ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ ‘ಸಂಗಾತಿ’ಯ ಮೂರನೇ ಆಯಾಮ ಅಂಕಣಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಶ್ರೀ ವಿಜಯ ಪ್ರಶಸ್ತಿ ದೊರಕಿದ್ದು ಪತ್ರಿಕೆಅವರನ್ನು ಅಭಿನಂದಿಸುತ್ತದೆ ಶ್ರೀದೇವಿ ಕೆರೆಮನೆಗೆ ಶ್ರೀವಿಜಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನಾಡಿನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ‌ ಶ್ರೀ ವಿಜಯ ಪ್ರಶಸ್ತಿಗೆ ಜಿಲ್ಲೆಯ ಕವಿಯತ್ರಿ, ಕಥೆಗಾರ್ತಿ, ಅಂಕಣಗಾರ್ತಿ ಶ್ರೀದೇವಿ ಕೆರೆಮನೆ ಭಾಜನರಾಗಿದ್ದಾರೆ. ಈಗಾಗಲೇ ತಮ್ಮ ಕಥೆ ಕವನ ಅಂಕಣಗಳಿಂದ ಮನೆಮಾತಾಗಿರುವ ಶ್ರೀದೇವಿ ಕೆರೆಮನೆಯವರು ಐದು ಕವನ ಸಂಕಲನ, ಐದು ಅಂಕಣ ಬರಹ ಸಂಕಲನ, ಎರಡು ಗಜಲ್ ಸಂಕಲನ ಒಂದು ಕಥಾ ಸಂಕಲನ ಹಾಗೇಯೇ ಒಂದು ವಿಮರ್ಶಾ ಸಂಕಲನ‌ ಹೀಗೆ ಒಟ್ಟೂ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇನ್ನೂ ನಾಲ್ಕು ಪುಸ್ತಕಗಳು ಅಚ್ಚಿನ ಮನೆಯಲ್ಲಿವೆ. (ಎರಡು ಕವನ ಸಂಕಲನಗಳು, ಒಂದು ಕಥಾ ಸಂಕಲನ ಒಂದು ಇಂಗ್ಲಿಷ್ ಲೇಖಕರ ವಿಮರ್ಶಾ ಕೃತಿ) ೪೫ ವರ್ಷದ ಒಳಗಿನ ಹಾಗೂ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳ ಮೊತ್ತದ ಈ ಪ್ರಶಸ್ತಿಯನ್ನು ಈ ವರ್ಷ ಇಬ್ಬರಿಗೆ ನೀಡಲಾಗುತ್ತಿದ್ದು ಇನ್ನೊಬ್ಬರು ರಾಯಚೂರಿನ ಕವಿ ಚಿದಾನಂದ ಸಾಲಿಯವರಾಗಿದ್ದು ಇಬ್ಬರಿಗೂ ಪ್ರಶಸ್ತಿಯ ಮೊತ್ತವನ್ನು ತಲಾ ಅರವತ್ತು ಸಾವಿರ ರೂಪಾಯಿಯಂತೆ ನೀಡಲಾಗುವುದು ಎಂದು ಕಸಾಪ ಅಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಹಾಗೂ ಕಸಾಪದ ಮಾಧ್ಯಮ ವಕ್ತಾರರಾಗಿರುವ ಪದ್ಮರಾಜ ದಂಡಾವತಿಯವರನ್ನು ಒಳಗೊಂಡ ಸಮಿತಿ ತೀರ್ಮಾನಿಸಿದೆ ಎಂದು ಕಸಾಪ ಅಧ್ಯಕ್ಷರಾದ ಶ್ರೀ ಮನು ಬಳಿಗಾರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ತಾವು ಬರೆಯುತ್ತಿರುವ ಅಂಕಣಗಳ ಮೂಲಕ ಜನಸಾಮಾನ್ಯರಲ್ಲಿ ಮನೆಮಾತಾಗಿದ್ದಾರೆ. ಇತ್ತೀಚೆಗೆ ಹಲವಾರು ವೆಬ್ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಯನ್ನು ಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಈಗಾಗಲೇ ನಾಡಿನ ಹತ್ತಾರು ಪ್ರಶಸ್ತಿಗಳು ಸಂದಿದ್ದು ಈ ಪ್ರತಿಷ್ಟಿತ ಪ್ರಶಸ್ತಿಯು ಇನ್ನೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ. *******************************************

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ–12  ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, ಹೊಸ ಗಮ್ಯದತ್ತ ಗಮನ. ಐದಡಿ ಎತ್ತರದ ಆ ಯುವಕ ಬರೇ ತನ್ನ ಹೊರೆ ಮಾತ್ರವಲ್ಲ, ತನಗೆ ಸಂಬಳ ಕೊಡುವ ಒಡೆಯನದ್ದೂ, ಪಾತ್ರೆ ಪಗಡಿ, ಆಹಾರ ಅಷ್ಟನ್ನೂ ಹೊತ್ತು ಇನ್ನೂ ಎತ್ತರಕ್ಕೆ, ಪರ್ವತದ ತುದಿಗೆ ಏರುವ ಕನಸು. ಇನ್ನೊಂದು ದಿನ ನಡೆದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಹತ್ತಿದ ಖ್ಯಾತಿ ಅವರಿಗೆ. ರಾತ್ರಿಯಿಡೀ ಗೌರೀ ಶಂಕರ ಶಿಖರದ ಕನಸು. ಬಾಲ್ಯದಲ್ಲಿ ಅಮ್ಮ ಕಂಡ ಕನಸಿನ ನೆನಪು.  ಹೌದು ! ಆತನ ಹೆಸರು ತೇನ್ ಸಿಂಗ್ !  ತೇನ್ ಸಿಂಗ್ ನೋರ್ಗೆ. ವಾತಾವರಣ ವಿಪರೀತವಾದರೆ ಹತ್ತಲೂ ಕಷ್ಟ,ಇಳಿಯಲೂ ಕಷ್ಟ. ಆದರೆ ಆ ಬೆಳಗ್ಗೆ  ಆಕಾಶ ಶುಭ್ರವಾಗಿತ್ತು. ನೀಲಾಕಾಶ ಕೊಡುವ ಹುರುಪು ಜಗತ್ತಿನ ಇನ್ನಾವುದೂ ಕೊಡದು. ಶುದ್ಧವಾದ ಹಿಮಗಡ್ಡೆ ಕರಗಿಸಿ,ಚಹಾ ಮಾಡಿ ಒಡೆಯ ಎಡ್ಮಂಡ್ ಹಿಲರಿಗೆ ಬ್ರೆಡ್ ಜತೆಗೆ ಕುಡಿಸಿ, ತಾನೂ ಸೇವಿಸಿ, ಪುನಃ ಒಂದೊಂದಾಗಿ ಹೆಜ್ಜೆಯಿಡುತ್ತಾ ಸಾಗಬೇಕು. ಆಕ್ಸೀಜನ್ ನ ಕೊರತೆಯಿಂದ ಅರ್ಧ ಹೆಜ್ಜೆಗೇ ಏದುಸಿರು ಬರುತ್ತೆ. ಮಧ್ಯಾಹ್ನದ ಹೊತ್ತಿಗೆ ಒಂದು ಎತ್ತರದ ಹಿಮದ ಕೋಡುಗಲ್ಲು ಶಿಖರದ ತುದಿಗೆ ಅಡ್ಡವಾಗಿ. ತೇನ್ ಸಿಂಗ್ ಕೊಡಲಿಯಿಂದ ಅದರಲ್ಲಿ ಮೆಟ್ಟಿಲು ಕಡಿಯುತ್ತಾನೆ. ಕೊನೆಯ ಒಂದಾಳೆತ್ತರದ ಏರು ಮೆಟ್ಟಿಲು ಕಡಿಯಲಾಗದಷ್ಟು ಕಡಿದಾಗಿತ್ತು . ತೇನ್ ಸಿಂಗ್, ತನ್ನ ಭುಜವನ್ನೇ ಮೆಟ್ಟಿಲಾಗಿಸಿ ನಿಲ್ಲುತ್ತಾನೆ. ಹಿಲರಿ ಹೆಗಲಿಗೆ ಪಾದ ಇಟ್ಟು ಮೇಲೆ ಹತ್ತಿ ಕೇಕೇ ಹಾಕುತ್ತಾನೆ. ತೇನ್ ಸಿಂಗ್ ನನ್ನು ಕೈ ಹಿಡಿದು ಮೇಲೆ ಹತ್ತಲು ಸಹಾಯ ಮಾಡುತ್ತಾನೆ. ಅದುವರೆಗೆ ಯಾರೂ ಮಾಡದ ಸಾಹಸ ಅವರಿಬ್ಬರೂ ಮಾಡಿದ್ದರು! ಅದು ತುದಿಯ ತುದಿ. ಜಗತ್ತಿನ ಸಹಸ್ರಾರ ಚಕ್ರ. ನಂಬಲಾಗದ ಸಾಧನೆಯ ಶಿಖರ ಏರಿದ ಕ್ಷಣವದು. ತೇನ್ ಸಿಂಗ್ ನ ಮೊದಲ ಪ್ರಯತ್ನವೇ ಅದು?. ಅಲ್ಲ. ಅದು ಆತನ ಹನ್ನೊಂದನೇ ಪ್ರಯತ್ನ. ಯಾಕೆ ಮನುಷ್ಯ ಹೀಗೇ ಸೋತು,ಪುನಃ ಸೋತು, ಮತ್ತೆ ಸೋತು,ಛಲ ಬಿಡದೆ ಪ್ರಯತ್ನ ಮಾಡುತ್ತಾನೆ?. ಬದುಕಲ್ಲಿ ಏನಿದೆ? ಬದುಕು ಎಂದರೆ ಏನು?. ಆ ರಾಜಕುಮಾರರು ಇಬ್ಬರೂ ಹಲವು ದಿನಗಳ ಕಾಲ ಕಾದಿದರು, ಇಬ್ಬರೂ ಭರತ ಭೂಖಂಡ ಕಂಡ ಅತ್ಯಂತ ಶಕ್ತಿಶಾಲಿ, ನಿಪುಣ ಯೋಧರು. ಮಲ್ಲ ಯುದ್ಧದಿಂದ ಹಿಡಿದು, ದೃಷ್ಟಿ ಯುದ್ಧದ ವರೆಗೆ. ದಿನಗಳು ತಿಂಗಳುಗಳು ಕಳೆದವು.  ಯುದ್ಧ ಮುಗಿದಾಗ, ಬಾಹುಬಲಿ ಎಲ್ಲಾ ಯುದ್ಧದಲ್ಲೂ ಗೆದ್ದಿದ್ದ. ಅಣ್ಣ ಭರತ,ಸೋತಿದ್ದ. ಇನ್ನೇನು ಸಿಂಹಾಸನದಲ್ಲಿ ಕೂರಬೇಕು ಅನ್ನುವಾಗ,ಆತ ಕೊನೆಯದೊಂದು ಯುದ್ಧ ಮಾಡಿದ. ಆ ಯುದ್ಧ ತನ್ನೊಳಗಿನ ಯುದ್ದ. ಅದರಲ್ಲಿ ಆತ ಗೆದ್ದು, ತನ್ನ ರಾಜ ಪೋಷಾಕು,ಕಿರೀಟಗಳನ್ನು ಕಳಚಿ ರಾಜಮಹಲಿನಿಂದ ಗೋಮಟನಾಗಿ ಹೊರನಡೆದ. ಆತನನ್ನು ಗೋಮಟೇಶ್ವರ ಅಂತ ಕರೆದರು. ಆತ ಇಂದಿಗೂ ಲಕ್ಷ ಮನಸ್ಸುಗಳ ರಾಜ್ಯವನ್ನು ಆಳುತ್ತಾನೆ! ಯಾಕೆ ನಡೆದ ಹೀಗೆ?. ಬದುಕು ಎಂದರೆ ಹೀಗಾ? ರಾಮೇಶ್ವರದ ಜಲಾಲುದ್ದೀನ್ ನ ಮಗ ಅಬ್ದುಲ್ ಕಲಾಂ, ಕಠಿಣ ಪರಿಶ್ರಮ ಮಾಡಿ, ಎಂಜಿನಿಯರ್ ಆಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದಾಗ, ಅಮ್ಮ ಕರೆದು ಹೇಳುತ್ತಾರೆ, “ಮಗನೇ, ನಿನಗೆ ಮದುವೆ ಮಾಡೋಣವೇ?”  ಕಲಾಂ,ಒಪ್ಪದೇ,ವಿಜ್ಞಾನ ಮತ್ತು ಸಂಶೋಧನೆಗೆ ಜೀವನವನ್ನು ಅರ್ಪಿಸುತ್ತಾರೆ. ಇದು ಬದುಕಿನ ಯಾವ ಆಯಾಮ?. ಅದು ಎಪ್ರಿಲ್ ತಿಂಗಳು. ಕಾರ್ಗಿಲ್ ಶಿಖರಗಳ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ಡೇರೆ ಹೊಡೆದು ಗನ್ ಹಿಡಿದು ನಿಂತ ಹೊತ್ತು, ಕರ್ನಾಟಕದ ವೀರ ಯೋಧ, ಮೇಜರ್ ಅಶೋಕ್, ಹುಟ್ಟೂರಿನಿಂದ ೩೦೦೦ ಕಿಲೋಮೀಟರ್ ದೂರ ತನ್ನ ಸೈನಿಕ ಟುಕಡಿಯ ಜತೆಗೆ ಅಂತಹ ಒಂದು ಶಿಖರವನ್ನು ಹತ್ತುವ ಸಾಹಸ ಮಾಡುತ್ತಾರೆ. ಸೇನೆಯಲ್ಲಿ ಒಂದು ನಿಯಮವಿದೆ. ತಂಡವನ್ನು ಮುನ್ನಡೆಸುವಾಗ, ನಾಯಕ ಮುಂಚೂಣಿಯಲ್ಲಿರಬೇಕು. ಹಾಗೆಯೇ ಮೇಜರ್ ಅಶೋಕ್ ಮುಂದೆ,ಸಿಪಾಯಿಗಳು ಹಿಂದೆ, ಶಿಖರದ ಕಲ್ಲು ಬಂಡೆಗಳನ್ನು ಏರುವಾಗ,ಪಾಕಿಸ್ತಾನದ ಸೈನಿಕರ ಕಣ್ಣು ತಪ್ಪಿಸಿ ಏರ ಬೇಕು. ಅದೂ ರಾತ್ರೆಯ ಕತ್ತಲಲ್ಲಿ. ನಾವೆಲ್ಲಾ, ಎ.ಸಿ. ರೂಂ ನಲ್ಲಿ ಬೆಚ್ಚಗೆ ನಿದ್ರಿಸುವಾಗ, ಅಶೋಕ್, ಕಲ್ಲುಗಳ ತರಚುಗಾಯದಿಂದ ಸೋರುವ ನೆತ್ತರು, ಲೆಕ್ಕಿಸದೆ ಎದೆಯೂರಿ, ಹಲ್ಲಿಯಂತೆ ಪರ್ವತದ ಎಲ್ಲೆಗೆ ಕಚ್ಚಿಹಿಡಿದ ಹಲ್ಲಿಯಂತೆ ಹತ್ತಿದರು. ಮೇಲೇರಿ, ಮುಖಕ್ಕೆ ಮುಖ ಕೊಟ್ಟ ಯುದ್ಧದಲ್ಲಿ ತನ್ನ ತಂಡದ ಹಲವು ಸೈನಿಕರನ್ನು ಕಳೆದು ಕೊಂಡರೂ ಧೈರ್ಯದಿಂದ ಕಾದಿ, ವೈರಿ ಸೈನಿಕರನ್ನು ಸದೆಬಡಿದು ಭಾರತದ ಪತಾಕೆಯನ್ನು ಹಾರಿಸುತ್ತಾರೆ.  ಬದುಕು ಹೀಗಿರಬೇಕು ಎಂಬ ವಜ್ರಕಠೋರ ಸಂಕಲ್ಪದ ಬದುಕು ಅದು. ದೇಶ ಮತ್ತು ದೇಶದ ಪ್ರಜೆಗಳಾದ ನಮ್ಮ ನಿಮ್ಮ ರಕ್ಷಣೆಗೋಸುಗ ತನ್ನ ಪ್ರಾಣ ತ್ಯಾಗ ಮಾಡುವ ಅತ್ಯಂತ ಕಠಿಣ ನಿರ್ಧಾರದ ಬದುಕು. ಹಾಗಿದ್ದರೆ ಬದುಕಿನ ವ್ಯಾಖ್ಯೆ ಏನು?. ಬೇಂದ್ರೆ ಅವರು ಬದುಕು ಮಾಯೆಯ ಮಾಟ ಅಂತ ಹೀಗೆ ಬರೀತಾರೆ. “ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಬ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು” ಕವಯಿತ್ರಿ ವಿಜಯಲಕ್ಷ್ಮಿ ಅವರ ಕವಿತೆ ಬದುಕಿನ ಇಂತಹ ಗಹನ ವಿಷಯದತ್ತ ತೆರೆಯುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತೆ. ***    ***   ****  ಬದುಕು ಕಲೆ ಬದುಕೇ ಒಂದು ಪಾಠ. ಬದುಕುವುದೇ ಒಂದು ಕಲೆ. ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಓದಿ ಕಲಿಯುವ ಕಲೆಯೇ…. ಬದುಕು? ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು. ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು  ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು . ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು. ಓದಿ ಕಲಿಯುವ ಕಲೆಯೇ..ಬದುಕು? **     ***     *** ನಿತ್ಯಸತ್ಯದ ಪಾಠವೇ ಬದುಕು ಎನ್ನುವಾಗ, ಕ್ಷಣಕ್ಷಣಗಳೂ ಅನುಭವ ಮೇಷ್ಟ್ರಾಗಿ, ಕಲಿಸುತ್ತವೆ. ಬದುಕುವುದು ಕಲೆ ಎನ್ನುವಾಗ, ಮನುಷ್ಯನ ಕ್ರಿಯೇಟಿವಿಟಿ ಮತ್ತು ರಾಚನಿಕ ಸೌಂದರ್ಯದತ್ತ ಮನಸ್ಸು ಕೇಂದ್ರಿಸುತ್ತೆ. ‘ಬದುಕುತ್ತಾ ಹೋದಂತೆ ಬದುಕ ಕಲಿಸುವುದು ಬದುಕು’ ! ಬದುಕು ಅನುಭವವೂ ಹೌದು, ಆ ಅನುಭವ ಭವಿಷ್ಯದ ದಾರಿದೀಪವೂ ಹೌದು.ವರ್ತಮಾನದಲ್ಲಿ ನಿಂತಾಗ, ಭೂತಕಾಲದ ಬದುಕು ಜ್ಞಾನ, ಭವಿಷ್ಯಕಾಲಕ್ಕೆ ಅದೇ ದಿಗ್ದರ್ಶಕ. ವಿಜಯಲಕ್ಷ್ಮಿ ಅವರ ಈ ಕವಿತೆ ಒಂದು ತತ್ವ ಪದದಂತಹ ಕವಿತೆ. ತತ್ವಶಾಸ್ತ್ರದ ಬಿಂದುಗಳನ್ನು ಒಂದೊಂದಾಗಿ ಅಳುವ ಮಗುವಿನ ನಾಲಿಗೆಗೆ ಹಚ್ಚುವ ಜೇನಿನಂತೆ ಹೇಳ್ತಾ ಹೋಗುತ್ತಾರೆ.  ಓದಿ ಕಲಿಯುವ ಕಲೆಯೇ ಬದುಕು? ಎಂಬುದು ಪ್ರಶ್ನೆ ಅಂತ ಅನಿಸುವುದಿಲ್ಲ. ಅದು ಕವಯಿತ್ರಿಯ ಧೃಡವಾದ ನುಡಿ. “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “ “ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.” ( ಶಿವರಾಮ ಕಾರಂತ) ಹೀಗೆ, ಬದುಕಿನ ಬಗ್ಗೆ ಶಿವರಾಮ ಕಾರಂತರು ಹೇಳುವ ಮಾತೂ ಈ ಕವಿತೆಯ ಆಶಯಕ್ಕೆ ಪೂರಕ. “ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು “ ನಡೆ, ಓಡು, ಜಿಗಿ, ಹಾರು, ಇವುಗಳೆಲ್ಲ ಕ್ರೊನೊಲಾಜಿಕಲ್ ಕ್ರಿಯೆಗಳು. ಒಂದರ ಕಲಿಕೆ ನಂತರದ್ದಕ್ಕೆ ಆವಶ್ಯಕ. ಮೊದಲ ಪ್ಯಾರಾದ ಬದುಕು ಕಲಿಸುವ ಬದುಕು ಎಂಬ ಕಲಿಕೆಯ ನಿರಂತರತೆಯನ್ನು ಇಲ್ಲಿ ಉದಾಹರಣೆ ಕೊಟ್ಟು ಪಾಠ ಮಾಡಿದ್ದಾರೆ, ಕವಯಿತ್ರಿ ಟೀಚರ್.  ಗೋಪಾಲಕೃಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯ ಪ್ರಸಿದ್ಧ ಸಾಲುಗಳಿವು ” ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ; ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಮನುಷ್ಯ ಪ್ರಜ್ಞೆಗೆ a exploration ಅನ್ನುವುದು ಮೂಲಸ್ವಭಾವ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’  ಅನ್ನುವಾಗ ಬದುಕಿನ ದಿಶೆ ನಿರ್ಧರಿಸುವ ಚಾಲಕಶಕ್ತಿಯನ್ನು ಅವರು ದರ್ಶಿಸುತ್ತಾರೆ. ಪುನಃ ಕವಿತೆಗೆ ಬರೋಣ. ” ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು”. ದಿಶೆ ಮತ್ತು ಗುರಿಯನ್ನೂ ದಾರಿಯಲ್ಲಿ ತಂದಿರಿಸುವಾಗ, ಅನುಭವದ ಜತೆಗೇ ವ್ಯವಸ್ಥಿತ ಚಿಂತನೆ ಮತ್ತು ಪ್ಲಾನಿಂಗ್, ಭವಿಷ್ಯದತ್ತ ಮನಸ್ಸಿನ ಪ್ರೊಜೆಕ್ಷನ್ ಗಳ ಜತೆಯಾಟ ಕಾಣುತ್ತೇವೆ. ಮನುಷ್ಯನ ಯುನಿಕ್ ಸಾಮರ್ಥ್ಯ ಇದು. ಬದುಕು ಕಲಿಸುವ ಬದುಕಿನಲ್ಲಿ, ಸಮಯಪ್ರಜ್ಞೆಯಿಂದ ಬದುಕಿನ ಭವಿಷ್ಯದ ಪ್ರತೀ ಹೆಜ್ಜೆಯನ್ನೂ, ಭೂತಕಾಲದ ಹೆಜ್ಜೆಗಳು ಅನಾವರಣಗೊಳಿಸಿದ ಅರಿವಿನ ಮಾರ್ಗದರ್ಶನದಲ್ಲಿ ಇಡಬೇಕೆಂಬ ಈ ಸಾಲುಗಳನ್ನು ಗಮನಿಸಿ ” ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು “ ಕ್ಷಣ ಕ್ಷಣವೂ ಅರಿವನ್ನು ಎಚ್ಚರದಲ್ಲಿ ಇರಿಸಬೇಕು ( being aware every moment) ಅಂತಲೂ ಭಾವವಿದೆ. ” ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು” ಕರ್ಮ ಯೋಗದ ಪ್ರಕಾರ, ನಿಷ್ಕಾಮ ಕರ್ಮವೂ ಮೋಕ್ಷ ಸಾಧನ ಅನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನೋಡಿದರೆ, ದೇಹ,ಕೆಲಸ ಮಾಡುತ್ತಾ ಕಲಿಯುತ್ತೆ. ಜಡತ್ವದಿಂದ ದೇಹ ಹೊರಬರಲು ಸದಾ ದೇಹವನ್ನು ಕ್ರಿಯಾಶೀಲ ವಾಗಿರಿಸುವುದು ಅಗತ್ಯ ಅನ್ನುವ ಧ್ವನಿ ಕವಿತೆಯದ್ದು. ಮೋಹಕ್ಕೆ ಭಕ್ತಿಯ ಅಲೆ ಅನ್ನುತ್ತಾ ಕವಯಿತ್ರಿ, .  ಮೋಹ ಒಂದು ದ್ರವದ ಹಾಗೆ. ಸ್ವತಂತ್ರವಾಗಿ ಬಿಟ್ಟರೆ ದಿಕ್ಕು ದೆಸೆಯಿಲ್ಲದೆ ಹರಿಯುತ್ತೆ. ಅನಿಯಂತ್ರಿತವಾಗಿ ಹರಿಯುತ್ತೆ. ಮೋಹವನ್ನು ಭಕ್ತಿಯಾಗಿ ಚಾನಲೈಸ್ ಮಾಡಿದರೆ ಅದು ಏಕಮುಖಿಯಾಗಿ ಪಾಠ ಕಲಿಸುತ್ತೆ ಅನ್ಸುತ್ತೆ. “ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು “ ಪ್ರೀತಿ, ಬದುಕಿನ ಪುಟಗಳಿಗೆ ಬಣ್ಣ ತುಂಬಿದರೆ,  ಜಿದ್ದು, ಸೋಲಿನಿಂದ ಪುನಃ ಪ್ರಯತ್ನದತ್ತ ಗುರುವಾಗುತ್ತೆ. ಹಿತ್ತಲ ಗಿಡದಲ್ಲೂ ಮದ್ದು ಹುಡುಕುವ ಸಂಶೋಧನಾ ಮನೋಭಾವ ಬದುಕಿನ ಬಹುಮುಖ್ಯ ಮೇಷ್ಟ್ರು. ತತ್ವ ಶಾಸ್ತ್ರ ಅಧ್ಯಾತ್ಮ ದಲ್ಲಿ ಕೊನೆಯಾಗುವ ಮುಂದಿನ ಸಾಲುಗಳನ್ನು ನೋಡಿ ” ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು” ದೇಹ,ಬದುಕು ನಶ್ವರ, ಈಶ್ವರ ಜ್ಞಾನವೇ

Read Post »

ಕಾವ್ಯಯಾನ

ಹಕ್ಕಿಯ ದುರಂತ

ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ ಮಜಎನ್ನುತ ಬಾಯಲಿ ನೀರೂರಿಸುತಲಿಹೇಳಿದ ಅಲ್ಲಿಯ ಹಿರಿಯಜ್ಜ ಅಷ್ಟರೊಳಗಾಗಲೆ ಬಿಲ್ಲು ಬಾಣಗಳಹಿಡಿದು ಬಂದೊಬ್ಬ ತಲೆ ತಿರುಕಹಕ್ಕಿಯ ನೇರಕೆ ಗುರಿಯನು ಇಟ್ಟುಬಾಣವ ಬಿಟ್ಟನು ಆ ಕಟುಕ ಯಾವ ಪಾಪವನು ಯಾರ ಶಾಪವನುಹೊತ್ತು ಬಂದಿತ್ತೋ ಆ ಹಕ್ಕಿಬಾಣದ ಪೆಟ್ಟಿಗೆ ರಕ್ತವ ಕಾರುತಕೆಳಗಡೆ ಬಿದ್ದಿತು ಮಣ್ಮುಕ್ಕಿ ಚಿನ್ನದ ಬಣ್ಣದ ರನ್ನದ ರೆಕ್ಕೆಯಸುಂದರ ಹಕ್ಕಿಯ ಗತಿ ನೋಡಿನೆರೆದಿಹ ಮಕ್ಕಳು ಊರ ಕರುಣಾಳುಜನರು ಮರುಗಿದರು ಒಗ್ಗೂಡಿ ಬಾಣದ ರಭಸದ ಪೆಟ್ಟಿಗೆ ಹಕ್ಕಿಯುಪುಟ್ಟ ಹೊಟ್ಟೆ ಮಾಂಸವು ಸಿಡಿದುರಕ್ತವು ಚೆಲ್ಲಿ ಮಣ್ಣುಗೂಡಿರಲು‘ತಿನ್ನಲು ಬಾರದು ಇದು’ ಎಂದು ಕೊಂದಿಹ ಕಟುಕ ಸತ್ತ ಹಕ್ಕಿಯನುಎತ್ತಿ ಗಿರಗಿರನೆ ತಿರುಗಿಸುತದೂರಕೆ ಎಸೆಯಲು ಅದು ಅಲ್ಲಿನ ಹೊಳೆಸೇರಿತು ಮೌನವ ಸಾರುತ್ತ ಹೊಳೆಯನು ಅಪ್ಪಿದ ಹಕ್ಕಿಯ ಆತ್ಮವುಹೊಳೆಯ ಕಿವಿಗಳಲಿ ದುಃಖದಲಿಮಾನವ ಕ್ರೌರ್ಯದ ಪರಿಯನು ವರ್ಣಿಸಿಹೇಳುತ ಆ ಹೊಳೆ ಜೊತೆಯಲ್ಲಿ ಸಾಗುತಿರಲು ಆ ಹೊಳೆ ದೇವಿಯುಅಪ್ಪಿ ಅದನು ಸಂತೈಸಿತ್ತುಚೈತ್ರದ ಅಂದಿನ ಆಗಸ ಮೊಗದಲಿಕೆಂಬಣ್ಣದ ತೆರೆ ಮೂಡಿತ್ತು. ************************************************************ ಮೂಲ; In London Town By Mary E.Colridge

ಹಕ್ಕಿಯ ದುರಂತ Read Post »

ಕಾವ್ಯಯಾನ

ತಮಂಧದೆಡೆಗೆ

ಕವಿತೆ ತಮಂಧದೆಡೆಗೆ ನೂತನ ದೋಶೆಟ್ಟಿ ತುತ್ತಿಡುತ್ತ ತೋರಿದ ಚಂದಮಾಮಬೆದರಿ ಅಡಗಿದ ಮೊಲಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ ಆಕೆಯೊಂದಿಗಿನ ಬೆಳದಿಂಗಳ ರಾತ್ರಿಕ್ಯಾಂಡಲ್ ಡಿನ್ನರ್ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿಪಸೆಯ ನೆಲ ಚಿನ್ನಕ್ಕೂ ಮಿಗಿಲುಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂಮನೆಯ ಸ್ಕೆಚ್ಚು ತಯಾರು ಓಡುವ ಚಂದಿರನ ಹಿಡಿಯಲುಆಕಾಶಕ್ಕೆ ಇಟ್ಟು ಏಣಿಯ ಮೇಲೆವಾಮನನ ಎರಡು ಪಾದಗಳುಇನ್ನೊಂದಕ್ಕೆ ಮಂಗಳನ ಆಹ್ವಾನ ನೀರು ಗುರುತಿದ್ದರೆ ಹೇಳಿಗಾಳಿ,ಮಳೆ, ಬೆಳಕೆಲ್ಲಹುಟ್ಟುವವು ಲ್ಯಾಬಿನಲ್ಲಿನಾಳೆಗಳು ಕರೆದೊಯ್ಯಲುಬೆಳಕಿನಿಂದ ಕತ್ತಲೆಡೆಗೆ. *********************************

ತಮಂಧದೆಡೆಗೆ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು ಫೋಟೊ ತೆಗೆಯಲು ಹೇಳಿದರೆ, ಕಡಲಗುಂಟ ಹಾಸಿದಂತೆ ಕವುಚಿ ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗೂ ಅದೇನೋ ವಯ್ಯಾರ. ಇದೆಲ್ಲದ್ದಕ್ಕೂ ಹೆಚ್ಚಾಗಿ ಈ ಪ್ರಾಣಿ ಪಕ್ಷಿಗಳು, ಕಡಲು, ಪಶ್ಚಿಮ ಘಟ್ಟದ ಮಂಜು, ಆಗಸದ ಸೂರ್‍ಯ, ಚಂದ್ರ, ನಕ್ಷತ್ರಗಳಿಗೆ ಇವರ ಬಳಕುವ ರೇಖೆಗಳಲ್ಲಿ ಅಡಗಿಕೊಳ್ಳುವ ಹುಮ್ಮಸ್ಸು.  ಇಂತಹ ಕೃಷ್ಣ ಎಂಬ ಬಹುಮುಖಿ ಪ್ರತಿಭೆಯ ವೈದ್ಯ ಕವಿತೆ ಬರೆಯುತ್ತೇನೆಂದರೆ ಸಾಲುಗಳಿಗೂ ಹೊಸ ಉತ್ಸಾಹ ಬರದೇ ಉಳಿದೀತೆ? ಅದಕ್ಕೆಂದೇ ಕವಿತೆಗೂ ಇಲ್ಲಿ ನವಿರು ಗೆರೆಗಳಂತೆ ಒಂದೊಂದೇ ರೇಖೆಯ ಸಾಲಿನಲ್ಲಿ ಅದೆಷ್ಟು ಅರ್ಥವನ್ನು ಹೊಮ್ಮಿಸುತ್ತಿವೆ. ಆದರೆ ಈ ಸಾಲುಗಳೂ ಕೂಡ ಕೃಷ್ಣರಂತೆ ಅವರದ್ದೇ ಭಾವ ಲಹರಿಯಲ್ಲಿ ಇರುತ್ತವೆ ಎಂಬುದನ್ನು ಈ ಸಾಲು ಓದಿ ತಿಳಿದುಕೊಳ್ಳಿ ಗೆಲ್ಲಬೇಕೆಂಬ ಆಸೆಸೋಲೆಂದರೇನೆಂದು ತಿಳಿಯದಪ್ರತಿಸ್ಪರ್ಧಿಗಳ ಜೊತೆ ಎನ್ನುತ್ತಾರೆ ಕವಿ. ಈ ಸಾಲು ಅರ್ಥವಾಗಬೇಕೆಂದರೆ ಒಮ್ಮೆ ಕೃಷ್ಣರನ್ನು ಮುಖಾಮುಖಿಯಾಗಬೇಕು. ಯಾವ ಉದ್ವೇಗಕ್ಕೂ ಎಡೆಯಿಲ್ಲದ, ಮುಖದಲ್ಲಿನ ನಗು ಎಂದಿಗೂ ಬಾಡದ, ಎದುರಿಗಿದ್ದವರನ್ನೂ ನಿರಾಳವಾಗಿಸುವ ವ್ಯಕ್ತಿತ್ವ ಇವರದ್ದು. ಹೀಗಾಗಿಯೇ ಪ್ರಕೃತಿಯಲ್ಲಿ ಅರಳುವ ಹೂವು, ನದಿ, ಬಿಸಿಲು ಮುಂತಾದ ಸೋಲೆಂದರೇನೂ ಎಂದು ತಿಳಿಯದ ಪ್ರತಿಸ್ಪರ್ಧಿಗಳ ಜೊತೆ ಗೆಲ್ಲುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳನ್ನು ಗೆಲ್ಲುವುದೆಂದರೆ ನಮ್ಮನ್ನು ನಾವೇ ಗೆದ್ದಂತೆ. ಹೀಗಾಗಿಯೇ ಕೃಷ್ಣ ಯೋಚಿಸಿ ಪ್ರತಿಸ್ಪರ್ಧಿಗಳನ್ನು ಆಯ್ದುಕೊಳ್ಳುವ ಪರಿ ಕುತೂಹಲಕರವಾದ್ದದ್ದು. ಹೀಗಾಗಿ ತಮ್ಮ ಅಂದು..ಇಂದು.. ಎನ್ನುವ ಕವನದಲ್ಲಿ ರಾತ್ರಿ ಮನೆಯ ಚಾವಡಿಯಂಚಿನಲ್ಲಿ ದೇವರ ಹೆಸರನ್ನು ಸ್ಮರಣೆ ಮಾಡುತ್ತಿರುವ ಅಜ್ಜಯ್ಯ, ಉಸಿರಾಟದ ದನಿಯಿಂದ ಮಾತ್ರ ಜೀವವಿದೆ ಎಂದು ಗುರುತಿಸಬಹುದಾದ ಅಜ್ಜಿ, ಮಲಗಿದ್ದಾಳೋ ಅಥವಾ ಕುಳಿತಿದ್ದಾಳೆಯೋ ಎಂದೇ ಗೊತ್ತಾಗದ ಅಮ್ಮ, ಹೊಗೆ ಸೂಸುವ ಚಿಮಣಿ ಬೆಳಕು, ಕೊಟ್ಟಿಗೆಯಲ್ಲಿನ ಚಟಪಟ ಸದ್ದು, ಯಾವ ಕ್ಷಣದಲ್ಲಾದರೂ ಒಂದೆರಗಬಹುದಾದ ಕೆಟ್ಟಸುದ್ದಿಯ ನಿರೀಕ್ಷೆಯಲ್ಲೂ ಸೊಳ್ಳೆ ಕಚ್ಚಿದ್ದೂ ಗೊತ್ತಾಗದಂತೆ ನಿದ್ದೆ ಮಾಡುತ್ತಿದ್ದ ಕವಿ ಆಗ ಮಾತ್ರ ತಾನು ಸುಖವಾಗಿದ್ದೆ ಎನ್ನುತ್ತಾರೆ.   ಎಳವೆಯಲ್ಲೇ ಅಗಲಿದ ಅಪ್ಪಗೋಡೆ ಮೇಲೆ ರಾರಾಜಿಸುವಚಿತ್ರವೂ ಆಗಲಿಲ್ಲಅಸ್ಪಷ್ಟವಾಗಿಯೂಕಣ್ಣಭಿತ್ತಿಗೆ ಅಂಟಿ ಕೂರಲಿಲ್ಲಇಷ್ಟಾದರೂ ಮೊದಲ ಕವಿತೆಯಲ್ಲೇ ವಿಷಾದದ ಎಳೆಯೊಂದು ಇಣುಕುತ್ತದೆ. ಎಲ್ಲ ಮಕ್ಕಳಂತೆ ಪ್ರೀತಿಸುತ್ತ, ಗೆದ್ದಾಗ ಹೆಗಲಿಗೇರಿಸಿಕೊಂಡು, ನೌಕರಿ ಮಾಡುವಾಗ ದನಿ ಏರಿಸಿ ಖುಷಿ ತೋರಿಸುವ ಅಪ್ಪ ಇಲ್ಲವೆಂಬ ಭಾವವೇ ನೋವು ಕೊಡುವಾಗ, ಹಾಗೆ ಇಲ್ಲದ ಅಪ್ಪನ ಅಸ್ಪಷ್ಟ ಚಿತ್ರಣವೂ ಕೂಡ ಉಳಿಯದಷ್ಟು ಚಿಕ್ಕವರಿದ್ದಾಗಲೇ ತಂದೆ ತೀರಿ ಕೊಂಡಿದ್ದು ಎಂಬುದು ಇನ್ನೂ ಹೆಚ್ಚು ನೋವು ನೀಡುತ್ತದೆ. ಇದಕ್ಕೂ ಮೀರಿ ಅಪ್ಪ ಗೋಡೆಯ ಮೇಲಿನ ಫೋಟೋವಾಗಿ ಕೂಡ ಉಳಿಯದ ವೇದನೆಯೂ ಇಲ್ಲಿ ಸೇರಿದೆ. ನಾನು ಹುಟ್ಟುವುದಕ್ಕೆ ಐದು ದಿನ ಮೊದಲು ತೀರಿಕೊಂಡ ಅಜ್ಜಿ ಹಾಗೂ ನನಗೆ ವರ್ಷ ತುಂಬುವ ಮೊದಲೇ ಅಜ್ಜಿಯ ಜೊತೆಗೂಡುತ್ತೇನೆ ಎಂದು ಹೋದ ಅಜ್ಜನ ಫೋಟೋಕ್ಕಾಗಿ ನಾನು ದೊಡ್ಡವಳಾದ ಮೇಲೆ ನನ್ನ ಅಪ್ಪ ಹುಡುಕಾಡಿದ್ದು ನನಗೆ ನೆನಪಿದೆ. ಕೊನೆಗೂ ಅತ್ತೆಯ ಬಳಿ ಸಿಕ್ಕ ಚಿಕ್ಕ ಫೋಟೊವೊಂದರಲ್ಲಿ ಅಜ್ಜನಿದ್ದ. ಆದರೆ ಇಂದಿಗೂ ಅಜ್ಜಿಯ ಒಂದು ಫೋಟೋ ಕೂಡ ಇಲ್ಲ. ಆಗಲೆಲ್ಲ ಅಪ್ಪ ಒಂದು ಫೋಟೋ ತೆಗೆಸಿಕೊಳ್ಳಲೂ ಆಗದಷ್ಟು ಬಡತನವಿತ್ತು ಎಂದು ಆಗಾಗ ಹನಿಗಣ್ಣಾಗುತ್ತಾರೆ. ಇಲ್ಲಿಯೂ ಕೂಡ ಅಪ್ಪ ಗೋಡೆಯ ಫೋಟೋ ಆಗಾದರೂ ಇದ್ದಿದ್ದರೆ, ನೋಡಿದ ನೆನಪಿಲ್ಲವಾದರೂ ಮನದಲ್ಲೊಂದು ಆಕೃತಿಯಾದರೂ ಇದ್ದಿರುತ್ತಿತ್ತು ಎಂಬ ನೋವು ಇಲ್ಲಿ ಮಡುವುಗಟ್ಟಿದೆ. ಈ ಅಪ್ಪಂತ ಅಪ್ಪತನಕಾಲಿಗೆ ತಿಕ್ಕುತ್ತಸಂಕೋಚದಿಂದ ನಿಧಾನ-ವಾಗಿಜಾಗ ಮಾಡಿಕೊಂಡುಬೆಚ್ಚಗಾಗುವ ಬೆಕ್ಕು ಹಾಗಾದರೆ ಅಪ್ಪತನ, ಅಂದರೆ ತಾಯ್ತನ ಎನ್ನುವ ಹಾಗೆ ತಂದೆತನವೂ ಒಮದು ಅನುಭೂತಿಯೇ ಅಲ್ಲವೇ ಎಂದು ಕವಿ ಕೇಳುತ್ತಲೇ ಈ ಅಪ್ಪತನ ಎಂಬುದು ನಿಧಾನವಾಗಿ ಬೆಕ್ಕು ಬೆಚ್ಚಗಿನ ಜಾಗ ಹುಡುಕಿ ಹೋಗಿ ದಕ್ಕಿಸಿಕೊಳ್ಳುವಂತೆ ದಕ್ಕಿಸಿಕೊಳ್ಳಬೇಕಿದೆ ಎನ್ನುತ್ತಾರೆ. ತಾಯಿ ಎನ್ನುವುದು ಸತ್ಯ, ತಂದೆ ಎಂಬುದು ನಂಬಿಕೆ ಎನ್ನುವ ಮಾತು ಇಲ್ಲಿ ನೆನಪಾಗುತ್ತದೆ. ಆದರೆ ತಾಯ್ತನ ಹಾಗಲ್ಲ. ಅದಕ್ಕೊಂದು ನಿರ್ದಿಷ್ಟತೆ ಇದೆ. ಲೋಕ ಗರ್ಭದೊಳಗೆ ಬೀಜ ಮೊಳೆತ ದಿನದಿಂದಲೇ ತಾಯ್ತನವನ್ನು ಗುರುತಿಸುತ್ತದೆ.  ಆದರೂ ತಾಯ್ತನವನ್ನು ಗುರುತಿಸುವ ಹಾದಿ ಕೂಡ ನಾವು ಗುರುತಿಸಿ ಇದೇ ಎಂದು ಬೆರಳು ಮಾಡಿ ತೋರುವಷ್ಟು ಸುಲಭದಲ್ಲ. ಲೋಕೋತ್ತರ ಕವಿತೆ ಇಂತಹ ಎಲ್ಲ ಸಾಧ್ಯತೆಗಳನ್ನೂ ಹೇಳುತ್ತಲೇ ನಮ್ಮನ್ನು ನಯವಾದ ಮಾತಿನೊಳಗೇ ಬೆಚ್ಚಿ ಬೀಳುವಂತೆ ಮಾಡುತ್ತದೆ. ನೀನು ಹುಟ್ಟಿ ಬೆಳೆದಿದ್ದು ಆಳಿದ್ದುಇಲ್ಲೇ ಇರಬಹುದುಆದರೆ ನೀನು ಪ್ರವೇಶಿಸಿ ವಶಪಡಿಸಿಕೊಳ್ಳಬೇಕಾದ  ಲೋಕ ನಾನಲ್ಲ ಎನ್ನುತ್ತಾರೆ. ಈ ಸಾಲುಗಲಲ್ಲಿನ ಪ್ರಖರತೆ ಇಡೀ ಲೋಕವನ್ನು ಗಡಗಡನೆ ನಡುಗಿಸುವಮತಿದೆ. ಗಮಡಸುಕುಲ ಹುಡುಕುವ ಸುಖದ ಮೂಲವನ್ನು ಇಲ್ಲಿ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟು, ಭೂ ತಾಯಿ ಸಹನೆಯುಲ್ಳ ಹೆಣ್ಣು ತೋರುವ ದಾರಿಯನ್ನು ಅರಹುತ್ತದೆ. ಸಾವಿರ ಸೂರ್‍ಯರು ಕಣ್ಣಾಗಿರುವಸಾವಿರ ಕಡಲುಗಳು ಮೈಯಾಗಿರುವಲೋಕವಿದೆ ನೋಡುಅದರ ಕಿಂಡಿಯಷ್ಟೇ ನನ್ನ ಮೈಮೇಲಿದೆಸಾವಿರ ಸೂರ್‍ಯರು ಕೋರೈಸುವ ಅನುಭೂತಿ, ಸಾವಿರ ಕಡಲು ಆರ್ಭಟಿಸುವ ಸುಖದ ಮೊರೆತವನ್ನು ತಾಯಿ ತನ್ನ ಮೈಯ್ಯಿನ ಒಂದು ಕಿಂಡಿ ಎನ್ನುವ ಮಾತು ಇಡೀ ಗಂಡಸು ಕುಲವನ್ನೇ ನಡುಗಿಸುವಂತೆ ಮಾಡಬಲ್ಲದು.ಇಷ್ಟೆಲ್ಲ ಹೇಳುತ್ತಲೇ ಬಂಧ ಮುಕ್ತ ಎನ್ನುವ ಕವನದಲ್ಲಿ ಮನುಜನ ಜನ್ಮದ ಕುರಿತು ಹೇಳುತ್ತಾರೆ. ಒಂಬತ್ತು ತಿಂಗಳು ಕತ್ತಲ ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿಯೇ ಮಲಮೂತ್ರ ಮಾಡಿಸಿ, ಸರಿಯಾದ ಜಾಗವೂ ಇರದೇ ಕವುಚಿಕೊಂಡ ಸ್ಥಿತಿಯಲ್ಲಿರುವ ಮನುಷ್ಯ ಹೊರಬಂದ ಕೂಡಲೇ ತನ್ನ ಒಂಬತ್ತು ತಿಂಗಳ ವಾಸಕ್ಕೆ ಬಾಯಿ ಬಾಯಿ ಬಡಿದುಕೊಳ್ಳದೇ ಇರುತ್ತಾನೆಯೇ ಎನ್ನುತ್ತಾರೆ. ಮಗು ಹುಟ್ಟಿದ ಕೂಡಲೇ ಅಳುವುದಕ್ಕೆ ಕವಿ ಕೊಡುವ ಕಾರಣ ಅವರ ವೈದ್ಯ ವೃತ್ತಿಗೆ ಅನುಗುಣವಾಗಿಯೇ ಇದೆ.   ಆದರೆ ಬದುಕು ನಾವು ಅಂದುಕೊಮಡಷ್ಟು ನಿರಾಳವಲ್ಲ. ಅದರ ಲೆಕ್ಕಾಚಾರವೇ ಬೇರೆ ಇರುತ್ತದೆ. ಯಾವುದೋ ಲೆಕ್ಕದಲ್ಲಿ ನಾವೊಂದು ಬಗೆದರೆ ಪ್ರಕೃತಿ ಇನ್ನೊಂದನ್ನೇ ಕಲಿಸುತ್ತದೆ.ತಾನು ಕೂರಿಸಿದ ಹನಿ ಮಂಜುಯಾವ ಗಳಿಗೆಯಲಿ  ಆವಿಯಾಯಿತು ಎಂದು ಕಣ್ಣು ಕಣ್ಣು ಬಿಡುವಂತಾಗುತ್ತದೆ. ಬದುಕೆಂಬ ಯಕ್ಷಗಾನದ ಬಯಲಿನಲ್ಲಿ ಅಥವಾ ಜೀವನವೆಂಬ ನಾಟಕಶಾಲೆಯಲ್ಲಿ ಅದೆಷ್ಟೋ ಮಂದಿ ನಾಟಕ ನೋಡಿ ಶೇಂಗಾ ತಿಂದು, ಸಿಳ್ಳೆ ಹೊಡೆದು ಮಜಾ ಮಾಡಲೆಂದೇ ಬಂದಿರುತ್ತಾರೆ. ಆದರೆ ಬೆಳಗೆದ್ದು ನೋಡಿದರೆ ಬಾಯಿಗೆ ಹೊಡೆಯುವಾಗ ಕೈ ತಪ್ಪಿ ಕೆಳಗೆ ಬಿದ್ದು ಹೋದ ಶೇಂಗಾ ಕಾಳನ್ನು ಆರಿಸಲೆಂದು ಬಂದಿರುವವರನ್ನು ನಾವಿಲ್ಲಿ ಕಾಣುತ್ತೇವೆ. ಬೆಳಿಗ್ಗೆಶಾಲೆಗೆ ಹೋಗುವಾಗಹರಿದಂಗಿ ರವಿಕೆತೊಟ್ಟ ಮಂದಿಆಟದ ಅಂಗಳಸಂದುಗೊಂದಿಯಲ್ಲಿಬಿದ್ದ ಕಾಳುಗಳಿಗಾಗಿಹುಡುಕಾಟ ನಡೆಸಿದ್ದವುಹೀಗಾಗಿ ಬದುಕು ನಾವೆಂದುಕೊಂಡಷ್ಟು ಸರಳವೂ ಅಲ್ಲ. ಸುಲಲಿತವೂ ಅಲ್ಲ. ಅದಕ್ಕೆ ಅದರದ್ದೇ ಆದ ಗತಿಯಿದೆ. ಅದರದ್ದೇ ಆದ ಚಾರಣವಿದೆ. ಇಲ್ಲಿ ಎಲ್ಲರೂ ಸಭ್ಯರೇ ಅವರೊಳಗಿನ ಹುಳುಕು ಹೊರಬೀಳುವವರೆಗೆ. ಹೀಗಾಗಿ ತನ್ನ ನೋವನ್ನು ತೋಡಿಕೊಳ್ಳುವುದಾದರೂ ಯಾರಲ್ಲಿ ಎಂಬ ಆತಂಕ ಎಲ್ಲರಿಗಿರುವಂತೆ ಕವಿಗೂ ಇದೆ.ಯಾರ್‍ಯಾರಹುಡುಕುತ್ತ ಹೋಗಲಿ?ಒಬ್ಬರನೇ ಆತುಕೊಂಡರೆನನ್ನ ಅನಂತ ದುಃಖಕ್ಕೆಅವರು ದಣಿದಾರುನಮ್ಮ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರೆಸುತ್ತ ಹೋದರೆ ಅವರ ಭುಜವೂ ದಣಿದೀತು ಎಂಬ ಭಯವೂ ಕವಿಗಿದೆ. ಆದರೆ ದಣಿದರೂ ಪರಸ್ಪರ ಸಹಾಯ ಮಾಡುವುದನ್ನು ನೆಚ್ಚಿಕೊಂಡವರು ನಿಲ್ಲಿಸಲಾರರು ತಾವೂ ಅಂತಹುದ್ದೇ ಸ್ಥಿತಿ ಹೀಗಾಗಿ ಕವಿ ‘ನಾ ಬಂದ ದಾರಿಯಲೆ ಬಂದವರು’ ಎಂಬ ಕವಿತೆಯಲ್ಲಿ ಬಹು ದೂರದಿಂದ ನಡೆದು ಅಂಗಾಲನ್ನು ಸುಟ್ಟುಕೊಂಡು, ನಿರ್ಜಲಿಕರಣಗೊಂಡು ಮೈಚಾಚಿ ಮಲಗಿದಾಗ ಆರೈಕೆ ಮಾಡಿದವರು ತಮ್ಮ ಪಾದಗಳನ್ನು ತೋರಿಸಲಿಲ್ಲ ಎನ್ನುತ್ತಾರೆ.  ಬದುಕಿನಲ್ಲಿ ಅಂತಹುದ್ದೇ ನೋವು ಅನುಭವಿಸಿ ಜೊತೆಗೆ ಹೆಚ್ಚೆ ಇಟ್ಟವರಷ್ಟೇ ಅಂತಹ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿಯೇ ಬಳ್ಳಿ ಮತ್ತು ಮರದ ಉದಾಹರಣೆಯನ್ನು ನಮ್ಮ ಎದುರಿಗೆ ಇಡುತ್ತಾರೆ ಕವಿ. ಬಳ್ಳಿಯ ಮೃದುತ್ವ ಹಾಗು ಮರದ ತೊಗಟೆಯ ಒರಟುತನವನ್ನು ವಿವರಿಸುತ್ತಾರೆ. ಬಳ್ಳಿಯಲ್ಲಾದ ಹೂವಿನ ಗಂಧವನ್ನು ಅನುಭವಿಸಿ ಮತ್ತೆ ಚಿಗುರುವ ಹುಮ್ಮಸ್ಸು ತೋರುತ್ತದೆ ಮರ. ಬದುಕೇ ಹೀಗೆ. ಮುಗಿದೇ ಹೋಯಿತು ಎನ್ನುವಾಗಲೇ ಅರಿವಾಗದ ಯಾವುದೋ ಒಂದು ಅನುಭವ ಮತ್ತಿಷ್ಟು ಬದುಕನ್ನು ಬದುಕಲಿ ಪ್ರೇರೇಪಿಸುತ್ತದೆ. ಮತ್ತು ಹಾಗೆ ಪರಸ್ಪರರ ಬದುಕನ್ನು ಪ್ರೋತ್ಸಾಹಿಸಲೇಬೇಕು. ಬದುಕೆಂದರೆ ನಮ್ಮ ಹೆಗಲ ಮೇಲೆ ನಾವೆ ತಲೆಯಿಟ್ಟುಕೊಂಡು ಅಳುವ ಏಕಪಾತ್ರಾಭಿನಯ ಅಲ್ಲವಲ್ಲ? ಸ್ವಾತಂತ್ರದಲ್ಲಿ ‘ಪಾಲು’ ಕೇಳುವ ರಾಜನ ಕಥೆಯೂ ಇಲ್ಲಿದೆ. ಕೈದಿ ತಾನೇಕೆ ಬಂಧಿ ಎಂದರೆ ಮಹಾರಾಜ ಅವನ ಸ್ವಾತಂತ್ರ್ಯದಲ್ಲಿ ಪಾಲು ಕೇಳುತ್ತಾನೆ. ಕೊನೆಗೆ ಕೈದಿ ಹೊರನಡೆದರೆ ರಾಜ ಒಳಗೆ ಬಂಧಿಯಾಗುತ್ತಾನೆ. ಇನ್ನೂ ಅಂಗಡಿಗೆ ಜಾಗವನ್ನೇ ನೋಡದೇ ಅಂಗಡಿಯಲ್ಲಿ ಬೆಳಗೆದ್ದು ಏನೇನು ಮಾಡಬೇಕು ಎಂಬುದನ್ನು ಕನಸುವ ಈ ಕಥೆ ತಾನು ಮಹಾರಾಜನಾದರೆ ಎನ್ನುವ ತಿರುಕನ ಕನಸನ್ನು ನೆನಪಿಸುವಂತಿದೆ.ಮಂತ್ರ ಎಂಬ ಕವನವನ್ನು ಕವನಾಸಕ್ತರೆಲ್ಲರೂ ಓದಿ ನೋಡಬೇಕು. ಇಲ್ಲಿ ಕಾಡುವುದು ಮನದ ಬಯಕೆಯೋ, ಕವನದ ಹಂಬಲವೋ?  ಒಟ್ಟಿನಲ್ಲಿ ಕವನವೂ ಮೈ ಬಿಸಿ ಏರಿಸುವ ಒಂದು ಅದ್ಭುತ. ಬಿಳಿ ಹಾಳೆಗಳ ಮೇಲೆ ಉದುರಿದ ಅಕ್ಷರ ಹನಿಗಳು ಒಂದಕ್ಕೊಂದು ಸೇರಿ ಚಕ್ರವ್ಯೂಹವಾಗುವ ಹೊತ್ತಿನಲ್ಲಿ ಏನೂ ಬರೆಯದೇ ಕೈ ಸ್ಥಬ್ಧವಾಗಬಹುದು, ಆದರೆ ಕೊನೆಗೆ ಅಕ್ಷರಗಳೆಲ್ಲ ಮಂಗಮಾಯವಾಗಿ ತುಟಿ ಉಸಿರಿದ ಮಂತ್ರ ಇಬ್ಬರಿಗಷ್ಟೇ ಕೇಳುವ ಚೋದ್ಯವಿದೆಯಲ್ಲ ಅದು ನಿಜಕ್ಕೂ ಅನುಭವಿಸಿಯೇ ತಿಳಿಯಬೇಕಾದ್ದು.       ಇದರ ನಡುವೆ ಕವಿ ಹೇಳುವ ಒಂದು ಕವನ ನನಗೆ ನಾನೇ ಹೇಳಿಕೊಂಡಂತಿದೆ. ನನಗೆ ಇಷ್ಟವಾದ ಕವನ ಕೂಡ ಇದು. ಕವನ ಬರೆಯುವ ಪ್ರೊಸೆಸ್‌ನ್ನು ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಸಲ ಕವನ ಬರೆದು ಬಿಟ್ಟರೆ ಸಾಲದು, ಅದನ್ನು ಕುಳಿತು ತಿದ್ದಬೇಕು ಎನ್ನುತ್ತಾರೆ ತಿಳಿದವರು, ಅತವಾ ಹಿರಿಯ ಕವಿಗಳು. ಒಮ್ಮೆ ಬರೆದದ್ದನ್ನು ಮತ್ತೆರಡು ದಿನಬಿಟ್ಟು ನೋಡಿ ಪುನಃ ತೀಡಬೇಕು. ಥೇಟ್ ಮಗು ಹುಟ್ಟಿದನಂತರ ಹೊಕ್ಕಳ ಬಳ್ಳಿ ಕತ್ತರಿಸಿ, ಸ್ನಾನ ಮಾಡಿಸಿ, ಪೌಡರ್ ಲೇಪಿಸಿ ಮಗುವನ್ನು ಅಂದಗಾಣಿಸುವ ಅಮ್ಮಂದಿರ ಹಾಗೆ ಕವಿತೆಯನ್ನೂ ಆಗಾಗ ತಿದ್ದಿ ಬೇಡದ್ದನ್ನು ತೆಗೆದು ಹಾಕಿ, ಬಲಸಿದ ಪದಗಳಿಗೆ ಇನ್ನಷ್ಟು ಮೆರಗು ಬರುವಂತೆ ಮಾಡಿ ಚಂದಗಾನಿಸಬೇಕು. ಇದೆಲ್ಲ ನಿಜ. ಆದರೆ ನನ್ನಂಥಹ ಆಲಸಿಗಲಿಗೆ ಅದೆಲ್ಲ ಹೇಗೆ ಸಾಧ್ಯ? ಒಮ್ಮೆ ಕವನ ಬರೆಯುವುದೆಂದರೆ ಒಂಬತ್ತು ತಿಂಗಳು ಹೊತ್ತುಕೊಂಡ ಹೊರೆಯನ್ನು ಒಮ್ಮೆ ಇಳಿಸಿ ನಿರಾಳವಾದಂತೆ ಎಂದುಕೊಳ್ಳುವ ನನಗೆ ಕವನಗಳೂ ಅಷ್ಟೇ. ನನ್ನ ಎರಡನೇ ಮಗ ಹುಟ್ಟಿದಾಗ ಹೆಣ್ಣು ಮಗುವಲ್ಲ, ಇದೂ ಗಂಡೇ ಎಂದು ನನಗೆ ಬೇಡ ಎಂದು ಮುಖ ತಿರುವಿದ್ದೆ, ಸುಮಾರು ಒಂದಿಡೀ ದಿನ ಆ ಮಗು ಅದರ ಅಪ್ಪನ ಕೈಯ್ಯಲ್ಲೇ ಇತ್ತು. ನಂತರ ಅಳತೊಡಗಿದಾಗಷ್ಟೇ ಮಗುವನ್ನು ಹತ್ತಿರ ತಂದುಕೊಂಡಿದ್ದೆ. ನನ್ನ ಕವಿತೆಗಳೂ ಅಷ್ಟೇ. ಒಮ್ಮೆ ಬರೆದು ಎತ್ತಿಟ್ಟುಬಿಟ್ಟರೆ ಮತ್ತೆ ಅದನ್ನು ನೋಡುವುದು ಸಂಕಲನಕ್ಕೆ ಕವನಗಳಿವೆಯೇ ಎಂದು ಹುಡುಕುವಾಗಲೇ. ಇಲ್ಲಿ ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಕವಿತೆ ಹಾಗೆಯೇ ಬೆತ್ತಲಾಗಿಯೇ ಇರಬೇಕು ಎಂದು ಸಮರ್ಥಿಸಿಕೊಳ್ಳುತ್ತಾರೆ. ತಿದ್ದಾಟದ ಒದ್ದಾಟದ ಮುಖವಾಡವನ್ನು ಧರಿಸಲು ಸಿದ್ಧರಿಲ್ಲದ ಈ ನಿಲುವು ನನ್ನದೇ ನಿಲುವೆನಿಸಿ ಆಪ್ತವಾಗಿದ್ದಂತು ಹೌದು.   ಮೂರು ಆಯಾಮಗಳು ಎನ್ನುವ ಕವಿತೆ ಕ್ಷೌರದ ಬಗ್ಗೆ ಹೇಳುತ್ತ ಹೋಗುತ್ತದೆಯಾದರೂ ಮನುಷ್ಯ ಜೀವನದ ಮೂರು ಅವಸ್ಥೆಗಳನ್ನು ಚಿತ್ರಿಸುತ್ತದೆ. ಬಾಲ್ಯದಲ್ಲಿ ಎಲ್ಲಾ ಮಕ್ಕಳೂ ಕ್ಷೌರಿಕನಿಗೆ ಹೆದರುವವರೇ. ಆತ ಕತ್ತರಿ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು ಜೋಡಿಸುವ ಕೆಲಸವನ್ನು ಪಲ್ಲಕ್ಕಿ ಮಾಡುತ್ತಿತ್ತು. ಅದು ನಮ್ಮನೆಯಲ್ಲಿದ್ದಷ್ಟೂ ದಿನ ಸೊಸೈಟಿಯ ಸಾಲವಾಗಲೀ, ವಯಸ್ಸಾದವರ ಸೊಂಟದ ನೋವಾಗಲೀ, ನ್ಯೂಸ್ ಪೇಪರಿನ ರಾಜಕೀಯವಾಗಲೀ ಮನೆಯ ಯಾವ ಚರ್ಚೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಮನೆಯವರೆಲ್ಲರ ಗಮನ ಪಲ್ಲಕ್ಕಿಯ ಮೇಲೆ ಕೇಂದ್ರೀಕೃತವಾಗಿ, ಮನೆಯಲ್ಲೊಂದು ವಿಶಿಷ್ಟವಾದ ಸಂತೋಷ-ಸಮಾಧಾನಗಳ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಂತಹ ಯಾವುದೋ ಒಂದು ಸಂದರ್ಭದಲ್ಲಿಯೇ ಈ ದೇವರು ಎನ್ನುವುದೊಂದು ಸಮಾಧಾನ ತರುವ ಸಂಗತಿಯೆನ್ನುವ ನಂಬಿಕೆ ನನ್ನಲ್ಲಿ ಹುಟ್ಟಿಕೊಂಡಿದ್ದಿರಬೇಕು!           ಈ ಸಮಾಧಾನ-ನೆಮ್ಮದಿಗಳ ವ್ಯಾಖ್ಯಾನ ಒಮ್ಮೆ ಆಧ್ಯಾತ್ಮದ ವಿವರಣೆಗೆ, ಇನ್ನೊಮ್ಮೆ ಸಂಬಂಧಗಳ ಕ್ಲಿಷ್ಟಕರವಾದ ನಿರೂಪಣೆಗೆ, ಒಮ್ಮೊಮ್ಮೆ ಮನೋವಿಜ್ಞಾನದ ಸಮಾಲೋಚನೆಗಳಿಗೂ ಸಿಲುಕಿ ಸಂಕೀರ್ಣವಾಗಿಹೋಗುವುದುಂಟು. ಸರಳವಾಗಿ ಯೋಚಿಸಿದರೆ ಸಮಾಧಾನವೆನ್ನುವುದು ಮೂಲಂಗಿ ಸೊಪ್ಪಿನ ಪಲ್ಯವಿದ್ದಂತೆ. ಮೂಲಂಗಿಯ ವಾಸನೆಗೆ ಮೂಗುಮುರಿಯುವವರಿಗೆ ಮೂಲಂಗಿಯೊಂದಿಗೆ ಮೂಲಂಗಿಯ ಸೊಪ್ಪನ್ನೂ ಸೇರಿಸಿ ಪಲ್ಯ ಮಾಡಿ ಬಡಿಸಿದರೆ, ವಾಸನೆಯನ್ನು ಮರೆತು ತಕರಾರಿಲ್ಲದೆ ಊಟ ಮಾಡಿ ಕೈ ತೊಳೆಯುತ್ತಾರೆ. ಮೂಲಂಗಿಯೆಡೆಗಿನ ನಿರಾಕರಣೆಯನ್ನು ಅದರದೇ ಭಾಗವಾದ ಎಲೆಗಳು ನಿರಾಯಾಸವಾಗಿ ದೂರ ಮಾಡುತ್ತವೆ. ಆ ಒಗ್ಗಿಕೊಳ್ಳುವಿಕೆಯ ಭಾಗವಾಗಿ ಸಮಾಧಾನದ ಹರಿವು ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತ ಹೋಗುತ್ತದೆ. ಆ ಜಾಗದ ಮಧ್ಯದಲ್ಲಿಯೇ ಎಲ್ಲಿಯೋ ಒಂದು ಕಡೆ ದೇವರು ಎನ್ನುವ ಪರಿಕಲ್ಪನೆ ತನ್ನ ಅಸ್ತಿತ್ವವನ್ನು ಜೋಡಿಸಿಕೊಂಡು ಜೀವಜಗತ್ತಿನ ಪ್ರವಹಿಸುವಿಕೆಯ ಮೂಲವಾಗಿ ಹೊರಹೊಮ್ಮುತ್ತದೆ. ಹಾಗೆ ಒಡಮೂಡಿದ ಒರತೆಯೇ ಅಂಗಾಲುಗಳನ್ನು ಸೋಕಿ, ಹೊಸತನದ ಸಾಕ್ಷಾತ್ಕಾರದೊಂದಿಗೆ ಜೀವಜಲವಾಗಿ ಪ್ರವಹಿಸುತ್ತದೆ.           ಹೊಸತನದ ಅನುಭೂತಿಯೂ ದೇವರೊಂದಿಗೆ ಒಂದು ಅನುಪಮವಾದ ಸಾಮರಸ್ಯವನ್ನು ಬೆಳಸಿಕೊಂಡಿದೆ. ವರುಷಕ್ಕೊಮ್ಮೆ ಮಾತ್ರವೇ ಮನೆಗೆ ಆಗಮಿಸುತ್ತಿದ್ದ ಹೊಸಬಟ್ಟೆಯನ್ನು ತೊಟ್ಟು ದೇವರಿಗೆ ದೀಪ ಹಚ್ಚಿದ್ದು, ಹೈಸ್ಕೂಲಿಗೆ ಸೇರಿದ ಮೊದಲ ದಿನ ಹೆಡ್ ಮಾಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ್ದು, ದೀಪಾವಳಿಯ ದಿನ ಹೊಸ ಚಿಗುರನ್ನು ತಂದು ಮನೆಯ ಹೊಸ್ತಿಲ ಮೇಲಿಟ್ಟು ನಮಸ್ಕರಿಸಿದ್ದು ಈ ಯಾವ ಕ್ರಿಯೆಗಳೂ ಆಧುನಿಕತೆಯ ಹೆಸರಿನಲ್ಲಿ ಹಳತಾಗುವುದಿಲ್ಲ. ಹೊಸಬಟ್ಟೆಯ ಸಂಭ್ರಮ ದೀಪವಾಗಿ ಉರಿದು ಮನಸ್ಸುಗಳನ್ನು ಬೆಸೆದು ನೆನಪಿನ ಟ್ರಂಕಿನಲ್ಲಿ ಸದಾಕಾಲ ಹೊಸದಾಗಿಯೇ ಉಳಿದುಕೊಳ್ಳುತ್ತದೆ; ಹೈಸ್ಕೂಲಿನ ಹೆಡ್ ಮಾಷ್ಟ್ರು ತೋರಿಸಿದ ದಾರಿಯಲ್ಲಿ ಉಸಿರು ಬಿಗಿಹಿಡಿದು ನಡೆದ ಬದುಕು ಮಾರ್ಕ್ಸ್ ಕಾರ್ಡಿನ ಹುಟ್ಟಿದದಿನದ ದಾಖಲೆಯಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ; ಬಾಗಿಲಪಟ್ಟಿಯ ಮೇಲಿನ ಹೊಸ ಚಿಗುರಿನ ಭತ್ತದ ಕಾಳು ಪ್ರತಿದಿನದ ಅನ್ನವಾಗಿ ಜೀವತುಂಬುತ್ತದೆ. ವಾರಾಂತ್ಯದ ಶಾಪಿಂಗುಗಳಲ್ಲಿ ಕ್ರೆಡಿಟ್ ಕಾರ್ಡಾಗಿ, ಹೊಸ ಕೆಲಸದ ಹುಡುಕಾಟದಲ್ಲಿ ಮಾರ್ಕ್ಸ್ ಕಾರ್ಡಾಗಿ, ಬಿರಿಯಾನಿಯ ಬಾಸುಮತಿ ಅಕ್ಕಿಯಾಗಿ ದೇವರೆನ್ನುವ ಸಾಂಗತ್ಯ ಹೊಸ ಸ್ವರೂಪಗಳಲ್ಲಿ ಕೈಹಿಡಿದು ನಡೆಸುತ್ತಲೇ ಇರುತ್ತದೆ.          ಆ ಸಹಜಸ್ಥಿತಿಯ ಇರುವಿಕೆಯಲ್ಲಿ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯ ಕ್ಯಾಶ್ ಕೌಂಟರಿನಲ್ಲೊಬ್ಬ ಕಿವಿ ಕೇಳಿಸದ ಹುಡುಗ ತುಟಿಗಳ ಚಲನೆಯಿಂದಲೇ ಪ್ರಶ್ನೆಗಳನ್ನು ಅರಿತು ಹಣಕಾಸಿನ ವ್ಯವಹಾರಗಳನ್ನು ತಪ್ಪಿಲ್ಲದೇ ನಿರ್ವಹಿಸುತ್ತಾನೆ; ಬೀದಿಬದಿಯಲ್ಲೊಬ್ಬಳು ಹೂ ಮಾರುವ ಹುಡುಗಿ ಏರುದನಿಯಲ್ಲಿ ದರಗಳನ್ನು ಕಿವಿಗಳಿಗೆ ತಲುಪಿಸಿ, ಹೂವಿನ ಬದುಕನ್ನು ಮಾರುಗಳಲ್ಲಿ ಲೆಕ್ಕ ಹಾಕುತ್ತಾಳೆ; ರಿಸರ್ವ್ ಫಾರೆಸ್ಟಿನಲ್ಲೊಬ್ಬ ಜೀಪು ಚಲಿಸುವವ ನಿಶ್ಯಬ್ದದ ದಾರಿಯಲ್ಲಿ ಹುಲಿಯ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೆ; ಏರ್ ಪೋರ್ಟಿನ ಕೆಂದುಟಿಯ ಚೆಲುವೆ ನಗುವನ್ನೇ ಬದುಕಾಗಿಸಿಕೊಂಡು ದೇಶಗಳ ನಡುವಿನ ಅಂತರವನ್ನು ಇಲ್ಲವಾಗಿಸುತ್ತಾಳೆ. ಹೀಗೆ ದೇವರೆನ್ನುವ ಅಸ್ತಿತ್ವ ಒಮ್ಮೆ ಮೌನವಾಗಿ, ಮತ್ತೊಮ್ಮೆ ಧ್ವನಿಯಾಗಿ, ನಿಶ್ಯಬ್ದವೂ ಆಗಿ ಬದುಕಿನ ಚಲನೆಯ ಉದ್ದೇಶಗಳನ್ನು ಕೆಡದಂತೆ ಕಾಪಾಡುತ್ತದೆ. ರೂಪ-ಆಕಾರಗಳ ಬಂಧನವನ್ನು ಮೀರಿದ ಆ ಅಸ್ತಿತ್ವವೇ ಆ ಕ್ಷಣದ ಬದುಕುಗಳ ಸಮಾಧಾನವನ್ನು ನಿರ್ಧರಿಸುತ್ತಿರುತ್ತದೆ. ಆ ಸಮಾಧಾನದ ಕ್ಷಣಗಳಲ್ಲಿ ಬ್ಯಾಂಕಿನೊಂದಿಗಿನ ನಂಬಿಕೆಯ ಸಂಬಂಧ ಕ್ಯಾಶ್ ಕೌಂಟರಿನಲ್ಲಿ ಬಲಗೊಂಡರೆ, ರೈತನೊಬ್ಬನ ಬೆವರಿನಲ್ಲಿ ಮೂಡಿದ ಮೊಗ್ಗು ರಸ್ತೆಬದಿಯಲ್ಲಿ ಹೂ ಮಾರುವವಳ ಧ್ವನಿಯಲ್ಲಿ ಅರಳುತ್ತದೆ; ಜೀಪಿನಲ್ಲಿ ಕುಳಿತವನ ಕ್ಯಾಮರಾ ಕಣ್ಣುಗಳು ಡ್ರೈವರಿನ ನಡೆಯನ್ನು ನಂಬಿಕೊಂಡರೆ, ನಗುಮೊಗದ ಚೆಲುವೆ ಒತ್ತುವ ಸೀಲು ದೇಶ ಬಿಡುವವನ ದುಗುಡವನ್ನು ಕಡಿಮೆ ಮಾಡುತ್ತದೆ. ಹಾಗೆ ಆ ಕ್ಷಣದಲ್ಲಿ ಹುಟ್ಟಿಕೊಂಡ ನಂಬಿಕೆಯೇ ದೇವರಾಗಿ ಸಕಲ ರೂಪಗಳಲ್ಲೂ ಸಂಧಿಸಿ, ಮಧ್ಯರಾತ್ರಿಯ ನೀರವತೆಯಲ್ಲಿ ದೂರದ ಹೈವೆಯಲ್ಲೆಲ್ಲೋ ಚಲಿಸುವ ಲಾರಿಗಳ ಸದ್ದಿನಂತೆ ದಿನಚರಿಯ ಭಾಗವಾಗಿ ಬೆರೆತುಹೋಗುತ್ತದೆ.           ಹಾಗೆ ಬದುಕಿನ ಚಲನೆಗಳೊಂದಿಗೆ ಅನುಸಂಧಾನಗೊಳ್ಳುವ ದೇವರೆನ್ನುವ ಪರಿಕಲ್ಪನೆಯ ಪರಿಧಿಯಲ್ಲಿ ಅಜ್ಜಿ ಮಾಡುತ್ತಿದ್ದ ಬಾಳೆಹಣ್ಣಿನ ರೊಟ್ಟಿಯ ಮೇಲಿನ ಗಟ್ಟಿತುಪ್ಪ ಪ್ರೀತಿಯ ಹನಿಯಾಗಿ ಕರಗಿ ನೆನಪಾಗಿ ಬೆರಳಿಗಂಟಿಕೊಳ್ಳುತ್ತದೆ; ದೂರದ ಹೊಳೆಯಿಂದ ನೀರು ತಂದು ಅಮ್ಮ ನೆಟ್ಟು ಬೆಳಸಿದ ಹಲಸಿನಮರದ ಬುಡದಲ್ಲಿ ಹಸುವೊಂದು ಮಲಗಿ ದಣಿವಾರಿಸಿಕೊಳ್ಳುತ್ತದೆ; ಅಪರಿಚಿತ ರಸ್ತೆಗಳ ಬೀದಿದೀಪಗಳನ್ನು ಒಂದೊಂದಾಗಿ ದಾಟುವ ರಾತ್ರಿಬಸ್ಸಿನ ಕನಸುಗಳು ನಿಶ್ಚಿಂತೆಯಿಂದ ಊರು ತಲುಪುತ್ತವೆ; ಹಸಿರು ಬಣ್ಣದ ಶರ್ಟು ತೊಟ್ಟ ಹುಡುಗನ ನಿಶ್ಚಲ ಕಣ್ಣುಗಳು ಮಳೆಗಾಲದ ಒಂದು ಸಂಜೆಯ ಏಕಾಂತಕ್ಕೆ ಜೊತೆಯಾಗುತ್ತವೆ. ಅಜ್ಜಿಯ ಪ್ರೇಮ, ಅಮ್ಮನ ನಂಬಿಕೆ, ಕಣ್ಣಂಚಿನ ಕನಸುಗಳು, ಹಸಿರಂಗಿಯ ಸಾಂಗತ್ಯಗಳೆಲ್ಲವೂ ಹೆಗಲನ್ನೇರಿ ಬದುಕಿನ ಪಲ್ಲಕ್ಕಿಯ ಭಾರವನ್ನು ಕಡಿಮೆ ಮಾಡುತ್ತವೆ. ಅಲ್ಲೊಂದು ಮೋಹ, ಇಲ್ಲೊಂದು ಸ್ನೇಹ, ಇನ್ನೆಲ್ಲೋ ಒಂದು ಪ್ರೀತಿಯ ಒರತೆ ಎಲ್ಲವೂ ಪೂರ್ವನಿರ್ಧರಿತವಾದಂತೆ ಭಾಸವಾಗುವ ಪಥಗಳಲ್ಲಿ ನಡೆದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳುತ್ತವೆ. ಆ ನೆಲೆಯಂಗಳದಲ್ಲಿ ಅರಳುತ್ತಿರುವ ಹೂವಿನ ಗೊಂಚಲುಗಳು ಭರವಸೆಯ ಬೆಳಕಿನೆಡೆಗೆ ಹೊರಳುತ್ತವೆ. ****************************************************************** – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಕಥಾಗುಚ್ಛ

ಸ್ವಾಭಿಮಾನಿ

ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ ರೈಲಿಳಿದಾಗ ಗಂಡನನ್ನು ಗಲ್ಲಾದಲ್ಲಿ ಕೂರಿಸಿ ತಾನು ಕಾಫಿ ತಿಂಡಿ ಊಟ ತಯಾರಿಸುತ್ತ ಮೂರು ವರ್ಷಗಳ ಮೇಲೆ ಮಕ್ಕಳನ್ನು ಕರೆಸಿ ಕೊಂಡಳು. ಕೆಲವೇ ವರ್ಷಗಳಲ್ಲಿ ಒಬ್ಬ ಮಗ ಹೋಟೆಲ್ ಉದ್ಯಮಿ ಇನ್ನೊಬ್ಬ ಡಾಕ್ಟರ್ ,ಮತ್ತೊಬ್ಬ ಆಡಿಟರ್ …ಕೊನೆಯವಳಾಗಿ ಹುಟ್ಟಿದ ಮಗಳು ಕಾಲೇಜು ಪ್ರಾಧ್ಯಾಪಕಿ….. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ. ತೊಂಭತ್ತರಲ್ಲಿರುವ ಆ ವೃದ್ಧೆ ಸ್ವಾಭಿಮಾನಿಯಾಗಿಯೇ ಉಳಿದಿದ್ದಾಳೆ. ಮಠವೊಂದರ ಲಿಫ್ಟ್ ನಲ್ಲಿ ಹತ್ತಿ ಮೇಲೇರಲು ಕೈ ಆಸರೆ ಸ್ವೀಕರಿಸಿದವಳು ಲಿಫ್ಟ್ ಐದನೇ ಮಹಡಿಯಲ್ಲಿ ನಿಂತ ಕ್ಷಣವೇ ಕೊಡವಿಕೊಂಡು ಊದಿಕೊಂಡಿದ್ದರೂ ಸ್ವಂತ ಕಾಲುಗಳಿಂದಲೇ ಮುಂದೆ ಮುಂದೆ ನಡೆದದ್ದು ಅಚ್ಚರಿ ಅಭಿಮಾನದಿಂದ ನೋಡುತ್ತಲೇ ಆಕೆಯ ಹಿಂದೆ ದೇವತಾಕಾರ್ಯ ನಡೆಯುವಲ್ಲಿಗೆ ನಾನೂ ಒಳ ಹೊಕ್ಕೆ. ಸಂಗಾತಿ. ಕಾಮ್ ನಲ್ಲಿ ಕವಯಿತ್ರಿ ವಿಶಾಲಾ ಆರಾಧ್ಯರ ‘ಬುದ್ಧನೊಂದಿಗೊಂದು ದಿನ’ ಕವಿತೆ ಓದಿದೆ…ಯಾರೂ ಕೇಳದೊಂದು ಪ್ರಶ್ನೆ ಅವರು ಗೌತಮ ಬುದ್ಧನಿಗೆ ಕೇಳಿದ್ದರು…’ ಆ ರಾತ್ರಿ ಯಶೋಧರೆಯೂ ನಿನ್ನನ್ನು  ಹಿಂಬಾಲಿಸಿ ಬಂದಿದ್ದರೆ ಏನಾಗುತಿತ್ತು ?.’ಏನೂ ಆಗಬಹುತಿತ್ತಲ್ಲವೇ ,ನನ್ನ ಕಣ್ಮುಂದೆ ಈ ಸಂಬಂಧಿ ಬಂದೇ ಬಂದು ನಿಂತಳು. ***************************************************

ಸ್ವಾಭಿಮಾನಿ Read Post »

ಕಾವ್ಯಯಾನ

ಶ್…. ! ನಿಶ್ಯಬ್ದವಾಗಿರಿ ನೀವು

ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! ಸೂರ್ಯನ ರಶ್ಮಿ ತಾಕದ ಕಾಯಗಳುಹಸಿವು ಚಳಿ ಮಳೆ ಗಾಳಿಯ ಹಂಗಿಲ್ಲದೆಪಂಚಭೂತಗಳನ್ನು ಸೇರಿಹರಿಲ್ಲಿ.. ! ಹೆಸರಿಗಾಗಿ ಹಾರಾಡಿಹೆಸರಿಲ್ಲದೇ ಅಳಿದುಕೊನೆಗೆ…ಆರಡಿ ಮೂರಡಿಯಲಿಫಲಕವ ಹಾಕಿಸಿಕೊಂಡಿಹರಿಲ್ಲಿ..! ಧರ್ಮ -ಅಧರ್ಮಗಳಾಚೆಮನುಷ್ಯನೇ ರೂಪಿಸಿಕೊಂಡನೀತಿ – ನಿಯಮಗಳಾಚೆಎಲ್ಲರೂ ಒಂದಾಗಿ ಬೆರೆತಿಹರಿಲ್ಲಿನಿಸರ್ಗದ ನಿಜ ಸೂತ್ರದ ಸ್ಮಶಾನದ ಗೋರಿಗಳಲ್ಲಿ….. ! ಶ್….! ಶಬ್ದ ಮಾಡದಿರಿ ನೀವು..ಎಚ್ಚರಗೊಂಡಾರು ಮತ್ತೆ….! *******************************

ಶ್…. ! ನಿಶ್ಯಬ್ದವಾಗಿರಿ ನೀವು Read Post »

ಕಾವ್ಯಯಾನ

ಭವದ ಭಾವಸೇತು

ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ ಪ್ರೀತಿಯರಾಧೆಯಾಗುವುದೆಂದರೆ ಅವನ ಪರವಶತೆಗೆತನ್ನೆಲ್ಲವನ್ನೂ ಮರೆತುಬಿಡುವುದು.ನಾಗರೇಖಾ ಗಾಂವಕರ *****************************

ಭವದ ಭಾವಸೇತು Read Post »

You cannot copy content of this page

Scroll to Top