ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬಂಡಾರ ಬಳೆದ ಹಣಿ

ಕವಿತೆ ಬಂಡಾರ ಬಳೆದ ಹಣಿ ಡಾ.ಸುಜಾತಾ ಸಿ. ಬಂಡಾರ ಬಳೆದ ಹಣಿಬಾಯಿತುಂಬ ಎಲೆ ಅಡಿಕೆಜೋತು ಬಿದ್ದ ಗುಳಿ ಕೆನ್ಯೆಜಿಡ್ಡು ಗಟ್ಟಿದ ಜಟಾಧರಿಕೈ ತುಂಬಾ ಹಸಿರ ಬಳಿಎದೆ ತುಂಬಾ ಕವಡೆ ಸರಮೈ ತುಂಬಾ ಹಸಿರುಟ್ಟುಪಡಲಗಿ ಹಿಡಿದುಓಣಿ ಓಣಿ ತಿರುಗುವಳುಜೋಗತಿ ಎಂದು ಹೆಸರಿಟ್ಟುಕೂಗುವರೆಲ್ಲರೂಕತ್ತಲೆಯ ಬದುಕಲ್ಲಿಸದಾ ಬುಡ್ಡಿ ಚಿಮಣದಬೆಳಕಾಗಿಸಿ ಹಂಬಲಿಸಿಸೂರ್ಯನ ಬೆಳಕಿಗೆಜೋಗಕ್ಕೆ ಜೊಗತಿಊಧೋ ಉಧೋ ಎಂದುಹೋರಟಳು ಮಕ್ಕಳ ಸಲುವಲೆಂದುಕಂಡ ಕಣ್ಣು ಉರಿ ಕೆಂಡವಾಗಿಗೈಯ್ಯಾಳಿ ಎಂದುಕೊಟ್ಟುಬಿಟ್ಟರು ಪಟ್ಟವಒಣ ರೊಟ್ಟಿ ಜೊಳಕೆಕೈ ಚಾಚಿ ಜೋಳಿಗೆ ಬಾಯಿತೆರೆದಾಗ ಮೂಗು ಮುರಿಯುತ್ತಲೇಒಳಹೋದ ಹೆಣ್ಣುವಟಗುಟ್ಟಿ ತಂದಾಕಿದಹಳಸಲು ಜೊಳಿಗೆ ಬಟ್ಟೆಅವಳ ಅಂಗಳದ ತುಂಬೆಲ್ಲಹನಿಯ ರಂಗವಲ್ಲಿ ಚೆಲ್ಲಿಮುಂದೆ ನಡೆದಾಗಬೊಗಸೆಯೊಡ್ಡಿ ನೀರುಕುಡಿದು ದಾಹ ತೀರದಿರಲುಮುಂದಿನ ಮನೆಯ ಪಯಣಒಂದು ಕಾಸು ಎಸೆದುಒಳ ಹೊದ ತಾಯಿದುರ್ಗುಟ್ಟಿ ನೊಡಿದರುಹರಸಿ ಮುಗುಳು ನಗೆ ನಕ್ಕುದಾರಿ ಸಾಗಿಸಿ ಜನಸಂದಣಿಕಡೆಗೆ ಕಾಲ ಎಳೆಯುತ್ತಾವಿಶ್ರಮಿಸಲು‌ ಬೇವಿನ ಮರದಆಶ್ರಯ ಪಡೆದು ಕುಳಿತಿರಲುಬಡಕಲು ದೇಹದಮುಖ ಬಾಡಿದ ನನ್ನಂತೆಇರುವ ಹಸಿದ ಹೊಟ್ಟೆಗೆಅನ್ನ ಕೇಳಿರಲುಜೊಳಿಗೆ ಒಳಗಡೆಒಣ ರೊಟ್ಟಿ ಕುಟುಕಲುಒಡಲ ಹಸಿವಿಗೆ ಆಸರೆಯಾ ಮಾಡಿಎದ್ದು ನಡೆದಳುಬೇವಿನ ಎಸಳುಬಿಸಿಲೊದ್ದು ತಣ್ಣಗಿರಲಿನಿನ್ನ ಕುಡಿ ಬಳ್ಳಿ ಎಂದುಹರಸಿದಂತಾಗಿಮನೆಯ ಕಡೆಗೆ ಹೆಜ್ಜೆ ಇಡಲುಗುಡಿಸಲ ತುಂಬೆಲ್ಲಾ ಕಣ್ಣಾಗಿಕಾವಲಾಗಿ ಕಾಯತಲಿರುವಚಿಕ್ಕಮಕ್ಕಳು ಬಂದುಎದೆಗವಚಿ ಕೊಂಡಾಗಬಿಸಿಲ ಝಳಕೊಒಳ ಬೆಗುದಿಗೊಒತ್ತರಿಸಿ ಬಂದ ಕಣ್ಣ ಹನಿಯಉಪ್ಪುಂಡು ಬಿಕ್ಕಿ ಬಿಕ್ಕಿಅತ್ತಾಗ ಸಂಜೆಯ ಕಿರಣಮುಸುಕ್ಕೊದ್ದು ಮಲಗಿದಾಗಗೋಧುಳಿ ಕೆಮ್ಮಣ್ಣುಮುಖ ಮೊತಿ ಮುಚ್ಚಿಅಳುವೆಲ್ಲ ನುಂಗಿಮತ್ತೇ ಹಣಿಗೆ ಸಿಂಗರಿಸಿದಳುಬಂಡಾರವ ಬಳಿದ ಬಂಗಾರದ ತಾಯಿ

ಬಂಡಾರ ಬಳೆದ ಹಣಿ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಆತ್ಮಕತೆ–03 ಅಕ್ಷರ ಬೀಜದ ಬೆಳಕಿನತ್ತ….. ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ. ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ ಬಳಿಕ ಯಾರದೋ ಸಹಾಯದಿಂದ ಹನೇಹಳ್ಳಿಯ ಸರಕಾರಿ ಹಾಸ್ಟೆಲ್ಲು ಸೇರಿಕೊಂಡು ಓದಲಾರಂಭಿಸಿದ. ಆದರೆ ಮನೆಯಲ್ಲಿ ಯಾರಿಗೂ ಗಣಪು ಶಾಲೆಗೆ ಸೇರಿದ್ದು ಸರಿಬರಲಿಲ್ಲ. ಅಕ್ಕಂದಿರು ಅಣ್ಣಂದಿರೆಲ್ಲ ಸಾಣೆಕಟ್ಟೆಯ ಉಪ್ಪಿನಾಗರ ಕೆಲಸಕ್ಕೆ ಸೇರಿ ಅನ್ನದ ದಾರಿ ಕಂಡುಕೊಂಡಿದ್ದರು. ಗಣಪು ಅದೇ ಕೆಲಸಕ್ಕೆ ಅವರೆಲ್ಲರನ್ನು ಕೂಡಿಕೊಳ್ಳಬೇಕೆಂಬುದು ಅವರೆಲ್ಲ ಒತ್ತಾಸೆಯಾಗಿತ್ತು. ಒತ್ತಾಯದಿಂದ ಶಾಲೆ ಬಿಡಿಸಿ ಮನೆಗೆ ಕರೆತಂದರಾದರೂ ಗಣಪು ಆಗರದ ಕೆಲಸಕ್ಕೆ ಯಾವ ಬಗೆಯಿಂದಲೂ ಒಪ್ಪಿಕೊಳ್ಳಲಿಲ್ಲ. ನಾಡವರ ಮನೆಯ ದನಗಳನ್ನು ಮೇಯಿಸುವ ಕೆಲಸಕ್ಕೆ ನೇಮಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಲ್ಲಿ ಗಣಪು ಗೋವಳಿಗನಾದ. ‘ಹಣೆಯ ಬರಹವೊಂದು ಸರಿಯಾಗಿದ್ದರೆ ಅದನ್ನು ಯಾರೂ ಕೆಡಿಸಲಾರರು’ ಎಂಬ ಹಳೆಯ ನಂಬಿಕೆಯ ಮಾತೊಂದಿದೆ. ಗಣಪು ಮತ್ತೆ ಅಕ್ಷರದ ದಾರಿಯಲ್ಲಿ ನಡೆಯುವಂತೆ ಮಾಡಿದ ವಿಚಿತ್ರ ಘಟನೆಯೊಂದು ನಡೆದು ಹೋಯಿತು… ಅಗ್ಗರಗೋಣದ ಏಸುಮನೆ ನಾರಾಯಣ ನಾಯಕ ಎಂಬುವವರ ಮಗ ಯಶವಂತ ಹನೇಹಳ್ಳಿಯ ಶಾಲೆಯಲ್ಲಿ ಗಣಪುವಿನ ಸಹಪಾಠಿಯಾಗಿದ್ದವನು. ಅಗ್ರಗೋಣದಿಂದ ಹನೇಹಳ್ಳಿಗೆ ಗದ್ದೆ ಬಯಲಿನ ದಾರಿಯಲ್ಲಿ ಹೋಗುವಾಗ ನಡುವೆ ಗುಂದಿಹಿತ್ತಲಿನ ಬದಿಯಲ್ಲೇ ಕಾಲು ದಾರಿಯಿದೆ. ಯಶವಂತ ಅದೇ ದಾರಿಯಲ್ಲಿ ನಡೆಯುತ್ತಾ ಗಣಪುವಿನ ಜೊತೆಸೇರಿ ಮುಂದುವರಿಯುವುದು ರೂಢಿಯಾಗಿತ್ತು. ಇದೇ ಕಾರಣದಿಂದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆದು ಗಾಢ ಸ್ನೇಹ ಬೆಸೆದುಕೊಂಡಿತ್ತು. ಗಣಪು ಶಾಲೆ ಬಿಟ್ಟು ದನಕಾಯ ಹತ್ತಿದ ಬಳಿಕ ಯಶವಂತನಿಗೆ ಒಂಟಿತನ ಕಾಡಿತು. ಗುಂದಿಹಿತ್ತಲಿನಿಂದ ಮುಂದಿನ ಹನೇಹಳ್ಳಿಯ ದಾರಿ ಬೇಸರ ಹುಟ್ಟಿಸಿತು. ಒಂದು ದಿನ ಶಾಲೆಗೆ ಹೊರಟವನು ದಾರಿಯನ್ನು ಬದಲಿಸಿ ಹಳ್ಳದ ಈಚೆ ನಾಡುಮಾಸ್ಕೇರಿ ಭಾಗದ ಗದ್ದೆ ಬಯಲಲ್ಲಿ ಗಣಪು ದನ ಮೇಯಿಸುತ್ತಿರುವಲ್ಲಿಗೆ ಬಂದು, “ಗಣಪು ನೀನು ಶಾಲೆಗೆ ಬರದಿದ್ರೆ ನನಗೂ ಶಾಲೆ ಬೇಡವೇ ಅನಿಸ್ತಿದೆಯೋ” ಎಂದು ತನ್ನ ದುಃಖ ತೋಡಿಕೊಂಡ. ಅಂದು ಇಡಿಯ ದಿನ ಗಣಪುವಿನ ಜೊತೆ ಇದ್ದು ದನ ಮೇಯಿಸುವಲ್ಲಿ ಆಟವಾಡುತ್ತ ಸಂಜೆ ಶಾಲೆ ಬಿಡುವ ಸಮಯ ನೋಡಿ ಮನೆಗೆ ಮರಳಿದ. ಯಶವಂತ ಅಂದು ಶಾಲೆಗೆ ಹೋಗದಿರುವ ಸಂಗತಿ ಮನೆ ಮಂದಿಗೆನೂ ತಿಳಿಯಲಿಲ್ಲ. ಯಶವಂತ ಮರುದಿನವೂ ಗಣಪು ಇರುವಲ್ಲಿಗೆ ಬಂದ…. ಆಡುತ್ತ ದಿನ ಕಳೆದ. ಇದು ರೂಢಿಯಾಯಿತು. ಪಾಟೀಚೀಲದೊಂದಿಗೆ ಮನೆಯಿಂದ ಶಾಲೆಗೆ ಹೋಗುವ ಸಂಭಾವಿತನಂತೆ ಹೊರಡುವ ಯಶವಂತ ದಿನವೂ ಗಣಪು ಇದ್ದಲ್ಲಿಗೆ ಬಂದು ಸಮಯ ಕಳೆದು ಮರಳುತ್ತಿದ್ದ. ಅಂಥ ಒಂದು ದಿನ ಯಶವಂತ ಬಂದದ್ದೆ ಯಾವುದೋ ಆಟದಲ್ಲಿ ಇಬ್ಬರೂ ಮೈಮರೆತಿದ್ದರೆ ಗಣಪು ಬಯಲಿನಲ್ಲಿ ಬಿಟ್ಟ ದನಗಳೆಲ್ಲ ಜಮೀನ್ದಾರ್ ಗಾಂವಕರರೊಬ್ಬರ ಕಾರುಗದ್ದೆಗೆ ನುಗ್ಗಿ ಹಾಯಾಗಿ ಮೇಯ ತೊಡಗಿದವು. ಆಕಸ್ಮಿಕವಾಗಿ ಬಯಲಿಗೆ ಬಂದ ಗಾಂವಕರರು ಹಸನಾಗಿ ಮೊಳಕೆಯೊಡೆದಿದ್ದ ಕಾರುಗದ್ದೆ ದನಗಳ ಮೇವಿನ ಕಣವಾದುದನ್ನು ಕಂಡು ಕೆಂಡಾಮಂಡಲವಾದರು. ಗದ್ದೆ ಹಾಳೆಯ ಮೇಲಿನ ಲುಕ್ಕಿ ಗಿಡದ ಬರಲು ಕಿತ್ತುಕೊಂಡದ್ದೇ ಗಣಪುವನ್ನು ಹಿಡಿದು ಬಾರಿಸತೊಡಗಿದರು. ಕಾದ ಕಬ್ಬಿಣದ ಸಲಾಕೆಯಂತೆ ಲುಕ್ಕಿ ಬರಲಿನ ಬಾಸುಂಡೆಗಳೆದ್ದುದನ್ನು ಖಾತ್ರಿ ಪಡಿಸಿಕೊಂಡೇ ಗಾಂವಕರರು ಗಣಪುವಿನ ಕೈ ಬಿಟ್ಟಿದ್ದರು. ಯಶವಂತ ದಿಕ್ಕುಗೆಟ್ಟವನಂತೆ ಊರಿನತ್ತ ಓಡಿದ್ದ. ನೋವು ಅವಮಾನಗಳಿಂದ ಜರ್ಜರಿತನಾದ ಗಣಪು ಗದ್ದೆ ಹಾಳೆಯ ಮೇಲೆ ಕುಸಿದು ಕುಳಿತ. ತನ್ನ ಬೆನ್ನಿಗೆ ಬಾಸುಂಡೆಗಳು ಮೂಡುವಂತೆ ಬಾರಿಸಿದ ಗಾಂವಕರರಿಗಿಂತ ತನ್ನ ತಂದೆ ಅಕ್ಕಂದಿರು ಅಣ್ಣನ ಮೇಲೆ ಸಿಟ್ಟು ಉಕ್ಕಿ ಬಂತು. ತನ್ನನ್ನು ಶಾಲೆ ಬಿಡಿಸಿ ಕರೆತಂದು ದನ ಕಾಯಲು ಹಚ್ಚಿದ ಅವರೆಲ್ಲ ಅಪ್ಪಟ ವೈರಿಗಳಂತೆ ಭಾಸವಾದರು. ಮತ್ತೆ ಮನೆಗೆ ಹೋದರೂ ತನ್ನದೇ ತಪ್ಪೆಂದು ಆರೋಪಿಸಿ ಪೆಟ್ಟು ಕೊಡುತ್ತಾರೆ ಎಂಬ ಭಯವೂ ಆಯಿತು. ಮತ್ತೆಂದೂ ಮನೆಕಡೆ ಕಾಲಿಡಲೇಬಾರದು ಎಂದು ಗಣಪು ಆಕ್ಷಣದಲ್ಲಿ ನಿರ್ಧರಿಸಿದ. ತಾಯಿ ತೀರಿದ ಬಳಿಕ ಆಗಾಗ ಮನೆಗೆ ಬಂದು ಸಾಂತ್ವನ ಹೇಳಿ ತನ್ನನ್ನು ವಿಶೇಷವಾಗಿ ಮದ್ದು ಮಾಡುತ್ತಿದ್ದ ಸಾಣೆಕಟ್ಟೆಯ ದೊಡ್ಡಮ್ಮ ಹಮ್ಮಜ್ಜಿ’ ನೆನಪಾದಳು. ಗಣಪು ಅಳುತ್ತಲೇ ಸಾಣೆಕಟ್ಟೆಯತ್ತ ಹೆಜ್ಜೆ ಹಾಕಿದ. ರಾಮಕೃಷ್ಣ ಅವರ ತಂದೆ-ತಾಯಿ ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಮಡಿಲಲ್ಲಿ ತಲೆಯಿಟ್ಟು ಬಿಕ್ಕಳಿಸಿದ ಗಣಪು ತಾನು ಮತ್ತೆಂದೂ ಊರಿಗೆ ಹೋಗುವುದಿಲ್ಲವೆಂದೂ ತನ್ನನ್ನು ಮತ್ತೆ ಶಾಲೆಗೆ ಸೇರಿಸೆಂದೂ ಪರಿಪರಿಯಾಗಿ ಬೇಡಿಕೊಂಡ. ತಬ್ಬಲಿ ಕಂದನ ಆಕ್ರಂದನಕ್ಕೆ ಅಂತಃಕರಣ ಕಲುಕಿದಂತಾದ ಹಮ್ಮಜ್ಜಿ ಗಣಪುವನ್ನು ಗಟ್ಟಿಯಾಗಿ ಎದೆಗೆ ಅಪ್ಪಿಕೊಂಡು ತಾಯ್ತನದ ಪ್ರೀತಿಯೆರೆಯುತ್ತ ಬೆನ್ನ ಮೇಲಿನ ಬಾಸುಂಡೆಗಳಿಗೆ ಎಣ್ಣೆ ಲೇಪಿಸತೊಡಗಿದಳು. ************************************************************************ ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ ಗಾಯ ಮಾಸುತ್ತದೆ ಅರುಣಾಅರಿವಿನ ಅಕ್ಷರಗಳಿಗೆ ಅರಿವೆ ತೊಡಿಸಿ ಕಾವ್ಯವಾಗಿ ಬಿಚ್ಚಿಕೊಳ್ಳುತ್ತೇನೆ ***************************

ಗಜಲ್ Read Post »

ಕಾವ್ಯಯಾನ

ನೀಲ ಮೋಹ.

ಕವಿತೆ ನೀಲ ಮೋಹ. ನಂದಿನಿ ವಿಶ್ವನಾಥ ಹೆದ್ದುರ್ಗ ಪ್ರೀತಿ ನೆರೆನುಗ್ಗಿದಾಗೆಲ್ಲಾನಾನವನ ನಿನ್ನ ಹೆಸರಲ್ಲೇಕರೆಯುವೆ,ಬಲ್ಲೆಯಾ?ನನ್ನ ಉತ್ಕಟತೆಗೆ ಒದಗುತ್ತಿ ನೀನುಆಗಾಗ ಚಲುವ.ನವುರಾಗಿ ನಿನ್ನ ಉಸುರುವಾಗೆಲ್ಲಾಅಂಗುಲಂಗುಲದಲ್ಲೂಸಂಗಕ್ಕೆ ಅರಳುವಬಂಗಾರದ ಹೂವು ನಾನು. ಆಗೆಲ್ಲಾ ಬೆಚ್ಚಿ ಬೀಳುತ್ತಾನೆಇವನು.ಮತ್ತ ಮತ್ಸರದಲಿ ಪ್ರೇಮದ ಹೊಸಸಂವತ್ಸರ ಶುರುವಾಗುತ್ತದೆಇಲ್ಲಿ.ಬಿಗಿ ಕಳೆದುಕೊಂಡಿದ್ದ ನನ್ನಹಳೆಯ ಒಲವಿಗೆಸಿಹಿಹಗೆಯಿಂದಲೆ ಸೊಗ ನೀಡುತಾನೆಮತ್ತೆ. ಅಡಿಗಡಿಗೆ ಬಣ್ಣ ಬದಲಿಸುವನಭದ ಮೋಹನನೇನೆಲ ಮುಗಿಲ ಹೊಲೆಯುವಚತುರ ಚಮ್ಮಾರನೇನೇವರಿಕೆಯೂ ಇರದೆ ನೆನಪಿಗೇನಲುಗುವಾಗೆಲ್ಲಾನೀನಾರೆಂದು ತಿಳಿವ ಕುತೂಹಲನನಗೆ. ಅವಳಾರೋ ನಿತ್ಯ ಕನ್ನೆಬಿಚ್ಚಿ ಬಿಸುಟ ಸೀರೆಯೆನಿಸುತ್ತಿನಕಾಶೆ ನಕ್ಷೆ ಹೆಸರು ವಿಳಾಸವಿರದಊರೆನಿಸುತ್ತಿ.ಆಕಾರವಿರದ ಮಳೆಯ ತತ್ತಿಗಳಹೊತ್ತು ನಡೆವ ಬಟಾಬಯಲೆನಿಸುತ್ತಿ.ನೆಲದ ನೀರೆಲ್ಲಾ ಹರಳಾಗಿಅಡಗಿಸಿಡುವ ಗೋದಾಮು ಎನಿಸುತ್ತಿ.ಭಂಗವಿಲ್ಲದೇ ಭಗವಂತ ಎಸೆದ ಚೆಂಡುನಿನ್ನಂಗಳ ಮುಟ್ಟುವಾಗೆಲ್ಲಾಮುಟ್ಟಾದ ನಾನೇಎನಿಸುತ್ತಿ. ಹಾರುಹಕ್ಕಿಗೆ ಏರುತ್ತೇರುತ್ತಾಹೋರುವ ದಾರಿಯೆನಿಸುತ್ತಿರಚ್ಚೆ ಹಿಡಿದ ಪುಟ್ಟಿ ಅಪ್ಪನಹೆಗಲೇರಿ ಮುಟ್ಟ ಬಯಸುವಅಟ್ಟವೆನಿಸುತ್ತಿಜಡೆಬಿಲ್ಲೆ ಮುಡಿದ ಮರಕ್ಕೆಸಮಸ್ತ ವಿವರವೆನಿಸುತ್ತಿ. ನೀಲನೇ..ಪ್ರೇಮಲೋಲನೇಎದೆಯ ಖಾಲಿಯೇಜಗದ ಮಾಲಿಯೇನನ್ನ ಕಾವು ನೀನುತುಯ್ಯುವ ಸಾವು ನೀನು.ಮೋಹದ ನೋವು ನೀನು ಅಪ್ಪುಗೆಗೆ ದಕ್ಕಿಬಿಡು ಒಮ್ಮೆನಿನ್ನ ಪರಿಮಳಕೆ ಅರಳಿಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆಚೆಲುವ.ಮಂತ್ರ ಹೇಳಿಹೊಳೆವ ಕನ್ನಡಿಯಲಿ ಕೂಡಿಹೆರುವೆ ನಿನ್ನನ್ನೆ ದಮ್ಮಯ್ಯ.!!ಅರೆ..ಬೆಚ್ಚುವೇ ಏಕೆ.?ಆಗದೋ..?ಬಾ ಹೋಗಲಿ.ತುಸು ಹೊತ್ತು ಕುಳಿತು ಮಾತಾಡುವ. ********************************

ನೀಲ ಮೋಹ. Read Post »

ಕಾವ್ಯಯಾನ

ಯಾರಿಗೂ ನಾವು ಕಾಯುವುದಿಲ್ಲ

ಕವಿತೆ ಯಾರಿಗೂ ನಾವು ಕಾಯುವುದಿಲ್ಲ ನೂತನ ದೊ ಶೆಟ್ಟಿ ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿಕಡುಕೆಂಪಾಗಿ ಜೀವ ತುಂಬಿಕೊಂಡಿತ್ತುಆ ಗುಲಾಬಿ ಹೂ ಎಳೆಯ ಹೊನ್ನ ಕಿರಣಗಳುಮಲಗಿದ್ದ ಇಬ್ಬನಿಗೊಂದುಹೂ ಮುತ್ತನಿಕ್ಕಿದಾಗನಾಚುತ್ತಲೇ ಸುಖಿಸಿತ್ತು. ಮುಳ್ಳುಗಳ ಸಂಗವೇಕೆಂದುದೂರ ನಿಂತಕರಗಳಿಗಾಗಿ ಕಾತರಿಸುತ್ತತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು ಏರಿದ ಬಿಸಿಲಲ್ಲಿ ಕಿರುಗಣ್ಣಾಗಿಈಗ ಬರಬಹುದೇ?ಕೇಳಿದ ಪ್ರಶ್ನೆಗೆಇಬ್ಬನಿಯ ನಿರುತ್ತರ ಹೊನ್ನ ಕಿರಣಗಳ ತೆಕ್ಕೆಯಲ್ಲಿಸೇರಿ ಹೋದ ಇಬ್ಬನಿಯ ಕಂಡುಗುಲಾಬಿಗೂ ತವಕಎಲ್ಲಿ ನನ್ನ ತಬ್ಬುವ ಕೈಗಳು ಬೆಳಕು ಕರಗಿದ ಸಂಜೆಯಲಿರಾತ್ರಿ ರಾಣಿಗಳು ನಕ್ಕು ಕೇಳಿದೆವುಏಕೆ ಕಾಯುವೆ? ಕಿರಣ, ಇಬ್ಬನಿ, ಸಂದೇಶಯಾರಿಗೂ ನಾವು ಕಾಯುವುದಿಲ್ಲಅರಳುತ್ತೇವೆ, ಘಮಿಸುತ್ತೇವೆಎಲ್ಲ ನಮಗಾಗಿಗಾಳಿಯಲಿ ಸುಗಂಧವ ಸೇರಿಸಿಅವರೆದೆಗಳಲ್ಲಿ ಹರಡುತ್ತೇವೆ ********************************

ಯಾರಿಗೂ ನಾವು ಕಾಯುವುದಿಲ್ಲ Read Post »

ಕಾವ್ಯಯಾನ

ಕೊಡವಿ ( ಕನ್ಯೆ )

ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ ಮದನಾರಿ|| ಹೆಣ್ಣು ರೂಪವು ಚಂದ ಮೆರೆದಿದೆಮಣ್ಣು ಹೊನ್ನಿನ ನಡುವೆ ಬಂಧದಿಬೆಣ್ಣೆ ಮಾತಿನ ಮೃದುಲ ನಡೆಯಲಿ ಸಾಗಿ ನಿಂತಿಹಳುಸುಣ್ಣ ಬಣ್ಣದ ರಂಗು ಚೆಲ್ಲುತಸಣ್ಣತನವನು ಬಿಟ್ಟು ನಡೆಯುವಕಣ್ಣ ಮುಂದಿನ ದಿಟ್ಟ ಬೆಡಗಿಯ ತಥ್ಯ ಮಾರ್ಗವಿದು|| ರಿಗ್ಗವಣೆಯನು ನಿತ್ಯ ಬಾರಿಸಿನುಗ್ಗಿ ಬಂದಿಹ ಹೆಣ್ಣ ಭಾವದಿಸುಗ್ಗಿ ಸಿರಿಯಲಿ ಕಾವ್ಯ ಬಿತ್ತುತ ನಿತ್ಯ ಮೆರೆದಿಹಳುಬಗ್ಗಿ ನಡೆಯುವ ಲಲನ ಮಣಿಯೂಜಗ್ಗಿ ಕೂತಿಹ ಮೌನದಾತೆಯುತಗ್ಗಿ ನಡೆಯಲಿ ತಥ್ಯ ಮಾರ್ಗದಿ ಗೆದ್ದು ಬರುತಿಹಳು|| ಚೆಲುವೆ ಡಂಕಿಸಿ ಕುಣಿದು ನಲಿಯುತಬಲುಮೆ ಗೆಳೆತಿಯು ಕಾದು ಕುಳಿತಳುನಲುಮೆ ನಲ್ಲನ ಮಾತು ಕೇಳುತ ದಿವ್ಯ ಹಾಸದಲಿಒಲವ ಹೂವಿನ ಮಳೆಯ ಕರೆಯುತಗೆಲುವು ಸಾಧಿಸಿ ಮೆಟ್ಟಿ ನಿಂತಳುಕಲೆಯ ಸೃಷ್ಠಿಸಿ ಬಲವ ತೋರಿಸಿ ಮೆಚ್ಚಿ ನಡೆದಿಹಳು|| ********************************************

ಕೊಡವಿ ( ಕನ್ಯೆ ) Read Post »

ಅಂಕಣ ಸಂಗಾತಿ, ಕಗ್ಗಗಳ ಲೋಕ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ ಮುಕ್ತಕ- ೬೦೦ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ I ಕುದುರೆ ನೀನ್ , ಅವನು ಪೇಳ್ದಂತೆ ಪಯಣಿಗರು II ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು I ಪದ ಕುಸಿಯೆ ನೆಲವಿಹುದು ಮಂಕುತಿಮ್ಮ II ಭಾವಾರ್ಥ : ನಮ್ಮ ಬದುಕೇ ಒಂದು ಜಟಕಾಬಂಡಿ. ಆ ಬಂಡಿಯನ್ನು ಎಳೆದುಕೊಂಡು ಹೋಗುವ ಕುದುರೆಗಳು ನಾವು. ಬಂಡಿಯನ್ನೆಳೆಯುವುದು ನಮ್ಮ ಕಾರ್ಯವೇ ಹೊರತು ದಾರಿಯನ್ನು ಆಯ್ಕೆ ಮಾಡುವ ಹಕ್ಕು ನಮಗಿಲ್ಲ. ಬಂಡಿಯ ಒಡೆಯನಾದ ವಿಧಿಯು ತೋರಿದ ಹಾದಿಯಲ್ಲೇ ನಾವು ನಡೆಯಬೇಕು. ಅದು ಸುಖದ ಹಾದಿಯೋ, ದುಃಖದ ಹಾದಿಯೋ – ನಾವದನ್ನು ಆಯ್ಕೆ ಮಾಡುವಂತಿಲ್ಲ. ಬಾಲ್ಯ, ಯೌವನಾವಸ್ಥೆಯಲ್ಲಿ ಓಡಿದ ಪಾದಗಳು ವೃದ್ಧಾಪ್ಯ ತಲುಪಿದಾಗ ಸೋತು ಹೋಗಿ ಕುಸಿದುಬಿದ್ದಾಗ , ಭೂಮಿಯ ಮೇಲೆ ದಹನವೋ ದಫನವೋ ಆಗುವಲ್ಲಿಗೆ ನಮ್ಮ ಬದುಕಿನ ಓಟ ಕೊನೆಗೊಳ್ಳುತ್ತದೆ. ಬದುಕೆಂದರೆ ಇಷ್ಟೇ!! ಮುಕ್ತಕ – ೬೬೧ ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ Iಫಲ ಮಾಗುವಂದು ತುತ್ತೂರಿ ದನಿಯಿಲ್ಲIIಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲIಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಭಾವಾರ್ಥ: ಅತೀ ಸೂಕ್ಷ್ಮವಾದ ಮೊಳಕೆಗೆ ಭೂಮಿಯ ಮಣ್ಣಿನ ಪದರವನ್ನು ಒಡೆದು ಹೊರಬರುವುದು ಸುಲಭದ ಮಾತಲ್ಲ. ಆದರೂ ಅದು ತಾನೊಂದು ದೊಡ್ಡ ಸಾಧನೆಯನ್ನು ಮಾಡುತ್ತಿದ್ದೇನೆಂದು ಕೂಗಿ ಹೇಳಲ್ಲ. ಮಧುರವಾದ ಸವಿಯನ್ನು ಕೊಡುವ ಫಲವು ತನ್ನ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಸೌರವ್ಯೂಹಕ್ಕೆ ಒಡೆಯನಾದ ಸೂರ್ಯನು ಹಗಲು ಹೊತ್ತು ಬೆಳಕನ್ನು ನೀಡಿದರೆ, ರಾತ್ರಿ ಚಂದ್ರನು ತಂಪನ್ನೀಯುವನು. ಇವರು ಮೌನವಾಗಿ ತಮ್ಮ ಕಾಯಕವನ್ನು ಮಾಡುವರೇ ಹೊರತು ತಮ್ಮ ಹಿರಿತನದ ಬಗ್ಗೆ ಜಂಬ ಪಟ್ಟುಕೊಂಡಿಲ್ಲ. ಇವರೆಲ್ಲಾ ತಮ್ಮ ಪಾಡಿಗೆ ತಮ್ಮ ಕಾಯಕವನ್ನು ಮೌನವಾಗಿ ಮಾಡುತ್ತಿರುವಾಗ ನೀನ್ಯಾಕೆ ಅವರಂತೆ ಮೌನವಾಗಿರಬಾರದು ಎಂದು ಮನುಷ್ಯರನ್ನು ಪೂಜ್ಯ ಡಿ.ವಿ.ಜಿ ಯವರು ಕೇಳುತ್ತಾರೆ. ******************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-03 ಜಾತ್ರೆಯ ಲೋಕ ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು. ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.  ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ ಜಾತ್ರೆಗದ್ದೆ ಖಾಲಿ ಖಾಲಿ. ಗದ್ದೆಯಲ್ಲಿ ಚದುರಿ ಬಿದ್ದಿರುವ ಒಡೆದ ಬಳೆ, ಮಣ್ಣಿನೆದೆಗೆ ಒತ್ತಿಕೊಂಡ ಕುಂಕುಮದ ಗುರುತು, ಹಿಂಗಾರ ಹೊರಕವಚ, ಮತ್ತೆ ಇನ್ನಾವುದೋ ಊರಿನ ಜಾತ್ರೆ ಮಿನುಗಲು ಹೋಗುವ ಕಾಯಕಕ್ಕೆ ತಮ್ಮ ಸಂತೆ ಸರಂಜಾಮು ಕಟ್ಟುತ್ತಿರುವ ಕೆಲಸಗಾರರು, ಮಕ್ಕಳನ್ನು ಹೊತ್ತು, ಜೀಕಿ ಜೀಕಿ ಆ ಹದಬಿಸಿಯ ಬಿಸುಪು ಕಳಚಿಕೊಳ್ಳದೆ ಮೌನವಾಗಿ ಕೂತ ಆಟದ ಕುದುರೆಗಳು, ಕೊಂಡಿ ಕಳಚಿಕೊಂಡ ತೊಟ್ಟಿಲು, ಇನ್ನೂ ಸಾಮಾನುಗಳನ್ನು ಕಟ್ಟುವ ಮುನ್ನದ ಕೊನೆಯ ವ್ಯಾಪಾರದ ನಿರೀಕ್ಷೆಯಲ್ಲಿ ಕಣ್ಣಪಿಳುಕಿಸುವ ಪಾತ್ರೆ ಅಂಗಡಿಯವನು, ರಟ್ಟಿನ ಪೆಟ್ಟಿಗೆಯೊಳಗೆ ಸೇರಿಕೊಳ್ಳುತ್ತಿರುವ ಚಪ್ಪಲಿಗಳು,  ಎಸೆದ ಪತ್ರ, ಐಸ್ ಕ್ಯಾಂಡಿ ರಸಿಕ ಬಾಯಲ್ಲಿ ಕರಗಿ ಅನಾಥವಾದ ಕಡ್ಡಿಗಳು.ಮಣ್ಣಿಗೆ ಸಿಲುಕಿಕೊಂಡ ಜಿಲೇಬಿ ತುಂಡು, ಮಿಠಾಯಿ, ಒಂದು ರೂಪಾಯಿ ನಾಣ್ಯ, ಒಂದು ನೋಟು. ಅದೆಷ್ಟು ನೋಟಗಳು! ಒಂದೇ ಎರಡೇ ಈ ಪಳೆಯುಳಿಕೆಗಳು. ನಿನ್ನೆ ತೆರೆದುಕೊಂಡ ಕಥೆಗಳು ಇದೀಗ ಬಾಯಿ ಕಳೆದು ಚೌಕಿಯಲ್ಲಿ ಮುಖ ಬಣ್ಣ ತೊಳೆಯುತ್ತಿವೆ. ಎಲ್ಲವನ್ನೂ ಕಣ್ಣಿನಲ್ಲೇ ಹೆಕ್ಕಿಕೊಂಡರೂ ನಾವು ಗೆಳತಿಯರು ಮುಗಿ ಬೀಳುವುದು ಜಾತ್ರೆಯ ಸಮಯದಲ್ಲಿ ಬಳೆ ಮಾರುತ್ತಿದ್ದ ಅಂಗಡಿಗಳಿದ್ದ ಸಾಲಿಗೆ. ಇನ್ನೂ ಒಂದೆರಡು ಹೆಂಗಸರು ಬಟ್ಟೆಯ ಒಡಲಿಗೆ ಕಟ್ಟಿದ ಬಳೆಗಳನ್ನು ಹಾಕಿ ಗಂಟು ಬಿಗಿಯುತ್ತಿರುತ್ತಾರೆ. ನಾವು ಅಲ್ಲಿ ಬಿದ್ದಿರುವ ಬಣ್ಣದಬಳೆಗಳ ಚೂರುಗಳನ್ನು ಆಯುತ್ತಿದ್ದೆವು. ಜಾಸ್ತಿ ಸಿಕ್ಕಿದಷ್ಟು ನಮ್ಮ ಹರ್ಷ ಹೆಚ್ಚುತ್ತಿತ್ತು. ಅವನ್ನು ತಂದು ಆ ಚೂರುಗಳನ್ನು ಒಂದೊಂದಾಗಿ ಬೆಂಕಿಯ ಮುಖಕ್ಕೆ  ಅದರ ನಡು ಭಾಗ ಹಿಡಿದು ಸಣ್ಣನೆಯ ಬಲದಲ್ಲಿ ಬಾಗಿಸಿ ತುದಿ ಜೋಡಿಸುತ್ತಿದ್ದೆವು. ಇದು ಕಡಿದ ತುಂಡನ್ನು ಜೋಡಿಸುವ ಕಲೆ, ಅಂಕಗಳನ್ನು ಸೂತ್ರಧಾರ ಕಟ್ಟಿ ಒಂದಾಗಿಸಿದ ರಂಗಾವಳಿ. ಬಹಳ ಸಂಭ್ರಮದ ಕೆಲಸವದು.  ಮುಂದಿನ ಕೆಲವು ದಿನಗಳು ಮನೆಯ ಹಿಂದಿನ ಹಿತ್ತಲಲ್ಲಿ ನಾವು ಗೆಳತಿಯರು ಯಾವಯಾವುದೋ ಗಿಡದ ಸೊಪ್ಪು ಕೈಯಲ್ಲಿ ಹಿಡಿದು ಆವೇಶಗೊಳ್ಳುವ ಸಿರಿಯ ಲಯದಲ್ಲಿ ಕಾಲು ಹಿಂದೆ ಮುಂದೆ ಹೆಜ್ಜೆ ಹಾಕುತ್ತ ಸಿರಿಯನ್ನು ಅಭಿನಯಿಸುತ್ತಿದ್ದೆವು. ” ಯಾಕೆ ಈ‌ ಪ್ರಾಣಿಗೆ ಅನ್ಯಾಯ ಮಾಡಿದೆ?.. ಈ ಊಟ ಸರಿಕೊಡದೆ ಗುಡ್ಡೆಗೆ ಸೊಪ್ಪುತರಲು ಕಳುಹಿಸಿದೆಯಾ..? “ ಕಣ್ಣು ಮೇಲೆ ಕೆಳಗೆ, ಉರುಟು ಉರುಟಾಗಿ ತಿರುಗಿಸಿ ‘ಸಿರಿ’ವಂತೆಯ ಪ್ರಶ್ನೆ. ಉಳಿದ ಗೆಳತಿಯರು ಪಾದಕ್ಕೆ ತಲೆಯೂರಿ ತಪ್ಪಾಯ್ತು, ಎಂಬ ಕ್ಷಮಾಪಣೆ. ಒಳಮನೆಯಲ್ಲಿ ಕೆಲಸದಲ್ಲಿದ್ದ ಅಜ್ಜಿ ಹೊರಬಂದಳೋ ಸಿರಿ ಅಡಗಿ ನಾವು ನಾವಾಗುತ್ತಿದ್ದೆವು. “ಏನದು.. ಕೂದಲೆಲ್ಲ ಬಿಚ್ಚಿಕೊಂಡು, ಏನು ನಿಮ್ಮ ಅವತಾರ. ಜಾತ್ರೆಯಲ್ಲಿ ಸಿರಿ ಆವೇಶಗೊಂಡ ಹಾಗೆ..ಅದೆಲ್ಲ ಆಟ ಆಡಬಾರದೂ..ದೇವರಿಗೆ ಕೋಪ ಬರ್ತದೆ.” ಎಂದು ಎಚ್ಚರಿಸುತ್ತಿದ್ದಳು. ಅವಳು ಸರಿದು ಹೋದ ತಕ್ಷಣ ನಮ್ಮ ಆಟ ಮುಂದುವರಿಯುತ್ತಿತ್ತು. ದೇವರ ಪೂಜೆ, ಆರತಿ, ಪಂಚಕಜ್ಜಾಯ, ಮಡಿಯುಟ್ಟ ಪೂಜೆಯ ಭಟ್ಟರು, ದೇವಾಲಯ ಶುಚಿಗೊಳಿಸುವ ಕೆಲಸಗಾರರು, ವಾದ್ಯ ಎಲ್ಲವೂ ಆಟದ ಪಾತ್ರಗಳು. ಊರ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಈ ಬಗೆಯ ಉತ್ಸವಗಳು ಮಕ್ಕಳ ಹಸಿ ಮನಸ್ಸಿಗೆ ಚಿತ್ತಾರ ಬರೆಯುತ್ತಿತ್ತು. ಸಾಂಸ್ಕೃತಿಕ ಆಚರಣೆ,ಸಂಸ್ಕೃತಿಯ ಪರಿಚಯವು ಥಿಯರೀ ಆಂಡ್ ಪ್ರಾಕ್ಟಿಕಲ್ ರೂಪದಲ್ಲಿ ಮಸ್ತಿಷ್ಕಕ್ಕೆ ಸೇರಿ ಒಂದು ಪರಿಮಳ ವ್ಯಂಜನದ ಸಂಚಲನ. ಹಲವಾರು ದಿನಗಳು ನಮಗೆ ಚರ್ಚೆಗೆ ಮುಖ್ಯ ವಿಷಯವೂ ಅದೇ ಆಗಿರುತ್ತಿತ್ತು. ಇದರಿಂದ ಬದುಕಿನ ಬಗೆಬಗೆಯ ಪಾತ್ರಗಳ ಚಲನೆ, ಭಾವನೆ, ಆ ವ್ಯವಹಾರಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ನೋಡುವ,ಕಾಣುವ ಅವಕಾಶವನ್ನು ನಾವು ಪಡಕೊಂಡೆವು.    ಜಾತ್ರೆಯ ಕೊನೆಯ ರಾತ್ರೆ ರಥೋತ್ಸವದಂದು ಊರಲ್ಲಿ ಟೆಂಟಿನ ಯಕ್ಷಗಾನ ಆಟ. ತಪ್ಪಿಸದೇ ಹೋಗಬೇಕಾದ ಹರಕೆಯಂತಹ ಒಳಬದ್ದತೆ. ಮನೆಯಲ್ಲಿ ಬೇಡವೆಂದರೂ ಹೋಗುವುದೇ. ರಂಗಸ್ಥಳದ ಹತ್ತಿರ, ಎದುರು ಸಾಲಲ್ಲಿ  ರಾತ್ರಿಯಿಡೀ ಮಣ್ಣು ನೆಲದಲ್ಲಿ ಕೂತು ನೋಡುತ್ತ ಅಲ್ಲೇ ನಿದ್ದೆಯ ಭಾರಕೆ ರೆಪ್ಪೆ ಮುಚ್ಚಿ ದೇಹ ಅಡ್ಡವಾದಾಗಲೂ ಒಳಲೋಕದಲ್ಲಿ ಆಟವು ಮುಂದುವರಿಯುತ್ತಿತ್ತು. ಅಲ್ಲಿ ನಾನೇ ಬಣ್ಣದ ವೇಷವಾಗಿ ಕುಣಿಯುತ್ತಿದ್ದೆ. ಸಿರಿ, ಆವೇಶ, ವೀರಭದ್ರ, ಯಕ್ಷಗಾನದ ನೂತನ ಪ್ರಸಂಗ. ಅಲ್ಲಿ ಬರುವ ಗೆಜ್ಜೆ ನಾದದ ಸುಂದರ ಸ್ತ್ರೀ ವೇಷ. ಎಲ್ಲ  ಕನಸಿಗೆ ಧಾಳಿ ಇಟ್ಟು ಹೊಸ ಪ್ರಸಂಗವೊಂದು ನಡೆಯುತ್ತಿತ್ತು. ಮತ್ತೆ ಭಾರದ ರೆಪ್ಪೆ ತೆರೆದು ಯಕ್ಷಗಾನದ ವೀಕ್ಷಣೆ. ಜಾತ್ರೆ ಮುಗಿದು ಅದೆಷ್ಟೋ ಕಾಲದವರೆಗೆ  ನನ್ನ ಒಳಗೆ ಈ ಪ್ರಸಂಗಗಳು ಆಟ ಆಡುತ್ತಿದ್ದವು. ಬೇಸಿಗೆ ಕಳೆದು ಮಳೆ. ಒಳಹೊರಗೆ ಮಳೆಯಂತೂ ಸುರಿದಿತ್ತು. ಅದು ಮುಂಗಾರಿನ ಮಳೆ..ಕರಾವಳಿಯ ಮಳೆ. ಧೋ. ಎಡೆಯಿರದೇ ಸುರಿ ಸುರಿದು ಹೊಸ ಲೋಕವನ್ನು ಕಟ್ಟಿಕೊಡುವ ಮಳೆ. ಭೂಮಿ  ಬಿತ್ತನೆಗೆ ತಯಾರಾಗಿ, ಒದ್ದೆ.ಒದ್ದೆ‌, ಒಳಗೆ ಅತೃಪ್ತ ಮನಸ್ಸು ಚಿಗುರಲು ಚಡಪಡಿಸುತ್ತಿತ್ತು. ಸಿರಿ, ಕುಣಿತ, ಯಕ್ಷಗಾನ ನಲಿತ, ಮಾತು, ಚೆಂಡೆ ನಾದ. ಎಂತದೋ ಸುಪ್ತ ಆಸೆ. ಬಲವಾಗುತ್ತ ಹೋಗುತ್ತಿತ್ತು. ಅದಕ್ಕೆ ಪೂರಕ ಆಹಾರವಾಗಿ ಸಿಕ್ಕಿದ್ದು ಅಕ್ಷರ ಲೋಕ, ಅಕ್ಕರೆಯ ಪುಸ್ತಕಗಳ ಲೋಕ. ****************************************** ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು ಏನನ್ನೂಗುರುತಿಸಲಾಗದು ಯಾರೂ ಗುರುತಿಸದೆ ಬಾಡುವ ಹೂಗಳ ಅರಳುವಿಕೆಗಳನ್ನು ಮತ್ತೆ ಪಡೆಯಲಾಗುವುದಿಲ್ಲ ನೇರ ದಾರಿ ಎಂದೇ ತಿಳಿದ ಬದುಕಿನ ಪಯಣದಲಿ ಎಷ್ಟೋ ತಿರುವುಗಳನ್ನು ಕಂಡಿಹನು ಸಿದ್ಧ ನಡೆದ ದಾರಿಯಲ್ಲಿ ಅಳಿಸಿಹೋದ ಹೆಜ್ಜೆ ಗುರುತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ********************************************************

ಗಜಲ್ Read Post »

ಕಾವ್ಯಯಾನ

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಹಾಯ್ಕುಗಳು Read Post »

You cannot copy content of this page

Scroll to Top