ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದೇವರ ಲೀಲೆ

ಕವಿತೆ ದೇವರ ಲೀಲೆ ಬಾಪು ಖಾಡೆ ನೀಲಿಯ ಹಾಳೆಗೆ ಚಿತ್ರವ ಬರೆದುಮೇಲಕೆ ಎಸೆದಿರುವೆಶಿವನೇ ಮೇಲಕೆ ಎಸೆದಿರುವೆಮೂಡಣ ರವಿಗೂ ಹುಣ್ಣಿಮೆ ಶಶಿಗೂಸ್ನೇಹವ ಬೆಸೆದಿರುವೆಬೆಳಕಿನ ಸ್ನೇಹವ ಬೆಸೆದಿರುವೆ ತುಂಬಿದ ಅಂಬುಧಿ ಅಲೆಗಳ ಮೇಲೆನರ್ತನ ನಡೆಸಿರುವೆಹರನೇ ನರ್ತನ ನಡೆಸಿರುವೆಹಕ್ಕಿಯ ಹಿಂಡಿನ ಮೆತ್ತನೆ ಮೈಗೆಅಂಗಿಯ ತೊಡಿಸಿರುವೆರಂಗಿನ ಅಂಗಿಯ ತೊಡಿಸಿರುವೆ ಬಳುಕುವ ಬಳ್ಳಿಗೆ ಬಣ್ಣದ ಹೂಗಳಚಿತ್ರವ ಬಿಡಿಸಿರುವೆಚಂದದ ಚಿತ್ರವ ಬಿಡಿಸಿರುವೆಕೋಗಿಲೆ ಕಂಠದಿ ಕಾಣದೆ ಕುಳಿತುವೀಣೆಯ ನುಡಿಸಿರುವೆಚೈತ್ರದ ವೀಣೆಯ ನುಡಿಸಿರುವೆ ಎಲ್ಲೊ ಅವಿತು ಸೋಲು-ಗೆಲುವಿನಸೂತ್ರವ ಹಿಡಿದಿರುವೆಜೀವನ ಸೂತ್ರವ ಹಿಡಿದಿರುವೆನಾಟಕವಾಡಿ ಪಾತ್ರವ ಮುಗಿಯಲುಪರದೆಯ ಸರಿಸಿರುವೆಅಂಕದ ಪರದೆಯ ಸರಿಸಿರುವೆ ***********************************

ದೇವರ ಲೀಲೆ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಇವತ್ತಿನ ಚರ್ಚೆಯಲ್ಲಿಅನಿಸಿಕೆ ತಿಳಿಸಿರುವವರು ಸುಧಾ ಆಡುಕಳ ಕ. ಸಾ. ಪ. ಕ್ಕೆ ,ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಕ. ಸಾ. ಪ. ಕ್ಕೆ ,       ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಸ್ಥಾಪನೆಯಾಗಿ ಶತಮಾನಗಳಾದರೂ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ!?          ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಯನ್ನಾರಂಭಿಸಿದ ಸಂಗಾತಿ ಪತ್ರಿಕೆಯ ನಿಲುವನ್ನು ತುಂಬು ಹೃದಯದಿಂದ ವಂದಿಸುತ್ತಲೇ, ನನ್ನ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಯಸುತ್ತೇನೆ. ಸಮಾನತೆಯೆಂಬುದು ಸುಲಭವಾಗಿ ರೂಢಿಸಿಕೊಳ್ಳುವ ವಿಷಯವಾಗಿದ್ದರೆ ಮಾನವ ಜನಾಂಗ ನಾಗರಿಕತೆಯ ಉತ್ಕೃಷ್ಟ ಹಂತವನ್ನು ತಲುಪಿದ ಇಂದಿನ ದಿನಗಳಲ್ಲಿಯೂ ಅಸಮಾನತೆಯ ಭಾರದಿಂದ ಕುಸಿಯುತ್ತಿರಲಿಲ್ಲ. ದಿನನಿತ್ಯದ ಸಣ್ಣಪುಟ್ಟ ಅವಕಾಶಗಳಲ್ಲೆಲ್ಲ ಸಮಾನತೆಯನ್ನು ಪ್ರತಿಪಾದಿಸುತ್ತ ಅದನ್ನು ಸಾಧಿಸಿಯೇ ಬಿಟ್ಟೆವು ಎಂಬ ಭ್ರಮೆಯಲ್ಲಿ ತೇಲಾಡಿಸುವುದು ಅಸಮಾನತೆಯ ಲೋಕರೂಢಿಯೇ ಆಗಿದೆ.        ನಿಜವಾದ ಸಮಾನತೆಯ ಪರೀಕ್ಷೆಯಾಗಬೇಕಾದದ್ದು ಅಧಿಕಾರದ ಹಂಚಿಕೆಯ ವಿಷಯದಲ್ಲಿ ಎಂಬುದನ್ನು ಉಪಾಯವಾಗಿ ಮರೆಮಾಚುತ್ತಾ ಅಥವಾ ಅದಕ್ಕೆ ತನ್ನದೇ ಅನೇಕ ಸಮಜಾಯಿಸಿಗಳನ್ನು ನೀಡುತ್ತಾ ಹೋಗುವುದು ಅನೂಚಾನವಾಗಿ ನಮ್ಮ ಸಮಾಜದ ನಡೆಯೇಆಗಿದೆ.       ಯಾವುದೇ ಅಧಿಕಾರಯುತವಾದ ಹುದ್ದೆಯ ಆಯ್ಕೆ ಚುನಾವಣಾ ರಾಜಕೀಯಕ್ಕಿಂತ ಭಿನ್ನವೇನಲ್ಲ. ಗ್ರಾಮ ಪಂಚಾಯಿತಿಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲು ತೆರೆದ ಮನಸ್ಸನ್ನು ಹೊಂದಿರುವ ವ್ಯವಸ್ಥೆ ಶಾಸಕ ಮತ್ತು ಸಂಸದರನ್ನು ಆಯ್ಕೆ ಮಾಡುವಾಗ ತೋರುವ ಅಸಮಾನತೆಯನ್ನು ಗಮನಕ್ಕೆ ತಂದುಕೊಂಡರೆಸಾಕು, ನಮ್ಮ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ದೊರಕುತ್ತದೆ. ಜಾತಿತಾರತಮ್ಯವನ್ನು ಅಳಿಸಿಬಿಟ್ಟಿದ್ದೇವೆಂದು ಭಾಷಣಮಾಡುತ್ತ, ಮನೆಗೆ ಬಂದವರಿಗೆ ತಮ್ಮದೇ ಪಕ್ಕದಲ್ಲಿ ಊಟವಿಕ್ಕುವ ಮಂದಿ ಮಕ್ಕಳ ಮದುವೆಯ ವಿಚಾರಕ್ಕೆ ಬಂದಾಗ ನಡೆದುಕೊಳ್ಳುವ ರೀತಿಯನ್ನು ಗಮನಿಸದರೂ ಸಾಕು. ಇವೆಲ್ಲವೂ ಸಮಾನತೆಯೊಳಗಿನ ಪೊಳ್ಳುತನವನ್ನು ಬಯಲಿಗೆಳೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಪುರುಷ ಪ್ರಾಧಾನ್ಯವು ಅಳಿದು ಸಮಾನತೆಯ ತಂಗಾಳಿ ಬೀಸುತ್ತಿದೆ ಎಂಬ ಭ್ರಮೆಯಲ್ಲಿರುವ ನಮಗೆ ಅಧಿಕಾರದ ಪ್ರಶ್ನೆಗಳು ಬಂದಾಗಲೆಲ್ಲ ವಾಸ್ತವದ ಬಿಸಿಧಗೆ ಸೋಕುತ್ತಲೇ ಇರುತ್ತದೆ. ಆದರೆ ಇದು ನಮ್ಮ ದೇಶಕ್ಕೋ ಅಥವಾ ಒಂದು ಲಿಂಗಕ್ಕೋ ಸೀಮಿತವಾದ ವಿಷಯವೆಂದು ಅನಿಸುತ್ತಿಲ್ಲ. ಪ್ರಮಾಣದಲ್ಲಿ ಹೆಚ್ಚು ಕಡಿಮೆಯಿದ್ದರೂ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಸ್ರ್ತೀಯರು ಇಡಿಯ ಪ್ರಪಂಚದಲ್ಲಿ ಪಡೆದಿರುವ ಅಧಿಕಾರಯುತ ವಾದಸ್ಥಾನವನ್ನು ಲೆಕ್ಕ ಹಾಕಿದರೆ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ರಾಹುಲಸಾಂಕೃತ್ಯಾಯನರವೋಲ್ಗಾ-ಗಂಗಾ ದಂತಹ ಪುಸ್ತಕವನ್ನು ಓದಿದರೆ ಅಧಿಕಾರದ ಹಂಬಲಕ್ಕಾಗಿ ತಾಯಿಯನ್ನೇ ಪ್ರವಾಹಕ್ಕೆ ದೂಡುವ ನಿಶೆಯರನ್ನು ಕಾಣುತ್ತೇವೆ ಮತ್ತು ಸಂತಾನೋತ್ಪತ್ತಿಯ ಕಾರಣಕ್ಕಾಗಿಯೇ ಇಡಿಯ ಗಣದ ಮುಖ್ಯಸ್ಥಳಾಗಿರುವ ಹೆಣ್ಣನ್ನು ಅವಳ ಆ  ಶಕ್ತಿಯನ್ನೇ ನಿಧಾನವಾಗಿ ದೌರ್ಬಲ್ಯವಾಗಿಸಿ ಮನೆಯ ಗೋಡೆಗಳ ನಡುವೆ ಬಂಧಿಸಿದ ಚರಿತ್ರೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಇಷ್ಟೆಲ್ಲವನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ ಈ ಶಕ್ತಿರಾಜಕೀಯ ಎಂಬುದು ದೇಶ, ಕಾಲಗಳನ್ನು ಮೀರಿ ಸಮಾಜಕ್ಕೆ ಹಿಡಿದ ವ್ಯಾಧಿಯಾಗಿದೆ, ಎಂಬುದನ್ನು ತಿಳಿಸುವಕಾರಣಕ್ಕಾಗಿ ಅಷ್ಟೆ.           ಯಾರೇನೇ  ಹೇಳಿದರೂ ಹೆಣ್ಣು ಎಂಬ ಗೋಡೆಯೊಳಗಿನ ಜೀವ ಒಂಚೂರು ತನ್ನದೇ ಸಮಯವೆಂಬ ಬಿಡುವನ್ನು ಕಂಡುಕೊಂಡದ್ದು ವಿಜ್ಞಾನದ ಆವಿಷ್ಕಾರಗಳಿಂದಾಗಿ ಹುಟ್ಟಿಕೊಂಡ, ದೈನಂದಿನ ಕೆಲಸಗಳನ್ನು ಸುಲಭಗೊಳಿಸುವ ಅನೇಕ ಯಂತ್ರಗಳಿಂದ ಮಾತ್ರ. ಇಲ್ಲವಾದಲ್ಲಿ ಎಂಥಹ ಶಿಕ್ಷಣವೂ ಅವಳನ್ನು ಸಾಹಿತ್ಯ ರಚನೆಯೆಡೆಗೆ ಸೆಳೆಯುತ್ತಿತ್ತೆಂದು ನನಗನಿಸುತ್ತಿಲ್ಲ. ಹಾಗೆ ಸಿಕ್ಕಿದ ಬಿಡುವಿನ ವೇಳೆಯಲ್ಲಿ, ಅವಳ ಗಮ್ಯದ ಜಗತ್ತಿನ ಬಗ್ಗೆ ಬರೆಯುತ್ತಲೇ ಸ್ತ್ರೀಯರು ಇಂದು ಅದ್ಭುತವಾದ ಸಾಹಿತ್ಯದ ಕೃತಿಗಳನ್ನು ರಚಿಸಿದ್ದಾರೆ. ತಮ್ಮದೇ ಸಾಹಿತ್ಯಿಕ ಗುಂಪುಗಳನ್ನು ಮಾಡಿಕೊಂಡು ಇನ್ನಷ್ಟು ಜನರನ್ನು ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ಹೆಣ್ಣೊಬ್ಬಳು ಬರವಣಿಗೆಯಲ್ಲಿ ತೊಡಗಿರುವಳೆಂದು ಮನೆಯನ್ನು ಶಬ್ದಮುಕ್ತವಾಗಿಡುವ, ಅವಳ ಕೋಣೆಯಬಾಗಿಲನ್ನು ಶಬ್ದವಾಗದಂತೆ ದೂಡಿ ಕಾಲಕಾಲಕ್ಕೆ ಕಾಫಿತಿಂಡಿಗಳನ್ನು ಪೂರೈಕೆ ಮಾಡುವ, ಅವಳು ಬರೆದುದೆಲ್ಲವನ್ನು ಚಂದವಾಗಿ ಕೈಬರಹದಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಕಾಪಿ ಮಾಡಿಕೊಡುವ ಎಷ್ಟು ಜನ ಸಂಗಾತಿಗಳಿದ್ದಾರೆಂದು ಚೂರು ಆತ್ಮ ವಿಮರ್ಶೆ ಮಾಡಿಕೊಂಡರೂ ಸಾಕು, ಮಹಿಳಾ ಸಾಹಿತ್ಯದ ಘನತೆ ತನ್ನಷ್ಟಕ್ಕೆ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತದೆ. ತಮ್ಮ ಎಲ್ಲ ಕರ್ತವ್ಯಗಳನ್ನು ಮುಗಿಸಿ ರಾತ್ರಿಯನ್ನು ಕರಗಿಸಿ ಸಾಹಿತ್ಯವಾಗಿಸಿರುವವರ ಸಂಖ್ಯೆಯೇ ಹೆಚ್ಚಿದೆ. ಇವೆಲ್ಲವನ್ನೂ ನಾನು ಮಹಿಳಾ ಸಾಹಿತ್ಯಕ್ಕೆ ಮೀಸಲಾತಿ ಬೇಕೆಂಬ ನೆಲೆಯಲ್ಲಿ ಪ್ರಸ್ತಾಪಿಸುತ್ತಿಲ್ಲ. ಇಷ್ಟಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಛಾಪನ್ನು ಸರಿಸಮಾನವಾಗಿ ಸ್ಥಾಪಿಸಿಕೊಳ್ಳುತ್ತಿರುವ ಮಹಿಳೆಯರು ಅಧಿಕಾರದ ವಿಷಯಕ್ಕೆ ಬಂದಾಗ ಪ್ರಸ್ಥಾಪವೇ ಆಗದಿರುವ ವಿಷಾದದ ಬಗೆಗಷ್ಟೆ ಈ ಮಾತು.          ನಿಜವಾಗಿ ನೋಡಿದರೆ ಇಂಥದೊಂದು ಪ್ರಸ್ತಾಪ ಪುರುಷ ಸಾಹಿತಿಗಳಿಂದಲೇ ಒಕ್ಕೊರಲಿನಿಂದ ಬರಬೇಕಾದುದು ಇಂದಿನ ತುರ್ತು.  ಮಹಿಳೆಯೊಬ್ಬರನ್ನು  ಕ. ಸಾ. ಪ. ದ  ಅಧ್ಯಕ್ಷಸ್ಥಾನದಲ್ಲಿ ಈ ಸಲವಾದರೂ ನಾವು ಕಾಣಬೇಕು ಎಂದು ಎಲ್ಲರಿಗೂ ಅನಿಸಲೇಬೇಕು. ಚುನಾವಣೆಯ ಹಂಗೇಕೆಂದು ಬಲಾವಣೆಗಾಗಿ ಅವಿರೋಧವಾಗಿ ಮಹಿಳಾ ಅಧ್ಯಕ್ಷರನ್ನು ಆರಿಸಬಹುದು. ಒಬ್ಬರಿಗಿಂತ ಹೆಚ್ಚು ಮಹಿಳಾ ಸ್ಪರ್ಧಿಗಳಿದ್ದರೆ ಅದೂ ಒಳಿತೆ. ಚುನಾವಣೆ ನಡೆಯಲಿ. ಮಹಿಳಾ ಸ್ಪರ್ಧಿಗಳ ನಡುವೆ ನಡೆವ ಸ್ಪರ್ಧೆಯಲ್ಲಿ ಆಯ್ಕೆಯಾದವರು ಅಧ್ಯಕ್ಷರಾಗಲಿ. ಶತಮಾನದಿಂದ ನಡೆದು ಬಂದಿರುವ ಗಂಡಾಳ್ವಿಕೆಯನ್ನು ಬಿಡುವುದರಲ್ಲಿರುವ ಸುಖವನ್ನು ನಮ್ಮ ಪುರುಷರು ಒಮ್ಮೆ ಅನುಭವಿಸಲಿ ಎಂಬುದು ನನ್ನಾಸೆ.ಅದರ ಬದಲು ಮಹಿಳೆಯರ ಆಯ್ಕೆಗೆಂದು ಮೀಸಲಾತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ತರುವುದು ಬೇಡ. ಹಾಗೆ ತರಲೇಬೇಕೆಂದಾದಲ್ಲಿ ಅದು ಮೊದಲು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬರಲಿ.ಪ್ರಜ್ಞಾವಂತರೆಂದು ಜನರಿಂದ ಗುರುತಿಸಲ್ಪಡುವ ಸಾಹಿತ್ಯ ಕ್ಷೇತ್ರವೂ ಯಾಕೆ ಮೀಸಲಾತಿಯ ಹೇರಿಕೆಯಿಂದ ಸಮಾನತೆಯನ್ನು‌ ಸಾಧಿಸಬೇಕು?        ತೀರ ಮುಜುಗರದಿಂದಲೇ ನಾನಿದನ್ನು ಪ್ರಸ್ತಾಪಿಸುತ್ತಿರುವೆ. ಶಾಲಾ, ಕಾಲೇಜುಗಳ ಹಂತದಿಂದ ಹಿಡಿದು ನಡೆಯುವ ಸಭೆ, ಸಮಾರಂಭಗಳನ್ನು ಗಮನಿಸಿದರೂ ಸಾಕು. ಸಾರ್ವಜನಿಕ ಕಾರ್ಯಕ್ರವಗಳಲ್ಲಿ ಸ್ರ್ತೀ ಯರಿಗೆ ನಾವು ಕೊಡುವ ಪ್ರಾಧಾನ್ಯತೆಯ ಅರಿವಾಗುತ್ತದೆ. ಎಲ್ಲೋ ಸಭೆಯ ಮೂಲೆಯಲ್ಲೊಂದು ಕುರ್ಚಿಯಲ್ಲಿ ಮಹಿಳೆಯೊಬ್ಬರು ಕುಳಿತಿದ್ದರೆ ಹೆಚ್ಚು. ನಡುವೆ ಕುಳಿತಿದ್ದಾರೆಂದರೆ ಅದು ಅವರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಸಫಲತೆಯ ಕಾರಣದಿಂದ ಮಾತ್ರ. ಆದರೆ ಸಾಹಿತ್ಯದಂತಹ ಸೃಜನಶೀಲ ಮತ್ತು ಭಿನ್ನ ಶಾಖೆಗಳನ್ನೊಳಗೊಂಡ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದೂ ಅಷ್ಟು ಸಮಂಜಸವೆನಿಸದು. ಬಾಲ್ಯದಿಂದಲೂ ಪುರುಷ ಪ್ರಾಧಾನ್ಯದ ಛತ್ರದಡಿಯಲ್ಲಿಯೇ ಬೆಳೆದು ಬಂದ ನಮ್ಮ ತಲೆಮಾರಿನಲ್ಲಿ ಅಧ್ಯಕ್ಷ ಆಯ್ಕೆಯ ಬಗೆಗೂ ಆಂದೋಲನವೇ ನಡೆಯಬೇಕೇನೊ?ಆಸ್ತಿ ಮತ್ತು ಅಧಿಕಾರ ತಮ್ಮ ಹಕ್ಕು ಎಂಬುದನ್ನು ಮೈಗೂಡಿಸಿಕೊಳ್ಳದ ಈ ತಲೆಮಾರಿನ ಸ್ತ್ರೀ ಯರಿಂದ ಅದನ್ನು ನಿರೀಕ್ಷಿಸುವುದೂ ಅತಿ ಮಹತ್ವಾಕಾಂಕ್ಷೆಯೆನಿಸುತ್ತದೆ.   ಆದರೆ ಖಂಡಿತವಾಗಿಯೂ ಕೆಲವು ಪುರುಷರಾದರೂ ಈ  ಆಂದೋಲನಕ್ಕೆ ಜೊತೆಯಾಗುವರೆಂಬ ನಿರೀಕ್ಷೆಯೂ ಬೆಳಕಿನ ಕೋಲಿನಂತೆ ಮಿಂಚುತ್ತದೆ.       ಇಂದಿನ ಯುವ ತಲೆಮಾರು ನಿಜಕ್ಕೂ ಲಿಂಗಸೂಕ್ಷ್ಮತೆಯನ್ನು ಹೊಂದಿದೆಯೆಂದು ಪದೇ ಪದೇ ಸಾಬೀತುಗೊಳ್ಳುತ್ತಿದೆ. ತಮ್ಮ ಸಹ ಬರಹಗಾರರನ್ನು ಹೆಣ್ಣು ಗಂಡುಗಳೆಂಬ ಬೇಧವಿಲ್ಲದೇ ಪರಿಗಣಿಸುವ ಮತ್ತು ಅಧಿಕಾರದಿಂದ ಹಿಡಿದು ಎಲ್ಲವನ್ನೂ ಸಮಾನವಾಗಿ ಪ್ರೀತಿಯಿಂದ ಹಂಚಿಕೊಳ್ಳುವ ವಿಶಾಲ ಮನೋಭಾವವನ್ನು ಇಂದಿನ ಯುವ ಸಾಹಿತಿಗಳು ಹೊಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹೀಗೆಯೇ ಮುಂದುವರೆದಲ್ಲಿ ಕೆಲವೇ ವರ್ಷಗಳಲ್ಲಿ ಸಾಹಿತ್ಯದ ಎಲ್ಲ ಶಕ್ತಿ ಕೇಂದ್ರಗಳಲ್ಲಿ ಲಿಂಗತ್ವದ ಗೆರೆ ಅಳಿಸಿ ಹೋಗಲಿದೆ. ಅದು ಸಂಭವಿಸುವ ಮೊದಲೇ ನಮ್ಮ ತಲೆಮಾರು ಎಚ್ಚೆತ್ತುಕೊಂಡರೆ ಮುಂದಿನ ಪೀಳಿಗೆಗೆ ನಾವು ಮಾರ್ಗದರ್ಶಕರೆನಿಸಿಕೊಳ್ಳುತ್ತೇವೆ. ಏನೇ ಬರೆದರೂ ಅಧಿಕಾರವೆಂಬುವುದು ಅಮಲಾಗಿರುವಾಗ ಅಮಲಿನಲ್ಲಿರುವವರನ್ನು ಎಚ್ಚರಿಸುವುದು ಕಠಿಣ ಕೆಲಸವೆ.          ಮಹಿಳಾ ಶಕ್ತಿಯೆಂಬುದು ಇಂದು ಕಟ್ಟೆಯೊಡೆದ ಪ್ರವಾಹ. ಎಂತಹ ತಡೆಯೇ ಬಂದರೂ ಅದರ ಮುನ್ನುಗ್ಗುವಿಕೆಯನ್ನು ಪ್ರತಿಬಂಧಿಸಲಾಗದು. ಅಧಿಕಾರದ ಚುಕ್ಕಾಣಿ ಹಿಡಿಯಲು ನೀವು ಹೋರಾಡುತ್ತಲೇ ಇರಿ. ನಾವು ಸಾಹಿತ್ಯದ ಹಸಿರುಕ್ಕಿಸುತ್ತಲೇ ಸಾಗುತ್ತೇವೆ. ನಮ್ಮ ತೆಕ್ಕೆಯಲ್ಲಿ ಮುಂದಿನ ಜನಾಂಗವನ್ನು ಕಾಪಿಟ್ಟುಕೊಳ್ಳುತ್ತಲೇ ಅರಿವಿನ ಹಣತೆಯನ್ನು ಬೆಳಗುತ್ತೇವೆ. ಕೈಯಲ್ಲಿ ಬೀಜ ಹಿಡಿದವರಷ್ಟೇ ಕಾಡಿನ ಕನಸು ಕಾಣಬಲ್ಲರು. ಇಂದು ನೀವು ಕೇಳಿದ ಪ್ರಶ್ನೆ ಸ್ವಲ್ಪವೇ ವರ್ಷಗಳಲ್ಲಿ ಉತ್ತರ ಪಡೆದುಕೊಂಡೀತು. ಚುನಾವಣೆಯ ಮೂಲಕವೇ ಅಧ್ಯಕ್ಷ ಸ್ಥಾನ ಮಹಿಳೆಯರಿಗೊಲಿಯಲಿ. *****************************************                                                                     ***********************                                                                     –

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಡಾ.ಪಾರ್ವತಿ ಜಿ.ಐತಾಳ್ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಅಂಕಣದಲ್ಲಿ ಅನ್ಯವಾಷೆಗಳಿಂದ ಕನ್ನಡಕ್ಕೆಅನುವಾದಗೊಂಡ ಕೃತಿಗಳ ಓದಿಗೆ ಪೂರಕವಾಗಿ ಅವುಗಳ ಪರಿಚಯ ಮಾಡಿಕೊಡಲಿದ್ದಾರೆ ಕೊಸಿಮೊ ಕೊಸಿಮೊ ( ಕಾದಂಬರಿ)ಮೂಲ : ಇಟಾಲೋ ಕಾಲ್ವಿನೊಕನ್ನಡಕ್ಕೆ : ಕೆ.ಪಿ.ಸುರೇಶಪ್ರ : ಅಭಿನವಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ ಪುಟಗಳು : ೨೧೬ ಜಗತ್ಪ್ರಸಿದ್ದ  ಲೇಖಕ ಇಟಾಲೋ ಕಾಲ್ವಿನೋ ಅವರ  ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಬ್ಯಾರನ್ ಇನ್ ದ ಟ್ರೀಸ್’ ಇದನ್ನು ಸುರೇಶ್ ಅವರು ‘ಕೊಸಿಮೋ’ಎಂಬ ಅದರ ನಾಯಕನ ಹೆಸರಿನ ಶೀರ್ಷಿಕೆಯಿಂದ ಅನುವಾದಿಸಿದ್ದಾರೆ. ಬಹಳ ವಿಶಿಷ್ಟವಾದ ಒಂದು ಕಥಾವಸ್ತುವನ್ನು ಹೊಂದಿದ ಕಾದಂಬರಿಯಿದು.  ಮಹಾ ಛಲವಾದಿ ಕೊಸಿಮೊ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ಯಾವುದೋ ಕಾರಣಕ್ಕೆ ತಂದೆಯ ಮೇಲೆ ಮುನಿಸಿಕೊಂಡು ಮರವೇರಿ ಕುಳಿತು, ಇನ್ನು ಮುಂದೆ ಎಂದಿಗೂ ನೆಲದ ಮೇಲೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದವನು ಕೊನೆಯ ತನಕವೂ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ.  ಮನುಷ್ಯನೊಬ್ಬ ನೆಲದ ವ್ಯವಹಾರಗಳನ್ನು ಪೂರ್ತಿಯಾಗಿ ಬಿಟ್ಟು  ಮರದ ಮೇಲೆಯೇ, ನಿಸರ್ಗದ ಒಂದು ಅವಿಭಾಜ್ಯ ಅಂಗವಾಗಿ ಹೇಗೆ ಯಶಸ್ವಿಯಾಗಿ ಬದುಕಲು ಸಾಧ್ಯವೆಂಬುದನ್ನು ಈ ಕಥೆ ತೋರಿಸಿ ಕೊಡುತ್ತದೆ. ಕೊಸಿಮೊ ಹುಟ್ಟಿದ್ದು ಪ್ರತಿಷ್ಠಿತ ಜಮೀನ್ದಾರಿ ಕುಟುಂಬದಲ್ಲಿ. ಅಧಿಕಾರ-ಪ್ರತಿಷ್ಠೆಗಳೇ ಮುಖ್ಯವೆಂದು ತಿಳಿದುಕೊಂಡ ತಂದೆಯ ಅಹಂಕಾರವನ್ನು ಮೆಟ್ಟಿ ಮೇಲೇರಿ ನಿಂತು, ಬಡವರ ಬಂಧುವಾಗಿ, ಅಸಹಾಯಕರಿಗೆ ಸಹಾಯ ಮಾಡುತ್ತ ಆಕಾಶದೆತ್ತರಕ್ಕೆ ಬೆಳೆಯುವ ಕೊಸಿಮೋನ ಬದುಕಿನ ಕಥೆ ಬಹಳ ರೋಮಾಂಚಕ. ಮರದ ಮೇಲಿನ ಮನುಷ್ಯನೆಂದು ಇಡಿಯ ಭೂಖಂಡದಲ್ಲಿ ಪ್ರಸಿದ್ಧಿ ಪಡೆಯುವ ಕೊಸಿಮೊ ಎಂದರೆ ಆತನ ತಮ್ಮ ( ಈ ಕಥೆಯ ನಿರೂಪಕ) ನಿಗೂ ಎಲ್ಲಿಲ್ಲದ ಹೆಮ್ಮೆ. ತಮ್ಮನ ಸಹಾಯದಿಂದ ಮರದ ಮೇಲಿನ ಬದುಕಿಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳುವ ಕೊಸಿಮೊ ಮರದಿಂದ ಮರಕ್ಕೆ ಕೋತಿಯಂತೆ ಹಾರುತ್ತ, ನೇತಾಡುತ್ತ ಸರಾಗವಾಗಿ  ಓಡಾಡುತ್ತ, ದೂರಗಳನ್ನು ಕ್ರಮಿಸಲು ಕಲಿಯುವುದೇ ಒಂದು ಸೋಜಿಗ. ನೆಲವನ್ನು ಮುಟ್ಟಲು ಬಂದೂಕು-ಕಠಾರಿಗಳನ್ನು ಹಿಡಿದು ಯುದ್ಧವನ್ನೂ ಮಾಡಬಲ್ಲ, ಎದುರಾಳಿಗಳನ್ನು ಕಾಳಗದಲ್ಲಿ ಸೋಲಿಸ ಬಲ್ಲ ಆತನ ಧೈರ್ಯ-ಸಾಹಸ-ಸಾಮರ್ಥ್ಯಗಳು ಬೆರಗು ಹುಟ್ಟಿಸುತ್ತವೆ.  ಆತನಿಂದ ಆಕರ್ಷಿತರಾಗುವ ಅನೇಕ ಹೆಣ್ಣುಮಕ್ಕಳೊಂದಿಗೆ ಪ್ರಣಯದ ಅನುಭವಗಳನ್ನೂ ಕೊಸಿಮೊ ಪಡೆಯುತ್ತಾನೆ. ಸಂಸಾರ ಸುಖವೊಂದನ್ನು ಬಿಟ್ಟರೆ  ನೆಲದ ಮೇಲಿನ ಮನುಷ್ಯರಷ್ಟೇ ಸುಖ ಪಡೆದು, ಮಾತ್ರವಲ್ಲ, ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಧನೆಗಳನ್ನು ಅವನು ಮಾಡುತ್ತಾನೆ. ಒಂದಾದ ನಂತರ ಇನ್ನೊಂದರಂತೆ ವಿವಿಧ ವಿಷಯಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನೂಓದುವ ಕೊಸಿಮೊ ಮಹಾಜ್ಞಾನಿಯೂ ಆಗುತ್ತಾನೆ. ತನ್ನ ಓದಿನ ಹುಚ್ಚನ್ನು ಕುಪ್ರಸಿದ್ಧನಾದ ಒಬ್ಬ ದರೋಡೆಕೋರನಿಗೂ ಅಂಟಿಸಿ ಅವನನ್ನೊಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ.  ಆದರ್ಶ ರಾಜ್ಯವೆನಿಸಿದ ಯುಟೋಪಿಯಾವನ್ನು ಪುನರ್ನಿರ್ಮಿಸುವ ಪ್ರಯತ್ನವನ್ನು ಇಟಾಲೋ ಕಾಲ್ವಿನೋ ಇಲ್ಲಿ ಮಾಡುತ್ತಾರೆ. ಆದ್ಯಕಾಲದ ಇಂಗ್ಲಿಷ್ ಕಾದಂಬರಿಕಾರರಾದ ರಿಚರ್ಡ್ಸನ್ ಮತ್ತು ಫೀಲ್ಡಿಂಗರ ನೈತಿಕತೆ ಮೇಲೆ ಒತ್ತುನೀಡುವ ಕಾದಂಬರಿಗಳ ನಾಜೂಕಾದ ಅಣಕವೂ ಇಲ್ಲಿದೆ. ಒಟ್ಟಿನಲ್ಲಿ ಕೊಸಿಮೊನ ಕಥೆ  ಒಂದು ರೀತಿಯ ಫ್ಯಾಂಟಸಿ ಶೈಲಿಯಲ್ಲಿ  ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.  ಕೆ.ಪಿ.ಸುರೇಶ ಅವರು ಕಾದಂಬರಿಯನ್ನು ಬಹಳ ಸುಂದರವಾಗಿ ಅನುವಾದಿಸಿದ್ದಾರೆ.  ಅವರ ಭಾಷಾ ಶೈಲಿ, ವಾಕ್ಯ ಸರಣಿ, ಪದಬಳಕೆಗಳಲ್ಲಿ ಕನ್ನಡದ ಸಹಜತೆ ಬಹಳ ಆಪ್ಯಾಯಮಾನವಾಗಿ ಮೂಡಿ ಬಂದಿದೆ. ********************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ವಾರದ ಕವಿತೆ

ವಾರದ ಕವಿತೆ

ಕವಿತೆ ಹಳೆಯ ಮನೆ ಮೇಗರವಳ್ಳಿ ರಮೇಶ್ ಅದೊ೦ದು ವೈಭವದ ಹಳೆಯಕಾಲದಹೆ೦ಚಿನ ಮಹಡಿ ಮನೆ. ನಿತ್ಯ ದೇವರ ಪೂಜೆ, ಹಬ್ಬ ಹರಿದಿನಗ೦ಟೆ ಜಾಗಟೆ ಶ೦ಖ.ಮದುವೆ ಮು೦ಜಿ ನಾಮಕರಣ ಹುಟ್ಟಿದ ಹಬ್ಬಕಿವಿ ತು೦ಬುವ ನಾದಸ್ವರ.ನೀರೆಯರ ಸ೦ಭ್ರಮದ ಸೀರೆಯ ಸರಬರಬಳೆಗಳ ಘಲ ಘಲ.ತೂಗುವ ತೊಟಿಲುಗಳಕ೦ದಮ್ಮಗಳ ಕಿಲ ಕಿಲಮನೆ ಮನಗಳ ತು೦ಬಿ ಹರಿವಜೋಗುಳದ ಮಾಧುರ್ಯ.ಗ೦ಡಸರ ಗತ್ತು, ಗೈರತ್ತುಜಗಲಿಯ ಮೇಲೆ ಊರ ಪ್ರಮುಖರೊಡನೆಹಿರಿಯರ ಒಡ್ಡೋಲಗ.ಮಹಡಿಯ ಹಜಾರದಲ್ಲಿ ಇಸ್ಪೀಟು , ಸಿಗರೇಟು ಬೀಡಿಅಡಿಕೆ ಚಪ್ಪರಕೊಟ್ಟಿಗೆಯ ತು೦ಬ ದನ ಕರ.ಹಜಾರದಲ್ಲಿ ಪೇರಿಸಿಟ್ಟ ಅಡಿಕೆ ಮೂಟೆಪಣತ ತು೦ಬಿದ ಭತ್ತಉಪ್ಪಿನ ಕಾಯಿ ಜಾಡಿ, ಜೋನಿ ಬೆಲ್ಲದ ಮಡಕೆ. ಅದೊ೦ದು ವೈಭವದ ಹಳೆಯ ಕಾಲದಹೆ೦ಚಿನ ಮಹಡಿ ಮನೆ.* ಮುಚ್ಚಿದ ಬಾಗಿಲಿಗೆ ಬಿದ್ದ ಬೀಗಕ್ಕೀಗ ತುಕ್ಕುಅ೦ಗಳದ ತು೦ಬ ಗಿಡ ಗ೦ಟೆ ಲ೦ಟಾನ ಪಾರ್ಥೇನಿಯ೦ಜಗಲಿಯಲ್ಲಿ ಬಿಡಾಡಿ ದನ ಕರು ಎಮ್ಮೆ ಗಳಸಗಣಿ ಗ೦ಜಲಗಳ ದುರ್ನಾತಶ್ವಾನಗಳ ರೆಸ್ಟ್ ಹೌಸು.ಹೆ೦ಚಿನ ಮೇಲೆ ಬೆಳೆದ ಪಾಚಿ, ಹುಲ್ಲುಕಳಚಿ ಬೀಳುತ್ತಿರುವ ಜ೦ತಿ.ಬಣ್ಣ ಮಾಸಿ ಹಕ್ಕಳಿಕೆ ಎದ್ದಗೋಡೆಗಳ ತು೦ಬ ಗಾಯಸುಳಿವ ಗಾಳಿಯಲ್ಲಿ ನಿಟ್ಟುಸಿರಿನ ಸುಯ್ಲು. ಮುಚ್ಚಿದ ಬಾಗಿಲೊಳಗಿನ ಗವ್ವುಗತ್ತಲಲ್ಲಿಚೆಲ್ಲಾ ಪಿಲ್ಲಿ ಬಿದ್ದಿರುವಆ ಹಳೆಯ ಮನೆಯ ಹಳೆಯ ಮ೦ದಿಉಳಿಸಿ ಹೋಗಿರುವ ಕನಸುಗಳು. ************************

ವಾರದ ಕವಿತೆ Read Post »

ಇತರೆ, ಜೀವನ

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) ನಮ್ಮ ವಿವಾಹ ಪದ್ಧತಿಗಳಲ್ಲಿ ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಅಂತ ಮತ್ತೆ ಸುಮಾರು ತರಗಳಿವೆ. ಆದರೆ ನಾವು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ರೀತಿ ನೀತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ವಿವಾಹಗಳ ಬಗ್ಗೆ ಮಾತ್ರ ಮಾತಾಡೋಣ. ಸದ್ಯದ ದಿನಗಳಲ್ಲಿ ಬಳಕೆಯಲ್ಲಿರುವ ಈ ’ಪ್ರೇ’ ಎನ್ನುವ ಪದದ ಅರ್ಥ ನಿಘಂಟುವಿನ ಪ್ರಕಾರ  “ಪ್ರೀತಿ, ಸ್ನೇಹ, ಅನುರಾಗ, ಮಮತೆ” ಅಂತೆಲ್ಲ ಇದೆ. ಸಂಸಾರದಲ್ಲಿಯ ಸದಸ್ಯರ ನಡುವೆ ಪ್ರೀತಿ, ಪ್ರೇಮ ಇರುತ್ತವೆ. ಆದರೆ ಅಲ್ಲಿಯ ಪ್ರೇಮಕ್ಕೂ, ವಿವಾಹ ಸಂಬಂಧೀ ಪ್ರೇಮಕ್ಕೂ ವ್ಯತ್ಯಾಸವಿದೆ. ವಿವಾಹ ಸಂಬಂಧದ ಪ್ರೇಮ ಎಂದರೆ ಗಂಡು ಹೆಣ್ಣಿನ ನಡುವಣ ಪ್ರೀತಿ ಮಾತ್ರ ಅಂತ ಸಿನಿಮಾಗಳಲ್ಲಿ ಬಳಸುವ ಅರ್ಥದಿಂದಲೇ ಹುಟ್ಟಿ ಬಂದಿದೆ. ಇನ್ನೂ ಹೇಳ ಬೇಕೆಂದರೆ ಬೇರೇ ಜಾತಿ, ಬೇರೇ ಪಂಗಡ, ಬೇರೇ ಧರ್ಮದ ಹುಡುಗ, ಹುಡುಗಿಯರ ನಡುವಿನ ಪ್ರೀತಿಗೆ ಮಾತ್ರವೇ ಪ್ರೇಮ ಎನ್ನುವ ಹಾಗೆ ಬಳಕೆ ಯಾಗುತ್ತಿದೆ. ಪ್ರೇಮ ವಿವಾಹ ಎಂದರೆ ಇದೇ ರೀತಿಯ ಮದುವೆ. ಒಂದೇ ಜಾತಿಯ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾದರೇ ಅದು ಪ್ರೇಮ ವಿವಾಹದ ಕೆಳಗೆ ಬರುತ್ತದಾ ? ಇದಕ್ಕೆ ಉತ್ತರವಿಲ್ಲ. ಮತ್ತೊಂದು ರೀತಿ ಮದುವೆಯ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ದೊಡ್ಡವರ ಅನುಭವಕ್ಕೆ ಮಣೆ ಹಾಕಿ, ಅವರು ನಮ್ಮ ಒಳಿತನ್ನೇ ನೋಡುತ್ತಾರೆ ಅಂತ ನಂಬಿ, ಅವರು ನಿರ್ಣಹಿಸಿದ ಹೆಣ್ಣು/ಗಂಡನ್ನು ತಾವೂ ನೋಡಿ, ಒಪ್ಪಿ ಮದುವೆಯಾಗುವುದು.. ಲವ್ ಮ್ಯಾರೇಜ್ ( ಈಗಿನ ಪ್ರೇಮ ವಿವಾಹಗಳ ತುಂಬಾ ಕೇಳಿ ಬರುವ ಹೆಸರು) ಮಾಡಿಕೊಳ್ಳ ಬಯಸುವ ಜೋಡಿಯ ವಾದನೆ “ ದೊಡ್ಡವರು ನೋಡಿ ನಿಶ್ಚಯಿಸಿದ ಮದುವೆಗಳಲ್ಲಿ ಪ್ರೀತಿ ಎಲ್ಲಿರುತ್ತದೆ ?” ಅಂತ. ಯಾಕಿರಬಾರದು ಅಂತ ಅವರಿಗೆ ಅನಿಸುವುದಿಲ್ಲ. ಆ ವಯಸ್ಸೇ ಹಾಗೆ. ದುಡುಕುತನ ತುಂಬಿದ ಪ್ರಾಯ. ತಾವು ಬಲೆಗೆ ಬಿದ್ದ ಆಕರ್ಷಣೆಗೆ ಒಂದು ವಾದನೆಯನ್ನು ಹುಟ್ಟಿಸಿಕೊಂಡು ಅದಕ್ಕೇ ಜೋತು ಬೀಳುವ ಕ್ರಮ. ಆದರೆ ಅದೊಂದೇ ವಾಸ್ತವವಲ್ಲ. ಕೆಲ ಹುಡುಗ/ಹುಡುಗಿಯರು ತಮ್ಮ ಶಾಲೆ ಕಾಲೇಜುಗಳಲ್ಲಿ ತಾವು ರುಚಿ ನೋಡಿದ ಮಧುರ ಗಳಿಗೆಗಳನ್ನು ಬರೀ ಮಕ್ಕಳ ಆಟಿಕೆಯ ಆಕರ್ಷಣೆ ಎಂದು ಮರೆತು ತಮ್ಮ ತಂದೆ ತಾಯಿ ನೋಡಿದ ಮದುವೆಗಳಿಗೆ ಒಪ್ಪುತ್ತಾರೆ. ಮತ್ತೆ ಕೆಲವರು ಅತ್ತ ಪ್ರೀತಿಸಿದವಳನ್ನು ಮದುವೆಯಾಗಲಾರದೇ ಭಗ್ನ ಪ್ರೇಮಿಗಳಾಗುತ್ತಾರೆ. ಅಥವಾ ದೊಡ್ಡವರು ಹೇಳಿದ ಮದುವೆಗೆ ಒಪ್ಪಿ ಬೇರೇ ಯಾರನ್ನೋ ಮದುವೆಯಾಗಿ ಆ ಬಂಧದಲ್ಲಿಯ ಆತ್ಮೀಯ ಭಾವನೆಗೆ ದೂರವಾಗುತ್ತಾರೆ. ಎರಡೂ ಪದ್ಧತಿಗಳಲ್ಲೂ ಒಳಿತುಗಳಿವೆ, ಕೆಡಕುಗಳಿವೆ. ಯಾವುದನ್ನೂ ನಾವು ಇದೇ ಸರಿಯೆಂದು ಹೇಳಲಾಗುವುದಿಲ್ಲ. ಯಾವುದನ್ನೂ ಬೇಡದ್ದೆಂದು ತೆಗೆದು ಹಾಕಲಾಗುವುದಿಲ್ಲ. ಪ್ರೇಮ ವಿವಾಹ ( ಲವ್ ಮ್ಯಾರೇಜ್ ) ಗಳು ಮಾತ್ರ ಇಷ್ಟು ದಶಕಗಳು  ಕಳೆದರೂ ತಂದೆ ತಾಯಿಗಳ ಮನಸ್ಸಿಗೆ ಬೆಂಕಿ ಹಚ್ಚುವ ಮದುವೆಗಳೇ. ತಾವು ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರಲ್ಲೇ ತಮ್ಮನ್ನು ಎದುರಿಸಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ತಿಳಿದ ಹಾಗೆ ಮಾಡುವುದು ಯಾವ ತಂದೆ ತಾಯಿಗೂ ರುಚಿಸುವುದಿಲ್ಲ. ಮತ್ತೆ ಅವರ ಅಂತಸ್ತು, ಸಮಾಜದಲ್ಲಿ ಅವರಿಗಿರುವ ಮಾನ ಮರ್ಯಾದೆ ಮತ್ತೆ ಒಮ್ಮೊಮ್ಮೆ ಬರೀ ಅಹಂಕಾರ. ಇವೆಲ್ಲ ಅಡ್ಡ ಬರುತ್ತವೆ. ಕೆಲ ಸೌಮ್ಯ ಸ್ವಭಾವದ ತಂದೆ ತಾಯಿಯರು ತಮ್ಮ ಮಕ್ಕಳ ಆಯ್ಕೆ, ಭವಿಷ್ಯ ನೋಡಿ ಒಪ್ಪುತ್ತಾರೆ. ಅವರ ನಿಲುವು ಇಷ್ಟೇ “ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವವರು ಅವರಿಬ್ಬರೂ. ನಾವು ಇಂದು ಇದ್ದೇವೆ, ನಾಳೆ ಇಲ್ಲ. ಅವರ ಆಯ್ಕೆಗೆ ನಾವೇಕೆ ಅಡ್ಡಿ ಹೇಳುವುದು “ಅಂತ.  ಈ ತರದ ನಿಲುವಿನಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಮತ್ತು ಅವರ ವೈರಾಗ್ಯ ಕಾಣುತ್ತದೆ. ಆದರೆ ಇಲ್ಲಿ ಬಹುಭಾಗ ನಮಗೆ ಕಾಣ ಸಿಗುವುದು ಮಧ್ಯ ತರಗತಿಯ ಕುಟುಂಬಗಳೇ. ಇವರಿಗಿಂತ ಒಂದು ಮೆಟ್ಟಿಲು ಮೇಲಿರುವ ವರ್ಗದವರು ಆಷ್ಟು ಬೇಗ ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ. ತಮಗಿರುವ ಎಲ್ಲ ರೀತಿಯ ದಾರಿಗಳಿಂದ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾರೆ. ಒಪ್ಪದಿದ್ದಲ್ಲಿ ಹಿಂಸೆಗೂ ಹೇಸುವುದಿಲ್ಲ. ಇವರಿಗೆ ಸಮಾಜದ ನೋಟ ಮುಖ್ಯ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಈ ರೀತಿಯ ಪ್ರೇಮ ವಿವಾಹಗಳಾದಲ್ಲಿ ಹೆಣ್ಣು ಕುಟುಂಬದ ಕಡೆಯವರು “ ಆನರ್ ಕಿಲ್ಲಿಂಗ್ ’ ಹೆಸರಲ್ಲಿ ಹುಡುಗನನ್ನು ಅಥವಾ ಇಬ್ಬರನ್ನೂ ಕೊಂದ ಪ್ರಕರಣಗಳು ಸಾಕಷ್ಟಿವೆ. ಅವರನ್ನು ತಮ್ಮ ಮನೆಗೆ ಬರಗೊಡದಿರುವುದು ಮುಂತಾದವುಗಳಿಂದ ಆ ದಂಪತಿಗಳಿಗೆ ಸಾತ್ವಿಕ ಹಿಂಸೆ ಕೊಡುತ್ತಾರೆ. ಪ್ರೇಮ ವಿವಾಹ ಮಾಡಿಕೊಂಡ ಜೋಡಿಗಳು ಒಮ್ಮೊಮ್ಮೆ ಭಿನ್ನ ಹಿನ್ನೆಲೆಗಳಿಂದ ಹೊಂದಾಣಿಕೆ ಕಾಣದೆ ಕಷ್ಟ ಪಡುತ್ತಾರೆ. ತಮ್ಮ ತಂದೆ ತಾಯಿಯರನ್ನು ಮತ್ತು ಬಂಧುವರ್ಗದವರ ಸಾನ್ನಿಹಿತ್ಯ ಕಳೆದುಕೊಂಡು ಮಾನಸಿಕ ದೌರ್ಬಲ್ಯಕ್ಕೊಳಗಾಗುತ್ತಾರೆ. ಈಗ ಎರಡೂ ಕಡೆಯ ವಾದಗಳನ್ನು ಒಮ್ಮೆ ತೂಗಿ ನೋಡೋಣ. ಪ್ರೇಮಿಗಳ ವಾದ: ನಾವು ಯುಕ್ತವಯಸ್ಕರಾಗಿದ್ದೇವೆ. ನಮ್ಮ ಬೇಕು ಬೇಡಗಳು ನಮಗೆ ಗೊತ್ತು. ನಮ್ಮ ವೈವಾಹಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ. ನೀವೇನೋ ತ್ಯಾಗ ಮಾಡಿದ್ದೇವೆ ಎನ್ನುವುದು ಬೇಡ. ನಮ್ಮ ಬಾಲ್ಯದ ಮಧುರಕ್ಷಣಗಳನ್ನು ನಾವು ನಿಮಗೆ ಕೊಟ್ಟಿಲ್ಲವೇ ? ನನಗೆ ಆ ಹುಡುಗನ/ಹುಡುಗಿಯ ಪರಿಚಯವಿದೆ. ಅವಳ/ಅವನ ಜೊತೆ ನನ್ನ ಬಾಳು ಹಸನಾಗಿರುತ್ತದೆ. ಸಮಾಜ ಬದಲಾಗುತ್ತಿದೆ. ನೀವು ಸಹ ಆಗಿ. ಇನ್ನೆಷ್ಟು ದಿನ ನೀವು ನಿಮ್ಮ ಇಷ್ಟಾಯಿಷ್ಟಗಳನ್ನು ನಮ್ಮ ಮೇಲೆ ಹೇರುತ್ತೀರಿ? ಅಮೆರಿಕ, ಯೂರೋಪ್ ದೇಶಗಳ ಜನರನ್ನು ನೋಡಿ. ತಮಗೆ ಬೇಕಾದವರನ್ನು ಡೇಟಿಂಗ್ ಗಳ ಮೂಲಕ ತಾವೇ ಆರಿಸಿಕೊಳ್ಳುತ್ತಾರೆ. ಹುಡುಗಿಯರಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಯಾರೋ ನೋಡಿದ ಅಪರಿಚಿತ ಹುಡುಗನಿಂದ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳಲು ನಾನು ತಯಾರಿಲ್ಲ ಅಂತಲೂ ಹೇಳುವುದಿದೆ. ದೊಡ್ಡವರ ವಾದಃ ನೀವೆಷ್ಟೇ ದೊಡ್ಡವರಾದರೂ ಸಮಾಜದಲ್ಲಿನ ಒಳಿತು ಕೆಡಕುಗಳ ಪರಿಚಯವಿರುವುದಿಲ್ಲ. ಅದಕ್ಕೆ ನಾವು ಹಿನ್ನೆಲೆ ಎಲ್ಲ ವಿಚಾರಿಸಿ, ನೋಡಿ ಮದುವೆ ಮಾಡುತ್ತೇವೆ. ಅದಕ್ಕೆ ಏಕೆ ಆಕ್ಷೇಪಣೆ? ನಾವೇನು ನಿಮ್ಮ ಶತ್ರುಗಳೇ ? ನಿಮ್ಮ ಒಳಿತು ಕೆಡುಕು ನಮಗೆ ಗೊತ್ತಾಗೋದಿಲ್ವಾ ? ನಾವದೆಷ್ಟು ನಮ್ಮ ಸುಖಗಳನ್ನು ತ್ಯಾಗ ಮಾಡಿ ನಿಮ್ಮನ್ನು ಬೆಳೆಸಿದ್ದೇವೆ ಗೊತ್ತಾ? ಕೊನೆಗೆ ಈ ತರನಾ ಮಾಡೋದು? ನಾವೆಲ್ಲ ಈ ತರದ ಮದುವೆ ಆದವರೇ. ನಾವೇನಾಗಿದ್ದೇವೆ ? ನಮ್ಮ ಜಾತಿಯವರಲ್ಲಿ ನಮ್ಮ ಮರ್ಯಾದೆ ಉಳಿಯುತ್ತದೆಯೇ ? ನಾಲ್ಕು ಜನದ ನಡುವೆ ಜೀವನ ನಡೆಸುವುದು ಹೇಗೆ ? ನಿಮ್ಮ ತಂಗಿಯ ಮದುವೆ ಹೇಗಾದೀತು ನೀನು ಈ ರೀತಿ ಮಾಡಿದರೆ ? ಎರಡೂ ಕಡೆಯ ವಾದಗಳಲ್ಲಿ ನಿಜಾಂಶಗಳಿಲ್ಲ ಅಂತ ಹೇಳಲಾಗದು. ೨೦ನೆಯ ಶತಮಾನದ ಕೊನೆಯಲ್ಲಿ ಪ್ರಾರಂಭವಾದ ತಂತ್ರಜ್ಞಾನದ ಸ್ಫೋಟ ಇಡೀ ಜಗತ್ತಿನ ಜೊತೆಗೆ ಭಾರತದ ಸಮಾಜಕ್ಕೂ ತನ್ನ ಪ್ರಭಾವ ತೋರಿತು. ಹೆಣ್ಣುಮಕ್ಕಳಿಗೆ ಕೆಲಸ ಸಿಗಲು ಆರಂಭವಾಯಿತು. ಕೈತುಂಬಾ ಸಂಬಳ ಬರಲು ಶುರುವಾಯಿತು. ಕೆಲಸದ ಸಲುವಾಗಿ ನಗರಗಳಿಗೆ ಹೋಗುವುದು ನಡೆಯಿತು. ಅಲ್ಲಿಯ ವರೆಗೆ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದ ಹೆಣ್ಣು ಮಕ್ಕಳು ಪೇಯಿಂಗ್ ಗೆಸ್ಟ್ ಗಳಾಗಿ ಇರುತ್ತ ಸ್ವತಂತ್ರವಾಗಿ ಇರಲು ಶುರುವಾಯಿತು. ಇತರೆ ರಾಜ್ಯಗಳ, ಪ್ರದೇಶಗಳ ಹುಡುಗರ ಜೊತೆ ಬೆರೆಯುವುದು ಪ್ರಾರಂಭವಾಯಿತು. ಇದೆಲ್ಲದರ ಜೊತೆ ಅಂತರ್ಜಾಲ ತುಂಬಾ ಸುಲಭದಲ್ಲಿ ಸಿಗುವಂತಾಗಿ ಜಗತ್ತಿನ ಬೇರೇ ಬೇರೇ ಸಮಾಜಗಳ ರೀತಿ ನೀತಿ, ಆಚಾರ ವ್ಯವಹಾರ ಗೊತ್ತಾಗಲು ಮೊದಲಾಯಿತು. ಒಂದು ರೀತಿ ಹೇಳ ಬೇಕೆಂದರೆ ಅಲ್ಲಿಯ ವರೆಗಿದ್ದ ಸಮಾಜದ ಮುಖವೇ ಬದಲಾಯಿತು. ಆಗಲೇ ಈ ರೀತಿಯ ಪ್ರೇಮ ವಿವಾಹಗಳು ಸಹ ಹೆಚ್ಚುತ್ತ ಹೋದವು. ತನಗೆ ಮೆಚ್ಚುಗೆಯಾದ ಹುಡುಗ/ಹುಡುಗಿಯರಲ್ಲಿ ಗುಣ ನೋಡಲಾರಂಭಿಸಿದ ಯುವ ಪೀಳಿಗೆ, ತಾವಿರುವ ಸಮಾಜದ ಕಟ್ಟಳೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಪ್ರಾರಂಭವಾಯಿತು. ಅಲ್ಲಿಂದ ಪ್ರಾರಂಭವಾದ ಈ ಪ್ರೇಮ ವಿವಾಹದ ರಭಸ ದೊಡ್ಡವರು ನೋಡಿ ಮಾಡುವ ವಿವಾಹ ವ್ಯವಸ್ಥೆಯನ್ನು ಮತ್ತು ಅದರಲ್ಲಿಯ ಪ್ರೀತಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಹೀಗೆ ಬದಲಾದ ದೃಷ್ಟಿಕೋನಕ್ಕೆ ಪೂರಕವಾಗಿ ನಮ್ಮ ಚಲನ ಚಿತ್ರಗಳು ಸಹ ಪ್ರೇಮದ ಕತೆಗಳನ್ನು ತೆಗೆದು ಅವುಗಳ ಪರವಾಗಿ ತಮ್ಮ ವಾದವನ್ನು ಮಂಡಿಸುವ ಸಂದೇಶಗಳನ್ನು ನೀಡಲಾರಂಭಿಸಿದವು. ಇದರಿಂದ ಯುವಲೋಕವೆಲ್ಲ ಒಂದು ತರವಾದ ರೆಬೆಲ್ ಮನಸ್ತತ್ವವನ್ನು ಅಳವಡಿಸುಕೊಂಡಿತು. ತಂದೆ ತಾಯಿಯರ ಮಾತು ಲಕ್ಷ್ಯವಿಲ್ಲದಾಯಿತು. ತಮಗೊಂದು ಸ್ಪೇಸ್ ಎಂಬ ಹೊಸ ಪದವನ್ನು ಹುಟ್ಟು ಹಾಕಿಕೊಂಡು ತಾವು ಮಲಗುವ ಕೋಣೆಗೆ ಬಾಗಿಲು ಜಡಿತು ತಮ್ಮದೇ ಲೋಕದಲ್ಲಿ ಇರಲು ಆರಂಭಿಸಿತು. ಅಮ್ಮ ಅಡಿಗೆ ಮಾಡುವುದಕ್ಕೆ, ಅಪ್ಪ ಎಟಿಎಂ ಕಾರ್ಡಿಗೆ ಹಣ ಹಾಕುವುದಕ್ಕೆ ಎನ್ನುವ ಧೋರಣೆ ಜಾಸ್ತಿಯಾಯಿತು. ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲಂತೂ ಯುವ ಪೀಳಿಗೆ ತಮ್ಮದೇ ಆದ ಲೋಕದಲ್ಲಿ ಸಂಚರಿಸಲಾರಂಭಿಸಿತು. ಇವರಿಗೆ ಮಾಧ್ಯಮಗಳಲ್ಲಿಯ ತಮ್ಮ ಸ್ನೇಹಿತರು ಹೇಳಿದ್ದೇ ವೇದವಾಕ್ಯ, ಅವರು ಮಾಡಿದ್ದೇ ಅನುಕರಣೆಗೆ ಯೋಗ್ಯ. ಹೀಗಿರುವ ಇವರಿಗೆ ಅರೇಂಜ್ಡ್ ಮದುವೆಗಳಲ್ಲಿ ಪ್ರೀತಿ ಇರುವುದಿಲ್ಲ ಎನಿಸುವುದು ಸ್ವಾಭಾವಿಕವಾಯಿತು. ನಮ್ಮ ದೇಶದಲ್ಲಿಯ ಅಂಕೆ ಸಂಖ್ಯೆಗಳ ಪ್ರಕಾರ ಪ್ರೇಮ ವಿವಾಹಗಳು ಶೇಕಡಾ ೧೮ ಮಾತ್ರ. ಇದರರ್ಥ ಇನ್ನೂ ೮೨% ಹುಡುಗರು ತಮ್ಮ ತಂದೆತಾಯಿಯ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಅಂತಾಯಿತು. ಅವರು ತಮಗೆ ತೋರುವ ಪ್ರೀತಿ, ಭದ್ರತಾ ಭಾವಕ್ಕೆ ತಮ್ಮ ಮತ ಎಂದು ತೋರಿಸುತ್ತಿದ್ದಾರೆ ಅಂತಾಯಿತು. ಮತ್ತೆ ನಗರಗಳಲ್ಲಿ ಬಿಟ್ಟರೆ ನಮ್ಮ ಸಮಾಜದಲ್ಲಿ ಮದುವೆ ವಿಚ್ಛೇದನೆ ಸಹ ತುಂಬಾ ಕಮ್ಮಿ. ಇನ್ನೂ ಮದುವೆ ಎನ್ನುವ ವ್ಯವಸ್ಥೆಗೆ ಗೌರವ, ಮರ್ಯಾದೆ ತೋರುತ್ತಿದ್ದಾರೆ ಅಂತಾಯಿತು. ಏನೇ ಇರಲಿ ಎರಡೂ ಕಡೆಯವರು ಅರ್ಥ ಮಾಡಿಕೊಳ್ಳ ಬೇಕಾದ ಕೆಲ ವಿಷಯಗಳ ಕಡೆ ಗಮನ ಕೊಟ್ಟಲ್ಲಿ ಎರಡೂ ತರದ ವಿವಾಹಗಳು ಸಫಲವಾಗಿ ನಿಲ್ಲುತ್ತವೆ. ೧. ಮಕ್ಕಳು ತಮ್ಮ ತಂದೆ ತಾಯಿಯರ ಬಗ್ಗೆ ಗೌರವ ಹೊಂದಿರ ಬೇಕು. ಅವರು ತಮಗೆ ಒಳ್ಳೆಯ ಭಾಗಸ್ವಾಮಿಯನ್ನು ಹುಡುಕುತ್ತಾರೆ ಎನ್ನುವ ಭರವಸೆ ಇಡಬೇಕು. ತಮ್ಮ ಸ್ನೇಹಿತರು ಪ್ರೇಮದಲ್ಲಿ ಸಿಲುಕಿದಾರೆ ಎಂದು ತಾವು ಅನುಕರಿಸ ಬಾರದು. ೨. ಮಕ್ಕಳು ತಾವು ಪ್ರೇಮಿಸಿದ ವ್ಯಕ್ತಿಯನ್ನು ಮದುವೆಯಾಗ ಬೇಕೆಂದು ತಿಳಿಸಿದಾಗ ದೊಡ್ಡವರು ಸಹ ಅವರು ಆರಿಸಿದವರನ್ನು ಪರಿಶೀಲಿಸಿ ಒಪ್ಪಬೇಕು. ಮುಂದಿನ ಜೀವನ ಅವರದ್ದೇ ಅಲ್ಲವೇ ! ಸಮಾಜದಲ್ಲಿ ತಮ್ಮ ಅಹಂ, ಮರ್ಯಾದೆಯ ಬಗ್ಗೆ ಜಾಸ್ತಿ ಕಾಳಜಿ ಮಾಡಿ ಅವರ ಜೀವನಕ್ಕೆ ಕುತ್ತಗಬಾರದು. ೩. ದೊಡ್ಡವರು ನೋಡಿ ಮಾಡುವುದು ನಿಯಂತೃತ್ವ ಧೋರಣೆ ಎಂದು ಇವರು, ಪ್ರೇಮ ವಿವಾಹಗಳು ನಿಲ್ಲಲಾರವು ಎಂದು ದೊಡ್ಡವರು ನಿರ್ಣಯಿಸುವುದನ್ನು ಬಿಡಬೇಕು. ಎರಡೂ ಕಡೆಯವರು ತಮ್ಮ ಮುಂದಿನ ಪೀಳಿಗೆಗಳ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರಿಗೂ ನೋವಾಗದಂತೆ ಮದುವೆಗಳು ನಡೆಸ ಬೇಕು. ಬದಲಾಗುತ್ತಿರುವ ಸಮಾಜದ ಬಗ್ಗೆ ಗೌರವವಿಟ್ಟುಕೊಳ್ಳ ಬೇಕು. ಹಠಕ್ಕೆ ಬಿದ್ದು ಕುಟುಂಬಗಳಲ್ಲಿ ನೋವು, ಹಿಂಸೆ ತಂದುಕೊಳ್ಳಬಾರದು. ಮದುವೆ ಎನ್ನುವ ನಮ್ಮ ಸಂಸ್ಕೃತಿಯ ವ್ಯವಸ್ಥೆಯನ್ನು ಮುಂದಿನ ಕೆಲ ಪೀಳಿಗೆಗಳ ವರೆಗೂ ಮುಂದುವರೆಸುವಂತಾಗಬೇಕು. *********************************************************

ವಿವಾಹ ವ್ಯವಸ್ಥೆ- ಒಂದು ಚರ್ಚೆ Read Post »

ಕಾವ್ಯಯಾನ

ಏಕೆ ಹೀಗೆ ಈ ಬಿರುಕುಗಳು?

ಕವಿತೆ ಏಕೆ ಹೀಗೆ ಈ ಬಿರುಕುಗಳು? ಮಮತಾಶ0ಕರ್ ಕಳಚಿಕೊಳ್ಳುವುದೇಕೆ ಒಂದೊಂದೇ ಕೊಂಡಿಗಳು?ಯಾವಬಾದರಾಯಣ ಸ0ಬಂಧಗಳೋಬೆಸೆದುಕೊಂಡಿದ್ದವುಈಗ ಬೆಸುಗೆ ಬಿಟ್ಟುಕೊಳ್ಳತೊಡಗಿದೆ ಬಿರುಕು ದೊಡ್ಡದಾಗುತ್ತಾ ಹೋದಂತೆದೂರಾಗುತ್ತ ಹೋಗುತ್ತೇವೆ…ಜೊತೆಗೆ ಅಪಾರ್ಥಗಳೂ್ ಬೆಳೆಯುತ್ತಾ ಹೋಗುತ್ತವೆಅಷ್ಟೇ ಆದರೆ ಪರವಾಗಿಲ್ಲ…ಆದರೆ ನಾವೇನು ಹೇಳಿಲ್ಲವೋಅದು ಎದುರಿನವರಿಗೆ ಕೇಳುತ್ತದೆನಮ್ಮ ಮೌನ ಏನೇನೋ ಹೇಳುತ್ತಿರುತ್ತದೆ…! ಈಗ ಈ ಸ್ಂಜೆ ಕೆಂಪಲ್ಲಿಕರಗಿ ಹೋಗುತ್ತಿದೆ ಸಂಬಂಧಗಳುಕತ್ತಲಾಗುತ್ತಿರುವಾಗ ಅನಿಸುತ್ತಿದೆ ಅವರಿಗೆಸ್ವಲ್ಪವೇ ಕ್ಷಮಿಸಿದ್ದರೂ ಇರುತ್ತಿತ್ತೇನೋಈ ಬಿಟ್ಟುಹೋದ ಸಂಬಂಧಗಳು…. ಆದರೇನು…ಅಹಂಕಾರಗಳ ಯುದ್ದದಲ್ಲಿವಿದಾಯವೇ ಗೆದ್ದುಬಿಟ್ಟಿದೆ…..! **************************************

ಏಕೆ ಹೀಗೆ ಈ ಬಿರುಕುಗಳು? Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾಲಚಕ್ರ ಬೈಟು ಕಾಫಿ ಮತ್ತು ತೇಜಾವತಿ ಅವರ ‘ಕಾಲಚಕ್ರ’ ಎಂಬ ಕವಿತೆಗಳ ಕಟ್ಟು ‘ ಮನಸು ನೀಲ ಗಗನದಲಿ ಸ್ವಚ್ಛಂದವಾಗಿವಿಹರಿಸುವ ಬಾನಾಡಿ’ ನಾನು ಬರಿ ಸಣ್ಣ ದನಿ ಹೊರಹಾಕುವ ಸ್ವಂತ ಅಸ್ತಿತ್ವವಿಲ್ಲದ ಹುಲುಗೆಜ್ಜೆ. ಆದರೆ ಕವಿತೆ ಹಾಗಲ್ಲ.ಅದು ವಿನೀತ ಭಾವವನ್ನು ಅಪ್ಪಿಕೊಂಡು ಬಿಚ್ಚು ಮನಸಿನ ಸ್ಮೃತಿಗಳ ಹಾಯಿಯನ್ನು ಹೊರ ಹಾಕುತ್ತದೆ.ಅಂತೆ ಭರವಸೆಯ, ಪ್ರತಿಭಾನ್ವಿತ ಕವಯಿತ್ರಿ ತೇಜಾವತಿ ಹುಳಿಯಾರ ಅವರ ‘ಕಾಲಚಕ್ರ’ ಕೃತಿಯು ಬೆಳಗಿನ ಕಾಫಿಯೊಂದಿಗೆ ಕೈಗೆತ್ತಿಕೊಂಡೆ.ಇದೊಂದು ಹೊನ್ನುಡಿ ಕವಿತೆಗಳ ಪುಟ್ಟ ಸಂಕಲನ.ಓದುವಿನ ಕುತೂಹಲ ಇನ್ನಷ್ಟು ತೀವ್ರಗೊಂಡಿತು.ಮೊದಲ ಗುಟುಕಿನೊಂದಿಗೆ ಓದು ಸುರುವಿಟ್ಟುಕೊಂಡು ಕೊನೆಯ ಹನಿ ಹೀರುವಿಕೆಯೊಂದಿಗೆ ಸಂಕಲನ ತನ್ನ ಓದು ಮುಗಿಸಿಕೊಂಡಿತು.ಪ್ರೇಮ,ಬದುಕು ಮತ್ತು ನಿಸರ್ಗದೊಂದಿಗಿನ ಒಡನಾಡಿತನಗಳು ಇಲ್ಲಿನ ಕಾವ್ಯದ ಆತ್ಮೀಯ ಸಂಬಂಧಗಳೆನಿಸಿದವು.ಇಲ್ಲಿನ ಬಹುತೇಕ ಕವಿತೆಗಳು ಏಕಮೇವ ಹೊನ್ನುಡಿಯೆಂಬ ಶೀರ್ಷಿಕೆ ಹೊಂದಿರುವ ಚುಟುಕು ಕವಿತೆಗಳಾಗಿವೆ.ಆದರೆ ದೀರ್ಘ ಕವಿತೆಗಳ ಆಯಾಮಗಳನ್ನು ಹೊಂದಿರುವುದಲ್ಲದೇ ಓದುಗರ ಮನಸಿಗೆ ತಲ್ಲೀನತೆ ನೀಡುವ ಬರೆಹಗಳೇ ಆಗಿವೆ ಜೊತೆಗೆ ಕನಸುಗಳಿಗೆ ಮೂರ್ತಸ್ವರೂಪ ಕೊಟ್ಟು ರೂಪಾಂತರಗೊಳಿಸುವ ನುಡಿಗಳಾಗಿವೆ.ಕಾವ್ಯ ರಚನೆಯ ಲಕ್ಷಣ ಕೂಡಾ ಅದೇ ಆಗಿರುತ್ತದೆ.ಇಲ್ಲಿನ ಬಹುತೇಕ ಕವಿತೆಗಳು ಓದುತ್ತಾ ಹೋದಂತೆಲ್ಲಾ ಪರಿವರ್ತಿತ ಸಮಾಜದಲ್ಲಿನ ಕೌಟಂಬಿಕ ಸಂಬಂಧಗಳು,ಯಾಂತ್ರಿಕ ಬದುಕು,ಒಡಲಾಳದ ಉರಿಯ ನೋವು ಇಂತಹವೆ ವಿಷಯಗಳು ಸರಳ ಪ್ರತಿಮೆಗಳ ಮುಖಾಂತರ ವೈವಿದ್ಯಮಯ ಆಯ್ಕೆಯಾಗಿ ಕಂಡುಬರುತ್ತವೆ. ಅಲ್ಲಲ್ಲಿ ತಿಳಿಯಾದ ಭಾವಗಳು ಇಡುಕಿಕರಿಸಿಕೊಂಡಿವೆ. ಕವಯತ್ರಿ ತೇಜಾವತಿ ಅವರಿಗೆ ಬದುಕು ಮತ್ತು ಕಾವ್ಯ ಅವರ ಜೀವದ್ರವ್ಯವೇ ಆಗಿದೆ.ಸಮಾಜದಲ್ಲಿ ನಡೆಯುವ ಕೆಲವು ಕ್ಷುಲ್ಲಕಗಳ ಕುರಿತು ಹತಾಸೆಯಿದೆ,ನೋವಿದೆ.ಈ ತೆರನಾದ ಅಭಿವ್ಯಕ್ತಿಗಳು ಕವಯಿತ್ರಿಯ ಮನದ ಬಾಗಿಲಿಗೆ ಬಂದು ಮೌನ ಮುರಿದಿವೆ. ಹೀಗೆ ಕಾಫಿ ಹೀರುತ್ತಾ ಸಂಕಲನದ ಪುಟ ತಿರುವುತ್ತಿದ್ದಾಗ ಇಲ್ಲಿನ ಒಂದು ಕವಿತೆ ನನಗೆ ತಟ್ಟನೆ ನೆನಪಿಗೆ ತರಿಸಿದ್ದು ಇಂಗ್ಲಿಷಿನ ಪ್ಯಾಟ್ ಪ್ಲೇಮಿಂಗ್ ಅವರ ‘Depression is a monster’ ಕವಿತೆ ನೆನಪಿಸಿತು. ಇವೆರಡಕ್ಕೂ ಅಂತರ ಸಾಮ್ಯತೆ ಕುರಿತು ಹೇಳುವುದಾದರೆ ಪ್ಯಾಟ್ ಅವರು ಖಿನ್ನತೆ ಎನ್ನುವುದು ಕರುಣೆಯನ್ನು ಹಿಸುಕುತ್ತಿದೆ ಎನ್ನುವ ದನಿ ವ್ಯಕ್ತಪಡಿಸಿದರೆ,ಇಲ್ಲಿ ತೇಜಾವತಿ ಅವರಿಗು ಕೂಡಾ ಮನುಷ್ಯನ ಸಹಜ ಅಂತಪ್ರೇರಣೆಗಳಲ್ಲೊಂದೆನಿಸಿದಅಸಮಾಧಾನದ ಕುರಿತು ಅಸಮಾಧಾನವಿದೆ,ಸೆಡುವು ಇದೆ.ಹಾಗಾಗಿ ಅದನ್ನು ಯಾವುದೋ ರೂಪದಲ್ಲಾದರೂ ಹೊರಹಾಕಬೇಕು,ಇಲ್ಲದಿದ್ದರೆ ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.ಅಂತೆಯೇ ಪ್ಯಾಟ್ ಫ್ಲೆಮಿಂಗ್‌ ಮತ್ತು ಕವಯಿತ್ರಿ ಹುಳಿಯಾರ್ ಅವರಿಗೆ ಕ್ರಮವಾಗಿ ಖಿನ್ನತೆ ಮತ್ತು ಅಸಮಾಧಾನದ ಬಗೆಗೆ ಭಯವಿದೆ. ಖಿನ್ನತೆ/ಅಸಮಾಧಾನವು ಹೃದಯ ಮತ್ತು ಆತ್ಮ ಎರಡೂ ನಾಶಪಡಿಸುತ್ತವೆ ಎಂದು ತಮ್ಮತಮ್ಮ ಕವಿತೆಗಳಲ್ಲಿ ಹಳಹಳಿಸುತ್ತಾರೆ. ವಿಫಲ ಪ್ರೇಮ,ದುಷ್ಟ ನಡವಳಿಕೆಯ ಕುರಿತು ಮಾತನಾಡುವ ಬರೆಹ, ಹೊಸತನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯ ಬಗೆಗೂ ಇಲ್ಲಿನ ಕವಿತೆಗಳು ಮಾತಾಡ್ತವೆ.ಜೊತೆಗೆ ಬದುಕಿನ ಮುಂದುವರೆದ ಭಾಗವೆಂಬಂತೆ ನಿರ್ದಿಷ್ಟ ಗುರಿ ತನ್ನ ಚಲನಶೀಲ ಕಳೆದುಕೊಂಡು ಹೊಸತನಕ್ಕೆ ಒಗ್ಗಿಕೊಳ್ಳುವ ಕವಿತೆ ಹೀಗೆ ದನಿಸುತ್ತದೆ. ‘ಹಳೆಯ ಮಾರ್ಗಗಳುನೀರಸವಾದಾಗಹೊಸ ದಾರಿಗಳ ಅನ್ವೇಷಣೆಅನಿವಾರ್ಯಅವಶ್ಯಕ’ ಮುಂದುವರೆದು,ಇಚ್ಚೆ ಸಿಡಿಮದ್ದಿನಂತಿರಬೇಕು/ಪಡೆಯುವಿಕೆ ಜೀವಜಲದಂತೆ ತಣಿಸಬೇಕು ಎನ್ನುತ್ತಲೇ ಕವಯಿತ್ರಿ ಸದಾ ಹೊಸತನಕ್ಕೆ ಹಂಬಲಿಸುವ ಆಶಾವಾದ ವ್ಯಕ್ತಪಡಿಸುತ್ತಾರೆ.ಈ ಕಾವ್ಯದ ಕುರಿತು ಆರಂಭದಲ್ಲಿಯೇ ನಾನು ಕಂಡುಕೊಂಡದ್ದು ತುಂತುರು ಹನಿಗಳಂತೆ,ಬುಳುಬುಳು ಬೀಳುವ ಅನ್ ಪಿನಿಶ್ಡ್ ಸೋಸಿಯಲ್ ಕಾಂಟ್ರಾಕ್ಟ್ ಗಳು,ಬಾಲ್ಯದ ನೆನಪುಗಳು,ಮುಟ್ಟದೆ ಮುಂದು ಹೋಗುವ ಸಂಗತಿಗಳು,ಅಮೂರ್ತವಾದ ಮೌನ,ನೋವು,ಬೇಸರ,ಬದುಕಿನ ಉಲ್ಲಾಸತೆಗಳು,ಶುಗರ್ ಮಿಶ್ರಿತಗೊಂಡ ಅರೆಬೆಂದ ಕಾಫಿ ಸವಿಯುತ್ತಲೇ ಓದಿಸಿಕೊಂಡ ಆಪ್ತಸಾಲುಗಳಿವು. ಪ್ರಾರ್ಥನೆ,ಶ್ರದ್ಧೆ, ಸಮರ್ಪಣಾ ಭಾವ,ಅಹಂಕಾರದ ವಿನಾಶತೆ ಇತ್ಯಾದಿ ಸಂದೇಶಗಳೂ ಒಳಗೊಂಡಿರುವ ಕವಿತೆಗಳು ಕಾಫಿಯಂತೆ ಸಮನ್ವಯವಾಗಿ, ಒಟ್ಟಾರೆಯಾಗಿ ಲೋಕರೂಡಿ ಗುರುಗಳಂತಿವೆ.ತಮಗೆ ತೋಚಿದ್ದನ್ನು ಹೇಳುವ ಬಗೆಯಲ್ಲಿ ಹೊಸತನವಿದೆ.ದ್ವನಿ ಕವಿತೆಯ ರೂಪಗಳಲ್ಲಿ ಅಡಗಿ ಸಹಜೋಕ್ತಿಯಾಗಿ ಓದುಗರಿಗೆ ತಲುಪುವ ಪರಿ ಮೆಚ್ಚುಗೆಯಾಗುತ್ತದೆ.ಮುಂದಿನ ದಿನಮಾನಗಳಲ್ಲಿ ದೀರ್ಘ ಕವಿತೆಗಳೊಂದಿಗೆ ನಮ್ಮ ಮುಖಾಮುಖಿಯಾಗುತ್ತಾರೆಂಬ ಭರವಸೆಯೊಂದಿಗೆ ಬೆಳಗಿನ ಕಾಫಿಯ ರುಚಿ ಮತ್ತು ಓದುವಿನ ಕೊನೆಯ ಸಾಲು ಮುಗಿಸುತ್ತೇನೆ. ****************** ದೇವೂ ಮಾಕೊಂಡ

ಪುಸ್ತಕ ಪರಿಚಯ Read Post »

ಕಾವ್ಯಯಾನ

ಮುಂಗಾರಿನ ಮಳೆಯಲಿ

ಕವಿತೆ ಮುಂಗಾರಿನ ಮಳೆಯಲಿ ಜಯಶ್ರೀ ಭ.ಭಂಡಾರಿ. ಬೆಳಗಿನಿಂದ ಕಂಬ ನಿಂತಂಗ ನಿಂತ ಕಾಯ್ತಿದಿನಿನೀ ಬರುವ ದಾರಿಗೆ ಎವೆಯಿಕ್ಕದೆ ನೋಡ್ತಿದಿನಿಮುಂಗಾರು ಮಳೆಯ ಮಣ್ಣವಾಸನೆಯಲಿನಿನ್ನ ಬೆವರಘಮಲು ತೇಲಿಬರುವದೆ ಎಂದು ಪಟಪಟ ಮಳೆಹನಿಗಳೆಲ್ಲ ಕಣ್ಣತೋಯಿಸಿನಿನ್ನ ನೆನಪುಗಳಲ್ಲಿ ಮನ ಹೂವಾಗಿಸಿಪ್ರತಿಕ್ಷಣ ಶಬರಿಯಾಗಿರುವೆ ಕಣೆ ನಿನ್ನ ನೆನೆಸಿಕಡಲಾದ ಭಾವನೆಗಳೆಲ್ಲ ಮುನಿಸಿ ಮುತ್ತಿಕ್ಕಿವೆ ನಿನಗೇಕೆ ಇಂತಹ ಕಠಿಣ ಮನಸುಬರಬಾರದೆ ಭಾವನೆಗಳಿಗೆ ರೆಕ್ಕೆಮೂಡಿಸಿಅರಳಬಾರದೆ ನನ್ನಿ ಬಾಹುಗಳ ಬಳಸಿರಿಮ್ ಜಿಮ್ ನಾದದಲಿ ಒಂದಾಗುವಾ ಸರಸಿ ಗೆಜ್ಜೆಯ ಹೊನ್ನ ಪಾದಗಳ ಅರಸಿ ನೀಹೆಜ್ಜೆಯನಿಡುತ ಒಲಿದು ಬಾರೆ ಒಲವ ಕನವರಿಸಿಎದೆಯಬಾಂಧಳದ ತುಂಬೆಲ್ಲ ನಿನ್ನದೆ ಘಮನಿನಗೇಕೆ ಅರ್ಥವಾಗತಿಲ್ಲ ಈ ಹೃದಯ ಕುಲುಮೆ ಬಚ್ಚಿಟ್ಟ ಭಾವನೆಗಳೆಲ್ಲ ತಣ್ಣಗಾಗುತಿವೆಬಿಚ್ಚಿಟ್ಟ ಮನವಿದು ಮುನಿದು ಸೊರಗುತಿಹೆಹನಿಗಳ ಲೀಲೆಯಲಿ ಕನಸು ಕಮರುತಿಹೆಭಾವನೆಗಳು ಸೋರಿಹೋಗಿ ಕಮರುತಿಹೆ ಮಳೆ ರಭಸ ಮಂದವಾಗುವ ಮುನ್ನಮನಹಾಳಾಗಿ ರಚ್ಚೆಹಿಡಿಯುವ ಮುನ್ನನನ್ನೆಲ್ಲ ಸಿಹಿಕನಸುಗಳು ಜಾರಿಹೋಗುವ ಮುನ್ನಮನದನ್ನೆ ಮನ್ನಿಸಿ ಭಾವನೆಗಳಿಗೆ ರುಜು ಹಾಕುಬಾ **********************************************

ಮುಂಗಾರಿನ ಮಳೆಯಲಿ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸಂಗಾತಿಯ ಮೌನ ಪಂಡಿತ್ ರವಿಶಂಕರ್ ನಿಧನರಾದಾಗ ಅವರ ಸಂಗೀತ ಪ್ರತಿಭೆ, ಪ್ರಯೋಗಶೀಲತೆ, ಪ್ರಶಸ್ತಿಗಳನ್ನು ಮೆಚ್ಚುವ ಬರೆಹಗಳು ಪ್ರಕಟವಾದವು. ಕೆಲವು ಪತ್ರಿಕೆಗಳು ಮಾತ್ರ ಅವರ ಖಾಸಗಿ ಬದುಕಿನ ಬಗ್ಗೆ ಬರೆದವು. ಅಲ್ಲಿ ಅವರ ಪ್ರೇಯಸಿಯರ, ಮಡದಿಯರ ಹಾಗೂ ವಿಚ್ಛೇದನಗಳನ್ನು ಕುರಿತ ಮಾಹಿತಿಯಿತ್ತು. ಈ ಲೇಖನಗಳಿಗೆ ರವಿಶಂಕರ್ ಅವರನ್ನು ಬದನಾಮಿ ಮಾಡುವ ಇರಾದೆ ಏನಿರಲಿಲ್ಲ. ಹೆಸರಾಂತ ಕಲಾವಿದರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಗಳನ್ನು ನಡೆಸಿಕೊಂಡ ವಿಶ್ಲೇಷಣೆಯಿತ್ತು. ಇವುಗಳಲ್ಲಿ ರವಿಶಂಕರರ ಮೊದಲ ಪತ್ನಿಯೂ ಗುರು ಉಸ್ತಾದ್ ಅಲ್ಲಾವುದ್ದೀನಖಾನರ ಪುತ್ರಿಯೂ ಆದ ಅನ್ನಪೂರ್ಣಾ ದೇವಿಯವರು, ರವಿಶಂಕರ್ ತ್ಯಜಿಸಿದ ಬಳಿಕ ತಮ್ಮ ಬದುಕನ್ನು ಮುಂಬೈನ ಫ್ಲಾಟಿನಲ್ಲಿ, ಏಕಾಂತವಾಗಿ ಮೌನವಾಗಿ ದುಗುಡದಲ್ಲಿ ಕಳೆಯುತ್ತಿರುವ ಚಿತ್ರ ಮಾತ್ರ ಕರುಳಿಗೆ ಕಿಚ್ಚಿಡುವಂತಿತ್ತು. ಪ್ರತಿಭಾವಂತ ಕಲಾವಿದೆಯಾಗಿದ್ದ ಅನ್ನಪೂರ್ಣಾ ವಿಚ್ಛೇದನದ ಬಳಿಕ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು. ಆಮೆಯಂತೆ ಚಿಪ್ಪಿನಲ್ಲಿ ತಮ್ಮನ್ನು ಒಳಗೆಳೆದುಕೊಂಡು ಬದುಕಲಾರಂಭಿಸಿದರು. ರವಿಶಂಕರ್ ಸಾವಿಗೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಯತ್ನಿಸಿದವು. ಅವರು ಯಾರ ಕೈಗೂ ಸಿಗಲಿಲ್ಲ್ಲ. ರವಿಶಂಕರ್ ಯಾಕೆ ಹೀಗೆ ಮಾಡಿದರು? ಸ್ವತಃ ಅನ್ನಪೂರ್ಣಾ ಬದುಕಿನ ಈ ತಿರುವನ್ನು ಯಾಕೆ ಸವಾಲನ್ನಾಗಿ ಸ್ವೀಕರಿಸಲಿಲ್ಲ? ಗಂಡ ಮಾಡಿದ್ದು ವಿಶ್ವಾಸದ್ರೋಹ ಎನಿಸಿತೇ? ಗಂಡನ ಮನೋಭಾವವನ್ನು ಅರಿಯದಂತೆ ನಡೆದುಕೊಂಡ ಪರಿತಾಪವೇ? ನಿಜವೇನೆಂದು ಅವರಿಗಷ್ಟೆ ಗೊತ್ತು. ಆದರೆ ಲೋಕದ ಮುಂದೆ ಹೇಳಲೊಲ್ಲರು. ಅನಕೃ ಅವರ `ಸಂಧ್ಯಾರಾಗ’ ಕಾದಂಬರಿಯಲ್ಲೂ ಹೀಗೇ ಆಗುತ್ತದೆ. ಕಲಾವಿದ ತನ್ನ ಕಲಾಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೋಗುತ್ತಾನೆ. ತಾನು ಬಳಸಿ ಕೈಬಿಡುತ್ತ ಹೋಗುವ ಸ್ತ್ರೀಯರ ಬಗ್ಗೆ ಮರಳಿ ಚಿಂತಿಸುವುದೇ ಇಲ್ಲ. ಕಾದಂಬರಿ ಕೂಡ ಈ ಪರಿತ್ಯಕ್ತರ ಬಾಕಿ ಜೀವನದ ಬಗ್ಗೆ ಮೌನತಳೆಯುತ್ತದೆ. ಭೀಮಸೇನ ಜೋಶಿಯವರನ್ನು ಒಳಗೊಂಡಂತೆ ಅನೇಕ ಕಲಾವಿದರ ಜೀವನದ ಬಗ್ಗೆಯೂ ಇಂತಹ ಚಿತ್ರಗಳಿವೆ. ನಮ್ಮ ಕಲಾವಿದರ ಈ ಬದಲಿ ಮುಖಕ್ಕಾಗಿ ಅವರ ಕಲೆಯನ್ನು ನಿರಾಕರಿಸಬೇಕಿಲ್ಲ; ಅವರ ಕಲಾಸಾಧನೆ ಮೆಚ್ಚುವ ಭರದಲ್ಲಿ ಈ ಮುಖವನ್ನು ಅಡಗಿಸಬೇಕಿಲ್ಲ. ಸಾರ್ವಜನಿಕ ಬದುಕಿನಲ್ಲಿ ಪುಟಿಯುವ ನಮ್ಮ ಲೇಖಕರ ಮಡದಿಯರು ಯಾಕೆ ಮಂಕುಹಿಡಿದು ಕೂತಿರುತ್ತಾರೆ ಎಂಬ ಪ್ರಶ್ನೆ ನನಗೆ ಚುಚ್ಚುವುದುಂಟು. ಅದರಲ್ಲೂ ದಂಪತಿಗಳು ಒಂದೇ ವೃತ್ತಿಯಲ್ಲಿದ್ದಾಗ, ಮಡದಿ ತನಗಿಂತ ಪ್ರತಿಭಾವಂತಳಾಗಿದ್ದರೆ, ಪುರುಷಾಸೂಯೆ ನಾನಾ ಪರಿಯಲ್ಲಿ ಪ್ರಕಟವಾಗಲು ತೊಡಗುತ್ತದೆ. ಪ್ರತಿಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ರಮ್ಯ ಹೇಳಿಕೆಯ ಹಿಂದೆ ಕ್ರೂರ ವಾಸ್ತವವೂ ಅಡಗಿದೆ. ಅದು `ಸ್ತ್ರೀತ್ಯಾಗ’ದ ಹೆಸರಲ್ಲಿ ಅವಳ ಚೈತನ್ಯ ಹೀರಿ ಬೆಳೆಯುವ ಗಂಡುಸ್ವಾರ್ಥ. ಗಾಂಧೀಜಿ ಜೀವನದಲ್ಲೂ ಕಸ್ತೂರಬಾಯಿ ಈ ಕಷ್ಟ ಅನುಭವಿಸಿದರು. ಗಾಂಧಿಗೆ ತಮ್ಮ ಅಹಂ ಮಡದಿಯ ಭಾವನೆಯನ್ನು ಘಾಸಿಗೊಳಿಸುತ್ತಿರುವ ಬಗ್ಗೆ ಪರಿತಾಪವಿತ್ತು. ಅನೇಕ ಕೀರ್ತಿವಂತ ಪುರುಷರ ಬಾಳಲ್ಲಿ ಈ ಪರಿತಾಪ ಕಾಣುವುದಿಲ್ಲ. ಎಷ್ಟೊ ಹೆಸರಾಂತ ಲೇಖಕರ ಆತ್ಮಚರಿತ್ರೆಯಲ್ಲಿ ಅವರ ಮಡದಿಯರ ಚಿತ್ರಗಳೇ ಇರುವುದಿಲ್ಲ. ಇದ್ದರೂ ಸಣ್ಣರೇಖೆಯಂತೆ ಬಂದು ಹೋಗುತ್ತದೆ. ಆದರೆ ಇದೇ ಮಡದಿಯರು, ತಮ್ಮ ಸಂಗಾತಿಗಳು ತೀರಿಕೊಂಡ ಬಳಿಕ ಬರೆಯುವ ಆತ್ಮಕಥೆಗಳಲ್ಲಿ, ಬಾಳಿನ ಇನ್ನೊಂದೇ ಸತ್ಯವನ್ನು ಹೊರಹಾಕುವರು. ಹೀಗಾಗಿ ಪ್ರಸಿದ್ಧ ಲೇಖಕರ ಸಂಭಾವನ ಗ್ರಂಥಗಳಲ್ಲಿ ಅವರ ಮಕ್ಕಳು-ಮಡದಿ ಬರೆದಿರುವುದು ಸ್ವಾರಸ್ಯಕರ ಮಾತ್ರವಲ್ಲ, ಮಹತ್ವದ್ದು ಕೂಡ. ಅಲ್ಲಿ ಸಾಮಾನ್ಯವಾಗಿ ಪತಿಯೇ ಪರಮೇಶ್ವರ ಎಂದು ತಮ್ಮನ್ನು ಸಲ್ಲಿಸಿಕೊಂಡಿರುವ ಧೋರಣೆಯ ಲೇಖನಗಳಿರುತ್ತವೆ. ಅವುಗಳ ಒಳಗೆಯೇ ಪತಿದೇವರು ನಿತ್ಯ ಬದುಕಿನಲ್ಲಿ ಎಸಗಿರುವ ಕೃತ್ಯಗಳ, ಸಣ್ಣತನ, ಎಗರಾಟಗಳ ಸೂಕ್ಷ್ಮ ಚಿತ್ರಗಳೂ ಇರುತ್ತವೆ. ಗಂಡನಿಂದ ಹಿಂಸೆಗೀಡಾದ ಮಹಿಳೆಯರು ಬರೆದಿರುವ ಆತ್ಮಕಥನಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಸಾಮಾನ್ಯವಾಗಿ ಅವು ಗಂಡ ಸತ್ತಮೇಲೆಯೇ ಪ್ರಕಟವಾಗುತ್ತವೆ. ಸಾವಿಗೂ ಸತ್ಯಪ್ರಕಟನೆಗೂ ಇರುವ ಈ ಸಂಬಂಧ ಚೋದ್ಯ ಹುಟ್ಟಿಸುತ್ತದೆ. ಅನ್ನಪೂರ್ಣದೇವಿ, ರವಿಶಂಕರ್ ತೀರಿಕೊಂಡ ಮೇಲೂ ಏನನ್ನೂ ಬರೆಯಲಿಲ್ಲ. ಈ ವೈರುಧ್ಯಗಳಿಗೆ ಕಾರಣವೇನು? ಬರೆಹ ಮತ್ತು ಬದುಕಿನ ನಡುವಣ ನಡೆನುಡಿ ಕಂದಕ? ಜೀವನ ಸಂಗಾತಿಯನ್ನು ಸಮನಾಗಿ ಬೆಳೆಯಲು ಅವಕಾಶಕೊಡದ ಪುರುಷಾಹಮಿಕೆ? ಅಮೀರ್‍ಬಾಯಿ ಕರ್ನಾಟಕಿಯವರ ಜೀವನ ಸಂಗಾತಿಯಾಗಿದ್ದ ಖಳನಟ ಹಿಮಾಲಯವಾಲಾನ ಕುಡಿತ,ಆತ ಕೊಡುತ್ತಿದ್ದ ದೈಹಿಕ ಹಿಂಸೆಗಳು ತನಗೆ ನಿಷ್ಠಳಾಗಿರದ ಹೆಂಡತಿಯ ಮೇಲಿನ ಕೋಪದ ಫಲವೇ ಅಥವಾ ಆಕೆ ಸಾರ್ವಜನಿಕ ಬದುಕಿನಲ್ಲಿ ತನಗಿಂತ ಯಶಸ್ವಿ ಆಗುತ್ತಿದ್ದುದರ ಅಸೂಯೆಯೇ?ಪ್ರಸಿದ್ಧರ ಮನೆಗೆ ಹೋದಾಗಲೆಲ್ಲ ಅವರು ಮಡದಿಯ ಜತೆ ವರ್ತಿಸುವ ರೀತಿ ಕುತೂಹಲ ಹುಟ್ಟಿಸುತ್ತದೆ. ಬಹುಪಾಲು ಮಡದಿಯರು ಚಹಕೊಟ್ಟು ಅತಿಥಿಗಳಿಗೆ ನಮಸ್ಕರಿಸಿ ಅಡುಗೆಮನೆ ಸೇರಿಬಿಡುತ್ತಾರೆ. ಚರ್ಚೆ ಹರಟೆಗಳಲ್ಲಿ ಭಾಗವಹಿಸುವುದಿಲ್ಲ. ವ್ಯಂಗ್ಯವೆಂದರೆ, ಗಂಡನು ಬಂದವರೊಡನೆ ಮಾಡುವ ಚರ್ಚೆ ಕೆಲವೊಮ್ಮೆ ಸ್ತ್ರೀಯರ ಬಗ್ಗೆಯೂ ಇರಬಹುದು. ಕೆಲವು ಮಹಿಳೆಯರಿಗೆ ಚರ್ಚೆಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ವಾದಿಸಬಹುದು. ಆಸಕ್ತಿ ಇರಲೇಬೇಕಿಲ್ಲ, ನಿಜ. ಆದರೆ ಆಸಕ್ತಿ ಹುಟ್ಟಿಸಲು ಅಗತ್ಯವಾದ ಅಭಿವ್ಯಕ್ತಿಯ ಅವಕಾಶ ಸಿಕ್ಕದೆ ಹೋಗಿದೆ ಎನ್ನುವ ವಾಸ್ತವ ಮರೆಯಲಾಗದು. ಸಾರ್ವಜನಿಕ ಚರ್ಚೆಯಲ್ಲಿ ಮಹಿಳೆಯರು ಭಾಗವಹಿಸುವುದರ ಬಗ್ಗೆ ಅಘೋಷಿತ ನಿಷೇಧಗಳು ಎಲ್ಲ ಮನೆಗಳಲ್ಲೂ ವಿಭಿನ್ನ ಪ್ರಮಾಣಗಳಲ್ಲಿ ಜಾರಿಯಲ್ಲಿವೆ. ಇದು ಕಂಡವರ ಮನೆಯ ಕತೆಯಲ್ಲ. ನಮ್ಮ ಮನೆಯ ಕತೆಯೂ ಹೌದು. ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅವು ಹೆಚ್ಚಾಗುತ್ತಿವೆಯೊ ಅಥವಾ ಈಗ ವರದಿ ಆಗುತ್ತಿರುವುದರಿಂದ ಹೀಗನಿಸುತ್ತಿದೆಯೊ? ಈ ಪ್ರಕರಣಗಳು ಹೆಚ್ಚಾಗಲು ಲೈಂಗಿಕ ಪ್ರಚೋದಕ ಸಿನಿಮಾ ಸೀರಿಯಲ್ ಹಾಗೂ ಜಾಹಿರಾತು ಸಹ ಕಾರಣ ಎಂಬ ವಾದವಿದೆ. ಹೊಸತಲೆಮಾರಿನ ನಿರುದ್ಯೋಗಿ ತರುಣರ ಹತಾಶೆಗಳು ಪ್ರಟಕವಾಗುತ್ತಿರುವ ಪರಿ ಎಂಬ ವಿವರಣೆಯೂ ಇದೆ. ಅಷ್ಟೊಂದು ಮುಂಚೂಣಿಗೆ ಬಾರದ ಇನ್ನೊಂದು ವಾದವೆಂದರೆ, ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ ಎನ್ನುವುದು. ಭಾರತದ ದಲಿತರಾಗಲಿ, ಅಮೆರಿಕೆಯ ಕಪ್ಪುಜನರಾಗಲಿ, ಕೆಲವು ಇಸ್ಲಾಮಿಕ್ ದೇಶಗಳ ಮಹಿಳೆಯರಾಗಲಿ, ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದ ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡಿದ್ದರು. ಹಲ್ಲೆಗಳು ಕಡಿಮೆಯಿದ್ದವು. ಅವರು ವ್ಯವಸ್ಥೆಯನ್ನು ಪ್ರಶ್ನಿಸಲು ಹಾಗೂ ಹಾಕಿದ ಗೆರೆಮೀರಿ ತಮ್ಮ ಸ್ವಂತಿಕೆ ತೋರಲು ಆರಂಭಿಸಿದೊಡನೆ ಅವು ಅಧಿಕಗೊಂಡವು. ಹಲ್ಲೆಗೆ ಸಿಕ್ಕಿರುವುದು ಕುಂಟುನೆವ. ಮಹಿಳೆಯರು ಪ್ರಚೋದಕ ವೇಷ ಧರಿಸುವುದರಿಂದಲೇ ಅತ್ಯಾಚಾರಗಳು ಆಗುತ್ತಿವೆ; ಆಕೆ ಗಂಡಸರಂತೆ ಬಾರಿಗೆ ಹೋಗುವುದರಿಂದ, ಸಿಗರೇಟು ಸೇದುವರಿಂದ, ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಸಂಸಾರಗಳು ಬಿರುಕು ಬಿಡುತ್ತಿವೆ ಎಂಬ ನಾಜೂಕು ವಾದಗಳಿವೆ. ಈ ವಿಚಾರದಲ್ಲಿ ಎಲ್ಲ ಧಾರ್ಮಿಕ ನಾಯಕರೂ ಏಕಮತೀಯರು. ಪಾಕಿಸ್ತಾನದಲ್ಲಿ ಒಬ್ಬ ಪ್ರತಿಭಾವಂತ ಮಹಿಳೆ, ಮಂತ್ರಿಯಾಗಿದ್ದವರು, ಪ್ಯಾರಾಚೂಟಿನಲ್ಲಿ ಪೈಲಟನನ್ನು ಅಪ್ಪಿಕೊಂಡು ಧುಮುಕಿದರು ಎಂಬ ಕಾರಣದಿಂದ ಕೊಲೆಯಾದರು. ಬೆನಜೀರ್ ಕೊಲೆಯ ಹಿಂದೆಯೂ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಗಳಿಸುತ್ತಿರುವ ಯಶಸ್ಸಿಗೆ ಕರುಬುತ್ತಿದ್ದ ಪುರುಷವಾದವಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ಬಾಂಬ್ ಹಾಕುವುದಕ್ಕೆ, ಹುಟ್ಟುಹಬ್ಬ ಆಚರಿಸುತ್ತಿದ್ದ ತರುಣ-ತರುಣಿಯರ ಮೇಲೆ ಹಲ್ಲೆ ಮಾಡಲು, ಧರ್ಮ ಸಂಸ್ಕøತಿ ರಕ್ಷಣೆಯ ಸಮರ್ಥನೆ ನೀಡಲಾಗುತ್ತಿದೆ. ಮಹಿಳೆ ಗಂಡಸರಂತೆ ವರ್ತಿಸುತ್ತಿರುವ ಅಥವಾ ಗಂಡಸರ ಸಮಸಮಕ್ಕೆ ಬರುತ್ತಿರುವ ಬಗೆಗೆ ಪುರುಷವಾದಿಗಳಲ್ಲಿ ವಿಪರೀತ ಅಂಜಿಕೆಯಿದೆ. ಭಾರತದ ಸಾಮಾಜಿಕ ಪರಿಸರದಲ್ಲಿರುವ ಗಂಡುವಾದಿ ಮನೋಧರ್ಮವು, ಮಹಿಳೆಯರ ಪ್ರತಿಭೆ ಮತ್ತು ಕ್ರಿಯಾಶಕ್ತಿ ಹೊರಹೊಮ್ಮಲು ಅದೃಶ್ಯವಾದ ಅಸಂಖ್ಯ ತೊಡಕುಗಳನ್ನು ನಿರ್ಮಿಸಿದೆ. ಇದರಿಂದ ಮದುವೆಯಾದ ಅಥವಾ ಮಕ್ಕಳಾದ ಬಳಿಕ ಗಾಯನವನ್ನು ಬಿಟ್ಟು ಗೃಹಿಣಿಯರಾಗಿ ಮಾತ್ರ ಉಳಿದ ಕಲಾವಿದರಿದ್ದಾರೆ; ವೈದ್ಯಕೀಯ ಇಂಜಿನಿಯರಿಂಗ್ ಓದಿ ಕೂಡ ಗೃಹಿಣಿಯರನ್ನಾಗಿ ಪಳಗಿಸಲಾದ ಚೈತನ್ಯಗಳಿವೆ; ಅನ್ನಪೂರ್ಣಾ ಅವರಿಂದ ಯಾರಿಗೂ ಸಂಗೀತವನ್ನು ಕಸಿಯಲಾಗಿಲ್ಲ. ಆದರೆ ಏಕಾಂತದ ಬದುಕನ್ನು ಅವರು ದೂಡುತ್ತಿರುವವರು. ಕೊಲ್ಲುವುದು ಎಂದರೆ ಜೀವ ತೆಗೆಯುವುದು ಮಾತ್ರವಲ್ಲ. ಬಾಳಿನಲ್ಲಿ ನುಗ್ಗಿಬಂದ ಅನಿರೀಕ್ಷಿತ ಆಘಾತಗಳನ್ನು ಹೊಸತಿರುವನ್ನು ಸವಾಲಾಗಿ ತೆಗೆದುಕೊಂಡಿರುವ ಅನೇಕ ಧೀಮಂತರಿದ್ದಾರೆ. ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ವಿಜಯಮ್ಮ ಮುಂತಾದವರ ಆತ್ಮಕತೆಗಳನ್ನು ಓದುವಾಗ ಇದು ಅರಿವಾಗುತ್ತದೆ; ಸುರಂಗದ ತುದಿಗೆ ಬೆಳಕಿರುತ್ತದೆಯೆಂದು ನಡೆದ ಇವರು, ಕಠಿಣ ಸವಾಲನ್ನು ಎದುರಿಸಿ ಗೆದ್ದ ಪರಿ ಹೆಮ್ಮೆ ಮೂಡಿಸುತ್ತದೆ. ಇವುಗಳ ಜತೆಯಿಟ್ಟು ನೋಡುವಾಗ, ಅನ್ನಪೂರ್ಣಾ ತೆಗೆದುಕೊಂಡ ತೀರ್ಮಾನವು, ಪ್ರತಿಭಟನೆಯ ಇನ್ನೊಂದು ಮಾದರಿಯೂ ಆಗಿರಬಹುದು. ಆದರೆ ಅದು ಅವರನ್ನು ಕರೆದುಕೊಂಡು ಹೋಗಿ ಮುಟ್ಟಿಸಿರುವ ತುದಿ-ಅದೇನೆಂದು ಸ್ಪಷ್ಟವಾಗಿಲ್ಲ- ಹೊರನಿಂತು ನೋಡುತ್ತಿರುವ ನಮಗೆ ದಿಗಿಲು ಹುಟ್ಟಿಸುತ್ತಿದೆ. ************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಶಾಲೆ ಮಾಸ್ತರ್ರು

ಕವಿತೆ ಶಾಲೆ ಮಾಸ್ತರ್ರು ಫಾಲ್ಗುಣ ಗೌಡ ಅಚವೆ ಗೆರೆ ಗೆರೆಗಳ ಪಾಯಜಾಮಗದ್ದೆ ಹಾಳಿಯ ಮೇಲೆ ನಡೆದು ಬಂದರೆಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿಟೇಬಲ್ಲು ಚೊಕ್ ಪೀಸು ಕರಿ ಹಲಗೆಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆಮತ್ತೆ ತೋರಿಸಬೇಕು ಬರೆದುಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂನೋಡಿಯೂ ನೋಡದಂತೆಕಿಟಕಿಗಳೂ ಗಪ್ ಚಿಪ್ಹೆದರಿ ಕೂತ ಮಕ್ಕಳಂತೆ ಏಕೋಪಾದ್ಯಾಯ ಶಾಲೆಯ ಮಾಸ್ತರರು ಇರುವುದೇ ಒಂದು ಖೋಲಿಟೇಬಲ್ಲೇದುರೇ ಪಾಠ ಹೇಳುವರುಕರಿ ಹಲಗೆ ಇದ್ದೂ ಇಲ್ಲದಂತೆಸದಾ ಎದುರಿಗಿರುತ್ತದೆ ಸೋರುವ ಹಂಚಿನಂತೆ ಶನಿವಾರ ಬಂದರೆ ಹಬ್ಬವೋ ಹಬ್ಬಹುಡುಗರೇ ನಾವೆಲ್ಲಾ ಗದ್ದೆ ಬಯಲಲ್ಲೇಹೋಮ್ ವರ್ಕ ಮಾಡದಿರೆ ಬಾಯ್ ಹಾರ್ಟ್ ಹಾಕದಿರೆಗಾಳ ಹಾಕುವ ಶಿಕ್ಷೆಛಡಿ ಚಮ್ ಚಮ್ ವಿದ್ಯಾ ಗಮ್ ಗಮ್ ಒಮ್ಮೆ ಏನಾಯಿತೆಂದರೆ,ಒದೆ ತಿಂದ ಮಕ್ಕಳು ಬಯಲ ದೇವರೆದುರು ನಿಂತು ಕಾಯಿಟ್ಟುಹರಕೆ ಮಾಡಿಕೊಂಡರು‘ ಶನಿವಾರ ಊರಿಗೆ ಹೋದ ಮಾಸ್ತರುತಿರುಗಿ ಬರಬಾರದು! ‘ಬಂತು ಸೋಮವಾರ ಯಥಾಸ್ಥಿತಿಒದೆ ತಿಂದರು!! ********************************

ಶಾಲೆ ಮಾಸ್ತರ್ರು Read Post »

You cannot copy content of this page

Scroll to Top