ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ‌ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿ‌ನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು ಆಗಿಹುದು ನನ್ನಯ ಪಾಡು..! ಬದುಕಿನ ಜೀವಾಳ ನೀನು ಮೀಸಲಿಡುವೆ ಪ್ರತಿ ಜನುಮವ ನಾನು ಕಾದಿರಿಸು ನನ್ನಗಾಗಿ ಇನ್ನು ಪ್ರತಿ ಜೀವನ… ನಮ್ಮ ಪ್ರೀತಿ ಸವಿ ಜೇನು..!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. ಬಹುಮಾನಿತ ಕವಿತೆ ಆಗಲೇ ಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಶ್ರೀಮತಿ ಭಾಗೀರಥಿ ಹೆಗಡೆಯವರದು. ಕವಿತೆಯ ಒಂದು ಸಾಲು, ಹೀಗೆ- ‘ಕತ್ತಲಿನ ಮುಖ ಮೀಸೆ ತಿದ್ದಿ ನೋಡುವ ತವಕ..’ ಓದಿ ರೋಮಾಂಚನಗೊಂಡಿದ್ದೆ. ಆ ಸನ್ನಿವೇಶವನ್ನು ಎಷ್ಟೊಂದು ವಿನೂತನವಾಗಿ ವಿಶೇಷವಾಗಿ ಹೇಳುತ್ತದೆ ಈ ಸಾಲು! ೧೯೯೩ರಲ್ಲಿ ಶಿರಸಿಯಲ್ಲಿ ಭಾಗೀರಥಿ ಹೆಗಡೆಯವರ ಮೊದಲ ಭೇಟಿ, ಅವರ ಮನೆಯಲ್ಲಿ. ಮಾತಿನ ನಡುವೆ ಈ ಚಿತ್ರ ಕವನ ಸ್ಪರ್ಧೆಯಲ್ಲಿ ಬಹುಮಾನಿತವಾದ ಅವರ ಕವನವನ್ನು ನೆನಪಿಸಿ ಈ ಸಾಲನ್ನು ಉದ್ಧರಿಸಿ ‘ತುಂಬಾ ತುಂಬಾ ಇಷ್ಟವಾಯಿತು’ ಎಂದೆ. ಭಾಗೀರಥಿಯವರ ಸಂತಸ, ಅದರಿಂದಾಗಿ ಹನಿದ ಕಣ್ಣೀರು ಇಂದಿಗೂ ಕಣ್ಣಿಗೆ ಕಟ್ಟಿದೆ. ಅವರು ‘ಹೀಗೆ ನಾಲ್ಕಾರು ವರ್ಷಗಳ ನಂತರವೂ ಅಪರಿಚಿತ ಓದುಗನ ಮನದಲ್ಲಿ ಒಂದು ಸಾಲು ಉಳಿದಿದೆ ಎಂದರೆ ಬರೆದದ್ದು ಸಾರ್ಥಕವಾಯಿತು’ ಎಂದರು. ಅದರ ಶ್ರೇಯ ಅವರಿಗೆ, ಅವರ ಕವಿತೆಗೆ ಸಲ್ಲಬೇಕು. ನನಗಲ್ಲ. ಈಗೇಕೆ ಇದನ್ನು ನೆನಪಿಸಿಕೊಂಡೆ ಎಂದರೆ ಮೊನ್ನೆ ಇನ್ನೊಂದು ವಿಶಿಷ್ಟ ಚಿತ್ರ( ಸಾಲು) ಮನಸ್ಸನ್ನು ಸೆಳೆಯಿತು. ಶ್ರೀಮತಿ ಶೀಲಾ ಭಂಡಾರ್ಕರ್ ನನ್ನೊಂದಿಗೆ ಒಂದು ವಾಟ್ಸಾಪ್ ಗುಂಪಿನಲ್ಲಿ ಇದ್ದಾರೆ. ಅವರ ಇತ್ತೀಚಿನ ಒಂದು ಕವನದಲ್ಲಿ ಸಂಜೆಯನ್ನು ಅವರು ವರ್ಣಿಸುವುದು ಹೀಗೆ- ‘ರೆಪ್ಪೆಗಳ ತಂತಿಯ ಮೇಲೆ ಒಣಹಾಕಿದ್ದ ಸಾಯಂಕಾಲ…’ ಈ ಸಾಲಿನ ವಿವರಣೆಗೆ ನಾನು ಹೋಗುವುದಿಲ್ಲ. ಮೌನದೊಳೊಲಿವುದೇ ಸಮ್ಮಾನ ! ಬೇಂದ್ರೆ ಕವನವನ್ನು ‘ಭುವನದ ಭಾಗ್ಯ’ ಎಂದರು ಹಿರಿಯ ವಿಮರ್ಶಕ ಡಾ. ಜಿಎಸ್ ಅಮೂರ ಅವರು. ನಾವು-ನೀವು ಬೇಂದ್ರೆ ಅಲ್ಲದಿರಬಹುದು. ಆದರೆ ವಿಶಿಷ್ಟ ಹೊಳಹುಗಳನ್ನು ಪಡಿಮೂಡಿಸುವ ಪ್ರತಿಯೊಂದು ಸಾಲು ಬರೆದವರ ಭಾಗ್ಯ, ಓದಿದವರ ಭಾಗ್ಯವೂ ಹೌದು! ಇಂದು ಬರೆಯುತ್ತಿರುವ ಹಿರಿಯ-ಕಿರಿಯ ಬರಹಗಾರರು ಇಂಥ ಸವಿಗಾಳುಗಳನ್ನು ಕನ್ನಡದ ಕಣಜಕ್ಕೆ ಸದಾ ತುಂಬುತ್ತಿರಲಿ. ***********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾತ್ರ ದೇಶದ ಆರ್ಥಿಕತೆಯ ಆರೋಗ್ಯದ ಕಲ್ಪನೆ ಬರುತ್ತದೆ. ಉದಾಹರಣೆಗಾಗಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲಾಗಿಡಲಾಗಿದೆಯೆಂದು ಹೊಗಳುವವರಿದ್ದಾರೆ. ಆದರೆ ಈ ಮೊತ್ತದಲ್ಲಿ ಶಿಕ್ಷಕರು, ಉಪನ್ಯಾಸಕರುಗಳಿಗೆ ನೀಡುವ ಸಂಬಳ ಪಿಂಚಣಿ, ಸವಲತ್ತುಗಳೇ ಹೆಚ್ಚಿನ ಭಾಗವನ್ನು ನುಂಗುತ್ತವೆಂಬುದು ವಿಷಾದನೀಯ ಅಂಶ. ಯು.ಜಿ.ಸಿ ಯೋಜನೆಯಡಿ ಸಂಬಳ ಪಡೆಯುವವರು ಮಾಸಿಕ ಒಂದುವರೆ ಲಕ್ಷಕ್ಕೂ ಹೆಚ್ಚಿಗೆ ವೇತನ ಪಡೆಯುತ್ತಾರೆ. ಅಂಥವರ ಪಿಂಚಣಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿರುತ್ತದೆ. ಸರ್ಕಾರದ ಖರ್ಚಿನ ದೊಡ್ಡ ಪಾಲನ್ನು ಪಡೆಯುವ ನೌಕರರ ಸಂಬಳ , ಸವಲತ್ತುಗಳು ಹಾಗೂ ಪಡೆದ ಸಾಲದ ಮೇಲೆ ನೀಡಬೇಕಾದ ಬಡ್ಡಿ. ಯಾವುದೋ ಸಮಯ, ಸಂದರ್ಭದಲ್ಲಿ ನಿಗದಿಯಾದ ನೌಕರರ ಸಂಬಳ ಸದಾ ಏರುತ್ತಲೇ ಇರಬೇಕೆಂದು ಬಯಸುತ್ತಾರೆ. ಸರ್ಕಾರವೂ ಇದನ್ನು ಅನುಮೋದಿಸುತ್ತದೆ. ಶೇಕಡಾ 4 ಕ್ಕಿಂತ ಕಡಿಮೆ ಇರುವ ಈ ವರ್ಗಕ್ಕೆ ನೀಡುವ ವೇತನ, ಸವಲತ್ತುಗಳು ಏರುತ್ತಿರುವಾಗ ಬಹುಸಂಖ್ಯಾತರಾದ, ಕೃಷಿಕರು, ಕಾರ್ಮಿಕರ ಆದಾಯವೂ ಹೆಚ್ಚುತ್ತಲೇ ಇರಬೇಕೆಂಬ ಕುರಿತು ಪ್ರಾಮಾಣಿಕ ಚಿಂತನೆ , ಪ್ರಯತ್ನಗಳು ನಡೆಯುತ್ತಿಲ್ಲ. ಬಜೆಟ್‍ನಲ್ಲಿ ಘೋಷಣೆಯಾಗುವ ರಿಯಾಯಿತಿ, ಅನುದಾನಗಳ ಪ್ರಮಾಣವನ್ನು ಗಮನಿಸಿ, ಆ ಕ್ಷೇತ್ರ ಉದ್ಧಾರವಾಯಿತೆಂದು ಚಪ್ಪಾಳೆ ಬಾರಿಸುವವರು ಇಡೀ ಅರ್ಥವ್ಯವಸ್ಥೆಯ ಸಮಗ್ರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಉದಾಹರಣೆಗಾಗಿ ಕೃಷಿ ಕ್ಷೇತ್ರಕ್ಕೆ ನೀಡಬೇಕಾದ ಸಾಲ, ಸಬ್ಸಿಡಿಗಳ ಮೊತ್ತವನ್ನು ಹೆಚ್ಚಿಸಿದಾಕ್ಷಣ, ಕೃಷಿಗೆ ಭಾರೀ ಬೆಂಬಲ ಎನ್ನುವ ಮಾತು ಕೇಳಿ ಬರುತ್ತದೆ. ಕೃಷಿ ರಗದ ಸಮಸ್ಯೆಗಳ ಉಳಿದ ಆಯಾಮಗಳನ್ನು , ಮೂಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕಾರ್ಯಕ್ರಮಗಳಿವೆಯೇ ಎಂದು ಗಮನಿಸುವುದೇ ಇಲ್ಲ. ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವುದು ಬರೀ ಘೋಷಣೆಗಳಿಂದ ಸಾಧ್ಯವಿಲ್ಲ. ಸಮಗ್ರ ಭೂ ಬಳಕೆ ನೀತಿ, ಅದಕ್ಕೆ ಪೂರಕವಾಗಿ ಬೇಡಿಕೆ ಆಧಾರಿತ ಬೆಳೆ ಸಂಯೋಜನೆ ಮಾರುಕಟ್ಟೆ ವ್ಯವಸ್ಥೆ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗಬಲ್ಲದು. ಪ್ರಸ್ತುತ ಬಜೆಟ್ ಈ ದಿಸೆಯಲ್ಲಿ ಆಶಾದಾಯಕ ಹೆಜ್ಜೆಯನ್ನೇ ಹಾಕಿಲ್ಲ. ಒಂದು ಜಿಲ್ಲೆ- ಒಂದು ಬೆಳೆ ಮುಂತಾದ ಅತಾರ್ಕಿಕ, ಅವೈಜ್ಞಾನಿಕ ಘೋಷಣೆಗಳು ಅಂಧಾಭಿಮಾನಿಗಳ ಕರತಾಡನ ಗಿಟ್ಟಿಸಲಷ್ಟೇ ಯೋಗ್ಯ. ಪ್ರಸಕ್ತ ಬಜೆಟ್ ಬಿಜೆಪಿ ಸರ್ಕಾರದ ಚಿಂತನೆಗಳ ಮುಂದುವರಿಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಯನ್ನು ಆ ಪಕ್ಷವು ಸಣ್ಣ ಸಣ್ಣ ದೋಸ್‍ಗಳ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ, ಕಳೆದ ಆರು ವರ್ಷಗಳಿಂದಲೂ ಇವೇ ನೀತಿಗಳನ್ನು ರಾಜಾರೋಷಾಗಿ ವೈಭವೋಪೇತವಾಗಿ ಕಾಂಗ್ರೆಸ್ ನಾಚಿಕೊಳ್ಳುವ ರೀತಿಯಲ್ಲಿ ಅನುಷ್ಟಾನಗೊಳಿಸುತ್ತಿದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದ ಜೀವ ವಿಮಾ ನಿಗಮದ ಶೇರುಗಳ ಮಾರಾಟ ಮಾಡಲು ಮುಂದಾಗಿರುವುದು, ಬಿಜೆಪಿಯ ಖಾಸಗೀಕರಣದ ಪ್ರೇಮಕ್ಕೆ ಉದಾಹರಣೆ. ದೇಶದ ಜನರಿಗಾಗಿ ಜೀವವಿಮಾ ನಿಗಮದ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆಯೆಂಬುದು ಘೋಷಣೆ. ಆದರೆ ಈ ಶೇರುಗಳು ಸೇರುವುದು ಬೆರಳೆಣಿಕೆಯ ಶ್ರೀಮಂತರ ಕೈಗೆ. ಐವತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶ ಹೊಂದಿರುವ ಈ ಪ್ರಸ್ತಾಪ, ಸಾಲ ತೀರುವಳಿಗಾಗಿ ತನ್ನ ಉತ್ಪನ್ನ ಬರುತ್ತಿರುವ ತೋಟದ ಒಂದೊಂದೇ ಭಾಗವನ್ನು ಮಾರಾಟ ಮಾಡುವ ರೀತಿಯಂತಿದೆ. ಎಲ್‍ಐಸಿಯ ನೌಕರರು, ಏಜೆಂಟರು ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಕುಂದುಗಳಿವೆ. ಆದರೂ ಎಲ್‍ಐಸಿಯೆಂಬ ಸಾರ್ವಜನಿಕ ವಲಯದ ಸಂಸ್ಥೆಯಿಂದಾಗಿಯೇ ಖಾಸಗಿ ವಿಮಾ ಸಂಸ್ಥೆಗಳು ಬಾಲ ಮುದುರಿಕೊಂಡು ವ್ಯವಹರಿಸುತ್ತಿವೆ. ಎಲ್‍ಐಸಿ ದುರ್ಬಲಗೊಳ್ಳತೊಡಗಿದಂತೆ ಖಾಸಗಿ ರಂಗದ ವಿಮಾ ಸಂಸ್ಥೆಗಳ ಶೋಷಣೆಯೂ ಹೆಚ್ಚಲಿದೆ. ಕಳೆದೆರಡು ವರ್ಷಗಳಿಂದಲೂ ಎಲ್‍ಐಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ನಷ್ಟದಲ್ಲಿರುವ ಬ್ಯಾಂಕ್‍ಗಳ ಶರನ್ನು ಎಲ್‍ಐಸಿ ಖರೀದಿಸುವಂತೆ ಮಾಡಿರುವುದು ಒಂದು ಉದಾಹರಣೆ ಮಾತ್ರ. ಖಾಸಗಿ ರಂಗದ ಕೃಷಿ ವಿಮಾ ಸಂಸ್ಥೆಗಳು ರೈತರಿಗೆ ಮಾಡುತ್ತಿರುವ ವಂಚನೆಗಳನ್ನು ಗಮನಿಸಿದಾಗ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀರಂಗಕ್ಕೆ ನೀಡಿದರೆ ಆಗುವ ಅಪಾಯಗಳನ್ನು ಊಹಿಸುವುದು ಸುಲಭ. ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಿರುವುದು ಕೂಡಾ ಅಪಾಯಕಾರಿ ಕ್ರಮ. ಭಾರತದ ಅರ್ಥವ್ಯವಸ್ಥೆ ಬಂಡವಾಳದ ಕೊರತೆಯಿಂದ ಬಳಲುತ್ತಿಲ್ಲ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ದೇಶದ ಆರ್ಥಿಕ ಸ್ವಾಯತ್ತತೆಗೆ ಅಪಾಯವೊಡ್ಡುವ ಕ್ರಮಗಳ ಕುರಿತು ಕುರುಡು ನಂಬಿಕೆ ಹೊಂದಿರುವ ಬಂಡವಾಳವಾದಿ ಆರ್ಥಿಕ ತಜ್ಞರ ಸಲಹೆಗಳನ್ನು ಮಾನ್ಯ ಮಾಡುವ ಆಡಳಿತ ನಡೆಸುವವರು. ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಸ್ವಾರ್ಥಕ್ಕಾಗಿ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆನ್ನುವುದು ಸ್ಪಷ್ಟ. ತನ್ನ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಯುರೋಪಿಯನ್ ಆರ್ಥಿಕ ಒಕ್ಕೂಟದಿಂದ ಬ್ರಿಟನ್ ಹೊರ ಬಂದಿರುವುದು ನಮಗೆ ಪಾಠವಾಗಬೇಕಿತ್ತು. ಹೂಡಿಕೆದಾರರು ದೇಶೋದ್ಧಾರಕರು ಎಂದು ನಂಬುವವರು, ನಂಬಿಸುವವರನ್ನು ಸ್ವಾರ್ಥಿಗಳು ಮತ್ತು ಕಪಟಿಗಳು ಎನ್ನಲೇಬೇಕಾಗುತ್ತದೆ. ಯಾಕೆಂದರೆ ಹೂಡಿಕೆದಾರರಿಗೆ ತಮ್ಮ ಲಾಭ ಗಳಿಕೆಯೇ ಪ್ರಮುಖ ಗುರಿಯಾಗುತ್ತದೆಯೇ ಹೊರತು ಸಮುದಾಯದ ಉದ್ಧಾರವಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಅತ್ಯಂತ ಅಪಾಯಕಾರಿ. ಭಾರತೀಯ ಚಿಂತನೆ ಆಧಾರಿತ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಶತಮಾನಗಳೇ ಕಳೆದವು. ಬಂಡವಾಳಶಾಹಿಗಳ ಅಗತ್ಯಕ್ಕನುಗುಣವಾಗಿ ಗುಲಾಮರನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹಲವು ದಶಕಗಳಿಂದ ಅನುಷ್ಟಾನಗೊಳಿಸುತ್ತಾ, ಯಾವ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಯದಂತೆ ಮಾಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಣವಂತರ ಕೈಗೆ ನೀಡುವುದರಿಂದ ಆಗುವ ಸಾಂಸ್ಕøತಿಕ ಆಘಾತಗಳು, ಕುಂಠಿತಗೊಳ್ಳುವ ವ್ಯಕ್ತಿತ್ವ ನಿರ್ಮಾಣದ ಕುರಿತು ಸರ್ಕಾರ ಅಸಡ್ಡೆ ತೋರಿರುವುದು ಸ್ಪಷ್ಟ. ದೇಶಾಭಿಮಾನ, ಭಾರತೀಯತೆ ರಾಷ್ಟ್ರೀಯತೆ ಮುಂತಾದ ಇವರ ಘೋಷಣೆಗಳ ಟೊಳ್ಳುತನ ಇದರಿಂದಲೇ ಸ್ಪಷ್ಟವಾಗುತ್ತದೆ. ಸಂಪತ್ತು ಸೃಷ್ಟಿಸುವವರನ್ನು ಗೌರವಿಸುವದಾಗಿ ಹೇಳಲಾಗಿದೆ. ಸಂಪತ್ತು ಸೃಷ್ಟಿಸುವವರು ಯಾರಿಗಾಗಿ ಆ ಕಾರ್ಯ ಮಾಡುತ್ತಾರೆಂಬುದನ್ನೂ ಸರ್ಕಾರದ ಅಂಕಿಅಂಶಗಳಿಂದಲೂ ಕಾಣಬಹುದು. ಬೆರಳೆಣಿಕೆಯ ಶ್ರೀಮಂತರ ಹಾಗೂ ಅವರ ಕಂಪನಿಗಳ ವಹಿವಾಟು ದೇಶದ ಬಜೆಟ್‍ನ್ನೂ ಮೀರಿದೆ ಎಂಬ ವಿಷಯವೇ, ದೇಶದ ಆಡಳಿತವನ್ನು ನಿಯಂತ್ರಿಸುತ್ತಿರುವವರು ಶ್ರೀಮಂತರೇ ಹೊರತು ರಾಜಕೀಯ ನೇತಾರರಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಭಾರತದ 63 ಅತಿ ಶ್ರೀಮಂತರ ಸಂಪತ್ತು, ದೇಶದ ಮುಕ್ಕಾಲು ಪಾಲು ಜನರ ಸಂಪತ್ತಿಗೂ ಹೆಚ್ಚು ಎನ್ನುವ ವಿಷಯ ಅಧಿಕಾರಸ್ಥರ ಗಮನ ಸೆಳೆದಿಲ್ಲವೆಂಬುದು ಆಶ್ಚರ್ಯದ ಸಂಗತಿ. ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಿರುವ ಅತಿ ಶ್ರೀಮಂತರ ಸಂಪತ್ತು ಪ್ರತಿವರ್ಷವೂ ಹೆಚ್ಚುತ್ತಲೇ ಇದ್ದು, ದೇಶದ ಸಂಪತ್ತಿನ 58% ನಷ್ಟು ಇವರ ಹತೋಟಿಯಲ್ಲೇ ಇದೆ. ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಯಾವ ಪ್ರಸ್ತಾಪವೂ ಬಜೆಟ್‍ನಲ್ಲಿ ಇಲ್ಲ. ಬದಲಿಗೆ ಸಂಪತ್ತಿನ ಕೇಂದ್ರೀಕರಣಕ್ಕೆ ಇನ್ನಷ್ಟು ಒಲವು ತೋರಿಸುವ ಬಜೆಟ್ ಮಂಡಿಸಿರುವ ಸರ್ಕಾರ , ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ. ನಗರಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಹೆಚ್ಚಳ, ಹೈಸ್ಪೀಡ್ ರೈಲುಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಯಾವುದೋ ಒಂದು ನಗರದಲ್ಲಿ ಫುಡ್‍ಪಾರ್ಕ್ ಅಥವಾ ಇನ್ಯಾವುದೋ ಉದ್ಯಮ ಪ್ರಾರಂಭಿಸುವ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಮತ್ತು ಕೃಷಿ ಪೂರಕ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕ್ರಮಗಳಿಂದ ಉದ್ಯೋಗ ಸೃಷ್ಟಿ, ನಗರಾಭಿಮುಖ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಳ್ಳಿಗಳನ್ನು ಉದ್ಯೋಗ ಸೃಷ್ಟಿಯ ಕೇಂದ್ರಗಳನ್ನಾಗಿಸುವುದರಿಂದ ಕ್ಷಿಪ್ರ ಆರ್ಥಿಕ ಪ್ರಗತಿ ಸಾಧ್ಯ. ಜನರ ಕೈಗೆ ಖರೀದಿ ಶಕ್ತಿ ನೀಡುವ ಕುರಿತು ಘೋಷಣೆ ಮಾತ್ರ ಇದೆಯೇ ಹೊರತು, ಅನುಷ್ಠಾನ ಯೋಗ್ಯ ಕ್ರಮಗಳ ಪ್ರಸ್ತಾಪವೇ ಇಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಸೂಕ್ತ ಪ್ರಸ್ತಾಪಗಳಲ್ಲದೇ ಬಳಲಿರುವ ಈ ವರ್ಷದ ಬಜೆಟ್‍ನಿಂದ ಧನಾತ್ಮಕ ಬದಲಾವಣೆಯ ನಿರೀಕ್ಷೆ ಮಾಡಲಾಗದು. ದೇಶದ ಆರ್ಥಿಕ ಸ್ವಾಯತ್ತತೆಯನ್ನು ಹಾಳುಗೆಡವಿ, ಜನಸಾಮಾನ್ಯರಿಂದ ಆರ್ಥಿಕ ಸ್ವಾವಲಂಬನೆಯನ್ನು ಕಸಿಯುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಯಶಸ್ವಿಯಾಗುವುದು ನಿಶ್ಚಿತ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಕ್ರಿಯೆಯ ಮುಂದುವರಿಕೆಯ ಪರಿಣಾಮ ಬಹುಬೇಗ ಪ್ರಕಟಗೊಳ್ಳಲಿದೆ. ಅರ್ಥವ್ಯವಸ್ಥೆಯ ಪುನಶ್ಚೇತನವಾಗಬೇಕೆಂದರೆ ಜನಸಾಮಾನ್ಯರಿಗೆ ಸರ್ಕಾರದ ರೀತಿ- ನೀತಿಗಳಲ್ಲಿ ನಂಬಿಕೆ, ವಿಶ್ವಾಸ ಮೂಡಬೇಕು. ಈ ದಿಸೆಯಲ್ಲಿ ಭರವಸೆ ಮೂಡಿಸಲು ಪ್ರಸ್ತುತ ಬಜೆಟ್ ವಿಫಲವಾಗಿದೆ.

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಮೇರಿ ಆಲಿವರ್(ಅಮೇರಿಕನ್) ಕನ್ನಡಕ್ಕೆ: ಕಮಲಾಕರ ಕಡವೆ ಪ್ರಾರ್ಥನೆ ಏನೆಂದು ಅರಿಯೆ ನಾನು” ಪ್ರಾರ್ಥನೆ ಏನೆಂದು ಸರಿಯಾಗಿ ತಿಳಿಯದು ನನಗೆನನಗೆ ತಿಳಿದಿದ್ದೆಂದರೆ, ಹೇಗೆ ಲಕ್ಷ್ಯವಿಟ್ಟು ಕೇಳುವದು, ಹೇಗೆ ಬೀಳುವದುಹುಲ್ಲಿನ ಮೇಲೆ, ಹೇಗೆ ಮಂಡಿಯೂರಿ ಹುಲ್ಲ ಮೇಲೆ ಕೂರುವದುಹೇಗೆ ಸೋಮಾರಿಯಾಗಿದ್ದು ಖುಷಿಯಾಗಿರುವದುಹೇಗೆ ಹೊಲದ ಉದ್ದ ನಡೆಯುವದು, ಇವುಗಳೇ ನಾನು ದಿನವಿಡೀ ಮಾಡುತ್ತಲಿರುವದು.ಹೇಳಿ, ಮತ್ತೇನ ಮಾಡ ಬೇಕಿತ್ತು?ಎಲ್ಲವೂ ಕೊನೆಗೆ ಕೊನೆಯಾಗುತ್ತಾವಲ್ಲವೇ, ಸ್ವಲ್ಪ ಬೇಗನೆ?ಹೇಳಿ, ನೀವೇನ ಮಾಡುವಿರಿ ನಿಮ್ಮ ಇರುವ ಒಂದು ಅಮೂಲ್ಯ ಅಪಕ್ವ ಬಾಳಿನಲ್ಲಿ? “I Don’t Know What prayer Is“ I don’t know exactly what a prayer is.I do know how to pay attention, how to fall downinto the grass, how to kneel down in the grass,how to be idle and blessed, how to stroll through the fields,which is what I have been doing all day.Tell me, what else should I have done?Doesn’t everything die at last, and too soon?Tell me, what is it you plan to doWith your one wild and precious life ********************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ ರೂಪದಲ್ಲಿ ಇನ್ನೂ ಜೀವನದ ಕಳೆ ಹೊಂದಿರುವವೆಲ್ಲಾ.!! ನಿನ್ನಯ ಬಗೆಗೆ ಹೇಳಲು ಏನಿದೇ ನೀನೇ ನನ್ನ ಜೀವನದ ಮೂಲಾ ಕೊನೆಯವರೆಗೂ ನೀನೇ ನನ್ನಯ ಉಸಿರಿನ ಹಸಿರಾಗುವೆಯಲ್ಲಾ…!! ಓದುವ ಮಿತ್ರರು ಮರು ಜೀವನ ‌ಕೊಟ್ಟರು ನನ್ನೆದೆಯ ಒಳಗೆ ಇರುವ ಪದಪುಂಜವನ್ನು ಒಪ್ಪಿ ಎಲ್ಲಾ‌..!! ಬೇಡೆನು ಬೇರೆನನೂ ಸಾಕು ನನಗಿನ್ನೆಲ್ಲಾ, ಸಾಹಿತ್ಯವೇ ನನಗೆ. ಸ್ಪೂರ್ತಿಯ ಜೀವಾತ್ಮಕ್ಕೆಲ್ಲಾ… **********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್.‌ ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ ಡಬ್ಬಿಯನ್ನೆತ್ತಿಕೊಂಡು ಗೂಡೊಳಗೆ ಹೋದಳು. ಕಾಗಕ್ಕನಿಗೋ ಆಗಿನಿಂದಲೇ ಕದನ ಕುತೂಹಲ ಶುರುವಾಯಿತು. ಬೆಳ್ಳಂಬೆಳಗ್ಗೆಯೇ ತನಗಾಗಿ ಕಾದು ನಿಂತು ಕತೆಯ ಪ್ರೋಮೋದ ಮೊದಲ ಕಾರ್ಡ್ ತೋರಿಸಿ ಹೋಗಿದ್ದಾಳೆಂದರೆ ವಿಷ್ಯ ಸಖತ್ತಾಗೇ ಇದ್ದಿರಬೇಕು.  ಯಾವುದಕ್ಕೂ ಇಬ್ಬರ ಗೂಡಿಂದಲೂ ಎಲ್ಲರೂ ಹೊರಡುವುದಕ್ಕೆ ಕಾಯಬೇಕಲ್ಲ ಎಂದುಕೊಂಡು ಆತುರಾತುರವಾಗೆ ಬೆಳಗಿನ ಸ್ನಾನ, ತಿಂಡಿ, ಅಡುಗೆ ಎಲ್ಲವನ್ನೂ ಮುಗಿಸಿ ಗಡಿಯಾರದ ಮುಳ್ಳು ಮುಂದೆ ಸಾಗುವುದನ್ನೇ ನಿರೀಕ್ಷಿಸುತ್ತಾ ನಿಂತವಳಿಗೆ ಇಂದೇಕೋ ಅದು ಬಲು ನಿಧಾನವಾಗೇ ಚಲಿಸುತ್ತಿದೆ ಅನ್ನಿಸಹತ್ತಿತು. ಅಂತೂ ಕಡೆಗೆ ಗಂಡ, ಮಕ್ಕಳೆಲ್ಲರೂ ತಿಂಡಿ ತಿಂದು, ಊಟದ ಡಬ್ಬಿ ಹಿಡಿದು ಹೊರಟ ತಕ್ಷಣ ಹೊರಗೆ ಬಂದು ಗುಬ್ಬಕ್ಕನ ಗೂಡಿನ ಕಡೆ ನೋಡಿದರೆ ಅಲ್ಲಿ ಇನ್ನೂ ಯಜಮಾನರ ಸವಾರಿ ಹೊರಟಂತಿರಲಿಲ್ಲ. ಅವರ ವಾಹನ ಮುಂದೇ ನಿಂತಿತ್ತು.  ಯಾರೋ ಬಂದಿರಬಹುದೇನೋ… ಅವರ ಗಾಡಿಯೂ ಅಲ್ಲೇ ನಿಂತಿದೆ. ಎಷ್ಟು ಹೊತ್ತಿಗೆ ಹೊರಡುತ್ತಾರೋ… ಇವಳ ಕಾತರ ಹೆಚ್ಚಾಗತೊಡಗಿ, ಅದನ್ನು ತೋರಿಸುವಂತಿಲ್ಲದೆ ಆ ಬಿಸಿಲಲ್ಲೂ ಮುಂದಿನ ಕೈತೋಟದ ಗಿಡಗಳ ಒಣಗಿದೆಲೆಯನ್ನು ಕೀಳುತ್ತಾ, ಬಿದ್ದಿರುವ ಒಣ ಹೂವುಗಳನ್ನೂ, ಕಸಕಡ್ಡಿಗಳನ್ನೂ, ತರಗೆಲೆಗಳನ್ನೂ ಹೆಕ್ಕಿ ತೆಗೆಯುತ್ತಾ ಕಾಲ ಕಳೆಯ ತೊಡಗಿದಳು. ಅಂತೂ ಇಂತೂ ಕಡೆಗೆ ಎರಡು ಗಾಡಿಗಳೂ ಗುಬ್ಬಕ್ಕನ ಗೂಡಿನ ಮುಂದಿನಿಂದ ಹೊರಟ ಶಬ್ಧ ಕೇಳಿ ಪರಮಾನಂದವಾಯಿತು. ಹೊರಗೆ ತಲೆ ಹಾಕಿದ ಗುಬ್ಬಕ್ಕ ʻಐದು ನಿಮಿಷ ತಡಿ ಬಂದೆʼ ಎನ್ನುವಂತೆ ಇಷಾರೆ ಮಾಡಿ ಮತ್ತೆ ಒಳಹೊಕ್ಕಳು.  ಬಾಗಿಲನ್ನು ತೆರೆದಿಟ್ಟೇ ಒಳಬಂದ ಕಾಗಕ್ಕನಿಗೋ ಒಂದೊಂದು ನಿಮಿಷವೂ ಗಂಟೆಯಂತೆ ತೋರುತ್ತಿದ್ದರೆ, ತನ್ನ ತಲೆಯಲ್ಲಿ ಹುಳ ಬಿಟ್ಟು ಗುಬ್ಬಕ್ಕ ಆರಾಮಾಗಿ ಇದ್ದಾಳೆ ಅನ್ನಿಸಿ ಅವಳ ಮೇಲೆ ತುಸು ಕೋಪವೇ ಬಂದರೂ, ಮಾತಿನ ಮಧ್ಯ ತಿನ್ನಲು ಒಂದಷ್ಟು ಹಚ್ಚಿದ ಕಳ್ಳೆಪುರಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಂದು ಟೇಬಲ್ಲಿನ ಮೇಲೆ ಇರಿಸಿದಳು. ಕಾಫಿ ಡಿಕಾಕ್ಷನ್ ಇದೆ ತಾನೇ ಎಂದು ಫಿಲ್ಟರ್‌ನ ಕೆಳಗಿನ ಬಟ್ಟಲನ್ನು ಮತ್ತೊಮ್ಮೆ ನೋಡಿ ಸಮಾಧಾನಗೊಂಡಳು.  ಇವಳ ಐದು ನಿಮಿಷ ಇನ್ನೂ ಆಗಲಿಲ್ಲವೇ ಎಂದು ಸಿಡಿಮಿಡಿಗೊಳ್ಳುತ್ತಿರುವಾಗಲೇ ಅಂತೂ ಗುಬ್ಬಕ್ಕ “ಉಸ್ಸಪ್ಪ.  ಸಾಕಾಯ್ತು…” ಎನ್ನುತ್ತಾ ಒಳಬಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಒರಗಿಕೊಂಡಳು.  ಕಾಗಕ್ಕನಿಗೋ ಅವಳ ತಲೆಯ ಮೇಲೆ ಮೇಜಿನ ಮೇಲಿದ್ದ ವೇಸನ್ನೆತ್ತಿ ಕುಟ್ಟಿಬಿಡುವಷ್ಟು ಕೋಪ ಬಂದರೂ ತಡೆದುಕೊಂಡು “ಏನೋ ದೊಡ್ಡದಾಗಿ ಕತೆ ಹೇಳೋ ಸಸ್ಪೆನ್ಸ್ ತೋರ್ಸಿ ಈಗ ಇಲ್ಲಿ ಆರಾಮಾಗಿ ಊಟ ಮಾಡಿದ್ಮೇಲೆ ಮಲಗೋ ತರ ತಣ್ಣಗೆ ಕಣ್ಣು ಮುಚ್ಚಿಕೊಂಡು ಆರಾಮ್ ತೊಗೋತಾ ಇದೀಯಲ್ಲ. ಎದ್ದೇಳು” ಎಂದು ಮಾತಲ್ಲೇ ತಿವಿದಳು. “ಏ… ಸ್ವಲ್ಪ ಇರು ಬೆಳಗಿಂದ ದಡಬಡಾಂತ ಕೆಲ್ಸ ಮಾಡಿ ಸುಸ್ತಾಗಿದೆ”. “ನಾನೇನು ಸುಮ್ನೆ ಕೂತಿದ್ನಾ. ನಿನ್ನಷ್ಟೇ ಕಷ್ಟ ಪಟ್ಟು ಮಾಡಿದೀನಿ. ಎದ್ದೇಳು ಮೇಲೆ. ಅದೇನು ಕತೆಯೋ ಬೇಗ ಹೇಳು.  ಬೆಳಗಿಂದ ನಾಲಕ್ಕು ಕಿವಿಯಾಗಿ ಕೇಳಕ್ಕೆ ಕೂತಿದೀನಿ. ಸ್ವಲ್ಪ ಹೊತ್ತಾದ ಮೇಲೆ ಬೇಕಾದ್ರೆ ಸ್ವಲ್ಪ ಕಾಫಿ ಮಾಡ್ಕೊಂಡು ಬಂದು ಕೊಡ್ತೀನಿ” ಎನ್ನುತ್ತಾ ಅವಳು ಒರಗಲಿಕ್ಕೆ ಬಿಡದೇ ಮಾತಿಗೆಬ್ಬಿಸಿದಳು. “ಆದೇನಾಯ್ತಪ್ಪಾ ಅಂದ್ರೇ ….” ಎನ್ನುತ್ತಾ ಹೆಚ್ಚು ಕಡಿಮೆ ಮಲಗಿದಂತೇ ಕುಳಿತಿದ್ದವಳು ಯಾರೋ ಎಳೆಯುತ್ತಿದ್ದಾರೇನೋ ಎನ್ನುವಂತೆ ಎದ್ದು ಕುಳಿತಳು. “ನಿನ್ನೆ ನಮ್ಮಮ್ಮನ ಮನೇತ್ರ ಹೋಗಿದ್ನಾ…” “ಅಲ್ಲೇನಾಯ್ತು?” “ಸ್ವಲ್ಪ ತಡಕೋ. ಅದ್ನೇ ಅಲ್ವಾ ಹೇಳ್ತಿರೋದು. ಅಲ್ಲಿಂದ ಎರಡೇ ಮರದಾಚೆ ಅಲ್ವಾ ನಿಮ್ಮಣ್ಣನ ಬೀಗರಿರೋದು.. ಅವ್ರಲ್ಲೂ ನಮ್ಮಮ್ಮನ ಮನೇಲೂ ಗೀಜಕ್ಕನೇ ಕೆಲಸ ಮಾಡೋದು. ಅವ್ಳೇಳಿದ್‌ ವಿಷ್ಯ… ಮೊನ್ನೇ ಅಲ್ಲಿ ಗಂಡ ಹೆಂಡ್ತಿ ಮಧ್ಯ ಜೋರು ಜೋರು ಮಾತುಕತೆ ನಡೀತಾ ಇತ್ತಂತೆ. ಮಗಳು ಗಿಣಿಮರಿ ಹತ್ರ ಫೋನಲ್ಲಿ ಮಾತಾಡ್ತಿದ್ರಂತೆ. “ನಿನ್ ಗಂಡ ಎನಂತ ತಿಳ್ಕೊಂಡಿದಾನೆ, ನೀನೇನು ಗತಿಗೆಟ್ಟೋರ ಕಡೆಯಿಂದ ಹೋಗಿಲ್ಲ. ನಿನ್ ಸಂಬಳದಿಂದಾನೇ ಅಲ್ವಾ ಅವರಪ್ಪ ತನ್ ಮರಿಗಳ್ನ ಓದುಸ್ತಿರೋದು. ನಿನ್ನ ಹೊಡೆಯೋ ಅಷ್ಟು ಮುಂದುವರೆದ್ನ?  ಮುಂದಿನ್ವಾರ ನಾವಿಬ್ರೂ ಬರ್ತೀವಿ. ಅಲ್ಲೀವರ್ಗೆ ತಡಕೋ. ಬಂದು ವಿಚಾರಿಸಿಕೋತೀವಿ.” ಅಂತ. ಮೈನಕ್ಕ ಮಾತಾಡ್ತಿರೋವಾಗ್ಲೇ ಅವಳ್ಗಂಡ ಪಾರ್ವಾಳಪ್ಪ ಫೋನ್ ಕಿತ್ಕೊಂಡು “ಗೊರವಂಕಂಗೆ ತಲೆಗೆ ಏರಿರೋ ಪಿತ್ತ ಇಳಿಸ್ತೀನಿ. ಕೆಲ್ಸ ಇಲ್ದೇ ಬಿದ್ದಿದ್ದಾಗ ಯಾರ್ಯಾರ ಕೈಯಿ ಕಾಲು ಕಟ್ಟಿ ಅವನಿಗೆ ಕೆಲ್ಸ ಕೊಡಿಸಿದ್ದು.  ಜೊತೆಗೆ ಬಾಳ್ವೆ ಮಾಡು ಅಂತ ಮುದ್ದಿಂದ ಸಾಕಿದ ಮಗ್ಳುನ್ನೂ ಕೊಟ್ರೆ ಬಾಳ್ವೆ ಮಾಡಕ್ಕೆ ಯೋಗ್ಯತೆ ಇರಬೇಕಲ್ವಾ. ನೀನು ಬೇಜಾರು ಮಾಡ್ಕೋಬೇಡ ಪುಟ್ಟ. ನಾನೆಲ್ಲ ನೋಡ್ಕೋತೀನಿ” ಅಂತ ಮಗ್ಳಿಗೆ ಸಮಾಧಾನ ಹೇಳ್ತಿದ್ರಂತೆ. “ಇನ್ನೂ ಏನೇನು ಮಾತಾಡ್ತಿದ್ರೋ… ಗೀಜಕ್ಕ ಎಷ್ಟು ಹೊತ್ತೂಂತ ಕಸ ಬಳಿಯೋ ನಾಟಕ ಆಡ್ತಾಳೆ. ಅವ್ಳಿಗೆ ತಿಳಿದಷ್ಟನ್ನ ನಮ್ಮಮ್ಮನ ಹತ್ರ ಹೇಳಿದ್ಳಂತೆ. ನಮ್ಮಮ್ಮ ನನ್ನತ್ರ ಹಂಗಂದ್ರು. ನಿಂಗೇನಾದ್ರೂ ನಿಮ್ಮಣ್ಣನಿಂದಾನೋ ಅತ್ಗೇಂದಾನೋ ಏನಾದ್ರೂ ಸಮಾಚಾರ ಬಂದಿರ್ಬೋದೇನೋ ಅಂದುಕೊಂಡೆ.” ಎನ್ನುತ್ತಾ ಕಾಗಕ್ಕನ ಮುಖ ನೋಡಿದಳು.  “ಹಂಗಾ.. ನಿಜವಾ ನೀ ಹೇಳ್ತೀರೋದು…” ಕಾಗಕ್ಕನ ಮುಖ ಅಚ್ಚರಿಯಿಂದ ಅರಳಿತು.  “ಯಾವ್ಮುಖ ಇಟ್ಕೊಂಡು ಹೇಳ್ತಾರೆ ಹೇಳು? ಎನ್ ಸುಖದ್ ಸಮಾಚಾರಾನಾ ಬಿಂಕವಾಗಿ ಹೇಳಕ್ಕೆ. ನನ್ ಮಗ್ಳುನ್ನ ಸೊಸೆ ಮಾಡ್ಕೊಳ್ಳೋ ಅಣ್ಣಾ, ತೌರುಮನೇಗೆ ನಮ್ಮನೇ ಬಳ್ಳಿ ಸುತ್ಕೊಳತ್ತೆ ಅಂದ್ರೇ, “ನಿಂಗೊತ್ತಿಲ್ಲಾ ಕಾಗೀ,  ಬಳಗದಲ್ಲಿ ಮದ್ವೆ ಮಾಡ್ಕೊಂಡ್ರೆ ಉಟ್ಟೋ ಪಿಳ್ಳೆಗಳು ರೋಗವಾಗಿ ಉಟ್ಟುಟ್ವೆ. ನಿನ್ನ ಮಗ್ಳೂ ನನ್ನ ಮಗಳಾಂಗೇ ಅಲ್ವಾ.  ಸಂಬಂಧ ಬೆಳಸೋದು ಬೇಡ. ಇರೋ ಸಂಬಂಧ ಚೆನ್ನಾಗಿಟ್ಕೋಣೋಣ’ ಅಂದ. ಅತ್ಗೇ… “ಕಾಗೀ ನಿನ್ನ ಮಗ್ಳು ಕಪ್ಪಿದ್ರೂ ಕಡಿದ ಶಿಲೆ ಹಾಗಿದಾಳೆ. ಯಾರಾದ್ರೂ ಹುಡುಕ್ಕೊಂಡು ಬಂದು ಮಾಡ್ಕೋತಾರೆ. ಯೋಚ್ನೇನೇ ಮಾಡ್ಬೇಡ’ ಅಂತ ವೈಯ್ಯಾರವಾಗಿ ನನ್ನ ಮಗ್ಳ ಬಣ್ಣಾನ ಎತ್ತಿ ಅಡೋದ! ಆಗ್ಬೇಕು ಆವಂಗೆ ಹಿಂಗೆ” ಕೂತಲ್ಲೇ ನೆಟಿಕೆ ಮುರಿದವಳು “ಸ್ವಲ್ಪ ತಡೀ ಕಾಫಿ ತರ್ತೀನಿ ಅಲ್ಲೀವರ್ಗೂ ಕಳ್ಳೇಪುರಿ ತಿಂತಿರು ಎಂದು ಬಟ್ಟಲನ್ನ ಮುಂದು ಸರಿಸಿದಳು. ಅದರಲ್ಲಿಂದ ಒಂದೊಂದೇ ಕಡಲೇಕಾಯಿ ಬೀಜವನ್ನು ಹೆಕ್ಕುತ್ತಾ ಗುಬ್ಬಕ್ಕ ಬಾಯಾಡಿಸ ತೊಡಗಿರುವಾಗಲೇ “ಮುಂದೇನಾಯ್ತಂತೆ?” ಎನ್ನುತ್ತಾ ಕಾಗಕ್ಕ ಕಾಫಿಯ ಬಟ್ಟಲನ್ನು ತೆಗೆದುಕೊಂಡು ಬಂದಳು.  ಕಾಫಿ ಹೊಟ್ಟೆಗೆ ಬಿದ್ದ ಮೇಲೆ ಇನ್ನೂ ಏನಾದ್ರೂ ಒಳಗೆ ಇರೋ ವಿಷ್ಯಾ ಹೊರಕ್ಕೆ ಕಾರುತ್ತೇನೋ ಅಂತ ಗುಬ್ಬಕ್ಕನ ಮುಖವನ್ನೇ ನೋಡತೊಡಗಿದಳು.  ನಿಧಾನವಾಗಿ ಗುಟುಕರಿಸುತ್ತಾ ಏನೋ ಗಹನವಾದ ಆಲೋಚನೆಯಲ್ಲಿರುವಂತೆ ಮುಖ ಮಾಡಿಕೊಂಡ ಗುಬ್ಬಕ್ಕ “ಒಂದ್ಕೆಲ್ಸ ಮಾಡೋಣ” ಎನ್ನುತ್ತಾ ಬಟ್ಟಲನ್ನು ಕೆಳಗಿಟ್ಟಳು.  `ಏನು?’ ಎನ್ನುವಂತೆ ನೋಡಿದ ಕಾಗಕ್ಕನ ಮುಖವನ್ನೇ ನೋಡುತ್ತಾ ನಾಳೇನೋ ನಾಡಿದ್ದೋ ಹಂಸನ ಹತ್ರ ಹೋಗೋಣ.  ಅವ್ಳ ಮಗ್ಳೂ, ಈ ಅರಗಿಣೀನೂ ಗೆಳ್ತೀರು. ಅಂದ್ಮೇಲೆ ಏನೋ ಒಂದಷ್ಟು ವಿಷ್ಯ ಗೊತ್ತೇ ಇರತ್ತಲ್ವ.  ಏನಾದ್ರೂ ಅವರಮ್ಮನ ಹತ್ರ ಹೇಳಿರ್ಬೋದು. ಹೋದ್ರೆ ಗೊತ್ತಾಗುತ್ತೆ.  ಫೋನ್ ಮಾಡಿ ಕೇಳಕ್ಕಾಗಲ್ಲ”.  “ನಾವು ಹೋಗಿ ಕೇಳಿಬಿಟ್ರೆ ಅವ್ಳು ಹೇಳಿಬಿಡ್ತಾಳೋ” ಕಾಗಕ್ಕ, ಹಂಸ ಹೇಳ್ಳಿಕ್ಕಿಲ್ಲ ಎನ್ನುವ ಭಾವ ವ್ಯಕ್ತಪಡಿಸಿದಳು. “ಕೇಳೋ ತರ ಕೇಳಿದ್ರೆ ಹೇಳ್ತಾಳೆ.  ಅವ್ಳಿಗೆ ಗೊತ್ತಿರೋ ವಿಷ್ಯ ಕಕ್ಸೋ ಭಾರ ನಂದು. ಯಾವಾಗ ಹೋಗೋಣ ಹೇಳು” ಎಂದ ಗುಬ್ಬಕ್ಕನಿಗೆ “ಇವತ್ತಿನ್ನೂ ಮಂಗಳ್ವಾರ.  ನಾಳೆ ಬುಧವಾರ. ಎರ್ಡು ದಿನ್ವೂ ಇವ್ರು ಬೇಗ ಬರ್ತಾರೆ. ಎಲ್ಲೂ ಹೋಗೋ ಹಂಗಿಲ್ಲ. ಈ ವಿಷ್ಯಕ್ಕೆ ಅಂತೇನಾದ್ರೂ ತಿಳಿದ್ರೆ ಅಷ್ಟೇ ಬಡದು ಬಲಿ ಹಾಕ್ಬಿಡ್ತಾರೆ. ಶುಕ್ರವಾರದ ಪೂಜೇಗೆ ಕರೆಯೋ ನೆಪ ಮಾಡ್ಕೊಂಡು ಗುರುವಾರ ಹೋಗೋಣ” ಎಂದಳು.  “ಆದೇನ್ ನಿನ್ನ ಗಂಡನ ಕೆಲಸ್ವೋ. ವಾರಕ್ಕೆ ಮೂರ್ ದಿನ ನಾಲಕ್ಕುಗಂಟೇಗೇ ಬಂದು ಕೂತ್ಕೋತಾರೆ. ದೂರ್ವಾಸನ್ ಸಾವಾಸ ನಿಂಗೆ. ನನ್ನ ಗಂಡ ನೋಡು ರಾತ್ರಿ 9 ಗಂಟೇಗ್ ಮುಂಚೆ ಬರಲ್ಲ. ಇನ್ನೇನ್ಮಾಡೋದು? ಗುರ್ವಾರವೇ ಹೋಗೋಣ. ಈಗ ಅಲ್ಲೀವರ್ಗೂ ತಡ್ಕೊಂಡು ಕೂತಿರ್ಬೇಕಲ್ಲಾ ನಾವು…  ಹೊಸತರಲ್ಲಿರೋ ಮಜಾ ಅಮೇಲಿರಲ್ಲ. ಏನ್ ಮಾಡೋದು.. ಸರಿ ..  ಅಷ್ಟರಲ್ಲಿ ಇನ್ನೇನಾದ್ರೂ ವಿಷ್ಯ ಗೊತ್ತಾದ್ರೆ ನೀನೂ ಹೇಳು; ನಾನೂ ಹೇಳ್ತೀನಿ” ಎನ್ನುತ್ತಾ ಅಂದಿನ ಮೀಟಿಂಗ್ ಭರ್ಕಾಸ್ತ್ ಮಾಡಿ ಗುಬ್ಬಕ್ಕ ಹೊರಟಳು. ಕಾಗಕ್ಕನಿಗೋ ಒಂದ್ಕಡೆ ಖುಷಿ, ಇನ್ನೊಂದ್ಕಡೆ ಕುತೂಹಲ ಎನಾಗಿರ್ಬೋದು?  ಯಾಕೆ ಗಂಡ ಹೆಂಡ್ತಿ ಮಧ್ಯ ಈ ಮಟ್ಟಕ್ಕೆ ಜಗಳ ಆಯ್ತು…  ಈ ಗುಬ್ಬಕ್ಕನ್ ಮಾತನ್ನ ಪೂರಾ ನಂಬಕ್ಕಾಗಲ್ಲ; ಇನ್ಯಾರನ್ನ ಕೇಳಿದ್ರೆ ಸರಿಯಾಗಿ ಏನು ನಡೀತು ಅಂತ ತಿಳಿಯತ್ತೆ … ಏನೂ ತೋಚದೆ ತಲೆಯನ್ನ ಪರಪರ ಕೆರೆದುಕೊಂಡ್ರೂ ಯಾರೂ ತಲೆಗೆ ಬರ್ಲಿಲ್ಲ.  ಮಧ್ಯಾನ್ಹದ ಊಟಾನೂ ಸರಿಯಾಗಿ ಸೇರ್ಲಿಲ್ಲ. ಒಂದ್ ಗಳಿಗೆ ಕಣ್ಣುಮುಚ್ಚಿಕೊಳ್ಳೋಣ ಅಂತ ಉರುಳಿಕೊಂಡ್ರೂ ಸಮಾಧಾನವಿಲ್ಲ. ಹಿಂಗೇ ಯೋಚ್ನೇ ಮಾಡ್ತಾ ಒಂದ್ ಕಣ್ ಹತ್ತಿತ್ತೋ ಏನೋ ಅಷ್ಟರಲ್ಲೇ ಬಾಗಿಲು ಡಬಡಬ ಬಡ್ಕೊಂತು. `ಯಾರ್ಬಂದ್ರೋ ಪಾಪಿಗ್ಳು ನಿದ್ದೇಗೆ ಎರವಾಗಿ’ ಎಂದು ಬೈದುಕೊಳ್ಳುತ್ತಾ ಕಷ್ಟ ಪಟ್ಟು ಎದ್ದು ಹೋಗಿ ಬಾಗಿಲು ತೆರೆದಳು.`ವಿಷ್ಯಾ ಗೊತ್ತಾಯ್ತಾ…’ ಆತಂಕದಿಂದ ಒಳ ಬಂದಳು ಕುಕ್ಕುಟಕ್ಕ… ಅತ್ತಿಗೆಯ ಅತ್ತಿಗೆ. “ಏನತ್ಗೆ.. ಬಾ.. ಕೂತ್ಕೋ  ಎನ್ನುತ್ತಾ ಸೋಫಾ ತೋರಿದಳು.  “ಇಲ್ಬೇಡಾ.. ನಮ್ಮನೇಗ್ ಬಾ” ಎಂದಳು.  “ಆಯ್ ಇವತ್ತು ಇವ್ರು ಇನ್ನೊಂದು ಗಂಟೇಗೆಲ್ಲಾ ಬಂದು ಎಲ್ಲೋ ಓಗ್ಬೇಕಂತೆ.  ಇನ್ನೂ ತಿಂಡಿ ಮಾಡ್ಬೇಕು.. ಮಕ್ಳೂ ಐದು ಗಂಟೆಗೆಲ್ಲಾ ಬಂದ್ಬಿಡ್ತಾವೆ. ಬರಕ್ಕಾಗಲ್ಲ. ಇಲ್ಲೇ ಹೇಳು ಮತ್ತೆ.’  “ಇಲ್ಲ; ನಾನು ಬರುವಾಗ ಗುಬ್ಬಕ್ಕ ನೋಡಿದ್ಳು.  ಅವ್ಳಿಗೆ ತಿಳಿಯೋದು ಬೇಡ.  ನೀನೊಬ್ಳೇ ಮಂಗಳ ಗೌರಿ ಪೂಜೆ ಅರಿಶಿನ ಕುಂಕುಮಕ್ಕೆ ಕರೆದೆ ಅನ್ನೋ ನೆಪ ಮಾಡಿಕೊಂಡು ಬಾ. ನಾನು ಇನ್ನೊಂದು ನಿಂಷ ಇಲ್ಲಿದ್ರೆ ಅವ್ಳು ಬಂದ್ಬಿಡ್ತಾಳೆ. ಏಳು ಗಂಟೇಗೆ ಕಾಯ್ತಿರ್ತೀನಿ” ಎನ್ನುತ್ತಾ ಹೊರಟೇಬಿಟ್ಟಳು. `ಅಯ್ಯೋ ದೇವ್ರೆ.  ಏನು ಇವ್ಳ ಕತೆ.  ಈ ಥರ ಸಸ್ಪೆನ್ಸ್ ಹುಟ್ಟು ಹಾಕಿ ಹೋಗೋದ…’ ಎಂದು ಕೊಳ್ಳುತ್ತಿರುವಾಗಲೇ ಗುಬ್ಬಕ್ಕ ನುಸುಳಿದಳು “ಏನಂತೆ ಕುಕ್ಕುಟಕ್ಕನ ಕತೆ…” ರಾಗವಾಗಿ ಕೇಳಿದಳು.  ಏನೋ ಖಂಡಿತವಾಗಿ ಇದೆ ಎನ್ನುವಂತೆ.  “ಮಂಗಳ ಗೌರಿ ಪೂಜೆಯಂತೆ. ಸಂಜೇಗೆ ಅರಿಶ್ನ ಕುಂಕ್ಮಕ್ಕೆ ಬಂದೋಗು ಅಂತ ಕರಿಯಕ್ಕೆ ಬಂದಿದ್ಲು.”  “ಅಂಗಾ.. ಗೊತ್ತಾಯ್ತು ಬಿಡು.. ನಂಗ್ ಹೇಳ್ದೇ ಹೋದೀಯ” ಕಣ್ಣು ಮಿಟುಕಿಸಿದಳು.  “ಏ… ವಿಷ್ಯ ಇದ್ರೆ ನಿಂಗೆ ಹೇಳ್ದೇ ಇರ್ತೀನಾ.  ನಿಜವಾಗೂ ಕರೆಯಕ್ಕೇ ಬಂದಿದ್ಳು” ಕಾಗಕ್ಕ ವಿಷಯದ ತಿಂಡಿಯ ಮೇಲೆ ಮುಸುಕು ಹಾಕಲು ನೋಡಿದಳು. “ಸರಿ ಸರಿ ಹೋಗು…  ಆಮೇಲೆ ಸಿಗ್ತೀನಿ” ಎನ್ನುತ್ತಾ ಅವಳು ಹೊರಟರೂ ತನ್ನ ಮಾತನ್ನ ಅವಳು ನಂಬಿಲ್ಲ ಎನ್ನುವುದು ಕಾಗಕ್ಕನಿಗೆ ಗೊತ್ತಾಗಿ ಹೋಯಿತು. ಸಂಜೆ ಗಂಡ ಮಕ್ಕಳು ಬಂದ ಮೇಲೆ, ರಾತ್ರಿ ಆಡುಗೇನೂ ಮಾಡಿಟ್ಟು ʻಕುಕ್ಕುಟಕ್ಕನ ಮನೆಗೆ ಅರಿಶ್ನ ಕುಂಕ್ಮಕ್ಕೆ ಹೋಗ್ಬರ್ತೀನಿʼ ಅಂತ ಹೇಳಿ ಹೊರಟಳು.  ಬಾಗಿಲಲ್ಲೇ ಕಾಯ್ತಾ ನಿಂತಿದ್ದ ಕುಕ್ಕುಟಿ “ಬಂದ್ಯಾ ಬಾ ಬಾ” ಎನ್ನುತ್ತಾ ಒಳಗೆ ಎಳೆದುಕೊಂಡಂತೇ ಕರೆದುಕೊಂಡು ಹೋದಳು.  ಸೋಫಾದ ಮೇಲೆ ಇನ್ನೂ ಊರುತ್ತಿದ್ದ ಹಾಗೇ “ಗೊತ್ತಾ ವಿಷ್ಯ…” ಆತಂಕದಿಂದ ಕೇಳಿದ್ಳು. ಏನೂ ಗೊತ್ತಿಲ್ಲದ ಸೋಗು ಹಾಕಿಕೊಳ್ಳುತ್ತ “ಏನತ್ತಿಗೆ… ಏನಾಯ್ತು?” ಆತುರದಿಂದ ಕೇಳಿದಳು. “ಏನ್ ಗೊತ್ತಾ ಕಾಗಿ, ನಿಮ್ಮಣ್ಣನ ಮಗನ

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ತೋಳ ಉಯ್ಯಾಲೆ ಶಾಂತಾ ಜೆ ಅಳದಂಗಡಿ ತೋಳ ಉಯ್ಯಾಲೆ ಅಂದದ ಸುಂದರ ಬಂಧುರ ಭಾವದ ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ ಕಾವ್ಯದ ನವ್ಯತೆ ಬಲು ನಾವೀನ್ಯತೆ ಬೆಳಗಿತು ನನ್ನಯ ಹೃದಯದ ಹಣತೆ ಚೆಲ್ಲುವೆ ನನ್ನವ ನಡೆಯುವ ಹಾದಿಗೆ ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ ಜತೆಯಾಗಿ ಕುಳಿತು ಜೋಕಾಲಿ ಆಡುವೆ ಸ್ವರ್ಗವೆ ಇರಲಿ ನರಕವೆ ಬರಲಿ ಹೂವು ನಾರಿನ ಬಂಧವು ಬೆಸೆಯಲಿ ******

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ ಕಟ್ಟಿದ್ದ ‘ಮುನ್ನಿ’ ಯಾಕೋ ಇಂದು ಹುಚ್ಚು ಬಂದವಳಂತೆ ಬೊಗುಳುತ್ತಿದ್ದಳು.! ಎಷ್ಟು ಸಾಮಧಾನಿಸಿದರು ಬೊಗಳುವುದು ಮಾತ್ರ ನಿಲ್ಲಿಸಲಿಲ್ಲ.. ಆಗಸ ಪೂರ್ತಿಯಾಗಿ ಕಡುಕಂದು ಬಣ್ಣದ ಮೋಡಗಳಿಂದ ಅವಕುಂಠನವಾಗುತ್ತಿತ್ತು. ಮೋಡದ ಸಂಧುಗಳಲ್ಲಿ ಸಣ್ಣನೆಯ ಮಿಂಚುಗಳಿಂದ ಶುರುವಾದ ತಿಳಿಮಳೆ ಸಿಡಿಲಿಗೆ ತಿರುಗಿ ಜೋರಾಗಿ ಧರೆಗೆ ಎರಗುತ್ತಿತ್ತು. ಇವನು ಮಾತ್ರ ಸದ್ದಿಲ್ಲದೆ ಮೌನಕ್ಕೆ ಶರಣಾಗಿದ್ದ.! ಟೀ ತಂದುಕೊಟ್ಟೆ ಹೀರುತ್ತ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ, ನಾನು ಅವನನ್ನೇ ನೋಡುತ್ತಾ ಕುಳಿತುಬಿಟ್ಟೆ ಹೊರಗಿನ ಚಳಿಯಿಂದ ಮೈ ಕಂಪಿಸುತ್ತಿತ್ತು.! ಇಂದೆಕೋ ಅವನ ಕಣ್ಣುಗಳು ಮಾದಕವಾಗಿ ಕಾಣುತ್ತಿತ್ತು, ನಾನೇ ಎದ್ದು ದಿನವೂ ಆಡುತ್ತಿದ್ದ ಚದುರಂಗದ ಬೋರ್ಡ್ ಅನ್ನು ಅವನ ಮುಂದಿಟ್ಟೆ..! ಏನು ಮಾತನಾಡದೆ ಆಟದ ಒಳಗಿಳಿದು ಮಗ್ನನಾದ.! ಈ ಮಳೆಯ ಚಳಿಗೆ ನನ್ನ ಭಾವನೆಗಳು ಸಣ್ಣಗೆ ಅರಳುತ್ತ ಅವನ ಉಸಿರಿನ ಬಿಸಿಗೆ ಬಿರಿದು ಕಟ್ಟದಾಚೆ ಮುಗುಚುವ ನೀರಿನಪಾತದಲ್ಲಿ ಉದುರಿ ಸತ್ತ ಹೂಗಳಂತೆ..! ಅವನ ಶುಭ್ರವಾದ ಕಡುಕಪ್ಪಿನ ಕಣ್ಣುಗಳ ನೋಟಕ್ಕೆ ನೋಟ ಬೆಸೆಯಾಲಾಗದೆ ಆಸೆಗಳು ಸಾಯುತ್ತಿದ್ದವು..! ಪ್ರತಿ ಬಾರಿಯ ಚದುರಂಗದ ನಡೆಯಲ್ಲಿ ನನ್ನ ಕಾಲಾಳು ಬಲಿಯಾದಾಗಲು ನಾನು ಅವನ ಕಂಗಳನ್ನು ನೋಡುತ್ತಿದ್ದೆ.! ಅವನು ಮಾತ್ರ ಆ ನೋಟದ ಸೆಳೆತಕ್ಕೆ ಸಿಗುತ್ತಿರಲಿಲ್ಲ, ಆಟವು ಕೊನೆಹಂತಕ್ಕೆ ತಲುಪಿತ್ತು.! ನಾನು ಕೂಡ..! ರಾಜನನ್ನು ಅಲುಗದಂತೆ ಕಟ್ಟಿಹಾಕಿ ‘ಚೆಕ್ಮೇಟ್’ ಹೇಳಿ ಮುಗುಳುನಗುತ್ತ ನನ್ನ ಮೊಗನೋಡಿದ. “ಹೌದು” ಆ ಘಳಿಗೆಯಲ್ಲಿ ಅವನನ್ನು ನನ್ನ ನೋಟದ ಸೆಳೆವಿನಲ್ಲಿ ಸಿಕ್ಕಿಸಿಕೊಂಡುಬಿಟ್ಟೆ; ನೋಟ ಕದಲದಂತೆ. ಅವನು ಸಣ್ಣಗೆ ಕಂಪಿಸಿದ್ದ.! ನನ್ನ ಎದೆಯ ಏರಿಳಿತ ಹೆಚ್ಚಾಗುತ್ತಿತ್ತು.! ಮಳೆಯ ಅಬ್ಬರವು ಹೆಚ್ಚಾಗುತ್ತಿತ್ತು.! ಮುನ್ನಿಯ ಬೊಗಳುವಿಕೆ ಕೂಡ ಹೆಚ್ಚಾಗುತ್ತಿತ್ತು.! ಕಂದರದ ಒಡಲಾಳದಿಂದ ಭಾರಿ ಸಿಡಿಲೊಂದು ಢಮ್ ಎಂದು ಭೂಮಿಗೆ ಅಪ್ಪಳಿಸಿತು. ಬೆಚ್ಚಿಹೋದೆ.! ಅವನ ಮಗುಲಿಗೆ ಬಂದು ಭುಜವಿಡಿದು ಕುಳಿತೆ, ಮತ್ತೊಂದು ಮೊಗದೊಂದು ಬಡಿಯುತ್ತಲಿವೆ..! ಅವನು ನನ್ನ ಬೆನ್ನ ಮೇಲೆ ಭಯ ನೀಗಿಸಲು ಕೈಇಟ್ಟ.! ಆ ಕೈಗಳನ್ನಿಡಿದು ತುಟಿಗೆ ಒತ್ತಿಹಿಡಿದೆ.! ಪ್ರತಿರೋಧಿಸುತ್ತಿದ್ದ ಇಷ್ಟು ವರ್ಷಗಳಿಂದ ಕಟ್ಟಿದ್ದ ಬಯಕೆ ಇಂದು ಬೋರ್ಗರೆದು ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿಯೊಡೆದಿತ್ತು.! ಹೌದು ನನ್ನ ಬಯಕೆಯ ಪಾತಕ್ಕೆ ಸಿಕ್ಕಿ ಮಗುಚಿ ಬಿದ್ದು ತೋಯ್ದು ಹೋದ..! ನನ್ನ ಪ್ರತಿ ಮುತ್ತಿನಲ್ಲೂ ಕರಗಿ ಶರಣಾಗತನಾದ.! ಇಬ್ಬರೂ ಶೃಂಗಾರದ ಕಡಲೊಳಗೆ ಈಜುವ ಮೀನುಗಳಾಗಿದ್ದರೂ ಅವನ ಪ್ರತಿ ಸ್ಪರ್ಶದಲ್ಲೂ ಅವಳ ಹೆಣ್ಣತನದ ಆಸೆಯೆಲ್ಲ ಜಿನುಗಿ ನೀರಾಗಿ ಅವನ ಆಗಮನಕ್ಕೆ ಅಣಿಯಾಗಿ ಸುಖದ ತುತ್ತತುದಿಗೆ ತಲುಪಿದ್ದಳು.! ಇಬ್ಬರೂ ಮಳೆಯೊಳಗೆ ಬಿಸಿಯಾದ ಹನಿಗಳಾಗಿ ಕರಗಿ ಹೋಗಿದ್ದರು ಆಸೆಯೂ ಕೂಡ ಬೆವರಾಗಿ ಬಸಿದು ಇಂಗಿಹೋಗುತ್ತಿತ್ತು.! ವಾರಪೂರ್ತಿ ಅಖಂಡ ಕಾಮದೊಳೊಗೆ ಮುಳುಗಿ ವಿಧ ವಿಧವಾಗಿ ಈಜಿದ್ದರು.! ಈ ಅಖಂಡ ಮಿಲನದಿಂದ ಅವಳ ಕಾಮದಸಿವು ಇಂಗಿತ್ತ…!? ಅಥವಾ ಅವನ ನಿರ್ಮಲ ಪ್ರೇಮವೂ ಸತ್ತು ಅವಳ ಕಾಮದಸಿವಿಗೆ ಆಹಾರವಾಗಿತ್ತ..!? ಇಲ್ಲಾ ಪ್ರೇಮವೂ ಕೊನೆಯ ಹಂತ ತಲುಪಿ ಮಿಲನವಾಗಿ ಅವಳಲ್ಲಿ ಕರಗಿತ್ತ..!? ಹತ್ತು ವರುಷಗಳ ಹಿಂದೆ ರಂಗನಾಥಗುಡಿಯ ಹೊರಭಾಗದ ಒಂಟಿ ಅರಳಿಮರದ ಕೆಳಗೆ ಜನಿವಾರವಾಕಿದ್ದ ಈ ಸತ್ಯ ಕುಳಿತಿದ್ದ, ವಸಂತನ ಹಾವಳಿಗೆ ಬದಲಾಗುತ್ತ ಹಚ್ಚ ತಿಳಿಹಸಿರಿನಿಂದ ಚಿಗುರೊಡೆಯುತ್ತಿರುವ ಅರಳಿಮರ ಹಿಂಬದಿಗಿತ್ತು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗಿದ್ದ ಸೂರ್ಯ ಎದುರಿಗಿದ್ದ ರೇಖಾಳಿಂದ ಬದಲಾಗಿದ್ದ ಈ ಮೇರಿ ಅವನ ಪಕ್ಕದಲ್ಲೇ ಕುಳಿತ್ತಿದ್ದಳು, ಬದಲಾವಣೆ ಈ ಜಗದ ನಿಯಮ ಹೊಸದೊಂದು ಹುರುಪಿನೊಂದಿಗೆ ಹೊಸತನ ಆಗಮಿಸಲೇ ಬೇಕು, ಹಾಗೆ ಆಗಮನವಾಗಿದ್ದು ಕೂಡ ನಿರ್ಗಮಿಸಲೇ ಬೇಕು.! ಇದು ಕೂಡ ಜಗದ ನಿಯಮವೇ.! ಆದರೆ ಅಂದು ನನಗೆ ತಿಳಿಯಲೇ ಇಲ್ಲ.! ಅವನು ಮೌನವಾಗಿ ಕುಳಿತಿದ್ದ ಸಣ್ಣಗೆ ಗಾಳಿ ಬೀಸಿದರು ಸತ್ತುಬಿದ್ದ ಎಲೆಗಳ ಜೂರ್ಗುಟ್ಟುವ ಶಬ್ದಮಾತ್ರ ಕೇಳುತ್ತಿತ್ತು..! ಇದೆ ಎಲೆಗಳು ಚಿಗುರೊಡೆದು ಬೆಳೆದು ಬಲಿಯುವಾಗ ಮೌನವಾಗಿರುತ್ತವೆ ಆದರೆ ಸತ್ತು ಬಿದ್ದಿರುವಾಗ ಸದ್ದುಮಾಡುತ್ತಿವೇ.! ಮನುಷ್ಯಮಾತ್ರ ಇದರ ತದ್ವಿರುದ್ಧ..! ನಾನೇ ಆ ಮೌನ ಒಡೆದು ‘ಸತ್ಯ’ ಎಂದೇ ಅವನು ಮಾತನಾಡಲಿಲ್ಲ.! ಮತ್ತೊಮ್ಮೆ ಏರುಧನಿಯಲ್ಲಿ ‘ಹೇ ಸತ್ಯ’ ಎಂದೇ ‘ಹೂ’ ಎಂದ.. ಆದರೆ ನನ್ನೆಡೆಗೆ ತಿರುಗಲಿಲ್ಲ ನನ್ನ ಸಂಭ್ರಮಕ್ಕೆ ಅಷ್ಟೇ ಸಾಕಿತ್ತು.! ನನ್ನ ಮದುವೆಯ ಬೆಳವಣಿಗೆಯನ್ನೆಲ್ಲ ಮತ್ತು ಹುಡುಗನ ಬಗ್ಗೆ ಗೊತ್ತಿದ್ದಷ್ಟು.! ನಾನು ಸೃಷ್ಟಿಸಿಕೊಂಡಿದಷ್ಟು.! ಇಲ್ಲದಷ್ಟು.! ಇರುವುದಕ್ಕಿಷ್ಟು.! ಸೇರಿಸಿ ಅವನು ಕರುಬುವಂತೆ ಗುಣಗಾನ ಮಾಡಿ ಹೇಳುತ್ತಿದ್ದೆ, ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ, ಶಿಲುಬೆ ಏರಿದ ಏಸುವಿನಂತಿತ್ತು.! ನಾನು ನಿರುತ್ಸಾಹಳಾದೆ, ಸಿಕ್ಕಾಗಲೆಲ್ಲ ನನ್ನ ಧರ್ಮದ ಬಗ್ಗೆ ಹೀಯಾಳಿಸುವ ಮಾತನಾಡುತ್ತಿದ್ದ.! ಎಲ್ಲಾ ಧರ್ಮಗಳ ಲೋಪಗಳನ್ನೆಲ್ಲ ತೆಗಳಿ ಉಗಿಯುತ್ತಿದ್ದ.! ತನ್ನ ಧರ್ಮವೇ ಮೇಲೆಂದು ಎಂದು ಹೇಳಿದವನಲ್ಲ.! ಮನುಷ್ಯನ ಸುಖ ಜೀವನಕ್ಕೆ ಈ ಧರ್ಮಗಳೇ ಬೇಲಿ ಎನ್ನುತ್ತಿದ್ದ.! ಅವನು ಹೇಳುವುದು ಸರಿ ಎನಿಸಿದರೂ ಸೋಲುವಂತ ಹೆಣ್ಣು ನಾನಾಗಿರಲಿಲ್ಲ; ಪ್ರತಿವಾದಿಸುತ್ತಿದ್ದೆ. ವಿತಂಡವಾದಕ್ಕಿಳಿಯುತ್ತಿದ್ದೆ.! ನಂತರ ಇಬ್ಬರು ಜಗಳವಾಡಿ ಸುಮ್ಮನಾಗುತ್ತಿದ್ದೆವು.. ಇಂದು ನಾನು ಅಷ್ಟು ಮಾತನಾಡಿದರು ಪ್ರತಿಮಾತನಾಡಲಿಲ್ಲ, ನಿರ್ಲಿಪ್ತತತೆಯಿಲ್ಲದ್ದಿದ್ದರು ಅವನು ಗೊಂದಲದಲ್ಲಿದ್ದ, ‘ಏನು ಹೇಳು ಸತ್ಯ ಏತಕ್ಕಾಗಿ ಈಗಿದ್ದಿಯ ಮಾತನಾಡು’ ಎಂದೇ ಮುಖ ನೋಡಿದ. ಎದ್ದು ನಿಂತ. ಅವನು ಕೇಳುವ ಪ್ರಶ್ನೆಗಳಿಗೆಲ್ಲ ನನ್ನಿಂದ ಆಗಲೇ ಉತ್ತರ ಸಿಕ್ಕಿವೆಂಬಂತೆ! ನಾಳೆಯಿಂದ ನಾನು ಊರಿನಲ್ಲಿ ಇರುವುದಿಲ್ಲವೆಂದ. ಎಷ್ಟು ದಿನ ಸತ್ಯ.? ‘ಗೊತ್ತಿಲ್ಲ’ ‘ಎಲ್ಲಿಗೆ ಹೋಗುತ್ತಿಯ.? ‘ನಿನಗೆ ಬೇಡದ ವಿಷಯ’, ಧನಿಯಲ್ಲಿ ತಿರಸ್ಕಾರವಿತ್ತು. ‘ನನ್ನ ಮದುವೆಗಾದರು ಬರುತ್ತಿಯ ತಾನೇ’ ಎಂದೆ. ಅವನು ಮಾತನಾಡಲಿಲ್ಲ… ಆ ಮೌನ ಅವನ ಮಾತಿಗಿಂತ ಕಠಿಣವಾಗಿತ್ತು . ಹಾಗೆ ಹೊರಟುಹೋದ. ಮೌನದಲ್ಲಿ ಮುಳುಗಿದ ಸೂರ್ಯನಂತೆ ಗುಡಿಯ ಒಳಗೆ ಸಂಕ್ರಮಣ ಪೂಜೆಯ ಘಂಟವಾದ್ಯಗಳು ಮೊಳಗಿದ್ದವು, ಸಂಕ್ರಮಣದ ಸೂರ್ಯಕೂಡ ಎದುರಿನ ಚಿಕ್ಕ ಬೆಟ್ಟದ ಕೆಳಗೆ ಮುಳುಗಿದ್ದರು ಅವನ ಇರುವಿಕೆಯ ಬೆಳಕು ಮಾತ್ರ ಮೋಡಗಳಿಂದ ಗೆರೆ ಗೆರೆಯಾಗಿ ಸೀಳಿ ಪ್ರಕಾಶಿಸುತ್ತಿತ್ತು.. ಅವಳು ಸ್ವಲ್ಪ ಸಮಯ ಅಲ್ಲೇ ನಿಂತು ಸೂರ್ಯ ಮುಳುಗಿದ ದಿಕ್ಕಿನೆಡೆಗೆ ಹೊರಟುಹೋದಳು.. ಇಬ್ಬರ ಬದುಕಿಗೂ ವಸಂತನ ಆಗಮನವಾಗಿತ್ತು ಅವಳು ಚಿಗುರೆಲೆಯ ಹುರುಪಿನಲ್ಲಿದ್ದಳು.! ಅವನು ಉದುರಿಬಿದ್ದ ಎಲೆಯಂತಿದ್ದ..! ಮದುವೆಯ ಹಿಂದಿನ ದಿನಕೂಡ ಅರಳಿಮರದ ಬಳಿ ಬಂದು ಹೋಗಿದ್ದಳು ಬೃಹದಾಕಾರದ ದೈತ್ಯಮರ ಮಾತ್ರ ಹಸಿರೋದ್ದು ನಿಂತಿತ್ತು..! ಸತ್ಯ ಕಾಣಲಿಲ್ಲ.! ಅವನೆದೆಯ ಕಗ್ಗತ್ತಲ ಕಮರಿಯೊಳಗೆ ದಾರಿ ತಪ್ಪಿದವನಂತೆ ಅಲೆಯುತ್ತಿದ್ದ ಕಿರುಚುತ್ತಿದ್ದ ಅಳುತ್ತಿದ ಸುತ್ತಲೂ ನೋಡುತ್ತಿದ್ದ ಗವ್ವೆನುವಷ್ಟು ಅಂಧಕಾರ ಬೆಳಕಿಲ್ಲ.! ಸೂರ್ಯನಿಲ್ಲ.! ಚಂದ್ರನಿಲ್ಲ..! ಚುಕ್ಕಿಗಳಿಲ್ಲ.! ತಂಪಾದ ಗಾಳಿಯೂ ಇಲ್ಲ..! ಆ ಗಾಢಾಂಧಕಾರದಲ್ಲಿ ಸತ್ಯ ಸಣ್ಣಗೆ ಜರ್ಜರಿತನಾಗಿ ನಲುಗುತಿದ್ದ.! ಇದ್ದ ಊರೆಕೋ ನರಕವಾಗುತ್ತಿತ್ತು ಆ ಮರ ಮುಂದಿನ ದೇವಸ್ಥಾನ ಇಬ್ಬರು ನೆಡೆದ ಹಾದಿಗಳು.. ಮರಕೋತಿ ಆಡುತ್ತಿದ್ದ ಜಾಗ, ಮಾವಿನ ಹಣ್ಣು ಕದ್ದು ತಿನ್ನುವಾಗ ಸಿಕ್ಕಿಬಿದ್ಧ ತೋಟಗಳು ಎಲ್ಲವೂ ಈಗ ಅವನಿಗೆ ನರಕದ ರಾಯಭಾರಿಗಳಗಿದ್ದವು ಊರುಬಿಟ್ಟವನೆ, ಅಕ್ಕನ ಮನೆಯ ಮಹಡಿಸೇರಿ ಮಲಗಿಬಿಟ್ಟ ಸತ್ಯನ ಆ ಮಹಡಿಯ ಮನೆಗೂ ಮನಕ್ಕೂ ಸೂತಕ ಬಂದು ಒಳಹೊಕ್ಕಿ ಮಲಗಿ ಬಿಟ್ಟಿದೆ ಎಚ್ಚರವಾದಗ ಸಾವಾಗಬಹುದು….. ಕುಡಿದ ಅಮಲಿನಲ್ಲಿ ರಾತ್ರಿ ಹಗಲುಗಳ ಪರಿವಿಲ್ಲದಂತೆ ನಶೆಯಲ್ಲಿ ಮುಳುಗಿ ಮೌನವಾಗಿ ಹಳೆಯದನ್ನೆಲ್ಲ ಕ್ಷಣಕಾಲ ಮರೆತು ಮತ್ತೊಮ್ಮೆ ದೈತ್ಯಕಾರವಾಗಿ ಸೃಷ್ಟಿಸಿಕೊಂಡು ಮನದ ಒಳಗೂ ಹೊರಗೂ ಕಾದಾಡುತ್ತಿದಾನೆ.. ಆತ ಮನೆಯ ಹೊರಗಿನ ಬೆಳಕನ್ನು ಕಾಣುವುದು ಕೂಡ ವಾರಕೊಮ್ಮೆ ಅಷ್ಟೇ..! ತನ್ನ ಬಳಿ ಇದ್ದ ತುಂಬಿದ ಬಾಟಲುಗಳು ಖಾಲಿಯಾದಗ ಮಾತ್ರ ಮಹಡಿಯ ಒಂದೊಂದೇ ಮೆಟ್ಟಿಲುಗಳನ್ನ ತಡವರಿಸಿಕೊಂಡಿಳಿದು ಗೇಟಿನ ಬಾಗಿಲು ತೆಗೆಯುವ ಸದ್ದಿಗೆ ತನ್ನ ಅಕ್ಕನ ಬೈಗುಳ ಕೇಳುತ್ತವೆ ಆದರೆ ಅವು ಅವನ ಒಳ ತಾಕುವುದಿಲ್ಲ, ಆತುರ ಆತುರದಲ್ಲೇ ನೆಡೆದು ಬೇಕಾದಷ್ಟನ್ನು ತಂದು ಮಹಡಿ ಹತ್ತಿ ಬಾಗಿಲು ಮುಚ್ಚಿ ಕುಳಿತು ಬಿಡುತ್ತಾನೆ..! ಊಟ ತಿಂಡಿಗಳು ಅಕ್ಕನ ಮನೆಯಿಂದಲೇ ಮೆಟ್ಟಿಲನತ್ತಿ ಬರುತ್ತವೆ.. ಕೆಲವು ಬಾರಿ ಖಾಲಿಯಾಗುತ್ತದೆ ಕೆಲವೊಮ್ಮೆ ಹಾಗೆ ಒಣಗಿಯೋ ಹಳಸಿಯೋ ವಾಪಸಿಳಿದು ಕಸದ ಬುಟ್ಟಿ ಸೇರುತ್ತವೆ. ಇತ್ತ ಮೇರಿಯ ಸಂಸಾರದ ಸಂತೋಷದ ದಿನಗಳೆಲ್ಲ ಮುಗಿದ್ದುಹೋಗಿದ್ದೊ, ಸೂತಕವು ಇವಳ ಮನೆಯ ಬಾಗಿಲನ್ನು ಬಂದು ಬಡಿಯಿತು ಅವಳ ಗಂಡನೆಂಬ ಜೀವ ಸತ್ತುಬಿತ್ತು.. (ಸಾವಿಗೆ ಸಾವಿರ ಕಾರಣಗಳು ಇರುತ್ತವೆ.ಇಲ್ಲಿ ಈ ಸಾವಿಗೆ ಕಾರಣದ ಅವಶ್ಯಕತೆ ಇಲ್ಲ ಹೆಸಲಿಲ್ಲದ ಪಾತ್ರ ಸಾಯಬೇಕು) ಇವಳು ಕೂಡ ಕೆಲವು ತಿಂಗಳುಗಳು ನಲುಗಿದ್ದಳು ಆದರೆ ಸೋಲುವ ಹೆಣ್ಣಲ್ಲ ಬದುಕಿನ ಸವಾಲುಗಳನ್ನೇ ತುಳಿದು ನೆಡೆಯುತ್ತಿದಳು. ಇಂದಿಗೂ ಅವಳನ್ನು ಸೆಣಸಿ ಸೋಲಿಸಿ ಕಣ್ಣೀರಿಡಿಸುವ ಕೊರತೆಯೆಂದರೆ ಮಕ್ಕಳದ್ದು ಮಾತ್ರ. ಭಾನುವಾರದಂದು ಚರ್ಚೆಗೆ ಬರುವ ಮಕ್ಕಳೊಂದಿಗೆ ಆಟವಾಡಿ ನಲಿಯುತ್ತ ಆ ಕೊರತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೇ. ಇಲ್ಲದನೆಲ್ಲ ತನ್ನೊಳಗೆ ಸೃಷ್ಟಿಸಿಕೊಂಡು ಬದುಕುತ್ತಿದ್ದಾಳೆ, ಹೀಗೆ ಇಬ್ಬರ ದಿನಗಳು ಕಳೆಯುತ್ತಿವೆ…..(ಈ ಕಥೆಯಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗಬೇಕು ಆಗಾಗಿ ಇಬ್ಬರನ್ನು ಒಂದೇ ರಸ್ತೆಗೆತಂದುಬಿಟ್ಟೆ) ಮೇರಿಗೆ ತನ್ನ ಸತ್ಯನ ದರ್ಶನವಾಯಿತು ಆದರೆ ಸತ್ಯ ಅವಳನ್ನು ಗಮನಿಸಲಿಲ್ಲ ಅವನು ಹಾಗೆ ನೆಡೆದ ಹಿಂಬಾಲಿಸಿದಳು ಮಹಡಿ ಹತ್ತಿ ಒಳಹೋದ ಸಲ್ಪ ಸಮಯಕಾದಳು ಮತ್ತೆ ಹೊರಬರಲಿಲ್ಲ ಅವಳು ಕೂಡ ಮಹಡಿ ಹತ್ತಿ ಬಾಗಿಲು ತೆರೆದು ಒಳ ಹೋದಳು. ಸಿಗರೇಟಿನ ಗಾಟು ಎಣ್ಣೆಯ ಕಮಟುಮಿಶ್ರಿತವಾಸನೆ ರಪ್ಪೆಂದು ಮೂಗಿಗೆ ಬಡಿಯಿತು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದ ಮನೆಯೊಳಗೆ ನಿಂತ ಗೋಡೆಗಳು.! ಮೌನವಾಗಿ ಬಿಗಿದುನಿಂತ ಕಿಟಕಿಗಳು.! ಚಾವಣಿಗೂ ಗೋಡೆಗಳ ಮೂಲೆಗೂ ಸೇರಿಸಿ ಎಣೆದ ಜೇಡರ ಬಲೆಯೊಳಗೆ ಸತ್ತ ಹುಳಗಳು.! ನೆಲದ ಮೇಲೆಲ್ಲ ಬಿದ್ದ ಸಿಗರೇಟಿನ ಫಿಲ್ಟರಗಳು.! ಕದದಮೂಲೆಯಲ್ಲಿದ್ದ ಖಲಿಬಾಟಲ್ಗಳು.! ಗಾಢಮೌನದೊಳಗೆ ಅಲಲ್ಲಿ ತೂತುಬಿದ್ದ ಬನಿಯನ್ ಮತ್ತು ಲುಂಗಿ ತೊಟ್ಟು ದಿಂಬನ್ನೂರಗಿ ಕುಡಿಯುತ್ತ ಕುಳಿತ್ತಿದ್ದ ಸತ್ಯ.! ಕೃಷವಾದ ದೇಹ ವಯಸ್ಸಿಗಿಂತ ಹೆಚ್ಚಾಗಿ ಕಾಂತಿಗುಂದಿದ ಚರ್ಮ.! ಅಡ್ಡದಿಡ್ಡಿ ಬೆಳೆದ ಗಡ್ಡ ಮೀಸೆಗಳು.! ಅವನ ಕಣ್ಣಗಳಲ್ಲಿ ಜೀವಚೈತನ್ಯದ ಬೆಳಕಿಲ್ಲ ಶವವೊಂದು ಕುಡಿಯುತ್ತಿದ್ದಂತಿತ್ತು..! ಇಬ್ಬರ ನೋಟಗಳು ಸಂಧಿಸಿದವು ಕುಶೋಲೋಪರಿಯ ಅಗತ್ಯವಿರಲಿಲ್ಲ.! ಇಬ್ಬರ ಕಣ್ಣುಗಳಲ್ಲೂ ಸಿಕ್ಕ ಸಂತೋಷವಿರಲಿಲ್ಲ.! ಕೆಲವೇ ಕ್ಷಣಗಳಲ್ಲಿ ಮೌನ ಮನೆಕಟ್ಟಿತ್ತು ಮಾತಿನ ಪೆಟ್ಟು ಬೇಕಿತ್ತು ಮೌನ ಒಡೆಯಲು.! ಅವನೇ ಆ ಮೌನ ಒಡೆದ ಮಾತಿಗಿಳಿದ.! ಮತ್ತಿನಲ್ಲಿದ್ದ.! “ಈ ಕಾಲವೇ ಹೀಗೆ ಹಳೆಯದೆಲ್ಲ ಕಳೆದುಹೋಗಿದ್ದರು ಸಾಕ್ಷಿಗಳನ್ನು ಮಾತ್ರ ನಿಲ್ಲಿಸಿ ಹೋಗುತ್ತವೆ ನಿನ್ನ ಜೊತೆ ಕಳೆದ ಬಾಲ್ಯದ ದಿನಗಳು ಯೌವನದ ಕ್ಷಣಗಳನೆಲ್ಲ ಸಾಯಿಸಬೇಕೆಂದು ಈ ಅಮಲಿಗೆ ದಾಸನಾಗಿಬಿಟ್ಟೆ.! ಅಮಲು ಹೆಚ್ಚಾದಗಳಲೇಲ್ಲ ನೀ ನನ್ನೊಳಗೆ ಇರುವಂತೆ ಮುದ್ದಿಸಿದಂತೆ ತಾಯಿತನದ ಸುಖ ನೀಡಿದಂತೆ ಅನಿಸುತ್ತದೆ ರೇಖಾ..! ಈ ಅಮಲು ಎಷ್ಟು ನೆಮ್ಮದಿಕೊಡುತ್ತದೆ ಗೊತ್ತಾ..! ಆ ಯೌವನದ ದಿನಗಳಲ್ಲಿ ನಾನು ನಿನ್ನ ಹತ್ತಿರಕ್ಕೆ ಬರಲು ಪ್ರತಿ ಹೆಜ್ಜೆ ಮುಂದಿಟ್ಟಗಾಲು ನೀನು ಮಾತ್ರ ಅದರ ಹತ್ತುಪಟ್ಟು ದೂರವಾಗುತ್ತಿದ್ದೆ.! ನಾನು ಈ ಧರ್ಮವೆಂಬ ಮುಳ್ಳುಪೊದೆಗಳ ದಾಟಿ ಪ್ರೀತಿಯ ಬೋರೆಮೇಲೆ ಬಂದುನಿಂತು ನೀನಗಾಗಿ ಕನವರಿಸಿದೆ ನೀನು ಮಾತ್ರ ಆ ಧರ್ಮಗಳ ಬೇಲಿಯಿಂದಾಚೆ ಬರಲೇ ಇಲ್ಲಾ..! ಮೂಲಕ್ರಿಶ್ಚಿಯನ್ನರು ಪಾಲಿಸದಷ್ಟು ನಿನ್ನ ಧರ್ಮನಿಷ್ಠೆಗಳು ಅತಿರೇಖವಾಗಿದ್ದವು ರೇಖಾ..! ನೀನು ನಿನ್ನ ಧರ್ಮದ ಹೆಸರಿನಲ್ಲಿ ಕೃತಕಗೋಡೆಯೊಂದನ್ನು

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ರಾಮರಾಯರು ಜಿ. ಹರೀಶ್ ಬೇದ್ರೆ  ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ ಓದು ಆಗಷ್ಟೇ ಮುಗಿದಿದ್ದು, ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಸ್ಥಳೀಯವಾಗಿ ಅಂದುಕೊಂಡ ಒಳ್ಳೆಯ ಕೆಲಸ ಸಿಗದೆ ಬೆಂಗಳೂರಿಗೆ ಹೋದ.  ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ತಿಂಗಳಿಗೊ, ಎರಡು ತಿಂಗಳಿಗೊ ಒಮ್ಮೆ ಬಂದು ಹೋಗುತ್ತಿದ್ದ. ರಾಮರಾಯರು ಸದಾ ನಾಲ್ಕು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದವರು, ಈಗ ಎಲ್ಲಾ ಬಿಟ್ಟು ಮನೆಯಲ್ಲೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತಿತ್ತು.  ಹೊರಗಡೆ ಹೋದರೂ, ಸುಮ್ಮನೆ ಹರಟೆ ಹೊಡೆದು ಕಾಲ  ಕಳೆಯುವ ಅಭ್ಯಾಸ ಇರದ ಅವರಿಗೆ ಅಲ್ಲಿರಲು ಸಾಧ್ಯವಾಗದೆ ಮನೆಗೆ ಮರಳಿ ಬರುತ್ತಿದ್ದರು.  ಒಂದು ಕಡೆ ಅನಾರೋಗ್ಯ ಜೊತೆಗೆ ಕೆಲಸವಿಲ್ಲದೆ ಹೆಂಡತಿ ಮುಖ ನೋಡಿಕೊಂಡು ಮನೆಯಲ್ಲಿರುವುದು ಅಸಾಧ್ಯವಾಯಿತು. ಇದೇ ಚಿಂತೆಯಲ್ಲಿ ಬಿ.ಪಿ.ಯ ಜೊತೆ ಶುಗರ್ ಸಮಸ್ಯೆಯೂ ಆರಂಭವಾಯಿತು. ಅವರು ಯಾವಾಗ ಯಾವ ವಿಷಯಕ್ಕೆ ಸಿಟ್ಟಾಗುತ್ತಾರೆ, ಯಾವುದಕ್ಕೆ ಸುಮ್ಮನಿರುತ್ತಾರೆ ಎನ್ನುವುದು ಸುಲೋಚನರವರಿಗೆ ತಿಳಿಯದಾಯಿತು.  ಮೊದಲೇ ಮಿತಭಾಷಿಯಾದ ಅವರು ಮತ್ತಷ್ಟು ಮೌನಕ್ಕೆ ಶರಣಾದರು.ಅದೊಂದು ದಿನ ಸಂಜೆ ಇದ್ದಕ್ಕಿದ್ದಂತೆ ರಾಮರಾಯರು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಸುಲೋಚನಾ ಪಕ್ಕದ ಮನೆಯವರು ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷೆ ಮಾಡಿದ ವೈದ್ಯರು, ಬಿ.ಪಿ. ಹಾಗೂ ಶುಗರ್ ಎರಡೂ ಹೆಚ್ಚಾಗಿದೆ, ಒಂದೆರೆಡು ದಿನ ಇಲ್ಲೇ ಇರಲೆಂದರು.  ವಿಚಾರ ತಿಳಿದ ಮಕ್ಕಳು ತಂದೆಯನ್ನು ನೋಡಲು ಒಂದೇ ಉಸಿರಿಗೆ ಇದ್ದ ಊರುಗಳಿಂದ ಓಡಿ ಬಂದರು. ಇದಾದ ಮೇಲೆ ತಮ್ಮದೇ ಅಸಡ್ಡೆಯಿಂದ ರಾಯರು ವರುಷದಲ್ಲಿ ಹಲವು ಬಾರಿ ಆಸ್ಪತ್ರೆಗೆ ಸೇರಿದರು. ಇದರಿಂದ ಬೇಸತ್ತ ಮಗ, ಹಗಲೆಲ್ಲ ರಜ ಹಾಕಿ ಊರಿಗೆ ಬರಲು ಸಾಧ್ಯವಿಲ್ಲ ಎಂದು ಬಲವಂತವಾಗಿ ತಂದೆ ತಾಯಿ ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಅವನಿಗೆ ಬರುವ ಸಂಬಳಕ್ಕೆ ತಕ್ಕಂತಹ ಸಣ್ಣ ಮನೆಯೊಂದನ್ನು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ.    ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಮತ್ತೆ ಸೇರುತ್ತಿದ್ದದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇರಬೇಕಿತ್ತು. ಇದು ರಾಮರಾಯರಿಗೆ ಮತ್ತಷ್ಟು ವಿಚಲಿತರಾಗುವಂತೆ ಮಾಡಿತ್ತು. ಊರಲ್ಲಾದರೆ, ಮನೆಯ ಮುಂಬಾಗಿಲಿಗೆ ಬಂದು ನಿಂತರೆ ಸಾಕು, ಹೋಗಿ ಬರುವ ಪರಿಚಿತರು ಮುಗುಳ್ನಕ್ಕು, ಅದು ಇದು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಇಷ್ಟಕ್ಕೆ ಅವರಿಗೆ ಎಷ್ಟೋ ಹಿತವೆನಿಸಿಸುತ್ತಿತ್ತು. ಆದರೆ ಇಲ್ಲಿ ಮನೆಗಳು ನೂರಿದ್ದರೂ ಎಲ್ಲಾ ಅಪರಿಚಿತರು. ಅದೇಷ್ಟೋ ದಿನಗಳ ನಂತರ ಒಂದಿಬ್ಬರು ಪರಸ್ಪರ ಮಾತನಾಡಿಸುವಂತಾಗಿದ್ದರು. ಅದೂ ಹೆಸರಿಗೆ ಮಾತ್ರ ಅನ್ನುವಂತಿತ್ತು. ಹಾಗಾಗಿ ಹೊತ್ತು ಹೋಗದೆ ರಾಮರಾಯರು, ತಾವು ಊರಿಗೆ ಹಿಂದಿರುಗುವುದಾಗಿ ಹೇಳುತ್ತಿದ್ದರು. ಆದರೆ ಅಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಎಲ್ಲಾ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲು ಮನಸ್ಸು ಒಪ್ಪದೆ ಮಗ ಬೇಡ ಅನ್ನುತ್ತಿದ್ದ. ಒಂದು ದಿನ ರಾಯರು ಹಟ ಮಾಡಿದಾಗ ಕಡ್ಡಿ ಮುರಿದಂತೆ ಎಲ್ಲಿಗೂ ಕಳಿಸುವುದಿಲ್ಲ ಎಂದು ಸ್ವಲ್ಪ ಒರಟಾಗಿಯೇ ಹೇಳಿದ.  ಇದು ಮೊದಲೇ ಕುಗ್ಗಿ ಹೋಗಿದ್ದ ರಾಮರಾಯರು ಮತ್ತಷ್ಟು ಕುಗ್ಗುವಂತೆ ಮಾಡಿತು. ಬರಬರುತ್ತಾ ಅವರ ನಡವಳಿಕೆಯಲ್ಲಿ ಏರುಪೇರಾಗತೊಡಗಿತು. ಒಮ್ಮೊಮ್ಮೆ ಏನಾದರು ಬಡಬಡಿಸಿದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಒಂದೇ ಒಂದು ಪದವನ್ನು ಆಡದೆ ಎಲ್ಲೋ ನೋಡುತ್ತ ಮೈಮರೆತು ಕುಳಿತುಬಿಡುತ್ತಿದ್ದರು. ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ, ಒಂದು ಎರಡು ಇದ್ದ ಜಾಗದಲ್ಲೇ ಆಗಿರುತ್ತಿತ್ತು. ಇದನ್ನು ನೋಡಿ ಮಗ, ಹಲವಾರು ಡಾಕ್ಟರುಗಳಿಗೆ ತೋರಿಸಿದರೂ ಏನೂ ಉಪಯೋಗವಾಗಲಿಲ್ಲ.   ಈ ಪರಿಸ್ಥಿತಿಯಲ್ಲಿ ತಂದೆಯನ್ನು ಅಮ್ಮನೊಂದಿಗೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಕಳೀಸಲೇ ಬೇಕೆಂದರೆ ತಾನೂ ಅವರೊಂದಿಗೆ ಹೋಗಬೇಕು. ಆದರೆ ಕೈಯಲ್ಲಿರುವ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಮಗನೂ ತುಂಬಾ ಒದ್ದಾಡುತ್ತಿದ್ದ. ಗಂಡ ಹಾಗೂ ಮಗನ ಪರಿಸ್ಥಿತಿ ಅರ್ಥವಾದರೂ ಸುಲೋಚನಾ ಏನೂ ಮಾಡುವಂತಿರಲಿಲ್ಲ.  ಹೊತ್ತು ಹೊತ್ತಿಗೆ ಸರಿಯಾಗಿ ಗಂಡನ ಬೇಕು ಬೇಡಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಆದಷ್ಟು  ಅವರ ಒದ್ದಾಟ ಮಗನಿಗೆ ತಿಳಿಯದಿರಲೆಂದು ಕಷ್ಟ ಪಡುತ್ತಿದ್ದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಮಗನ ಗಮನಕ್ಕೆ ತರುತ್ತಿದ್ದರು. ಮಗನಿಗೆ ಎಲ್ಲವೂ ಅರ್ಥವಾಗುತ್ತಿತ್ತು ಆದರೆ ತನಗೆ ಗೊತ್ತಿದೆ ಎಂದು ತೋರಿಸಿಕೊಂಡರೆ ಅಮ್ಮ ಮತ್ತಷ್ಟು ನೊಂದುಕೊಳ್ಳಬಹುದೆಂದು ತಾನು ಆರಾಮಾವಾಗಿ ಇರುವಂತೆ ನಡೆದು‌ಕೊಳ್ಳುತ್ತಿದ್ದ. ಅಲ್ಲದೆ ಅಪ್ಪನಿಗಾಗಿ ಊರಿಗೆ ಹಿಂದಿರುಗಬೇಕೆಂದು ಅಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ. ಅದೊಂದು ದಿನ ಮನೆಯ ಎಲ್ಲಾ ಹೆಣ್ಣುಮಕ್ಕಳು ತಮ್ಮ ಗಂಡ, ಮಕ್ಕಳೊಂದಿಗೆ ಅಪ್ಪನನ್ನು ನೋಡಲು ಬೆಂಗಳೂರರಿಗೆ ಬಂದರು. ಅವರು ರಾಮರಾಯರಿಗೆ ಎಷ್ಟೇ ಮಾತನಾಡಿಸಿದರೂ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರನ್ನು ಗುರುತೂ ಹಿಡಿಯಲಿಲ್ಲ. ರಾಮರಾಯರಿಗೆ, ಮಗ ಹಾಗೂ ಹೆಂಡತಿಯ ಹೊರತಾಗಿ ಎಲ್ಲರೂ ನೆನಪು ಅಳಿಸಿಹೋಗಿತ್ತು. ಇದು ಸುಲೋಚನಾ ಮತ್ತು ಮಗನ ಗಮನಕ್ಕೆ ಬಂದೇ ಇರಲಿಲ್ಲ.  ಇದು ತಿಳಿದೊಡನೆ ಕುಸಿಯುವ ಸರದಿ ಮಗನದಾಯಿತು. ಮನೆಗೆ ಬಂದ ಹೆಣ್ಣುಮಕ್ಕಳು , ಕೆಲಸಕ್ಕೆ ಕಾಯದೆ ತಕ್ಷಣ ಅಪ್ಪನನ್ನು ಅವರ ಆಸೆಯಂತೆ ಊರಿಗೆ ಕರೆದುಕೊಂಡು ಹೋಗು. ನಿನಗೆ ಕೆಲಸ ಸಿಗುವ ವರೆಗೂ ನಾವು ಸಹಾಯ ಮಾಡುತ್ತೇವೆ ಎಂದು ತಮ್ಮನಿಗೆ ಹೇಳಿದರು. ಇದು ಅವನಿಗೂ ಸರಿ ಎನಿಸಿ,  ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಡುಸುವುದಾಗಿ ಹೇಳಿದ.  ಹೇಳಿದಂತೆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ. ಆದರೆ ಅಲ್ಲಿನ ನಿಯಮಗಳ ಪ್ರಕಾರ ಅವನು ಒಂದು ತಿಂಗಳ ನಂತರವಷ್ಟೇ ತನ್ನ ಕೆಲಸದಿಂದ ಬಿಡುಗಡೆ ಹೊಂದಬೇಕಾಗಿತ್ತು.    ಅಷ್ಟರೊಳಗೆ ಊರಲ್ಲಿ ಇರಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಳ್ಳತೊಡಗಿದ. ಇದ್ದ ಕೆಲಸದಿಂದ ಬಿಡುಗಡೆ ಆಗಲು ಎರಡು ದಿನ ಬಾಕಿ ಇರುವಾಗ ಅದೃಷ್ಟ ಎನ್ನುವಂತೆ ಊರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಕರೆ ಬಂತು. ಇದು ತಾಯಿ ಮಗ ಇಬ್ಬರಿಗೂ ತುಂಬಾ ಸಮಾಧಾನ ತಂದಿತ್ತು. ಕೊನೆಯ ದಿನದ ಕೆಲಸ ಮುಗಿಸಿ ಮಾರನೇ ದಿನವೇ ಊರಿಗೆ  ಹೋಗುವುದೆಂದು ಮನೆಯ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ, ಅದನ್ನು ಸಾಗಿಸಲು ಬೇಕಾದ ಲಾರಿಯನ್ನು ಗೊತ್ತು ಮಾಡಿದ್ದ.  ಹಿಂದಿನ ದಿನ ರಾತ್ರಿ ಪಕ್ಕದ ಮನೆಯವರು ಕೊಟ್ಟಿದ್ದನ್ನೇ ಮೂವರು ಊಟ ಮಾಡಿ, ನಾಳೆಯಿಂದ ಸ್ವಂತ ಊರಲ್ಲಿ ವಾಸವೆಂದು ಸಂತೋಷದಿಂದ ಬಹಳ ಹೊತ್ತು ತಾಯಿ ಮಗ ಮಾತನಾಡುತ್ತಿದ್ದರು. ರಾಮರಾಯರು ಏನೊಂದೂ ಮಾತನಾಡದಿದ್ದರೂ ಅವರ ಮುಖದಲ್ಲಿ ಹಿಂದೆಂದೂ ಕಾಣದ ತೇಜಸ್ಸು ಕಾಣುತ್ತಿತ್ತು.  ತಾಯಿ ಮಗ ಮಾತನಾಡುತ್ತಾ ಯಾವಾಗ ಮಲಗಿದರು ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಯಾರೋ ಜೋರಾಗಿ ಬಾಗಿಲು ಬಡಿದಾಗಲೇ ಅವರಿಗೆ ಎಚ್ಚರವಾಗಿದ್ದು. ಇಬ್ಬರೂ ಲಾರಿಯವನು ಬಂದಿರಬೇಕೆಂದು ದಡಬಡಾಯಿಸಿ ಎದ್ದು  ಬಾಗಿಲು ತೆರೆದರು.  ಅಲ್ಲಿ ಮೇಲಿನ ಮನೆಯವರು ಇವರಿಗೆ ಕುಡಿಯಲು ಕಾಫಿಯನ್ನು ತಂದಿದ್ದರು. ಅವರೊಂದಿಗೆ ನಾಲ್ಕು ಮಾತನಾಡಿ ಒಳಬಂದ ಸುಲೋಚನಾ, ರಾಮರಾಯರು ಕಾಫಿ ಕುಡಿಯಲೆಂದು ಎಬ್ಬಿಸತೊಡಗಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೆದರಿಕೆಯಾಗಿ ಮಗನನ್ನು ಕೂಗಿದಾಗ, ಅವನೂ ಓಡೋಡಿ ಬಂದು ತಂದೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮರಾಯರು ಏಳಲೇ ಇಲ್ಲ. ರಾತ್ರಿ ಅವರ ಮುಖದಲ್ಲಿ ಕಂಡ ತೇಜಸ್ಸು ಈಗಲೂ ಹಾಗೇ  ಇತ್ತು………. *********

ಕಥಾಯಾನ Read Post »

You cannot copy content of this page

Scroll to Top