ತಕ್ಕ ಪಾಠ
ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.ಎಲ್ಲೋ ನೋಡಿದ ಮುಖ ! ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು. ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ. ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು. ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು. ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು. ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು. ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು. ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ. ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ. ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು. “ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ. ನಂತರ









