ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ತ್ರಿಶಂಕು ಟಿ.ಎಸ್.ಶ್ರವಣಕುಮಾರಿ ತ್ರಿಶಂಕು ಹಪ್ಪಳ ಒತ್ತುತ್ತಿದ್ದ ಸೀತಮ್ಮ, ಬಟ್ಟಲಿಗೆ ಮುಚ್ಚಿದ್ದ ಒದ್ದೆ ಬಟ್ಟೆಯನ್ನು ಸರಿಸಿ ಉಳಿದ ಉರುಳಿಗಳ ಲೆಕ್ಕ ಹಾಕಿದರು. ಇನ್ನು ಹದಿನೈದು ಉಂಡೆಗಳಿವೆ. ಬೆಳಗ್ಗೆಯೇ ಮಹಡಿಯ ಮೇಲೆ ಹಪ್ಪಳ ಒಣಗಿ ಹಾಕಲು ಸವರಿಸುತ್ತಿದ್ದುದನ್ನು ನೋಡಿದ್ದ ಧೀರಜನ ಫ್ರೆಂಡ್ಸ್ “ಅಜ್ಜಿ ನಾವೆಲ್ಲಾ ಶಾಲೆಯಿಂದ ಬಂದಮೇಲೆ ತಿನ್ನಕ್ಕೆ ಹಪ್ಪಳದ ಹಿಟ್ಟು ಕೊಡಬೇಕು” ಅಂತ ತಾಕೀತು ಮಾಡಿ ಹೋಗಿದ್ದರು. ಧೀರಜ್ ಅಮೆರಿಕಕ್ಕೆ ಹೋದಮೇಲೆ ಈ ಮಕ್ಕಳು ಮನೆಗೆ ಬರುವುದೂ ಅಪರೂಪವೇ. ಯಾವಾಗಾದರೂ ಒಮ್ಮೊಮ್ಮೆ ಇಂಥದೇನಾದರು ಇದ್ದಾಗಷ್ಟೆ ಬರುತ್ತಾರೆ. ಪಾಪ ಅವರಾದರೂ ಯಾಕೆ ಬರುತ್ತಾರೆ? ಮುದುಕರೊಂದಿಗೆ ಆಡಲು ಸಾಧ್ಯವೇ? ಅವನಿದ್ದಾಗಾದರೆ ಮಲಗುವ ಹೊತ್ತು, ಶಾಲೆಗೆ ಹೋಗುವ ಸಮಯ ಬಿಟ್ಟರೆ ಮಿಕ್ಕಷ್ಟು ಹೊತ್ತೂ ನಮ್ಮ ಮನೆಯಲ್ಲೇ ಠಿಕಾಣಿ. ಧೀರಜನೇ ಇವರಿಗೆಲ್ಲಾ ಇಂತಹ ರುಚಿಯನ್ನು ಕಲಿಸಿರೋದು. ಮೊಮ್ಮಗನ ನೆನಪು ಬಂದ ತಕ್ಷಣ ಮುಖದ ಮೇಲೆ ತಂತಾನೇ ಒಂದು ಮುಗುಳ್ನಗು ಮೂಡಿತು. ʻಸರಿ, ಆ ಮಕ್ಕಳು ಶಾಲೆಯಿಂದ ಬಂದ ಮೇಲೆ ಒಬ್ಬೊಬ್ಬರೂ ಎರಡೂ, ಮೂರೋ ಉರುಳಿಯನ್ನು ತಿನ್ನುವುದಾದರೆ ಇಷ್ಟು ಸರಿಹೋಗುತ್ತದೆ. ಇನ್ನು ನಿಲ್ಲಿಸೋಣʼ ಎಂದುಕೊಳ್ಳುತ್ತಾ ಗಂಡನನ್ನು ಕರೆದರು. “ಇದಿಷ್ಟು ಹಪ್ಪಳ ಒಣಗಿ ಹಾಕಿ ಬಂದುಬಿಡಿ. ಅಲ್ಲಿಗೆ ಆಯ್ತು”. ಪೇಪರ್ ಓದುತ್ತಿದ್ದ ರಾಮಣ್ಣನವರು ಪಕ್ಕಕ್ಕಿಟ್ಟು ಎದ್ದರು. ಎರಡು ಮೂರು ಗಂಟೆಗಳ ಕಾಲ ಒಟ್ಟಿಗೆ ಕೂತಿದ್ದು, ಸೀತಮ್ಮನವರಿಗೆ ತಕ್ಷಣ ಎದ್ದು ನಿಲ್ಲಲಿಕ್ಕೆ ಆಗಲಿಲ್ಲ. ಸಾವರಿಸಿಕೊಳ್ಳುತ್ತಿರುವಾಗ ತಡೆಯಲಾಗದೇ ರಾಮಣ್ಣನವರು ಅಂದರು. “ಅದಕ್ಕೇ ಹೇಳಿದ್ದು. ಅಡಿಗರ ಅಂಗಡಿಯಿಂದ ತಂದಿಡ್ತೀನಿ. ತೊಂದರೆ ತೊಗೋಬೇಡ ಅಂತ. ನನ್ನ ಮಾತೆಲ್ಲಿ ಕೇಳ್ತಿ ನೀನು” ಲಟ್ಟಿಸಿದ ಹಪ್ಪಳದ ತಟ್ಟೆಯನ್ನು ಹಿಡಿದುಕೊಂಡು ಮೆಟ್ಟಿಲ ಕಡೆ ನಡೆಯುತ್ತಾ. “ಅಂಗಡಿಯಿಂದ ತಂದರೆ ಮನೇಲಿ ಮಾಡಿದ ಹಾಗೆ ಆಗುತ್ತೇನೂ. ಆ ಮಗೂ ಫೋನ್ ಮಾಡಿದಾಗೆಲ್ಲಾ ಕೇಳತ್ತೆ. ಅಜ್ಜಿ ಹಪ್ಪಳ ಮಾಡಿದೀ ತಾನೆ, ಉಪ್ಪಿನಕಾಯಿ ಹಾಕಿದೀ ತಾನೆ, ನಾ ಬರ್ತಾ ಇದೀನಿ. ನಂಗೆಲ್ಲಾ ಬೇಕು ಅಂತ. ಏನೋ ಈ ವರ್ಷಕ್ಕೆ ಇಷ್ಟಾಯ್ತು” ಎನ್ನುತ್ತಾ ಸೀತಮ್ಮ ಸೀರೆ ಕೊಡವಿಕೊಂಡು, ಲಟ್ಟಣಿಗೆ, ಮಣೆ, ಎಲ್ಲವನ್ನೂ ಒಂದೊಂದಾಗಿ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ಇಟ್ಟರು. ಆಗಲೇ ಹನ್ನೆರಡು ಘಂಟೆಯಾಗಿರಬೇಕು. ತಣ್ಣಗೆ ಏನಾದರೂ ಕುಡಿಯೋಣವೆನ್ನಿಸಿ, ಕಡೆದು ಇರಿಸಿದ್ದ ಮಜ್ಜಿಗೆಯನ್ನು ಎರಡು ಲೋಟಕ್ಕೆ ಬಗ್ಗಿಸಿಕೊಂಡು ಪಡಸಾಲೆಗೆ ಬಂದರು. “ಎಷ್ಟಾಯ್ತು ಅಂತ ಎಣಿಸಿದ್ರಾ” ಕೆಳಗೆ ಬಂದ ಗಂಡನ ಕೈಯಲ್ಲಿ ಮಜ್ಜಿಗೆಯ ಲೋಟವನ್ನಿಡುತ್ತಾ ಕೇಳಿದ್ರು. “ಆಗ್ಲೇ ಎಣಿಸಿದಾಗ ಎಂಭತ್ತೈದು ಆಗಿತ್ತು. ಈಗ ಎಷ್ಟಿತ್ತು” ಅಂದರು. “ಸರಿ ಹತ್ತಿರ ಹತ್ತಿರ ನೂರು ಆಗಿರತ್ತೆ ಬಿಡಿ” ಅನ್ನುತ್ತಾ ಮಜ್ಜಿಗೆಯ ಲೋಟವನ್ನು ಹಿಡಿದುಕೊಂಡು ಅಲ್ಲೇ ಸೋಫಾದ ಮೇಲೆ ಕುಳಿತವರು, “ದಿನಕ್ಕೆ ಇನ್ನೂರು, ಮುನ್ನೂರು ಹಪ್ಪಳ ಸಲೀಸಾಗಿ ಮಾಡ್ತಾ ಇದ್ದೆ. ಈಗ ನೂರು ಮಾಡೋಷ್ಟರಲ್ಲೇ ಸೋತು ಹೋಗೋ ಹಾಗಿದೆ” ನಿಟ್ಟುಸಿರು ಬಿಟ್ಟರು. “ಇನ್ನೇನು ಒಂದು ವಾರದಿಂದ ಒಂದೇ ಸಮ ಸಂಡಿಗೆ, ಉಪ್ಪಿನಕಾಯಿ, ಬಾಳಕ ಅಂತ ಏನೇನೋ ಮಾಡ್ಕೊಂಡು ಕುಣೀತಿದೀಯ. ವಯಸ್ಸು ಹಿಂದ್ಹೋಗತ್ತಾ? ಇನ್ನೇನೂ ಹಚ್ಚಿಕೊಳ್ಳಕ್ಕೆ ಹೋಗ್ಬೇಡ. ಇವತ್ತಾಗಲೇ ಗುರುವಾರ. ಭಾನುವಾರ ಅವರೆಲ್ಲಾ ಬಂದೇ ಬಿಡ್ತಾರೆ. ಇನ್ನೆರಡು ದಿನ ಸ್ವಲ್ಪ ಸುಧಾರಿಸ್ಕೋ. ಈಗ ಬೇಕಾದ್ರೆ ನಾನೇ ಅಡುಗೆ ಮಾಡ್ತೀನಿ” ಅಕ್ಕರೆಯಿಂದ ನುಡಿದರು. “ಬೆಳಗ್ಗೇನೇ ಕುಕ್ಕರ್ ಇಟ್ಟಾಗಿದೆ. ಸಾರಿಗೊಂದು ಕೂಡಿಟ್ರೆ ಆಯ್ತು. ಊಟಕ್ಕೆ ಕೂತುಕೊಳ್ಳೋಕೆ ಮುಂಚೆ ಮಾಡಿದ್ತಾಯ್ತು ಬಿಡಿ” ಎನ್ನುತ್ತಾ ಮಜ್ಜಿಗೆಯ ಲೋಟ ಕೆಳಗಿಟ್ಟು ಅಲ್ಲೇ ಸೋಫಾದಲ್ಲಿ ಹಿಂದಕ್ಕೆ ಒರಗಿದರು. “ಸರಿ. ನೀನು ಸ್ವಲ್ಪ ಸುಧಾರಿಸ್ಕೋ. ನಾನು ಹೋಗಿ ಎಲೆಕ್ಟ್ರಿಸಿಟಿ ಬಿಲ್ಲು ಕಟ್ಟಿ ಬರ್ತೀ ನಿ” ಎನ್ನುತ್ತಾ ಮೇಲಕ್ಕೆದ್ದರು. “ಹೊರಗಡೆ ಏನು ಬೆಳದಿಂಗಳೇ? ಈ ಸುಡುಸುಡು ಬಿಸಿಲಲ್ಲಿ ಹೊರಗೆ ಹೊರಟಿದೀರಲ್ಲ, ನಾಳೆ ಹೋದ್ರಾಯ್ತು ಬಿಡಿ” ಎಂದರೂ “ಇಲ್ಲ ನಾಳೆ ಗುಡ್ ಫ್ರೈಡೆ ರಜ. ಇನ್ನು ಶನಿವಾರವೊಂದೇ ಉಳಿಯೋದು. ಆಗ್ಲಿಲ್ಲ ಅಂದ್ರೆ ಕಷ್ಟ. ಭಾನುವಾರ ಅವರೆಲ್ಲಾ ಬಂದು ಬಿಟ್ರೆ, ಆಮೇಲೆ ಹೋಗೋಕಾಗೋದೇ ಇಲ್ಲ” ಎನ್ನುತ್ತಾ ಕೊಡೆ ಹಿಡಿದುಕೊಂಡು ಹೊರಟೇ ಬಿಟ್ಟರು ರಾಮಣ್ಣನವರು. ʻಸುಮ್ನೆ ನನ್ನ ಕಕ್ಕುಲಾತೀಗೆ ಹೇಳಬೇಕಷ್ಟೇ. ಅವರಿಗನ್ನಿಸಿದ್ದನ್ನೇ ಮಾಡೋದುʼ ಎಂದುಕೊಳ್ಳುತ್ತಾ “ಸರಿ ಬಾಗಿಲೆಳೆದುಕೊಂಡು ಹೋಗಿ; ಕೀ ನಿಮ್ಮ ಹತ್ರ ಇದೆ ತಾನೇ” ಎನ್ನುತ್ತಾ ಹಾಗೆಯೇ ಕಣ್ಣು ಮುಚ್ಚಿಕೊಂಡು ಒರಗಿಕೊಂಡರು ಸುಧಾರಿಸಿಕೊಳ್ಳಲೆಂಬಂತೆ….. ಅತ್ತೆಯಿದ್ದಾಗ ಇಬ್ಬರೂ ಸೇರಿ ಅದೆಷ್ಟು ಹಪ್ಪಳ ಸಂಡಿಗೆ ಮಾಡುತ್ತಿದ್ದದ್ದು… ಶಿವರಾತ್ರಿ ಕಳೆಯಿತೆಂದರೆ ಸಾಕು ಇದೇ ಕೆಲಸ. ಇದ್ದದ್ದು ಶಿವಮೊಗ್ಗದ ಹತ್ತಿರದ ಊರಗಡೂರಿನಲ್ಲಿ. ದೊಡ್ಡ ಮನೆ, ಅಡಿಕೆ ತೋಟ, ಮನೆಯ ತುಂಬಾ ಹತ್ತಾರು ಆಳು ಕಾಳು, ಕೊಟ್ಟಿಗೆಯ ತುಂಬಾ ದನ ಕರುಗಳು. ಕೆಲಸ ಒಂದೇ ಎರಡೇ. ಮದುವೆಯಾದ ಹೊಸತರಲ್ಲಿ ಅಷ್ಟು ದೊಡ್ಡ ಮನೆಯ ನೆಲವನ್ನೆಲ್ಲಾ ಸಗಣಿ ಹಾಕಿ ಸಾರಿಸಬೇಕಿತ್ತು. ಆಮೇಲಾಮೇಲೆ ಗಾರೆ ಮಾಡಿಸಿದ ಮೇಲೆ ಆ ದೊಡ್ಡ ಕೆಲಸ ತಪ್ಪಿತ್ತು. ರಾಶಿ ರಾಶಿ ಕೆಲಸ – ಆದರೆ ಅದೆಷ್ಟು ಹುರುಪು, ಉತ್ಸಾಹ! ಮಾವನವರಿಗೆ ಮೂವರು ಗಂಡು ಮಕ್ಕಳು, ಹೆಣ್ಣು ಮಕ್ಕಳಿರಲಿಲ್ಲ. ಇವರೇ ಕಡೆಯವರು. ತಾನು ಮದುವೆಯಾಗಿ ಮನೆಗೆ ಬರುವಾಗ ಎಲ್ಲರ ಜವಾಬ್ದಾರಿಯೂ ಕಳೆದಿತ್ತು. ದೊಡ್ಡ ಮಗ ಇಂಜಿನಿಯರಾಗಿ ಪಿ.ಡಬ್ಲು.ಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಊರೂರು ಅಲೆಯುತ್ತಿದ್ದು, ಮಕ್ಕಳಿಗೆ ಓದಲಿಕ್ಕೆ ಅನುಕೂಲವೆಂದು ಬೆಂಗಳೂರಿನಲ್ಲಿ ಮನೆಮಾಡಿ ತಮ್ಮ ಸಂಸಾರವನ್ನು ಅಲ್ಲೇ ಸ್ಥಾಪಿಸಿದ್ದರು. ಎರಡನೆಯವರು ಅಡ್ವೋಕೇಟು. ಅವರ ಮಾವನವರು ಚಿತ್ರದುರ್ಗದಲ್ಲಿ ಅದೇ ಕೆಲಸ ಮಾಡುತ್ತಿದ್ದವರು. ನಮ್ಮ ಮಾವನವರಿಗೂ ಮೊದಲಿಂದಲೇ ಗೆಳೆಯರಂತೆ. ಅವರ ಬಳಿಯೇ ಜೂನಿಯರ್ ಆಗಿ ಕೆಲಸ ಮಾಡಲು ಮಗನನ್ನು ಕಳಿಸಿಕೊಟ್ಟಿದ್ದರು. ಕಡೆಗೆ ಅವರ ಒಬ್ಬಳೇ ಮಗಳನ್ನೇ ಮದುವೆಯಾಗಿ ಅದಾಗಲೇ ಚೆನ್ನಾಗಿ ಕುದುರಿಕೊಂಡಿದ್ದ ಕೆಲಸವನ್ನು ಮುಂದುವರೆಸಿಕೊಂಡು ಅಲ್ಲೇ ಮನೆ ಹೂಡಿಕೊಂಡರು. ಇವರು ಓದಿದ್ದು ಶಿವಮೊಗ್ಗೆಯ ಕಾಮರ್ಸ್ ಕಾಲೇಜಿನಲ್ಲಿ ಬಿ. ಕಾಂ. ಮದುವೆಯಾಗುವಾಗ ಅಂತಹ ಕೆಲಸವೇನೂ ಇರಲಿಲ್ಲ. ಸುಮ್ಮನೆ ಹೊತ್ತು ಕಳೆಯುವುದಕ್ಕೆ ಎಲ್. ಐ. ಸಿ. ಏಜೆಂಟರಾಗಿದ್ದರು. ಅನುಕೂಲವಾದ ಮನೆಯಾದ್ದರಿಂದ ತನ್ನ ತವರು ಮನೆಯವರೂ ಇವರ ಕೆಲಸದ ಬಗ್ಗೆ ಅಷ್ಟೇನೂ ಚಿಂತಿಸಿರಲಿಲ್ಲ. ಆದರೆ ಇವರ ಮನಸ್ಸಿನಲ್ಲಿ ತಾನೂ ಅಣ್ಣಂದಿರ ಹಾಗೆ ದುಡಿಯಬೇಕು ಎಂದು ಆಶೆಯಿತ್ತೋ ಏನೋ – ಯಾವ ಯಾವುದೋ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು. ನಾನು ಮದುವೆಯಾಗಿ ಬಂದು ಒಂದಾರು ತಿಂಗಳಾಗಿತ್ತೇನೋ. ಬ್ಯಾಂಕಲ್ಲಿ ಕೆಲಸ ಸಿಕ್ಕೇ ಬಿಟ್ಟಿತು. ಮೊದಲ ಕೆಲಸ ಹುಬ್ಬಳ್ಳಿಯಲ್ಲಿ. ಇವರಿಗದೆಷ್ಟು ಸಂತೋಷವೋ… “ನಿನ್ನ ಕಾಲ್ಗುಣದಿಂದ ನನಗೆ ಈ ಕೆಲಸ ಸಿಕ್ಕಿದ್ದು. ನಾನು ಹೋಗಿ ಕೆಲಸಕ್ಕೆ ಸೇರಿಕೊಂಡು ಆದಷ್ಟು ಬೇಗಲೇ ಮನೆ ಮಾಡಿ ನಿನ್ನನ್ನೂ ಕರೆಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಇಲ್ಲೇ ಅಪ್ಪ ಅಮ್ಮನ ಜೊತೆಯಲ್ಲೇ ಇರು” ಎನ್ನುತ್ತಾ ಹೊರಟೇ ಬಿಟ್ಟರಲ್ಲ. ಅತ್ತೆ ಮಾವಂದಿರೂ ಸಂತೋಷವಾಗೇ ಕಳಿಸಿಕೊಟ್ಟರು. ತನಗೋ ಒಬ್ಬಳೇ ಇರುವುದಕ್ಕೆ ಬೇಸರ, ಆದರೆ ವಿಧಿಯಿಲ್ಲ. ಇನ್ನು ಸ್ವಲ್ಪವೇ ದಿನವಲ್ಲವಾ ಎನ್ನುವ ಸಮಾಧಾನ. ರಾಶಿ ರಾಶಿ ಕೆಲಸದಲ್ಲಿ ಹೊತ್ತು ಹೇಗೋ ಹೋಗುತ್ತಿತ್ತು. ಅತ್ತೆಗೂ ನನ್ನ ಬೇಸರ ಅರ್ಥವಾಗುತ್ತಿತ್ತೇನೋ. ಆದಷ್ಟೂ ನನ್ನ ಜೊತೆಯೇ ಕಾಲ ಕಳೆಯುತ್ತಿದ್ದರು. ಕೆಲಸಕ್ಕೆ ಸೇರಿದ ಹೊಸದಾದ್ದರಿಂದ ಇವರಿಗೆ ಅಷ್ಟು ರಜೆಯೂ ಸಿಕ್ಕುತ್ತಿರಲಿಲ್ಲ. ಅಪರೂಪಕ್ಕೊಂದೊಂದು ಭೇಟಿ. ಒಂದಾರು ತಿಂಗಳು ಕಳೆದಿತ್ತೇನೋ. ಅಂತೂ ಒಂದು ಮನೆ ಮಾಡಿಕೊಂಡು ನನ್ನನ್ನು ಕರೆದುಕೊಂಡು ಹೋಗಲು ಬಂದರು. ಹೊಸ ಸಂಸಾರ ಹೂಡಿಕೊಡಲು ಅತ್ತೆಯೂ ಜೊತೆಗೆ ಬಂದರು. ಯಾಕೋ ಬಂದ ಎರಡು ದಿನಕ್ಕೇ ಅವರಿಗೆ ಹುಶಾರು ತಪ್ಪಿತು. ಹೊಸ ಜಾಗ. ಅವರಿಗೆ ಸರಿ ಹೊಂದಲೇ ಇಲ್ಲ. ವಾಪಸ್ಸು ಊರಿಗೆ ಹೊರಟೇ ಬಿಟ್ಟರು. ವಾರದ ಕೊನೆಯಲ್ಲಿ ಇಬ್ಬರೂ ಅವರನ್ನು ಊರಿಗೆ ಬಿಡಲಿಕ್ಕೆ ಬಂದದ್ದಾಯಿತು. ಜ್ವರ ಹೆಚ್ಚಾಗುತ್ತಾ ಹೋಯಿತು. ಡಾಕ್ಟರು ಮಲೇರಿಯಾ ಅಂದರು. ಸರಿ, ಇವರೊಬ್ಬರೇ ಹುಬ್ಬಳ್ಳಿಗೆ ವಾಪಸ್ಸು ಹೋದರು. ತಾನು ಅತ್ತೆಯ ಶುಶ್ರೂಷೆಗೆ ನಿಂತೆ. ಬರೀ ಒಂದು ವಾರವಷ್ಟೇ. ಇವರು ಮತ್ತೆ ಊರಿಗೆ ಬರುವಂತಾಯಿತು ಸತ್ತ ಅಮ್ಮನನ್ನು ನೋಡಲು…. ಎಲ್ಲ ಕರ್ಮಾಂತರಗಳೂ ಮುಗಿದವು. ಎಲ್ಲರೂ ಹೊರಟು ನಿಂತರು. `ಅಪ್ಪನಿಗೇನು ಮಾಡುವುದು?’ ಎಲ್ಲರ ಮುಂದಿದ್ದ ಪ್ರಶ್ನೆ. ಯಾರು ಬೇಕಾದರೂ ಅವರನ್ನು ಕರೆದುಕೊಂಡು ಹೋಗಲು ತಯ್ಯಾರಿದ್ದರು. ಆದರೆ ಅವರು ಬರುವರೆ? ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ. ಮಾವನವರಿಗೂ ಇದು ಅರ್ಥವಾಯಿತೇನೋ. ಮಧ್ಯಾನ್ಹ ಊಟ ಮುಗಿದ ನಂತರ ಅವರೇ ಮಕ್ಕಳೆಲ್ಲರಿಗೂ ಹೇಳಿದರು. “ಇನ್ನೆಷ್ಟು ದಿನ ನೀವಿಲ್ಲಿ ಇರಕ್ಕಾಗತ್ತೆ ಕೆಲಸ ಬಿಟ್ಟು. ನಿಮ್ಮ ಪಾಡಿಗೆ ಹೊರಡಿ”. “ಹಾಗಲ್ಲ, ಹೀಗೆ ನಿಮ್ಮೊಬ್ಬರನ್ನೇ ಬಿಟ್ಟು..” ದೊಡ್ಡವರು ಕೇಳಿದರು. “ನೀವೂ ನಮ್ಮ ಜೊತೆಗೇ ಬಂದರೆ ನಮಗೂ ಸಮಾಧಾನವಾಗತ್ತೆ” ಎಲ್ಲ ಮಕ್ಕಳೂ ಹೇಳಿದರು. “ಅದು ಸಾಧ್ಯವಾಗದ ಮಾತು. ಇದು ನಾನು ಹುಟ್ಟಿದಾಗಿಂದ ಇರುವ ಮನೆ. ನಾನು ಸಾಯುವವರೆಗೂ ಇದೇ ನನ್ನ ಮನೆ. ನಿಮ್ಮ ನಿಮ್ಮ ಜೀವನ ನಿಮ್ಮದು. ನೀವು ಹೊರಡಿ” ಎಂದರು ಮುಂದಿನ ಮಾತಿಗೆ ಅವಕಾಶವಿಲ್ಲವೆಂಬಂತೆ. ಯಾರಿಗೂ ಸಮಾಧಾನವಿಲ್ಲ. ಈ ವಯಸ್ಸಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು. ಹಾಗಂತ ತಾವು ಇಲ್ಲಿ ಬಂದಿರುವುದೂ ಸಾಧ್ಯವಿಲ್ಲ. ಏನು ಮಾಡುವುದು. ಆಗ ಇವರೆಂದರು – “ಈ ಕೆಲಸ ನನಗೆ ಸಿಕ್ಕುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗಲೂ ಏನೂ ಪರವಾಗಿಲ್ಲ. ನಾನು ಇಲ್ಲೇ ಅಪ್ಪನ ಜೊತೆಗೇ ಇರ್ತೀನಿ. ಇಲ್ಲಿ ಎಲ್.ಐ.ಸಿ. ಏಜೆನ್ಸೀನೋ, ಇನ್ನೊಂದು ಏನು ಸಾಧ್ಯವೋ ಅದನ್ನೇ ಮಾಡ್ತೀನಿ. ನೀವು ಹೊರಡಿ. ನಿಮ್ಮದಾಗಲೇ ಬೇರು ಬಿಟ್ಟ ಸಂಸಾರ. ನಾನು ಈಗ ತಾನೇ ಕಣ್ಣು ಬಿಡ್ತಿದೀನಿ”. ಬೇರೆ ಇನ್ನೇನಾದರೂ ಹೇಳಲೂ ಯಾರಿಗೂ ಯಾವ ಉಪಾಯವೂ ಇಲ್ಲ. ನಮ್ಮ ಹುಬ್ಬಳ್ಳಿಯ ಸಂಸಾರ ಬರೀ ಒಂದು ವಾರದ್ದಾಯಿತು. ಎಲ್ಲರನ್ನೂ ಕಳಿಸಿಕೊಟ್ಟು ಜಗಲಿಯಲ್ಲಿ ನೋಡುತ್ತಾ ನಿಂತಿದ್ದ ಇವರ ಹೆಗಲ ಮೇಲೆ ಮಾವನವರು ಬಂದು ಕೈಯಿಟ್ಟರು. ಇವರು ತಿರುಗಿ ನೋಡುವಾಗ ಅವರಿಂದ ಏನನ್ನೂ ಹೇಳಲಾಗಲಿಲ್ಲ… ಸುಮ್ಮನೆ ತಮ್ಮ ಶಲ್ಯದ ತುದಿಯಿಂದ ಕಣ್ಣೊರಸಿಕೊಂಡರು….. ಅಪ್ಪನನ್ನು ಬಳಸಿ ಹಿಡಿದುಕೊಂಡು ಮನೆಯೊಳಗೆ ಬಂದರು… ಏಕೋ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಥಟ್ಟನೆ ಕಣ್ಣು ಬಿಟ್ಟು ನೋಡಿದರೆ ಆಗಲೇ ಘಂಟೆ ಒಂದೂವರೆ. ಇವರೇನು ಇಷ್ಟು ಹೊತ್ತಾದರೂ ಬರಲಿಲ್ಲ. ಬಾಗಿಲು ತೆರೆದು ಮೆಟ್ಟಿಲ ಕಡೆ ನೋಡಿದರು ಸೀತಮ್ಮ. ಎಲ್ಲೋ ಕೆಳಗಡೆ ಶ್ರೀನಿವಾಸರ ಹತ್ತಿರ ಮಾತಾಡುವ ಶಬ್ದ ಕೇಳಿಸುತ್ತಿದೆ. ಇನ್ನೇನು ಮೇಲೆ ಬಂದಾರು. ಅಷ್ಟರಲ್ಲಿ ಸಾರು ಕೂಡಿಡೋಣ ಎಂದು ಅಡುಗೆ ಮನೆಗೆ ಹೊರಟರು. ಬರೀ ಸಾರಾಯಿತಲ್ಲ ಎಂದುಕೊಂಡು ಸ್ವಲ್ಪ ಸಂಡಿಗೆಯಾದರೂ ಕರೆಯಲೇ ಅಂದುಕೊಂಡವರು, ಇಲ್ಲ ಅದನ್ನು ಧೀರಜನೇ ಮೊದಲು ರುಚಿ ನೋಡಬೇಕು ಎಂದುಕೊಂಡು ಜಾಡಿಯಲ್ಲಿದ್ದ ಉಪ್ಪಿನಕಾಯನ್ನು ಸ್ವಲ್ಪ ತೆಗೆದು ಒಗ್ಗರಣೆ ಹಾಕಿದರು. ತಟ್ಟೆ ಹಾಕುವಷ್ಟರಲ್ಲಿ ರಾಮಣ್ಣನವರೂ ಒಳಗೆ ಬಂದಿದ್ದರು. ಊಟಕ್ಕೆ ಕುಳಿತಾಗ ಕೇಳಿದರು “ಯಾಕಿಷ್ಟು ಹೊತ್ತಾಯಿತು” “ಹಾಗೇ ಬ್ಯಾಂಕಿಗೂ ಹೋಗಿ ಬಂದೆ. ಪಾಸ್ ಬುಕ್ಕನ್ನು ತುಂಬಿಸಿಕೊಂಡು ಬಂದೆ. ವಿಪರೀತ ರಷ್ಷು. ಏನು ಮಾಡೋದು. ಶಂಕರ ಬಂದರೆ ಅವನಿಗೆ ನೋಡಲು ಬೇಕಲ್ಲ” ಎನ್ನುತ್ತಾ ತಟ್ಟೆಗೆ ಕೈಯಿಟ್ಟರು. ಊಟವಾದ ಬಳಿಕ ನಿದ್ರೆ ಬರುತ್ತೋ ಇಲ್ಲವೋ ಅಂತೂ ಒಂದು ಗಂಟೆ ಹೊತ್ತು ಸ್ವಲ್ಪ ಉರುಳಿಕೊಳ್ಳುವ ಅಭ್ಯಾಸ. ಈದಿನ ಎಷ್ಟು ಆಯಾಸವಾಗಿದ್ದರೂ ಸೀತಮ್ಮನಿಗೆ ನಿದ್ರೆ ಬರುತ್ತಿಲ್ಲ. ಏನೋ ಹಳೆಯ ನೆನಪುಗಳು ಬಾಧಿಸುತ್ತಲೇ ಇವೆ… ತಮ್ಮ ಸಂಸಾರ ಊರಗಡೂರಿನಲ್ಲೇ ಮುಂದುವರೆದಾಗ ಸ್ವಲ್ಪ ಬೇಸರವಾದರೂ, ಮಾವನವರೊಬ್ಬರನ್ನೇ ಬಿಟ್ಟು ಹೋಗುವ ಮನಸ್ಸಂತೂ ಆಗಲಿಲ್ಲ. ಗೇಣಿದಾರರ ಗಲಾಟೆಯಲ್ಲಿ ಇದ್ದ ಜಮೀನೆಲ್ಲಾ ಹೋಯಿತು. ಉಳಿದದ್ದು ನಾಲ್ಕೆಕರೆ ತೋಟ ಮತ್ತು ಊರಗಲದ ಮನೆ ಮಾತ್ರ. ದೊಡ್ಡವರಿಬ್ಬರೂ ತಮ್ಮೆಲ್ಲಾ ಪಾಲನ್ನೂ ಇವರಿಗೇ ಬಿಟ್ಟುಕೊಟ್ಟರು. ಹುಟ್ಟಿದ್ದು ಒಬ್ಬನೇ

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ಕಾವ್ಯಯಾನ Read Post »

ಇತರೆ

ವಿಶ್ಲೇಷಣೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ಡಾ.ಗೋವಿಂದ ಹೆಗಡೆ ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ. ‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು ತಿರುಮಲೇಶರ ಮಾತು. ಸಾನೆಟ್ ಗೆ ಬರೋಣ. ಕನ್ನಡದಲ್ಲಿ ಸಾನೆಟ್ಟನ್ನು ಬಳಸಿ, ಬೆಳೆಸಿದವರಲ್ಲಿ ಮಾಸ್ತಿ ,ಬೇಂದ್ರೆ ,ಕುವೆಂಪು, ಪುತಿನ, ಕಣವಿ ಮೊದಲಾದವರಿದ್ದಾರೆ. ಸಾನೆಟ್ ಅನ್ನು ತಮ್ಮ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿಸಿಕೊಂಡು, ಈಗಲೂ ಬರೆಯುತ್ತಿರುವವರಲ್ಲಿ ಎಚ್ಚೆಸ್ವಿ ಪ್ರಮುಖರು.ಹಲವಾರು ವ್ಯಕ್ತಿಚಿತ್ರಗಳನ್ನು ಅಲ್ಲದೆ ಅನೇಕ ಸುಂದರ ನುಡಿಚಿತ್ರಗಳನ್ನು ಅವರು ಸಾನೆಟ್ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾವ್ಯದ ಬಗ್ಗೆ ಕಾವ್ಯ ಕ್ರಿಯೆಯ ನಿಗೂಢತೆ ಅದರ ಮಾಂತ್ರಿಕತೆಯ ಬಗ್ಗೆ ಹಲವು ಕವಿಗಳು ಬರೆದಿದ್ದಾರೆ. ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ ಎಂದ ರಾಮಚಂದ್ರ ಶರ್ಮರ ಸಾಲುಗಳು(ಕವನ), ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ. ಆವರೆಗು ಇದು ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ ಬೀಜ. ಎಂದ ಗಂಗಾಧರ ಚಿತ್ತಾಲರ (ಕವನ) ಮಾತುಗಳು ಈ ಕ್ಷಣದಲ್ಲಿ ನೆನಪಿಗೆ ಬರುವ ಉದಾಹರಣೆಗಳು. ಶಬ್ದವೇಧಿ ಈ ಸಾಲಿಗೆ ಸೇರುತ್ತದೆ. ಇದೊಂದು ಸುನೀತ (ಸಾನೆಟ್). ೪-೪-೪-೨ ಸಾಲುಗಳ ಇಂಗ್ಲಿಷ್/ಶೇಕ್ ಸ್ಪಿಯರ್ ನ ಸಾನೆಟ್ ಗಳ ಮಾದರಿಯದು. “ಆಲಿಬಾಬನ ಗವಿ”-ಒಳಗೆ ನಿಧಿಯಿದೆ- ನಾವು ಕೇಳಿರುವ ಕಥೆ. ಕವಿ ಇಲ್ಲಿ ಅದನ್ನು ಒಂದು ರೂಪಕವಾಗಿ ಬಳಸಿದ್ದಾರೆ. “ಅಲಿಬಾಬಾನ ಗವಿಯ ಮುಂದೆ ನಿಂತಿರುವವರು ನಾವು” ಎಂದು ಆರಂಭವಾಗುವ ಕವಿತೆ ಗವಿಗೆ ‘ ಹೆಬ್ಬಂಡೆ ಬಾಗಿಲು’ಎನ್ನುತ್ತದೆ. ಗವಿಯ ಒಳಗಿದೆಯಂತೆ ಕೊಪ್ಪರಿಗೆ ತುಂಬ ನಿಧಿ. ‘ಇದೆಯಂತೆ’ ಯಾಕೆಂದರೆ ನಾವು ಇನ್ನೂ ಅದನ್ನು ಕಂಡಿಲ್ಲ. ಯಾರೋ ಕಂಡವರು ಹೇಳಿದ್ದಾರೆ. ನಮ್ಮ ದುರ್ದೈವ-‘ಹೊರಗೆ ಉರಿಬಿಸಿಲು, ಬಿರುಗಾಳಿ’ಈ ಮಾತು ಗವಿಯ ಹೊರಗಿನ ಸ್ಥಿತಿಯನ್ನು ಸಹಜವಾಗಿ ಚಿತ್ರಿಸಿದರೂ ಶಕ್ತಿಯುತ ಸಂಕೇತವೂ ಹೌದು. ಕವಿತೆಯ ನಿಧಿ ಸಿಗದ ನಮ್ಮ ವಿಧಿ ದುರ್ವಿಧಿ. ಅದರ ಹೊರಗೆ ಉಳಿದವರಿಗೆ ಇರುವುದು ಉರಿಬಿಸಿಲು ಮತ್ತು ಬಿರುಗಾಳಿ ಮಾತ್ರ. ಅಲಿಬಾಬಾನ ಗವಿಯ ರೂಪಕ ಮುಂದುವರೆಯುತ್ತದೆ. ಬಾಗಿಲು ತೆಗೆಯಲು ಸಂಕೇತ ಪದ ಬೇಕು. ನಮ್ಮ ಸ್ಥಿತಿ ಬೇರೆ. ಸಂಕೇತ ಪದ ಮರೆತು, ಬೇರೇನನ್ನೋ ಬಡಬಡಿಸಿ, ಶಬ್ದಕೋಶ ಹಿಡಿದು,ಹಲವು ಪದಗಳನ್ನು ಜಪಿಸಿ ನೋಡುತ್ತಿದ್ದೇವೆ.’ಕಲ್ಲು ಕರಗುವ ಸಮಯ ಕಾಯುತ್ತ ಕಾಯುತ್ತ’ಈ ಕಾಯುವಿಕೆಯ ತಪಸ್ಸನ್ನು ಗಮನಿಸಿ. ಇಂದಲ್ಲ ನಾಳೆ ಬಾಗಿಲು ತೆರೆದೀತೆನ್ನುವ ಆಶಾಭಾವ ಕಾಯುವಿಕೆಯನ್ನು ಮುಂದುವರಿಸಿದೆ. ಬಾಗಿಲಿದೆ. ಬಾಗಿಲಾಚೆಯ ಗವಿಯಲ್ಲಿ ಅರ್ಥವೂ ಇರಬಹುದು. ‘ಅರ್ಥ’ ಪದದ ಶ್ಲೇಷೆ ತುಂಬ ಸಹಜವಾಗಿ, ಸೊಗಸಾಗಿ ಬಂದಿದೆ.ಅಲಿಬಾಬಾನ ಗವಿಯ ರೂಪಕದಿಂದ ಅರ್ಥಕ್ಕೆ ‘ಸಂಪತ್ತು’ ಎಂಬ ಅರ್ಥ, ಅಭಿಪ್ರಾಯ ತಾನಾಗಿ ಒದಗಿ ಬರುತ್ತದೆ. ಒಳಗೆ ಅರ್ಥವಿರಬಹುದು,ಶಬ್ದಗಳು ಹೊರಗಿವೆ ಎನ್ನುತ್ತದೆ, ಕವಿತೆ. ಇವೆರಡರ ಜೋಡಣೆ-ವಾಗರ್ಥಗಳ “ಪ್ರತಿಪತ್ತಿ”-ಹೇಗೆ? ಒಂದೊಂದು ಪದವನ್ನು ಇಟ್ಟು ಅರ್ಥದ ಬಾಗಿಲನ್ನು ತಟ್ಟುವುದು… ಅದು, ಅಷ್ಟು ಮಾತ್ರ ಸಾಧ್ಯ! “ಏಕಾಗ್ರ ನಿಷ್ಠೆಯಲಿ”ಮತ್ತೆ ತಪದ ಮಾತು. ಯಾವುದು ಈ ಪದವಿಟ್ಟು ಅರ್ಥದ ಅಂತರಂಗವನ್ನು ತೆರೆಯಿಸುವ ಕಾರ್ಯವನ್ನು, ಆ ಪ್ರಯತ್ನವನ್ನು ಬಿಡದೆ ನಡೆಸುವುದು? ಸುನೀತದ ಕೊನೆಯ ಕಪ್ಲೆಟ್, ದ್ವಿಪದಿ, ಯಾವುದನ್ನು ಅಡಿಗ, ಶರ್ಮರು “ಭರತವಾಕ್ಯ” ವನ್ನಾಗಿ ನಿಲ್ಲಿಸುತ್ತಾರೆಂದು ತಿರುಮಲೇಶರು ಹಾಸ್ಯ ಮಾಡುತ್ತಾರೋ ಅಂತಹ ಶಕ್ತಿಯುತ ಜೋಡಿಸಾಲು ಈಗ. ಈ ನಿರಂತರ ಶ್ರಮದ ಹಿಂದೆ ಒಂದೇ ಕೆಚ್ಚು: ನಮ್ಮ ಭಾಷೆಯ ಬಗ್ಗೆ ನಮ್ಮ ಆಳದ ನಚ್ಚು! ಈ ಕೊನೆಯ ಸಾಲು ನನಗೆ ಬೆರಗನ್ನು ತಂದಿದ್ದು. ನಿಜ ಭಾಷೆಯಲ್ಲಿ ಎಲ್ಲ ಕಾವ್ಯ ವ್ಯಾಪಾರ. ಅದು ಅರ್ಥ ನೆಲೆಯ ಅರಿವಿನ ನಿಧಿಯ ಬಾಗಿಲನ್ನು ತೆರೆದೇ ತೆರೆಯುತ್ತದೆ-ಈ ದೃಢನಂಬಿಕೆ ಒಂದೇ ಕೆಲಸವನ್ನು ಮಾಡಲು ಮರಳಿ ಯತ್ನವ ಮಾಡಲು ಹಚ್ಚುವುದು. ಆ ನಚ್ಙು ಇದ್ದವ ಮಾತ್ರ ಕವಿಯಾಗುತ್ತಾನೆ. ಶಬ್ದವನ್ನು ನೆಮ್ಮಿ ಅರ್ಥ ಲಾಭ ಪಡೆಯಲು ಕತ್ತಲಲ್ಲೂ ಬಾಣಪ್ರಯೋಗ ಮಾಡುತ್ತಾನೆ. ತುಂಬ ಎಚ್ಚರದಿಂದ, ನಿಷ್ಣಾತ ಶಿಲ್ಪಿಯ ಮಗ್ನತೆಯಿಂದ ತಮ್ಮ ಕವಿತೆಗಳ ಶರೀರ, ಶಾರೀರಗಳನ್ನು ರೂಪಿಸುವ ಕವಿ ಎಚ್ಎಸ್ವಿ. ನಮ್ಮ ಅರಿವನ್ನು, ಸಂವೇದನೆಯನ್ನು ತಣ್ಣಗೆ ವಿಸ್ತರಿಸುವ,ಎತ್ತರಿಸುವ,ಭಾವಪುಷ್ಟಿಯೊದಗಿಸುವ ಕವಿತೆಗಳು ಅವರವು.ಭಾವೋದ್ರೇಕ ಅವರ ರೀತಿಯಲ್ಲ. ‘ಶಬ್ದವೇಧಿ’ ಅಂಥದೊಂದು ಕವಿತೆ. ಎಚ್ಚೆಸ್ವಿಯವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವನ್ನು ಅಲಂಕರಿಸುತ್ತಿರುವ ಈ ಶುಭ ಅವಸರದಲ್ಲಿ,ಅವರು ಶಬ್ದ ,ಸಂಕೇತಗಳನ್ನು ಬಳಸಿ, ಬೆಳೆಸಿ, ಅರ್ಥದ ಬಾಗಿಲುಗಳನ್ನು ತೆರೆಸುತ್ತಲೇ ಇರಲಿ ಎಂದು ಹಾರೈಸುತ್ತೇನೆ. ======

ವಿಶ್ಲೇಷಣೆ Read Post »

ಕಾವ್ಯಯಾನ

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ ಒಂದು ಹೂ ಹಾಕಲಿಲ್ಲ ನನ್ನವರು ಮಣ್ಣು ಹಾಕಲಿ ಬಿಡು ಸಖಿ ಊರ ಬೀದಿಯಲಿ ಹೊರಟಿದೆ ಬಸವರಸನ ಹೆಣದ ಮೆರವಣಿಗೆ ಮತ್ತೇಕೆ ಕಣ್ಣೀರು ಕೊನೆಗೊಮ್ಮೆ ನಕ್ಕು ಬಿಡು ಸಖಿ ========

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು? ಗಣೇಶಭಟ್ ಶಿರಸಿ ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು?    ಕಳೆದ ವಾರ ಅಂದರೆ 26-12-2019  ರಂದು  ನಡೆದ  ಅಪೂರ್ವ ನೈಸರ್ಗಿಕ ವಿದ್ಯಮಾನ ಸೂರ್ಯಗ್ರಹಣ ಹಲವರ  ಕಣ್ತುಂಬಿಸಿದರೆ,  ಹಲವರು ಭಯದಿಂದ  ಕುಗ್ಗಿ ಹೋದರು. ಸೂರ್ಯನಿಗೆ  ಗ್ರಹಣದಿಂದ  ಬಿಡುಗಡೆ   ದೊರಕಿದರೂ ಜನರ ಬುದ್ಧಿಗೆ  ಹಿಡಿದ  ಗ್ರಹಣ  ಬಿಡುವ ಸೂಚನೆಗಳು ಕಾಣುತ್ತಿಲ್ಲ.   ಆಕಾಶ ಕಾಯಗಳ  ಕುರಿತು,  ಅವುಗಳ ಚಲನೆಯ  ಬಗ್ಗೆ  ಏನೂ ತಿಳಿದಿರದ ಕಾಲಘಟ್ಟದಲ್ಲಿ  ಅಂದರೆ ಸಾವಿರಾರು ವರ್ಷಗಳ ಹಿಂದೆ, ಪ್ರಕೃತಿಯ  ಜೊತೆ ಸಂಘರ್ಷದ  ಜೀವನ ನಡೆಸುತ್ತಿದ್ದ  ಮಾನವರನ್ನು  ಎಲ್ಲಾ ಘಟನೆಗಳೂ ಭಯ ಹುಟ್ಟಿಸುತ್ತಿದ್ದವು.  ಕಾಲ ಸರಿದಂತೆ  ಇಡೀ  ವಿಶ್ವದ  ರಚನೆ, ಆಕಾಶಕಾಯಗಳೂ ಸೇರಿದಂತೆ  ವಿವಿಧ ಅಭಿವ್ಯಕ್ತಿಗಳ ನಡುವಿನ ಸಂಬಂಧವನ್ನು  ಅಂತರ್ಮುಖಿಯಾದ ಮಾನವರು  ಕಂಡುಕೊಂಡರು.  ನೈಸರ್ಗಿಕ  ಆಗು- ಹೋಗುಗಳ ಕುರಿತು  ತಾಳಿದ್ದ  ಅನಗತ್ಯ  ಭಯದಿಂದ  ಹೊರಬಂದು, ಅವಕ್ಕೆ ಕಾರಣಗಳನ್ನು  ಕಂಡು ಹಿಡಿಯಲು  ಪ್ರಯತ್ನಿಸಿದರು.   ಪಾಶ್ಚಾತ್ಯ ದೇಶಗಳು  ಇನ್ನೂ ಅಂಬೆಗಾಲಿಡಲು ಪ್ರಾರಂಭಿಸುವ  ಮೊದಲೇ ಭಾರತದಲ್ಲಿ  ಖಗೋಲಶಾಸ್ತ್ರ ವಿಕಾಸ  ಹೊಂದಿತ್ತು.  ಗಣಿತ ಶಾಸ್ತ್ರವನ್ನು  ಬಳಸಿ ಸೌರಮಂಡಲವೂ ಸೇರಿದಂತೆ  ಉಳಿದ ನಕ್ಷತ್ರಗಳ  ಚಲನೆಯನ್ನು  ನಿರ್ದಿಷ್ಟವಾಗಿ ಊಹಿಸಬಲ್ಲ  ಸಾಮಥ್ರ್ಯ ಭಾರತದಲ್ಲಿ  ಬೆಳೆದಿತ್ತು. ಇಂತಹ ದೇಶದಲ್ಲೇ ಇಂದು  ಅತಿ ಹೆಚ್ಚು ಮೌಢ್ಯ ಪ್ರಚಲಿತವಿರುವುದು ಇತಿಹಾಸದ  ವ್ಯಂಗ್ಯ.    ಗ್ರಹಣ ಕಾಲದಲ್ಲಿ  ಸೂರ್ಯನನ್ನು  ಬರಿಗಣ್ಣಿನಿಂದ  ನೋಡಬಾರದು ಎಂಬುದು  ವಿಜ್ಞಾನ; ಮನೆಯಲ್ಲೇ ಅವಿತುಕೊಂಡು  ಗ್ರಹಣದ  ಪ್ರಭಾವದಿಂದ  ತಪ್ಪಿಸಿಕೊಳ್ಳುತ್ತೇವೆನ್ನುವುದು  ಮೌಢ್ಯ.  ಗ್ರಹಣ ಕಾಲದಲ್ಲಿ  ಊಟ-ತಿಂಡಿ ಮಾಡಬಾರದೆಂಬ ನಂಬಿಕೆ ಇದ್ದವರ ಪಾಡು  ಹೇಳತೀರದ್ದು.  ಗ್ರಹಣ ಪ್ರಾರಂಭವಾಗುವುದಕ್ಕಿಂತ  ಮೊದಲೇ  ತಿನ್ನಬೇಕು ಹಾಗೂ  ಗ್ರಹಣ ಮುಗಿದ  ನಂತರ  ಸ್ನಾನ ಮಾಡಿ,  ತಿಂಡಿ ಸೇವಿಸಬೇಕೆಂದು  ನಂಬುವವರು, ಚಿಕ್ಕಮಕ್ಕಳಿಗೆ , ವೃದ್ಧರಿಗೆ ರಿಯಾಯಿತಿ ನೀಡಿದರೆ  ಅದು ದೊಡ್ಡಸ್ತಿಕೆ.   ನಾಳೆ ಎಷ್ಟೊತ್ತಿಗೆ ತಿಂಡಿ ತಿನ್ನಬೇಕಂತೆ? ಎಷ್ಟೊತ್ತಿಗೆ ಸ್ನಾನ ಮಾಡಬೇಕಂತೆ?  ಎಂದು  ಸುಶಿಕ್ಷಿತರೆನಿಸಿಕೊಂಡವರೂ ಗ್ರಹಣದ ಮೊದಲೇ ಮಾಹಿತಿ ಸಂಗ್ರಹಿಸುತ್ತಿದ್ದರು!   ಗ್ರಹಣದ  ನಂತರ ಮನೆಯಲ್ಲಿ  ಶೇಖರಿಸಿಟ್ಟಿರುವ ನೀರನ್ನು ಚೆಲ್ಲಿ  ಹೊಸ ನೀರು  ತರಬೇಕೆಂದು ನಂಬುವವರು  ಬಾವಿಯ ನೀರನ್ನು  ಬರಿದು  ಮಾಡುತ್ತಾರೆಯೇ?  ನಲ್ಲಿ ನೀರಿಗೆ, ನೀರು  ಪೂರೈಸುವ  ಸಂಗ್ರಹಣಾ ಟ್ಯಾಂಕ್‍ಗಳಿಗೆ  ಈ ನಿಯಮ ಯಾಕೆ ಅನ್ವಯವಾಗದು?   ಮೂಢನಂಬಿಕೆ  ಎಂದರೆ ಹೀಗೆ  ಯಾವುದನ್ನೂ  ತಾರ್ಕಿಕವಾಗಿ   ಯೋಚಿಸದಿರುವುದು. ಗ್ರಹಣದ  ಪರಿಣಾಮದಿಂದ   ಆಗಬಹುದಾದ  ದೋಷಗಳಿಗೆ  ಪರಿಹಾರವೆಂದರೆ  ಬ್ರಾಹ್ಮಣರಿಗೆ  ಧÀನ,  ದಕ್ಷಿಣೆ ನೀಡುವುದು.  ಇದರಿಂದ  ಯಾರದೋ ದೋಷ ಪರಿಹಾರವಾಗುವುದಾದರೆ ಸ್ವೀಕರಿಸಿದವನ ಗತಿ  ಏನಾದೀತು ಎಂದು  ಯೋಚಿಸಬಾರದೇ?     ಬುದ್ದಿಗೆ  ಗ್ರಹಣ  ಹಿಡಿದಾಗ ಸಾರಾಸಾರ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಜಗತ್ತಿನ ನಿಯಾಮಕ, ನಿಯಂತ್ರಕನೇ ಭಗವಂತ ಎಂದು ನಂಬುವವರು, ಕಲ್ಲಿನ ಮೂರ್ತಿಯಲ್ಲೂ ಪರಮಾತ್ಮನಿದ್ದಾನೆ ಎಂದು ಪೂಜಿಸುವವರು, ಗ್ರಹಣ ಕಾಲದಲ್ಲಿ  ದೇವಾಲಯಗಳ  ಬಾಗಿಲು  ಮುಚ್ಚುತ್ತಾರೆ.  ಯಾಕೆಂದರೆ  ಗ್ರಹಣದ  ಮೈಲಿಗೆ, ದೋಷಗಳು  ಭಗವಂತನಿಗೆ ತಟ್ಟಬಾರದು ಎಂದು ದೇವರನ್ನೇ ರಕ್ಷಿಸುವ  ಉದ್ದೇಶಕ್ಕಾಗಿ  ದೇವರ ಮೂರ್ತಿಗಳನ್ನು  ನೀರಿನಲ್ಲಿ  ಮುಳುಗಿಸಿಡುವ ಅಥವಾ ಅಕ್ಕಿಯಲ್ಲಿ ಹೂದಿಡುವ  ಸಂಪ್ರದಾಯವೂ  ಕೆಲವೆಡೆ  ಇದೆ.    ದೇವರಿಗೆ  ತಗುಲಿರಬಹುದಾದ ದೋಷಗಳನ್ನು ಸರಿಪಡಿಸುವವರು, ದೇವಾಲಯಗಳನ್ನು ಶುದ್ಧಿಗೊಳಿಸುವವರು  ಪೂಜಾರಿಗಳು.  ಗ್ರಹಣದ   ಬಿಡುಗಡೆಯ ನಂತರ ವಿಶೇಷ  ಕಾರ್ಯಕ್ರಮಗಳು, ಪೂಜೆ, ಹವನಗಳ ಮೂಲಕ ಪೂಜಾರಿಗಳು ದೇವರನ್ನೂ ಶುದ್ಧ್ಧಗೊಳಿಸುತ್ತಾರೆ.  ಇಂಥ  ಅತಾರ್ಕಿಕ ಆಚರಣೆಗಳನ್ನು  ಹಬ್ಬಿಸಿದಷ್ಟೂ  ಪೂಜಾರಿ  ವರ್ಗಕ್ಕೆ ಲಾಭವೋ ಲಾಭ.      ಗ್ರಹಣ  ಕಾಲದಲ್ಲಿ ಮನೆಯೊಳಗಿದ್ದ ನೀರನ್ನು   ಚಲ್ಲುವವರು  ಹಾಲು, ಮೊಸರು, ತುಪ್ಪ, ಅಕ್ಕಿ, ಕಾಳು, ಬೇಳೆಗಳನ್ನು  ಚೆಲ್ಲುವುದಿಲ್ಲ.  ಅವುಗಳ  ರಕ್ಷಣೆಯ  ಸುಲಭದ   ಪರಿಹಾರವೆಂದರೆ  ತುಳಸಿ ಎಲೆ  ಹಾಕಿದರಾಯಿತು.  ಮನೆಯಲ್ಲಿರುವ  ಒಂದೆರಡು  ಬಟ್ಟೆಯನ್ನು ತೊಳೆದರೆ  ದೋಷ  ಪರಿಹಾರವಾಯಿತು.  ಬೀರುವಿನಲ್ಲಿ ರಾಶಿ ಇರುವ  ಬಟ್ಟೆಗಳಿಗೆ  ಬ್ರಾಹ್ಮಣರು ನೀಡಿದ   ಪಂಚಗವ್ಯ ಸಿಂಪಡಿಸಿದರೆ  ಎಲ್ಲಾ ಮೈಲಿಗೆ  ಓಡಿ ಹೋಯಿತೆಂದು  ನಂಬುವವರೂ ಇದ್ದಾರೆ.    ಇಂತಹ  ಹಲವು ಮೌಢ್ಯಗಳನ್ನು ಬೆಳೆಸಿ, ಉಳಿಸಲು ಕಾರಣರಾದವರು ವಿಪ್ರ ಮನೋಭಾವಿಗಳು. ಅರ್ಥಾತ್  ಬುದ್ದಿ ಜೀವಿಗಳು.  ಎಂದೋ  ಒಂದು ಕಾಲದಲ್ಲಿ  ಅಜ್ಞಾನದಿಂದ ಆಚರಣೆಗೆ  ಬಂದ ವಿಧಿ, ವಿಧಾನಗಳನ್ನು  ಜೀವಂತವಾಗಿಟ್ಟುಕೊಳ್ಳುವುದರಿಂದಲೇ ಆದಾಯ ಗಳಿಸುವ  ವರ್ಗಕ್ಕೆ  ಇದು ಮುಂದುವರಿಯಲೇಬೇಕು. ಅಂಧಶೃದ್ಧೆಗೆ ಬಲಿಯಾದ  ಸಮಾಜ, ತನ್ನ ಅಂತಃಶಕ್ತಿಯನ್ನೇ  ಕಳೆದುಕೊಳ್ಳುತ್ತದೆ.  ಎಲ್ಲೆಡೆ  ದೇವರಿದ್ದಾನೆ ಎಂದು ನಂಬುವುದು ವೈಚಾರಿಕತೆ, ದೇವರು ಇಲ್ಲೇ ಇದ್ದಾನೆ,  ಬೇರೆಡೆ ಇಲ್ಲವೆಂದು ವಾದಿಸುವುದು ಮೌಢ್ಯತೆ. ದೇವಾಲಯಗಳಲ್ಲಿ  ಸ್ಥಾಪಿಸಿದ   ಮೂರ್ತಿಗಳು ಕೆಲವು ಕಾಲದ  ನಂತರ  ತಮ್ಮ  ಶಕ್ತಿ ಕಳೆದುಕೊಳ್ಳುತ್ತವೆಂದು  ನಂಬುವವರಿದ್ದಾರೆ.  ಅಂತಹ ಮೂರ್ತಿಗಳಿಗೆ  ಶಕ್ತಿ  ತುಂಬುವ  ಕಾರ್ಯಕ್ರಮಗಳೂ ನಡೆಯುತ್ತವೆ. ಅದಕ್ಕಾಗಿ ಪುನಃ ಪೂಜಾರಿಗಳು, ಬ್ರಾಹ್ಮಣರು  ಬೇಕೇ ಬೇಕು.  ಅವರು  ನಂಬುವ  ದೇವರಿಗೇ  ಶಕ್ತಿ ನೀಡುವುದು ಬ್ರಾಹ್ಮಣರು. ಅಂದರೆ ದೇವರಿಗಿಂತ ಬ್ರಾಹ್ಮಣರೇ ಹೆಚ್ಚು ಶಕ್ತಿಶಾಲಿಗಳೆಂದಾಯಿತು.  ಇಂತಹ ಅಬದ್ಧ , ಅತಾರ್ಕಿಕ ವಿಚಾರಗಳನ್ನು  ಸಹಸ್ರಾರು  ವರ್ಷಗಳಿಂದಲೂ  ಜನರ ತಲೆಯಲ್ಲಿ ತುಂಬಲಾಗಿದೆ.    ಭಾರತದ ಎಲ್ಲಾ ಸಮಸ್ಯೆಗಳಿಗೆ   ಶ್ರೇಣೀಕೃತ  ಜಾತಿ ವ್ಯವಸ್ಥೆಯೇ ಕಾರಣವೆಂದು  ವಾದಿಸುವವರಿದ್ದಾರೆ.  ಅಂಥವರಲ್ಲಿ  ಹಲವರ  ಉದ್ದೇಶ  ಸಮಾಜದಲ್ಲಿ ವೈಮನಸ್ಸು ಬೆಳೆಸಿ, ತಮ್ಮ ಸ್ವಾರ್ಥ ಸಾಧನೆ ಮತ್ತು ಪ್ರತಿಷ್ಠೆ  ಬೆಳೆಸಿಕೊಳ್ಳುವುದೇ ಆಗಿದೆ.  ಯಾಕೆಂದರೆ ಅದರ ಆಕ್ರೋಶ ಬ್ರಾಹ್ಮಣ ಜಾತಿಯ ವಿರುದ್ಧ ಇರುತ್ತದೆಯೇ  ಹೊರತು  ಜನರ ಮನದಲ್ಲಿ  ತುಂಬಿರುವ   ಮೌಢ್ಯವನ್ನು ,  ಮೂಢನಂಬಿಕೆಯನ್ನು ಕಿತ್ತೆಸೆಯುವುದಲ್ಲ.   ಬುದ್ಧಿ ಜೀವಿಗಳೆಂಬವರು ಎಲ್ಲಾ ಜಾತಿಗಳಲ್ಲೂ  ಇದ್ದಾರೆ.  ಅವರಲ್ಲೂ ಒಳ್ಳೆಯವರೂ ಇದ್ದಾರೆ. ಸ್ವಾರ್ಥಿಗಳೂ ಇದ್ದಾರೆ.  ಯಾವುದೇ  ವ್ಯಕ್ತಿಯನ್ನು  ಅಥವಾ ಮನೋಭಾವಿಯನ್ನು 100%  ಒಳ್ಳೆಯವ ಅಥವಾ ಕೆಟ್ಟವ ಎಂದು ವರ್ಗಿಕರಿಸುವುದು ಅವಾಸ್ತವ.  ಶೂದ್ರ, ಕ್ಷತ್ರಿಯ, ವಿಪ್ರ, ವೈಶ್ಯ  ಮನೋಭಾವಿಗಳಲ್ಲಿ (ಭಗವದ್ಗೀತೆಯಲ್ಲಿ ವಿವರಿಸಿರುವ  ಚತುರ್ವಣಗಳು) ಒಳ್ಳೆಯತನವೂ ಇರುತ್ತದೆ.    ಸ್ವಾರ್ಥ, ದುಷ್ಟತನಗಳೂ ಇರುತ್ತವೆ.  ತಮ್ಮ ಪ್ರಭಾವವನ್ನು  ಹೆಚ್ಚಿಸಿಕೊಳ್ಳುವ ಸ್ವಾರ್ಥದಿಂದಾಗಿ, ಅವರೊಳಗಿನ  ದುಷ್ಟ ಬುದ್ಧಿ ಮೆರೆಯುತ್ತದೆ.  ಜನಸಾಮಾನ್ಯರಲ್ಲಿ  ಮೂಢನಂಬಿಕೆ  ಬೆಳೆಸುವ ,  ಅಂಧ  ಶೃದ್ಧೆ ಹೆಚ್ಚಿಸುವ,  ಜನರ ಬುದ್ಧಿಗೆ  ಗ್ರಹಣ  ಹಿಡಿಸುವುದರಿಂದ  ಅವರು ತಮ್ಮ ಸ್ವಾರ್ಥ ಸಾಧಿಸುತ್ತಾರೆ.     ರಾಜನಿಗಾಗಿ  ದುಡಿಯುವುದು, ರಾಜನ ರಕ್ಷಣೆಗಾಗಿ ಕಾದಾಡಿ,  ಪ್ರಾಣ ಕಳೆದುಕೊಳ್ಳುವುದು ಮಹತ್ಕಾರ್ಯವೆಂದು ನಂಬಿಸಿದಾಗ ಸೈನ್ಯದ ಮನೋಬಲ ಹೆಚ್ಚಾಗುತ್ತದೆ. ಆಧುನಿಕ  ಸಮಾಜದಲ್ಲಿ  ರಾಜನ ಸ್ಥಾನದಲ್ಲಿ  ರಾಜಕೀಯ  ನಾಯಕರನ್ನು ಕೂಡ್ರಿಸಲಾಗಿದೆ. ರಾಜ್ಯದ  ಬದಲು ದೇಶ ಬಂದಿದೆ. ದೇಶವನ್ನು  ರಕ್ಷಿಸುತ್ತೇವೆಂದು ನಂಬಿರುವವರು ರಕ್ಷಣೆ  ನೀಡುತ್ತಿರುವುದು, ಜನರನ್ನು  ಆರ್ಥಿಕ  ಶೋಷಣೆಗೆ ಒಳಪಡಿಸುವ ,  ಶ್ರೀಮಂತರಿಗೆ , ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ  ರಾಜಕಾರಣಿಗಳಿಗೆ  ಹಾಗೂ ಅಧಿಕಾರಿಗಳಿಗೇ  ಹೊರತು  ಜನಸಾಮಾನ್ಯರಿಗಲ್ಲ.  ಈ ವಾಸ್ತವ ನಮ್ಮ ಸೈನಿಕರಿಗೆ,  ಪೋಲೀಸರಿಗೆ  ಅರ್ಥವಾದರೆ ,  ಇಡೀ ವ್ಯವಸ್ಥೆಯಲ್ಲಿ  ಮಹತ್ತರ ಬದಲಾವಣೆಯಾಗುತ್ತದೆ.    ಆಂಗ್ಲ ಮಾಧ್ಯಮದಲ್ಲಿ  ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆ, ಬದುಕಿನಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂಬುದು ಒಂದು  ಮೌಢ್ಯ. ಈ ಮೌಢ್ಯಕ್ಕೆ  ಸಿಲುಕಿದ   ಪಾಲಕರು ತಮ್ಮ ಮಕ್ಕಳ   ನೈಸರ್ಗಿಕ ಸಾಮಥ್ರ್ಯವನ್ನು , ಆತ್ಮವಿಶ್ವಾಸವನ್ನು  ಹಿಸುಕಿ ಹಾಕುತ್ತಿದ್ದಾರೆಂಬುದು  ವಾಸ್ತವ. ಮಾತೃಭಾಷೆಯ ಕುರಿತಾದ  ಅವಜ್ಞೆ, ಅವಹೇಳನ,  ತಿರಸ್ಕಾರಗಳಿಂದ  ವ್ಯಕ್ತಿಯ ಆಂತರಿಕ  ಬೆಳವಣಿಗೆ  ಕುಂಠಿತವಾಗುತ್ತದೆಂದು  ಅರಿಯಲಾರದಷ್ಟು ಅವರ ಬುದ್ಧಿ ಗ್ರಹಣ ಗ್ರಸ್ತವಾಗಿರುತ್ತದೆ.     ಶಿಕ್ಷಣ ವ್ಯವಸ್ಥೆಯ  ಆಧುನೀಕರಣದ ನೆಪದಲ್ಲಿ  ಮಾಹಿತಿ  ತುರುಕುವ , ಆಡಂಬರದ ಶಿಕ್ಷಣ ಪದ್ಧತಿಗಳು, ಸಂಸ್ಥೆಗಳು ಹಾಗೂ ಪದ್ಧತಿಗಳಿಂದಾಗಿ ಮಾನಸಿಕ ಗುಲಾಮರನ್ನು  ತಯಾರಿಸುತ್ತಿದ್ದೇವೆಂಬ ವಾಸ್ತವವನ್ನು ಸಮಾಜ ಗಮನಿಸಿಲ್ಲ.  ಹದಿನೈದು ವರ್ಷಗಳ ಕಾಲ  ಅಧ್ಯಯನ  ನಡೆಸಿ,  ಪದವಿ ಪಡೆದ ನಂತರವೂ ತನ್ನ ಕಾಲ  ಮೇಲೆ ತಾನು ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸವೇ  ಇಲ್ಲದ ಯುವ ಜನಾಂಗ  ಈ ದೇಶದಲ್ಲಿ  ರೂಪುಗೊಳ್ಳಲು  ಬುದ್ಧಿಗೆ  ಗ್ರಹಣಗ್ರಸ್ತರಾದ  ಶಿಕ್ಷಣ ತಜ್ಞರೆನಿಸಿಕೊಂಡವರು,  ರಾಜಕಾರಣಿಗಳೇ ಕಾರಣ.    ಇವರೆಲ್ಲರನ್ನೂ ನಿಯಂತ್ರಿಸುವವರು  ಭ್ರಷ್ಟ  ಬಂಡವಾಳಶಾಹಿಗಳು  ಎಂಬುದು  ಸುಲಭದಲ್ಲಿ   ಇವರಿಗೆ ಅರ್ಥವಾಗುವುದಿಲ್ಲ.  ಕಂಪನಿಗಳ ಲಾಭ ಹೆಚ್ಚಳಕ್ಕಾಗಿ ಅಹರ್ನಿಶೆ ದುಡಿಯಬಲ್ಲ ತಂತ್ರಜ್ಞರನ್ನು,  ಪದವಿಧರರನ್ನು    ಉತ್ಪಾದಿಸುವ  ಕೇಂದ್ರಗಳಾಗಿ  ನಮ್ಮ ಶಿಕ್ಷಣ ಸಂಸ್ಥೆಗಳು  ರೂಪುಗೊಂಡಿವೆ.  ಇವಕ್ಕೆ ಸಾರ್ವಜನಿಕ ಬೊಕ್ಕಸದಿಂದಲೇ ಹಣ ನೀಡಲಾಗುತ್ತಿದೆ.  ಸರ್ವರಿಗೂ ಶಿಕ್ಷಣ, ಹೆಚ್ಚೆಚ್ಚು ಜನರಿಗೆ ಉನ್ನತ  ಶಿಕ್ಷಣ  ನೀತಿಯೆಂಬುದು  ಬಂಡವಾಳಶಾಹಿಗಳ  ಬೊಕ್ಕಸ ತುಂಬಲು, ಬೌದ್ಧಿಕ  ದುಡಿಮೆ ಗಾರರನ್ನು  ತಯಾರಿಸುವ  ಕಾರ್ಖಾನೆಗಳಾಗಿವೆ  ಎಂಬುದು  ರಾಜಕೀಯ ಪಕ್ಷಗಳ   ಅಂಧಾಭಿಮಾನಿಗಳಿಗೆ  ಅಂದರೆ ಬುದ್ಧಿ ಗ್ರಹಣಗ್ರಸ್ತರಾದವರಿಗೆ ಅರ್ಥವಾಗುವುದಿಲ್ಲ.   ದೈಹಿಕ  ಶ್ರಮವೆಂದರೆ  ಕನಿಷ್ಠ,  ಬೌದ್ಧಿಕ ಶ್ರಮವೇ ಶ್ರೇಷ್ಠವೆಂಬ ಅತಾರ್ಕಿಕ, ಅಪಾಯಕಾರಿ ಚಿಂತನೆಯಿಂದ  ಪ್ರೇರಿತವಾದ  ಶಿಕ್ಷಣ ಪದ್ಧತಿ, ವೇತನ ನಿಗದಿಪಡಿಸುವ  ನೀತಿಯ ಅನುಕರಣೆಗಳಿಂದಾಗಿ , ಭಾರತೀಯ  ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಆಗುತ್ತಿರುವ  ಏರುಪೇರುಗಳನ್ನು ತಿಳಿಯಲಾರದಷ್ಟು,  ಸರಿಪಡಿಸಲಾರದಷ್ಟು ಬೌದ್ಧಿಕ  ಗ್ರಹಣಗ್ರಸ್ತರಾಗಿದ್ದಾರೆ ನಮ್ಮ ನಾಯಕರು ಹಾಗೂ ತಜ್ಞರು.    ದೊಡ್ಡ ಕಂಪನಿಗಳು, ಹೆಸರಾಂತ ಬಂಡವಾಳಶಾಹಿಗಳಿಂದಲೇ ಉದ್ಯೋಗ ಸೃಷ್ಟಿಯಾಗುತ್ತದೆಂದು, ಅವರಿಂದಲೇ ಸಮಾಜದ ಉದ್ಧಾರವೆಂದು  ಹಲವರು ನಂಬಿಕೊಂಡಿದ್ದಾರೆ.  ಇಂತಹ ಕಂಪನಿಗಳು ಅಥವಾ ಅವರ  ಮಾಲೀಕರುಗಳು ಹುಟ್ಟುವ  ಶತಮಾನಗಳ  ಮೊದಲೇ , ಭಾರತ  ಜಗತ್ತಿನ  ಅತಿ  ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದನ್ನು   ಮರೆಯುವಷ್ಟು ಜನರ ಬುದ್ಧಿಗೆ ಗ್ರಹಣ ಹಿಡಿದಿದೆ.  ಅಭಿವೃದ್ಧಿಯ  ಹೆಸರಿನಲ್ಲಿ   ಶ್ರೀಮಂತಿಕೆಯ  ನಡುಗಡ್ಡೆಗಳು ಸೃಷ್ಟಿಯಾಗುತ್ತಿರುವಾಗ,  ಪ್ರಾಚೀನ ಕಾಲದಿಂದಲೂ ಭಾರತದ ಮೂಲೆ ಮೂಲೆಯೂ ಸಮೃದ್ಧವಾಗಿದ್ದುದಕ್ಕೆ  ಕಾರಣಗಳನ್ನು ಅಧ್ಯಯನ ಮಾಡಲಾರದಷ್ಟು ಮೌಢ್ಯತೆ ಆವರಿಸಿದೆ.     ಜನಾಂಗೀಯ ಶ್ರೇಷ್ಠತೆಯ ಒಣಹಮ್ಮಿನಿಂದ,  ಮತಾಂಧತೆಯ ಭ್ರಮೆಯಲ್ಲಿ,  ಪ್ರಾದೇಶಿಕ  ಸಂಕೋಲೆಯಲ್ಲಿ  ಸಿಲುಕಿದವರಿಂದ ಇಡೀ ಮಾನವ ಕುಲದ ಸುಖ, ಶಾಂತಿಗಳು  ಕದಡಿ ಹೋಗಿವೆ.  ಸಾಮಾಜಿಕ , ಆರ್ಥಿಕ , ಸಾಂಸ್ಕøತಿಕ, ಶೈಕ್ಷಣಿಕ ಎಲ್ಲಕ್ಕೂ  ಮಿಗಿಲಾಗಿ ಆಧ್ಯಾತ್ಮಿಕ  ಕ್ಷೇತ್ರಗಳಲ್ಲಿ  ಸಮಂಜಸವಾಗಿ  ಯೋಚಿಸಲಾರದಷ್ಟು ಗ್ರಹಣಗ್ರಸ್ತರಾದವರೇ  ಬಹಳ. ಬುದ್ಧಿಗೆ  ಹಿಡಿದಿರುವ  ಗ್ರಹಣವನ್ನು  ಬಿಡಿಸಲು ಸಮಗ್ರ ಪರಿವರ್ತನೆಯ   ಸೂತ್ರವೇ ಬೇಕು.     ಪ್ರವಚನ ಅಥವಾ ಭಾಷಣದಿಂದ ಬುದ್ಧಿಗೆ ಹಿಡಿದ ಗ್ರಹಣ ಬಿಡಿಸಲು ಸಾಧ್ಯವಾಗದು. ಪ್ರಾಚೀನ  ಭಾರತದಲ್ಲಿ  ಪ್ರಚಲಿತವಿದ್ದ, ಸುಮಾರು  ಏಳು ಸಾವಿರ  ವರ್ಷಗಳ ಹಿಂದೆ, ಭಗವಾನ್  ಸದಾಶಿವನಿಂದ  ಪರಿಷ್ಕರಿಸಲ್ಪಟ್ಟ ವಿದ್ಯಾ ತಂತ್ರ ಸಾಧನೆಯೇ ಈ ಸಮಸ್ಯೆಗೆ ದಿವ್ಯೌಷಧ. ವಿದ್ಯಾತಂತ್ರವೆಂದರೆ  ಅಂತರ್  ಮುಖಿಯಾಗಿ ಮನಸ್ಸನ್ನು ಏಕಾಗ್ರಗೊಳಿಸಿ, ವಿಶ್ವ ಚೈತನ್ಯದಲ್ಲಿ  ಒಂದಾಗಿಸುವ  ಸರಳ ಕ್ರಿಯೆ.  ವಿದ್ಯಾತಂತ್ರ ಸಾಧನೆ  ಎಂಬುದು ವೈಜ್ಞಾನಿಕ  , ತಾರ್ಕಿಕ,  ಮಾನಸಿಕ ಕ್ರಿಯೆ. ಇದಕ್ಕೆ   ಸ್ತ್ರೀ, ಪುರುಷ ಎಂಬ ಭೇದಭಾವ ಇಲ್ಲ.  ಪ್ರತಿಯೋರ್ವ  ವ್ಯಕ್ತಿಯೂ ತನ್ನ ದೈನಂದಿನ ಬದುಕಿನಲ್ಲಿ  ಪಾಲಿಸ ಬಹುದಾದ ಸರಳ ವಿಧಾನ; ಪ್ರಾಕೃತಿಕ  ವಿಕಾಸಕ್ರಿಯೆಗೆ   ಪೂರಕವಾದ   ಮಾನವ  ಪ್ರಯತ್ನ. ದಾರ್ಶನಿಕರ  ಶಬ್ದಗಳಲ್ಲಿ    ಹೇಳುವುದಾದರೆ ತನ್ನನ್ನು ತಾನು ಅರಿಯುವ , ತನ್ನ ಮೂಲ ಸ್ವರೂಪವನ್ನು ತಿಳಿಯುವ  ಪ್ರಯತ್ನ, ಆಧ್ಯಾತ್ಮ ಸಾಧನೆಯ ಪಥ. ಯಾವುದೇ ಬಾಹ್ಯಾಡಂಬರಗಳಿಲ್ಲದ, ಯಾವ ಬಾಹ್ಯ  ವಸ್ತುವನ್ನೂ ಅವಲಂಬಿಸಿರದ,  ಮನಸ್ಸಿನ ಅಂಧಕಾರವನ್ನು ದೂರೀಕರಿಸುವ ಮಾನಸಿಕ  ಪ್ರಕ್ರಿಯೆಯೇ ವಿದ್ಯಾತಂತ್ರ ಸಾಧನೆ.  ಇದಕ್ಕೆ  ಬೇಕಾದುದು ಮಾನವ  ದೇಹ ಮಾತ್ರ.     ವಿದ್ಯಾತಂತ್ರ ಸಾಧನೆಗಾಗಿ ಬದುಕಿನಿಂದ   ವಿಮುಖರಾಗುವ,  ನಾಡು ಬಿಟ್ಟು ಕಾಡು    ಕಾಣುವ , ಮನೆ ಬಿಟ್ಟು ಮಠ ಸೇರುವ, ಸಂಸಾರ ತ್ಯಜಿಸಿ  ಖಾವಿ ಧರಿಸುವ  ಅಗತ್ಯವೂ ಇಲ್ಲ.  ಬದುಕಿನ  ಭಾಗವಾಗಿಯೇ ತಂತ್ರಸಾಧನೆಯನ್ನು  ಅನುಸರಿಸಲು ಸಾಧ್ಯವಿದೆ.    ಆದರೆ ಒಪ್ಪೊತ್ತಿನ ಊಟಕ್ಕಾಗಿ  ಪರದಾಡುವ  ವ್ಯಕ್ತಿಗೆ  ಆಧ್ಯಾತ್ಮ ಸಾಧನೆಯ  ವಿಚಾರ ಹೇಳುವುದು ಕ್ರೂರ ವ್ಯಂಗವೇ  ಸರಿ.  ಭವಿಷ್ಯದ ಕುರಿತು ಭಯಭೀತನಾದ ವ್ಯಕ್ತಿ ಬದುಕಿನಲ್ಲಿ  ಅಭದ್ರತೆ  ಕಾಡುತ್ತಿರುವಾಗ ಸಹಜವಾಗಿ ಮೂಢನಂಬಿಕೆಗಳ ದಾಸನಾಗುತ್ತಾನೆ/ಳೆ.  ಆದ್ದರಿಂದ ಪ್ರತಿಯೋರ್ವ  ವ್ಯಕ್ತಿಗೂ ಜೀವನದ ಭದ್ರತೆ  ಕಲ್ಪಿಸಬೇಕಾದುದು ಸಮಾಜದ ಹೊಣೆಗಾರಿಕೆ.  ಅರ್ಥಾತ್   ಸರ್ಕಾರದ  ಜವಾಬ್ದಾರಿ.  ಸರ್ಕಾರದ  ಅನುದಾನ ಅಥವಾ  ರಾಜಕೀಯ ಪಕ್ಷಗಳ  ಭರವಸೆಯಿಂದ  ಜೀವನದ  ಭದ್ರತೆ ನೀಡಲು ಸಾಧ್ಯವಾಗದು.  ಪ್ರತಿಯೋರ್ವ  ವ್ಯಕ್ತಿಗೂ  ದುಡಿಮೆಯ ಅವಕಾಶ, ದುಡಿಮೆಯ ಪ್ರತಿಫಲದಿಂದ  ತನ್ನ ಹಾಗೂ ಅವಲಂಬಿತರ  ಜೀವನದ  ಕನಿಷ್ಠ 

ಪ್ರಸ್ತುತ Read Post »

ಅನುವಾದ

ಅನುವಾದ ಸಂಗಾತಿ

ಮಹಮೂದ್ ದಾರ್ವೀಶ್ ಪ್ಯಾಲೆಸ್ತಿನ್ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಈಗ, ನೀನು ಎಚ್ಚರಗೊಂಡಂತೆ…” ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದುಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?ಕನಸುಗಾರರು ಕನಸುಗಳ ತೊರೆಯುವುದಿಲ್ಲಕನಸಿನೊಳಗಿನ ತಮ್ಮ ಜೀವನವನ್ನು ಅವರು ಧಗಧಗನೆ ಮುಂದುವರಿಸುವರುನಿನ್ನ ಕನಸನ್ನು ಒಂದು ಜಾಗದಲ್ಲಿ ಹೇಗೆ ಬಾಳಿದೆ ಹೇಳು,ನೀನು ಯಾರೆಂದು ನಾನು ಹೇಳುವೆ. ಈಗ ನೀನು ಎಚ್ಚರಗೊಂಡಂತೆನಿನ್ನ ಕನಸಿಗೆ ನೀನೇನಾದರೂ ಅಪಚಾರ ಮಾಡಿದ್ದರೆ, ನೆನಪಿಸಿಕೊ.ಮಾಡಿದ್ದು ಹೌದಾದರೆ ಹಂಸದ ಅಂತಿಮ ನೃತ್ಯವ ನೆನಪಿಸಿಕೊ. ********************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು ಮೆದುಳಿಂದ ಕೇಳಿಸಿಕೊಳ್ಳುತ್ತಾರೆ ಅವರು ಕೆಲವರು ಮಾತ್ರ ಒಡಲಿಂದ ಮಾತು ಮಾತ್ರ ಮರಳುತ್ತದೆ ಆಡಿದ ಮರುಕ್ಷಣ ಮೌನಕ್ಕೆ ಗೂಡಿಗೆ ಮರಳುವ ಹಕ್ಕಿ ಮತ್ತೆ ಎದ್ದಾಗ ಅದು ಅದೇ ಮೌನವೇ ಮಾತು ಅದೇನೇ ಬಣ್ಣ ಬೆಳಕು ಆಡಲು ಬೇಕು ಕತ್ತಲ ಭಿತ್ತಿ ಮಾತಿಗೆ ಮೌನ ಬೆಳೆ ಬೆಳೆದಂತೆಲ್ಲಾ ಅದು ಕಡಲಿಂದ ಆವಿ ಎದ್ದು ಮೋಡವಾಗಿ ಮಳೆ ಸುರಿದು ಮತ್ತೆ ಕಡಲನು ಕೂಡಿ ತಾಸು ತಾಸು ಸನಿಹವಿದ್ದೂ ಮಾತೇ ಆಡದ ಉಲ್ಲಾಸ ತನ್ನ ನಗೆಯಿಂದಲೇ ಎಷ್ಟೋ ನುಡಿದಂತೆ ಥಟ್ಟನೆ ಎದ್ದು ಹೊರಟೇ ಹೋದಾಗಲೂ ಉಳಿದೇ ಇರುವಂತೆ ಪರಿಮಳ- ಮಾತಿಲ್ಲದೆ. ಮೌನದಲ್ಲಿ ನಿರುಮ್ಮಳತೆಯನ್ನು ಶಬ್ದದಲ್ಲಿ ನಿರರ್ಥಕತೆಯನ್ನು ಹುಡುಕಿ ಹೊರಟಾಗಲೂ ಅದು ಇದ್ದೇ ಇರುತ್ತದೆ ಕಾಗೆ ಕಾ ಎಂದರೂ ಎನ್ನದಿದ್ದರೂ ಕಂಠವನ್ನು ಅದುಮಿ ಹಿಡಿದಾಗಲೂ ಕಿಟಕಿ ತೆಗೆದಾಗಲೂ ಮುಚ್ಚಿದಾಗಲೂ ಅಲ್ಲಿ ರಾಕೆಟ್ ಮೇಲೆ ಆ ಕಡೆ ಈ ಕಡೆ ಆಡುತ್ತ ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಬಶೀರ್ ಬದ್ರ್ ಉರ್ದು ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು” ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲುಮರುಕ ಬಾರದೇ ನಿನಗೆ ಕೇರಿಗಳ ಸುಟ್ಟುಹಾಕಲು ಈ ಹೆಂಡದಂಗಡಿಯಲ್ಲಿ ಬಟ್ಟಲುಗಳು ಮುರಿಯುತ್ತವೆಋತುಗಳು ಬರುತಿರಲು ಋತುಗಳು ಹೋಗುತಿರಲು ಮಿಡಿವ ಎಲ್ಲ ಕಲ್ಲುಗಳಿಗೂ ಜನ ಹೃದಯ ಎಂದಿದ್ದಾರೆಆಯುಷ್ಯವೇ ಕಳೆದು ಹೋಗುತ್ತದೆ ಎದೆಯ ಹೃದಯವಾಗಿಸಲು ಪಾರಿವಾಳದ ಕಷ್ಟ ಏನೆಂದರೆ ಕೇಳಲಾಗದು ಅದುಯಾರೋ ಅದರ ಗೂಡಲ್ಲಿ ಹಾವನಿಟ್ಟಿರಲು ಬೇರೆ ಹುಡುಗಿ ಬಾಳಿನಲ್ಲಿ ಬರುವುದೇನೋ ನಿಜಎಷ್ಟು ಕಾಲ ಬೇಕಾಗುವದು ಅವಳ ಮರೆತುಬಿಡಲು ********* लोग टूट जाते हैं एक घर बनाने मेंतुम तरस नहीं खाते बस्तियाँ जलाने में और जाम टूटेंगे इस शराब-ख़ाने मेंमौसमों के आने में मौसमों के जाने में हर धड़कते पत्थर को लोग दिल समझते हैंउम्रें बीत जाती हैं दिल को दिल बनाने में फ़ाख़्ता की मजबूरी ये भी कह नहीं सकतीकौन साँप रखता है उस के आशियाने में दूसरी कोई लड़की ज़िंदगी में आएगीकितनी देर लगती है उस को भूल जाने में

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

 ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲುನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತುಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದಅವನು ಅವಳಿಗೆ ವಾಪಸಾಗಿದ್ದ“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”ಅಪ್ಪ ನನ್ನ ಅಣ್ಣ ಅಂತ ಕರೆಯೋದು“ಅಪ್ಪಾ, ನಾಳೆ ಕ್ರಿಸ್ಮಸ್”.“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!“ನನ್ನ ತೋಳಿನ ಮೇಲೆ ಚೆಗೆನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನುನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದನನ್ನಪ್ಪ ಅವನ ತೋಳಿನ ಮೇಲೆ ಒರಗಿದ“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ. ********

ಅನುವಾದ ಸಂಗಾತಿ Read Post »

ಇತರೆ

ಅಕ್ಷರದ ಅವ್ವ

ಸಾವಿತ್ರಿಬಾಯಿ ಪುಲೆ ಕೆ.ಶಿವು ಲಕ್ಕಣ್ಣವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ..! ಇಂದು ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ ಹುಟ್ಟಿದ ದಿನ. ಆ ಕಾರಣವಾವಾಗಿ ಈ ಲೇಖನ ಸ್ಮರಣೆ… ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು ಅವರು… ಸಾವಿತ್ರಿಬಾಯಿ ಫುಲೆ ೧೮೩೧ರ ಜನೆವರಿ ೩ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾ ಫುಲೆಯವರನ್ನು ಲಗ್ನವಾದರು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು… ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು… ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ನಿಯಮವಿತ್ತು. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು. ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿಬಾಯಿ ಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ,‌ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿತು. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು ಸಾವಿತ್ರಿಬಾಯಿ ಪುಲೆ… ೧೮೫೪ರಲ್ಲಿ ಸಾವಿತ್ರಿಬಾಯಿಯವರು ‘ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು ೧೯ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು’ಅಭಂಗ್’ ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ. ಅವರ ಎರಡನೇಯ ಕೃತಿ ‘ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) ೧೮೯೧ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ. ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ೧೮೯೨ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ… ೧) ಕಾವ್ಯಫೂಲೆ (ಕಾವ್ಯ ಅರಳಿದೆ)-೧೮೫೪. ೨) ಆತ್ಮಕಥೆ. ೩) ಭವನಕಾಶಿ ಸುಬೋಧ ರತ್ನಾಕರ್ (ಮುತ್ತುಗಳ ಸಾಗರ)-೧೮೯೧. ೪) ಜ್ಯೋತಿಬಾ ಅವರ ಭಾಷಣಗಳು -೧೮೯೨. ೫) ಕರ್ಜೆ(ಸಾಲ). ಹೀಗೆ ಸಾಗುತ್ತದೆ ಇವರ ಪುಸ್ತಕ ಪ್ರಕಟಣೆಗಳು… ಜ್ಯೋತಿಬಾ ಅವರ ತತ್ವ್ತ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನೀಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ. ಮುಂದೆ ಫುಲೆ ದಂಪತಿಗಳು ೧೮೭೪ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ತೆಗೆದುಕೊಂಡರು. ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. ೧೮೬೩ರಲ್ಲಿ ಅನಾಥ ಮಕ್ಕಳಿಗಾಗಿ ಶಿಶು ಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ… ಶಿಕ್ಷಣದ ಹಕ್ಕು, ಸರ್ವಶಿಕ್ಷಣ ಅಭಿಯಾನ ಬಿಸಿಯೂಟದ ಯೋಜನೆಗಳನ್ನು ಕ್ರಾಂತಿಕಾರಿ ಯೋಜನೆಗಳೆಂದು ಕೊಂಡಾಡಲಾಗುತ್ತಿದೆ. ೧೫೦ಕ್ಕೂ ಹೆಚ್ಚು ವರ್ಷಗಳ ಹಿಂದಿಯೇ ಸಾವಿತ್ತಿಬಾಯಿ ಶಾಲೆಯನ್ನು ತೊರೆದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು. ೧೮೬೦ರ ದಶಕದಲ್ಲಿ ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹ ಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು. ಸಾವಿತ್ರಿಬಾಯಿ ‘ಸತ್ಯೋಧಕ’ ಸಮಾಜದ ಅಧ್ಯಕ್ಷೆಯಾಗಿದ್ದರು. ೧೯ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೇ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸುತ್ತಿದ್ದರು. ಅಲ್ಲದೇ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿಯಾಗಿದೆ… ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು… ೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳೆಯದ ಶಾಲೆ ಸ್ಥಾಪನೆ. ೧೮೬೮ ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟು ಕೊಟ್ಟರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದದ್ದು. ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದಿದ್ದು ಸಾವಿತ್ರಿಬಾಯಿಯವರ ಹಿರಿದು ಸಮಾಜ ಸೇವೆಯಾಗಿದೆ… ಶಿಕ್ಷಣ ಕೇತ್ರದಲ್ಲಿನ ಸಾಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಫುಲೆ ದಂಪತಿಗಳಿಗೆ ಸನ್ಮಾನಗಳು ನಡೆದವು. ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿತು… ಈ ಗಣ್ಯರ ದೃಷ್ಠಿಯಲ್ಲಿ ಸಾವಿತ್ರಿಬಾಯಿ ಫುಲೆಯವರು ಹೀಗೆ ಕಂಡರು– ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ– ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ. ಮುಖೇಶ್ ಮಾನಸ್ – ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದೂ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಮೃದುವರ್ಮ– ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ. ಗೋವಂಡೆ – ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ..! ಹೀಗೆ ಕಂಡರು ಗಣ್ಯರು… ಇಂತಹ ಸಾವಿತ್ರಿಬಾಯಿ ಪುಲೆಯವರು ೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು… ಹೀಗೆಯೇ ಸಾವಿತ್ರಿಬಾಯಿ ಪುಲೆಯವರ ಶಿಕ್ಷಣ ಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿ ನಡೆದಿತ್ತು ಆಗಲೇ… ********

ಅಕ್ಷರದ ಅವ್ವ Read Post »

You cannot copy content of this page

Scroll to Top