, ಆದರದು ಒತ್ತಾಯಕ್ಕಲ್ಲ.ನಿಮ್ಮ ಆಸೆ ಆಕಾಂಕ್ಷೆಗಳನ್ನು ,ಗುರಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅವರ ಹುಟ್ಟು ನಿಮಗೆ ಅದೃಷ್ಟ ತಂದಿತೆಂದು , ಸಂಪತ್ತಿಗೆ ಅಧಿಪತಿಯಾದರೆಂದು ಯಾವುದೇ ಮಗುವನ್ನು ಮೆರೆಸುವುದಾಗಲೀ ಅಥವಾ ಉಂಟಾದ ಸಾಲ ನಷ್ಟಗಳಿಗೆ ಹುಟ್ಟಿದ ಮಗುವಿನ ಜಾತಕವೇ ಕಾರಣವೆಂದು ಹೀಗಳೆಯುವುದಾಗಲೀ ಸಲ್ಲದು. ಮಕ್ಕಳಿಗೆ ಅವರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾದ ಶಿಕ್ಷಣ ನೀಡಿ, ಆದರೆ ಸಮಾಜದ ಇತರೆ ಮಕ್ಕಳೊಂದಿಗೆ ಹೋಲಿಕೆ ಖಂಡಿತಾ ಬೇಡ. ಜೀವನೋಪಾಯಕ್ಕಾಗಿ ಅವಶ್ಯಕವಾಗಿ ನ್ಯಾಯಯುತವಾದ ದುಡಿಮೆಯೊಂದನ್ನು ಮಾಡುವಂತಿರಲಿ. ದುಡಿಯದೇ ಅಥವಾ ಕೆಲಸ ಮಾಡದೇ ಸುಲಭ ಮಾರ್ಗದಲ್ಲಿ ಹಣ ಗಳಿಸುವುದನ್ನು ತಪ್ಪು ಎಂಬ ಅರಿವು ನೀಡಿದರೆ ಸಾಕು. ಮಕ್ಕಳೆಂದಿಗೂ ನಿಮ್ಮ ಹಣವನ್ನು ಹಿಂತಿರುಗಿಸುವ ಯಂತ್ರಗಳಲ್ಲ. ಬಂಡವಾಳ ಹೂಡಿ ಲಾಭವನ್ನು ನಿರೀಕ್ಷಿಸುವ ವ್ಯವಹಾರವಲ್ಲ.ಬದಲಾಗಿ ಪ್ರೀತಿ, ಸಂಸ್ಕಾರ , ಜವಾಬ್ದಾರಿ , ಶಿಕ್ಷಣ , ಮಾನವೀಯತೆ ನೀಡಿ ನಿರ್ಲಿಪ್ತವಾಗಿ ನೆಮ್ಮದಿಯಿಂದ ನಿಂತು ಬಿಡಿ ಕಾರಣ ಮಕ್ಕಳು ನಿಮ್ಮ ಮಕ್ಕಳಲ್ಲ, ನಿಮ್ಮ ಮೂಲಕ ಬಂದ ದೈವ ಸೃಷ್ಟಿಗಳು. ****************************************

ನಮ್ಮ ಮಕ್ಕಳು ಮಕ್ಕಳಲ್ಲ Read Post »

ಕಾವ್ಯಯಾನ

ವಸುಂಧರಾ ಕಾವ್ಯಗುಚ್ಛ

ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ ಒಡಲ ತಣಿಸಲು ಅವ್ವನಂತವರಒಡಲ ಬೇಗುದಿಯ ಯುದ್ಧ ; ದುಡಿಮೆಗಾರರನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ. ‘ಅರಿವೇ ಗುರು’ ದೀಪವಾರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ-ಕತ್ತಲು, ಒಳಹೊರಗೂ.. ಮೌನಕ್ಕೆ ಶರಣಾಗಿ ಕಿವುಡುಗಿವಿತೆರೆದಿದ್ದೆ, ಶಾಂತಿಯೆಂದರೆಶಾಂತಿ ಒಳಹೊರಗೂ.. ಇತಿಮಿತಿಯ ಅರಿವಾಯ್ತು ಈಗ,ನನ್ನದು ಮತ್ತೂ ಹೆಚ್ಚಾಗಿ ಅವರದು.ಜಾಗರೆಂದರೆ ಜಾಗರೂಕಳೀಗ.. ಮಮತೆ ಕಣ್ತೆರೆದು, ಒಲವಿನಲೆಶುಭನುಡಿಯ ಉಲಿದಾಗಹರುಷವೆಂದರೆ ಹರುಷವೀಗ.. ಮತ್ತೆ ಕಣ್ತೆರೆದುಕೊಂಡೆ, ಒಳಹೊರಗುಅರಿಯುವ ಹಂಬಲದಲಿ ಇರುಳಿನಿಂದೆದ್ದುಬರುವ ತಾಜಾಸೂರ್ಯ ಕಂಡ.ಬೆಳಕೆಂದರೆ ಬೆಳಕೀಗ!! ಪದ- ಪದಕ ಪದಗಳ ಗೀಳು ಹಿಡಿಸಿಕೊಂಡುಪದಗಡಲೊಳಗೆ ಮುಳುಗುಹಾಕಿಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದುಬಂದರೆ, ಪುನಃ ಪದಗಳೇ ರಾಶಿರಾಶಿದಂಡೆಯಲಿ ಬಿದ್ದಿದ್ದವು ಮರುಳಾಗಿ… ಸದ್ದುಗದ್ದಲದ ಗೂಡ ಹೊರಗೆ ಹಾರಿ,ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,ಹಾಗೇ ತಪಸಿಗೆ ಕುಳಿತರೆ ಪದಗಳೇವಿಸ್ತರಿಸಿದವು. ಧ್ಯಾನ ನಿಮೀಲಿತನೇತ್ರದೊಳು ಪದಪತ್ರ ಬಿಂದು!ಕರ್ಣದುಂಬಿತು ಪದೋಚ್ಚಾರಮಂತ್ರಪಠಣ!! ಪದನರಿದು ವಿಸ್ತರಿಸಲು ತೊಡಗಿ,ಅಪೂರ್ಣ ಪದವಾಗಿ, ಪೂರ್ಣಲಯಮೈದಳೆಯದ ಮರೀಚಿಕೆಯಾಗಿ,ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,ಬೆನ್ನಹತ್ತಿತು ಪದ ಮಾಯಾಮೃಗವಾಗಿ… ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆಧರಿಸದಿರಲಿ..? ***************************************

ವಸುಂಧರಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರೇಖಾ ಕಾವ್ಯಗುಚ್ಚ

ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ ಹಾದಿಎಂದವರೇಕೆ ಅಂಜುತ್ತಲೇಇದಿರುಗೊಳ್ಳುವರೋ? ನಿನ್ನ ಹೆಗಲಮುಟ್ಟಲೇಕೆ ಹಿಂಜರಿಯುವರೋ? ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇಉಗುಳು ನುಂಗಿ ಸಹಿಸುವುದೆಂದರೆಸಾವಲ್ಲವೇ?ಕಣ್ಣಲ್ಲಿ ಮೂಡಿದ ಚಿತ್ರವನ್ನುಸತ್ಯವಾಗಿಸಲಾಗದ ಅಸಹಾಯಕತೆಸಾವಲ್ಲವೇ? ಬದುಕೆಂದರೆ ಹೀಗೆಹುಚ್ಚಾಗಿ ಹಲಬುವಿಕೆ ಪ್ರೀತಿಗೂಪ್ರೇಮಕ್ಕೂ ಮತ್ತು ಸಾವಿಗೂ. ಇಕೋ, ಗಿರಿಗವ್ವರದ ಹಸಿರೆಲೆಗಳಸಂದಿ ಸಂದಿನಲ್ಲೂ ತೊಟ್ಟ,ನಿತ್ಯ ಸುತ್ತಾಟದಲ್ಲೂ ಹೂವರಳಿಸುವಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.ಮೆಲುನಡೆಯ ನಲ್ನುಡಿಯ ಸೊಗಸೇನರಳುತ್ತಲೇ ಇರುವೆತಿರಸ್ಕಾರದ ತೇರು ಹೂಮುಡಿಯಲ್ಲಿ ಹೊತ್ತುಆಯಾಸ ಬಳಲಿಕೆಗಳಮೈ ತುಂಬಾ ಹೊದ್ದು ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನಪ್ರೀತಿಯ ಆಳದಲ್ಲಿ ಬಿದ್ದುಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನಮೋಹದ ಸದ್ದುಸದ್ದಾಗಿಯೇ ಉಳಿದುಹೋದೆ. ನೆಮಿಸೆಸ್ ನಿನ್ನ ನೋವಿಗೆ ಮಿಡಿದಳುನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡುಮರುಳಾಗುವಂತೆ ಮಾಡಿದಳು.ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.ಈಗ ಜಗದ ತುಂಬಾ ಅವನಂತೆಸುರ ಸುಂದರಾಂಗರು,ಪ್ರೀತಿಯ ನೆಪದಲ್ಲಿ ತಮ್ಮ ಹೊರತುಯಾರನ್ನೂ ಪ್ರೀತಿಸರುತಮ್ಮದೇ ಸಾಮ್ರಾಜ್ಯದ ಸುಖದಲ್ಲಿಇತರರ ಸುಖಕಾಣದವರು.ಇಕೋ, ಅಪಾತ್ರನ ಪಾಲಾದ ಪ್ರೀತಿಪಲ್ಲವಿಸಿಸುವುದೆಂತು,ಕಾದಿರುಳು ಕಣ್ಣು ಮುಚ್ಚದೇನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆಅರಿವಿಲ್ಲದೇ ಬಳಿದ ನನ್ನ ಕೆಂಪುತುಟಿರಂಗು ಇನ್ನೂ ಹಸಿಹಸಿಆಗಿಯೇ ಇದೆಇಳಿಸಂಜೆಗೆ ಹಬ್ಬಿದ ತೆಳುಮಂಜಿನಂತಹ ಹುಡುಗಮಸುಕಾಗದ ಕನಸೊಂದುಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆಭವದ ಹಂಗು ತೊರೆದೆಮುಖ ನೋಡದೇಮಧುರಭಾವಕ್ಕೆ ಮನನೆಟ್ಟುಒಳಹೃದಯದ ಕವಾಟವಒಪ್ಪಗೊಳಿಸಿ ಮುಗ್ಧಳಾದೆಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದಬರಡಾದ ಒರತೆಗೂ ಹಸಿಹಸಿ ಬಯಕೆಒಣಗಿದ ಎದೆಗೂ ಲಗ್ಗೆ ಇಡುವಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ?ಈ ತಂಗಾಳಿಯೂ ತೀರದ ದಿಗಿಲುಹತ್ತಿಸಿಕೊಂಡ ಏಕಾಂಗಿ ಮೃಗದಂತೆಸುಂಯ್ಯನೇ ಹಾಗೇ ಬಂದುಹೀಗೆ ಹೊರಟುಹೋಗುತ್ತದೆಮರೆತ ಕನಸುಗಳಿಗೆ ಕಡಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲಹಸಿಮನಗಳಲಿಹುಸಿ ಬಯಕೆಗಳಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ?ಕಂಪು ಹೆಚ್ಚಾಗಿ ಜೋಂಪುಹತ್ತಿದೆ, ಕಣ್ಣುಗಳು ಮತ್ತೇರಿಪಾಪೆಯೊಳಗೆ ಮುದುರಿದೆಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕುಹಚ್ಚುವ ನಿನ್ನ ಬಿಂಬವಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿನಿಂತ ಬೆಳಕ ಕಿರಣಕಣ್ಣ ಕಾಡಿಗೆಯ ಕಪ್ಪು,ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆಬಣ್ಣ ಬಳಿದೆ. ಮುದ್ದು ಹುಡುಗ,ಹೀಗಾಗೇ ದಿನಗಳೆದಂತೆನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು *************************************

ನಾಗರೇಖಾ ಕಾವ್ಯಗುಚ್ಚ Read Post »

ಕಾವ್ಯಯಾನ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ ನೆನಪುಗಳೇ…… ಬೆಳ್ಳಂಬೆಳಗು ನಸುನಕ್ಕುಮತ್ತೆ ಬಂದಿಹೆನೆಂಬ ಹೊತ್ತಲ್ಲಿಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿವರ್ತಮಾನವ ಕದಡದಿರಿಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿನೋವು ನಲಿವುಗಳ ಚಿತ್ತಾರದ ರಂಗೋಲಿಹಾಲುಕ್ಕಿ ಹರಿದ ಬದುಕಿನಲಿಒಂದೊಂದೇ ಪಾರಿಜಾತಗಳು ಜಾರಿ ಉದುರಿಭೂತದ ನೆರಳುಗಳಿಗೆ ಇಂದುಹೊಸರೆಕ್ಕೆ ಕಟ್ಟಿಅಗಲಿಕೆಯ ನೋವು, ವಿರಹದ ಕಾವುತುಂಬಿಹ ಬೆಂಗಾಡಿನಮಾಯೆ ಮರುಳಿಗೆ ಹೊತ್ತೊಯ್ಯದಿರಿಬರಗಾಲದ ಬಿರು ಬಿಸಿಲಿಗೆನಿಡುಸುಯ್ದ ಈ ಇಹಕ್ಕೆಮರಳಿ ಅರಳುವ ಬಯಕೆನೀರು ಹುಯ್ಯುವವರಿಲ್ಲಒಂಟಿ ಮರಕ್ಕೆಸಂಜೆ ಗಾಳಿಯ ಹಿತಆಳಕ್ಕೆ ಇರಿದ ಕೆಂಪಿನಲಿಮನಸ್ಸರಳಿ ಹಿತವಾಗಿ ನರಳುತ್ತದೆಅವನೆದೆ ಕಾವಿನಲಿ ಕರಗುತ್ತದೆಸೆಟೆದ ನರನಾಡಿಗಳು ಅದುರಿಹಗುರಾಗಿ ಬಿಡುತ್ತವೆಕೂಡಿ ಕಳೆದುಹೋಗುವ ತವಕದಲಿಕಣ್ಣೆವೆ ಭಾರವಾಗುವ ಹೊತ್ತಲ್ಲಿನಿಮ್ಮ ಒತ್ತಾಸೆಯಿರಲಿ ನನಗೆನನ್ನ ಬಿಡದಿರಿ,ಬಿಡದೆ ಕಾಡದಿರಿಅಣಕಿಸದಿರಿ ನೆನಪುಗಳೆ, ಬದುಕಿದುಎಪ್ಪತ್ತರಲಿ ಒಂಟಿ ಮುದುಕಿ. ಭಿಕ್ಷೆಗೆ ಬೀಳದ ಬದ್ಧತೆ… ಬೊಂಬೆಯಂತ ಬೊಂಬೆ ಮಗುವ ಬಟ್ಟೆಯಲಿ ಸುತ್ತಿಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲಹೆಂಗಸೊಬ್ಬಳುಕಾರ ಕಿಟಕಿಗೆ ಮೈ ತಾಗಿಸಿಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆನಿರೀಕ್ಷೆಯಿಲ್ಲದ ಕಣ್ಣುಗಳಆಚೀಚೆ ಸರಿಸುತ್ತ ಮುಂದೆ ಯಾರೆಂದುಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳುಕೊನೆಯಲಿ ಒಂದೇ ಇರಬೇಕು..ಹೊಟ್ಟೆಪಾಡು, ಕೈ ಗಳ ಜೋಲಿ ಹಾಡುಇಷ್ಟಕ್ಕೇ ಮುಗಿಯುತ್ತಿರಬೇಕು… ದಣಿವಿರದೆ ದುಡಿದ ಇಪ್ಪತ್ತು ವರ್ಷಗಳಕಾಲೇಜಿನಲಿ ಕಳೆದ ಹತ್ತು ವರ್ಷಗಳಮನೆದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿಹತ್ತು, ನೂರು,ಸಾವಿರದ ನೋಟುಗಳತಡಕುತ್ತ ಅಂಜುತ್ತೇನೆ, ಕೊನೆ ಎಲ್ಲಿಗೆ? “ಬರುತ್ತೀಯೇನು ಕೊಡುತ್ತೇನೆಊಟ, ಬಟ್ಟೆ, ದುಡ್ಡು, ಕೆಲಸಪುಟ್ಟಮಗುವಿಗೆ ಆಟದ ಸಾಮಾನುಶಾಲೆಯ ಜೊತೆ , ತೂಗಲು ಆಶೆಯ ಕಮಾನು? “ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆಮುಖ ತಿರುವಿ ನಡೆಯುತ್ತಾಳೆಇರದಿರುವುದು ಎಂದೋ ಕಳೆದ ನಂಬಿಕೆಯೇ?ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನಭಾರೀ ಸೆಳೆತವೆ?ತೋರದೆ ಬೆಪ್ಪಾಗುತ್ತೇನೆಮುಂದಿರುವ ಡ್ರೈವರು ಮೀಸೆಯಡಿನಗುವ ತಡೆಹಿಡಿದು ಮುಚ್ಚಿಡುವಾಗಪ್ರಶ್ನೆಗಳು ಮಿನುಗುತ್ತವೆಆದರ್ಶಗಳು ಅಳ್ಳಕವೆ ?ಭಿಕ್ಷೆಯ ಕೈಗಳಿಗೆ ಚಾಚಿದಸಹಾಯ ಹಸ್ತ ಇಷ್ಟು ನಿರರ್ಥಕವೆ?ಬಂಧನಗಳಿಲ್ಲದ ಅವಳ ಬದುಕಿನಲಿಬದ್ಧತೆಯ ಕೇಳಿದ ನನ್ನಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ ! ಗಾಳ ಹಾಕಿ ಕೂತ ಮನಸು…. ಗಾಳ ಹಾಕಿ ಕೂತ ಮನಸಜಾಳು ಜಾಳು ಬಲೆಯ ತುಂಬಸಿಕ್ಕ ನೆನಪುಗಳು ವಿಲ ವಿಲಪರ್ವತಗಳು ಪುಡಿಯಾಗಿ ಸಿಡಿದುಹಡೆದ ಮರುಭೂಮಿಯಲ್ಲಿಸೂರ್ಯ ಉರಿದು ಕರಗಿನಡುಗಿ ಇಳಿಯುತಿರುವಲ್ಲಿಕಡುಗಪ್ಪು ಬಣ್ಣದ ವೃತ್ತಭುವಿಯ ಕುದಿಯೆಲ್ಲ ಉಕ್ಕಿರಂಧ್ರಗನ್ನಡಿ ಕೊರೆದು ಕಣ್ಣೀರಿನಲಿಸೃಷ್ಟಿಸಿದಂತಹ ಪುಟ್ಟ ಕೊಳಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲದಂಡೆಯಿರದ ತೀರಬೇರೊಂದು ಲೋಕಕ್ಕೆ ಒಯ್ಯಲುತೆರೆದಂತೆ ಬಾಗಿಲಾಗಿ ಕರೆವಲ್ಲಿತಲೆ ಮೇಲೆತ್ತಿ ನೋಡಲುಆಗಸದಲಿ ಮೋಡ, ತಾರೆಗಳಿಲ್ಲಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆದಶಕಗಳಿಗೂ ಮುಂಚೆಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿಒಂದು ಬಾಗಿ ನನ್ನ ತಲೆ ಸವರಿದಂತೆಹಿಡಿದು ಬಿಡಲು ಸೆಣೆಸುತ್ತೇನೆಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತುಆತಿಡಿದು ಜೋತುಬೀಳಲು ಮನಸಿನಲಿಕನಸುಗಳು ಗೂಡು ಕಟ್ಟಲಾಗಲಿಲ್ಲಮತ್ತೇನೋ ತಡಕುತ್ತದೆ ಬಹುಆಳದ ತಳದಲ್ಲಿ ಭಾರೀ ತೂಕದ ವಸ್ತುಅದರ ನೆನಪೆಲ್ಲ ಹೇಳುವುದು ದುಃಖದಕತೆ, ಅಳಲು, ಅಸಹಾಯಕತೆಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿಒಳಗಿಳಿದು ನೋಡಿದರೆ ನನ್ನದೇ ಕಥೆಹೋಗಿ ಸೇರಲು ರಸ್ತೆ ಕಡಿದುಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿಕತ್ತಲು ಸೂರ್ಯನ ಕರಗಿಸಿಬಾನನ್ನು ತಿಂದು ತೇಗಿಪ್ರೇತದಂತಹ ಚಂದ್ರನ ತೂಗುಬಿಟ್ಟಿದೆಗಾಳವನು ಸರಕ್ಕನೆ ಎಳೆದು ತಲೆಯೆತ್ತಿದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿಗಾಳವೆಸೆದು ಕೂರುತ್ತೇನೆ ಮತ್ತೆಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ…. *****************

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ Read Post »

ಕಾವ್ಯಯಾನ

ಅರ್ಪಣಾ ಮೂರ್ತಿ ಕಾವ್ಯಗುಚ್ಛ

ಅರ್ಪಣಾ ಮೂರ್ತಿ ಕಾವ್ಯಗುಚ್ಛ ಕವಿತೆ-ಒಂದು ಸದ್ದುಗದ್ದಲದಬೀದಿಯ ಬದಿಯಬೇಲಿಯ ಹೂಅರಳುವ ಸದ್ದಿಗೆಕಿವಿಯಾಗುವಉತ್ಸುಕತೆ,ಹೂ ಬಾಡಿದಷ್ಟೂಚಿಗುರುತಿದೆ, ಹರಿವನದಿಗಳೆಲ್ಲದರ ಗಮ್ಯಸಾಗರವೇ ಆಗಬೇಕಿಲ್ಲ,ಸಮುದ್ರ ಸೇರುವಮೊದಲೇಭುವಿಯೊಳಗೆ ಇಂಗಿದಅದೆಷ್ಟೋ ನದಿಗಳಆರ್ದ್ರತೆಯ ಗುರುತುಗಳುಕಾಲ್ಮೆತ್ತಿವೆ, ಮೈಸುತ್ತಿದ ನೂಲುತೆರಣಿಯ ಹುಳವನುಂಗಲೇಬೇಕಿಲ್ಲ,ರೇಷಿಮೆಯರೆಕ್ಕೆಯಂಟಿಸಿಕೊಂಡಚಿಟ್ಟೆಹೂವಿನ ತೆಕ್ಕೆಯಲಿನಾಚಿದ ಬಣ್ಣಹೂದಳದ ಮೈಗಂಟಿದೆ, ಕತ್ತಲಿಗಂಟಿದಕನಸುಗಳೆಲ್ಲಕಣ್ಣೊಳಗುಳಿಯುವುದಿಲ್ಲ,ಕನಸು ನುಂಗಿದಅದೆಷ್ಟೋ ಹಗಲುಗಳುನನಸಿಗೆ ಮುಖ ಮಾಡಿನಿಂತಿವೆ…. ಕವಿತೆ-ಎರಡು ನದಿ ತುಂಬಿ ಹರಿದರೆಬಯಲಿಗೆ ನೆಲೆಯೆಲ್ಲಿ,ಬತ್ತಬೇಕುಬರಿದಾಗಬೇಕುಬಯಲಾಗಬೇಕು,ಬರದ ಬದುಕಿನ ಒಳಗೂಇಳಿಯಬೇಕು, ಧರೆ ಕಾದು ಕರಗದೆಮಳೆಯ ಸೊಗಸೆಲ್ಲಿ,ಕಾಯಬೇಕುಕಾದು ಕರಗಬೇಕು,ಮುಗಿಲೇರಿ ಹನಿಕಟ್ಟಿಹನಿಯಬೇಕುಇಳೆ ತಣಿಯಬೇಕು, ಇರುಳು ಕವಿಯದೆಹುಣ್ಣಿಮೆಗೆ ಹೊಳಪೆಲ್ಲಿ,ಕಪ್ಪು ಕತ್ತಲ ನೆಪವುಕಣ್ಣ ಕಟ್ಟಬೇಕು,ರೆಪ್ಪೆ ಮುಟ್ಟಬೇಕುಕನಸು ಹುಟ್ಟಬೇಕು… ಕವಿತೆ-ಮೂರು ಉಸಿರುಗಟ್ಟಿದಮರುಭೂಮಿಯಲಿಬಿರುಗಾಳಿಯಹುಡುಕುವಬರಡುಮರಳ ಹಾಸುಚಿಲುಮೆ ನೀರನುಗುಟುಕಿಸಿಉಸಿರ ಹಿಡಿದುತಂಪು ಗಾಳಿಯಕಾಯುವುದೂಒಲವೇ, ಹಾಯಿದೋಣಿಹಾಯಲಿಲ್ಲನಿಂತ ನೀರ ಕಡಲಲಿ,ಅಲೆಗಳ ನೆಪವೊಡ್ಡಿಸೆಳೆದೊಯ್ಯುವಕಡಲ ಸಂಚಿಗೆನಿಂತುಮುನಿಯುವುದೂಒಲವೇ, ಬೆಳಕು ಮಲಗುವಾಗಎಚ್ಚರಾದ ಇರುಳು,ಚುಕ್ಕಿಗಳ ಬದಿಗಿರಿಸಿಚಂದಿರನ ಹುಡುಕುವಕತ್ತಲ ಮೌನದನೀರವತೆಯೂಒಲವೇ……. *********************************

ಅರ್ಪಣಾ ಮೂರ್ತಿ ಕಾವ್ಯಗುಚ್ಛ Read Post »

ಕಾವ್ಯಯಾನ

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ ಹನಿ ಹನಿ ಟ್ರ್ಯಾಪ್ — ಮೆಸೇಜು ವಾಟ್ಸಾಪು ಫೇಸ್ಬುಕ್ಕುಮುಂತೆಲ್ಲ ಮಾಧ್ಯಮಗಳ ತಿಪ್ಪಿಗುಂಡಿಗೆಸೆಯಲುಮೋಹಕ ಪಲ್ಲಕ್ಕಿಯೊಳಗೆ ಶೃಂಗಾರಗೊಳಿಸಿದ ಹೆಣ ಬೀಳಿಸಲು ಗುಟು ಗುಟು ಸುರೆ ಕುಡಿಸಿಪೋಸ್ಟ್ ಮಾರ್ಟಮ್ಮನಕುಟುಕು ಕಾರ್ಯಾಚರಣೆ ನಡೆಸಿಹನಿ ಟ್ರ್ಯಾಪ್ ಹಾಸಿ ಮಲಗಿಸಿದ್ದಾರೆ ನಿದ್ದೆ ಎಚ್ಚರ ಅಳು ನಗು ಮಾತಿನ ಸರಸ ವಿರಸ ಕಲ್ಪನೆಗಳ ವಿಹಾರ ವಿಕಾರ ಎಲ್ಲ ಮಾತ್ರೆಗಳ ಡಬ್ಬ ಹತ್ತಿರವೇ ಇಟ್ಟು ಹನಿಟ್ರ್ಯಾಪ್ದಿಂಬಿಗೊರಗಿಸಿ ಮಲಗಿಸಿದ್ದಾರೆಮಾತ್ರೆಗಳ ಮೂಸಿನೋಡಿದರಷ್ಟೇ ಸಾಕಿಲ್ಲಿಸತ್ತ ನರನಾಡಿಗಳ ಸುತ್ತ ಉಳಿದಿರುವಜೀವವೊಂದು ಅನಾಥವಾಗಿಸಲು ನರಿಜಪದ ಭಂಟರಲ್ಲಿ ಸುಳಿದು ಸುತ್ತಿಹತ್ತಿರ ಬಂದು ಸಂದಿ ಗೊಂದಿ ಹಾದುಮನೆ ಕಚೇರಿ ಎಲ್ಲೆಲ್ಲೂ ಜೊತೆ ಬಂದುಎಂಥ ಬಲ ಕದಿಯುವರುವಾಸನೆ ತಿಳಿದು ಒಳ ಸೇರಿದ ಕಳ್ಳಗಿವಿಗಳುಗಾಳಹಾಕಿ ಹಿಡಿವ ರಣ ಹದ್ದುಗಳು ಎಂಜಲು ನೆಕ್ಕಿ ಜೊಲ್ಲಿಗೆ ಬೊಗಸೆಚಾಚಿಕಾಸಿಗೆ ಕೈಚೀಲ ಹಿಡಿದ ನಿಶಾಚರಿಗಳುಮೋಹನ ಮೋಹಿನಿಯರ ದಂಡುಪಾಳ್ಯತಂತ್ರ ಮಂತ್ರಗಾರರ ವೇಷಧಾರಿಗಳುಪ್ರತಿಭೆ ಕಾಯಕಗಳ ರುಂಡ ಹಾರಿಸಿಕೀರ್ತಿಗರಿಗಳ ಗಾಳಿಪಟವಾಗಿಸಿಕತೆಕಟ್ಟಿ ಬಣ್ಣ ಮೆತ್ತಿಸಿ ಎದೆಯೊಡೆದು ನೀರಾಗಿಸಿಕಣ್ಣೀರು ತುಳುಕಿಸಿ ಕರಿನೆತ್ತರ ಕಕ್ಕಿಸಿಕುಡಿದ ರಕ್ತ ಪಿಪಾಸುಗಳುದೂರ ಕಣ್ಣಿಟ್ಟಿವೆ ಎಲ್ಲ ಹನಿ ಹನಿ ಟ್ರ್ಯಾಪ್ ಗಟ್ಟಿ ತಿಮಿಂಗಿಲಗಳು ಸ್ಟಾರ್ ಫಿಶ್ಗಳು ಬಲೆ ಹರಿದುಅಬ್ಬರದ ಅಲೆಗಳಿಗೆ ಜಗ್ಗದೇ ಜಿಗಿದುಕಳ್ಳ ಬೆಕ್ಕುಗಳ ಬಾಲ ಸುಟ್ಟು ಥಕ ಥಕಕುಣಿಸಿದ್ದಾರೆ ಈಗಷ್ಟೇ ಇಲ್ಲೆಲ್ಲೊ ಅವಿತಿದ್ದನನ್ನೊಳಗಿನ ಕುಸುಮಬಾಲೆಯಾಗಿದ್ದ ಕವಿತೆಬೆಂಕಿಜ್ವಾಲೆಯಾಗಿದ್ದಾಳೆ ಎಲ್ಲ ಹನಿ ಹನಿ ಟ್ರ್ಯಾಪ್ ನಾದಗಾಮಿಗಾಮಿನಿಿ– ಸುಲಭದಲಿ ಒಲಿಯದು ಒಲುಮೆಗಾನತೊತ್ತಾದರಷ್ಟೇ ಒಲವುಗಾನನೆನಪಾಗಿ ಹೊರಟಂತೆ.ನಿನ್ನನ್ನೇ ಮರೆತೆಒಲುಮೆ ಸಂಗೀತಕೆ ಕಾಮನಬಿಲ್ಲುಕಟ್ಟಲು ಹೊರಟೆ ಸಂಜೆ ಸಂಗೀತ ಮೃದಂಗ ಮೇಳಕೆಭಾವ ಕಡಲಿಗೆ ಭಾರ ಇಳಿಸಲುರಾಗದೊಡೆಯನಿದಿರು ಒಡಲುಇಳುಹಲು ಹೊರಟೆ ಸಂಗೀತ ಸುಂದರನಲ್ಲಿ ಶರಣೆಂದು ನಿಂದಂತೆಗುರು ಹೇಳಿದಂತೆ ಶ್ರುತಿ ಹಿಡಿಯಲು ಹೊರಟೆಗಾನ ಗಂಧರ್ವನಿಗೆ ಒಲಿದು ಹೊರಟೆ ಕಲೆಗೆ ತೊತ್ತಾಗಲು ಕಲೆಯ ಆಳಾಗಲು ಹೊರಟೆಸಂಗೀತ ಸಾಧಕನ ನೆರಳಾಗಿಯಕ್ಷಲೋಕದ ಗಂಧರ್ವಕನ್ಯೆಯಾಗಲು ಹೊರಟೆಸಪ್ತಸ್ವರದ ನಾದ ಹೊಮ್ಮಿಸಲು ಹೊರಟೆ ಶರಧಿಯಲಿ ಮುಳುಗಿದರೆ ಮೇಲೇರಿ ಬರದಂತೆಸಾಗರದ ಒಡಲಿಗೆ ಕಿವಿಗೊಟ್ಟು ಹೊರಟೆಅಮೃತಧಾರೆಯ ಅಮೃತಮತಿ !ಲೋಕದೆಲ್ಲೆಯ ವಿಷ ನೋಡದೇ ಹೊರಟೆ ಕಲೆಯೊಳಗೆ ಕಲೆಯಾಗಲು ಹೊರಟೆಮಧುಬನಕೆ ಅಮೃತಕಲಶ ಹೊತ್ತು ಹೊರಟೆಕಲೆಯ ಸಾರ್ವಭೌಮತ್ವ ಸಾರಲು ಹೊರಟೆಸುಖದ ನಶ್ವರತೆ ಅರಿಯಲು ಹೊರಟೆ ಬದುಕಿನ ಸತ್ವ ಬರೆಯಲು ಹೊರಟೆಕಲಾಕಾರರಂತೆ ಬದುಕಲು ಹೊರಟೆಯಶೋಧರತ್ವ ಅಳಿಯಲು ಹೊರಟೆ ಸಾಗರದ ಸೆರಗು ಸೇರಲುಭೂಮಿಯ ಹಂಗು ಹರಿದು ಹೊರಟೆನಾದನಡೆಯ ಅಮೃತಮತಿನಾದಗಂಧವಾಗಲು ಹೊರಟೆ ಭೂಮಿ ತಾಪ — ನಾನಿಲ್ಲಿ ತಪ್ಪು ಮಾಡಿದರೆಆ ಸೂರ್ಯನಿಗೆ ಕೆಂಡದಂತ ಕೋಪವಂತೆಹೆದರೆ ಆ ಭಂಡನ ಕೆಂಡ ಕೋಪಕ್ಕೆನನ್ನೊಳಗಿನ ಬೆಳಗು ಕಳೆಯದ ತನಕ ಅವನೇಕೆ ತಪ್ಪು ಮಾಡುತ್ತಾನಂತೆಪೂರ್ವದಲ್ಲಿ ಹುಟ್ಟುವುದುಪಶ್ಚಿಮದಲ್ಲಿ ಸಾಯುವುದುಅದಕ್ಕೂ ನಾನೇ ಕಾರಣವಂತೆಪೆದ್ದನ ಸಿದ್ಧ ಉತ್ತರ ಅವನ ಹುಟ್ಟಿಗೆ ನಾನ್ಹೇಗೆ ಹೊಣೆಅವನ ಸಾವಿಗೂ ನಾನೇಕೆ ಚಿತೆಬೇಕೇ ಬೇರೆಯವರ ಕಾಯುವುದಕ್ಕೆಜೀವಮಾನದ ತಪಸ್ಸು ಇವನ ಕತ್ತಲು ಬೆಳಕಿನಕಾಲಜ್ಞಾನ ಹಿಡಿತಕ್ಕೆನನ್ನ ರೂಪ ನನಗೇ ನೋಡಲಾಗದೆಉರುಳುತ್ತಿದ್ದೇನೆ ಚಕ್ರವಾಗಿವಿರಾಮಶೂನ್ಯಳಾಗಿ ಅವನ ತಪ್ಪಿಗೆ ನನಗೆ ಶಿಕ್ಷೆಇಲ್ಲಿ ನಾ ಹೆತ್ತ ಹೆಣ್ಣುಗಳ ಶಾಪನಾನೇ ಹೊತ್ತು ನೊಂದಿದ್ದೇನೆಅವನ ತಪ್ಪಿಗೆ ನಾ ಉರಿಯುತ್ತಿದ್ದೇನೆಪ್ರಳಯಕ್ಕಾಗಿ ಕಾಯುತ್ತಿದ್ದೇನೆ *************************************

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ Read Post »

ಕಾವ್ಯಯಾನ

ನೂತನಾ ಕಾವ್ಯಗುಚ್ಛ

ನೂತನಾ ದೋಶೆಟ್ಟಿ ಕಾವ್ಯಗುಚ್ಛ ಬಟ್ಟಲ ತಳದ ಸಕ್ಕರೆ ಬಟ್ಟಲಲ್ಲಿ ಆಗಷ್ಟೇ ಕಾಯಿಸಿದಬಿಸಿ ಹಾಲುಜೊತೆಗೆ ತುಸು ಸಕ್ಕರೆಹಿತವಾದ ಮಿಲನವಸವಿಯುವ ಪರಿ ಸುಖವೇ ಸಾಕಾರವಾಗಿಬೆಳದಿಂಗಳೊಡಗೂಡಿದತಂಗಾಳಿಯ ಪಯಣಮೆತ್ತನೆಯ ಹಾಸುಕರೆವ ಕೆಂಪು ಹೂಗಳ ಗುಂಪುಕಾಮನ ಬಿಲ್ಲಿಗೂ ಬಣ್ಣ ತುಂಬುವುದೇ? ಬಟ್ಟಲು ಬರಿದಾದಾಗತಳದಲ್ಲುಳಿದ ತುಸುಸಕ್ಕರೆಯನ್ನೇತುದಿ ಬೆರಳಿನಿಂದ ಸವರಿಮೆಲ್ಲಗೆ ಹೀರಿದಾಗಖಾಲಿಯಾಗುವ ಭಯ ಕಾಲನ ದಾರಿಗುಂಟಸವೆಯಬೇಕಾದ ಹಾದಿಮೂಡಿ ಮಸುಕಾಗಿರುವಹೆಜ್ಜೆ ಗುರುತುಬಟ್ಟಲ ತಳದಸಕ್ಕರೆಯಂತೆ. ನಿನಗೆ ನೀನೇ ಸರಿಸಾಟಿ ಮನಸೊಂದುಮಲ್ಲಿಗೆ ಹೂಅಂಗಳದ ಬೆಳ್ಳಿ ರಂಗೋಲಿಅರಳಿದಾಗಬಣ್ಣ ಬಣ್ಣದ ಹೂಗಳಓಕುಳಿಬಿರಿದು ನಕ್ಕಾಗಬಾನ ಚಿಕ್ಕೆಗಳಚೆಲ್ಲಾಟದ ಪರಿ ಮನಸ್ಸೊಂದುಕೋಗಿಲೆಯ ಕೊರಳ ಇಂಪುಕರೆವ ಮಾಘದ ಮಧುರ ಪೆಂಪುಮೌನದ ಮೆಲ್ಲುಸಿರಕರೆಗೆ ಬಾಗುವ ಕ್ಷಣಗೆಜ್ಜೆಯ ಝಣ ಝಣನಾದ ಲಯ ತಾಣ ಮನಸ್ಸೊಂದುಹರಿವ ನೀರ ಬದಿಯ.ಪುಟ್ಟ ಹೂಗಳು ಗುಂಪುಮೆತ್ತಗೆ ಸೋಕಿದಕೈಯ ಕಚಗುಳಿಗೆಅದುರುವನಾಜೂಕು ನವಿರು ಭಾವ ಮನಸ್ಸೊಂದುಬೆಳದಿಂಗಳ ಇರುಳ ಶಾಂತಿಕಣ್ಣು ಮುಚ್ಚಾಲೆಯಾಡುವಚಂದ್ರನ ಬಿಸಿಯುಸಿರುಪುಟ್ಟ ಕಂದನ ಕಿಲ ಕಿಲ ನಗುಕಿಶೋರಿಯ ಬೆಡಗುಅವನು ನೋಟದ ತಣ್ಪು ಮನಸೇನಿನಗೆ ನೀನೇ ಸರಿಸಾಟಿ. ಮಾತೆಂದರೆ ಏನು ಗೂಗಲ್’ ಜಗಮಗಿಸುವ ದೀಪಗಳು ನಗುತ್ತಿವೆಹಾಗೆ ಅನ್ನಿಸುತ್ತಿರಬಹುದೆ?ನದಿಗಳ ಕಣ್ಣೀರು ಕಾಣದಷ್ಟುದೂರದಲ್ಲಿವೆ ಅವು ಮುಗಿಲೆತ್ತರದ ಸಿಮೆಂಟು ಗೋರಿಗಳಲ್ಲಿಸುಖವೋ ಸುಖಹಾಗೆ ಅನ್ನಿಸುತ್ತಿರಬಹುದೆ?ಗುಬ್ಬಿಗಳು ಚದುರಿವೆ ಕಾಗೆಗಳು ಬೆದರಿವೆಉಸಿರಾಡದ ಹಸುರಿಗೆ ಸೋಂಕು ರೋಗ ತಣ್ಣನೆಯ ಗಾಳಿಯೆಂದರೆ ತಾನೆಏರ್ ಕಂಡೀಷನ್ನಿಗೆ ಅನ್ನಿಸಿರಬಹುದೆ?ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ ಅವನಿಗೆ ಕತೆ ಹೇಳಲೆಬಾಯಿಪಾಠ ಮಾಡಿಸಲೇಅಜ್ಜಿಗೆ ಅನ್ನಿಸಿರಬಹುದೆ?ಮಾತೆಂದರೆ ಏನು ಗೂಗಲ್ಮೊಮ್ಮಗು ಕೇಳುತ್ತದೆ. ನಾನು ಹೀಗಿದ್ದೆನೆಬದಲಾಗಿಬಿಟ್ಟೆನೆಮಾತಿಗೆ ಅನ್ನಿಸಿರಬಹುದೆ?ಮೈಂಡ್ ಯುವರ್ ಲ್ಯಾಂಗ್ವೇಜ್ಹೆಂಡತಿ ಹೇಳುತ್ತಾಳೆಯೂ ಬಿಚ್ ಎನ್ನುತ್ತಾನೆ ಗಂಡ. ಪಬ್ಬು ಬಾರುಗಳಲ್ಲಿಆ ಹುಡುಗಿಯ ಕುಲುಕಿಗೂ ಬೆಲೆ ಕಟ್ಟುತ್ತಾರೆಹಾಗೆ ಅನ್ನಿಸುತ್ತಿರಬಹುದೆ?ಮನೆಯಲ್ಲಿ ಸೂರೆ ಹೋಗುತ್ತಿರುವ ಸುಖ ಅಣಕಿಸುತ್ತಿದೆ. ಮೌನ ದುಃಖಿಸುತ್ತಿದೆಯೊನಗುತ್ತಿದೆಯೊ?ಕಳೆದುಕೊಳ್ಳುವುದು ದುಃಖಪಡೆಯುವುದು ಸಂತಸವೇಏನು ಕಳೆದದ್ದುಯಾವುದು ಪಡೆದದ್ದು !! ******************************

ನೂತನಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರಾಜ ಹರಪನಹಳ್ಳಿ

ನಾಗರಾಜಹರಪನಹಳ್ಳಿ ಕಾವ್ಯಗುಚ್ಛ ಬೆರಳ ತುದಿಗೆ ಕರುಣೆ ಪಿಸುಗುಡುವತನಕ ಕಟ್ಟೆಯ ಮೇಲೆ ಕುಳಿತದ್ದಕ್ಕಕೊಲೆಯಾಯಿತುಉಗ್ಗಿದ ಖಾರದ ಪುಡಿಗೆಇರಿದ ಚೂರಿಗೆಕಣ್ಣು ಕರುಣೆ ಇರಲಿಲ್ಲ ಅಂತಿಂತಹ ಕಟ್ಟೆಯಲ್ಲಮಲ್ಲಿಕಾರ್ಜುನನ ಕಟ್ಟೆಇರಿದವ ಅಹಂಕಾರಿಇರಿಸಿಕೊಂಡದ್ದು ಸಮಾನತೆಒಂದು ಸವರ್ಣಧೀರ್ಘ ಸಂದಿಮತ್ತೊಂದು ಲೋಪಸಂದಿ ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು ಸ್ವತಃ ದೊರೆ ದೀರ್ಘಾಸನದಲ್ಲಿಶವಾಸನದಲ್ಲಿರುವಾಗಅಹಂಕಾರ ಊರ ಸುತ್ತಿದರೆಅಚ್ಚರಿಯೇನಿಲ್ಲ ಇಲ್ಲಿ ಎಲ್ಲರೂ ಬಾಯಿಗೆ ಬೀಗಜಡಿದು ಕೊಂಡಿರುವಾಗನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆಮತ್ತೊಮ್ಮೆ ಕರುಣೆಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕಇರಿದ ಚೂರಿಯ ತುದಿಗೆಹಿಡಿದ ಬೆರಳ ತುದಿಗೆ ಕರುಣೆಪಿಸುಗುಡುವತನಕ……….. ನಾವಿಬ್ಬರೂ ಮರವಾಗಿದ್ದೇವೆ ನಾವಿಬ್ಬರೂ ಮರವಾಗಿದ್ದೇವೆ ಇದು ನನ್ನ ಮೊದಲ ಹಾಗೂಕೊನೆಯ ಪದ್ಯವೆಂದು ಬರೆಯುವೆಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ? ಹೀಗೆ ಹೇಳಬಹುದು:ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ ಭ್ರಮಾತ್ಮಕ ಅಕ್ಷರ ಲೋಕದ‌ಖೂಳರ ನಾವಿಬ್ಬರೂ ಸೇರಿಒಂದನಿ ರಕ್ತ ಹರಿಸದೆಒಂದಕ್ಷರ ಬರೆಯದೇಮದ್ದು ಗುಂಡು ಸಿಡಿಸದೆಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ ಹು, ಈಗ ; ಕೊನೆಯ ಮಾತುಹಠಾತ್ ನಾ ಇಲ್ಲವಾದರೆಇದ್ದಲ್ಲೇ ಕಣ್ಣೀರಾಗು……… ಗೌರಿ ಮಾತಾಡಲಿಲ್ಲ ಗೌರಿಯನು ತಂದರುಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರುಗೌರಿ ಮಾತಾಡಲಿಲ್ಲಆಕೆ ಮೌನವಾಗಿದ್ದಳುಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳುಅದನ್ನೇ ಸಂಸ್ಕೃತಿ ಅಂದರುಭವ್ಯ ಪರಂಪರೆ ಎಂದರು ಗೌರಿಯ ಭಕ್ತಿ ಭಾವದಿಂದಪೂಜಿಸಿದರುದೀಪ ಹಚ್ಚಿದರುಸಿಹಿ ನೈವೇದ್ಯ ಮಾಡಿದರುನಮಸ್ಕರಿಸಿದರುಪಟಾಕಿ ಹೊಡೆದರುಭಜನೆ ಮಾಡಿದರುಗೌರಿ ಮಾತಾಡಲಿಲ್ಲಮೌನವಾಗಿದ್ದಳುಅದನ್ನು ಸಂಸ್ಕೃತಿ ಅಂದರು ಸಿಹಿ ಹಂಚಿ ತಿಂದರುಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರುಗೌರಿ ಆಗಲೂ ಮಾತಾಡಲಿಲ್ಲಅದನ್ನೇ ಸಂಸ್ಕೃತಿ ಎಂದರು ಮಣ್ಣು ಮಣ್ಣ‌ ಸೇರಿತ್ತು…********************************

ನಾಗರಾಜ ಹರಪನಹಳ್ಳಿ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು                        ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. ನಾವೆಲ್ಲ ನಿಂತ ಅನತಿ ದೂರದಲ್ಲಿ ಒಂದೆಡೆ ಜಾತ್ರೆಯ ತೇರಿನಂತೆ ಮರಕ್ಕೆ ಬಣ್ಣಬಣ್ಣದ ದೀಪ ವಿದ್ಯತ್ ಅಲಂಕಾರ ಮಾಡಿದಂತೆ ಕಾಣಿಸುತ್ತಿತ್ತು. ನನಗೋ ಅದು ಎಂದೂ ನೋಡಿರದ ದೃಶ್ಯ. ಮಾವನ ಮಗಳು ಮಾಲಕ್ಕನ ಬಳಿ ಅಕ್ಕಾ ಏನದು? ಎಂದೆ. ಮಾತನಾಡಿದರೆ ಈ ಧರೆಗಿಳಿದ ಸೌಂದರ್‍ಯ ಕರಗಿ ಹೋಗಬಹುದು ಎನ್ನುವ ಭಯ. ಆದರೆ ಆಕೆಗೆ ಅದು ಮಾಮೂಲು. ‘ಅದಾ ಮಿಂಚು ಹುಳ. ಮಳೆಗಾಲ ಹತ್ತಿರ ಬಂತಲ್ಲ? ಅದಕ್ಕೆ ಮಿಂಚು ಹುಳಗಳು ಮಳೆಗೆ ದಾರಿ ತೋರಸ್ತಾವೆ. ಎಂದಳು. ನನಗೆ ಅಷ್ಟು ದೂರದಿಂದ ಸೂಡಿಯ ಬೆಳಕಲ್ಲಿ ಮೈ ಮೇಲೆ ಬಂದ ದೇವರ ಆರ್ಭಟ ನೋಡುವ ಕುತೂಹಲ ಮುಗಿದು ಹೋಯ್ತು. ಕಣ್ಣೆದುರಿಗೇ ಧರೆಗಿಳಿದ ಅಮರಾವತಿಯನ್ನಿಟ್ಟುಕೊಂಡು, ಮಾತನಾಡಿದರೇ ಥಕಧಿಮಿಗುಡುವ ದೇವರನ್ನೇಕೆ ನೋಡಲು ಹೋಗಲಿ? ಅಂತೂ ದೇವರ ಕಳಸ ನಮ್ಮ ಮುಂದಿನಿಂದ ಧಪಧಪ ಹೆಜ್ಜೆ ಇಡುತ್ತ ಹೋಗುವಾಗ ಕೈ ಹಿಡಿದುಕೊಂಡಿದ್ದ ಮಾಲಕ್ಕ ನನ್ನನ್ನು ಎಳೆದುಕೊಂಡೇ ಹೊರಟಳು ಆದರೆ ನನಗೋ ಆ ಚಿತ್ತಾರ ಬಿಟ್ಟು ಬರುವ ಮನಸ್ಸಿರಲಿಲ್ಲ. ಇಂದಿನಂತೆ ಆಗೇನಾದರೂ ಕೈಯ್ಯಲ್ಲೊಂದು ಮೊಬೈಲ್ ಇದ್ದಿದ್ದರೆ ಅದೆಷ್ಟು ಫೋಟೊ ಹೊಡೆದು ಫೇಸ್‌ಬುಕ್‌ಗೆ ಹಾಕಿ ಏನೇನು ತಲೆಬರೆಹ ಕೊಡುತ್ತ ಎಷ್ಟೊಂದು ಲೈಕ್ ಗಿಟ್ಟಿಸಬಹುದಿತ್ತು ಎಂದು ಈಗಲೂ ಆ ದೃಶ್ಯವನ್ನು ನೆನಪಿಸಿಕೊಳ್ಳುವಾಗಲೆಲ್ಲ   ಅಂದುಕೊಳ್ಳುತ್ತೇನೆ. ಮತ್ತೆ ಆ ದೃಶ್ಯ ಈಗ ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ಪುಸ್ತಕ ಓದುವಾಗ ನೆನಪಿಗೆ ಬಂತು.         ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ನಮಗೆ ಹಲವಾರು ವಿಷಯಗಳನ್ನು ವಿವರಿಸುತ್ತ ಹೋಗುತ್ತವೆ. ಕಾಡು ಮತ್ತು ಮಾನವನ ಸಂಬಂಧದ ಕುರಿತಾದ ಅದ್ಭುತ ನುಡಿಚಿತ್ರವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ‘ಅರೆ ಹೌದಲ್ಲ? ಇದನ್ನು ನೋಡಿದ್ದರೂ ನಾವಿದನ್ನು ಗಮನಿಸಿಯೇ ಇರಲಿಲ್ಲವಲ್ಲ’ ಎಂಬ ಅದೆಷ್ಟೋ ಘಟನೆಗಳು ನಮ್ಮನ್ನು ಅಚ್ಚರಿಯ ಸುಳಿಗಾಳಿಗೆ ಸಿಲುಕಿಸುತ್ತವೆ. ಕಾಗೆಯ ಗೂಡಿಗೆ ಕಲ್ಲು ಹೊಡೆದು ತಿಂಗಳುಗಳಿಂದ ಮನೆಯಿಂದ ಹೊರಗೇ ಬರಲಾರದಂತೆ ಮಾಡಿಕೊಂಡ ಎಡವಷ್ಟು ನಮ್ಮ ಬಾಲ್ಯದಲ್ಲಿ ಅದೆಷ್ಟಿಲ್ಲ?  ಅದೆಷ್ಟೋ ಬೀಜಗಳ ಪೋಷನೆಯನ್ನು ಹೀಗೆ ಮಾಡಿದರೆ ಮಾತ್ರ ಮೊಳಕೆಯೊಡೆಯುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿಲ್ಲ ಹೇಳಿ. ಆದರೂ ನಾವು ಪರಿಸರವನ್ನು ಕೇವಲ ಸಸ್ಯಶಾಸ್ತ್ರೀಯ ಅಧ್ಯಯನಗಳಿಂದಲೇ ತಿಳಿದುಕೊಳ್ಳುವುದಕ್ಕೆ ಹೊರಡುತ್ತೇವೆಯೇ ಹೊರತೂ  ನಮ್ಮ ಜನಪದ ಜ್ಞಾನವನ್ನು ಇದಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಅದೆಷ್ಟು ಉದಾಹರಣೆಗಳು ಈ ಪುಸ್ತಕದಲ್ಲಿ ದೊರಕುತ್ತವೆಯೆಂದರೆ ಓದುತ್ತಿದ್ದರೆ ಒಮ್ಮೆ ನಗು, ಇನ್ನೊಮ್ಮೆ ವಿಷಾz, ಮತ್ತೊಮ್ಮೆ ಕೋಪ ಕೆಲವೊಮ್ಮೆ ಎಲ್ಲವೂ ಒತ್ತಟ್ಟಿಗೇ ಒಕ್ಕರಿಸಿಕೊಂಡು ಬರುತ್ತದೆ.                   ನಾವೆಲ್ಲ ಕಹಿ ಎಂದುಕೊಳ್ಳುವ, ವಿಷಕಾರಿ ಎಂದು ದೂರ ಇಡುವ ಕಾಸ್ನ (ಕಾಸರಕ) ಮರದ ವಿಶೇಷಣಗಳ ಬಗ್ಗೆ ಶಿವಾನಂದ ಕಳವೆಯವರು ಹೇಳುವಾಗ ಈ ಮರಕ್ಕೆ ಇಷ್ಟೆಲ್ಲ ಗುಣಗಳಿವೆಯೇ ಎಂದು ಅಚ್ಚರಿಯಾಗದೇ ಇರಲು ಸಾಧ್ಯವೇ ಇಲ್ಲ. ಹೆಂಡ ಇಳಿಸಲು ಬಳಸುವ ಬಗಿನೆ ಮರದ ಬೇರನ್ನು ಅಡಿಕೆಯ ಬದಲಾಗಿ ತಾಂಬೂಲ ಹಾಕಲು ಬಳಸಬಹುದಂತೆ ಎಂಬ ಮಾತಂತೂ ನನಗೆ ಹೊಸದು. ಆಗಾಗ ಹಬ್ಬ ಹಾಗೂ ಮನೆಯ ವಿಶೇಷ ಕಾರ್‍ಯಕ್ರಮಗಳಲ್ಲಿ ಮನೆಯ ಅಡಿಕೆ ಹಾಗೂ ಅದೇ ಮರಕ್ಕೆ ಹಬ್ಬಿದ್ದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬಾಯಿ ಕೆಂಪು ಮಾಡಿಕೊಳ್ಳುವ ನೀವು ದುರಾಭ್ಯಾಸವೆಂದರೆ ದುರಭ್ಯಾಸ, ಆರೋಗ್ಯಕರ ಎಂದರೆ ಆರೋಗ್ಯಕರವಾದ ನನ್ನ ಕವಳ ಹಾಕುವ ಚಟ ನೆನಪಿಗೆ ಬಂದು, ಈ ಬಾಡಿಗೆ ಮನೆಯಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕವಳ ಹಾಕಲಾಗದು ಎಂದು ಪರಿತಪಿಸುವಂತಾಗಿದ್ದು ಸುಳ್ಳಲ್ಲ.    ಅಂದಹಾಗೆ ಕಾಳಿನದಿ ಕಣಿವೆಯ ಶಿವಪುರ ಎಂಬ ಹಳ್ಳಿಯ ಬಾಗಿನಗದ್ದೆಯ ಅಡಕೆ ತೋಟದ ಪಕ್ಕದಲ್ಲಿರುವ ಹಾಲೆ ಮರದಡಿಯಲ್ಲಿ ಇಟ್ಟ ವೀಳ್ಯದ ಎಲೆ ವರ್ಷವಾದರೂ ಬಾಡುವುದಿಲ್ಲವಂತೆ. ಈ ಹಾಲೆ ಮರವನ್ನು ದೇವರ ಮರ ಎಂದು ಪೂಜಿಸುತ್ತಾರೆ ಆ ಭಾಗದವರು. ಆ ಮರದ ಬುಡದಲ್ಲಿ ಎಡೆಯಿಟ್ಟ ವೀಳ್ಯದ ಎಲೆಗಳು ಬೇರು ಬಿಟ್ಟು ಬಳ್ಳಿಗಳಾಗಿ ಆ ಮರಕ್ಕೇ ಹಬ್ಬಿಕೊಂಡಿದೆಯಂತೆ. ದೇವ-ದಾನವರು ಸಮುದ್ರ ಕಡೆದು ಸಿಕ್ಕ ಅಮೃತ ಕುಡಿದ ನಂತರ ಹೆಚ್ಚಾದ ಅಮೃತವನ್ನು ಗಜರಾಜನ ಕಂಬದ ಕೆಳಗಿಟ್ಟಿದ್ದರಂತೆ. ಆದರೆ ಗಜರಾಜ ಮದವೇರಿ ಆ ಅಮೃತದ ಕಲಶವನ್ನು ಒಡೆದನಂತೆ. ಹೀಗಾಗಿ ಆ ಒಡೆದ ಕಲಶ ಒಡೆದಲ್ಲಿ ಅಮೃತ ಚೆಲ್ಲಿ ಬೆಳೆದ ಬಳ್ಳಿಯೇ ನಾಗವಲ್ಲಿ ಅಂದರೆ ವೀಳ್ಯದ ಎಲೆ ಬಳ್ಳಿಗಳಂತೆ. ಅಂತೂ ಕವಳ ತಿನ್ನುವ ನನ್ನ ರೂಢಿ ಕೆಟ್ಟದ್ದಲ್ಲ ಎಂದು ಸಿಕ್ಕಾಗಲೆಲ್ಲ ಕವಳ ಹಾಕಿಯೇ ಮಾತಿಗೆ ತೊಡಗುವ ಶಿವಾನಂದ ಹೆಗಡೆಯವರು ಹೇಳಿ ನನ್ನ ದುಗುಡ ಕಡಿಮೆ ಮಾಡಿದ್ದಾರಾದರೂ ಹಾಲೆಮರ ಎಂದು ಕರೆಯಿಸಿಕೊಳ್ಳುವ ಸಪ್ತಪರ್ಣಿಯನ್ನು ಕಡಿದು ಆ ಮನೆತನವೇ ಊರು ಬಿಟ್ಟಿದ್ದು, ಅಲ್ಲಿನ ವೀಳ್ಯದ ಬಳ್ಳಿಗಳೂ ಒಣಗಿ ಹೋಗಿದ್ದನ್ನು ಹೇಳಿ ಒಂದಿಷ್ಟು ಚಿಂತೆಯನ್ನೂ ಜೊತೆಗೆ ಅದ್ಯಾವ ಕಾರಣಕ್ಕೆ ಹಾಗೆ ಆಗಿರಬಹುದು ಎನ್ನುವ ಕುತೂಹಲ ಮೂಡಿಸಿದ್ದಾರೆ. ನನ್ನ ಮುಂದಿನ ಕಾಡಿನ ವಾಸ ಕಂಡಿತಾ ಶಿಪುರದ ಸಮೀಪಕ್ಕೆ ನನ್ನನ್ನು ಕೊಂಡೊಯ್ಯಬಹುದು. ಯಾಕೆಂದರೆ ಈ ಹಾಲೆ ಮರದ ತೊಗಟೆಯನ್ನು ತಂದು ಕುದಿಸಿ ದೀಪಾವಳಿಯ ದಿನ ಬೆಳ್ಳಂಬೆಳಿಗ್ಗೆ ಮೈ ತುಂಬ ಅರಶಿಣ ಎಣ್ಣೆ ಲೇಪಿಸಿಕೊಂಡು ಹಾಲೆ ಕಷಾಯ ಕುಡಿಯುವ ಸಂಪ್ರದಾಯ ನಮ್ಮ ಜನಾಂಗದಲ್ಲಿದೆ. ಹೀಗಾಗಿ ಹಾಲೆ ಮರದ ತೊಗಟೆ ತೆಗೆಯುವ ಈ ಶತಮಾನಗಳ ಆಚರಣೆಯ ಬಗ್ಗೆ ಒಂದಿಷ್ಟು ಭಯವೂ ಹುಟ್ಟಿಕೊಂಡಿದೆ.    ನಾನು ಹಿಂದೆ ಬಾಡಿಗೆಗೆ ಇದ್ದ ಮನೆಯ ಎರಡು ಮನೆಗಳ ಆಚೆ ಒಂದು ವೃದ್ಧ ಜೋಡಿಯಿತ್ತು. ಆತ ಸೈನ್ಯದಲ್ಲಿದ್ದು ನಿವೃತ್ತಿ ಹೊಂದಿದವರು. ಹೀಗಾಗಿ ತೀರಾ ಕಟ್ಟುನಿಟ್ಟು. ಯಾರೊಡನೆಯೂ ಹೆಚ್ಚಿನ ಮಾತಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದುದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಇಬ್ಬರೂ ಮನೆಯ ಅಂಗಳದಲ್ಲಿ ಖುರ್ಚಿ ಹಾಕಿಕೊಂಡು ಎದುರಿಗೆ ಬಿದ್ದ ದೊಡ್ಡ ಬಯಲನ್ನು ನೋಡುತ್ತ ಕುಳಿತಿರುತ್ತಿದ್ದರು. ಸಂಜೆ ಬಂದಾಗಲೂ ಬಹುತೇಕ ಅಲ್ಲಿಯೇ ಇರುತ್ತಿದ್ದರು. ಅಥವಾ ಆತ ಅಲ್ಲೇ ಅಂಗಳದಲ್ಲಿ ವಾಕ್ ಮಾಡುತ್ತಿದ್ದರೆ ಹೆಂಡತಿ ಅದೇ ಭಂಗಿಯಲ್ಲಿ ಕುಳಿತಿರುತ್ತಿದ್ದರು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆಂದು ನಾನು ಮನೆಗೆ ಬಂದಾಗಲೂ ಅವರು ಅಲ್ಲಿಯೇ. ಇವರಿಬ್ಬರು ಅಡುಗೆ, ಊಟ ಏನಾದರೂ ಮಾಡ್ತಾರೋ ಇಲ್ಲವೋ ಎಂಬ ಅನುಮಾನ ಆಗುತ್ತಿತ್ತು ಆಗಾಗ. ಆದರೆ ಅಕ್ಟೋಬರ್ ರಜೆ ಮುಗಿಸಿ ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ಅವರಿಬ್ಬರಲ್ಲೂ ಅದೆಂಥಹ ಬದಲಾವಣೆಯಾಗುತ್ತಿತ್ತು ಎಂದರೆ ಅವರ ಮನೆಯ ಮುಂದಿನ ಜಾಗ ರಸ್ತೆಯೋ ಪಕ್ಷಿ ಸಾಕಾಣಿಕಾ ಕೇಂದ್ರವೋ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಿತ್ತು. ಮನೆಯ ಮುಂದೆ ದೊಡ್ಡ, ಅಗಲವಾದ ನೀರಿನ ಮಡಕೆಯೊಂದನ್ನು ಇಡುತ್ತಿದ್ದರು. ನೀರು ಕುಡಿಯಲು ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ನವೆಂಬರ ತಿಂಗಳ ಮುಸುಗುಡುವ ಚಳಿಯಲ್ಲಿ ನಾನು ಏಳಲಾಗದೇ ಎದ್ದು ವಾಕಿಂಗ್ ಹೋಗುವಾಗ ಆ ನೀರಿನ ಮಡಿಕೆಯ ಎದುರು ನಾಲ್ಕಾರು ನವಿಲುಗಳೂ ಇರುತ್ತಿದ್ದವು. ಶಿವಾನಂದ ಕಳೆಯವರ ಪುಸ್ತಕದಲ್ಲಿ ಹೀಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರನ್ನಿಡುವ ಪ್ರಸ್ತಾಪ ಹಲವಾರು ಸಾರಿ ಓದಿದಾಗ ನನಗೆ ನೆನಪಾಗಿದ್ದು ಅದೇ ವೃದ್ಧ ದಂಪತಿಗಳು.ಆ ಹಕ್ಕಿಗಳನ್ನು ನೋಡುತ್ತ ಅವರು ಪರವಶರಾಗುತ್ತಿದ್ದುದು ನನಗೀಗಲೂ ನೆನಪಿದೆ. ಕಾಲು ನೋವಿನಿಂದ ಒದ್ದಾಡುತ್ತ ಕುಳಿತಲ್ಲಿಂದ ಎದ್ದು ಓಡಾಡಲು ಹರಸಾಹಸ ಪಡುತ್ತಿದ್ದ ಆಕೆಯಂತೂ ಮಡಿಕೆಯಲ್ಲಿ ನೀರು ಒಂದಿಷ್ಟು ಖಾಲಿಯಾದರೂ ಸಾಕು ಬೇಗ ಬೇಗ ನೀರು ತಂದು ಹಾಕುತ್ತಿದ್ದರು. ಮೊಮ್ಮಕ್ಕಳು ಬಂದಾಗಲೂ ಆಕೆ ಹೀಗೆ ಓಡಾಡಿದ್ದನ್ನು ನಾನು ನೋಡಿರಲಿಲ್ಲ.  ಬಾವಿಗೆ ಬಿದ್ದ ಚಿರತೆಯನ್ನು ಎತ್ತಿದ ಪ್ರಸಂಗ, ಹಾಗೂ ಅದೇ ಸಮಯದಲ್ಲಿ ಮೂರನೇ ತರಗತಿಯನ್ನೂ ಕಲಿಯದ ಹಿರಿಯೊಬ್ಬರು ಹೇಳಿದ ಪರಿಸರ ಪಾಠವನ್ನು ನಿಜಕ್ಕೂ ಎಲ್ಲರೂ ಅರ್ಥ ಮಾಡಿಕೊಳ್ಳುವಂತಿದ್ದರೆ ಬಹುಶಃ ನಾವಿಂದು ಪ್ರಾಣಿಗಳನ್ನು ರಕ್ಷಿಸಿ ಎಂಬ ಸ್ಲೋಗನ್‌ಗಳನ್ನು ಹಿಡಿದು ನಮ್ಮ ಶಾಲಾ ಮಕ್ಕಳನ್ನು ಮೆರವಣಿಗೆ ಹೊರಡಿಸುವ ಅಗತ್ಯವಿರಲಿಲ್ಲ.    ನನ್ನ ಆತ್ಮೀಯ ಗೆಳೆಯನೊಬ್ಬನಿಗೆ ಬದನೆ ಕಾಯಿ, ಬಟಾಟೆ ಬೆಂಡೆಕಾಯಿಗಳನ್ನು ತಿಂದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಗುಳ್ಳೆ ಎದ್ದು ತುರಿಕೆ ಪ್ರಾರಂಭವಾಗುತ್ತದೆ. ನಾವು ಬೆಂಡೆಗೆ, ಬದನೆಗೆ ಹಾಗೂ ಅತೀವ ತುರಿಕೆ ಹುಟ್ಟಿಸುವ ಕೆಸುವಿನ ಎಲೆ, ಗಡ್ಡೆಯ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳಿಗೆ, ಸುವರ್ಣ ಗಡ್ಡೆ ಎನ್ನುವ ಅತ್ಯಪೂರ್ವ ಗಡ್ಡೆಗೆ ನಮ್ಮದೇ ಆದ ವಾಟೆಹುಳಿ ಬೆರೆಸುತ್ತೇವೆ, ಮೊನ್ನೆ ‘ಬೆಂಡೆಗೆ ಮುರುಗಲು ಹುಳಿಯನ್ನೇ ಹಾಕು ಅದರ ಲೋಳೆ ಕಡಿಮೆಯಾಗಿ ತುರಿಕೆ ಇರುವುದಿಲ್ಲ’ ಎಂದು ಅಮ್ಮ ಹೇಳುತ್ತಿದ್ದರು. ಇದನ್ನೇ ನಾನು ನನ್ನ ಸ್ನೇಹಿತನಿಗೂ ಹೇಳುತ್ತಿದ್ದೆ. ಕೋಕಂ ಸಿಪ್ಪೆ ಇಟ್ಕೋಬೇಕು. ತುರಿಕೆ ಆದಾಗಲೆಲ್ಲ ನೀರಲ್ಲಿ ಹಿಚುಕಿ ಆ ನೀರು ಕುಡಿದು ಅದರ ಸಿಪ್ಪೆಯನ್ನು ತುರಿಕೆ ಎದ್ದ ಚರ್ಮಕ್ಕೆ ತಿಕ್ಕಿದರೆ ನಾವು ಪೈಥಿ ಎನ್ನುವ ಗುಳ್ಳೆ ಏಳುವ ಈ ತರಹದ ಅಲರ್ಜಿ ಕಡಿಮೆಯಾಗುತ್ತದೆಯೆಂದು. ಬಯಲು ಸೀಮೆಯ ಆತನಿಗೆ ನಾವು ಮುರುಗಲು ಅಥವಾ ಪುನಿರ್‌ಪುಳಿ ಎಂದು ಕರೆಯುವ ಕೋಕಂನ ಪರಿಚಯವಿಲ್ಲ. ಹೀಗಾಗಿ ಅದರ ಬಳಕೆಗೂ ಹಿಂದೇಟು ಹಾಕುವುದು ಸಹಜವೇ.  ಕಾಡು ಕಲಿಕೆಗೆ ನೂರಾರು ದಾರಿಗಳು ಲೇಖನ ನನ್ನ ಈ ಔಷಧಿಯ ಹುಳಿಯ ನಿಜಾಯತಿಯನ್ನು ಸಿದ್ಧಪಡಿಸಿದ್ದಕ್ಕಾಗಿ ಖುಷಿಯಾಯಿತು. ಕೆಸುವಿನ ಎಲೆ ತಿಂದು ತುರಿಕೆಯ  ಕಾರಣದಿಂದಾಗಿ ಅರ್ಧ ನಾಲಿಗೆ ಹೊರಚಾಚಿ ಉಸಿರಾಟಕ್ಕೆ ಸಂಕಷ್ಟ ಪಡುತ್ತಿದ್ದ ಆಕಳ ಕರುವಿಗೂ ಹೂಳಿ ತಿನ್ನಿಸಿ ಬದುಕಿಸಿದ ಕಥೆಯಿದೆ. ಸನೈಡ್‌ನಷ್ಟು ತೀಕ್ಷ್ಣವಾದ ವಿಷದ ನೀರು ಬಿಡುವ ಕಳಲೆಯನ್ನೂ ಆಹಾರ ಯೋಗ್ಯವನ್ನಾಗಿ ಮಾಡಿಕೊಂಡಿರುವ ಹಳ್ಳಿಗರ ವೈಶಿಷ್ಟ್ಯತೆಯನ್ನು ಕಳವೆಯವರು ವಿವರಿಸುತ್ತ ಯಾವ ಪಾಕತಜ್ಞರಾಗಲಿ, ವಿಜ್ಞಾನಿಗಳಾಗಲಿ ವಿವರಿಸಿದ ಪಾಠ ಇದಲ್ಲ ಎನ್ನುತ್ತಾರೆ. ಇಂತಹುದ್ದೇ ಉಪ್ಪಾಗೆ ಹುಳಿಗೆ ಒಂದು ಕಾಲದಲ್ಲಿ ಕೆಜಿಗೆ ಐನೂರು, ಆರು ನೂರು ರೂಪಾಯಿಗಳಾಗಿ, ಒಂದು ಹಂತದಲ್ಲಿ ಸಾವಿರ ರೂಪಾಯಿಯವರೆಗೂ ಹೋಗಿದ್ದನ್ನು ಚಿಕ್ಕಂದಿನಲ್ಲಿ ಗಮನಿಸಿದ್ದೇನೆ. ಉಪ್ಪಾಗೆ ಕಾಯನ್ನಷ್ಟೇ ಕೊಯ್ಯುವ ಬದಲು, ರೆಂಬೆಕೊಂಬೆಗಳನ್ನೆಲ್ಲ ಕಡಿದು, ಉಪ್ಪಾಗೆ ಸಸ್ಯದ ಅವನತಿಗೆ ಕಾರಣವಾಗಿದ್ದೂ ಗೊತ್ತಿದೆ. ಇಂದಿಗೂ ದೇಹದ ಉಷ್ಣತೆಗೆ, ಕೈಕಾಲು ಬಿರುಕಿಗೆ ಬಳಸುವ ಮುರುಗಲು ತುಪ್ಪ ಹಾಗೂ ದೇಹದ ತೂಕ ಇಳಿಸುತ್ತದೆಯೆಂದು ನಾನು ಹುಡುಕುತ್ತಿರುವ ಉಪ್ಪಾಗೆ ತುಪ್ಪ ಈಗ ಅಪರೂಪದ ವಸ್ತುವಾಗಿದೆ ನಮ್ಮ ಆಧುನಿಕತೆಯಿಂದಾಗಿ.         ಶಿವಾನಂದ ಕಳವೆಯವರ ಜಲಜಾಗ್ರತಿ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕೆರೆಗಳ ಸಂರಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಓಡಾಡಿ ಅನೇಕ ಕೆರೆಗಳ ಪುನರುತ್ಥಾನ ಮಾಡಿದ್ದು ಗೊತ್ತಿದೆ. ಇಲ್ಲಿ ಜಲಜಾಗ್ರತಿಯ ಬಗ್ಗೆ ಹೇಳಿದ್ದಾರೆ, ಪರಿಸರದ ಕುರಿತಾಗಿ ಭಾಷಣ ಮಾಡಿ, ಕ್ವಿಜ್ ಏರ್ಪಡಿಸಿ, ಸೆಮಿನಾರ್‌ಗಳನ್ನು ಮಾಡುವ ಬದಲು ಒಂದಿಷ್ಟು ಗಿಡನೆಟ್ಟು ಬೆಳೆಸಬೇಕಾದ ಅನಿವಾರ್‍ಯತೆಯನ್ನು ಒತ್ತಿ ಹೇಳಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿದರೆ ಅದು ಕಾಡಿನ ಬಣ್ಣವನ್ನು ಹಚ್ಚಹಸಿರಾಗಿಸುವ, ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವ ಪರಿಯನ್ನು ವಿವರಿಸಿದ್ದಾರೆ. ಮುಂಡುಗೋಡದ ಪಾಳಾ ಎಂಬ ಬಯಲಿನಲ್ಲಿ ಮಾವಿನ ತೋಟ ಮಾಡಿಸಿದ ಅಪ್ಪಾರಾಯರ ಬಗ್ಗೆ ಹೇಳಿ ಗಿಡ ಬೆಳೆಸುವುದು ನಮ್ಮೆಲ್ಲರ ಕಾಯಕವಾಗಬೇಕು

Read Post »

You cannot copy content of this page

Scroll to Top