ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕ್ಷಮಿಸದಿರಿ ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ. ವಿಜಯಶ್ರಿ ಹಾಲಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆಬೆಂದ ನರಳಿದ ನೊಂದಅಳಿಲುಗಳೇ ಮೊಲಗಳೇಜಿಂಕೆಗಳೇ ನವಿಲುಗಳೇಹುಲಿ ಚಿರತೆ ಹಾವುಗಳೇಕ್ರಿಮಿ ಕೀಟ ಜೀವಾದಿಗಳೇಮರ ಗಿಡ ಪಕ್ಷಿಗಳೇಕೆಲಸಕ್ಕೆ ಬಾರದ’ ಕವಿತೆ’ಹಿಡಿದು ನಿಮ್ಮೆದುರುಮಂಡಿಯೂರಿದ್ದೇನೆಕ್ಷಮಿಸದಿರಿ ನನ್ನನ್ನುಮತ್ತುಇಡೀ ಮನುಕುಲವನ್ನು ಹಸಿರು ಹೂವು ಚಿಗುರೆಂದುಈ ನೆಲವನ್ನು ವರ್ಣಿಸುತ್ತಲೇಕಡಿದು ಕೊಚ್ಚಿ ಮುಕ್ಕಿಸರ್ವನಾಶ ಮಾಡಿದ್ದೇವೆಇಷ್ಟಾದರೂಹನಿ ಕಣ್ಣೀರಿಗೂ ಬರಬಂದಿದೆನಮ್ಮ ನಮ್ಮ ಲೋಕಗಳುಮಹಲುಗಳನ್ನು ನಾವಿನ್ನೂಇಳಿದಿಲ್ಲ ಇಳಿಯುವುದೂ ಇಲ್ಲಕ್ಷಮಿಸಲೇಬೇಡಿ ಕೊನೆಗೊಂದು ಅರಿಕೆಪ್ರಾಣಿಪಕ್ಷಿಗಳೇಮತ್ತೊಂದು ಜನ್ಮವಿದ್ದರೆ ನನಗೆದಯಮಾಡಿ ನಿಮ್ಮ ಸಂಕುಲಕ್ಕೆಕರೆದುಕೊಳ್ಳಿ- ಇಲ್ಲವೆಂದಾದರೆನಿಮ್ಮ ಪಾದ ಸೋಕಿನಕಲ್ಲೋ ಮುಳ್ಳೋ ಮಣ್ಣೋಆಗಲಾದರೂ ಹರಸಿಬಿಡಿ ಹೆಚ್ಚು ಹೇಳುವುದಿಲ್ಲನಿಮ್ಮುಸಿರಿನ ಬೇಗುದಿನಮ್ಮೆಲ್ಲರ ಜೀವಾತ್ಮಗಳ ಬೇಯಿಸಲಿ. *******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಜಾನ್ ಆಶ್ಬರಿ ಅಮೇರಿಕಾ ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಒಳ ಬರುವ ಮಳೆ” ಅಟ್ಟದಲ್ಲಿ ಹಸನು ಉದ್ದಿಟ್ಟ ಬ್ಲಾಕ್ ಬೋರ್ಡು. ತಾರೆಗಳ ಬೆಳಕನ್ನು ಈಗ ಗಟ್ಟಿಯಾಗಿಸಿದೆ ಗಾಳಿ. ಯಾರಿಗಾದರೂ ಕಾಣಸಿಗುತ್ತೆ. ಯಾರಿಗಾದರೂ ಗೊತ್ತಾಗುತ್ತೆ. ಈ ಮಹಾನ್ ಗ್ರಹದ ಮೇಲೆಲ್ಲಾದರೂ ಸತ್ಯವ ಕಂಡುಕೊಂಡರೆ – ಒಂದು ತುಂಡು, ಬಿಸಿಲಲ್ಲಿ ಒಣಗಿಸಿದ್ದು – ತನ್ನದೇ ಅಪಖ್ಯಾತಿ ಮತ್ತು ದೈನ್ಯತೆಯಲ್ಲಿ ಅದು ಹುಲ್ಲು ಕಡ್ಡಿಯ ಆಧಾರದಲ್ಲಿ ಇರುತ್ತೆ. ಯಾರೂ ಉದ್ದಾರವಾಗಲಾರರು, ಆದರೂ ಪರಿಸ್ಥಿತಿ ಇನ್ನೂ ಎಷ್ಟು ಹದಗೆಡಲು ಸಾಧ್ಯ? ಮುಂದುವರಿಯಲಿ ಆಟ, ಆಡುತ್ತಾ ಪಡೆದು ಪ್ರಾವೀಣ್ಯತೆ ಈ ಅಶಾಂತಿಯೊಳಗೆ ಕಾಲಿಡಲು. ಕಾಣಲಾರೆಯೇ ನೀನು, ಇಷ್ಟೇ ಮಾಡಲಾದೀತು ನಮಗೆ. ಅಷ್ಟರಲ್ಲಿಯೇ, ಕಿಚ್ಚು ಹೊತ್ತಿ ಕೊಂಡಿದೆ, ಮೆದೆಗೆ ಬೆಂಕಿ ಬಿದ್ದಂತೆ. ಗಡಿಯಾರದ ಮುಳ್ಳನ್ನು ಹೊಂದಿಸಿ ಆಗಿದೆ ಅದು ಮಾತ್ರ ಅನಿಷ್ಟ ಸೂಚಿಸಿದೆ. ಬಾಳ್ವೆಯ ಸೌಜನ್ಯ ಅದರೊಂದಿಗೆ ಸಂಚು ಹೂಡಿದೆ. ಇಲ್ಲಿಯೇ ಇನ್ನೀಗ ನಮ್ಮ ಮನೆಯೂ. ಎಲ್ಲಿಂದ ಎಂದು ಸೂಚಿಸಲು, ಜನರಿಗೂ ಕೇಳಲು ಒಂದು ಜಾಗ. ******* Rain Moving In” The blackboard is erased in the attic And the wind turns up the light of the stars, Sinewy now. Someone will find out, someone will know. And if somewhere on this great planet The truth is discovered, a patch of it, dried, glazed by the sun, It will just hang on, in its own infamy, humility. No one Will be better for it, but things can’t get any worse. Just keep playing, mastering as you do the step Into disorder this one meant. Don’t you see It’s all we can do? Meanwhile, great fires Arise, as of haystacks aflame. The dial has been set And that’s ominous, but all your graciousness in living Conspires with it, now that this is our home: A place to be from, and have people ask about.

ಅನುವಾದ ಸಂಗಾತಿ Read Post »

ಇತರೆ

ಕುಮಾರವ್ಯಾಸ ಜಯಂತಿ

ಕನ್ನಡ ಸಾಹಿತ್ಯದ ದಿಗ್ಗಜ ಕುಮಾರವ್ಯಾಸ..! ಕೆ.ಶಿವು ಲಕ್ಕಣ್ಣವರ ದಿನಾಂಕ ೯ ಕುಮಾರವ್ಯಾಸನ ಜಯಂತಿ. ಆ ನಿಮಿತ್ತವಾಗಿ ಕುಮಾರವ್ಯಾಸ ಕುರಿತು ಈ ಲೇಖನ… ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ… ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿ ಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ. ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣ ಕವಿ. ಇವನ ಕಾಲ ಸುಮಾರು ಕ್ರಿ.ಶ. ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ. ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ. ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ… ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡ ಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸನಿಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ. ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ… ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ)… ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ… ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು… ಹುಟ್ಟೂರು ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ… ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್ ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ… ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯ ದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ… ಈ ವಂಶಾವಳಿಯಂತೆ, ವೀರನಾರಾಯಣರೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ… ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮ ವೃದ್ಧ ಗಾಮುಂಡ ಗೌಡ ಎಂದು ನಿರ್ಣಯಿಸಿದ್ದಾರೆ. ಆನಂತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮. ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ… ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ. ೨.ತಿರುಮಲಯ್ಯ. ೩.ಲಕ್ಕರಸಯ್ಯ. ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ. ೪-೧ ನೇ ವೀರನಾರಾಯಣನೇ ಕುಮಾರವ್ಯಾಸ ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ… ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟಕ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೇ ಕುಮಾರವ್ಯಾಸ ತನ್ನ ಕಾವ್ಯ ಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ)… ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗು ಬಡಿಸುತ್ತದೆ. ಅವನ ಕಾವ್ಯ ಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ… “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!) “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ) “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ) “ಅರಿವಿನ ಸೆರಗು ಹಾರಿತು” ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವ ಪ್ರಕೃತಿಯ ವರ್ಣನೆ… ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ… ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪುರವರ ಈ ಸಾಲುಗಳನ್ನು ನೋಡಿ– “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!” ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ… ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ… “ಹಲಗೆ ಬಳಪವ ಪಿಡಿಯದೊಂದ ಗ್ಗಳಿಕೆ ಪದವಿಟ್ಟಳುಪದೊಂದ ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ಬಳಸಿ ಬರೆಯಲು ಕಂಠಪತ್ರದ ವುಲುಹುಗೆಡದಗ್ಗಳಿಕೆಯೆಂಬೀ ಬಲುಹು ವೀರನಾರಾಯಣನ ಕಿಂಕರಗೆ” “ವೀರನಾರಾಯಣನೆ ಕವಿ ಲಿಪಿ ಕಾರ ಕುಮಾರವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು ಚಾರು ಕವಿತೆಯ ಬಳಕೆಯಲ್ಲ ವಿ ಚಾರಿಸುವಡಳವಲ್ಲ ಚಿತ್ತವ ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ” ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದು ಕಷ್ಟ..! ************

ಕುಮಾರವ್ಯಾಸ ಜಯಂತಿ Read Post »

ಅನುವಾದ

ಅನುವಾದ ಸಂಗಾತಿ

ಗುಂಟರ್ ಗ್ರಾಸ್ -ಜರ್ಮನ್ ಲೇಖಕ ಕನ್ನಡಕ್ಕೆ: ಕಮಲಾಕರ ಕಡವೆ ಪ್ರೀತಿ” ಇಷ್ಟು ಮಾತ್ರ:ಹಣಹೀನ ವ್ಯವಹಾರ.ಯಾವಾಗಲೂ ತೀರಾ ಕಮ್ಮಿಯಾಗುವ ಹಾಸಿಗೆ.ತೆಳು ತೆಳು ಸಂಬಂಧ. ಕ್ಷಿತಿಜದಾಚೆ ಹುಡುಕುವುದುಬಿದ್ದ ತರಗೆಲೆಗಳನ್ನು ಬೂಟಿನಿಂದ ಗುಡಿಸುವುದುಮತ್ತು ಮನಸಿನಲ್ಲಿಯೇ ನಗ್ನ ಪಾದಗಳನ್ನು ಹೊಸಕಿ ಕೊಳ್ಳುವುದು.ಕನ್ನಡಿ, ಸ್ನಾನಕ್ಕೆ ಷವರು ಇರುವ ಕೋಣೆಯಲ್ಲಿ,ಚಂದಿರನ ಕಡೆ ಮುಖ ಮಾಡಿದ ಬಾನೆಟ್ಟಿನ ಬಾಡಿಗೆ ಕಾರಿನಲ್ಲಿ,ಹೃದಯ ಕೊಟ್ಟು, ಹರಿದು ಹಾಕುವುದು;ಅಮಾಯಕತೆ ನಿಂತುತನ್ನ ಉಪಾಯಗಳ ಸುಡುವಲ್ಲೆಲ್ಲಕಳ್ಳದನಿಯ ಶಬ್ದ ಬೇರೆಯೇ ಆಗಿಧ್ವನಿಸುತ್ತದೆ, ಮತ್ತು ಪ್ರತಿ ಸಲವೂ ಹೊಸತಾಗಿ. ಇಂದು, ಇನ್ನೂ ತೆರೆದಿಲ್ಲದ ಬಾಕ್ಸ ಆಫೀಸಿನ ಎದುರುಕೈಯಲ್ಲಿ ಕೈಯಿಟ್ಟು ನಕ್ಕರುವಿಷಣ್ಣ ಮುದುಕ ಮತ್ತು ನಾಜೂಕು ಮುದುಕಿ.ಪ್ರೀತಿಯ ಭರವಸೆ ಕೊಟ್ಟಿತ್ತು ಸಿನೆಮಾ. ******* “Love” That’s it:The cashless commerce.The blanket always too short.The loose connexion. To search behind the horizon.To brush fallen leaves with four shoesand in one’s mind to rub bare feet.To let and rent hearts;or in a room with shower and mirror,in a hired car, bonnet facing the moon,wherever innocence stopsand burns its programme,the word in falsetto soundsdifferent and new each time. Today, in front of a box office not yet open,hand in hand crackledthe hangdog old man and the dainty old woman.The film promised love.”

ಅನುವಾದ ಸಂಗಾತಿ Read Post »

ಕಥಾಗುಚ್ಛ

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ ನಿನ್ನನ್ನು ನೋಡಲು ಬಂದಿದ್ದಾರೆ.ಅವರಿಗೆ ನಾನೇನೂ ಬರಲು ಹೇಳಿಲ್ಲ.ನಿನ್ನ ಈ ಮಾತು ಕೇಳಿದರೆ ಬಂದವರಿಗೆ ಬೇಜಾರಾಗುತ್ತೆ.ಹಾಗಂತ ಮನಸ್ಸಿನ ವಿರುದ್ಧ ಹೋಗಬೇಕಾ…?ಯಾರು ಹೇಳಿದ್ದು ಹಾಗೆ ಮಾಡು ಅಂತ..ಈಗ ನೀನೇ ಹೇಳುತ್ತಿರುವೆಯಲ್ಲ… ನಾನು ಹೇಳೋದನ್ನ ಸರಿಯಾಗಿ ಅರ್ಥ ಮಾಡಿಕೊ, ನಿನಗೆ ತಿಳಿಯುತ್ತೆ.ಏನೂ, ಮನಸ್ಸಲ್ಲಿ ನೀನೇ ಇದ್ದರೂ ಅದನ್ನು ಹಾಗೇ ಮುಚ್ಚಿಟ್ಟುಕೊಂಡು,  ಈಗ ನೋಡಲು ಬಂದವನನ್ನು ಒಪ್ಪಿಕೊಳ್ಳಬೇಕಾ? ಖಂಡಿತಾ ಒಪ್ಪಿಕೊ, ಏಕೆಂದರೆ ಜನ್ಮ ಕೊಟ್ಟು ಸಾಕಿ ಬೆಳೆಸಿದ ತಂದೆ ತಾಯಿ ಯಾವತ್ತೂ ಮಕ್ಕಳ ಹಿತವನ್ನೇ ಬಯಸುತ್ತಾರೆ. ಅವರಿಗಲ್ಲದೇ ಮತ್ಯಾರಿಗೆ  ನಿನ್ನ ಒಳಿತು ಕೆಡುಕು ತಿಳಿಯುತ್ತೆ ಹೇಳು.  ಅವರಿಗೆ ನೋವು ಕೊಟ್ಟರೆ ನಿನಗೆ ಒಳ್ಳೆಯದಾಗುತ್ತಾ…ನಾನೇನಾದರೂ ಅವರಿಗೆ ಗಂಡು ನೋಡಲು ಹೇಳಿದ್ದೇನೆ, ನನಗೆ ಕೇಳದೆ ಅವರು ಹುಡುಗನನ್ನು ಮನೆಗೆ ಕರೆದರೆ ನಾನೇನು ಮಾಡಲಿ? ಹೆಣ್ಣು ವಯಸ್ಸಿಗೆ ಬಂದ ಮೇಲೆ ಎಲ್ಲಾ ತಂದೆತಾಯಿ ಏನು ಮಾಡುತ್ತಾರೋ ಇವರು ಅದನ್ನೇ ಮಾಡಿದ್ದಾರೆ,  ಅಷ್ಟೇ..ಇವತ್ತು ನೀನು ಏನೇ ಹೇಳಿದರೂ ನಿನ್ನ ಮಾತನ್ನು ಕೇಳುವುದಿಲ್ಲ. ಮನಸ್ಸು ಒಬ್ಬರಿಗೆ, ಮದುವೆ ಮತ್ತೊಬ್ಬರೊಂದಿಗೆ ಸಾಧ್ಯವೇ ಇಲ್ಲ.  ಹುಚ್ಚಿ ಹಾಗೆ ಮಾತನಾಡಬೇಡ, ಸುಮ್ಮನೆ ಹೋಗಿ ಬಂದವರಿಗೆ ಕಾಫಿ ತಿಂಡಿ ಕೊಟ್ಟು ಹುಡುಗನನ್ನು ನೋಡು.ಈ ಮಾತು ಹೇಳಲು ನನ್ನನ್ನು ಅಂದು ಕಾಪಾಡಿದ್ದ?ಯಾವಾಗ? ನಾನು  ಆಯಾ ತಪ್ಪಿ ನೀರಲ್ಲಿ ಬಿದ್ದಾಗ.ನಿನ್ನ ಜಾಗದಲ್ಲಿ ಯಾರೇ ಇದ್ದಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ.  ಅದಕ್ಕೂ ಇದಕ್ಕೂ ಸಂಬಂಧವಿಲ್ಲ.ಹೌದಾ, ಹಾಗಾದರೆ ನಾನು ಪಿ.ಯು. ಓದುವಾಗ  ನನ್ನನ್ನು ಇಷ್ಟಪಟ್ಟು ಹೂ ಕೊಟ್ಟ ಹುಡುಗನನ್ನು ಬೇಡ ಎಂದು ಒಪ್ಪಿಸಿದೆ ಏಕೆ? ಅವನು ಸರಿ ಇರಲಿಲ್ಲ ಅದಕ್ಕೆ.ಅವನು ಸರಿಯಿರಲಿಲ್ಲ ಅಂದರೆ ನಿನಗೇನು ತೊಂದರೆ ಆಗುತ್ತಿತ್ತು? ನನಗೇನೂ ಆಗುತ್ತಿರಲಿಲ್ಲ ಆದರೆ ನಿನಗೆ ತೊಂದರೆ ಆಗುತ್ತಿತ್ತು, ಅದಕ್ಕೆ ಒಪ್ಪಬೇಡ ಅಂದೆ. ಅದು ನನಗೆ ತಾನೇ, ನೀನು ಸುಮ್ಮನೆ ಇರಬೇಕಿತ್ತು.ಗೊತ್ತಿದ್ದೂ ಹೇಗೆ ಸುಮ್ಮನಿರಲಿ…ಹಾಗಿದ್ದರೆ ಈಗ ಬಂದ ಹುಡುಗ ಸರಿ ಇದ್ದಾನಾ?ಹೌದು, ಅದಕ್ಕೆ ಒಪ್ಪಿಕೊ ಅಂದಿದ್ದು.ನಿನಗೆ ಹೇಗೆ ಗೊತ್ತು?ನನಗೆ ಗೊತ್ತು, ಅದಕ್ಕೆ ಹೇಳುತ್ತಿರುವೆ ಸುಮ್ಮನೆ ನನ್ನ ಮಾತನ್ನು ಕೇಳು.ಹೌದೌದು, ನಿನಗೆ ಏನು ಗೊತ್ತಿಲ್ಲ ಹೇಳು?  ಎಷ್ಟೆಂದರೂ ನೀನು ಜಗವ ಕಾಯುವ ಪರಮಾತ್ಮ ಅಲ್ಲವೇ.  ದೇವರು ಮನುಷ್ಯಳೊಂದಿಗೆ ಮದುವೆ ಆಗುವುದು ಹೇಗೆ ಸಾಧ್ಯ. ಹಾಗೇನಾದರೂ ಆಗಿಬಿಟ್ಟರೆ ದೇವಕುಲದ ಮರ್ಯಾದೆಗೆ ಕುಂದುಂಟಾಗುತ್ತದೆ ಅಲ್ಲವೇ….? ನೋಡು…ಏನೂ ನೋಡುವುದು..?   ಸುಖ ದುಃಖ, ಬೇಸರ ಇನ್ನೊಂದು ಮತ್ತೊಂದು ಏನೇ ಇರಲಿ, ಅಪ್ಪ ಅಮ್ಮ, ಗೆಳೆಯರು, ಯಾರೆಂದರೇ ಯಾರ ಬಳಿಯೂ ಹೇಳಿಕೊಳ್ಳದೆ ಕೇವಲ ನಿನ್ನನೇ ನಂಬಿ, ನಿನ್ನ ಬಳಿ ಮಾತ್ರ ಕೇಳುತ್ತಿದ್ದೆ. ಆಗ ನಿನಗೆ, ನಾನು ಕೇವಲ ಮನುಷ್ಯಳಾಗಿ ಕಾಣಲಿಲ್ಲ. ಪ್ರತಿಯೊಂದನ್ನೂ ನಗುನಗುತ್ತಾ ಕೇಳಿದೆ, ಸಮಾಧಾನ ಮಾಡಿದೆ, ಪ್ರೀತಿಯಿಂದ ಸ್ಪಂದಿಸಿದೆ.  ಈಗ..………ನನ್ನ ಅಣುಅಣುವಿನಲ್ಲೂ ನೀನೇ ತುಂಬಿರುವೆ, ಪ್ರತಿದಿನ ಪ್ರತಿಕ್ಷಣ ನಿನ್ನನೇ ನಂಬಿರುವೆ. ಇದ್ದರೂ ನಿನಗಾಗಿ, ಹೋದರೂ ನಿನಗಾಗಿ ಎಂದು ನಿನ್ನನ್ನೇ ಆರಾಧಿಸಿ, ಪೂಜಿಸಿ ಬದುಕುತ್ತಿರುವ ನನಗೆ ಅನ್ಯರೊಂದಿಗೆ ಮದುವೆ ಆಗಲು ಹೇಳುವೆಯ?ಎಲ್ಲಾ ಗೊತ್ತು ಎನ್ನುವ ನಿನಗೆ, ನನ್ನೊಳಗಿನ ಪ್ರೀತಿ ಕಾಣಲಿಲ್ಲವೇ? ಅದು ಚಿಗುರೊಡೆದು ಹೆಮ್ಮರವಾಗಲು ಏಕೆ ಬಿಟ್ಟೆ?  ಇಲ್ಲಿಯವರೆಗೆ ಏಕೆ ಬಿಟ್ಟೆ ಹೇಳು?  ನಾನೆಲ್ಲಿ ನಿನಗೆ, ನಿನ್ನ ಪ್ರೀತಿ ಕಾಣಲಿಲ್ಲ ಎಂದು ಹೇಳಿದೆ.  ಇನ್ನೂ ಮುಂದೆಯೂ, ಮದುವೆಯ ನಂತರವೂ ಹೀಗೇ ಇರಬಹುದಲ್ಲ.ಅದು ಹೇಗೆ ಸಾಧ್ಯ? ಅಸಾಧ್ಯದ ಮಾತು. ಏಕೆ ಸಾಧ್ಯವಿಲ್ಲ ಹೇಳು.ನೀನು ಬಿಡಪ್ಪ ದೇವರು, ನಿನಗೆ ಎಲ್ಲಾ ಸಾಧ್ಯ. ಆದರೆ ನನ್ನಿಂದ ಖಂಡಿತಾ ಸಾಧ್ಯವಿಲ್ಲ.ಹೋಗಿ ಹುಡುಗನ ನೋಡು.ನಿನ್ನ ಹೊರತು ಬೇರೆ ಯಾರೂ ಬೇಡ ಎನ್ನುವಾಗ ಅವನನ್ನು ಏಕೆ ನೋಡಲಿ? ಒಮ್ಮೆ ನೋಡುಇಲ್ಲ ನೋಡುವುದಿಲ್ಲ.ನನಗೊಸ್ಕರಖಂಡಿತಾ ಇಲ್ಲ, ಬೇಕೆಂದರೆ ಸಾಯಲು ಹೇಳು ಸಂತೋಷವಾಗಿ ಹಾಗೇ ಮಾಡುವೆ.ನಿನ್ನ ಪ್ರಾಣ ತೆಗೆದುಕೊಂಡು ನಾನೇನು ಮಾಡಲಿ, ನಿಜವಾಗಿಯೂ ನಿನಗೆ, ನನ್ನ ಮೇಲೆ ಪ್ರೀತಿ ಇದ್ದರೆ ಹೋಗಿ ಹುಡುಗನನ್ನು ನೋಡು. ನೋಡಿದ ಮೇಲೂ ನಿನಗೆ ಅವನು ಬೇಡವೆನಿಸಿದರೆ ನಾನು ಮತ್ತೆಂದಿಗೂ ಮದುವೆಯ ಬಗ್ಗೆ ಮಾತನಾಡಲಾರೆ.ಇದೆಂತಹ ಮಾತು, ಏಕೆ ನನ್ನನ್ನು ಪರೀಕ್ಷೆ ಮಾಡುವೆ.ನನಗಾಗಿ ಒಮ್ಮೆ ನೋಡು.ಸರಿ ಕೇವಲ ಬಂದ ಹುಡುಗನನ್ನು ನೋಡಿ ಬರಬೇಕು ಅಷ್ಟೇ ತಾನೇ, ಹೋಗಿಬರುವೆ. ನೀನು ನಿನ್ನ ಮಾತನ್ನು ಉಳಿಸಿಕೊಳ್ಳಬೇಕು.ಆಗಲಿ, ಈಗ ಅಪ್ಪ ಅಮ್ಮ ನಿನಗಾಗಿ ಕಾಯುತ್ತಿದ್ದಾರೆ ಹೋಗಿ ಬಾ…                           ——*—–ಹುಡುಗನನ್ನು ನೋಡಿದೆಯಾ?………ನಿನಗೆ ಕೇಳಿದ್ದು, ಹುಡುಗನನ್ನು ನೋಡಿದೆಯಾ?ಹೂಂ…..ಮತ್ತೆ?ಏನು ಹೇಳಲಿ, ತಿಳಿಯುತ್ತಿಲ್ಲ…ಏಕೆ?ನನ್ನನ್ನು ನೋಡಲು ಬಂದಿರುವುದು ನೀನೇನೋ ಅಥವಾ ನಿನ್ನ ಪ್ರತಿರೂಪವೋ….ಮುಂದೆ..,.?ತಿಳಿಯುತ್ತಿಲ್ಲ…,ಹೋಗಿ ಅಪ್ಪ ಅಮ್ಮನಿಗೆ ಒಂದೇ ಮನಸ್ಸಿನಿಂದ ಹೇಳು…,..,.

ಕಥಾಗುಚ್ಛ Read Post »

ಕಾವ್ಯಯಾನ

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ ಚುಕ್ಕಿ ಎಲ್ಲಿ ಹೋದವು ಸುಗ್ಗಿಯ ಆ ದಿನಗಳು ಸಖಿ ಹಾದಿ ತಪ್ಪಿದನಾ ಮನುಜ ಸ್ವಾರ್ಥಕೆ ತನ್ನ ತಾ ನೂಕಿ ಇನ್ನೂ ತೀರುತ್ತಿಲ್ಲ ಬರಗಾಲದ ಬಾಕಿ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ ಮರೆವನು ತನ್ನೆಲ್ಲ ನೋವ ಮಗಳೇ ತನ್ನ ಅತಿದೊಡ್ಡ ಸಂಪಾದನೆಯೆಂಬ ಭಾವ ಮತ್ತೊಮ್ಮೆ ಮಗದೊಮ್ಮೆ ಹೇಳುವೆನು ಕೇಳಿ ಅಪ್ಪ ಅಂದ್ರೆ ಆಕಾಶ ಅಪ್ಪ ಅಂದ್ರೆ ತಾಯಿಯೆಂಬ ಭೂಮಿಗೇ ಒಡಲು ಮಗಳಿಗವನೇ ಪ್ರೀತಿಯ ಕಡಲು

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮಂಗ್ಲೇಶ್ ಡಬರಾಲ್ ಹಿಂದಿ ಕವಿ ಕನ್ನಡಕ್ಕೆ:ಕಮಲಾಕರ ಕಡವೆ “ನಮ್ಮ ಹೆದರಿಸುವಾತ” ನಮ್ಮನ್ನು ಹೆದರಿಸುವವಹೇಳುತ್ತಾನೆ ಹೆದರುವಂತದ್ದು ಏನೂ ಇಲ್ಲನಾನು ಯಾರನ್ನೂ ಹೆದರಿಸುತ್ತಿಲ್ಲನಮ್ಮನ್ನು ಹೆದರಿಸುವವಗಾಳಿಯಲ್ಲಿ ಸೆಟೆದ ತನ್ನ ಬೆರಳು ತಿವಿದು ಹೇಳುತ್ತಾನೆಯಾರಿಗೂ ಹೆದರುವ ಅಗತ್ಯವಿಲ್ಲಅವನು ತನ್ನ ಮುಷ್ಟಿ ಬಿಗಿದು ಗಾಳಿಯಲ್ಲಿ ಬೀಸುತ್ತಾನೆಮತ್ತು ಹೇಳುತ್ತಾನೆ ನೀವು ಹೆದರುತ್ತಿಲ್ಲ ತಾನೇ.ನಮ್ಮನ್ನು ಹೆದರಿಸುವವಕನ್ನಡಕದ ಹಿಂದಿನಿಂದತನ್ನ ತಣ್ಣಗಿನ ಕ್ರೂರ ಕಣ್ಣಿಂದ ನಮ್ಮೆಡೆ ದುರುಗುಟ್ಟುತ್ತಾನೆನೋಡುತ್ತಾನೆ ಯಾರು ಯಾರು ಹೆದರಿದ್ದಾರೆಯಾವಾಗ ಜನರು ಹೆದರ ತೊಡಗುತ್ತಾರೋ ಅವನು ಹಿಗ್ಗಲು ತೊಡಗುತ್ತಾನೆಮುಗುಳ್ನಗುತ್ತ ಹೇಳುತ್ತಾನೆ ಹೆದರುವ ಪ್ರಸಂಗವೇನೂ ಇಲ್ಲನಮ್ಮನ್ನು ಹೆದರಿಸುವವತಾನೇ ಹೆದರಿಕೊಳ್ಳುತ್ತಾನೆಯಾರೂ ಹೆದರುತ್ತಿಲ್ಲವೆಂದು ಅವನಿಗೆ ಕಂಡಂತೆ ====

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಪೂರ್ಣವಾಗದ ಸ್ವಾತಂತ್ರ ಹೋರಾಟಗಾರರ ಸ್ಮಾರಕ ಕೆ.ಶಿವು ಲಕ್ಕಣ್ಣವರ ಇನ್ನೂ ಪೂರ್ಣವಾಗಿಲ್ಲ ಹಾವೇರಿಯ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’..! 1934ನೇ ಇಸವಿಯಲ್ಲಿ ಗಾಂಧೀಜಿ ಶಿರಸಿ, ಹಾನಗಲ್ ಮೂಲಕ ಹಾವೇರಿ ಪ್ರವಾಸ ಹೊರಟಿದ್ದರು. ಆಗ ನೊಂದ ದಲಿತ ಹೆಣ್ಣು ಮಗಳೊಬ್ಬಳು ಹೋಗುತ್ತಿರುವುದನ್ನು ಗಮನಿಸುತ್ತಾರೆ ಗಾಂಧೀಜಿ. ಆಕೆಯನ್ನು ವೀರನಗೌಡ ಅವರ ಮೂಲಕ ಆಶ್ರಮಕ್ಕೆ ಸೇರಿಸುತ್ತಾರೆ. ಮುಂದೆ ಗಾಂಧೀಜಿ ಸಲಹೆಯಂತೆ ಸಂಗೂರು ಕರಿಯಪ್ಪ ಅವರು ಆ ಹೆಣ್ಣು ಮಗಳನ್ನು ಮದುವೆಯಾಗುತ್ತಾರೆ. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಕಾಲಗಟ್ಟ, ಸಮಾನತೆ, ಸಾಮರಸ್ಯವನ್ನೂ ಸಾರುತ್ತಾರೆ… ‘ನಮ್ಮ ನೆಲದಲ್ಲೇ ನಡೆದ ಇಂತಹ ಐತಿಹಾಸಿಕ ಘಟನೆಗಳ ಬಗ್ಗೆ ಎಷ್ಟೋ ಜನರಿಗೆ ಅರಿವಿಲ್ಲ. ಅವು ದಾಖಲೀಕರಣಗೊಳ್ಳಬೇಕು. ಆ ಮಾಹಿತಿ ಕಿರಿಯರಿಗೆ ದೊರೆಯಬೇಕು. ಆಗ ದೇಶಪ್ರೇಮ ಬೆಳೆಯಲು ಸಾಧ್ಯ. ಇದರ ಪ್ರಯತ್ನವೇ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’ ಎನ್ನುತ್ತಾರೆ ಹುತಾತ್ಮ ಮಹದೇವ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ… ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ್‌ ಅಧ್ಯಕ್ಷತೆಯ ಈ ಟ್ರಸ್ಟ್ ಬಜೆಟ್‌ ಪೂರ್ವದಲ್ಲೇ ರೂಪಾಯಿ 6.22 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ‘ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲು ರೂಪಾಯಿ 2.5 ಕೋಟಿ ಅನುದಾನ ನೀಡಲಾಗುವುದು’ ಎಂದು ಮಾರ್ಚ್‌ 2015ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಯೂ ಮಾಡಿದ್ದರು. ಆದರೆ, ಈ ಘೋಷಣೆಯಾಗಿ ವರ್ಷಗಳೇ ಕಳೆದರೂ, ಬಿಡಿಗಾಸು ಬಂದಿಲ್ಲ. ಹೀಗಾಗಿ ಮಹತ್ತರ ಯೋಜನೆಯ ಕಾರ್ಯವು ಇನ್ನೂ ‘ಯೋಚನೆ’ಯಿಂದ ‘ಯೋಜನೆ’ ಹಂತಕ್ಕೆ ಬಂದಿಲ್ಲ. ಈ ವಸ್ತು ಸಂಗ್ರಹಾಲಯದ ಕಟ್ಟಡ, ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸಂಗ್ರಹಿಸಬೇಕಾದ ಕಾರ್ಯ ಆರಂಭಗೊಂಡಿಲ್ಲ. ಸರ್ಕಾರ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ಈ ಕಾರ್ಯವು ಚಿಗುರೊಡೆಯುವ ನಿರೀಕ್ಷೆ ಮೊದಲಿತ್ತು, ಈಗಿಲ್ಲ… ಸ್ವಾತಂತ್ರ್ಯದಲ್ಲಿ ‘ಹಾವೇರಿ’: ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿ ಜಿಲ್ಲೆಯು ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದೆ. ಜಿಲ್ಲೆಯ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ, ಕೆ.ಎಫ್‌ ಪಾಟೀಲ್‌, ಹಳ್ಳಿಕೇರಿ ಗುದ್ಲೆಪ್ಪ, ಸಂಗೂರು ಕರಿಯಪ್ಪ, ಟಿ.ಆರ್. ನಿಸ್ವಿ, ಮೆಣಸಿನಹಾಳ ತಿಮ್ಮನಗೌಡ, ಹೊಸ್ಮನಿ ಸಿದ್ದಪ್ಪ, ತಾವರೆಕೆರೆ ಫಕ್ಕೀರಪ್ಪ, ಪಂಚಾಕ್ಷರಪ್ಪ ವಳಸಂಗದ, ಚಾಂದ ಸಾಬ್, ಪರಮಣ್ಣ ಹರಕಂಗಿ ಮತ್ತಿತರ ಹಲವಾರು ಪ್ರಮುಖರು ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. 1943ರ ಹೊಸರಿತ್ತಿಯಲ್ಲಿ ಮೈಲಾರ ಮಹದೇವಪ್ಪ ಹಾಗೂ ಜೊತೆಗಾರರ ಬಲಿದಾನ, ಹೋರಾಟಕ್ಕೆ ಬಾಂಬ್‌ ತಯಾರಿಸಲು ಹೋಗಿ ಕೈಯನ್ನೇ ಕಳೆದುಕೊಂಡ ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರ ಬಲಿದಾನ ಸೇರಿದಂತೆ ಹಲವಾರು ಘಟನಾವಳಿಗಳಿಗೆ ಹಾವೇರಿ, ಅಗಡಿ, ಹೊಸರಿತ್ತಿ, ಮೋಟೆಬೆನ್ನೂರ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳು ‘ಪವಿತ್ರ ಸಾಕ್ಷಿ’ಯಾಗಿವೆ. ಹಲವೆಡೆ ತ್ಯಾಗದ ನೆತ್ತರೂ ಹರಿದಿದೆ… ‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೂ ಎಲೆಮರೆಕಾಯಿಯಾಗಿ ಉಳಿದವರೇ ಸಹಸ್ರಾರು ಜನ. ಅಂತಹ ದೇಶಪ್ರೇಮಿಗಳ ನೆನೆಪುಗಳ ದಾಖಲೀಕರಣ ಹಾಗೂ ಯುವಜನತೆಯಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಉದ್ದೇಶವೇ ಈ ವಸ್ತುಸಂಗ್ರಹಾಲಯ ಯೋಜನೆ ರೂಪುಗೊಳ್ಳಲು ಕಾರಣ’ ಎಂದಿದ್ದರು ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ಸಾಹಿತಿ ಸತೀಶ ಕುಲಕರ್ಣಿ… ‘ಟ್ರಸ್ಟ್‌ ಮೂಲಕ ದೇಶಪ್ರೇಮ ಕುರಿತ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕೆ ವಸ್ತುಸಂಗ್ರಹಾಲಯವು ಇನ್ನಷ್ಟು ಇಂಬು ನೀಡಲಿದೆ’ ಎಂದಿದ್ದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ… ಈ ವಸ್ತುಸಂಗ್ರಹಾಲಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಘಟನಾವಳಿ ಹಾಗೂ ಹೋರಾಟಗಾರರನ್ನು ಬಿಂಬಿಸುವ ಚಿತ್ರಗಳ ಗ್ಯಾಲರಿ, ಹೋರಾಟಕ್ಕೆ ಸಂಬಂಧಿಸಿದ ವಸ್ತುಗಳು ಪ್ರದರ್ಶನಗಳು ಕಾಣಲಿವೆ. ಅದರೊಂದಿಗೆ ಇತಿಹಾಸದ ಕ್ಷಣಗಳನ್ನು ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ. ಮತ್ತೊಂದೆಡೆ ಸಬರಮತಿ, ಇತರ ಆಶ್ರಮಗಳು, ದಂಡಿ ಸತ್ಯಾಗ್ರಹ ಮತ್ತಿತರ ಪ್ರಮುಖ ಸ್ಥಳ– ಘಟನೆಗಳ ಮಾದರಿಯನ್ನು ರೂಪಿಸಲಾಗುತ್ತದೆ. ಸ್ವಾತಂತ್ರ್ಯದ ಇತಿಹಾಸವನ್ನು ಆಧುನಿಕ ತಂತ್ರಜ್ಞಾನದ ವಿದ್ಯುನ್ಮಾನ ಸಾಧನಗಳ ಮೂಲಕ ದೃಶ್ಯ, ಶ್ರವಣ ಹಾಗೂ ಅಕ್ಷರಗಳಲ್ಲಿ ದಾಖಲಿಸಲಾಗುತ್ತದೆ… ‘ವೀಕಿಪೀಡಿಯಾ’ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಘಟನಾವಳಿಗಳ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸರಳವಾಗಿ ಈ ಮಾಹಿತಿ ಪಡೆಯಬಹುದು… ‘ದೇಶ, ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಘಟನಾವಳಿಗಳನ್ನು ಹಂತ ಹಂತವಾಗಿ ದಾಖಲಿಸುವ ಉದ್ದೇಶವಿದೆ’ ಎಂದಿದ್ದರು ಟ್ರಸ್ಟ್‌ ಸದಸ್ಯ ವಿ.ಎನ್‌ ತಿಮ್ಮನಗೌಡ ಅವರು… ‘ಜಿಲ್ಲಾಧಿಕಾರಿ ಅಧ್ಯಕ್ಷತೆಯ ಹುತಾತ್ಮ ಮೈಲಾರ ಮಹದೇವಪ್ಪ ಟ್ರಸ್ಟ್ ಮೂಲಕ ರಾಜ್ಯ ಸರ್ಕಾರಕ್ಕೆ ಬಜೆಟ್ ಪೂರ್ವ ಪ್ರಸ್ತಾವನೆ ಹೋಗಿತ್ತು. ಈಗ ಕನಸು ನನಸಿಗಾಗಿ ಬಿ.ಜಿ ಬಣಕಾರ, ಸಿ.ಎಂ ಉದಾಸಿ, ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿ ಮತ್ತಿತರರು ಪ್ರಮುಖ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ’ ಎಂದ್ದಿರು ಅವರು ಆಗ… ಇಷ್ಟೆಲ್ಲಾ ಪಯತ್ನಗಳಾದರೂ ವಸ್ತುಸಂಗ್ರಹಾಲಯ ಪೂರ್ಣ ಪ್ರಮಾಣದಲ್ಲಿ ಆಗಬೇಕಾದ ಕೆಲಸವಾಗಿಲ್ಲ. ಈ ಕೆಲಸ ಜರೂರಾಗಿ ಆಗಬೇಕಾಗಿದೆ..! ========

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಯಶು ಬೆಳ್ತಂಗಡಿ ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,, ಮೊದಲ ಉಸಿರಾಟ ನಡೆಸಿ,, ಮೊದಲ ಕಣ್ಣೀರ ಸುರಿಸಿ,, ಮೊದಮೊದಲು ಕಂಡ ತೊದಲು ಮಾತಿನ ಕನಸು… ಮೊದಲ ತರಗತಿಗೆ,, ಮೊದಲ ಹೆಜ್ಜೆಯಿಟ್ಟಾಗ,, ಭಯದಲ್ಲೇ ಕಂಡ ನೂರೊಂದು ಕನಸು.. ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,, ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,, ಅರಳಿದ ದೇಶಪ್ರೇಮದ ಕನಸು… ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,, ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,, ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು.. ಅವನ ಸುಂದರ ಕಣ್ಣು ಕಂಡಾಗ,, ಅವನು ಮೌನದಿ ಮಾತಾಡಿದಾಗ,, ಅವನ ಸ್ಪರ್ಶದಿ ಜಗವನ್ನೇ ಮರೆತ ಸುಂದರ ಕನಸು.. ಅವನ ಹಸ್ತದಿ ತಾಳಿ ಕಟ್ಟಿಸಿಕೊಂಡಾಗ,, ಕಂಡ ಹತ್ತಾರು ಕನಸು.. ತಾಳಿ ಬೆಲೆಕಳೆದುಕೊಂಡಾಗ,, ನುಚ್ಚುನೂರಾದ ಬದುಕಿನ ಕನಸು.. ಊಟ ತಿಂಡಿ ಬಿಟ್ಟು ಆರೋಗ್ಯ ಹದೆಗೆಟ್ಟಾಗ,, ಜೀವದ ಆಸೆ ಮರೆತಾಗ,, ಸಕಲವ ತೊರೆದು ಸಾವಿನ ಮನೆಗೆ ಹೊರಟಾಗ,, ಕನಸಾಗೇ ಉಳಿದ ಸಾವಿರ ಕನಸು.. ಕನಸಾಗೇ ಉಳಿದ ಬದುಕಿನ ಕನಸು.. ಕಣ್ಣೀರಲ್ಲೇ ಕೊಚ್ಚಿಹೋದ ನೂರೊಂದು ಕನಸು.. ========

ಕಾವ್ಯಯಾನ Read Post »

You cannot copy content of this page

Scroll to Top