ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಜ್ಞಾನಪೀಠ ವಿಜೇತರು

ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಕನ್ನಡದ ಆಸ್ತಿ’ ಮಾಸ್ತಿ ವೆಂಕಟೇಶ ಅಯ್ಯಂಗಾರ್..! ‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದರು ‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು..! ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು… ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಮೈಸೂರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಪ್ರಥಮ ದರ್ಜೆಯಲ್ಲಿ ಎಫ್.ಎ. ಪದವಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೨ರಲ್ಲಿ ಬಿ.ಎ. ಮತ್ತು ೧೯೧೩ರಲ್ಲಿ ಎಂ.ಸಿ.ಎಸ್. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. ಇವರು ೧೯೧೪ರಲ್ಲಿ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩0) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪0) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು… ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮), ಅಧ್ಯಕ್ಷರಾಗಿ (೧೯೫0-೬೪) ಸೇವೆ ಸಲ್ಲಿಸಿರುವ ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ೧೯೪೨ರಲ್ಲಿ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ಅನೇಕ ಅಖಿಲ ಭಾರತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಮಾಸ್ತಿಯವರು… ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದನ್ನು ೧೯೪೨ರಲ್ಲಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ(೧೯೬೮), ವರ್ಧಮಾನ ಪ್ರಶಸ್ತಿ (೧೯೮೩), ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್(೧೯೭೭), ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩), ಕರ್ನಾಟಕ ಸರ್ಕಾರದ ಸನ್ಮಾನ (೧೯೮೪), ನಾಡಿನ ನಾನಾ ಸಂಸ್ಥೆಗಳಿಂದ ನೂರಾರು ಸನ್ಮಾನ, ಪ್ರಶಸ್ತಿ, ಗೌರವಗಳು ಮಾಸ್ತಿ ಅವರಿಗೆ ಸಂದಿವೆ… ಕನ್ನಡ ಸಣ್ಣಕತೆಗಳ ಜನಕರೆಂದೇ ಖ್ಯಾತಿ ಹೊಂದಿದ ಮಾಸ್ತಿ ಅವರು ನೂರಕ್ಕೂ ಮೀರಿ ಕೃತಿಗಳನ್ನು ವಿವಿಧ ವಿಷಯಗಳ ಮೇಲೆ ರಚಿಸಿ ಕನ್ನಡವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಇಲ್ಲಿ ಅವರ ಕೆಲವು ಕೃತಿಗಳನ್ನು ಉದಾಹರಿಸಿದೆ… ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. 1910 ರಲ್ಲಿ ಬರೆದ ‘ರಂಗನ ಮದುವೆ’ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩… ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. 20ನೆಯ ಶತಮಾನದ ಆರಂಭದ ಕಾಲದಲ್ಲಿ ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು… ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ‘ಚಿಕವೀರ ರಾಜೇಂದ್ರ’ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”. “ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥವಾಗಿದೆ… ಸಣ್ಣ ಕತೆಗಳ ಸಂಗ್ರಹ.– ಸಣ್ಣಕತೆಗಳು (೫ ಸಂಪುಟಗಳು). ರಂಗನ ಮದುವೆ. ಮಾತುಗಾರ ರಾಮಣ್ಣ. ನೀಳ್ಗತೆ.– ಸುಬ್ಬಣ್ಣ (೧೯೨೮). ಶೇಷಮ್ಮ(೧೯೭೬). ಕಾವ್ಯ ಸಂಕಲನಗಳು– ಬಿನ್ನಹ, ಮನವಿ(೧೯೨೨). ಅರುಣ(೧೯೨೪). ತಾವರೆ(೧೯೩೦). ಸಂಕ್ರಾಂತಿ(೧೯೬೯). ನವರಾತ್ರಿ(೫ ಭಾಗ ೧೯೪೪-೧೯೫೩) ಚೆಲುವು, ಸುನೀತ. ಮಲಾರ. ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ). ಜೀವನ ಚರಿತ್ರೆ.– ರವೀಂದ್ರನಾಥ ಠಾಕೂರ(೧೯೩೫). ಶ್ರೀ ರಾಮಕೃಷ್ಣ(೧೯೩೬). ಪ್ರಬಂಧ– ಕನ್ನಡದ ಸೇವೆ(೧೯೩೦). ವಿಮರ್ಶೆ (೪ ಸಂಪುಟ ೧೯೨೮-೧೯೩೯). ಜನತೆಯ ಸಂಸ್ಕೃತಿ(೧೯೩೧). ಜನಪದ ಸಾಹಿತ್ಯ(೧೯೩೭). ಆರಂಭದ ಆಂಗ್ಲ ಸಾಹಿತ್ಯ(೧೯೭೯). ನಾಟಕಗಳು.– ಶಾಂತಾ, ಸಾವಿತ್ರಿ, ಉಷಾ (೧೯೨೩). ತಾಳೀಕೋಟೆ(೧೯೨೯). ಶಿವಛತ್ರಪತಿ(೧೯೩೨). ಯಶೋಧರಾ(೧೯೩೩). ಕಾಕನಕೋಟೆ(೧೯೩೮). ಲಿಯರ್ ಮಾಹಾರಾಜ. ಚಂಡಮಾರುತ, ದ್ವಾದಶರಾತ್ರಿ. ಹ್ಯಾಮ್ಲೆಟ್. ಶೇಕ್ಸ್ ಪಿಯರ್ ದೃಶ್ಯಗಳು ೧,೨,೩. ಪುರಂದರದಾಸ. ಕನಕಣ್ಣ. ಕಾಳಿದಾಸ. ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್. ಬಾನುಲಿ ದೃಶ್ಯಗಳು. ಕಾದಂಬರಿಗಳು.– ಚೆನ್ನಬಸವ ನಾಯಕ(೧೯೫೦). ಚಿಕವೀರ ರಾಜೇಂದ್ರ(೧೯೫೬). ಆತ್ಮಚರಿತ್ರೆ.– ಭಾವ. ಹೀಗೆ ಅನೇಕಾನೇಕ ಕೃತಿಗಳ ರಚನೆಯೊಂದಿಗೆ ಮಾಸ್ತಿ‌‌ ವೆಂಕಟೇಶ ಅಯ್ಯಂಗಾರ್ ಅವರು ಬದುಕಿ‌ ಬಾಳಿದರು..! — ಕೆ.ಶಿವು.ಲಕ್ಕಣ್ಣವರ ಕೆ.ಶಿವು ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಇತರೆ

ಪ್ರಸ್ತುತ

ಮೊಬೈಲ್ ಬಳಕೆ ಹರೀಶಬಾಬು ಬಿ. ಮೊಬೈಲ್ ಬಳಕೆಯಿಂದ ಮಾನವನಿಗೆ ಉಂಟಾಗುತ್ತಿರುವ ಪರಿಣಾಮ ಅಷ್ಟು ಇಷ್ಟಲ್ಲ. ಇಂದಿನ ಗಣಕಯಂತ್ರ ಯುಗದಲ್ಲಿ ಎಲ್ಲವೂ ಅಂತರ್ಜಾಲ ಆಧಾರಿತ ಗಣಕಯಂತ್ರದ ಕೆಲಸಳಾಗಿವೆ. ದಿನೇ ದಿನೇ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಹೋದ ಕಾರಣದಿಂದ ಮಾನವನ ಬರವಣಿಗೆ ಮತ್ತು ಮಾನವ ಮಾಡುವ ಕೆಲಸಗಳು ಕಮ್ಮಿ ಆಗಿವೆ. ಆದ ಕಾರಣದಿಂದ ಎಲ್ಲರೂ ಗಣಕ ಯಂತ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲೇ ಬೇಕಾದ ಸಂತತಿ ಈ ಗಣತಂತ್ರ ಯುಗದ ಜನರಿಗೆ ಎದುರಾಗಿದೆ. ಮೊದಲು ಪ್ರತಿಯೊಂದು ಕಛೇರಿಗಳಲ್ಲಿಯೂ ಹಿಂದೆ ಬರವಣಿಗೆ ವ್ಯವಹಾರ ಹೊಂದಿತ್ತು ಆದರೆ ಇವತ್ತು ಆ ಸೌಲಭ್ಯ ಕಣ್ಣುಮರೆಯಾಗಿದೆ.ಇದರಿಂದ ಜನತೆಗೆ ಅನುಕೂಲ ಅನಾನುಕೂಲ ಎರಡು ಉಂಟಾಗಿದೆ. ಈ ಗಣತಂತ್ರ ಯುಗ ದಿನ ದಿನಕ್ಕೂ ರಂಗು ಹೇರುತ್ತಿದ್ದ ಕಾರಣದಿಂದ ಇಡೀ ಪ್ರಪಂಚವೇ ಗಣತಂತ್ರಮಯವಾಗಿದೆ . ಗಣಕಯಂತ್ರದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅರಿತ ಈ ಜನತೆ ಅದರ ಸೇವೆಗಳನ್ನು ಅಂಗೈಯಲ್ಲಿ ನೋಡುವಾಗೆ ಸ್ಮಾಟ್ ಪೋನ್ ಬಳಕೆ ಕಂಡು ಕೊಂಡರು. ಎಲ್ಲಾ ಸೌಲಭ್ಯಗಳು,ಸೇವೆಗಳನ್ನು ಮತ್ತು ವ್ಯವಹಾರವನ್ನು ಈ ಜಂಗಮಗಂಘೆಯಲ್ಲಿಯೇ ನಡೆಸಲು ಪ್ರಯತ್ನಸಿದರು ಎಲ್ಲಾ ಸೇವೆಗಳು ಸರಾಗವಾಗಿ ಮತ್ತು ಸುಲಭವಾಗಿ ಸೇವೆಗಳು ದೊರೆಯುವ ಕಾರಣಾತರದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಮೊಬೈಲ್ ಬಳಕೆ ಹೇರಳವಾಗಿ ಬೆಳೆಯಿತು. ಬಳಕೆಯನ್ನು ನಾನ ಉಪಯೋಗಕ್ಕೆ ಬಳಸುತ್ತಾ ಹೋದಂತೆ ಎಲ್ಲಾ ಗಣತಂತ್ರ ಯುಗದಲ್ಲಿ ಗಣಕಯಂತ್ರದ ಬಳಕೆ ಗಣನೀಯವಾಗಿ ಇಳಿಕೆಯಾಗುತ್ತಾ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ದೊರೆಯುವಂತೆ ತಂತ್ರಜ್ಞಾನವನ್ನು ವಿಜ್ಞಾನಿಗಳು ಸೃಷ್ಟಿಸಿದರು . ಎಲ್ಲಾ ಸೇವೆಗಳು ಇದರಲ್ಲೇ ದೊರೆಯುವ ಕಾರಣದಿಂದ ಅಂಗೈಯಲ್ಲಿ ಇಡೀ ಪ್ರಪಂಚದ ಹಾಗು ಹೋಗುಗಳು ಮತ್ತು ಬ್ಯಾಕಿಂಗ್, ಪೋಸ್ಟ್ ,ಮಾಹಿತಿ ವ್ಯವಸ್ಥೆ ಮತ್ತು ದಿನನಿತ್ಯದ ಚಟುವಟಿಕೆಗಳು ಮತ್ತು ಇನ್ನೂ ಇತರೆ ಕಾಯ೯ಗಳ ಬಳಕೆಯಲ್ಲಿ ತುಂಬಾ ಅನುಕೂಲಕರವಾದ ಸೌಲಭ್ಯ ಒದಗಿಸುವ ತಂತ್ರಜ್ಞಾನ ಸಿಕ್ಕಿತು. ಯಾವುದೇ ಒಂದು ವಸ್ತುವಿನ ಬಳಕೆ ನಿಯಮಿತವಾಗಿ ಇದ್ದರೆ ಅದರಿಂದ ನಮಗೆ ಅನುಕೂಲವೂ ಉಂಟು ಮತ್ತೆ ನಮ್ಮ ಜೀವನಕ್ಕೆ ಉಳಿತೇ ಅದನ್ನು ವೈಪರೀತವಾಗಿ ಬಳಸಿದರೆ ಅದರ ಪರಿಣಾಮಕ್ಕೆ ನಾವೆ ಹೊಣೆಗಾರರು. ಇತ್ತೀಚಿನ ದಿನಗಳಲ್ಲಿ ಇಂದು ಒಂದು ರೀತಿಯ ಮಾರಕವಾಗಿ ಬೆಳೆಯುತ್ತಾ ಬಂದು ಇದೆ ಈ ಸ್ಮಾಟ್೯ ಫೋನ್ ಬಳಕೆ. ದಿನೇ ದಿನೇ ತಂತ್ರಜ್ಞಾನ ಹೆಚ್ಚುತ್ತಾ ಹೋದಂತೆ ಮೊಬೈಲ್ ಬಳಕೆಯೂ ಕೂಡ ಹೆಚ್ಚಾಗುತ್ತ ಹೋದಂತೆ ಎಲ್ಲಾ ಅದರ ಪರಿಣಾಮ ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಾ ಬಂದು ಇದೆ. ಶಾಲಾ ಕಾಲೇಜಿನಿಂದ ಹಿಡಿದು ಒಬ್ಬ ಬಹುದೊಡ್ಡ ನೌಕರಿ ಉದ್ಯಮಿವರೆಗೂ ಈ ಸ್ಮಾಟ್ ಪೋನ್ ಬಳಕೆಯ ಪರಿಣಾಮ ತುಂಬಾ ಅಗಾದವಾಗಿದೆ. ಎಲ್ಲಾ ಸೇವೆಗಳು ಇದರಲ್ಲೇ ಸಿಗುತ್ತಿರುವುದರಿಂದ ಈ ಬಳಕೆ ವೈಪರೀತವಾಗಿದೆ. ನೆಟ್ ಬ್ಯಾಕಿಂಗ್ ಸೇವೆ ಮೊಬೈಲ್ ನಲ್ಲಿಯೇ ದೊರೆಯುತ್ತಿರುವ ಗೂಗಲ್ ಪೇ,ಪೋನ್ ಪೇಗಳಿಂದ ಎಷ್ಟೋ ಉದ್ಯಮಿಗಳು ನೌಕರರು ತಿಂಗಳು ಗಟ್ಟಲೇ ದುಡಿದು ಸಂಪಾದಿಸಿದ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡು ಇದ್ದಾರೆ .ತಂತ್ರಜ್ಞಾನ ಹೆಚ್ಚಾದ ಕಾರಣದಿಂದ ಎಲ್ಲೆಡೆಯೂ ಈ ಬ್ಯಾಕಿಂಗ್ ವ್ಯವಸ್ಥೆ ಬಳಕೆ ಹೆಚ್ಚು ಪ್ರಗತಿಯಲ್ಲಿ ಇದೆ. ಇದರಿಂದ ಹಣ ದೋಚೊ ಖದೀಮರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ನಾವು ದಿನನಿತ್ಯ ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರೆಡಿಯೋದಲ್ಲಿ ಕೇಳುತ್ತಾ ಇದ್ದೀವಿ ಗೂಗಲ್ ಪೇ ಮತ್ತು ಪೋನ್ ಪೇ ಗಳಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವ ನೆಪದಲ್ಲಿ ನಮ್ಮ ಬ್ಯಾಂಕ್ ಖಾತೆಯ ಹಣವನ್ನು ದೋಚಿದ್ದಾರೆ ಎಂದು ಇದೇ ಸಮಸ್ಯೆಯ ಬಗ್ಗೆ ಪೋಲಿಸ್ ಮೊರೆ ಹೊದ ಎಷ್ಟು ಜನರು ಇದ್ದಾರೆ. ಮೊಬೈಲ್ ಬಳಕೆಯಿಂದಾ ಉಂಟಾಗುತ್ತಿರುವ ನಷ್ಟ ಈ ಸಮಾಜಕ್ಕೆ ಅಷ್ಟು ಇಷ್ಟಲ್ಲ ಅದರ ಉಪಯೋಗಿಂತಲೂ ಅದರ ಅನಾನುಕೂಲದ ಪರಿಣಾಮವೇ ಹೆಚ್ಚು ಭರಿಸುತ್ತಿದೆ ಈ ಸಮಾಜ. ಹುಟ್ಟುವ ಪ್ರತಿಯೊಂದು ಕೂಸು ಕೂಡ ಜಂಗಮಗಂಘೆಯಲ್ಲಿ ಕಲಿಯುತ್ತಾ ನಲಿಯುತ್ತಾ ಆಡುತ್ತಾ ಬೆಳೆಯುತ್ತಾ ಬಂದಿದೆ. ತಂದೆ ತಾಯಿಗಳು ಮಗುವಿನ ನಿಮಾ೯ಪಕರು ಅವರ ಭವಿಷ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಈ ಸ್ಮಾಟ್೯ ಪೋನ್ ಬಳಕೆ ಅವರಿಗೆ ತೋರಿಸಿ ಅವರ ಜೀವನಕ್ಕೆ ಬಹುದೊಡ್ಡ ಪಿಡುಕು ಉಂಟು ಮಾಡುತ್ತಿದ್ದಾರೆ. ಏನ್ ತಿಳಿಯದ ಮಗುವಿಗೆ ಇವರು ಈ ಜಂಗಮಗಂಘೆ ಕೊಟ್ಟು ಅವರ ಭವಿಷ್ಯದ ಹಾದಿಗೆ ಅಡಚಣೆಯನ್ನು ಉಂಟು ಮಾಡುತ್ತಾರೆ.ಹಾಗೆಯೇ ಅವರು ಎಷ್ಟೇ ಅಲ್ಲದೇ ಇನ್ನೂ ಬುದ್ದಿವಂತ ಹಾಗೂ ವಯಸ್ಕರು ಕೂಡ ಈ ಜಂಗಮಗಂಘೆ ಎಂಬಾ ಪೀಡೆಯಿಂದಾ ಹಾಳುಗುತ್ತಾದ್ದಾರೆ. ಈ ಮೊಬೈಲ್ ಎಂಬ ಪೀಡೆ ಕೆಲವು ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಾ ಬಂದು ಇದೆ. ಪ್ರೀತಿ ವಿಷಯದಲ್ಲಿ ಮೊಬೈಲ್ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕಾಣದೂರಿನ ಚಂದಮಾಮಗಳಿಗೆ ತನ್ನ ಊರಿನ ಚಂದಮಾಮನಾಗೆ ಕಾಣಿಸುವಂತೆ ಪರಿಚಯ ಮಾಡುತ್ತದೆ ಈ ಮೊಬೈಲ್. ಕಾಣದೂರಿನ ಚಂದಮಾಮಗಳಿಗೆ ಪ್ರೀತಿಯಲ್ಲಿ ಪೋನ್ ಮೆಸೆಜ್ಗಳು ಬೀಗರು ಪಾತ್ರದಲ್ಲಿ ಈ ಮೊಬೈಲ್ ಹೊಂದಿದೆ. ಎಲ್ಲೋ ಹುಟ್ಟಿ ಬೆಳೆದ ಈ ಪ್ರೀತಿಗೆ ಮೊಬೈಲ್ ಸೂತ್ರದಾರಿಯಾಗಿ ಕೆಲಸ ಮಾಡುತ್ತದೆ. ಪ್ರೀತಿ ಎಂಬಾ ಡ್ರಾಮದಲ್ಲಿ ಸಂಗೀತ ನಿರ್ದೇಶಕರಾಗಿ ಈ ಮೊಬೈಲ್ ಪಾತ್ರವಹಿಸುತ್ತದೆ. ಸಿನೆಮಾ,ಮೋಜು, ಮಸ್ತಿ ,ಪಾಟಿ೯,ಬರ್ತಡೇ, ದೇವಾಲಯ, ಇನ್ನೂ ಮುಂತಾದವುಗಳಿಗೆ ಕರೆಯ್ಯೋಲೆ ಕಳಿಸುವ ಆಹ್ವಾನ ಪತ್ರಿಕೆಯ ಪಾತ್ರವನ್ನು ಈ ಮೊಬೈಲ್ ನಿವ೯ಹಿಸುತ್ತದೆ. ಪ್ರಿಯತಮೆ ಮತ್ತು ಪ್ರಿಯಕರನ ನಡುವೆ ಒಂದು ರೀತಿಯ ಮಧ್ಯವರ್ತಿಯಾಗಿ ಬಹು ಮುಖ್ಯವಾಗಿ ಕಾಯ೯ನಿವ೯ಹಿಸುತ್ತದೆ. ಭಯಕರವಾದ ಪ್ರೀತಿ ರಹಸ್ಯಗಳಲ್ಲಿ ಸಲ್ಲದ ಕಾಯ೯ಗಳು ಅಗತ್ಯಕ್ಕೆ ಸಮಯಕ್ಕೆ ತಕ್ಕಂತೆ ನಡೆಯದೇ ಹೋದಾಗ ಕೊನೆಗೆ ಜವರಾಯನ ಪಾತ್ರವಾಗಿಯು ಕೂಡ ಈ ಮೊಬೈಲ್ ನಿವ೯ಹಿಸುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ಹೋದ ಪ್ರಾಣಗಳೆಷ್ಟೋ. ಟ್ರಾಫಿಕ್ನಲ್ಲಿ ಮೊಬೈಲ್ ಬಳಕೆ ಮಾಡುತ್ತಾ ಚಾಲನೆ ಮಾಡುವ ಸಮಯದಲ್ಲಿ ಅರಿವು ಇಲ್ಲದೇ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಸವಾರರು ಎಷ್ಟು? ಅವಘಾತದಿಂದ ನರಳುತ್ತಿರುವವರು ಎಷ್ಟು? ದಿನೇ ದಿನೇ ಇದರಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯನ್ನು ಮತ್ತು ಪ್ರಯಾಣದ ಬ್ಯಾಸರವನ್ನು ನೀಗಲು ಇಯರ್ರ್ಪೋನ್ ಗಳಿಂದ ಸಂಗೀತವನ್ನು ಆಲಿಸುತ್ತಾ ಅಥವಾ ಬೇರೊಬ್ಬರ ಬಳೀ ಪೋನ್ ನಲ್ಲಿ ಮಾತನಾಡುತ್ತ ಪ್ರಯಾಣ ಮಾಡಬೇಕಾದರೆ ಹಿಂದೆ ಬರುವಂತಹ ವಾಹನಗಳ ಶಬ್ಧ ಸರಿಯಾಗಿ ಚಾಲಕನಿಗೆ ಕೇಳಿಸದ ಕಾರಣದಿಂದ ನಾವು ಓವರ್ಟೇಕ್ ಮಾಡಲು ಅಥವಾ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗುವಾಗ ಹಿಂದಿನ ವಾಹನಗಳ ಶಬ್ಬ ನಮಗೆ ಕೇಳಿಸಿಕೊಳ್ಳದೇ ಸರಕ್ಕನೆ ನಮ್ಮ ವಾಹನವನ್ನು ಒಂದು ಭಾಗದಿಂದ ಇನ್ನೋಂದು ಭಾಗಕ್ಕೆ ತಿರುಗಿಸುತ್ತೇವೆ ಆಗ ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ಹತೋಟಿಗೆ ಬರದೆ ನಮ್ಮ ಮೇಲೆ ಹರಿದು ಬಿಡುತ್ತವೆ ಆಗ ನಾವು ಸಾವನ್ನಪ್ಪಬೇಕಾಗುತ್ತದೆ. ಮತ್ತು ಪಾದಚಾರಿಗಳು ಮೊಬೈಲ್ ಗೇಮ್,ಮೆಸೆಜ್,ವಿಡಿಯೋ ನೋಡುವ ಪರಿಯಲ್ಲಿಯೇ ರಸ್ತೆಗಳನ್ನು ದಾಟುತ್ತಾರೆ ಅವರಿಗೆ ಮುಂದೆ ಹಿಂದೆ ಬರುವ ವಾಹನಗಳ ಬಗ್ಗೆ ಅರಿವೆ ಇರುವುದಿಲ್ಲ. ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ನಿಯಂತ್ರಣಕ್ಕೆ ಬಾರದೇ ಪಾದಚಾರಿಗಳ ಮೇಲೆ ಹರಿದು ಬಿಡುತ್ತವೆ. ಬದುಕ ಸಾವುಗಳ ನಡುವೆ ಹೋರಾಟ ಮಾಡುತ್ತಾ ಜೀವನ ಕಳೆಯಬೇಕು ಆಗುತ್ತದೆ ಆದ್ದರಿಂದ ಇವು ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೂಕ್ತವಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಈ ಮೊಬೈಲ್ ಬಳಕೆ ಮಾಡಿಕೊಂಡು ಆರಾಮಾಗಿ ಜೀವನ ನಡೆಸುವುದು ಮಾನವ ಜೀವನಕ್ಕೆ ಒಳಿತು. ಇನ್ನೂ ಕೆಲವರು ಮೊಬೈಲ್ ನಲ್ಲಿ ಸಿಗುವ ನಾನ ಬಗೆಯ ಅನಪೇಕ್ಷಿತ ಮಾಹಿತಿಯನ್ನು ತಿಳಿದುಕೊಂಡು ಅವರ ಮನಸ್ಸಿನ ಮೇಲೆ ಮಾನಸಿಕ ಒತ್ತಡವನ್ನು ತಂದುಕೊಳ್ಳುತ್ತಾರೆ. ಮತ್ತೆ ಮೊಬೈಲ್ ನಲ್ಲಿ ಬರುವ ಆಶೀಲಕರವಾರ ವಿಡಿಯೋ ಮತ್ತು ಪೋಟೋ ನಾನ ಬಗೆಯ ಮನರಂಜನೆ ಕಾಯ೯ಗಳನ್ನು ನೋಡಿ ಅವರ ಮನದಲ್ಲಿ ಕಾಮುಕತೆಯ ಹೆಚ್ಚಾಗುವ ಸಂತತಿಗಳು ಕೂಡ ಹೆಚ್ಚಾವ ಸಾಧ್ಯತೆಗಳೂ ಕೂಡ ಇವೆ. ಮನದಲ್ಲಿ ಕಾಮುಕ ಮಾನೋಭಾವ ಹೆಚ್ಚಾಗಿ ಸಮಾಜದಲ್ಲಿ ನಾನ ಅಹಿತಕರ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿದೆ ಈ ಮೊಬೈಲ್ ನಲ್ಲಿ ದೊರೆಯುವ ಕೆಲವು ಸನ್ನಿವೇಶಗಳು. ಮೊಬೈಲ್ ಬಳಕೆ ಹೆಚ್ಚಾಗಿ ಬಳಸುತ್ತಿರುವುದರಿಂದ ಅವರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತ. ಮಾನವರಲ್ಲಿನ ಏಕಾಗ್ರತೆ ಮಟ್ಟ, ನೆನಪಿನ ಶಕ್ತಿ,ದೃಷ್ಟಿ ದೋಷ ಮತ್ತು ಬುದ್ದಿ ಶಕ್ತಿ ಎಲ್ಲವನ್ನೂ ಕಳೆದುಕೊಳ್ಳತ್ತಾ ಇದ್ದಾರೆ. ಇನ್ನೂ ಕೆಲವರು ವೈಪರೀತ್ಯ ಸ್ಟಾರ್ಟ್ ಪೋನ್ ಬಳಕೆಯಿಂದ ಬುದ್ದಿ ಮಾದ್ಯರು ಹಾಗಿರುವ ಕೆಲವು ಸನ್ನಿವೇಶಗಳನ್ನು ನಾವು ಈ ಸಮಾಜದಲ್ಲಿ ನೋಡುತ್ತಿದ್ದೇವೆ.ಒಟ್ಟಾರೆ ನಾವು ಮೊಬೈಲ್ ಅನ್ನು ಒಳ್ಳೆಯತನವಾಗಿ ಬಳಸಿಕೊಂಡರೇ ನಮ್ಮ ವೃತ್ತಿಪರ ಜೀವನಕ್ಕೂ ಮತ್ತು ಸಾಮಾಜಿಕ ಜೀವನಕ್ಕೂ ಅನುಕೂಲವಿದೆ .ಕೆಟ್ಟದಕ್ಕೆ ಬಳಸಿಕೊಂಡರೇ ಖಂಡಿತವಾಗಿಯೂ ಕೆಟ್ಟಪರಿಣಾಮಗಳು ಬೀರುವ ಸಾಧ್ಯತೆಗಳು ಹೆಚ್ಚಿರುತ್ತವೆ .ಎಷ್ಟು ಕೆಟ್ಟ ಪರಿಣಾಮಗಳು ಇವೆಯೋ ಎಷ್ಟೋ ಒಳ್ಳೆ ಅನುಕೂಲಗಳು ಸಹಾ ಇವೆ. ಬಳಕೆಯ ಆಯ್ಕೆ ಬಳಕೆಗಾರ ಕೈಯಲ್ಲಿ ಇರುತ್ತದೆ ಒಳ್ಳೆಯದಕ್ಕೆ ಬಳಸಿ ಜ್ಞಾನ ಸಂದಾದನೆಗೆ ಅನುಕೂಲ ಕಲ್ಪಿಸಿಕೊಳ್ಳಿ ನಿಮ್ಮ ಅಮೂಲ್ಯವಾದ ಜೀವನದಲ್ಲಿ. “ ಮೊಬೈಲ್ ಬಳಕೆ ಮಿತವಿರಲಿ ಜೀವನಕ್ಕೆ ಒಳಿತಾಗಿರಲಿ “ ********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಇಂತಿಷ್ಟೇ ಮನವಿ. ಮಧುಸೂದನ ಮದ್ದೂರು ಕನಸಲು ನೀ ಕಾಡುವೆ ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ… ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ.. ಬೆನ್ನಟ್ಟುತ್ತ ಬೆವರುತಾ ಬೇಸರಿಸಿ ಕೂರಲು ಸೋತನೆಂಬ ಅಪಮಾನದ ಕುದಿ… ಕುದಿ ಹೃದಯವಿದು ಕಾಯಿಸದೇ ಬಂದು ಬಿಡು ನನ್ನದೆಗೆ ನಿನ್ನುಡುಗ ಗಿಡುಗ ಇನ್ನೂ ಕಾಯಲಾರ… ಕಾದು ಸಂಭ್ರಮಿಸಲು ವಯಸ್ಸು ಮೀರಿದೆ ಬೆಳ್ಳಿಗೂದಲು ಇಣುಕಿವೆ.. ಇಣುಕಿದ ಬೆಳ್ಳಿಗೂದಲಿನಲ್ಲೂ ನಿನ್ನ ಬಂಗಾರದ ನೆನಪು ಒಸರಿವೆ.. ಬಂದು ಬಿಡು ಈ ಪ್ರೇಮ ಫಕೀರನ ಎದೆಯೊಮ್ಮೊಮ್ಮೆ ಹೊಕ್ಕಿಬಿಡು ಹಳೆಯ ನೆನಪುಗಳ ತೂರಿಬಿಡು.. ಇಂತಿಷ್ಟೆ ಮನವಿ….. ******

ಕಾವ್ಯಯಾನ Read Post »

ಇತರೆ

ಪ್ರವಾಸ ಕಥನ

ಮರೀನ್ ಡ್ರೈವ್ ಎಂಬ ಮೋಹಕ ತಾಣ ಸ್ಮಿತಾ ರಾಘವೇಂದ್ರ ಮರೀನ್ ಡ್ರೈವ್ ಎಂಬ ಮೋಹಕ ತಾಣ ಮೊದಲ ಬಾರಿಗೆ ಮುಂಬೈಗೆ ಭೇಟಿ ಕೊಡುತ್ತಿರುವ ನನಗೆ.. ಮುಂಬೈ ಜನ ಜೀವನ ನೋಡಬೇಕು ಎಂಬ ತೀವ್ರವಾದ ತುಡಿತವಿತ್ತು.. ಯಾಕೆಂದರೆ ಕಾಯ್ಕಿಣಿ, ಮತ್ತು ಚಿತ್ತಾಲರ ಕಥೆಗಳಿಂದ ಮುಂಬೈ ನಗರಿಯ ಪೂರ್ಣ ಚಿತ್ರಣವೊಂದು ನನ್ನ ಮನಃಪಟಲದೊಳಗೆ ಗಿರಕಿ ಹೊಡೆಯುತ್ತಲೇ ಇತ್ತು.. ಬಿಡದೇ ಕಾಡಿದ ಕಥೆಗಳ ಎಳೆ ಹಿಡಿದು ಕಳೆದು ಹೋದ ಮಗುವೊಂದು ತಾಯಿ ಹುಡುಕುವಂತೆ. ಬೆರಗು ಮತ್ತು ಆಸೆ ಕಂಗಳಲ್ಲಿ, ಇಡೀ ನಗರ ಬ್ಯಾಟರಿ ಹಿಡಿದು ಹುಡುಕುವ ಉಮೇದು ಹೊಂದಿದ್ದೆ. ಯಾವುದೇ ವೆಹಿಕಲ್ ಬಳಸದೇ ರೈಲು ಮತ್ತು ನಡಿಗೆಯ ಮೂಲಕ ಸುತ್ತಿ ಸುತ್ತಿ ಒಂದಿಷ್ಟು ಸಂತ್ರಪ್ತಭಾವ. ಎಂದಿಗೂ ನಿದ್ರೆ ಮಾಡದ ನಗರ, ಪ್ರತಿ ಕನಸನ್ನು ಜೀವಂತಗೊಳಿಸುವ ನಗರ, ರಾತ್ರಿಯೆಲ್ಲಾ ಪಾರ್ಟಿ ಮಾಡುವ ನಗರವೂ ​​ಹೌದು! ಮುಂಬಯಿಯಲ್ಲಿನ ರಾತ್ರಿಜೀವನವು ಯಾರನ್ನಾದರೂ ಬೆಚ್ಚಿ ಬೀಳುವಷ್ಟು ಬೆರಗುಗೊಳಿಸುತ್ತದೆ, . ಚಂದ್ರನು ಅಂತಿಮವಾಗಿ ವಿದಾಯ ಹೇಳುವ ಸಮಯಕ್ಕೆ ನಕ್ಷತ್ರಗಳು ಹೊರಬಂದ ಕ್ಷಣದಿಂದಲೇ, ಮುಂಬೈಯ ರಾತ್ರಗಳು ಬಹಳಷ್ಟು ಸೋಜಿಗ ವಾಗಿ ತೋರುತ್ತದೆ. ರಿಕ್ಷಾವಾಲಾ ಹತ್ತಿರ ಕೇಳಿದ್ವಿ ಇಲ್ಲಿ ಮರೀನ್ ಡ್ರೈವ್ ಅಂತ ಇದೆಯಲ್ಲ ಅದೆಲ್ಲಿ ಇದೆ,ಅಂದಿದ್ದಕ್ಕೆ ಅಯ್ಯೋ,, ಅದಾ!! ಅಲ್ಲಿ ಬರೀ ಜೋಡಿ ಜೀವಗಳೇ ಇರೋದು ನೋಡೋಕೆ ಅಂತ ಏನಿಲ್ಲ ಅಲ್ಲಿ ಅವರಾಡುವ ಮಂಗಾಟ ನೋಡೋಕೆ ಸಿಗುತ್ತೆ ಅಷ್ಟೇ.. ಅಂತ ಮೂಗು ಮುರಿದು ಮುಗುಳ್ನಕ್ಕಿದ್ದ.. ಅಮಿತಾಬ್ ಬಚ್ಚನ್ ತನ್ನ ಆರಂಭಿಕ ದಿನಗಳನ್ನು ಮುಂಬೈನಲ್ಲಿ ಮೆರೈನ್ ಡ್ರೈವ್‌ನಲ್ಲಿ ಬೆಂಚ್ ಮೇಲೆ ಮಲಗಿದ್ದನೆಂದು ಎಲ್ಲೋ ತಿಳಿದುಕೊಂಡ ನನಗೆ ಅದನ್ನು ನೋಡಲೇ ಬೇಕಾಗಿತ್ತು.. ಮತ್ತು ಇಲ್ಲಿ ಚಿತ್ರೀಕರಿಸಲಾದ ಚಲನಚಿತ್ರಗಳಾದ ಮುಕದ್ದಾರ್ ಕಾ ಸಿಕಂದರ್, ಸಿಐಡಿ , ವೇಕ್ ಅಪ್ ಸಿಡ್,ಹೀಗೇ ಅನೇಕ ಚಿತ್ರ ಗಳು ಸಾಗರ ಭಾವಪೂರ್ಣ ಉಪಸ್ಥಿತಿಯನ್ನು ಮನಸುರೆಗೊಳ್ಳುವಂತೆ ಚಿತ್ರೀಕರಿಸಿದ್ದು ನೋಡಿದ್ದೆ. ಅವೆಲ್ಲ ಸೆಳೆತಗಳು ಒಟ್ಟುಗೂಡಿ ನನ್ನ ಆ ಪ್ರದೇಶದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿತ್ತು. ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರ. . ಇಲ್ಲಿನ ಮುಸ್ಸಂಜೆ ಹಾಗೂ ಬೆಳಕು, ಕಡಲ ತೀರದ ನೈಸರ್ಗಿಕ ಸೌಂದರ್ಯದ ನೋಟವನ್ನು ಒದಗಿಸುತ್ತವೆ. ರಥವೇರಿಬರುವ ರವಿ ಸದ್ದಿಲ್ಲದೇ ಕಡಲಿನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ..ರಾತ್ರಿ ಪೂರ್ತಿ ಮಡಿಲೊಳಗೆ ಮಲಗಿದವನ ಇಂಚಿಂಚೇ ಹುರಿದುಂಬಿಸಿ ಕಳುಹಿಸುತ್ತಿರುವಂತೆ ಭಾಸವಾಗುತ್ತದೆ.. ದಿನವೆಲ್ಲ ದಣಿದ ಅದೇ “ಇನ”ನ ಮತ್ತೆ ಬಾಚಿ ಮಡಿಲೊಳಗೆ ಹುದುಗಿಸಿಕೊಳ್ಳುವ ಕಡಲ ಪ್ರಕ್ರಿಯೆಗೆ ನೋಡುತ್ತ ಕುಳಿತವರೂ ನಾಚಿ ನೀರಾಗಿ ಪ್ರೀತಿ ಹಂಚಿಕೊಳ್ಳುತ್ತಾರಾ?! ಅದಕ್ಕೆ ಇಲ್ಲಿ ಪ್ರೇಮಿಗಳ ಕಲರವ ಜಾಸ್ತಿಯಾ ಅಂತನ್ನಿಸುತ್ತದೆ.. ಮುಂಬೈನ ಸಾಂಪ್ರದಾಯಿಕವಾಗಿ ಬಾಗಿದ ಕರಾವಳಿ ಬೌಲೆವಾರ್ಡ್‌ನ ಮೆರೈನ್ ಡ್ರೈವ್ ಅನ್ನು ಬೀದಿ ದೀಪಗಳ ಹೊಳೆಯುವ ದಾರದಿಂದಾಗಿ ಕ್ವೀನ್ಸ್ ನೆಕ್ಲೆಸ್ ಎಂದು ಕರೆಯತ್ತಾರೆ.ನಿಜಕ್ಕೂ ಇದು ಮುತ್ತಿನ ಹಾರದಂತೆ ಕಂಗೊಳುಸುತ್ತದೆ.. ರಾತ್ರಿಯ ಈ ಕಡಲ ತೀರದ ನೋಟ ವರ್ಣನೆಗೆ ಸಿಕ್ಕುವಂತಹದ್ದಲ್ಲ.. ಬೀಸಿ ಬರುವ ಅಲೆಯ ನಡುವೆ ಹೊಳೆವ ಮುತ್ತಿನ ಹಾರ. ಮೈ ಮನಗಳ ಮುದ ನೀಡಿ ಎಂತಹ ನೋವನ್ನೂ ಕಡಲು ಒಮ್ಮೆ ಕಸಿದುಕೊಂಡು ಬಿಡುತ್ತದೆ.. ಪಕ್ಕದಲ್ಲಿ ಕುಳಿತ ನಮ್ಮೆಜಮಾನ್ರ ಹೆಗಲಮೇಲೆ ನಾನೂ ತಣ್ಣಗೆ ಕೈ ಏರಿಸಿದ್ದೆ ಆಗಲೇ ಪುಟ್ಟ ಮಗುವೊಂದು ಗುಲಾಬಿ ಹೂಗಳ ಗುಚ್ಚವನ್ನೇ ಹಿಡಿದು ತಗೊಳಿ ಸರ್ ಅನ್ನುತ್ತ ನಮ್ಮ ಹತ್ತಿರ ಬಂದು ನಿಂತಿತ್ತು.. ಅರೇ ಈಗ್ಯಾಕೆ ಗುಲಾಬಿ ಎನ್ನುವಂತೆ ಪುಟ್ಟ ಪೋರನ ದಿಟ್ಟಿಸಿದರೆ ಪ್ರಪೋಸ್ ಮಾಡೋಕೆ ಅನ್ನೋದೇ.. ತಗೊಳ್ಳಲು ಕೈ ಚಾಚಿದರು. ಯಾರಿಗೆ ಅಂದೆ, ಯಾರಿಗಾದರೂ ಆಗುತ್ತೆ ಅಂದಾಗ ನಾನು ಕಣ್ಣಿಟ್ಟು ಆ ಪೋರನ ಓಡಿಸಿದ್ದೆ.. ಅವನು ಕೈಯೊಳಗೆ ಹೂವು ಇಟ್ಟೇ ಹೋಗಿದ್ದ.. ನನಗೆ ಆಶ್ಚರ್ಯ ವಾಗಿದ್ದು ಆ ಪುಟ್ಟ ಹುಡುಗನ ಬುದ್ದಿವಂತಿಕೆ ಮತ್ತು ವ್ಯಾಪಾರೀ ಗುಣ.. ಹೂ ಗುಚ್ಛವನ್ನು ಹಿಡಿದು ಸುಮ್ಮನೇ ಅತ್ತಿಂದಿತ್ತ ಓಡಾಡುತ್ತಾನೆ ಅಷ್ಟೇ.. ಕುಳಿತು ಇಷ್ಟಿಷ್ಟೇ ನುಲಿಯುತ್ತಿದ್ದ ಆಸಾಮಿಗೆ ತಗೊಳಿ ಅಂತ ಒತ್ತಾಯ ಮಾಡತೊಡಗಿದ.. ಅರೇ ಎಂತಹ ಚಾಲಾಕಿ ಪೋರ ಯಾರಿಗೆ ಯಾವ ಸಮಯದಲ್ಲಿ ಹೂವು ಬೇಕು ಅಂತ ನಿಖರವಾಗಿ ಊಹಿಸಿ ಮಾರಾಟಮಾಡುವ ಅವನ ಜಾಣತನಕ್ಕೆ ದಂಗಾಗಿದ್ದೆ. ಬದುಕು ಎಲ್ಲವನ್ನೂ ಕಲಿಸುತ್ತೆ.ಅವನು ಯಾವ ಸೈಕಾಲಜಿ ಸ್ಟಡಿ ಮಾಡಿಲ್ಲ ಆದರೆ ಆ ಪುಟ್ಟ ಪ್ರಪಂಚದೊಳಗೆ ಜೀವನಾನುಭವ ಕರಾರುವಕ್ಕಾಗಿದೆ ಅನ್ನುಸಿತು.. ಅವನು ಕೆಂಪು ಗುಲಾಬಿ ಖರೀದಿಸಿದ್ದೂ ಆಯ್ತು ಈ ಪರಿಯ ಜನ ಜಂಗುಳಿಯ ಜಾತ್ರೆಯಂತ ಜಾಗದಲ್ಲಿ ಅದೆಂತ ಏಕಾಂತ ಬಯಸಿ ಬರುತ್ತಾರೆ ಎನ್ನುವದು ಅರ್ಥವೇ ಆಗಲಿಲ್ಲ.. ಬಹುಶಃ ದಟ್ಟ ಬಯಲಿನಲ್ಲಿ ಸಾಗರಾಭಿಮುಖವಾಗಿ ಕುಳಿತಾಗ ಸಾಗರದಂತೆ ಭಾವಗಳೂ ಉಕ್ಕುತ್ತವೆಯೇನೋ.. ಅಳುವ ಕಂಗಳು.ಸಂತೈಸುವ ಕೈಗಳು. ಜಗಳವಾಡುವ ಬಾಯಿಗಳು,ಸೋಲುವ ಮನಸುಗಳು,ಕ್ರಷ್ ಆಗುವ ಹೃದಯಗಳು, ಮುದ್ದಾಡುವ ದೇಹಗಳು.. ಶೂನ್ಯ ದಿಟ್ಟಿಸುವ ಒಂಟಿ ಜೀವಗಳು,, ಅಲ್ಲಿ ಎಲ್ಲವೂ ನಡೆಯುತ್ತದೆ.. ರವಿಯ ಉದಯ ಕಾಲದಿಂದ ಅಂತ್ಯ ಕಾಲದವರೆಗೂ ನಿರಾತಂಕವಾಗಿ ಕುಳಿತು ನಿರಾಳವಾಗಿ ಹೋಗುತ್ತಾರೆ. ಮಧ್ಯ ಮಧ್ಯ ಬರುವ ನಮ್ಮಂತ ಪ್ಯಾಮಿಲಿಗಳು ಕೇವಲ ಪೋಟೊ ಕ್ಕೆ ಪೋಸ್ ಕೊಟ್ಟು ಹೋಗುತ್ತಿರ್ತಾರೆ ಅಷ್ಟೇ.. ಬೆನ್ನಿಗೆ ಕಣ್ಣಿಲ್ಲವೆಂದು ಕುಳಿತೇ ಇರುವ ಜೀವಗಳಿಗೆ ನೋ ಟೆನ್ಷನ್…ಅಲ್ಲಿ ಉಕ್ಕುವ ಶರಧಿ ಓಕುಳಿಯಾಡುವ ಸೂರ್ಯ, ರಂಗೇರುವ ಜೀವಗಳು ಅಷ್ಟೇ ಪ್ರಪಂಚ ಅಲ್ಲಿ ಯಾರು ಯಾರನ್ನೂ ನೋಡುವದೇ ಇಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಅವಶ್ಯಕತೆಗಳು. ಪಬ್ಲಿಕ್ ನಲ್ಲಿ ಒಮ್ಮೆ ಪ್ರೀತಿ ಮಾಡ್ಬೇಕು ಅನ್ನುವ ಛೋಟೀ ಸಿ ಆಸೆಯನ್ನು ಮದುವೆಯಾದವರೂ ಅವರವರ ಸಂಗಾತಿ ಜೊತೆಗೇ ತೀರಿಸಿಕೊಳ್ಳಬಹುದು.. ಶುದ್ಧ ಪ್ರೇಮಿಗಳ ಭಾವೋದ್ವೇಗದ ವಿಶಾಲ ಬಯಲುದಾಣ ಈ ಮರೀನ್ ಡ್ರೈವ್ ಎಂಬ ಮೋಹಕ ಜಾಗ.. ಕುಳಿತಷ್ಟೂ ಹೊತ್ತೂ ಹೊಸ ಹೊಸ ಅನುಭವಗಳ ಜೊತೆಗೆ ಪ್ರಕೃತಿ ಸೌಂದರ್ಯ ವನ್ನೂ ಭರಪೂರ ಸವಿಯಬಹುದು. ಮಕ್ಕಳಿಂದ ವಯೋವೃದ್ಧರವರೆಗೂ ನಿರ್ಭಿಡೆಯಾಗಿ ಮುದಗೊಳ್ಳುವ ಜಾಗ.. ವಿಶೇಷವಾಗಿ ರವಿವಾರದಂದು ನೂರಾರು ಬೀದಿ ಮಾರಾಟಗಾರರು ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ******

ಪ್ರವಾಸ ಕಥನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನಾಗಸ್ವಾಮಿ ಮುತ್ತಿಗೆ ನಾನೆeಕೆ? ಲಂಕೇಶ್. ಅವರನ್ನು. ಒದಬೆeಕು….ಮಾನವ.ಸಹಜ.ನೊeವು. ಹತಾಶೆ. ಸಿಟ್ಟು. ಕಿeಳರಿಮೆಗಳಿಂದ.ಕುಗ್ಗಿ.ಹೊeಗಿದ್ದ.ನನ್ನಂಥವರಿಗೆ.ಬೆಳಕಾಗಿ. ಬಂದು.ಕನಸುಗಳ ನ್ನು.ಬಿತ್ತಿದರು..ನಮ್ಮ. ಗ್ರಹಿಕೆ ಗಳನ್ನು. ವಿಸ್ತರಿಸಿ.ಹೊಸ. ಹೊಸ. ಲೊeಕಗಳ..ಜ್ಞಾನದ. ಸವಿಯನ್ನು.ಉಣಬಡಿಸಿದರು..ಸುತ್ತಲಿನ.ಆಗುಹೊeಗುಗಳಿಗೆ.ಚಿಕಿತ್ಸಕ.ನೊeಟ.ಬಿeರುವಂತೆ.ಮಾಡಿದರು…. ನಾವು. ಏನಾದರೂ. ತಪ್ಪು. ಮಾಡಿದರೆ…ಲಂಕೇಶ್. ಸರ್.ನಮಗೆ.ಉಗಿದಂತಾಗುತ್ತದೆ..ನೈತಿಕತೆ..ಕಳೆದುಕೊಂಡು. ಮಾತಾಡಿದರೆ..ಅದೊಂದು. ಕ್ಷುಲ್ಲಕ .ವ್ಯಕ್ತಿತ್ವದ.ಗಟಾರದ ಬದುಕು. ಅನ್ನಿಸುಷ್ಟರ.ಮಟ್ಟಿಗೆ..ಅವರ.ಸಾಹಿತ್ಯ.ನಮ್ಮನ್ನು.ಎಚ್ಚರದಲ್ಲಿಡುತ್ತದೆ……ಬಹುಶಃ.. ಅವರ. ಸಾಹಿತ್ಯದ. ಸೊಬಗಿಲ್ಲದಿದ್ದರೆ..ನಾನು. ಈರಿeತಿ.ಬರೆಯಲು.ಆಗುತಿರಲಿಲ್ಲವೆeನೊ…ನನ್ನ.ಮಟ್ಟಿಗೆ. ಗೌರವ.ಘನತೆ ಯಿಂದ.ತಾಯಕರಣೆಯಿಂದ.ಬದುಕಲು..ಆಳವಾದ.. ಸೂಕ್ಷ್ಮ ಸಂವೆeದನೆಯಂದ..ಜಗತ್ತನ್ನು. ಅರ್ಥ ಮಾಡಿಕೊಂಡು. ಇನ್ನಷ್ಟು. ಕಾಲ. ಮಾನವಿeಯ ವಾಗಿರಲು.ಮೆeಷ್ಟ್ರ.ಚಿಂತನೆ. ಬೆeಕು…….ಅಮೂಲ್ಯ. ಮಾನವ. ಸಂಪತ್ತನ್ಬು ಉಳಿಸಿ.ಬೆಳೆಸಲು.ಅವರ.ಟಿeಕೆ.ಟಿಪ್ಪಣಿ.. ಬೆeಕe.ಬೆeಕು.. ಬದುಕಿನ. ಪುಳಕ.ಅನುಭವಿಸಲು.ಅವರ. ಮರೆಯುವ.ಮುನ್ನ. ಅನನ್ಯ.ಕಾಣ್ಕೆ…ಬದುಕಿನ.ಸಡಗರಕ್ಕೆ.ನಿಮ್ಮಿ.ಕಾಲಂ.ಅಂತೂ…ಅದ್ವಿತೀಯ…. ಮಾನವ.ಬದುಕಿನ. ಅರ್ಥ. ನಿರ್.ಅರ್ಥ ಕತೆ.ಮನಸ್ಸಿನ.ನಿಗೂಢ.ಶಕ್ತಿ.ಯ.ವಿಸ್ಮಯ ದ.ಅನುಭವ. ಪಡೆಯಲು.. ನಿeಲುವಿನ..ಕಾವ್ಯಾಂತರಂಗದ.ವೈಯಾರವಂತೂ.ಅವಿಚ್ಛಿನ್ನ ವಾದದ್ದು…ಅಷ್ಟೇ. ಏಕೆ? ಈಗಿನ. ಜನಮಾನಸ.ಅರಿತು.ಮುನ್ನಡೆಸಲು…ಇಡಿe…ಲಂಕೇಶ್. ಸರ್.ಅವರ.ಸಮಗ್ರ..ಸಾಹಿತ್ಯ.ವನ್ನು.ಮತ್ತೆ.ಮತ್ತ…ಓದುತ್ತಲೆeಇರಭeಕು.ಅಲ್ಲವೆe?.

ಲಂಕೇಶರನ್ನು ಏಕೆ ಓದಬೇಕು? Read Post »

ಕಾವ್ಯಯಾನ

ಕಾವ್ಯಯಾನ

ಸಮಾಜ ಕೆ.ಸುಜಾತಾ ಗುಪ್ತ ಬಗ್ಗಿದವನ ಬೆನ್ನಿಗೊಂದು ಗುದ್ದು ಇರಲು ಹಾಗೆ ಮತ್ತೊಂದು ಗುದ್ದು ಇದಾಗಿದೆ ಪ್ರಸ್ತುತ ಸಮಾಜದ ನೀತಿ ಮೂರ್ಖತನದ ಪರಮಾವಧಿ ದಾಟಿರಲು ಶಾಂತಿಯ ತತ್ವವ- ಮಹತ್ವವ ಅರಿವ ಮನಗಳುಹೆಣಗಳಾಗಿವೆ. ಈಗೆಲ್ಲಿದೆ..ಶಾಂತಿ ಗೆ ತಾಣ!? ಎಲ್ಲಿದೆ ಶಾಂತಿಗೆ ಪ್ರಾಮುಖ್ಯತೆ.. ಬುದ್ಧನನ್ನು ನೆನೆಯೆ ಪೆದ್ದನೆನುವರು.. ‘ ಶಾಂತಿ ‘ ಅಸಹಾತೆಯಕತೆಯ ಚಿಹ್ನೆ ಎನುವರು.. ಕಲ್ಪನೆಯಲ್ಲಿ ‘ಶಾಂತಿ ಮಂತ್ರ’ ಚಂದವೋ ಚಂದ.. ವಾಸ್ತವದಲ್ಲಿ ಎಲ್ಲವೂ ಮಿಥ್ಯವೋ ಮಿಥ್ಯ… ********

ಕಾವ್ಯಯಾನ Read Post »

ಇತರೆ

ಪಾಟೀಲ ಪುಟ್ಟಪ್ಪ

ಪ್ರಪಂಚ ತೊರೆದ ಪಾಪು ನಾಡೋಜ, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ, ಡಾ.ಪಾಟೀಲ ಪುಟ್ಟಪ್ಪ ಅಸ್ತಂಗತ..! ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ (102) ಅವರು ವಿಧಿವಶರಾಗಿದ್ದಾರೆ… ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ… ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ, ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೇ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು… ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿತ್ತು. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಈ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು… ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿತ್ತು. ಬಳಿಕ ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿತ್ತು. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ತಿಳಿಸಿದ್ದರು… ಹೀಗೆಯೇ ಕೊನೆಗೂ ಅಸ್ತಂಗತರಾದರೂ ಡಾ. ಪಾಟೀಲ ಪುಟ್ಟಪ್ಪನವರು..! ಡಾ.ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’..!– ಕನ್ನಡ ನಾಡಿಗೆ ಕೀರ್ತಿ ತಂದವರು ಪುಟ್ಟಪ್ಪದ್ವಯರು. ಸಾಹಿತ್ಯ ಲೋಕಕ್ಕೆ ಕುವೆಂಪು. ಪರ್ತಕರ್ತರಾಗಿ ಪ್ರಪಂಚ ಖ್ಯಾತಿಯ ಪಾಟೀಲ ಪುಟ್ಟಪ್ಪ ಅಥವಾ ಪಾ.ಪುರವರು. ಡಾ.ಪಾಪು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿಯಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದ ಊರು ಮತ್ತು ಹಾವೇರಿಯಲ್ಲಿ ಮುಗಿಸಿದರು. ಲಿಂಗರಾಜ ಕಾಲೇಜ ಸೇರಿ ಕಾನೂನು ಪದವಿ ಗಳಿಸಿದರು. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭ ಮಾಡಿದರು. ಕಕ್ಷಿಗಾರರಿಲ್ಲದೇ ಸಂಪಾದನೆ ಖೋತವಾಯಿತು. ಊಟಕ್ಕೂ ತತ್ವಾರ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ ಬೆಳೆಸಿದರು. ಅವರು ಕೋರ್ಟಿಗಿಂತ ಪತ್ರಿಕಾ ಕಚೇರಿಗಳಿಗೆ ಹೋದದ್ದೇ ಹೆಚ್ಚು. ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಸ್ನೇಹ, ಪತ್ರಿಕೋದ್ಯಮದ ಹುಚ್ಚು ಹಿಡಿಸಿತು… ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎಸ್‌ಸಿ. ಗಳಿಸಿ ಹಿಂದಿರುಗಿ ಬಂದು ಪತ್ರಿಕಾರಂಗ ಪ್ರವೇಶ ಮಾಡಿದರು… ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ‌ ವಹಿಸಿದ್ದರು… ಮೊನಚಿನ ಬರಹಕ್ಕೆ ಬೆರಗಾಗಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪದವಿ ಪಡೆದರು. ಯಾವುದೇ ಕಚೇರಿ ನೇರಪ್ರವೇಶ, ಕನ್ನಡ ಬಳಕೆಗೆ ಆಗ್ರಹ. ಕನ್ನಡ ದುರವಸ್ಥೆ ಕಂಡು ಖಂಡನೆ ಇತ್ಯಾದಿ ಇದ್ದೇ ಇತ್ತು… ಅಧಿಕಾರಿಗಳಿಗೆ ಚಾಟಿ ಪ್ರಹಾರವೂ‌ ನಡದೇ ಇತ್ತು. ಇವರು ಕನ್ನಡಕ್ಕೆ ಗಳಿಸಿಕೊಟ್ಟ ಸ್ಥಾನಮಾನ ಅಪಾರ. ಚರಿತ್ರಾರ್ಹ ಕಾರ‍್ಯ ಸಾಧನೆಯಾಗಿತ್ತು… ಹಲವಾರು ಸಾಹಿತ್ಯ ಕೃತಿಗಳ ರಚನೆಯೂ ನಡೆದೇ ಇತ್ತು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು-ಕಥಾಸಂಕಲನಗಳು ; ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ; ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು-ಪ್ರಬಂಧ ಸಂಕಲನಗಳು ಮುಖ್ಯವಾದ ಅವರ ಕೃತಿಗಳು… ಡಾ.ಪಾಟೀಲ ಪುಟ್ಟಪ್ಪನವರನ್ನು ಅರಸಿಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವುಗಳು. ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಮುಂತಾದವುಗಳು..! ಇಷ್ಟು ಹೇಳಿ ಡಾ.ಪಾಟೀಲ ಪುಟ್ಟಪ್ಪನವರ ಬಗೆಗೆ ಮಾತು ಮುಗಿಸುತ್ತೇನೆ… ‌ ‌‌‌‌‌‌ ‌ — ಕೆ.ಶಿವು.ಲಕ್ಕಣ್ಣವರ

ಪಾಟೀಲ ಪುಟ್ಟಪ್ಪ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. ಭಾರತೀಯರ ಪ್ರಾಚೀನ ಬದುಕು ಸುಖದ ಸುಪತ್ತಿಗೆಯಾಗಿತ್ತು. ಅಲ್ಲಿ ಎಲ್ಲ ಬಗೆಯ ಸಮಾನತೆ ಇತ್ತು.ವೈದಿಕಯುಗದಲ್ಲಿ ಶಾಂತಿ,ಸಮೃದ್ದಿಯಿತ್ತು ಎಂಬ ಹೇಳಿಕೆಗಳು ಡಾಂಭಿಕತೆಯನ್ನು ಮೆರೆಯುತ್ತಿವೆ. ಹಸಿ ಸುಳ್ಳನ್ನು ಪ್ರದರ್ಶಿಸುತ್ತಿವೆ. ವಾಸ್ತವವೆಂದರೆ ರಾಜಪ್ರಭುತ್ವದ ಕಾಲದಲ್ಲಿ ಜನಸಾಮಾನ್ಯರ ಬದುಕು ಅತಿ ಹೆಚ್ಚು ಸಂಕಟ ಮತ್ತು ಶೋಷಣೆಗೆ ಒಳಗಾಗಿತ್ತು ಎಂಬುದನ್ನು ಶರೀಫರ ತತ್ವಪದಗಳಲ್ಲಿ ಕಂಡುಬರುತ್ತದೆ ಎಂಬಂತಹ ವಿಚಾರ ಚಂದ್ರಪ್ರಭಾ ರವರ ಈ ಹೊತ್ತಿಗೆಯಲ್ಲಿ ಕಾಣುತ್ತೇವೆ. ಬೌದ್ಧಿಕ ಬದುಕಿನ ದುಃಖ ದುಮ್ಮಾನಗಳನ್ನು ಧಿಕ್ಕರಿಸಿ ಜನನ ಮರಣ ಭವ ಚಕ್ರದಿಂದ ಪಾರಾಗುವ ಮುಕ್ತಿ ಸಾಧನೆಯನ್ನು ಸಾಧಿಸಬಹುದು. ಲೋಕ ಜೀವನವು ಹಲವು ವ್ಯಾಧಿಗಳಿಂದ ಕೂಡಿದೆ.ಹಸಿವು ನಿದ್ದೆ ನೀರಡಿಕೆ ನೆರೆಹಾವಳಿ ಅತಿವೃಷ್ಟಿ ಅನಾವೃಷ್ಟಿ ಬಡತನ ಅಜ್ಞಾನ ಮೌಢ್ಯ ಮೊದಲಾದವುಗಳು ಇಡುಕಿರಿದು ಭವ ಸಾಗರವು ಘೋರವಾಗಿದೆ.ಈ ಭವ ಸಾಗರದಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಆಧ್ಯಾತ್ಮ ಮಾರ್ಗವೇ ಸಾಧನ. ಜೀವ ಜಗತ್ತು, ಈಶ್ವರ ಮಾಯೆ ಮೊದಲಾದ ತತ್ವಗಳ ಹುಡುಕಾಟ, ನಂತವಾದ ಈ ಬದುಕಿನಿಂದ ಅನಂತವಾದದತ್ತ ಚಲಿಸುವುದೇ ಜೀವನದ ಗುರಿಯಾಗಿದೆ. ಹೀಗೆ ಇನ್ನೂ ಹಲವಾರು ವಿಷಯಗಳನ್ನು ಶ್ರೀಮತಿ.ಚಂದ್ರಪ್ರಭಾ ರವರು “ತಗಿ ನಿನ್ನ ತಂಬೂರಿ” ಎಂಬ ಕಿರುಹೊತ್ತಿಗೆಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ.

ಪುಸ್ತಕ ವಿಮರ್ಶೆ Read Post »

ಇತರೆ

ಪರಿಚಯ

ಹನುಮಾಕ್ಷಿ ಗೋಗಿ. ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..! ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು ತೀರಾ ಹತ್ತಿರದ ಶಿಷ್ಯರಾಗಿದ್ದೆವು. ಆ ಸಮಯದಲ್ಲಿ ಸಿಕ್ಕವರು ಅಂದರೆ ನಮಗೆ ತೀರಾ ಪರಿಚಿತವಾದರು ಸಂಶೋಧಕಿ ಹನುಮಾಕ್ಷಿ ಗೋಗಿಯವರು… ಹನುಮಾಕ್ಷಿ ಗೋಗಿಯವರು ಬರೀ ಸರ್ಕಾರಿ ಅಧಿಕಾರಿಗಳು ಮಾತ್ರ ಆಗಿರಲಿಲ್ಲ. ಅವರೊಬ್ಬ ಅನನ್ಯ ಲೇಖಕಿಯಾಗಿದ್ದರು. ಅದರಲ್ಲೂ ಅವರೊಬ್ಬ ಶಾಸನಗಳ ಸಂಶೋಧಕಿಯಾಗಿದ್ದರು. ಅವರ ಸಂಶೋಧನೆ ತೀರಾ ಹಸಿವಿನಿಂದ ಕೂಡಿತ್ತು, ಅಂದರೆ ಅವರು ಶಾಸನ ಅಧ್ಯಯನದಲ್ಲಿ ಅಷ್ಟೊಂದು ತೀರಾ ಚಿಕಿತ್ಸಕರಾಗಿದ್ದರು. ಶಾಸನಗಳ ಹುಡುಕಾಟದಲ್ಲಿ ಭಾರೀ ಹಸಿವು ಉಳ್ಳವರು ಆಗಿದ್ದರು ಹನುಮಾಕ್ಷಿ ಗೋಗಿಯವರು… ಮಹಿಳಾ ಸಾಹಿತ್ಯದಲ್ಲಿ ಹೆಸರು ಮಾಡಿದವರೂ ಆಗಿದ್ದರು. ಹಾಗಾಗಿಯೇ ಹನುಮಾಕ್ಷಿ ಗೋಗಿಯವರು ‘ಮಹಿಳಾ ಸಾಹಿತ್ಯಕಾ’ ಎಂಬ ಪ್ರಕಾಶನವನ್ನೂ ತೆರೆದು ನಾಡಿನ ಪ್ರಮುಖ ಲೇಖಕಿಯರ ಸಾಹಿತ್ಯವನ್ನು ಪ್ರಚುರಪಡಿಸಿದವರು ಮತ್ತು ಈಗಲೂ ಆ ನಿಟ್ಟಿನ ಕೆಲಸದಲ್ಲಿ ತೊಡಗಿಕೊಂಡವರು. ಇವರ ಪ್ರಕಾಶನದಿಂದ ಅಮೂಲ್ಯ ಸಾಹಿತ್ಯ ಒಡಮೂಡಿದೆ. ಹಾಗಾಗಿಯೇ ತಾವೊಬ್ಬ ಸಾಹಿತಿಯಾಗಿಯೂ ಇತರ ಪ್ರಮುಖ ಮಹಿಳಾ ಸಾಹಿತಿಗಳನ್ನೂ ಹೊರತಂದವರು ಹನುಮಾಕ್ಷಿ ಗೋಗಿಯವರು… ಮುಖ್ಯವಾಗಿ ಇವರೊಬ್ಬ ಶಿಲಾ ಶಾಸನಗಳ ಸಂಶೋಧಕಿಯಾಗಿ ಮಾಡಿದ ಕೆಲಸ ಅಮೂಲ್ಯ ಮತ್ತು ಅನನ್ಯವಾದದು. ಇಂತಹ ಹನುಮಾಕ್ಷಿ ಗೋಗಿಯವರ ಬಗೆಗೆ ಒಂದು ಕಿರು ಟಿಪ್ಪಣಿ ಹೀಗಿದೆ… ಹನುಮಾಕ್ಷಿ ಗೋಗಿ ಅವರು ೧೯೫೫ ಜೂನ ೧ ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು… ಇವರು ಮೂಲತಃ ಅವಿಭಜಿತ ಗುಲ್ಬರ್ಗಾ ಅಥವಾ ಕಲಬುರ್ಗಿ ಜಿಲ್ಲೆಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು. ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಈಗ ಧಾರವಾಡದಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿಯವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿಯೂ ಇದ್ದಾರೆ… ಇವರು ‘ಮಹಿಳಾ ಸಾಹಿತ್ಯಿಕಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕಾನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರಗಳ ೪9ಕ್ಕೂಹೆಚ್ಚು ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ… ಶಾಸನಗಳ ಆಕರ ಸಂಶೋಧಕಿಯಾಗಿರುವ ಇವರ ಕೃತಿಗಳು ಹೀಗಿವೆ– ವ್ಯಾಸಂಗ (೧೯೮೩). ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ). ಸುರಪುರ ತಾಲೂಕಿನ ಶಾಸನಗಳು (೧೯೯೪). ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫). ಕರ್ನಾಟಕ ಭಾರತಿ ಸೂಚಿ (೨೦೦೨). ಅನುಶಾಸನ (೨೦೦೨). ಉಪ್ಪಾರ ಹಣತೆ (೨೦೦೨). ಬೀದರ ಜಿಲ್ಲೆಯ ಶಾಸನಗಳು (೨೦೦೫). ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭). ಲಕ್ಕುಂಡಿ ಶಾಸನಗಳು (೨೦೦೮). ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡರ ಜೊತೆಯಲ್ಲಿ). ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯). ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ಚೈತನ್ಯಶೀಲೆ ( ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧). ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩). ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪). ರಾಜಮನೆತನದ ಚರಿತ್ರೆಗಳು (೨೦೧೪). ಲಕ್ಷ್ಮೇಶ್ವರದ ಶಾಸನಗಳು (೨೦೧೫). ದಂಡಿನ ದಾರಿ (೨೦೧೬). ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೬). ಇವರ ಸಂಶೋಧನೆಗೆ ಸಂದ ಸನ್ಮಾನ ಮತ್ತು ಪುರಸ್ಕಾರಗಳು-– ೧೯೯೧ – ಆಡಳಿತಾತ್ಮಕ ಸೇವೆಗೆ ಸನ್ಮಾನ. ೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದದ ಪುರಸ್ಕಾರ. ೧೯೯೫ – ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು. ೧೯೯೬ – ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು. ೨೦೦೪ – ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ. ೨೦೦೫ – ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು. ೨೦೦೫ – ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ. ೨೦೦೫ – ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು. ೨೦೦೬ – ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ. ೨೦೦೬ – ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು. ೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು. ೨೦೦೯ – ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು. ೨೦೧೪ – ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ. ೨೦೧೪ – ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ. ೨೦೧೫ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ. ೨೦೧೫ – ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ. ೨೦೧೫ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ. ೨೦೧೫ – ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ. ೨೦೧೫ – ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ. ೨೦೧೬ – ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ೨೦೧೭ – ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ. ಹೀಗೆಯೇ ವಿವಿಧ ಪುರಸ್ಕಾರ ಮತ್ತು ಪ್ರಶಸ್ತಿಗಳು ಬಂದಿವೆ ಹನುಮಾಕ್ಷಿ ಗೋಗಿಯವರಿಗೆ… ಹೀಗೆಯೇ ಒಬ್ಬ ಸರ್ಕಾರಿ ಅಧಿಕಾರಿಯಾಗಿಯೂ ಶಾಸನ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು ಹನುಮಾಕ್ಷಿ ಗೋಗಿಯವರು..! *********** — ಕೆ.ಶಿವು.ಲಕ್ಕಣ್ಣವರ

ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆ

ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ        ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು.    ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ ಕಾವ್ಯವಾಗಿದ್ದು, ಅವರಿಂದ ಮತ್ತಷ್ಟುಕೃತಿಗಳು ಮೂಡಿಬರಲೆಂದು ಹಾರೈಸಿದರು. ನಂತರ ಮಾತಾಡಿದ ಕವಿ ಮದುಸೂದನ್ ಅವರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂದು ಕರೆ ನೀಡಿದರು. ಕೃತಿ ಬಿಡುಗಡೆಯ ಈ ಕಾರ್ಯಕ್ರಮವನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದರು. ಸಂಕೋಲೆಗಳ ಕಳಚುತ್ತಆನ್ ಲೈನ್ ಮೂಲ ಪುಸ್ತಕ ಕೊಳ್ಳುವ ಮಾಹಿತಿಪುಸ್ತಕದ ಬೆಲೆ-150=00 ರೂಪಾಯಿಗಳುIFSC code:CNRBOOO2698A/c:. 1145101036761Bhadravathi RamachariCanara bank,. Rajajinagar 2nd Block. ಮೇಲಿನ ಖಾತೆಗೆ ಹಣ ಹಾಕಿಕೆಳಗಿನ ವಾಟ್ಸಪ್ ನಂಬರಿಗೆ ವಿಳಾಸ ಕಳುಹಿಸಿನಂಬರ್-8861495610ಇಂದ: ಕಾವ್ಯ ಸ್ಪಂದನ ಪ್ರಕಾಶನ,ಬೆಂಗಳೂರು ***********************************

ಪುಸ್ತಕ ಬಿಡುಗಡೆ Read Post »

You cannot copy content of this page

Scroll to Top