ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ ಗೋಡೆಯ ಮೇಲೆಬರೀ ಶಾಂತತೆಯ ಚಿತ್ರ ಮೂಡುವುದಿಲ್ಲಬೆಳಕನು ನುಂಗುವ ಕತ್ತಲೆಗೆ ಕೈ ಇರುವಂತೆಸಿಕ್ಕಲುಗಳೂ ಮಾತಾಡುತ್ತವೆನೋಡಲು ಮಾತ್ರ ಮೌನಅದು ಎಂದಿಗೂಚಾಟಿಯಿಲ್ಲದ ಬುಗುರಿ. ***********************

ಮೌನ ಬೆಳದಿಂಗಳಂತೆ ನಗುತ್ತದೆ… Read Post »

ಕಾವ್ಯಯಾನ

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಅದೆ ಕೂಗು Read Post »

ಕಥಾಗುಚ್ಛ

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ ನನಗೆ ನೀರಾಳ ತುಂಬಾ ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವಳು. ಅವಳು ಬಂದಾಗಿನಿಂದ ನನ್ನ ಅಡುಗೆ ಕೆಲಸ ನಿಂತುಬಿಟ್ಟಿದೆ. 4-5 ವರ್ಷವಾಯಿತು, ಅವಳುಬಂದು, ಲಘುಬಗೆಯಿಂದಲೆ ಪಟ್‍ಪಟ್ ಅಡುಗೆ ಮಾಡಿ ಹೋಗುವಳು. ಮೊದಲಾದರೆ (ಅವಳು ಬರುವ ಮುಂಚೆ) ಆಗ ಅಡುಗೆಯವರನ್ನು ನೇಮಿಸಿದ್ದಿಲ್ಲ. ನಾನೇ ಮಾಡಿಕೊಂಡು ಹೋಗುತಿದ್ದೆ. ಮೇಲಿನ ಕೆಲಸಕ್ಕೆ ಹಚ್ಚಿದರೂ ಅಡುಗೆ ಮಾಡಿ ಮಗನಿಗೆ ಉಣ ಸಿ ಬಾಕ್ಸ್ ಕಟ್ಟುವಷ್ಟರಲ್ಲೇ ಅವರು ಹೋಗುವುದಕ್ಕೆ ರೆಡಿ ಆಗಿರುತ್ತಿದ್ದರು. ಅವರಿಗೂ ಊಟಕ್ಕೆ ಕೊಟ್ಟು ಮುಂದೆ ನಾನು ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳಬೇಕಿತ್ತು. ನಾನು ತಾಲೂಕು ಪ್ಲೇಸಿನಿಂದ 10 ಕಿ.ಮೀ ದೂರದಲ್ಲಿರುವ ಮಲ್ಲಾಪುರ ಮುಟ್ಟಲು ಮನೆಯನ್ನು 8.30 ರಿಂದ 9.00ಗಂಟೆ ಒಳಗೆ ಬಿಡಬೇಕಿತ್ತು. ಹೈಸ್ಕೂಲ್ ಶಿಕ್ಷಕಿಯಾಗಿ ಕೈ ತುಂಬ ಸಂಬಳ ಬರುತ್ತಾದರೂ ಚೆನ್ನಾಗಿ ಕುಳಿತು ಉಣ್ಣದಿದ್ದರೆ ಎಷ್ಟು ದುಡಿದರೂ ಏನು ಪ್ರಯೋಜನ ಎನ್ನಿಸಿಬಿಟ್ಟಿತು.ನಾವು ದುಡಿಯುವುದೇ ಉಂಡು, ತಿಂದು ಚೆನ್ನಾಗಿರಲು ಅದೇ ಇಲ್ಲದಿದ್ದರೆ ಹೇಗೆ ಎನಿಸಿಬಿಟ್ಟಿತು. ಯಾಕೆಂದರೆ ಬೆಳಿಗ್ಗೆ ಎಂದಾಕ್ಷಣದಿಂದಲೇ ಅಡುಗೆ ಮನೆ ಸೇರುವುದು ಲಘುಬಗೆಯಿಂದ ಅಡುಗೆ ಮಾಡಿ ಎಲ್ಲರಿಗೂ ಉಣ್ಣಲು ಕೊಟ್ಟು, ಬಾಕ್ಸ್ ಕಟ್ಟುವುದರಲ್ಲೆ ನನಗೆ ಉಣ್ಣಲು ಪುರುಸೊತ್ತಿರಲಿಲ್ಲ. ಗಂಟಿಲಕ್ಕತ್ತುವಂತೆ 4-5 ತುತ್ತು ಉಂಡು, ನೀರು ಕುಡಿದು ಮುಗಿಸುತ್ತಿದ್ದೆ. ಒಮ್ಮೊಮ್ಮೆ ಮಾಡಿದ ಅಡುಗೆ ಕಡಿಮೆ ಬಿದ್ದು ಮತ್ತೆ ಪೇಚಾಟ. ಅವಗೇನು ಹುರುಪು, ವಯಸ್ಸು ಹುಮ್ಮಸು ಸೇರಿ ಬೇಗ ಎದ್ದು ಮಾಡುತ್ತಿದ್ದೆ. ಈಗೀನ 40 ವರ್ಷ ದಾಟಿದ ಮೇಲೆ ದೇಹದಲ್ಲೆ ನೂರೆಂಟು ಬದಲಾವಣೆ ತಲೆ ಸುತ್ತುವುದು, ಅಲ್ಲಿ ನೋವು, ಇಲ್ಲಿ ನೋವು, ಮುಟ್ಟಿನ ಸಮಸ್ಯೆ ಒಂದೊಂದೆ ಕಾಣ ಸಿಕೊಳ್ಳಲಾರಂಭಿಸಿದವು.ಸಾಕಪ್ಪ ಈ ಒದ್ದಾಟ. ಇಷ್ಟು ದಿನ ಕಷ್ಟಪಟ್ಟದ್ದು ಸಾಕು ನಾವು ದುಡಿಯುವುದಾದರೂ ಏತಕ್ಕೆ ಸುಖಕ್ಕೆ (ಬಯಸಿ) ಹಂಬಲಿಸಿ ದುಡಿಯುತ್ತೇವೆ. ಮತ್ತೆ ಕಷ್ಟ ಪಡುತ್ತೇವೆ. ಬರೀ ಗಳಿಕೆ ಯೋಚನೆ ಗಳಿಸಿಯಾದರೂ ಏನು ಮಾಡಬೇಕು ಮಕ್ಕಳಿಗೆ ಏನು ಬೇಕೂ, ಎಷ್ಟೂ ಬೇಕೂ ಅಷ್ಟು ಮಾಡಿದ್ದಾಗಿದೆ. ಅವರು ಸ್ವಾವಲಂಬಿಗಳಾಗಲಿ. ಎಲ್ಲಾ ನಾವೇ ಮಾಡಬೇಕೆಂದರೆ ಹೇಗೆ? ಈಗಿನ ಮಕ್ಕಳಿಗೂ ನಮ್ಮ ಕಾಲದ ಕಕ್ಕುಲಾತಿ ಕಾಳಜಿ ಕಡಿಮೆ. ನಾವು ಇಷ್ಟು ಮಾಡಿದ್ದರು ಅವರು ನಮ್ಮನ್ನು ನಾವು ಸಾಯುವರೆಗೂ ಚೆನ್ನಾಗಿ ನೋಡಿಕೊಳ್ತಾರೆಂಬ ನಂಬಿಕೆ ಇಲ್ಲ. ಸುಮ್ಮನೆ ನಮ್ಮ ಕರ್ತವ್ಯ ನಾವು ಮಾಡಿದ್ದೇವೆಂದು ಸ್ಥೀತಪ್ರಜ್ಞರಾಗಿರಬೇಕೆನಿಸಿತು. ಅದಕ್ಕಾಗಿ ಅಡುಗೆಯಾಕೆಯನ್ನು ನೇಮಿಸಿದೆ.ನಮ್ಮ ಮನೆಯವರೂ ತಾವಾಯಿತು. ತಮ್ಮ ಡ್ಯುಟಿಯಾಯಿತು. ತಮಗೆ ಹೊತ್ತಿಹೊತ್ತಿಗೆ ಸರಿಯಾಗಿ ಊಟೋಪಚಾರವಾದರೆ ಸಾಕು. ಹಾಗಂತ ನಾನು ಕಷ್ಟ ಪಡಲು ಅವರೇನು ಹೇಳಿರಲಿಲ್ಲ. “ನಿನಗೆ ಹೇಗೆ ಬೇಕೂ ಹಾಗೆ ಮಾಡು” ಎಂದು ಸ್ಥಿತಪ್ರಜ್ಞರಂತೆ ಇದ್ದುಬಿಡುವರು ಅದರಂತೆ ನನಗಿರಲು ಬರುವುದಿಲ್ಲ ನನ್ನ ಗುಣ ಸ್ವಭಾವ ನನಗೆ.ಹಾಗೇ ಬಂದವಳೆ ಅಕ್ಕಮ್ಮ. ಅಕ್ಕಮ್ಮನೇನು ಸೀದಾ ಅಡುಗೆ ಮನೆಗೆ ಹೋಗಿ ನಾನು ಹೇಳಿದ ತಿಂಡಿ, ಅಡುಗೆ ಮಾಡಿದ್ದು, ನಾನು ಕೊಟ್ಟ ಉಳಿದ ಅಡುಗೆ ತೆಗೆದುಕೊಂಡು ಹೋಗಿ ಬೀಡುತ್ತಿದ್ದಳು. ಚುರುಕು ಸ್ವಭಾವದ ಮಾತಿನ ಮಲ್ಲೆ ಅಕ್ಕಮ್ಮ ನಾನು ಅಡುಗೆ ಮನೆಗೆ ಹೋಗಿ ಹಾಗೇ ನೋಡುತ್ತಿದ್ದರೆ ಏನಾದರೂ ಒಟ ಒಟ ಮಾತನಾಡುವಳು ನನಗೂ ಶಾಲೆಗೆ ಹೋಗುವ ಅವಸರ ಸುಮ್ಮನೆ ಮಾತಿಗೆ ನಿಂತರೆ ಕೆಲಸ ಕೆಟ್ಟಿತೆಂದು ಅವಳಷ್ಟಕ್ಕೆ ಅವಳನ್ನು ಅಡುಗೆ ಮನೆಗೆ ಬಿಟ್ಟು ಬಿಡುತ್ತಿದ್ದೆ. ಬರೆ ಮಗನಿಗೆ, ನಮ್ಮವರಿಗೆ ಊಟಕ್ಕೆ ಬಡಿಸಿ, ಬಾಕ್ಸ್ ಕಟ್ಟಿ ನಾನು ರೆಡಿಯಾಗುತ್ತಾ ಇರುತ್ತಿದ್ದೆ. ನಂತರ ಸ್ವಲ್ಪ ನೆಮ್ಮದಿಯಿಂದ ಉಣ್ಣಲು ಸಾಧ್ಯವಾಗಿತ್ತು. ಆದರೆ ಇತ್ತಿಚ್ಚಿಗೆ ರೆಡಿಯಾಗುವಾಗ, ದೇವರ ಪೂಜೆ ಮಾಡುವಾಗ ಬರೇ ಅಡುಗೆ ಮನೆಕಡೆಗೆ ಲಕ್ಷ್ಯ. ಅವಳೇನಾದರೂ ತೆಗೆದುಕೊಂಡು ಹೋಗುತ್ತಿರುವಳೇ ಎಂದು. ಅದಕ್ಕೆ ಕಾರಣ ಬರುವಾಗ ನೀಟಾಗಿ ಬರುವ ಅವಳು ಹೋಗುವಾಗ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡೇ ಹೋಗುತ್ತಿದ್ದಿದ್ದು. ಇದು ಇತ್ತೀಚಿಗೆ ನನ್ನ ಗಮನಕ್ಕೆ ಬಂತು. ಅವಾಗಿನಿಂದ ಹೊರಗೆ ನಾನು ರೆಡಿಯಾಗುತ್ತಿದ್ದರೂ ಅವಳ ಕಡೆಗೆ ಗಮನ ಸಂಶಯದ ಹುಳುಗೆ ಆಸ್ಪದ ಕೊಟ್ಟರೆ ಅದು ಕೊರೆದು ತಲೆ ಹಾಳು ಮಾಡಿ ಬಿಡುವುದೆಂದು ನಿಶ್ಚಯಿಸಿ ಇವತ್ತೇನಾದÀರೂ ಆಗಲಿ ಅವಳು ಹೋಗುವಾಗ ಮೇಲೆ ಸಿಕ್ಕಿಸಿದ ಸೀರೆ ನೀರಿಗೆ ಬಿಚ್ಚಿ ಸರಿಯಾಗಿ ಹೋಗಲು ಹೇಳುವುದು. ಅವಳೇನಾದರೂ ಅಂದುಕೊಳ್ಳಲಿ ನನ್ನ ಮೇಲೆ ಸಂಶಯವೇ ನಿಮಗೆ ಎಂದು ನೋಂದುಕೊಂಡರು ಚಿಂತೆಯಿಲ್ಲ. ನನ್ನ ಅನುಮಾನ ಹಾಗೇ ಕಂಡಿಲ್ಲ ಮಾತಿನ ಮಲ್ಲಿ ಅವಸರದಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿರುತ್ತಾಳೆ. ಅವೇರಡನ್ನು ಬಿಟ್ಟರೆ ಕೈ ಶುದ್ಧ ಇಲ್ಲಿವರೆಗೂ ಅಂತು ಏನೂ ಬದಲಾವಣೆ ಕಂಡಿಲ್ಲ. ಒಮ್ಮೊಮ್ಮೆ ಮಸಾಲ ಡಬ್ಬಿದಲ್ಲಿನ ಸಾಮಾನು ಬೇಗ ಆದಂಗೆ ಅನಿಸಿದರೂ ಮಾಡಿದ ಅಡುಗೆ ಲೆಕ್ಕ ಹಾಕಿದರೆ ಖರ್ಚು ಆಗಿರಬಹುದು ಎನಿಸುತ್ತೆ. ಹೆಚ್ಚೆಚ್ಚು ಅಡುಗೆ ಮಾಡ್ತಾಳಾದರೂ ಅದು ನಾನು ಕೊಟ್ಟದಲ್ಲವೆ. ಕಡಿಮೆ ಕೊಟ್ಟರೆ ನನಗೇ ಉಳಿಯುವುದಿಲ್ಲ. ಇಲ್ಲವೆ ಮಾಡಿದ ಅವಳಿಗೊಂದಿಷ್ಟೂ ಕೊಡದಿದ್ದರೆ ನಮಗೂ ಸಮಾಧಾನ ಇರುವುದಿಲ್ಲ. ಹೆಚ್ಚಿಗೆ ಕೊಟ್ಟರೆ ಮಾಡಿದ್ದು ಹೆಚ್ಚಾಗಿ ಅವಳು ಬಂದಷ್ಟು ಹೆಚ್ಚಿಗೆ ಓಯ್ಯಬಹುದು. ಅದು ಬಿಟ್ಟರೆ ಅದು ನಾನೇ ಕೊಟ್ಟರೆ ಓಯ್ಯುವುದನ್ನು ಬಿಟ್ಟರೆ ಅವಳು ಕದ್ದದ್ದು ಕಂಡಿಲ್ಲ. ಸುಮ್ಮನೆ ಅನುಮಾನಿಸುತ್ತಿರುವೆ ಎಂದು ಮತ್ತೊಮ್ಮೆ ಅನಿಸುತ್ತೆ. ಏನಾದರೂ ಆಗಲಿ ಇವತ್ತು ಒಂದು ನಿರ್ಧಾರ ಆಗಬೇಕು. ಅವಳನ್ನು ಪರೀಕ್ಷಿಸಿಬೇಕು. ಸಿಕ್ಕರೆ ನಾಳೆಯಿಂದ ನೀನು ಬರಬೇಡ ಎಂದು ಬಿಡಬೇಕು. ಮತ್ತೊಬ್ಬರನ್ನು ನೋಡಿಕೊಂಡಿರಾಯಿತು. ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದವರನ್ನು ಎಂದೂ ಸಹಿಸಿಕೊಳ್ಳುವುದು ಬೇಡ, ಎಂದು ನಿರ್ಧರಿಸಿ ಇನ್ನೇನು ಅವಳು ಅಡುಗೆ ಮುಗಿಸುವಷ್ಟರಲ್ಲೇ ನನ್ನ ಎದೆ ಬಡಿತ ನನಗೆ ಕೇಳಿಸುತ್ತೀದೆ. ದೇವರೇ ಕೆಲಸದವರು ಸಿಗುವುದೇನು ಸುಲಭದ ಮಾತಲ್ಲ. ಅವಳು ಪ್ರಾಮಾಣ ಕಳಾಗಿರಲಿ ಸರಿ ಇದ್ದರೆ ನಾನೇ ಕ್ಷಮೆ ಕೇಳಿ ಮುಂದುವರಿಯಲು ಹೇಳಿದರಾಯಿತೆಂದು ಕೊಂಡೆ. ಸರಿ “ಅಮ್ಮಾರೆ ಕೆಲಸ ಆಯಿತು ನಾ ಹೋರಡಲೇ” ಎಂದಳು ಅಕ್ಕಮ್ಮ. ತಡೆ ಅಕ್ಕಮ್ಮ ಸ್ವಲ್ಪ ನಾಷ್ಟ ಬಡಿಸಿಕೋಡ್ತಿನಿ” ಎಂದು ಒಳಗೆ ಬಂದು ಇಡ್ಲಿ ಚಟ್ನಿ ಹಾಕಿಕೊಂಡು ಹೊರಗೆ ಬರುವಷ್ಟರಲ್ಲೆ ನನಗೆ ಒಳಗೊಳಗೆ ಡವಡವ. ಧೈರ್ಯ ಮಾಡಿ “ಏ ಅಕ್ಕಮ್ಮ ಸೀರೆ ಸರಿ ಮಾಡಿಕೊ, ಎಷ್ಟೂ ಮೇಲೆ ಸಿಕ್ಕಿಸಿಕೊಂಡಿಯಲ್ಲಾ” ಎಂದೆ. “ಇಲ್ಲ ಬಿಡ್ರಿ ಅಮ್ಮಾರೆ ಮನೆಗೆ ಹೋಗೆ ಉಣ ್ತನಿ. ನನ್ನ ಮಗನು ಉಣ್ತಾನ” ಎಂದಳು. ನಾನು ಹಠಕ್ಕೆ ಬಿದ್ದವಳಂತೆ “ನಾನು ನೋಡಬೇಕು, ನೀನು ಸಿಕ್ಕಿಸಿಕೊಂಡ ಸೀರೆ ಬಿಚ್ಚಲೇ ಬೇಕು” ಎಂದೇ ಅಷ್ಟರಲ್ಲಾಗಲೇ ಅವಳ ಮುಖ ಕಪ್ಪಿಟ್ಟಿತ್ತು. ಮೊದಲಿದ್ದ ಧೈರ್ಯ ನಾನು ಜೋರು ಮಾಡುವಷ್ಟಾರಲ್ಲಾಗಲೇ ಉಳಿಯಲಿಲ್ಲ. ಅಂಜುತಾ ಬಿಚ್ಚಿದವಳ ಸೀರೆಯಲ್ಲೇ, ಚಕ್ಕಿ, ಲವಂಗ, ಯಾಲಕ್ಕಿ, ಮೊಗ್ಗುಗಳು ಸರ ಸರ ಬಿದ್ದವು. ನನಗೂ ಶಾಕ್. ಅವಳೂ ಇದನ್ನು ನೀರಿಕ್ಷಿಸಿರಲಿಲ್ಲ ಅವಳಿಗೂ ಗಾಬರಿ. ಗರಬಡಿದವಳಂತೆ ಮಾತು ಮರೆತು ನಿಂತಿದ್ದಳು. ನಾನು ಒಂದೇ ಮಾತಿನಲ್ಲಿ “ನಾಳೆಯಿಂದ ನೀನು ಬರಬೇಡ” ಎಂದು ಬಿಟ್ಟೆ ಅವಳಿಗೆ ಈ ನಾಲ್ಕೈದು ವರ್ಷದಲ್ಲೆ ನನ್ನ ಗುಣ ಸ್ವಭಾವ ಗೊತ್ತಾಗಿತ್ತು ಎಷ್ಟೂ ಮೃದು, ಉದಾರಿಯೂ ಒಮ್ಮೆ ಅಷ್ಟೆ ಕಠಿಣ ಕಬ್ಬಿಣವೆಂದು ಅವಳು ಮುಂದೆ ಮಾತಾಡದೆ ಅಳುತ್ತಾ ಹೊರಟು ಹೋದಳು. ಅವಳು ಹೋದ ಮೇಲೆ ಸ್ವಲ್ಪ ಹೊತ್ತು “ಹೊತ್ತಿ ಉರಿಯುವ ಒಲೆಯಂತೆ ಮನಸ್ಸು ದಗದಗಿಸುತ್ತಿತ್ತು”. ನಂತರ ತಿಳಿಗೊಂಡ ಕೊಳದಂತೆ ಆದಮೇಲೆ ವಿಚಾರ ಮಾಡಿ ನೋಡಿದೆ. ಇವತ್ತೇನು ಅವಳನ್ನು ಬೈಯ್ದು ಕಳಿಸಿದೆ. ನಾಳೆ ಹೇಗೆ ಇವತ್ತು ರವಿವಾರ ನಾಳೆ ಬೆಳಗೆದ್ದರೆ ಸೋಮವಾರ ಶಾಲೆಗೆ ಓಡಬೇಕು. ಅವಳು ಬಂದ ಮೇಲೆ ನಿಶ್ಚಿಂತೆಯಿಂದ ಉಂಡು ತಿಂದು ನೆಮ್ಮದಿಯಿಂದ ಇದ್ದೆ. ನಾನು ದುಡುಕಿದರೆ ಇಷ್ಟು ಚೆನ್ನಾಗಿ ಅಡುಗೆ ಮಾಡುವರು ಸಿಗುವರೇ ಕೆಲಸದವರು ಸಿಗುವುದೇ ಬಹಳ ಕಷ್ಟ. ಯಾರು ಏನು ಸಾಚಾ. ಅವಕಾಶ ಸಿಕ್ಕರೆ ಬಡತನದ ಕಾರಣಕ್ಕೆ ಅಲ್ಪಸ್ವಲ್ಪ ಕಳ್ಳತನ ಮಾಡುವರೇ. ಕದ್ದಿದ್ದಾದರೂ ಎಷ್ಟು?, ಹೆಚ್ಚೆಂದರೆ 50 ರೂ ಯಾ ಅಲ್ಲವೆಂದು ಒಮ್ಮೆ ಎನಿಸಿದರೆ. ದಿನದಿನಾ ಇಷ್ಟೇಷ್ಟೆ ಒಯ್ಯುತ್ತಿದ್ದರೆ ಹೇಗೆ, ನಂಬಿಕೆಗೆ ಅರ್ಹಳಲ್ಲದವಳನ್ನು ಹೊರಗೆ ಹಾಕಬೇಕು ಎಂದು ಮತ್ತೆ ಯೋಚಿಸಿತು. ತಲೆ ಕೆಟ್ಟು ಮೂರಾ ಬಟ್ಟೆಯಾಯಿತು. ಈ ಸಣ್ಣ ಘಟನೆಯಿಂದ.ಆದರೆ ನಿಜಕ್ಕೂ ಅಕ್ಕಮ್ಮ ಪ್ರಾಮಾಣ ಕಳೇ ಆಗಿದ್ದಳು. ಅವಳು ಕಳ್ಳಿಯಲ್ಲ. ಅವತ್ತು ಮಗ. ಒಂದೇ ಸವನೆ “ಆ ಟೀಚರ ಮನೆಯಲ್ಲೆ ಮಾಡುವಂತೆ ನಮ್ಮ ಮನೆಯಲ್ಲಿ ಪಲಾವ ಮಾಡು” ಎಂದು ಗಂಟು ಬಿದ್ದಿದ್ದನಂತೆ. ಅವರ ಮನೆಯಲ್ಲಿ ಇದ್ದಂತೆ ನಮ್ಮ ಮನೆಯಲ್ಲಿ ಮಸಾಲೆ ಸಾಮಾನು ಇಲ್ಲಪ್ಪ” ಎಂದರೆ ಕೇಳಿ ತೆಗೆದುಕೊಂಡು ಬಾ ಎಂದಿನಂತೆ. “ನಿನ್ನೆಯಾದರೂ ಕೇಳಿ ಒಂದೇರೆಡು ಲಿಂಬೆ ಹಣ್ಣು ತಂದಿದ್ದೆ. ಮತ್ತೆ ಕೇಳಿದರೆ ಹೇಗೆ “ಎಂದು ಅವಳ ಚಿಂತೆಗೀಡಾಗಿ ಎಂದೂ ಮಾಡದ ತಪ್ಪನ್ನು ಮಗನ ಮಮಕಾರಕ್ಕೆ ಬಿದ್ದು ಆ ತಪ್ಪು ಮಾಡಿಸಿತಂತೆ. ಇದನೆಲ್ಲ ಹೇಳಿ ಹೇಳಿದ್ದು ಅವಳ ಮನೆ ಪಕ್ಕದ ಜೋತೆ ಗೂಡಿ ಕೆಲಸ ಮಾಡುವ ಮಲ್ಲಮ್ಮ ಮೊನ್ನೆ ಶಾಲೆ ಮೂಡಿಸಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಾಗ ಹೇಳಿದ್ದು.”ಪಾಪ ಅಕ್ಕಮ್ಮ . ತುಂಬಾ ಒಳ್ಳೆಯವಳು. ನಿಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಳು ಅವಳನ್ನು ಯಾಕೆ ಬಿಡಿಸಿದರಿ ಎಂದು ಹೇಳುತ್ತಾ ಅಕ್ಕಮ್ಮ ಆಕೆಯ ಮುಂದೆ ತನ್ನ ದುಃಖ ಹಂಚಿಕೊಂಡ ವಿಷಯ ಬಾಯ್ಬಿಟ್ಟಳು. ಈ ವಿಷಯ ತಿಳಿದ ಮೇಲೆ ನನಗೆ ನನ್ನ ದುಡುಕು ಬುದ್ಧಿ ಬಗ್ಗೆ ತುಂಬಾನೇ ಬೇಸರವಾಯಿತು. ಯಾಕೋ ಅವಳ ಮುಂದೆ ನಾನು ಸಣ್ಣವಳಾಗಿ ಬಿಟ್ಟೆನೆ ಅನಿಸಿತು.ಮತ್ತೆ ಕೆಲಸಕ್ಕೆ ಕರೆಯಲು ಹಿಂಜರಿಕೆ ಆಯಿತು **********************************

ಸಣ್ಣ ತಪ್ಪು Read Post »

ಕಾವ್ಯಯಾನ

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ ಕಂದಮ್ಮನಾಗಿದ್ದೆ ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ ಕಣ್ಣು ಬಿಟ್ಟಾಗ ಬವಣೆ ಯಮರಾಯನ ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ ಮುಳುಗಿದ್ದೆ. *************************

ಅರೆನಗ್ನ ಕನಸು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ ಉಸಿರು ದೇಹ ತೊರೆವ ಮೊದಲು ಮರಳಿಬಿಡು ನನ್ನೆಡೆಗೆ **********************

ಗಝಲ್ Read Post »

ಇತರೆ, ಪ್ರಬಂದ

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ ಪಾತ್ರೆಗಳನ್ನು ತೊಳೆಯುವಲ್ಲಿ ವ್ಯಸ್ತರಾದರೆ , ಚಿಕ್ಕವರು ಕೈ ಕಾಲಿಗೆ ತೊಡರುವ ಪಾತ್ರೆಗಳ ನಡುವೆ ಸಂಭ್ರಮ ದಿಂದ ಓಡಾಡುತ್ತ ಎನೋ ಖುಷಿ ಅನುಭವಿಸುತ್ತಿದ್ದೆವು.ತಮ್ಮ ಮುರಿದ ಹೋದ ಆಟಿಕೆಗಳು ಹಳೆ ಪುಸ್ತಕಗಳು ಎಂದೋ ಕಳೆದು ಹೋದ ಪೆನ್ನು ಪೆನ್ಸಿಲ್ ಗಳು ಸಿಕ್ಕಾಗ ಅವನ್ನು ಹೆಕ್ಕಿ ತೆಗೆದು ಜೋಪಾನವಾಗಿ ಎತ್ತಿಕ್ಕಿಕೊಂಡು ಸಂಭ್ರಮಿಸುತಿದ್ದೆವು.ಆಗ ಆ ಹಳೆಯ ಮುರಿದ ವಸ್ತುಗಳಲ್ಲಿ ಕಂಡುಕೊಳ್ಳುತ್ತಿದ್ದ ಖುಷಿ ಈಗಿನ ಯಾವ ವಸ್ತುವಿನಲ್ಲು ದೊರಕದು. ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವವರೆ.ಕೆಲಸದ ಒತ್ತಡದ ನಡುವೆಯೂ ಏನೋ ಸಂಭ್ರಮ. ಮನೆಯ ಮೂಲೆ ಮೂಲೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಗೆ ಸುಣ್ಣದ ಬಿಳಿಯ ಹೊಳಪು ಕೊಟ್ಟಾಗ ಮನೆಯೊಂದಿಗೆ ಮನೆಯವರಲ್ಲೂ ಹೊಸತನದ ಅನುಭೂತಿ ಮೂಡುತಿತ್ತು. ಅಟ್ಟದ ಮೇಲಿನ ಬಳಸದೆ ಇರುವ ತಾಮ್ರ ಹಿತ್ತಾಳೆ ಪಾತ್ರೆಗಳನ್ನೆಲ್ಲ ತೆಗೆದು , ಉಪ್ಪು ಹುಣಸೆಹಣ್ಣಿನಿಂದ ತಿಕ್ಕಿ ಹೊಳಪು ಬರಿಸಿ ಬಿಸಿಲಿಗೆ ಒಣಗಿಸಿ ಮತ್ತೆ ಅಟ್ಟದಲ್ಲೆ ವಿರಾಜಮಾನವಾಗಿಸುವದು ಒಂದು ಮಹತ್ಕಾರ್ಯವೆ .ಮನೆಯೊಳಗಿನ ಹೊಸ ಹಳೆ ಪಾತ್ರೆಗಳನ್ನು ತಿಕ್ಕುತ್ತ ಅಮ್ಮ ಅಜ್ಜಿಯರು ತಮ್ಮ ಜೀವಮಾನದೊಂದಿಗೆ ಸಾಗಿ ಬಂದ ಪಾತ್ರೆಗಳ ಲೋಕದಲ್ಲಿ ವಿಹರಿಸುತಿದ್ದರು. ಎಷ್ಟೊ ವರ್ಷದಿಂದ ಬಳಸಿ ಸವಕಲಾದ , ಹಿಡಿಕೆ ಮುರಿದ ,ನೆಗ್ಗು ಬಡಿದ ಪಾತ್ರೆಗಳು ಉಪಯೋಗಕ್ಕೆ ಬರದಿದ್ದರು ಬಿಸಾಡುವ ಮನಸ್ಸಾಗದೆ ಒಂದು ದೊಡ್ಡ ಡಬ್ಬದಲ್ಲಿ ತುಂಬಿಡಲಾಗುತಿತ್ತು.ಜೀವಮಾನದ ಇಡುಗಂಟಿನಂತೆ. ನನಗೆ ತಿಳುವಳಿಕೆ ಬಂದ ನಂತರ ಮನೆಯ ಅನುಪಯುಕ್ತ ಪಾತ್ರೆಗಳನ್ನೆಲ್ಲ ಗುಜರಿಗೆ ವರ್ಗಾಯಿಸಿದಾಗ ನನಗೂ ಅಮ್ಮನಿಗೂ ರಂಪಾಟವೆ ಆಗಿತ್ತು.ಹಳೆತನವೆಂದರೆ ಹಾಗೆ ಎನೋ ,ಇಟ್ಟುಕೊಳ್ಳಲು ಆಗದೆ ಬಿಸಾಡಲು ಆಗದೆ ಇಬ್ಬಂದಿತನ.ಆದರೂ ವಸ್ತುಗಳೆ ಆಗಲಿ ವ್ಯಕ್ತಿಯೆ ಆಗಲಿ ಹಳತಾದಂತೆ ನಮ್ಮೊಂದಿಗೆ ಬೆಸೆದು ಬಿಡುತ್ತವೆ.ನಮ್ಮೊಂದಿಗೆ ಒಂದಾಗಿ ಬಿಡುತ್ತವೆ. ನಿರ್ಜೀವ ಪಾತ್ರೆಗಳು ಒಂದೊಂದು ಪದಾರ್ಥಗಳ ಹೆಸರಿನಿಂದ ಕರೆಸಿಕೊಳ್ಳುತ್ತವೆ.ಹಾಲಿನ ಪಾತ್ರೆ ಮೊಸರಿನ ಗಿಂಡಿ ,ಮಜ್ಜಿಗೆ ಗ್ಲಾಸ್ , ಅನ್ನದ ತಪ್ಪಲೆ ,ಸಾರಿನ ಬೋಗುಣಿ ,ಪಲ್ಯದ ಕಡಾಯಿ ಇನ್ನೂ ಅನೇಕ..ಪ್ರತಿ ಮನೆಯಲ್ಲೂ ಪಾತ್ರೆಗಳು ಕೇವಲ ಪಾತ್ರೆಗಳಾಗಿರದೆ ಆ ಮನೆಯ ಗೃಹಿಣಿಯರ ಒಡನಾಡಿಗಳಾಗಿರುತ್ತವೆ.ಮನೆಯವರ ಹಸಿವು ತಣಿಸುವ ಅಕ್ಷಯ ಪಾತ್ರೆಗಳಾಗಿರುತ್ತವೆ. ಮನೆಯಲ್ಲಿರುವ ಹಣ ಒಡವೆಯ ನಿಖರವಾದ ಸಂಖ್ಯೆಯ ನೆನಪು ಇರದಿರಬಹುದು.ಆದರೆ ತಮ್ಮ ಮನೆಯಲ್ಲಿರುವ ಪಾತ್ರೆಗಳ ತಟ್ಟೆ ಲೋಟಗಳು ಎಷ್ಟಿವೆ ಎಂದು ನೆನಪಿರದ ಗೃಹಿಣಿ ಇರಲಿಕ್ಕಿಲ್ಲ.ಸಾಕಷ್ಟು ಪಾತ್ರೆಗಳಿದ್ದರು ಅದರಲ್ಲಿ ಒಂದು ಕಾಣೆಯಾದರು ಅಥವಾ ಪಕ್ಕದ ಮನೆಯವರಿಗೆ ಕೊಟ್ಟಿದ್ದರು ಅವರು ವಾಪಸು ಕೊಡುವದು ಸ್ವಲ್ಪ ತಡವಾದರು ನೆನಪಿಸಿ ಪಡೆದುಕೊಳ್ಳುವದರಲ್ಲಿ ಮುಜುಗುರ ಪಟ್ಟುಕೊಳ್ಳಲಾರೆವು. ನಾಗರಿಕತೆ ಬದಲಾದಂತೆಲ್ಲ ಪಾತ್ರೆಗಳು ಬದಲಾದವು.ಈಗ ಇರುವ ನಾನ್ ಸ್ಟಿಕ್ ಪಾತ್ರೆಗಳು ಮುಟ್ಟಿದರೆ ಜರುಗುವಂತಹವು.ನನಗೆ ಸ್ಟೀಲ್ ಮತ್ತು ಅಲೂಮಿನಿಯಮ್ ಪಾತ್ರೆಗಳ ಮೇಲೆ ಇರುವ ಮಮತೆ ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಮೂಡಲೆ ಇಲ್ಲ. ಈಗ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಹೊರಗಿನಿಂದ ಕಟ್ಟಿಸಿಕೊಂಡು ಬಂದು ಬಿಚ್ಚಿ ಅದರಲ್ಲೆ ಊಟ ಮಾಡುವ ಧಾವಂತದ ಜನರಿಗೆ ಪಾತ್ರೆಗಳ ಅವಶ್ಯಕತೆಯು ಅಷ್ಟಾಗಿ ಕಾಣದು. ಹಿಂದಿನವರಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬೇಯಿಸುವ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ .ಇಬ್ಬರು ನಾಲ್ವರು ಇರುವ ಮನೆಗಳಲ್ಲಿ ಇರುವ ಪಾತ್ರೆಗಳು ಅವರ ಎರಡರಷ್ಟೆ. ಕೆಲವರು ಪಾತ್ರೆಗಳನ್ನು ತೊಳೆಯುವ ತಾಪತ್ರಯ ತಪ್ಪಿಸಿಕೊಳ್ಳಲು ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನೆ ದಿನಾಲು ಉಪಯೋಗಿಸುವರು. ಕೆಲಸದ ಹೊರೆ ಕಡಿಮೆಯಾದಷ್ಟೂ ಮಾಲಿನ್ಯ ಹೆಚ್ಚುತ್ತಲೆ ಇದೆ. ಮಹಿಳೆಯರಿಗೂ ಮತ್ತು ಪಾತ್ರೆಗಳಿಗೂ ಇರುವ ನಂಟು ನಿರಂತರ ಬೆಸೆದಿರುವದು.ಬೆಳಗಾದರೆ ಗೃಹಿಣಿಯರ ಕೈಯಲ್ಲಾಡುವ ಪಾತ್ರೆಗಳ ಟಿನ್ ಟಿನಿ ನಾದ ಪ್ರತಿ ಮನೆಯ ಸುಪ್ರಭಾತ.ಅದರೊಂದಿಗೆ ಮನೆಯವರ ಮತ್ತೊಂದು ಭರವಸೆಯ ಬೆಳಕಿನ ಉದಯ. ******************************************************

ಪಾತ್ರೆಗಳ ಲೋಕದಲ್ಲಿ.. Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ   ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ ಕವಿತೆಯೋ ಕೆಟ್ಟ ಕವಿತೆಯೋ ಎಂದು ತೀರ್ಪುಕೊಡುವಲ್ಲಿ ನಿರತರಾಗಬೇಕೋ? ಇದಾವುದರ ಹಂಗಿಲ್ಲದೇ ಓದಿ ಆಸ್ವಾದಿಸುವ ಕವನಗಳು ನಮ್ಮ ಮುಂದಿವೆ. ಕವಿ ವಿನಯಚಂದ್ರ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆಗೆಂದು ಕರೆದಾಗ ನನಗೆ ಹುಟ್ಟಿದ ಪ್ರಶ್ನೆಗಳು ಇವೆಲ್ಲ. ಒಂದಿಷ್ಟು ಸ್ನೇಹಿತರು ಸೇರಿ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದೆವು.    ಹಾಗೆ ನೊಡಿದರೆ ವಿನಯಚಂದ್ರ ಕಾವ್ಯಲೋಕಕ್ಕೆ ಹೊಸಬರೇನಲ್ಲ. ಈಗಾಗಲೇ ಒಂದು ಕವನಸಂಕಲನ ಬಿಡುಗಡೆಯಾಗಿದೆ. ಈಗಾಗಲೇ ಅವರ ಮೌನಗೀತ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಸಾಹಿತ್ಯಾಸಕ್ತರಿಗೆ ಹಾಗೂ ಸಹೃದಯರಿಗೆ ಫೇಸ್‌ಬುಕ್ ಮುಂತಾದ ಕಡೆಗಳಲ್ಲಿ ತಮ್ಮ ಕವನವನ್ನು ಉಣಬಡಿಸಿದ್ದಾರೆ.  ಇವರ ಎರಡನೆ ಸಂಕಲನ ತೊರೆ ಹರಿವ ಹಾದಿ ಈಗ ನಿಮ್ಮ ಮುಂದಿದೆ. ಇಲ್ಲಿ ಉಳಿಸಿದರಲ್ಲವೇಅಲ್ಲಿ ಸಮನಾಗುವುದು? ಎನ್ನುತ್ತ ಉಳಿಕೆ ಗಳಿಕೆ ಹಾಗು ಲಯದ ಕುರಿತು ನಮ್ಮ ಗಮನ ಸೆಳೆಯುವ ಕವನದ ಇವೆರಡೇ ಸಾಲುಗಳನ್ನಿಟ್ಟು ಓದಿನೋಡಿ. ಅದೆಷ್ಟೆಲ್ಲ ಅರ್ಥ ಹೊಮ್ಮಿಸುತ್ತದೆ. ಎಲ್ಲಿ ಉಳಿಸಬೇಕು ಮತ್ತು ಎಲ್ಲಿ ಸಮನಾಗಿಸಬೇಕು ಎನ್ನುವುದನ್ನು ಜೀವನದಲ್ಲಿ ಕಲಿಯಬೇಕಾದುದು ಬಹು ಮುಖ್ಯ. ಉಳಿಸಬೇಕಾದಲ್ಲಿ ಉಳಿಸಿ, ಖರ್ಚು ಮಾಡುವಲ್ಲಿ ಮಾಡಿದರೆ ಮಾತ್ರ ಜೀವನಕ್ಕೆ ಬೆಲೆ. ಜೀವನದಲ್ಲಿ ಕೊಡಬೇಕಾದ ಪರೀತಿಯನ್ನು ಧಾರಾಳವಾಗಿ ಕೊಟ್ಟುಬಿಡಬೇಕು. ಪ್ರೀತಿಯನ್ನು ಉಳಿಸಿಕೊಂಡರೆ ಅದು ಎಲ್ಲಿಯೂ ಸಮನಾಗುವುದಿಲ್ಲ. ತಂದೆ ತಾಯಿಗೆ ಕೊಡಬೇಕಾದ ಪ್ರೀತಿ, ಸಹೋದರ ಸಹೋದರಿಯರಿಗೆ ನೀಡಬೇಕಾದ ವಾತ್ಸಲ್ಯ, ಸ್ನೇಹಿತರಿಗೆ ಕೊಡುವ ಆತ್ಮೀಯತೆ ಹಾಗೂ ಪ್ರೇಮಿಗೆ ಮತ್ತು ಜೀವನ ಸಂಗಾತಿಗೆ ನೀಡಬೇಕಾದ ಪ್ರೇಮ, ಮಕ್ಕಳಿಗೆ ನೀಡುವ ಮಮತೆ ಎಲ್ಲವೂ ಬೇರೆ ಬೇರೆಯದ್ದೇ. ಆದರೆ ನಾವು ಅದನ್ನೆಲ್ಲ ಒಂದಾಗಿಸಿ ನಮ್ಮೊಳಗೇ ಒಂದು ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಯಾವುದನ್ನು ಕೊಡಬೇಕು ಎಂಬ ವಿಭ್ರಾಂತಿಯಲ್ಲಿ ಯಾರಿಗೂ ಸರಿಯಾಗಿ ನೀಡದೇ ಉಳಿಸುವ ಪ್ರಯತ್ನ ಮಾಡುತ್ತಲೇ ಎಲ್ಲ ಕಡೆಯೂ ಸೋಲುತ್ತೇವೆ. ಹಾಗಾದರೆ ಕೊಡುವುದೆಲ್ಲಿ ಸಮನಾಗುವುದೆಲ್ಲಿ? ಕೊಡುವ ಮತ್ತು ಸಮನಾಗುವ ನಮ್ಮ ಪ್ರಯತ್ನ ಹಣಕಾಸಿನ ವ್ಯವಹಾರದಲ್ಲಿ ತುಂಬ ಚೆನ್ನಾಗಿ ನಿರೂಪಿತವಾಗುತ್ತದೆ. ಎಲ್ಲೆಲ್ಲೋ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಅನಾವಶ್ಯಕ ಎನ್ನಿಸಿದಲ್ಲಿ ಉಳಿಸಿಕೊಂಡು ಖರ್ಚು ಮಾಡಲೇ ಬೇಕಾದಲ್ಲಿ ಧಾರಾಳವಾಗಬೇಕು. ಆದರೆ ಕವಿ ಸಂತೆಯ ದಿನ ಮುಂಜಾನೆಗೆದ್ದುಮುಂಡಾಸು ಬಿಗಿದ ರೈತನಿಗೆ ರೇಗುತ್ತೇನೆದರ ಹೆಚ್ಚಿತೆಂದು ಮುನಿಯುತ್ತೇನೆಚೌಕಾಸಿಗಿಳಿದು ಚಿಲ್ಲರೆಯ ಜೇಬಿಗಿಳಿಸುತ್ತೇನೆ ಎಂಬ ಸಾಲಿನ ಮುಂದೆ ಈ ಮೊದಲೆ ಹೇಳಿದ ಎರಡು ಸಾಲುಗಳನ್ನು ಸೇರಿಸುತ್ತಾರೆ. ಅಂದರೆ ಅದಕ್ಕೂ ಹಿಂದೆ ಅದೆಲ್ಲೋ ಸೌತೆಕಾಯಿಗೆ ಉಪ್ಪು ಹಾಕಿಕೊಟ್ಟಿದ್ದಕ್ಕೆ ಕೇಳಿದ್ದಷ್ಟು ಬೆಲೆ ತೆರುವ, ಸುಮ್ಮನೆ ಡೊಗ್ಗು ಸಲಾಮು ಹೊಡೆಯುವವನಿಗೆ ಗರಿಗರಿ ನೋಟುಗಳನ್ನು ನೀಡಿ ಹೀಗೆ ಬಡ ರೈತನ ಎದುರು ಚಿಲ್ಲರೆಗಾಗಿ ಚೌಕಾಶಿ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿ, ಹಣ ಉಳಿಸಿಕೊಂಡ ಆತ್ಮತೃಪ್ತಿಯಲ್ಲಿ ಮೆರೆಯುತ್ತೇವೆ. ಯಾಕೆಂದರೆ ನಮ್ಮ ರೋಷಾವೇಶಗಳನ್ನು ತೋರಿಸಬಹುದಾದದ್ದು ಕೇವಲ ಬಡ ರೈತನ ಎದುರಿಗೆ ಮಾತ್ರ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಾಗಿಲು ಕಾಯುವವನೂ ನಮ್ಮ ಕೋಪಕ್ಕೆ ಹೆದರಲಾರ. ಆದರೆ ನಾವು ಅವನಿಗೆ ಟಿಪ್ಸ್ ಕೊಟ್ಟು ಅವನನ್ನು ಸಂತೃಪ್ತಿಗೊಳಿಸುತ್ತೇವೆಯೇ ಹೊರತೂ ಅವನ ಬಳಿ ಚೌಕಾಶಿ ಮಾಡುವುದಿಲ್ಲ ಎಂಬ ನೋವು ಕವಿಗಿದೆ. ಅದು ಈ ಕವಿತೆಯಲ್ಲಿ ತುಂಬ ಸುಂದರವಾಗಿ ಬಿಂಬಿತವಾಗಿದೆ. ಬಿಟ್ಟರೆ  ಗೊಮ್ಮಟನನ್ನೂ ಕುಟ್ಟಿಜಲ್ಲಿ ಮಾಡಿ ಲೋಡು ಮಾಡಲುಕಾದಿದ್ದಾರೆ ಜನಮರಳು ಮರಳಾಗಳೂ ಕಾಯದೆಮಣ್ಣ ಸೋಸಿಯೇ ಒಡೆಯುತ್ತಿದ್ದಾರೆಗಾಂಧಾರಿ ಪಿಂಡ ಎಂತಹ ಮಾರ್ಮಿಕ ಸಾಲುಗಳು ಇವು. ನಮ್ಮ ಜನ ನಿಸರ್ಗದ ಯಾವುದನ್ನು ಇದ್ದಂತೆಯೇ ಇರಲು ಬಿಟ್ಟಿದ್ದೇವೆ ಹೇಳಿ? ಅದಂದೆಂದೋ ಬೆಟ್ಟವಾಗಿದ್ದ ಕಲ್ಲನ್ನು ಒಡೆದು ಕೆತ್ತಿ ಗೊಮ್ಮಟನನ್ನಾಗಿ ಮಾಡಿದರು. ಈಗ ನಮಗೆ ಅವಕಾಶ ಸಿಕ್ಕರೆ ಆ ಗೊಮ್ಮಟನನ್ನೂ ಒಡೆದು ಜಲ್ಲಿ ಮಾಡಿ ಮನೆ ಕಟ್ಟಲೋ, ರಸ್ತೆಗೋ ಹಾಕಿ ದಮಾಸು ಹಾಕಿ ನುಣುಪು ಮಾಡಿಬಿಡುತ್ತೇವೆ. ಯಾಕೆಂದರೆ ಮರಳಿನ ಹೆಸರಲ್ಲಿ ನದಿಯ ಒಡಲನ್ನು ಬಗೆದು ಬರಿದಾಗಿಸಿ ನದಿಯ ಪಾತ್ರವೇ ಬದಲಾಗುವಂತೆ ಮಾಡುವುದರಲ್ಲಿ ನಾವು ನಿಸ್ಸಿಮರು. ಇನ್ನು ಕಡಲ ತೀರದಲ್ಲಂತೂ ಸಮುದ್ರ ದಮಡೆಯ ಮರಳನ್ನೂ ಬಗೆದು ಹೊತ್ತೊಯ್ಯುತ್ತಿದ್ದೇವೆ. ಕೆಲವೊಮ್ಮೆ ಮರಳು ಎನ್ನುವ ಹೆಸರಿನಲ್ಲಿ ಮಣ್ಣನ್ನೂ ಹೊತ್ತೊಯ್ದು ಮಾರಾಟ ಮಾಡಿ ಹಣಗಳಿಸುತ್ತಿದ್ದೇವೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಗರ್ಭವನ್ನು ಉದರದಿಮದ ಹೊರತೆಗೆದು ಹೊರಗೇ ಕಟ್ಟಿ, ಹುಂಜದ ವೀರ್‍ಯ ತಾಗಿ ಮೊಟ್ಟೆಯಾದ ತಕ್ಷಣ ಕಿತ್ತುಕೊಳ್ಳುವ ಮನುಷ್ಯ ಸಮಾಜದ ನೀಚ ಹುನ್ನಾರಗಳ ಕುರಿತಾಗಿ ಕವಿಯಲ್ಲಿ ಬೇಸರವಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಕವಿ ತನ್ನನ್ನು ತಾನು ವ್ಯಂಗ್ಯವಾಡಿಕೊಳ್ಳುವುದನ್ನು ಇಲ್ಲಿ ಕಾನುತ್ತೇವೆ. ತನಗೂ ಎರಡು ಮಕ್ಕಳಿವೆ, ನಾನೂ ಇಷ್ಟೆಲ್ಲ ಮಂತ್ರ ಹೇಳಿ ಕಾರಿನಲ್ಲೇ ಓಡಾಡುತ್ತೇನೆ ಎಂಬ ಅಪರಾಧಿಭಾವವನ್ನು ತೋರಿಸುತ್ತಾರೆ.    ವಿನಯಚಂದ್ರರ ಕವಿತೆಗಳು ಇಷ್ಟವಾಗುವುದೇ ಅಲ್ಲಿರುವ ಸಾಮಾಜಿಕ ಪ್ರಜ್ಞೆಯಿಂದಾಗಿ. ಭವಿಷ್ಯ ಎನ್ನುವ ಕವಿತೆಯಲ್ಲಿ ಅವರು ಅಂತಹ ಸಾಮಾಜಿಕ ಕಳಕಳಿಯಿಂದಲೇ ನಮ್ಮನ್ನು ಅಲ್ಲಾಡಿಸಿಬಿಡುತ್ತಾರೆ. ಇರಾಕಿನಲ್ಲಿ ಗೋಲಿಯಾಡಬೇಕಾಗಿದ್ದ, ಚಿನ್ನಿ ದಾಂಡು ಆಡಬೇಕಾಗಿದ್ದ ಮಕ್ಕಳ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ, ಚಿಕ್ಕವರಿರುವಾಗ ನಮ್ಮ ಕುತ್ತಿಗೆಯಲ್ಲಿ ರಕ್ಷಾ ಕವಚದಂತೆ ಇರುತ್ತಿದ್ದ ತಾಯಿತದ ಜಾಗದಲ್ಲಿ ಸೈನೈಡ್ ಕಟ್ಟಿ ಆಟದ ಮೈದಾನದಲ್ಲಿ ಬಾಂಬುಗಳೊಂದಿಗೆ ಆಟವಾಡುವುದನ್ನು ಕಂಡಾಗ ಮಕ್ಕಳ ಬಾಲ್ಯವನ್ನು ಕಿತ್ತುಕೊಂಡವರ ಕುರಿತು ಆಕ್ರೋಶ ಉಕ್ಕುತ್ತದೆ. ಸೋಮಾಲಿಯಾದಲ್ಲಿ ಮೂಳೆ ಚಕ್ಕಳವಾಗಿದ್ದ ಮಕ್ಕಳ ಅಸ್ತಿಪಂಜರದಂತಹ ದೇಹ, ಹಾಲು ಕೊಡಬೇಕಾಗಿದ್ದ ಅಮ್ಮನ ಮೊಲೆಯಲ್ಲಿ ಜಿನುಗುವ ರಕ್ತ ನಮ್ಮನ್ನು ಅಧೀರಗೊಳಿಸುತ್ತದೆ. ಚೀನಾದಲ್ಲಂತೂ ಬ್ರೂಣ ಹತ್ಯೆ ಸಾಮಾನ್ಯ. ಹುಟ್ಟಲಾರದ ಮಕ್ಕಳು ಶೌಚಾಲಯದ ಗುಂಡಿಗಳಲ್ಲಿ ನರಳಿದರೆ, ಹುಟ್ಟಿದ ಮಕ್ಕಳು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿ, ಸರಕಾರದ ಅಣತಿಯಂತೆ ಬಾಲ್ಯ ಕಳೆದುಕೊಳ್ಳುವುದನ್ನು ಕಂಡರೆ ಆಧುನಿಕ ಸಮಾಜದ ಕುರಿತಾಗಿಯೇ ಅಸಹ್ಯ ಹುಟ್ಟುತ್ತದೆ. ಚಂದ್ರ ಲೋಕಕ್ಕೆ, ಮಂಗಳ ಗ್ರಹಕ್ಕೆ ಹೋಗುವ ಆತುರದಲ್ಲಿ ನಾವು ನಮ್ಮ ಭೂಮಿಯನ್ನು ಹಾಳುಗೆಡವುದನ್ನು ಕಂಡು ಕವಿ ಮಮ್ಮಲ ಮರಗುವುದು ಈ ಕವಿತೆಯಲ್ಲಿ ಕಾಣುತ್ತದೆ.            ಅಸಹಾಯಕ ಕವಿತೆಯಲ್ಲಿ ದೇಶದ ತುಂಬ ನಡೆಯುತ್ತಿರುವ ಜಲಪ್ರವಾಹವನ್ನು ಉಲ್ಲೇಖಿಸುತ್ತಾರೆ. ಕೇರಳದಲ್ಲಿ, ಕೊಡಗಿನಲ್ಲಿ, ಶಿರಾಡಿಯಲ್ಲಿ, ಎಡಕುಮರಿಯಲ್ಲಿ ಹೀಗೆ ಸುತ್ತಮುತ್ತ ಎತ್ತ ನೋಡಿದರೂ ಜಲಪ್ರವಾಹ. ಗುಡ್ಡಗುಡ್ಡಗಳೇ ಕುಸಿದು, ನೀರು ಎಲ್ಲೆಡೆಯಿಂದ ಜನವಸತಿ ಪ್ರದೇಶದ ಮೇಲೆ ಜಾರಿ, ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವಾಗ ಎಲ್ಲರ ಮನದಲ್ಲೂ ಅದೆಷ್ಟು ನೋವು, ಅದೆಷ್ಟು ವಿಷಾದ. ಆಗೆಲ್ಲ ಉಣ್ಣಲು, ತಿನ್ನಲು ಇಲ್ಲದವರಿಗೆ ಸಹಾಯ ಮಾಡುತ್ತೇನೆಂದು ಹೊರಟವರು ಅದೆಷ್ಟೋ ಮಂದಿ. ಕೆಲವರಂದು ಸಹಾಯ ಮಾಡುವ ನೆಪದಲ್ಲಿ ಆಹಾರ, ವಸ್ತ್ರ, ಹಣವನ್ನು ನೆಪ ಮಾತ್ರಕ್ಕೆ ನಿರಾಶ್ರಿತರಿಗೆ ನೀಡಿ, ಉಳಿದ್ದ್ದ್ನ್ನು ತಾವೇ ಹಂಚಿಕೊಂಡವರೂ ಇದ್ದರು. ಆದರೂ ಹೀಗೆ ಜನಜಾನುವಾರುಗಳ ಅಸಹಾಯಕತೆಗೆ ಹೆಚ್ಚಿನವರು ಮಾಡಿದ್ದೇನು? ಒಂದು ವಿಷಾದದ ಇಮೋಜಿ ಒತ್ತಿ, ಬೇಸರವಾಯಿತೆಂಬಂತೆ ಮೆಸೇಜು ಕುಟ್ಟಿ, ಹಣ ಕೊಡಲೇ, ಸಹಾಯಕ್ಕೆ ಹೊರಟು ಬಿಡಲೇ ಎಂದು ಯೋಚಿಸುತ್ತ ಕೊನೆಗೆ ಏನೂ ಮಾಡಲಾಗದೇ ಸುಮ್ಮನಿದ್ದವರೇ ಹೆಚ್ಚು, ಇದನ್ನು ಕವಿ ಅಜ್ಜಿಯ ಸಾವಿನೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅಜ್ಜಿ ಸತ್ತ ಸುದ್ದಿ ಕೇಳಿ ಬೋರಾಡಿ ಅತ್ತು, ಏನೂ ಮಾಡಲಾಗದ ಅಸಹಾಯಕತೆಗೆ ಚೀರಿ, ಕಣ್ಣೀರಾಗಿ ಅಳುವಿಗೆ ನೆರೆಹೊರೆಯವರ ಸಾಂತ್ವಾನ ಕೇಳಿ, ನಂತರ ಕೆಲವೇ ದಿನಗಳಲ್ಲಿ ಅಜ್ಜಿ ಇದ್ದಳೆಂಬುದನ್ನೇ  ಮರೆತಿದ್ದೆ ಎನ್ನುತ್ತಾರೆ. ನಮ್ಮೆಲ್ಲರ ಬದುಕೂ ಇಷ್ಟೇ. ಘಟನೆ ನಡೆದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಏನೂ ಮಾಡಲಾಗದೆ ಆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುತ್ತೇವೆ. ಹಿಂದಿನ ಎಲ್ಲ ನೋವುಗಳನ್ನು ಮರೆತು ಮತ್ತೆ ಸಲೀಸಾದ ಬದುಕಿನಲ್ಲಿ ಕರಗಿ ಹೋಗುತ್ತೇವೆ. ಜೀವವಿದಕೊಳ್ಳಿ ಎನ್ನುವ ಕವಿತೆಯು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.  ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ ಎನ್ನುವ ಪುಣ್ಯಕೋಟಿಯ ಕಥೆಯನ್ನು ನೆನಪಿಸುವ ಶೀರ್ಷಿಕೆಯ ಈ ಕವನ ಸಾವನ್ನು ಕೊಟ್ಟು ಜೀವವನ್ನು ತೆಗೆದು ಕೊಳ್ಳಿ ಎನ್ನುವ ಮಾತನ್ನು ಮಾರ್ಮಿಕವಾಗಿ ಹೇಳುತ್ತದೆ. ಗಿಡಕ್ಕೆ ಹೂವು ಮೊಗ್ಗು ಭಾರವಾದರೆ ಆ ಜೀವ ಇದ್ದೇನು ಪ್ರಯೋಜನ? ಮಾನವೀಯತೆಯನು ಮರೆತು ಅಧಿಕಾರ ದಾಹಿಯಾಗುವ ಬದಲು ಪ್ರಾಣ ಹೋದರೆ ತಪ್ಪೇನಲ್ಲ ಎನ್ನುತ್ತಾರೆ ಕವಿ. ಕವಿತೆಯು ಪ್ರಸ್ತುತ ಪಡಿಸುವ ರೀತಿಯಿಂದಲೂ, ಅದರ ಆಶಯದಿಂದಲೂ ಗೆಲ್ಲುತ್ತದೆ. ನಮ್ಮೆಲ್ಲರ ಬದುಕು ಅದೆಷ್ಟು ಅರ್ಥಹೀನ. ನಾವೇನು ಮಾಡಬೇಕೆಂದುಕೊಂಡಿದ್ದವೋ ಅದನ್ನು ಮಾಡಲಾಗುವುದಿಲ್ಲ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆವೋ ಅದನ್ನು ಸಾಧಿಸಲು ನಮ್ಮ ಸುತ್ತಲಿನ ಸಮಾಜ ಬಿಡುವುದಿಲ್ಲ. ಪ್ರಖ್ಯಾತ ಹಾಡುಗಾರನಾಗಬೇಕು, ಅದ್ಭುತ ನೃತ್ಯಪಟುವಾಗಬೇಕು, ಸೋಲಿರದ ಆಟಗಾರನಾಗಬೇಕು ಎಂದೆಲ್ಲ ಆಸೆ ಇಟ್ಟುಕೊಂಡ ಮಕ್ಕಳಿಗೆ ಅದನ್ನು ಮಾಡಲು ಪ್ರೋತ್ಸಾಹಿಸದೇ, ‘ಹೊಟ್ಟೇಗೇನು ಮಾಡ್ತಿ’ ಎಂದು ಕೇಳುತ್ತೇವೆ. ಹೊಟ್ಟೆಗೆ ಸಂಪಾದಿಸಿಕೊಳ್ಳಬೇಕಾದ ಆತುರದಲ್ಲಿ ಮಗು ತನ್ನ ಇಷ್ಟದ ಎಲ್ಲವನ್ನೂ ಮರೆಯುತ್ತದೆ. ಬದುಕು ಎಂದರೆ ಹೊಟ್ಟೆ ಬಟ್ಟೆ ಹಾಗೂ ಹಣ ಮಾತ್ರ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆದರೆ ಹೊಟ್ಟೆ ತುಂಬಾ ಉಂಡು, ಕೈ ತುಂಬ ಹಣ ಸಂಪಾದಿಸಿ, ಐಶಾರಾಮಿ ಮನೆಯಲ್ಲಿ, ನಮ್ಮದೇ ಅದ್ಭುತವಾದ ವಾಹನದಲ್ಲಿ ಓಡಾಡುತ್ತೇವೆ. ಆದರೆ ಇವೆಲ್ಲವೂ ಬದುಕಿಗೆ ಸಂತಸ ಕೊಡಬಲ್ಲದೇ? ಅಪ್ಪನ ಮಾತಿನಂತೇ ನಡೆದೆಹೊಟ್ಟೆಗೇನೋ ಒಂದು ಮಾಡಿಕೊಂಡಿದ್ದೇನೆಬದುಕು ಮಾತ್ರ ನಿಸ್ಸಾರ, ಶೂನ್ಯಪ್ರಶ್ನೆ ಎತ್ತೋಣವೆಂದರೆಉತ್ತರಿಸಲು ಈಗ ಅಪ್ಪನಿಲ್ಲ ಎಲ್ಲವೂ ಇದ್ದು ನಿಸ್ಸಾರ ಬದುಕನ್ನು ಸಾಗಿಸುವಾಗ ನಮ್ಮನ್ನು ನಾವು ಸಾಧಿಸುವ ಖುಷಿಯಿಂದ ಹಿಮ್ಮೆಟಿಸಿದವರನ್ನು  ಕೇಳೋಣವೆಂದರೆ ಅವರು ನಮ್ಮೆದುರಿಗೆ ಇರುವುದಿಲ್ಲ. ಇಲ್ಲಿ ಹೊಟ್ಟೆಗೇನು ಮಾಡುತ್ತಿ ಎಂದು ಕೇಳುವ ಕವಿಯ ಅಪ್ಪ ಒಂದು ಹೆಸರು ಮಾತ್ರ. ನಾವೆಲ್ಲರೂ ಮಾಡುತ್ತಿರುವುದು ಅದೇ ಕೆಲಸ. ನಮ್ಮ ಬಾಲ್ಯದಲ್ಲಿ ನಮ್ಮ ಇಷ್ಟವನ್ನು ಕಿತ್ತುಕೊಂಡ ಅಪ್ಪ- ಅಮ್ಮ, ಹಿತೈಷಿಗಳು ಎನ್ನಿಸಿಕೊಂಡ ಸಂಬಂಧಿಕರು ಮಾಡಿದ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಆಟ ಇಷ್ಟ ಎನ್ನುವ, ಚಿತ್ರ ಬಿಡಿಸುವುದರಲ್ಲಿ ಪ್ರಪಂಚವನ್ನೇ ಮರೆಯುವ, ಹಾಡುತ್ತ ಹಾಡುತ್ತ ಅದ್ಭುತ ಗಂಧರ್ವ ಲೋಕವನ್ನೇ ಸೃಷ್ಟಿಸುವ ಹತ್ತಾರು ಪ್ರತಿಭೆಗಳನ್ನು ಒಡಲಲ್ಲಿ ಇಟ್ಟುಕೊಂಡ ನಮ್ಮ ಮಕ್ಕಳಿಗೆ ಅವರಿಷ್ಟದ್ದನ್ನು ಮಾಡಲು ಬಿಡುತ್ತಿದ್ದೇವೆಯೇ? ‘ಮೊದಲು ಓದು, ಒಂದು ನೌಕರಿ ಹಿಡಿ. ನಂತರ ಬೇಕಾದ್ದು ಮಾಡಿಕೊ’ ಎಂದು ಉಪದೇಶ ಕೊಡುತ್ತಿದ್ದೇವೆ. ಇದು ಜನರೇಶನ್ ಗ್ಯಾಪ್ ಅಲ್ಲ. ಬದುಕು ಎಂದರೇನು ಎನ್ನುವುದು ಅರ್ಥವಾದ ಕಾರಣಕ್ಕೆ ಹೀಗೆ ಮಾಡುತ್ತೇವೆಯೇ? ಅಥವಾ ಬೆಳೆದಂತೆಲ್ಲ ನಮಗೆ ಹಣ ಹಾಗೂ ಒಂದು ಕಂಫರ್ಟ ಲೈಫ್ ಮಾತ್ರ ಸರಿಯಾದದ್ದು ಎನ್ನಿಸಲು ಪ್ರಾರಂಭವಾಗುತ್ತದೆಯೇ? ಅಥವಾ ಹಾಗೆ ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳದೇ ಕೊನೆಗೆ ಅಸಹಾಯಕರಾಗಿ, ತಮ್ಮೆಲ್ಲ ಸಂಬಂಧಿಗಳಿಗೆ, ಆಪ್ತರಿಗೆ, ಮಿತ್ರರಿಗೆ ಹೊರೆಯಾಗಿ ನಿಂತವರನ್ನು ಕಂಡು ಇಂತಹ ಭಾವ ಮೂಡುತ್ತದೆಯೇ? ಯಾವುದು ಸರಿ? ಮಕ್ಕಳ ಇಷ್ಟದಂತೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಬಿಡುವುದೇ ಅಥವಾ ಅವರ ಓದು ಬರೆಹಕ್ಕೆ ಆದ್ಯತೆ ನೀಡಿ, ಅವರಿಗೊಂದು ಉದ್ಯೋಗ ದೊರೆತು, ಅವರ ಬದುಕು ಒಂದು ಹಂತಕ್ಕೆ ತಲುಪುವುದೇ? ಕವಿ ಕೊನೆಯಲ್ಲಿ ಇಂತಹುದ್ದೊಂದು ಪ್ರಶ್ನೆಯನ್ನು ಹಾಗೇ ಓದುಗರಿಗೆ ಬಿಟ್ಟುಬಿಟ್ಟಿದ್ದಾರೆ.             ವಿನಯಚಂದ್ರರಿಗೆ ಆಂಗ್ಲ ಸಾಹಿತ್ಯದ ಅಪಾರವಾದ ಓದು ಬೆನ್ನಿಗಿದೆ. ಶ್ರೇಷ್ಠ ಆಂಗ್ಲ ಸಾಹಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಿಗೆ

ಮೂರನೇ ಆಯಾಮ Read Post »

ಕಾವ್ಯಯಾನ

ಕಂಸ…!

ಕವಿತೆ ಕಂಸ…! ಡಾ. ಅರಕಲಗೂಡು ನೀಲಕಂಠ ಮೂರ್ತಿ ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ! ಹಸುಳೆಯೊಂದು ಅಸುನೀಗಿದೆಒಂದು ಪೊದೆಯೊಳಗೆಅನಾಥಬೆತ್ತಲೆ –ಬೀಭತ್ಸ ಕೊಲೆಗೆ…!ಒಂದೇ ಒಂದು ದಿನವೋಒಂದು ವಾರವೋವಯಸು ಎಷ್ಟಾದರೇನು ಪಾತಕಕ್ಕೆ! ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿನಡೆದಿರಬಹುದೇ ಪೊದೆಯೆಡೆಗೆಆ ಹಸುಳೆ?ಅಥವಾ…?ಪೊದೆಯೇನು ಬಯಲೇನುಏನಾದರೇನು ಅಸುರರೋಷಕ್ಕೆ! ಬಹುಶಃವಿಷದ ಹಾವೂ ಕೂಡ ಮರುಗಿಮುಟ್ಟದೆಭುಸುಗುಡದೆಹರಿದು ಹೋಗಿರಬಹುದು ಸುಮ್ಮನೆನಿಶಬ್ದ! ಆದರೀತ ಹಾಗಿರಲಿಲ್ಲ…ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರಎದ್ದು ಬಂದಿದ್ದವನು!ಆ ಆಯುಧವೋ –ಒಂದೇ ಒಂದು ತುಕ್ಕಾದಪುಟ್ಟ ಸ್ಕ್ರೂಡ್ರೈವರ್ –ಅದೂ ಕೂಡ ಹೆಚ್ಚುಎನಿಸುವಂಥ ಹಸುಗೂಸು!ಒಂದೇ ಎರಡೇ…ನೂರು ಬಾರಿನೂರಾರು ಬಾರಿಚುಚ್ಚಿ ಚುಚ್ಚಿ ಮೆರೆದಿದ್ದಾನೆಹೊಸದೊಂದು ಪ್ರಯೋಗ…! ಎಂಥ ಪ್ರಾಚೀನಲಿಪಿಯೋ ಏನೋಇನ್ನೂ ಅಳಿಸಲಾಗದಹೆಣ್ಣ ಹಣೆಬರೆಹ! ಅಳಲೂ ಆಗದಆಗತಾನೆ ಕಣ್ಣು ತೆರೆದ ಹಸುಳೆಆ ಹೆಣ್ಣು!ಹೇಗೆಲ್ಲ ಕೂಗಿ ಕೂಗಿ ಚೀರಿರಬಹುದುತನಗೆ ಆಗಿನ್ನೂ ಅರಿವಿರದಆ ಹೊಚ್ಚ ಹೊಸ ನೋವಿಗೆಆ ಭಯಾನಕ ಬಾಣ ಬತ್ತಳಿಕೆ…ಗಳಿಗೆ! ***********************

ಕಂಸ…! Read Post »

ಕಾವ್ಯಯಾನ

ರೈತನ ಮಗ ನಾ

ಕವಿತೆ ರೈತನ ಮಗ ನಾ ಚಂದ್ರು.ಪಿ.ಹಾಸನ ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗಹಳ್ಳಿಯ ಸೀದಾ ಸಾದಾದ ಹುಡುಗಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲುನೋವಾದ್ರೂ ಕೊಡ್ತೀನೊಂದು ಸ್ಮೈಲು ಯಾವಾಗ್ಲು ನಾನಾಗಿರ್ತೀನಿ ಮೌನಿಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡುಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡುಅಣುಕಿಸಿದವರ ಮನಸ್ನಲ್ಲೇ ಬೈಕೊಂಡುಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡುಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾನಂಜಿಲ್ದಾ ವಂಶ್ದಲ್ಲಿ ಹುಟ್ಟಿದ ಕೂಸು ನಾಪ್ರೀತಿ ಸಂಬಂಧಕ್ಕ ಪ್ರಾಣಾನಾ ಕೊಡ್ತೀನಾ ಹಸನಾದ ಕಾಲಬರೋದ್ಯಾರೂ ತಿಳಿದಿಲ್ರೀಹುಟ್ಸೀದ ಸಿವನು ಸಟ್ಗೆ ಹುಲ್ಮೈಸೋದಿಲ್ರೀಕಾಲದ್ಮುಂದೇ ನಾವೆಲ್ಲ ಯಾವ್ಯಾವ್ಲೆಕ್ಕಾರೀಒಳ್ಳೇದ್ಮನಸ್ನಾಗಿಟ್ಕೊಂಡ್ ಜೀವ್ನಾನ್ಸಾಗ್ಸ್ರೀ **********************************

ರೈತನ ಮಗ ನಾ Read Post »

ಅನುವಾದ

ಇದು ದುಃಖದ ಸಂಜೆ

ಅನುವಾದಿತ ಕವಿತೆ ಇದು ದುಃಖದ ಸಂಜೆ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಇದು ದುಃಖದ ಸಂಜೆ; ಚತುರೆಯ ಆ ನೋಟವ ಕುರಿತು ಮಾತನಾಡಿಮಾದಕತೆ ಹರಡುತ್ತಿದೆ; ಈಗ ರಹಸ್ಯವ ಕುರಿತು ಏನಾದರೂ ಮಾತನಾಡಿ. ಚತುರೆಯ ಈ ಮೌನ; ಇದು ಹೃದಯದ ರಕ್ತನಾಳಗಳ ಕೀಳುತ್ತಲಿದೆಈ ಮೌನದಲ್ಲಿ, ವಾದ್ಯ ಮುರಿಯುವ ಕುರಿತು ಏನಾದರೂ ಮಾತನಾಡಿ ಹರಡುವ ಕೂದಲಿನ ಘಮಲು! ದುಃಖಕ್ಕೆ ಮುಸುಕ ಹಾಕುವ ಕಥೆ!ಮುಂಜಾನೆ ಬರುವನಕ ಅಂತಹ ವಿಷಯಗಳ ಕುರಿತು ಮಾತನಾಡಿ ಹೃದಯದ ಪ್ರತಿ ರಕ್ತನಾಳವ ನೂಕಿತ್ತೆಸೆಯಲಿ! ಅದಕೂ ನೋವಾಗಲಿ!ಅಂತೆಯೇ ಅವಳ ಉಚಿತ-ಅನುಚಿತ ಚತುರತನ ಕುರಿತು ಮಾತನಾಡಿ ರಹಸ್ಯಗಳ ಆ ಧ್ವನಿಯ ಮೌನವ ಕುರಿತು ಮಾತನಾಡಿಅನಸ್ತಿತ್ವದ ಮೂಲತತ್ವವನು, ಜೀವನಸಂದೇಶವನ್ಕು ಕುರಿತು ಮಾತನಾಡಿ ಪ್ರೀತಿಯನು ಅಪಕೀರ್ತಿಗೆಳೆಸಲು ಪ್ರಾರಂಭಿಸಿದೆ, ಆನಂದವಿಲ್ಲ, ಬರೀ ಬೇಸರ ಇಂದು, ದೃಷ್ಟಿ ತಪ್ಪಿಸುವ ಅವಳ ಕಣ್ಣಿನ ಕುರಿತು ಮಾತನಾಡಿ ಯಾರ ಹೆಸರಿನ ಉಲ್ಲೇಖವೇ ಬಣ್ಣ ಪರಿಮಳದ ವಿಶ್ವವನು ಸೃಷ್ಟಿಸುವುದೋಓ, ಗೆಳೆಯರೇ! ಆ ಚದುರೆಯರ ಹೊಸ ವಸಂತವ ಕುರಿತು ಮಾತನಾಡಿ ನಿರ್ಲಕ್ಷ್ಯದ ಕ್ಷಮೆಯ ಅರ್ಥವೇನು? ಪ್ರೀತಿಯ ಮೇಲೇಕೆ ಆರೋಪ?ಇಂದು, ವಿಂಗಡನೆಗಳ ಸೃಷ್ಟಿಕರ್ತ ಆಕಾಶದ ಬಗ್ಗೆ ಮಾತನಾಡಿ ಪಂಜರದ ಸರಳು‌ಗಳ ತೂರಿ ಎಂತೆಂಥದೋ ಬೆಳಕು ಒಳಗೆ ಸೋಸುತ್ತಿದೆತೆರೆದ ಸ್ಥಳಗಳ, ಅತೃಪ್ತ ಬಯಕೆಗಳ ಕುರಿತು ಏನಾದರೂ ಮಾತನಾಡಿ ಅದು ಅನಂತ ಬಾಳ್ವೆ, ಹಠಾತ್ ಸಾವು, ಎಷ್ಟು ಅನಿರೀಕ್ಷಿತಗಳುಇಂದು, ನಾಜ್ಮತ್ತು ಆಂದಾಜ್ನ ಕುರಿತು ಏನಾದರೂ ಮಾತನಾಡಿ ಅಸಡ್ಡೆಯೊಡಗೂಡಿದ ಪ್ರೀತಿಯೂ ತುಸು ಸಹನೆಯಿಂದಿರಲು ಅನುವಾಗಿದೆಮೋಡಿ ಮಾಡುವ ಸೌಂದರ್ಯದ ಖನಿಯ ಲವಲವಿಕೆಯ ಕುರಿತು ಮಾತನಾಡಿ ಓ, ಫಿರಾಕ್, ಇಂದುಕ್ರಿಸ್ತನಂತೆ ಜೀವ ನೀಡುವ ಗುಣವ ಹೊಂದಿದವನ ಕುರಿತು ಮಾತನಾಡಿಅವಳ ಮರುಹುಟ್ಟಿನ ಪ್ರೀತಿಯಿಂದ ದೂರ ಹೋಗುವುದರ ಕುರಿತು ಮಾತನಾಡಿ. *******************************

ಇದು ದುಃಖದ ಸಂಜೆ Read Post »

You cannot copy content of this page

Scroll to Top