ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ

ಲೇಖನ ನಾವು ಕನ್ನಡಿಗರು’ ಜಾಗತಿಕ ಸರಪಳಿಯ ಒಂದು ಕೊಂಡಿ ಗಣೇಶ ಭಟ್ಟ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಭಾಷೆ , ಸಂಸ್ಕೃತಿ, ಪರಂಪರೆಯ ಭಾವಧಾರೆಯನ್ನು ಬಳಸಿಕೊಂಡು ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಿ, ದೇಶವನ್ನು ದುರ್ಬಲಗೊಳಿಸುವ ಕಾರ್ಯವೆಂದು ಕೆಲವರು ಅಕ್ಷೇಪಿಸುತ್ತಾರೆ. ಹಲವು ವಿಧದ ಹೂವುಗಳನ್ನು ಬಳಸಿ ಹಾರ ತಯಾರಿಸಿದಾಗ ಅದರ ಸೌಂದರ್ಯ ಹಾಳಾಗುತ್ತದೆಂದು ಗೊಣಗುವುದು ಸಮಂಜಸವೆನಿಸಲಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಸ್ವರೂಪ, ವೈಶಿಷ್ಟತೆ, ಸೌಂದರ್ಯ ಇದ್ದರೂ ಎಲ್ಲಾ ವಿಧದ ಹೂಗಳನ್ನು ಸಮರ್ಪಕವಾಗಿ ಪೋಣಿಸಿ ಹಾರವನ್ನು ಸುಂದರವಾಗಿಸಲು ಸಾಧ್ಯ. ಅದೇ ರೀತಿಯಲ್ಲಿ ಪ್ರಾದೇಶಿಕ ವೈವಿಧ್ಯತೆಯನ್ನು ಕಾಪಾಡಿಕೊಂಡು ಸಧೃಡ ಮಾನವ ಸಮಾಜ ನಿರ್ಮಾಣ ಸಾಧ್ಯ. ಇತರ ದೇಶದ ಪ್ರಜೆಗಳನ್ನು ದ್ವೇಷಿಸುವುದರಿಂದಲೇ ತಮ್ಮ ದೇಶದ ಅಸ್ತಿತ್ವ ಉಳಿಯುತ್ತದೆಂಬಂತೆ ವರ್ತಿಸುವವರು ಮಾನವತೆಯ ವಿರೋಧಿಗಳು. ಪ್ರಾದೇಶಿಕತೆಗೆ ಪ್ರಾಶಸ್ತ್ಯ ನೀಡುವುದರಿಂದ ದೇಶದ ಐಕ್ಯತೆ ಹಾಳಾಗುತ್ತದೆಂದು ವಾದಿಸುವವರಿಗೆ ಮಾನವನ ಸ್ವಭಾವ ಮತ್ತು ದೇಶಾಭಿಮಾನದ ನೈಜತೆಯ ಅರಿವು ಇರುವುದಿಲ್ಲ ಅಥವಾ ಜಾತಿ, ಮತಗಳ ಭಾವೋದ್ವೇಗಕ್ಕೆ ಒಳಗಾಗಿರುತ್ತಾರೆ. ‘ ನಾವು ಕನ್ನಡಿಗರು’ ಎಂಬ ಮನೋಭಾವ ಕನ್ನಡ ನಾಡಿನಲ್ಲಿ ವಾಸಿಸುವ ಸಕಲರನ್ನೂ ಒಳಗೊಳ್ಳುವ, ಒಗ್ಗೂಡಿಸುವ ಸೈದ್ಧಾಂತಿಕ ನೆಲೆಗಟ್ಟಿನ ವ್ಯವಸ್ಥಿತ ಪ್ರಯತ್ನ. ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಾಗಬೇಕು. ಪ್ರತಿಯೋರ್ವ ವ್ಯಕ್ತಿಗೂ ಉನ್ನತ ಬದುಕಿನ ಅವಕಾಶಗಳು ಲಭ್ಯವಾಗಬೇಕು ಎಂಬ ಆಶಯದ ಈಡೇರಿಕೆಗಾಗಿ ವಿಕೇಂದ್ರಿಕೃತ ಅರ್ಥನೀತಿಯ ಅನುಷ್ಠಾನ ಅನಿವಾರ್ಯ. ಇದಕ್ಕಾಗಿ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಿ ರೂಪುಗೊಳ್ಳಬಲ್ಲ ಪ್ರದೇಶಗಳನ್ನು ಗುರ್ತಿಸಿ, ಅಲ್ಲಿನ ಭಾಷೆ ಸಂಸ್ಕೃತಿ ಬದುಕಿನ ರೀತಿ ನೀತಿಗಳ ಸಾಮ್ಯತೆಯ ಆಧಾರದ ಮೇಲೆ ಜನರಲ್ಲಿ ಒಗ್ಗಟ್ಟನ್ನು ಮೂಡಿಸುವುದು ಅವಶ್ಯಕ. ಈ ಹಿನ್ನಲೆಯಲ್ಲಿ ಜಗತ್ತಿನಾಧ್ಯಂತ ೨೪೩ ಸ್ವಯಂ ಸ್ವಾವಲಂಬಿ ಸಧೃಡ ಸಾಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ‘ನಾವು ಕನ್ನಡಿಗರು’ ಎಂಬುದು ಸರಪಳಿಯ ಒಂದು ಕೊಂಡಿ. ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅಭಿವ್ಯಕ್ತಿಯಾಗಿರುವ ಭಾರತದ ೪೪ ಹೂವುಗಳ ಹಾರದಲ್ಲಿ ‘ನಾವು ಕನ್ನಡಿಗರು’   ಕೂಡ ಒಂದು. ****************************************

ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ Read Post »

ಕಾವ್ಯಯಾನ

ಖಾಲಿಕೈ ಫಕೀರ

ಕವಿತೆ ಖಾಲಿಕೈ ಫಕೀರ. ಅಬ್ಳಿ,ಹೆಗಡೆ ನನಗರಿವಿಲ್ಲದೇ…..ಕಾಣದಲೋಕದ ಕದ ತಟ್ಟಿದೆಬೆಳಕ ಬಾಗಿಲು ತೆರೆಯಲೇ ಇಲ್ಲ.ಕತ್ತಲ ಕೂಪ ಕಳೆಯಲೇ ಇಲ್ಲ.ಬದುಕಲ್ಲಿ ಕಂಡಸಂಖ್ಯ ಕನಸುಗಳಿಗೆಲ್ಲಒಂದು ಅನಿರೀಕ್ಷಿತ ಹ್ರದಯ ಸ್ಪರ್ಶಿವಿದಾಯ ಘೋಷಿಸಿ,ಒಮ್ಮೆಯಾದರೂ ಆತ್ಮೀಯರಕಣ್ಣಂಚ ಒದ್ದೆಯಾಗಿಸಿಆಟ ನಿಲ್ಲಿಸಬೇಕೆಂದರೆ ಅದೂಸಫಲವಾಗಲಿಲ್ಲ.ಕೊನೇ ಬಿಂದುವಿನಲ್ಲಾದರೂಸಾರ್ಥಕ ಬದುಕಿನ ಸಣ್ಣ ತ್ರಪ್ತಿಯೊಂದಿಗಾದರೂ ವಿರಮಿಸಬೇಕೆಂದರೆ ಅದೂ ಕೈಗೂಡಲಿಲ್ಲ. ಸಧ್ಯ ನಾ ಮೊದಲಿನಂತೇ..ಭಾವದ ಭಿಕಾ಼ಪಾತ್ರೆ ಹಿಡಿದುಅಲೆದಾಡುವ ಏಕಾಂಗಿ,ಪ್ರಾರಬ್ಧಕ್ಕೆ ಪಕ್ಕಾದ ಖಾಲಿಕೈಫಕೀರ ಅಷ್ಟೆ….!!!! ************************

ಖಾಲಿಕೈ ಫಕೀರ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ – ೯ ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು. ಉತ್ತರ ಕನ್ನಡ ಜಿಲ್ಲೆ  ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂಥ ಅದ್ಭುತ ಪ್ರತಿಭೆಗಳನ್ನು ಮುಂಬಯಿಯ ಮಹಾಕೂಪಕ್ಕೆ ತಳ್ಳಿಯೂ ಅವರಿಂದ ಆ ಮಹಾನಗರದ ಸಕಲ ಸೂಕ್ಷ್ಮಗಳ ಪರಿಚಯ ಮಾಡಿಸುತ್ತಲೇ ತನ್ನದೇ ಆದ ಹವ್ಯಕ ಕನ್ನಡ ಮತ್ತು ಮೀನು ವಾಸನೆಯ ಸೊಗಸನ್ನು ಸೇರಿಸಿದ ಭಾಷೆಯನ್ನು ಟಂಕಿಸಿ ತನ್ಮೂಲಕ ಉತ್ತರ ಕನ್ನಡದ ಪರಿಸರದ ಮೇಲೆ ಆಧುನಿಕ ಬದುಕಿನ ಪ್ರಭಾವಗಳನ್ನು ತಲಸ್ಪರ್ಶಿಯಾಗಿಯೂ ಹೃದ್ಯವಾಗಿಯೂ ಅಭಿವ್ಯಕ್ತಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಈ ನೆಲದ ಮೇಲಾದ ಹಲವು ದಾರುಣ ಪ್ರಯೋಗಗಳನ್ನೂ ಮತ್ತು ಆ ಎಲ್ಲ ಪ್ರಯೋಗಗಳಿಂದಾಗಿ ಅಸ್ತವ್ಯಸ್ತವಾದ ಅಲ್ಲಿನ ಜನ ಜೀವನವನ್ನೂ ಉತ್ತರ ಕನ್ನಡದ ಹಲವು ಬರಹಗಾರರು ಅದ್ಭುತವಾಗಿ ಚಿತ್ರಿಸಿದ್ದಾರೆ. ಇದೇ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ  ಶ್ರೀಧರ ಭಟ್ ಹೆಸರಲ್ಲಿ ಫೇಸ್ಬುಕ್ ಖಾತೆ ಇದ್ದರೂ ಶ್ರೀ ತಲಗೇರಿ ಎನ್ನುವ ಹೆಸರಲ್ಲೇ ಅವರು ಪದ್ಯಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಕೃತಿಯ ಕೌತುಕ, ನಗರದ ಗದ್ದಲ,ಮನುಷ್ಯನ ಮೂಲಭೂತ ನಡವಳಿಕೆಗಳ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ತೋರುವ ಇವರ ಪದ್ಯಗಳಲ್ಲಿ ವಯಸ್ಸಿಗೂ ಮೀರಿದ ಅನುಸಂಧಾನಗಳಿವೆ. ಇತ್ತೀಚೆಗಷ್ಟೇ ‘ಒಂಟಿ ಟೊಂಗೆಯ ಲಾಂದ್ರ’ ಹೆಸರಿನ ಕವನ ಸಂಕಲನ ಇ-ಪುಸ್ತಕವಾಗಿ ಬಿಡುಗಡೆಯಾಗಿದೆ. ವಾಟ್ಸ್ ಆಪಿನ ಹಲವು ಗುಂಪುಗಳಲ್ಲಿ “ಕಾವ್ಯ ಕೇಳಿ” ಗುಂಪು ಸದಾ ರಚನಾತ್ಮಕ ಕೆಲಸಗಳಲ್ಲಿ ತೊಡಗಿರುತ್ತದೆ. ಸುಬ್ರಾಯ ಚೊಕ್ಕಾಡಿ ಮತ್ತು ತಿರುಮಲೇಶರ ಹುಟ್ಟುಹಬ್ಬದ ಸಲುವಾಗಿ ಅನೇಕ ಬರಹಗಳನ್ನು ಈ ಗುಂಪು ಪ್ರಕಟಿಸಿತು. ಈ ಗುಂಪಿನ ಸಾಮಾನ್ಯ ಸದಸ್ಯನಾಗಿ ಪ್ರಕಟಿಸುವುದಕ್ಕಿಂತಲೂ ಅಲ್ಲಿನ ಬರಹಗಳನ್ನು ಓದುವುದರಲ್ಲೇ ಹಿತ ಕಂಡಿರುವ ನನಗೆ ಆ ಗುಂಪಿನಲ್ಲಿ “ಶ್ರೀ ತಲಗೇರಿ” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಬರೆಯುವ ರೀತಿಯಿಂದ ಚಕಿತನಾಗಿದ್ದೇನೆ. ಮೂಲತಃ ಕಂಪ್ಯೂಟರ್ ಪ್ರೋಗ್ರಾಮರ್ ಆದ ಶ್ರೀಧರ ಭಟ್ ತಮ್ಮ ವಯಸ್ಸಿಗೂ ಮೀರಿದ ಅನುಸಂಧಾನಗಳನ್ನು ಕಾಣಿಸಿ ಚಕಿತಗೊಳಿಸುತ್ತಾರೆ. ಅವರ ಇತರ ಬರಹಗಳ ಬಗ್ಗೆಯೂ ಕುತೂಹಲವಿದ್ದರೂ ಈ ಅಂಕಣ ಕವಿತೆಗಳನ್ನು ಕುರಿತೇ ಇರುವುದರಿಂದಾಗಿ ಅವರ ಕೆಲವು ಕವಿತೆಗಳನ್ನು ಕುರಿತ ಈ ಟಿಪ್ಪಣಿಯನ್ನು ಅವರ ” ಕತ್ತಲು” ಕವಿತೆಯ ಸಾಲುಗಳ ಮೂಲಕ ಆರಂಭಿಸುತ್ತಿದ್ದೇನೆ; ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು….. ಪದ್ಯದ ಆರಂಭ ಕೂಡ ಇದೇ ಸಾಲುಗಳಿಂದಲೇ ಆಗಿದೆ. ಅಂದರೆ ಈ ಕವಿತೆಯಲ್ಲಿ ಕವಿ ತಾನು ಕಂಡುದನ್ನು ಮತ್ತೆ ಮತ್ತೆ ಕಟೆಯುವ ಸಲುವಾಗಿ ಅದೇ ಅದೇ ಸಾಲುಗಳನ್ನು ಬಳಸುತ್ತಲೇ ತನ್ನ ಅನುಭವದ ಮೂಲಕ ಕತ್ತಲನ್ನೂ ಮತ್ತು ಕತ್ತಲಿನ ಜೊತೆಗೇ ಇರುವ ಬೆಳಕನ್ನೂ ಇಲ್ಲಿ ಎದುರು ಬದುರು ನಿಲ್ಲಿಸುತ್ತಲೇ ಒಂದು ದಟ್ಟ ಅನುಭವದ ಸತ್ಯವನ್ನು ದಾಟಿಸುತ್ತಲೇ ಈ ವರೆಗೂ ಕನ್ನಡದಲ್ಲಿ ಬಂದ “ಬೆಳಕು” ಕುರಿತ ಕವಿತೆಗಳಿಗೆ ವಿರುದ್ಧವಾಗಿದ್ದರೂ ಆದರೆ ಸಶಕ್ತವಾದ ಒಂದು ಪದ್ಯವನ್ನಾಗಿಸಿದ್ದಾರೆ. ಪೂರ್ವಾಪರಗಳನ್ನು ಕತ್ತಲು ಮತ್ತು ಬೆಳಕಿನ ವಿನ್ಯಾಸದಲ್ಲಿ ಕಂಡರಿಸಿದ ಬಗೆಯೇ ಸೊಗಸಾಗಿದೆ. ಯಾವುದೋ ತುಟ್ಟ ತುದಿ ತಲುಪುತ್ತೇವೋ ಇಲ್ಲವೋ ಆದರೆ ನಿಟ್ಟುಸಿರನ್ನಂತೂ ಬಿಡುತ್ತೇವೆ ತಾನೆ? “ಅಸ್ತಿತ್ವ” ಶೀರ್ಷಿಕೆಯ ಪದ್ಯ ಕಾಣುವುದಕ್ಕೆ ಸರಳವಾಗಿದೆ ಆದರೆ ಅದು ತನ್ನೊಳಗೇ ಇರಿಸಿಕೊಂಡಿರುವ ಪ್ರತಿಮೆ ಅಷ್ಟು ಸುಲಭಕ್ಕೆ ಎಟುಕುವುದಿಲ್ಲ. ಒಂದೆರಡು ಸಾಲುಗಳನ್ನಿಲ್ಲಿ ಕೋಟ್ ಮಾಡಿದರೆ ಪದ್ಯದ ಆಂತರ್ಯ ಸುಲಭಕ್ಕೆ ಸುಭಗಕ್ಕೆ ನಿಲುಕದ ಕಾರಣ ಇಡೀ ಪದ್ಯವನ್ನೇ ಓದುವುದು ವಿಹಿತ. ಹೀಗೆ “ಮೌನವನ್ನಾತು ಕೂರಬೇಡ” ಎಂದು ಸುರುವಾಗುವ ಪದ್ಯದ ಸರಕು ಜಯಂತ ಕಾಯ್ಕಿಣಿಯವರ ಫೇವರಿಟ್ ಸಂಗತಿ. ಜಯಂತ್ ಸಾಮಾನ್ಯ ಸಂಗತಿಗಳ ಅಸಾಮಾನ್ಯ ವಿವರಗಳನ್ನು ಕಟ್ಟಿಕೊಡುವಂತೆಯೇ ಈ ಪದ್ಯ ಇರುವುದಾದರೂ ಇಡೀ ಪದ್ಯ ಹೊರಳಿಕೊಳ್ಳುವ ವಿಹ್ವಲತೆ ಅಷ್ಟು ಸುಲಭಕ್ಕೆ ಮರೆಯಲಾರದಂಥದು. ಪ್ರಾಣವೇ ಪ್ರಾಣ ಹೀರಿ ಮತ್ತೆ ವರ್ತಮಾನಕ್ಕೆ ಮಿಲನ ಬರೀ ಸ್ಪರ್ಶವಲ್ಲ ಮರುಹುಟ್ಟು ಆ ಗಳಿಗೆ ಹೂ’ಗಳಿಗೆ’ ಪರಾಗ ಸ್ಪರ್ಶದ ಸಾಮಾನ್ಯ ಸಂಗತಿಯನ್ನು ಅನುನಯಿಸಿದ ರೀತಿ ಅದರಲ್ಲೂ “ಪ್ರಾಣವೇ ಪ್ರಾಣ ಹೀರಿ” ಎನ್ನುವ ರೀತಿ ಒಂದು ಜೇನ್ನೊಣ ಮತ್ತೊಂದು ಹೂವು, ಎರಡೂ ಜೀವಂತ ಇದ್ದರೂ ಅವುಗಳಲ್ಲಿ ಇರುವ ಪರಸ್ಪರ ಸಂಬಂಧಗಳನ್ನು “ಗಳಿಗೆ” (ಸಮಯ) ಕಾಯುತ್ತದಲ್ಲ ಅದನ್ನಿಲ್ಲಿ ಹೇಳಿದ ರೀತಿ ಇದುವರೆಗಿನ ಸಾಹಿತ್ಯ ಪಯಣದಲ್ಲೇ ಬೇರೆಯದೇ ಆಗಿದೆ. ”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಎನ್ನುವ ಹೆಸರಿನ ಪದ್ಯ ಸುರುವಾಗುವ ಮೊದಲೇ ಮುಗಿದುಹೋಗಿದೆ. ಟಿಪ್ಪಣಿಯ ಸುರುವಿನಲ್ಲಿ ಹೇಳಿದ ಉತ್ತರ ಕನ್ನಡದ್ದೇ ಆದ ಪರಿಸರವನ್ನು ಚಂದಾಗಿ ಚಿತ್ರಿಸಿದ ಕವಿತೆ ಆ ಪ್ರತಿಮಾಲಂಕರದಲ್ಲೇ ಉಳಿದು ಅದನ್ನು ಓದುಗನಿಗೆ ದಾಟಿಸುವಷ್ಟರಲ್ಲಿ ವಿರಮಿಸಿ ಮುಂದೇ ಏನೋ ಆಗಬಹುದಾಗಿದ್ದ ಸಂಗತಿಗೆ ಬ್ರೇಕು ಹಾಕಿಸುತ್ತಲೇ ಸುನಂದಾ ಕಡಮೆ ಮತ್ತು ಜಯಂತರ ಕತೆ ಕವಿತೆಗಳನ್ನು ನೆನಪಿಸುತ್ತದೆ. “ಪ್ರಶ್ನೆ” ಎನ್ನುವ ಹೆಸರಿನ ಪದ್ಯದ ಕೊನೆ ಹೀಗಿದೆ; ಅಹಲ್ಯೆಯ ಗೌತಮರಿಗೊಪ್ಪಿಸಿದ ಹುಡುಗನೊಬ್ಬ ಧರ್ಮದ ಗಡಿಯಲ್ಲೇ ಉಳಿದು ಹೋದ ರಾಜನಾದ ಅಯೋಧ್ಯಾರಾಮ ನಾನು, ಸೀತೆಯಲ್ಲುಳಿದ ಪ್ರಶ್ನೆ ನಾನು ಆದರೆ ಪದ್ಯದ ಆರಂಭದಲ್ಲೆಲ್ಲೂ ಮಹಾಕಾವ್ಯ ರಾಮಾಯಣದ ಯಾವ ಪಾತ್ರವೂ ಬಾರದೇ ಬರಿಯ ಸಂಕೇತಗಳಲ್ಲಷ್ಟೇ ಅರಳಿಕೊಳ್ಳುತ್ತಲೇ ತಿಳುವಳಿಕೆಯ ಆಳಕ್ಕೆ ಹೊರಳಿಕೊಳ್ಳುವ ಕವಿತೆ ಈ ಕವಿಯ ಮನಸ್ಸನ್ನು ಕಾಡುತ್ತಿರುವ ಸಂಗತಿಗಳನ್ನೂ ಸಂದರ್ಭಗಳನ್ನೂ ಸಾರ್ಥಕವಾಗಿ ಸಮೀಕರಿಸಿದೆ. “ದೇವರ ವಿಳಾಸ ಹುಡುಕಿದ್ದೇನೆ” ಎನ್ನುವ ಪದ್ಯವಂತೂ ಈ ಕವಿ ಈಗಾಗಲೇ ದೇವರನ್ನು ಕುರಿತಂತೆ ಇರುವ ಎಲ್ಲ ಜಿಜ್ಞಾಸೆ ಮತ್ತು ಹೇಳಿಕೆಗಳನ್ನು ಒಳಗೊಳ್ಳುತ್ತಲೇ ನಿರಾಕರಿಸುವ ಮತ್ತು ತನ್ನದೇ ಕಾಣ್ಕೆಯನ್ನು ಕೊಡುತ್ತದೆ; ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು ಕಳೆದುಹೋದವ ಇದೇ ಜಂಗುಳಿಯ ಮಧ್ಯ.. ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ ಮುಂದೇನಾಗುವರು ?!.. ಅಲ್ಲಿಗೆ ಈ ಕವಿ ದೇವರೆನ್ನುವುದನ್ನು ಲೌಕಿಕದ ಸಂಗತಿಗಳ ಮಧ್ಯೆ ಮತ್ತು ಸಂಬಂಧಗಳ ಸೀಮಿತಾರ್ಥದಾಚೆಯ ನಿಲುಕಲ್ಲಿ ಹುಡುಕುತ್ತಿದ್ದಾನೆ. ಮೂರ್ತಿರಾಯರು ಮತ್ತು ನರಸಿಂಹಯ್ಯನವರ ದೇವರನ್ನೂ ಇಲ್ಲಿ ಸ್ಮರಿಸಿದರೆ ಸಹೃದಯರಿಗೆ ಈ ಪದ್ಯ ಬಗೆಯಲು ಇನ್ನಷ್ಟು ಸಹಕಾರಿ. ಗುಡಿಸಲಿನ ಇತಿಹಾಸದಲಿ ರೇಖೆ ದಾಟಿದರೆ ಸೀತೆಗೆ ಅಪಹರಣದ ಭೀತಿ.. ರಾವಣ ಮಾರುವೇಷದಲ್ಲಿದ್ದಾನೆ.. “ಗೆರೆ” ಎನ್ನುವ ತಲೆಬರಹದ ಈ ಪದ್ಯದ ಕೊನೆ ವರ್ತಮಾನ ಮತ್ತು ಭೂತವನ್ನು ಒಗ್ಗೂಡಿಸಿದ ಭವಿಷ್ಯದ ವಾರ್ತೆಯಂತೆ ಅಂದುಕೊಂಡರೆ ಅದು ಒಟ್ಟೂ ಸಾಮಾಜಿಕತೆಯ ಸರಳ ಮೌಲ್ಯೀಕರಣ. ಮತ್ತು ಈ ಕವಿ ತನ್ನ ಅನುಭವ ಮತ್ತು ಓದಿನಿಂದ ಇತಿವೃತ್ತಗೊಳಿಸಿಕೊಂಡಿರುವ ವಿವೇಕದ ಮಿತಿ. ಕನ್ನಡದ ಮಹತ್ವದ ಕವಿ ತಿರುಮಲೇಶರ ಸ್ಪೂರ್ತಿ ಈ ಕವಿ ಶ್ರೀ ತಲಗೇರಿ ಅವರ ಮೇಲಿರುವುದು ಸ್ಪಷ್ಟವಾಗಿದೆ. ಮತ್ತು ಕ್ವಚಿತ್ತಾಗಿ ಅಡಿಗರನ್ನೂ ರಾಮಾನುಜರನ್ನೂ ಇವರು ಆವರ್ಭಿಸಿಕೊಂಡಿರುವುದೂ ಅವರ ಕವಿತೆಗಳು ನೀಡುವ ದರ್ಶನದಿಂದ ಗುರ್ತಿಸಬಹುದು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಂತರ್ಯದಲ್ಲಿ ಸಂಕೀರ್ಣತೆ ಇಟ್ಟುಕೊಂಡಿರುವ ಕೆ ಎಸ್ ನ ಮತ್ತು ಜಿ  ಎಸ್ ಎಸ್ ಇವರಿಗೆ ದೂರ. ಏಕೆಂದರೆ ಇನ್ನೂ ೨೬ರ ಹರಯದ ಈ ಹುಡುಗನ ಕವಿತೆಗಳಲ್ಲಿ ಹುಡುಕಿದರೂ ಆ ಪ್ರಾಯಕ್ಕೆ ಸಹಜವಾಗಿ ಬರಲೇಬೇಕಾದ ಪ್ರೇಮ ಮತ್ತು ಪ್ರೀತಿ ಹಾಗೂ ಹುಡುಗ ಹುಡುಗಿಯರ ಒಲವ ಹಾಡಿನ ಸೂಚನೆಗಳೇ ಇಲ್ಲ. ಇದು ಹೀಗಾಗಬಾರದು ಎಲ್ಲ ಕವಿಗಳೂ ವಿಶೇಷತಃ ಯುವಕರು ಬರಿಯ ಜಿಜ್ಞಾಸೆ ಮತ್ತು ಪಾರಮಾರ್ಥದ ಸುಳಿಗಳಲ್ಲಿ ಇಳಿದುಬಿಟ್ಟರೆ ಲೌಕಿಕದ ಗತಿಯೇನು? ಅರ್ಥ ಮತ್ತು ಧ್ಯಾನದೀಚೆಗಿನ ವಯೋ ಸಹಜ ದಾಂಗುಡಿಗಳನ್ನೂ ಪೋಷಿಸದ ಪ್ರಜ್ಞೆ ಲೌಕಿಕವನ್ನು ಬಿಟ್ಟುಕೊಟ್ಟರೆ ಗತಿಯೇನು? “ಬುದ್ಧ ಮೊದಲೇ ಇದ್ದ” ಎನ್ನುವ ಕವಿತೆಯ ಕಡೆಯಲ್ಲಿ ಹಾಗೆ ನೋಡಿದರೆ ಬುದ್ಧ ಮೊದಲೇ ಇದ್ದ ನಡು ರಾತ್ರಿಯಲಿ ಯಶೋಧರಾ ಸಿದ್ಧಾರ್ಥರ ತೋಳುಗಳಲಿ ಬೆಚ್ಚಗೆ ಮಲಗಿದ್ದ ರಾಹುಲನ ತುಟಿಗಳಲಿ ಬುದ್ಧ ಮೊದಲೇ ಇದ್ದ ಎನ್ನುವಲ್ಲಿ ಈ ಕವಿ ಕಂಡುಕೊಂಡ ತಿಳುವಳಿಕೆಯ ಕಾವು ಮತ್ತು ಇತಿಹಾಸವನ್ನು ಬೇರೆಯದೇ ಬೆರಗಿನಿಂದ ಕಂಡ ಸತ್ಯವಾಗಿಯೂ ಕಾಣುತ್ತದೆ. ಈ ನಡುವೆ ಅದರಲ್ಲೂ ಫೇಸ್ಬುಕ್ಕಿನ ಕವಿತೆಗಳಲ್ಲಿ ರಂಜನೆ ಮತ್ತು ನಾಟಕೀಯತೆಗಳೆ ಮಿಲಿತಗೊಂಡ ಹುಸಿಗಳೇ ಪದ್ಯಗಳೆಂದು ದಾಂಗುಣಿಯಿಡುತ್ತಿರುವ ವರ್ತಮಾನದಲ್ಲಿ ಶ್ರೀ ತಲಗೇರಿಯಂಥವರ ಪದ್ಯಗಳು ಕಾವ್ಯಾಸಕ್ತರಿಗೆ ಮತ್ತು ಬದುಕಿನ ಅರ್ಥದ ಜಿಜ್ಞಾಸುಗಳಿಗೆ ಅಲ್ಪ ಪ್ರಮಾಣದ ಸಮಾಧಾನ ಮತ್ತು ಸಾಂತ್ವನ ನೀಡುತ್ತವೆ. ಚಿಂತನೆಯೇ ಮುಖ್ಯವಾದ ಲೌಕಿಕದ ಆಕರ್ಷಕ ಸಂಗತಿಗಳಿಗೆ ಹೊರತಾದ ಈ ಬಗೆಯ ಬೌದ್ಧಿಕತೆ ಕೂಡ ಕೆಲವೇ ಜನಗಳ ಶೋಕೇಸ್ ವಸ್ತುವಾಗುತ್ತಿರುವ ಕಾಲದಲ್ಲಿ ಶ್ರೀಧರ ಭಟ್ ಅವರ ಮುಂದಿನ ಕಾವ್ಯಕೃಷಿ ಕುರಿತು ಸಹಜ ಕುತೂಹಲ ಮತ್ತು ಭರವಸೆಯನ್ನು ಹುಟ್ಟಿಸುತ್ತಿದೆ. ಶ್ರೀ ತಲಗೇರಿ ಅವರ ಆಯ್ದ ಕವಿತೆಗಳು. 1. “ಕತ್ತಲು” ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು ಎಲ್ಲ ಕಳಕೊಂಡ ನಿರ್ಗತಿಕರಂತೆ ಮಲಗುತ್ತೇವೆ ಇಷ್ಟೇ ಇಷ್ಟು ಬಿರಿದ ತುಟಿಗಳ ಡೊಂಕು ಅಗಲಿಸಿ.. ಒಂದು ತಪ್ಪೇ ಇಲ್ಲಿ ಸರಿಯಾಗಬಹುದು ಸೋಲುವ ಯುದ್ಧದ ಸುತ್ತ ಗಿರಕಿ ಕಠಿಣವಾದಷ್ಟೂ ಮೆದುವಿಗೆ ಮೆದುವಾದಷ್ಟೂ ಕಠಿಣಕ್ಕೆ ಉನ್ಮಾದ; ಸೀಮೋಲ್ಲಂಘನದ ಆವೇಶ ಕರಗುತ್ತದೆ ಹೊತ್ತು ದೇಹ ಗಳ ಮಿತಿಯ ಮೀರುವ ಶೋಧದಲ್ಲಿ ಚಿಗುರು ಹುಟ್ಟುವ ಮೊದಲೇ ಜೀವ ಚಿಗುರಬೇಕಲ್ಲ ಬಿಂದುವಾಗಿ ಕತ್ತಲ ನೆರಿಗೆಗಳು ಬೆರಳಿಗೆ ತಾಕುವಾಗ ಬೆಳಕಿಗೆ ಹಿಂದಿರುಗದ ಹಠ ಹಿಡಿದು ಗುರುತಿನ ಬಟ್ಟೆ ಕಳೆದು ಕೂರುವಾಸೆ ವ್ಯಾಪಾರವೇನು ಹುಟ್ಟಿಗೆ ಸಾವು, ಸಾವಿಗೆ ಹುಟ್ಟು ಬ್ರಹ್ಮಾಂಡವೇ ಅಣುವಾಗಿ ಅಣುವೇ ಬ್ರಹ್ಮಾಂಡವಾಗಿ ಎಲ್ಲಿಯ ಏಕರೂಪ, ಎಲ್ಲಿಯ ಭೌತ ತಾಪ ಒಡೆದು ಕಡೆದು ಸಿಡಿದು ಕತ್ತಲು ಬೀಜ ಬಿತ್ತುತ್ತದೆ ನಾಳೆಯ ಸಾಕ್ಷಿಗಾಗಿ.. ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು 2. ಹೀಗೆ ಮೌನವನ್ನಾತು ಕೂರಬೇಡ ಒಂದು ಜೋರು ಮಳೆ ಬರುತ್ತದೆ ಬಚ್ಚಿಟ್ಟ ಮಾತು ಮೆತ್ತಗೆ ಕರಗಿ ತೊಳೆದುಹೋದರೆ ಎಲ್ಲಿ ದೋಣಿಯ ಕೋಲು ಬೀಸಲಿ ಊರ ತುಂಬಾ ಬೀಳುವ ಮಳೆಯ ಬಾಲ ಹಿಡಿದು ಗುಡುಗಿನ ಮೀಸೆ ತಿರುವಬೇಕು ಅಂದಿದ್ದೆಯಲ್ಲಾ ಈ ಮಳೆಗೆ ತಲೆ ಬುಡ ಇಲ್ಲ ಆದರೂ ಒಂದು ಹೆಸರು ಕೊಡು ಇಟ್ಟುಕೊಳ್ಳುತ್ತೇವೆ ಒದ್ದೆಯಾಗಬಹುದು ಈ ರಾತ್ರಿ ಒಟ್ಟಿಗೇ ಕಳೆದರೆ ಗತ್ತಿನಲ್ಲಿ ಮತ್ತಿನಲ್ಲಿ ಸ್ವಂತದಲ್ಲಿ ರೋಮಗಳಿಗೆ ಆಗಾಗ “ಕ್ಲಾಸ್ ಸಾವ್ದಾನ್” ಸುಮ್ಮನೆ ಬೆತ್ತಲಾಗಬಾರದು ಹಾಗೆಲ್ಲಾ ಒಂದೇ ಕೊಡೆಯ ಕೆಳಗೆ ಕೂರಬೇಕು ಅದಕೆ ಮೋಡಗಳ ಚಿತ್ರವಿರಬೇಕು ಮತ್ತೆ ಹೇಳಬೇಕೇ ಮಳೆ ಬರಬೇಕು 3.”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಮುಗಿದಿಲ್ಲವಿನ್ನೂ ಸಂಭಾಷಣೆ ಅರ್ಧಕ್ಕೆ ನಿಂತ ನಿವೇದನೆ ಎದೆಭಾರವೆಲ್ಲಾ ನಿನ್ನದೆಗೆ ನೂಕಿ ಜೋಕಾಲಿಯಾಡುವೆನು ಹಗುರಾಗಿ ಜೀಕಿ.. ಕಂಬಳಿಯ ಕೊಪ್ಪೆಯಲಿ ಸೇರಿಸಿಕೋ ನನ್ನ.. ಮಳೆಗಾಲಕಿನ್ನೂ ಅರ್ಧ ವಯಸ್ಸು ! ಕೊಟ್ಟಿಗೆಯ ತಡಿಯಾಚೆ ಖಾಲಿ ಕೂತಿಹ ಚಂದ್ರ ಒಂದೊಳ್ಳೆ ನೆರಿಗೆಯನು ಬಿಚ್ಚಬಾರದೇ ನಾಚಿಕೆ ಸರಿಸಿ ಇಳಿಜಾರು ಭೂಮಿಯಲಿ ಹನಿ ಜಾರಿ ಬಿದ್ದೀತು ಹತ್ತಿರವೇ ಇರಿಸಿಕೋ ನನದೊಂದು ಬೊಗಸೆಯನು ಮಳೆಗಾಲಕಿನ್ನೂ ಅರ್ಧ ವಯಸ್ಸು ! ಹಳೇ ನಿಲ್ದಾಣದಲಿ ಕೂತಿದೆ ಹರಡಿದಾ ಕೂದಲು ಪ್ರತಿನಿತ್ಯ ಹೀಗೇ ಒಂದು ಭೇಟಿ ಬರುವರೇನೋ ಎಂದು ಕಾಯುವಂತೆ ಕತ್ತೆತ್ತಿ.. ಮರಳುವುದೇನು ಆ ವಯಸ್ಸು ಊರುಬಿಟ್ಟ ಮೋಡಗಳ ಹಿಂದೆಯೇ ಹೋಯಿತಂತೆ ಮಳೆಗಾಲ.. ನೆನಪುಗಳಲಿ ಒಂದಾದರೂ ದೋಣಿಯಿದ್ದೀತು ಸಾವರಿಸಿಕೊಳಲು ಮುರಿದದ್ದೋ ಅಥವಾ ಕಟ್ಟಬೇಕಿರುವುದೋ.. ! 4. ‘ಪ್ರಶ್ನೆ’.. ! ತೊಡೆಯ ಮೇಲೆ ಪುಟ್ಟ ಬೆರಳುಗಳ

Read Post »

ಕಾವ್ಯಯಾನ

ಮಗಳು ಬಂದಳು ಮನೆಗೆ

ಮಗಳು ಬಂದಳು ಮನೆಗೆ ಅರುಣ್ ಕೊಪ್ಪ ಒಡಲಾಳದ ಅಳುವನ್ನು ಜಗದೆಡೆಗೆ ಪಸರಿಸಿದಳು ,ಅಮ್ಮನ ಕಂಕುಳದಲಿ ಕಸವು ಹಚ್ಚಿ, ಬೇನೆ ಸೋನೆಗಳ ಸುಮ್ಮನಿರಿಸಿಮಿಡುಕಾಡಿದಳು ಹೊರಗೂ ಒಳಗೂಜಗದ ಕಣ್ಣಾಗುವಳು ಇಂದು ಮುಂದೂ ಎಂದೆಂದೂ ಆರತಿಗೊಬ್ಬಳು ಆಸರೆ ಇವಳು ಹುಸಿಯನ್ನೆಲ್ಲ ಹೊಸೆತಳುಕೀರ್ತಿಗೊಬ್ಬನ ಕಿವಿಯಲ್ಲೇ ಧೈರ್ಯದುಂಬಿ ಬಂಧ ಬೆಸೆವಳುನನ್ನವಳ ಉದರದಲ್ಲೇ ನನ್ನವಳ ಆಗಮನ ಹೆಣ್ಣು ಇವಳುಧೈರ್ಯದಲಿ ಮಿಗಿಲು ಸಂಭ್ರಮಿಸುವದು ಕೂಡ ಮುಗಿಲು ಗುರುವಾರದ ಅಧಿಕ ಸೀಗಿ ಹುಣ್ಣಿಮೆಯ ಪವಿತ್ರ ಗಳಿಗೆಪುಣ್ಯ ದಿನವೂ ಸಿಕ್ಕಿ ಆನಂದ ಭಾಷ್ಪ ಉಕ್ಕಿ ನಮಗೆಹೆಣ್ಣಿಲ್ಲದ ಮನೆಯಿಲ್ಲ ಇದ್ದೂ ಸಿರಿಯಿಲ್ಲಜಗ ಜನಿಸಿ ಯುಗವಾಗಿದ್ದೇ ಹೆಣ್ಣು ಎಂಬ ಮಾಯೆಯಿಂದ ***************************

ಮಗಳು ಬಂದಳು ಮನೆಗೆ Read Post »

ಕಾವ್ಯಯಾನ

ಸಾಮಗಾನ

ಕವಿತೆ ಸಾಮಗಾನ ಪವಿತ್ರ. ಎಂ ಕವಲೊಡೆದ ಗಳಿಗೆಧನಿ ಕಳೆದು ದಾರಿ ಕಾಣದಾಗಿಕಾಯುತಿದೆ ಸಹಯಾತ್ರಿಗಾಗಿಸಹನೆ ಕೈಜಾರಿ ಜರಿಯುವ ಜಗದಜಂಜಡಕಂಜಿ ಕಮರಿಬಿರಿಯುವ ಕಮಲ ಮಡುವಲೇ ಮುದುಡಿ. ಬಾನಾಡಿ ಹಾಡುತಲಿತ್ತುಬಾನಸವಿಸ್ತಾರದ ನಾದ ಗುನುಗಿಗಳಗಳನೆ ಸುರಿವ ಮಳೆಅಶ್ರುವದ ಮರೆಮಾಚಿ ತೋಯ್ದುದಿಟದ ಗಟ್ಟಿತನವ ಪಣಕಿಟ್ಟು ಕುಹಕವಾಡಿಗಹಗಹಿಸಿ ನಕ್ಕವರ ನೆಲಕುರುಳಿಸಿ. ಮೊಳೆತ ಜೀವ ಜಾತು ಮರೆತಿಹಸಾಮರಸ್ಯಕೆಳೆಸಲೆಂದೇಜೀವ ನಿಯಮವನೆಂದು ಮೀರಿಪೆಅಣಕಿಸಲು ಅಡಿಯಿಟ್ಟ ಕರೋನಅಹಮಿಕೆಯ ಅಜ್ಙಾನದಂಧಕಾರಅರಗಿನರಮನೆ ಬರಿಯ ಭ್ರಮೆ. ಭಾನ ಸ್ಪರುಷದ ಸುಖವತರುತೀಡ್ವ ಗಾಳಿಗಂಧಅವಳೊದ್ದ ಪಚ್ಚಹಸಿರ ಸಖವಉಲಿದು ನಲಿವ ಆ ಗಾನದಿಂಚರಕೆಕಿವಿಯಾಗಿ,ಕಣ್ಣಾಗಿ ಅವರಲ್ಲೊಂದಾಗಿಸಾಮಗಾನದ ಚೆಲುವಾಗು ಬಾ. ***********************************

ಸಾಮಗಾನ Read Post »

ಕಾವ್ಯಯಾನ

ನವರಾತ್ರಿ ಶಕ್ತಿ

ಕವಿತೆ ನವರಾತ್ರಿ ಶಕ್ತಿ ಶಾಂತಲಾ ಮಧು ಚಿತ್ರ ಕೃಪೆ- ಶಾಂತಲಾ ಮಧು ಬಿರುಕು ಬಿಟ್ಟಗೋಡೆಗಳುಶಿಥಿಲ ಗೊಂಡಕಿಟಕಿ ಬಾಗಿಲುಮಾನವೀಯ ಮನುಷ್ಯತ್ವದಅಂತಕರಣದ ಒಂದೊಂದುಕಲ್ಲುಗಳು ಪುಡಿಪುಡಿಯಾಗಿಬಟಂಬಯಲಾಗಿಬಯಲ ನಡುವೆಚೀತ್ಕಾರ ರಕ್ತ ಬಸಿಯುವಕಣ್ಣಿನಲಿ ಅದೊಂದೆೇ ಆಸೆ ದಯತೋರಿ ದಯತೋರಿರಕ್ಷಿಸೀ ಈ ರಾಕ್ಷಸರಿಂದಅಮ್ಮಗಳಿರ ಅಕ್ಕಗಳಿರನನ್ನೀ ಸಬಲ ಅಣ್ಣ ತಮ್ಮಗಳಿರರಕ್ಷಿಸೀ ಅಬಲೆಯರಬೆಟ್ಟದಷ್ಟು ಆಕಾಶ ಭೂಮಿಯಷ್ಟುಕನಸ ಕಂಡಿಹೆ ನಾನುಬಿಟ್ಟು ಬಿಡಿ ಎನ್ನ ದಮ್ಮಯ್ಯ ಪುತ್ರಿಯಾಗಿ ತಾಯಿ ತಂಗಿಸಖಿಯಾಗಿ ಪತ್ನಿಯಾಗಿಬಂಧುಬಳಗವಾಗಿದೀಪವಾಗಿಮನ ಮನೆಗಳಬೆಳಗುವೆ ನಾಹೊಸಕಿ ಹಾಕದಿರು ಎನ್ನನಿನ್ನೀ ಕ್ಷಣಿಕ ಕಾಮತೃಷೆಗೆಅಂಗಲಾಚಿ ಬೇಡುವೆನುಬಿಟ್ಟುಬಿಡು ದಮ್ಮಯ್ಯ ಮಾನಸಿಕ ರೋಗ ಎನಲೆರಾಕ್ಷಸೀ ದ್ವೇಷ ಎನಲೆತುತ್ತಿಟ್ಟ ತಾಯಿ ತಂಗಿಮರೆತ ನೀಚ ನೀ ಎನಲೆ ಕರೆದರೀ ಪುಣ್ಯಭೂಮಿಯಭಾರತಾಂಬೇ ಎಂದುಹೆಣ್ಣೆಂದು ಸ್ತ್ರೀ ಶಕ್ತಿ ನೀನೆಂದು ನಿನ್ನಮಡಿಲಲ್ಲಿ ಉಸಿರಾಡಿಹಸಿರಾಗಿ ಭಯಭಕ್ತಿ ಸೃಷ್ಟಿಸಿದಅಷ್ಟಲಕ್ಷೀಯರುಸಂಸ್ಕೃತಿ ಸಂಸ್ಕಾರದ ತಿಲಕಸ್ತ್ರೀ ಶಕ್ತಿ ಸಂಪನ್ನತೆಗೆಅರ್ಥಗರ್ಭಿತನವರಾತ್ರಿ ಆಡಂಬರ ಹೆಮ್ಮೆ ಎನಿಸಿತ್ತೆನಗೆಪೂಜ್ಯ ಶಿವನ ಸಂವೇದನೆಸತಿಗಾಗಿಸಕಾಲದಲಿ ದೌಪಧಿಯಮಾನರಕ್ಷಿಸಿದ ಶ್ರೀ ಕೃಷ್ಣಪರಮಾತ್ಮದುಷ್ಟರ ಸಂಹಾರಈ ಪುಣ್ಯ ಭೂಮಿಯಲಿವಚನ ಶ್ರೇಷ್ಟರುಅಲ್ಲಮ ಬಸವಣ್ಣಅಕ್ಕಮಾಹಾದೇವಿನಡೆದಾಡಿದಪುಣ್ಯ ಭೂಮಿ ಇದುಮರೆಯಾಯಿತೆ…?ಕಾವ್ಯ ಪುಾರಾಣಗಳುದಾಖಲೆಯ ಪುಟಗಳಾದವೆ?ಅರ್ಥ ವಿಲ್ಲದಾಯಿತೆನವರಾತ್ರಿ?ಬಿರುಕು ಬಿಟ್ಟ ಬಾಗಿಲುಶಿಥಿಲ ಗೋಡೆಗೆ ರಕ್ಷಕರಿಲ್ಲವೆ?ಪ್ರತಿ ಶೋಧವೆ,ನೇಣುಗಂಬವೆ,ಬಿಸಿಲ ಬಯಲಲಿಬತ್ತಲಾಗಿಸಿ ಕಲ್ಲು ತೂರುವುದೆಶಿಕ್ಷಿಸುವ ಮಹನೀಯನಾರು? ಕತ್ತಲು ಬೆಳಕು ತಿಕ್ಕಾಟಗಳ ನಡುವೆಅವಿತ ನ್ಯಾಯದ ಹುಡುಕಾಟಕೆಮುಷ್ಕರ ಕಲ್ಲು ತೂರಾಟಮೌನ ಮೆರವಣಿಗೆಮೊಸಳೆ ಕಣ್ಣೀರುಕಣ್ಣು ಒರೆಸುವರಾಜಿಕೀಯ ಜೂಜಾಟ ಪಾಪಿ ಮೂಲವಹುಡುಕು ಹುಡುಕಿಹೊರಹಾಕುಅನುಜ ಅಗ್ರಜನಿರಲಿಬಂಧು ಬಳಗವೆ ಇರಲಿ ಮನಸ್ಸಿನ ಅಂಧಕಾರಪರಿವರ್ತನೆ ಇಲ್ಲದೆಅಬಲೆ ನಾನಲ್ಲಸ್ರೀ ಶಕ್ತಿನಾನುನವ ಯುಗದ ನವ ಶಕ್ತಿಭಕ್ತಿ ವಿಶ್ವಾಸ ನನ್ನಲ್ಲಿನನಗೆ ನಾನವರಾತ್ರಿಶಕ್ತಿ ***************

ನವರಾತ್ರಿ ಶಕ್ತಿ Read Post »

ಕಾವ್ಯಯಾನ

ಮೌನ’ದ್ವನಿ’

ಕವಿತೆ ಮೌನ’ದ್ವನಿ’ ರೇಖಾ ಭಟ್ ರಕ್ಕಸರು ಸುತ್ತುವರೆದುಕತ್ತಲಾಗಿದೆಹೆಜ್ಜೆ ಹೊರಗಿಡಲೂ ಭಯವಿಕೃತಿಗೆ ಸಜ್ಜಾಗಿ ನಿಂತಿದೆದುಶ್ಯಾಸನನ ಸಂತತಿ ಬರೀ ಸೀರೆ ಸೆಳೆಯುವುದಿಲ್ಲ ಈಗಮೌನದೇವಿಯನಾಲಿಗೆಯೂ ಬೇಕುಮಾಂಸ ಮಜ್ಜೆಯ ಹರಿದು ತಿನ್ನುವವರಿಗೆ ಕೇವಲ ಕಾಮುಕರೆನ್ನಲಾಗದುಇವರಧರಿಸಲು ಹೇಗೆ ಬಂದಾವುಅರ್ಥಕೋಶದ ಪದಗಳುಹೇಸಿಕೊಳ್ಳುತ್ತಿವೆ ಸ್ತ್ರೀ ಅಸ್ಮಿತೆ ನರನಾಡಿಗಳುಒಳಗೊಳಗೆ ಕುದಿಯುತ್ತಿವೆರೋಷದ ಲಾವಾಗ್ನಿಚಿಮ್ಮಿದರೆದೂಷಿಸಬೇಡಿ ನೀವು ****************

ಮೌನ’ದ್ವನಿ’ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ ನನ್ನೊಳಗೊಂದು ಸಾಲಾಗಿ ಹೊಳೆದು ಹೋಗುತ್ತದೆ!ದುಃಖಕ್ಕೆದಕ್ಕಿದಷ್ಟು ಕವಿತೆಗಳುಖುಷಿಗೆ ಅರಳುವುದೇ ಇಲ್ಲ! ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಮನುಷ್ಯ ಸಂಬಂಧಗಳು!ಸಂಬಂಧಗಳ ವ್ಯತ್ಯಯಗಳು.ಶಿಥಿಲಗೊಳ್ಳುತ್ತಿರುವ ಜೀವಪ್ರೀತಿ!ಸಹಜತೆಯಾಚೆಗೆ ನಾವೆಲ್ಲ ಬೆರ್ಚಪ್ಪಗಳಾಗುತ್ತಿರುವ ಆತಂಕ! ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯವೆಲ್ಲ ಅತ್ಯಂತದಾರಿದ್ರ್ಯದಲ್ಲೇ ಕಳೆದುಹೋಯ್ತು. ಹರೆಯ ಹರೆಯಕ್ಕೂ ಮೀರಿದ ಜವಾಬ್ದಾರಿಗಳನ್ನು ಹೆಗಲಿಗೇರಿಸಿತು.ಬಹುಶಃ ಇವೆಲ್ಲ ಎಂದಾದರೂ ಗದ್ಯ,ಪದ್ಯವಾಗುವ ನಿರೀಕ್ಷೆ ನನ್ನದೂ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕಾರಣದ ಬಗ್ಗೆ ತೀರಾ ಆಸಕ್ತಿಗಳಿಲ್ಲದೇ ಹೋದರೂ ಬಿದ್ದವರ,ಸೋತವರ,ಕನಸ ಕೊಂದುಕೊಂಡವರ,ಇಲ್ಲದವರ ಬದುಕಿಗೆ ಹೊಸದೊಂದು ಬೆಳಕ ಕಾಣಿಸುವ ರಾಜಕಾರಣವೂ ಒಂದು ಕನಸೇನೋ ಅನ್ಸತ್ತೆ! ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಪ್ರೀತಿಯನ್ನ ಧರ್ಮ ಅಂತ ಭಾವಿಸುತ್ತೇನೆ! ಜೀವಪರ ನಿಲುವಿನ ಮನುಷ್ಯರೆಲ್ಲ ದೇವರ ಹಾಗೇ ಅಂದುಪ್ರತತೇನೆ !ಈಚಿನ ಈ ಪುಸ್ತಕದಲ್ಲಿ ತರತಮವಿರದೆಪರಿಮಳದ ಬೆಡಗಹರಡುವಹೂಧರ್ಮ ನನ್ನ ದಾರಿ !ಅಂತ ಬರ್ಕೊಂಡಿದ್ದೇನೆ ! ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ನಿಜವಾದ ಪ್ರತಿಭೆಗಳು ನೇಪಥ್ಯದಲ್ಲಿ ಉಳಿಯುತ್ತವನ್ನೋ ವಿಷಾದ ಇದೆ.ನೆಲದ ಸೊಗಡಿನ,ಅಪಾರ ಕನಸಿನ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಲಭ್ಯ ಆಗ್ಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಸಾಹಿತ್ಯದಲ್ಲಿ ರಾಜಕಾರಣ ಏನ್ಮಾಡುತ್ತೆ ಅಂತ ಅಂದ್ಕೋತಿದ್ದೆ!ಊಹೂಂ ,ರಾಜಕಾರಣ ಈ ಅಕ್ಷರ ಲೋಕವನ್ನು ಬಿಡದ್ದಕ್ಕೆ ಖೇದವಿದೆ! ಯಾವಾವ ಕಾರಣಗಳಿಗೋ ಏನೇನೆಲ್ಲ ಘಟಿಸಿಬಿಡುವುದನ್ನು ಕಂಡು ಅಕ್ಷರ ಅರಿವಾ? ಅಹಂಕಾರವಾ? ಅನ್ನೋ ಪ್ರಶ್ನೆಗಳೂ ಕಾಡುತ್ವೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಆತಂಕವಿದೆ! ಗಡಿಗಳೆಲ್ಲ ಗುಡಿಗಳಾಗಿ,ಎಲ್ಲ ಹೊಟ್ಟೆಗಳಿಗೂ ಅನ್ನ ಸಿಕ್ಕು, ಈ ನೆಲದ ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕುವ ದಿನಗಳು ಬಂದಾವ ಅಂತ …… ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಕನಸ್ಸಂತ ಏನಿಲ್ಲ ಸರ್,ನಾನು ಬರೆದದ್ದು ಮತ್ತಾರದೋ ಭಾವಕೋಶ ಮೀಟಿ ,ಇನ್ನಾವುದೋ ಜೀವದ ನೋವ ನೀವಿ ಹೋದರೆ ಸಾಕು!‘ಕವಿತೆ ಚರಿತ್ರೆಯನ್ನ ಬದಲಾಯಿಸ್ತದೋ ಇಲ್ವೋ ಗೊತ್ತಿಲ್ಲ,ಆದರೆ ಕವಿಯನ್ನಂತೂ ಬದಲಾಯಿಸ್ತದನ್ನೋ ಮಾತಿದೆಯಲ್ಲ’ ನನ್ನ ಕವಿತೆ ನನ್ನನ್ನು ಮತ್ತೆ ಮತ್ತೆ ಮನುಷ್ಯಳಾಗಿಸಿದರೆ ಸಾಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಆಂಗ್ಲಭಾಷೆಯ ಓದು ಇಲ್ಲ.ಕನ್ನಡ ನನ್ನ ಅಮ್ಮನೂ,ಅನ್ನವೂ ಹೌದಾಗಿರುವುದರಿಂದ ಕನ್ನಡದ ಒಂದಿಷ್ಟು ಪುಸ್ತಕ ಗಳನ್ನು ಓದಿದ್ದೇನೆ.ಆರ್ದ್ರವಾಗಿ,ಚಿಂತನಾರ್ಹವಾಗಿ ಬರೆಯಬಲ್ಲ ಯಾವುದೇ ಕವಿಯ ಎರಡು ಸಾಲೂ ನನ್ನನ್ನು ತಟ್ಟುವ ಕಾರಣ ಇವರೇ ಅಂತ ಹೇಳಲಾರೆ.ಪರಂಪರೆಯ ಜೊತೆಗೆ ಇವತ್ತಿನ ಎಷ್ಟೋ ಕವಿಗಳೂ ಕೂಡ ನನಗಿಷ್ಟ. ಈಚೆಗೆ ಓದಿದ ಕೃತಿಗಳಾವವು? ಶಾಲಾ ಶಿಕ್ಷಕಿಯೂ ಆಗಿರುವ ಕಾರಣ ನಿರಾಳ ಓದಿಗೆ ಬಿಡುವಾಗದು.ಈ ದುರಿತ ಕಾಲದಲ್ಲಿ ಆತ್ಮೀಯರು ಕಳಿಸಿದ ಒಂದಷ್ಟು ಗದ್ಯ ಪದ್ಯ…ಆಗಾಗ ಬ್ರೆಕ್ಟ್,ಗಿಬ್ರಾನ್.ಹೀಗೆ ನಿಮಗೆ ಇಷ್ಟವಾದ ಕೆಲಸ ಯಾವುದು? ಟೀಚರ್ ಕೆಲ್ಸ!ಅದರ ಜೊತೆಗೆ ಕನ್ನಡವನ್ನು ಮುದ್ದಾಗಿ ಬರೆಯುವ ಪ್ರಯತ್ನ.ಹದಿನಾರು ವರ್ಷಗಳಿಂದ ಖ್ಯಾತ ಲೇಖಕಿ ಅಮ್ಮ ಡಾ.ಬಿ.ಸಿ ಶೈಲಾನಾಗರಾಜ್ ರವರ ಜೊತೆಗೆ , ಶೈನಾ ಅನ್ನುವ ಕೈ ಬರಹದ ಪತ್ರಿಕೆಯ ಕೈ ಬರಹ ನನ್ನ ಕೈಗಳದೇ!ಈ ಪತ್ರಿಕೆಯೇ ನಾಡಿಗೆ ನನ್ನನ್ನು ಪರಿಚಯಿಸಿದ್ದು.ಕವಿತೆ ಬರಿತೀನಿ ಅನ್ನೋದ್ಕಿಂತ ಕೈ ಬರಹ ಅನ್ನೊ ಮೂಲಕವೇ ಪ್ರೀತಿ ಗಳಿಸಿದ ಅದೃಷ್ಟ! ನಿಮಗೆ ಇಷ್ಟವಾದ ಸ್ಥಳ ಯಾವುದು ? ಸ್ಥಳ ನನ್ನೂರೇ ಸರ್! ಈ ಬೆಟ್ಟ,ಬಯಲು,ಏನೂ ಇರದ ದಿನಗಳಲ್ಲಿ ನಮ್ಮನ್ನು ಪೊರೆದ ಊರಿನ ‘ಮನುಷ್ಯರು’ !!ಆದರೂ ಮುರ್ಡೇಶ್ವರ ಹೆಚ್ಚು ನೆನಪಾಗುವ ಜಾಗ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಅಬ್ಬರ ಇಲ್ಲದ,ಅತಿ ಅನ್ನಿಸದ,ನೋಡುತ್ತಲೇ ಭಾವುಕಳಾಗಿಸಿಬಿಡಬಹುದಾದ ,ಒಳಗಿಳಿಯುವ ಒಂದೇ ಸಾಲನ್ನಾದರೂ ಹಾಡಾಗಿಸಿಕೊಂಡ ಯಾವುದೇ ಸಿನೆಮಾ ಆಗ್ಬಹುದು ಸರ್. ನೀವು ಮರೆಯಲಾರದ‌ ಘಟನೆ‌ ಯಾವುದು? ಹತ್ತಿರದವರ ಸಾವು ನೋವುಗಳು.ವಿವರಿಸೋದು ಕಷ್ಟ ಸರ್. ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ…. ಅಣ್ಣನಂತಹ,ಗೆಳೆಯರಂತಹ ವೀರಲಿಂಗನ ಗೌಡರ ಅಕ್ಕರೆ ದೊಡ್ಡದು.ನಿಮ್ಮ ಜತೆಗಿನ ಇಷ್ಟು ಮಾತಿಗೆ ಅವರೇ ಕಾರಣರು.ಅವರ ಮಮಕಾರಕ್ಕೆ ನಿಮ್ಮ ಸಹೃದಯತೆಗೆ ವಂದನೆಗಳು ಸರ್‌.ಉಳಿದಂತೆ ‘ ನೋವೂ ಒಂದು ಹೃದ್ಯ ಕಾವ್ಯ’ ನನ್ನ ಇತ್ತೀಚಿನ ಪುಸ್ತಕ.ನಾಲ್ಕು ಸಾಲುಗಳ ಕವಿತೆಗಳು..ಕವಿತೆಗಳಂತಹ ಚಿತ್ರಗಳೂ ….ಪುಸ್ತಕ ದ ಪ್ರತಿ ಅಕ್ಷರವೂ ಕೈ ಬರಹದ್ದೇ ಅನ್ನುವುದು ವಿಶೇಷ. -************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಕಾವ್ಯಯಾನ

ಬೀಜಕ್ಕೊಂದು ಮಾತು

ಕವಿತೆ ಬೀಜಕ್ಕೊಂದು ಮಾತು ರಜಿಯಾ ಬಳಬಟ್ಟಿ ಎಲೆ ಬೀಜವೇನೀ ಹೆಣ್ಣೋ ಗಂಡೋ ಹೀಗೇಕೆ ಕೇಳುವಳೀ ಅಮ್ಮಎಂದು ಆಶ್ಚರ್ಯ ವೇನು ಕಂದಾ , ಹೌದು ಕೇಳುವ ಸ್ಧಿತಿ ಈಗ. ಒಂದು ಕಾಲವಿತ್ತುಸುತ್ತೆಲ್ಲ ಗುಲಾಬಿ ತೋಟನಡುವೆ ಕೆಂಗುಲಾಬಿನನ್ನ ಮಗಳೆಂದುಖುಷಿ ಪಡುವದು. ಈಗಿಲ್ಲವಮ್ಮ. ಗುಲಾಬಿಯ ತೋಟದಲ್ಲೆಲ್ಲಹೊಂಚು ಹಾಕಿದ ಕಾಮದ ಕಂಗಳುಕ್ಷಣ ಕ್ಷಣವೂ ಅಭದ್ರತೆಕೀಚಕ – ದುಶ್ಯಾಸನರವಂಶಾವಳಿಯಲ್ಲಿಅದೆಂತು ರಕ್ಷಿಸಲಿ ಮಗಳೆ,ಭೀತಿಯ ಬಾಹುಗಳಲಿನನ್ನನ್ನೇ ನಾ ಉಳಿಸಿಕೊಂಡುಗೂಡು ಸೇರುವದೇದುಸ್ಸಾಹಸವಾಗಿರುವಾಗ,ನೀ ಮೊಳಕೆಯೊಡೆಯಬೇಡತಿಳಿ, ಈ ಅಸಹಾಯಕತೆಯ. ಅಪ್ಪಾ ಮಗಾ ರಾಜಕುಮಾರಾವಂಶಕ್ಕೆ ಹೆಸರು ತಂದುದೃಷ್ಟಿ ತುಂಬ ಸಹಾಯ ಭಾವದಿಆದರ್ಶದಿ ಬದುಕುವದಿದ್ದರೆ ಬಾ.ಇಲ್ಲದಿರೆ ಚಿಗುರೊಡೆಯಬೇಡ.ಬಂಜೆ ಎಂದು ಸಹಿಸಬಹುದು.ಆ ಕಾಮುಕನ,ಪಾಪಿಯ ತಾಯಿಇವಳೆಂದು ಜನ ದಿಟ್ಟಿಸಿದಾಗ,ಆ ಕೆಂಗಣ್ಣಿನಲ್ಲಿಯೇ ನಾಕರಕಾಗುವೆ ಕಂದಾತಿಳಿ ನೀ ಜವಾಬ್ದಾರಿಯ. *************************************** ರಜಿಯಾ ಬಳಬಟ್ಟಿ

ಬೀಜಕ್ಕೊಂದು ಮಾತು Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ ನಿರ್ಧರಿಸಲ್ಪಡುತ್ತವೆ. ನನ್ನ ಜೊತೆಗೆ ಇದ್ದ ಗೆಳೆಯರು ಇದೇ ವಿಷಯದಲ್ಲಿ ಮಾಡಿದ ಸೂಕ್ತ ತ್ವರಿತ ನಿರ್ಧಾರಗಳು ಅವರ ಬದುಕನ್ನು ಉನ್ನತ ಸ್ಥಿತಿಗೆ ಏರಿಸಿದವು.ನಿರ್ಧಾರವೆಂದರೆ. . . . . .?‘ಮೂಲತಃ ನಿರ್ಧಾರವೆಂದರೆ ಲಭ್ಯವಿರುವ ಆಯ್ಕೆಗಳಲ್ಲಿ ಸರಿಯೆನಿಸಿದ ಒಂದನ್ನು ಆರಿಸಿಕೊಳ್ಳುವುದು.’ ‘ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ.’ನಾವು ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಕಟ್ಟುತ್ತವೆ ಇಲ್ಲವೇ ಕೆಡುವುತ್ತವೆ. ನಿರ್ಧಾರಗಳಿಗೆ ಬಹಳಷ್ಟು ಸಮಯ ಕಳೆಯುತ್ತೇವೆ. ಮುಂಜಾನೆ ಎಷ್ಟು ಗಂಟೆಗೆ ಏಳೋದು? ಮಧ್ಯಾಹ್ನ ಊಟಕ್ಕೇನು? ಇಂದು ಯಾವ ಯಾವ ಕೆಲಸ ಮಾಡುವುದು? ಯಾರನ್ನು ಭೇಟಿಯಾಗುವುದು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ನಿರ್ಧಾರ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಇಲ್ಲವೇ ಜೀವನದ ಮಹತ್ವದ ನಿರ್ಧಾರದಲ್ಲಂತೂ ಇದರ ಪಾತ್ರ ಬದುಕನ್ನೇ ಅಲ್ಲಾಡಿಸಿ ಬಿಡುತ್ತದೆ. ತ್ವರಿತ ನಿರ್ಧಾರದಿಂದ ಸಾಕಷ್ಟು ಸಮಯ ಉಳಿಸಬಹುದು.ಕಠಿಣ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಮರ್ಪಕ ಗುರಿ ಹೊಂದಿರುವುದು ಮುಖ್ಯ.ಬಿಲಿಯನ್ ಡಾಲರ್ ಪ್ರಶ್ನೆನಿರ್ಧಾರಗಳೇ ಹಾಗೆ ಕೇವಲ ಕೆಲವು ಕ್ಷಣಗಳಲ್ಲಿ ಬದುಕನ್ನು ವಿಚಿತ್ರ ತಿರುವಿನಲ್ಲಿ ತಂದು ನಿಲ್ಲಿಸಿ ಬಿಡುತ್ತವೆ. ಪ್ರತಿ ಬಾರಿ ನಿರ್ಧರಿಸುವಾಗ ತುಂಬಾ ಅವಸರಿಸಿದರೂ ಕಷ್ಟ ವಿಳಂಬವಾದರೂ ಕಷ್ಟ. ಇದೊಂದು ತರಹ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಅನುಭವ ಉಗುಳಲೂ ಆಗದು. ನುಂಗಲೂ ಆಗದು. ಎನ್ನುವುದು ಹಲವರ ಅಂಬೋಣ.ಕೆಲವರ ಸಲಹೆ ಪ್ರಕಾರ ಮುಗ್ಗರಿಸಿದರಂತೂ ಅವರನ್ನು ಇನ್ನಿಲ್ಲದಂತೆ ಹಾಡಿ ಹರಸುತ್ತೇವೆ. ಸಲಹೆ ನೀಡುವವರು ಸಾರ್ವತ್ರಿಕವಾಗಿ ಯೋಚಿಸಿ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಬದುಕಿನ ಬಗ್ಗೆ ನಮಗಿಂತ ಚೆನ್ನಾಗಿ ಬೇರೆಯವರಿಗೆ ಹೆಚ್ಚು ತಿಳಿದಿರುವುದಿಲ್ಲ. ನಮಗೆ ಚೆನ್ನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆಂದ ಮೇಲೆ ಅನುಭವಿಗಳ ತಿಳಿದವರನ್ನು ಅವಲಂಬಿಸುವುದು ಸಾಮಾನ್ಯ. ಆದರೆ ಆ ನಿರ್ಧಾರ ಯಾವಾಗಲೂ ಒಳ್ಳೆಯ ಫಲಿತಗಳನ್ನು ಕೊಡುತ್ತದೆ ಎನ್ನುವುದು ಲಾಟರಿ ಫಲಿತಾಂಶ ಇದ್ದಂತೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಮೇಲೆ ಅವಲಂಬಿಸುವುದು ಎಂದರೆ, ‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ.’ ಹೀಗಿದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತದೆ ಅಲ್ಲವೇ? ಹಾಗಾದರೆ ಮುಂದಕ್ಕೆ ಓದಿ.ನನ್ನ ನಿರ್ಧಾರ ನನ್ನದುಪ್ರತಿಯೊಂದರಲ್ಲೂ ಪರಿಶ್ರಮ ಪಡುವ ಮನೋಭಾವವಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಿ ಬಿಡುತ್ತೇವೆ ಎನ್ನುವುದು ಸುಳ್ಳು. ಧೈರ್ಯದ ತ್ವರಿತ ನಿರ್ಧಾರ ತೊಟ್ಟು ಚೈತನ್ಯದೊಂದಿಗೆ ಮುಂದುವರೆದರೆ ಮಾತ್ರ ಬದುಕಿನಲ್ಲಿ ಸುಧಾರಣೆ ತಂದುಕೊಳ್ಳಬಹುದು. ಚಾಣಕ್ಯ ನೀತಿಯಲ್ಲಿ ಹೇಳಿದಂತೆ “ಕೋಳಿಯಿಂದ ನಾಲ್ಕು ಪಾಠ ಕಲಿಯಬಹುದು. ಬೇಗ ಏಳುವುದು, ಆತ್ಮ ರಕ್ಷಣೆಗೆ ಹಾಗೂ ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು.ತನ್ನ ಸುತ್ತಲಿನವರಿಗೆ ಉದಾರವಾಗಿ ಹಂಚುವುದು. ತನ್ನ ಅವಶ್ಯಕತೆಗಳಿಗೆ ತಾನೇ ಸಂಪಾದಿಸುವುದು.” ಕೋಳಿ ಹೇಗೆ ತನ್ನ ಅಗತ್ಯತೆಗೆ ತಾನೇ ಸ್ಪಂದಿಸುವುದೋ ಹಾಗೆ ನಾವೂ ನಮ್ಮ ನಿರ್ಧಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು.ಗ್ರೀಕ್ ನಾಣ್ಣುಡಿಯಂತೆ “ಬಲ್ಲಿದವನಿಗಿಂತ ತಿಳಿದವನು ಮೇಲು.” ಇತರರು ನಮ್ಮನ್ನು ಬಲ್ಲರು ಆದರೆ ಚೆನ್ನಾಗಿ ತಿಳಿಯಲಾರರು. ಆದ್ದರಿಂದ ನಮ್ಮ ಬಗ್ಗೆ ನಾವೇ ಅರಿತು ನಿರ್ಧರಿಸುವುದು ಮೇಲು.ಪ್ರಮಾಣ ನಿರ್ಧರಿಸಿಸುಮ್ಮನೆ ಯೋಚಿಸಿದರೆ ಪ್ರತಿ ದಿನದ ಬದುಕಿನಲ್ಲಿ ಜೀವಿಸುತ್ತಿರುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಬದಲಿಸುವ ತಾಕತ್ತು ಹೊಂದಿವೆ. ಮಾಡುವ ಆಯ್ಕೆಯಲ್ಲಿ ತುಸು ತಡವಾದರೂ ಬಹಳಷ್ಟು ತೊಂದರೆ ಅನುಭವಿಸುವ ತೊಂದರೆ ತಪ್ಪಿದ್ದಲ್ಲ. ಪ್ರತಿ ಸಲ ಪ್ರತಿ ವಿಷಯದಲ್ಲೂ ವಿಳಂಬ ನಿರ್ಧಾರವನ್ನು ರೂಢಿಸಿಕೊಂಡರೆ ಮುಗಿದೇ ಹೋಯಿತು.ಬಂಗಾರದಂಥ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಜೀವನ ಪರ್ಯಂತ ಅದನ್ನೇ ನೆನೆ ನೆನೆದು ಕೊರಗ ಬೇಕಾಗುತ್ತದೆ.ಅವರಿವರ ಮುಂದೆ ಅದನ್ನೇ ತೋಡಿಕೊಳ್ಳುತ್ತ ಕೂರಬೇಕಾಗುತ್ತದೆ. ಹಾಗಾದರೆ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಒಂದು ಕೌಶಲ್ಯ ಅಲ್ಲವೇ? ಸರಿ, ಏನಾದರೂ ಆಗಲಿ ಅಂತ ಅವಸರದಲ್ಲಿ ಏನಾದರೂ ನಿರ್ಧಾರ ಕೈಗೊಂಡರೆ ಅದನ್ನೂ ಅನುಭವಿಸಲೇಬೇಕು. ನಿರ್ಧಾರಗಳನ್ನು ಸಣ್ಣ ಮಧ್ಯ ಮತ್ತು ದೊಡ್ಡ ಎನ್ನುವ ವರ್ಗಕ್ಕೆ ಸೇರಿಸಬೇಕು.ಇದು ನಿರ್ಧಾರದ ಪ್ರಾಮುಖ್ಯತೆಯನ್ನು ಬೇರ್ಪಡಿಸುವುದು. ಸೂಕ್ತ ಸಮಯ ಹಾಗೂ ಶ್ರಮವನ್ನು ಹಾಕಲು ಅನುವು ಮಾಡಿಕೊಡುವುದು.ಇರಲಿ ಸಮಯ ಮಿತಿಸ್ವಯಂ ಸಮಯ ಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು.ಯಾವುದೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಟೈಮರ್‍ನ್ನು ಹೊಂದಿಸಿ ಮತ್ತು ನಿರ್ಧಾರದ ಪ್ರಕ್ರಿಯೆ ಪ್ರಾರಂಭಿಸಿ. 10,10,10 ವಿಧಾನ ಬಳಸಿ ಅಂದರೆ ತೆಗೆದುಕೊಂಡ ನಿರ್ಧಾರ 10 ನಿಮಿಷ, 10 ತಿಂಗಳು 10 ವರ್ಷಗಳ ನಂತರ ಖುಷಿ ನೀಡುವುದು ಎನ್ನುವುದನ್ನು ತಿಳಿದುಕೊಂಡರೆ ಸಾಕು. ತ್ವರಿತ ಉತ್ತಮ ನಿರ್ಧಾರ ಸಾಧ್ಯ. ನಿರ್ಣಯ ತೆಗೆದುಕೊಳ್ಳಬೇಕಾದ ಸಮಸ್ಯೆಯನ್ನು ಬರೆದು ಸಂಭವನೀಯ ನಿರ್ಣಯಗಳನ್ನು ಲಾಭದಾಯಕ ಅಂಶಗಳನ್ನು ವಿಶ್ಲೇಷಿಸುವುದು ಅತ್ಯಂತ ಉತ್ತಮ ವಿಧಾನ. ನಿರ್ಣಯದ ತುದಿಯನ್ನು ಸರಳವಾಗಿ ತಲುಪಲು ಸಹಾಯ ಮಾಡುತ್ತದೆ. ‘ಸಮಯ ಮಿತಿಯು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಾಗ ನಾವು ನಿರ್ಧಾರದಲ್ಲಿ ಹೆಚ್ಚಿನ ಶ್ರಮವನ್ನು ಹೂಡುತ್ತೇವೆ.’ ಎಂದು ಒಂದು ಅಧ್ಯಯನ ತಂಡ ಹೇಳಿದೆ. ಅಷ್ಟೇ ಅಲ್ಲ ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ಇದು ಗಡುವಿನ ಶಕ್ತಿ ಅಲ್ಲದೇ ಮತ್ತೇನೂ ಅಲ್ಲ. ದೊಡ್ಡ ಅಥವಾ ಮಹತ್ವದ ನಿರ್ಧಾರಗಳಿಗೆ ಹೆಚ್ಚಿನ ಗಡುವನ್ನು ಅನ್ವಯಿಸಿ.ಒಳ್ಳೆಯದು ಮತ್ತು ಕೆಟ್ಟದ್ದೆಂದು ಯೋಚಿಸಿಹೆಚ್ಚಿನ ವಿಶ್ಲೇಷಣೆಯು ಹೆಚ್ಚಿನ ಆಯ್ಕೆಗಳಿದ್ದಲ್ಲಿ ನಿರ್ಧರಿಸುವುದನ್ನು ಇನ್ನೂ ಹೆಚ್ಚು ನೆನಗುದಿಗೆ ಬೀಳುವಂತೆ ಮಾಡುತ್ತದೆ. ನಿರ್ಧಾರ ತೆಗೆದುಕೊಂಡಾದ ಮೇಲೆಯೂ ಫಲಿತಾಂಶದ ಕುರಿತಾಗಿ ಯೋಚಿಸುವುದು ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ನಿರ್ಧಾರ ಮುಳಗಿಸಬಹುದು ಇಲ್ಲವೇ ತೇಲಿಸಬಹುದು. ವಿಶ್ಲೇಷಣೆ ಸಕಾರಾತ್ಮಕವಾಗಿರಲಿ. ಕೆಲವೊಮ್ಮೆ ಆಪ್ತರೊಂದಿಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತವೆನಿಸುವುದು. ನಿರ್ಧರಿಸುವಾಗ ಆಯ್ಕೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಭಜಿಸುವುದು ಸೂಕ್ತ. ಇದೊಂದು ತರಹ ಬೆಳೆಯಲ್ಲಿನ ಕಳೆ ತೆಗೆಯುವ ಪ್ರಕ್ರಿಯೆಯಂತೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಕಾಲಮ್ ಮಾಡಿಕೊಂಡು ಆಯ್ಕೆಗಳನ್ನು ವಿಭಜಿಸಿ ಈ ಕೌಶಲ್ಯ ನಿರ್ಧರಿಸುವಿಕೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿರ್ಣಯಿಸುವ ವಿಷಯದ ಕುರಿತು ಯೋಚಿಸುವುದು ಸೂಕ್ತ ಇದರಿಂದ ಸರಿಯಾಗಿ ಮೌಲ್ಯಮಾಪನ ಮಾಡಬಹದುದು. ಆದರೆ ಅತಿಯಾಗಿ ಯೋಚಿಸುವುದು ಸಮಸ್ಯೆಯಾಗುತ್ತದೆ.ಕಾಗದದಲ್ಲಿ ಬರೆಯಿರಿಎಲ್ಲ ಆಯ್ಕೆಗಳು ಹೆಚ್ಚು ಕಡಿಮೆ ಸರಿ ಸಮಾನ ಮೌಲ್ಯವನ್ನು ಹೊಂದಿವೆ ಎಂದು ತೋರುತ್ತಿದ್ದರೆ ಉತ್ತಮವೆನಿಸಿದವುಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ನಂತರ ಯಾದೃಚ್ಛಿಕವಾಗಿ ಒಂದನ್ನು ಆರಿಸಿ ನಿರ್ಧರಿಸಬಹುದು. ನಿರ್ಧಾರಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಇದು ದೊಡ್ಡ ನಿರ್ಧಾರಗಳಿಗೆ ಸೂಕ್ತವಲ್ಲ. ಸಣ್ಣ ಪುಟ್ಟ ನಿರ್ಧಾರಗಳಿಗೆ ಇದು ಹೇಳಿ ಮಾಡಿಸಿದ ಕೌಶಲ್ಯದಂತೆ ಕಾರ್ಯ ನಿರ್ವಹಿಸುತ್ತದೆ.ಈ ಕ್ಷಣದಲ್ಲಿ ಜೀವಿಸಿನಿರ್ಧರಿಸುವಿಕೆ ಮಾನಸಿಕವಾಗಿ ನಮ್ಮನ್ನು ಗೊಂದಲಕ್ಕೆ ಬೀಳಿಸುತ್ತದೆ. ಪ್ರತಿ ಹೆಜ್ಜೆಯ ಫಲಿತಾಂಶವನ್ನು ನೋಡಲು ಇಚ್ಛಿಸುತ್ತೇವೆ ಹೀಗಾಗಿ ಕೈಯಲ್ಲಿರುವ ಸಮಯ ಸೋರಿ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸರಳವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅತಿಯಾಗಿ ಯೋಚಿಸಿ ಸಮಯ ವ್ಯರ್ಥ ಮಾಡದಂತೆ ನಿಮ್ಮಷ್ಟಕ್ಕೆ ನೀವು ವೀಕ್ಷಕರಾಗಿ ಕಾರ್ಯ ನಿರ್ವಹಿಸಿ.ಕೆಲಸದಲ್ಲಿ ಉತ್ಪಾದಕತೆಯನ್ನು ಬಾನೆತ್ತರಕ್ಕೆ ಏರಿಸಿ ನಿರ್ಧಾರದಲ್ಲಿ ತೀವ್ರಗೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕೆಂದರೆ ವರ್ತಮಾನದತ್ತ ಹೆಚ್ಚು ಗಮನ ನೀಡಬೇಕು. ನಿರ್ಧರಿಸುವಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡು ಕಾರ್ಯಾನುಷ್ಟಾನಕ್ಕೆ ಸಮಯ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ದುಡುಕಿನ ನಿರ್ಧಾರ ಹಾಳುಗೆಡುವುದೇ ಹೆಚ್ಚು. ಈ ಕ್ಷಣದಲ್ಲಿ ಜೀವಿಸಿ ನಿರ್ಣಯಿಸಿ.ವೈಫಲ್ಯವನ್ನು ಸ್ವೀಕರಿಸಿತ್ವರಿತ ನಿರ್ಧಾರ ಸದಾ ಕಾಲ ಉತ್ತಮವಾಗಿಯೇ ಫಲ ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಬಿರುಗಾಳಿಯಂತೆ ಸಮಸ್ಯೆಗಳನ್ನು ತಂದು ಚೆಲ್ಲಬಹುದು. ತಪ್ಪು ನಿರ್ಧಾರಗಳು ವೈಫಲ್ಯದ ಉಡುಗೊರೆಯನ್ನು ನೀಡಬಹುದು ಆದ್ದರಿಂದ ವೈಫಲ್ಯವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದುವುದು ಒಳಿತು. ವೈಫಲ್ಯ ಜೀವನದ ಅವಿಭಾಜ್ಯ ಅಂಗ ಅದರಿಂದ ಬಹಳಷ್ಟನ್ನು ಕಲಿಯುತ್ತೇವೆ ಎನ್ನುವುದೂ ನಿಜ.ಸೋಲು ನಮ್ಮ ಹಿನ್ನೆಡೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು.ಕೊನೆ ಹನಿಜೀವನ ಆಯ್ಕೆಗಳ ಸರಮಾಲೆ. ಬೇಕಾದುದನ್ನು ಆರಿಸಿಕೊಳ್ಳುವುದೇ ನಿರ್ಧಾರ. ಎಲ್ಲ ಪರಿಸ್ಥಿತಿಗಳಲ್ಲಿ ನೂರಕ್ಕೆ ನೂರರಷ್ಟು ತ್ವರಿತ ಉತ್ತಮ ನಿರ್ಧಾರ ತೆಗೆದುಕೊಳ್ಳುವಷ್ಟು ಪರಿಪೂರ್ಣರು ಯಾರೂ ಇಲ್ಲ. ಇಲ್ಲಿ ಪರಿಪೂರ್ಣತೆ ಮುಖ್ಯವಲ್ಲ. ಶೀಘ್ರ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮುಖ್ಯ. ತ್ವರಿತ ಉತ್ತಮ ನಿರ್ಧಾರ ನಮ್ಮನ್ನು ವೃತ್ತದೊಳಗೆ ಮತ್ತು ಹೊರಗೆ ಗೆಲುವಿನತ್ತ ಕರೆದೊಯ್ಯಲು ಸಹಕಾರಿ. ನಡೆಯುವ ದಾರಿಯಲ್ಲಿ ನಿರ್ಣಯದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಾಗಂತ ಅಸಾಧ್ಯವುದುದೂ ಅಲ್ಲ. ಬದುಕಿನ ಕೆಲ ಚಿಕ್ಕ ತ್ವರಿತ ಉತ್ತಮ ನಿರ್ಣಯಗಳು ಕೆಲವೊಮ್ಮೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಂತರಂಗವು ಹೇಳಿದಂತೆ ಭಾವನೆಗಳಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯಗಳು ಖಂಡಿತ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಸುತ್ತವೆ ಮತ್ತು ದೊಡ್ಡ ನಗು ಚೆಲ್ಲುವಂತೆ ಮಾಡುತ್ತವೆ. ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

You cannot copy content of this page

Scroll to Top