ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ತಕ್ಕ ಪಾಠ

ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.ಎಲ್ಲೋ ನೋಡಿದ ಮುಖ ! ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು. ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ. ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು. ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು. ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು. ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು. ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು. ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ. ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ. ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು. “ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ. ನಂತರ

ತಕ್ಕ ಪಾಠ Read Post »

ಕಾವ್ಯಯಾನ

ಹೈಕುಗಳು

ಹೈಕುಗಳು ಕೆ.ಸುನಂದಾ. ಬಾನಲ್ಲಿ ನಕ್ಕಶಶಿ ; ಕಂಡು ತಂಪಾಯ್ತುನೊಂದ ಮನಕ್ಕೆ* ತಳಮಳವತಾಳೆನಾ ; ಕೇಳು ಸಖಿಯಾರಿ ಸುಂದರಿ* ಅಡವಿಯಲ್ಲಿಬಿರಿದ ಮಲ್ಲೆ ಕಾಯ್ವೆನೀ ಯಾರಿಗಿಲ್ಲಿ* ವೃಕ್ಷಗಳಲ್ಲಿಸಾಕ್ಷಾತ್ ದೇವನಿಹನುಎಲ್ಲರ ಭಾಗ್ಯ * ಕಾಣೋ ಕಣ್ಣಿಗೆಸಂಭ್ರಮ ; ಈ ನಿಸರ್ಗಬೇಕು ಜೀವಿಗೆ* ಸೃಷ್ಟಿಯೇ ದೈವತಿಳಿದಂತೆ ಇರುವನಮ್ಮಂತೆ ಅವ* ಪ್ರೀತಿಯ ಗೂಡುಅನುಭವಿಸಿ ಹಾಡುಎನಿಲ್ಲ ನೋಡು ************************************

ಹೈಕುಗಳು Read Post »

ಇತರೆ, ವರ್ತಮಾನ

ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು

ಕನಕ ಜಯಂತಿಯ ವಿಶೇಷ ಲೇಖನ ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು ಡಾ.ಸುಜಾತಾ ಸಿ. ವಿಜಯಪುರ ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ ವ್ಯವಸ್ಥೆಯೇ ತಳಹದಿಯಾಗಿತ್ತು. ಕನಕದಾಸರು ಕೇವಲ ತಮ್ಮ ಸಾಹಿತ್ಯದಲ್ಲಿ ಜಾತಿಯನ್ನು ಕರಾಳತೆಯನ್ನು ಹೇಳಲಿಲ್ಲ ಬದಲಾಗಿ ಸ್ವತಃ ತಾವೂ ಅನುಭವಿಸಿದವರು.ವ್ಯಾಸರಾಯರು ತಮ್ಮ ಗರಡಿಯಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಾರೆ. ಹಾಗೇ  ಉಡುಪಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಕೀಳು ಕುಲದವರು ಎಂದು ಪ್ರವೇಶವನ್ನು ನಿಷೇಧಿಸಿದಾಗ ಅವರಿಗೆ ಭಕ್ತಿಮಾರ್ಗದಿಂದ ಕೃಷ್ಣನ ದರ್ಶನ ಕೂಡಾ ಆಗಬಹುದು ಎಂದು ತೋರಿಸಿಕೊಟ್ಟರು. ಕನಕನ ಕಿಂಡಿ ಕೇವಲ ಭಕ್ತಿಯ ಪರಾಕಾಷ್ಠೆಯ ಆಗದೇ ನಮ್ಮೆಲ್ಲರ ಎದುರಿಗಿದ್ದ ಜಾತಿಯ ಗೊಡೆಯನ್ನು ಒಡೆಯುವ ಕೆಲಸ ಮಾಡುತ್ತದೆ.  ಋಗ್ವೇದದ ಪುರುಷಸೂಕ್ತಕ್ಕೆ ಸಂಬಂಧಿಸಿದ ವರ್ಣಸಿದ್ದಾಂತಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿತ್ತು. ಇವರ ಮೂಲ ಗುಣಕರ್ಮ ಭಾಗಶಃ ಆದರೂ ಕಾಲಾಂತರದಲ್ಲಿ ಮೇಲು-ಕೀಳುಗಳೆಂಬ ವೃತ್ತಿಪರ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ ಕಾರಣವಾದವು. ಇದನ್ನು ಕಂಡ ಕನಕದಾಸರು ಕುಲದ ವಿಚಾರವಾಗಿ ಹೀಗೆ ತಿಳಿಸಿದ್ದಾರೆ.               ಕುಲ ಕುಲ ಕುಲವೆಂದು ಹೊಡೆದಾಡದಿರಿ               ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ. ಎಂಬ ಮೇಲಿನ ವಿಚಾರಗಳು ನವಸಮಾಜ ನಿರ್ಮಾಣಕ್ಕೆ ಸಮಾನತೆಯನ್ನು ಸಾರಲು, ವರ್ಗ-ವರ್ಣ ವ್ಯವಸ್ಥೆಗೆ ಎದಿರೇಟು ನೀಡಿದ್ದು, ವಿಶ್ವಸಂದೇಶವನ್ನು ಸಾರಿವೆ ಎಂಬುದನ್ನು ಸರ್ವರೂ ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ.  ಅಸಮಾನತೆಯನ ವಕ್ತಾರರನ್ನು ಪ್ರಶ್ನಿಸುವಾಗ ಅವರು ಬಳಸುವ ನಿದರ್ಶನಗಳೆಲ್ಲವೂ ದೇವರನ್ನು ಕೇಂದ್ರವಾಗಿಸಿಕೊಂಡಿದ್ದರಿಂದ ಒದಗಿದ ತಿಳುವಳಿಕೆ ಕೂಡಾ ಹೌದು ಎನ್ನುವುದನ್ನು ಮರೆಯುವಂತಿಲ್ಲ. ಅವರ ಮೌಖಿಕ ಸಾಹಿತ್ಯವು ಕೀರ್ತನೆ ಭಜನೆಗಳ ರೂಪಗಳಲ್ಲಿ ಸಮಾಜದ ಏರು ಪೇರುಗಳನ್ನು ಕರಿಯ-ಬಿಳಿಯ, ಸತ್ಯ-ಅಸತ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿವೆ. ಮತ್ತು ಸದಾಚಾರ ಮಾರ್ಗವನ್ನು ತೋರಿಸಿವೆ. ಸಾಮಾಜಿಕ ಆಂದೋಲನಗಳಲ್ಲಿ ಎಲ್ಲ ದಾಸರೂ ಭಾಗಿಗಳಾಗಿ ಸರ್ವರೂ ಒಪ್ಪಿಕೊಳ್ಳುವ ಜೀವನ ಮೌಲ್ಯಗಳನ್ನು ಜನರ ಹೃದಯಗಳಿಗೆ ಕೀರ್ತನೆಗಳ ಮೂಲಕ ತಲುಪುವಂತೆ ಮಾಡಿರುತ್ತಾರೆ.               “ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ               ಅಟ್ಟು ಉಣ್ಣದ ವಸ್ತುಗಳಿಲ್ಲವೊ               ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು               ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ” ನಮ್ಮ ಭೌತಿಕ ಕಾಯದ ಪಾಡುಗಳನ್ನು ಈ ಮಾತುಗಳು ವಿವರಿಸುತ್ತವೆ. ಭೂಮಿಯಲ್ಲಿಯ ಎಲ್ಲ ಜೀವಿಗಳ ಹುಟ್ಟು  ಸಾವಿನಲ್ಲಿ ವ್ಯತ್ಯಾಸಗಳೇನೂ ಇರವು; ಆದರೆ ಈ ವಿದ್ಯಮಾನದ ನೆಲೆ ಬೆಲೆಗಳು ನಮಗೆ ತಿಳಿದಿದೆಯೇ? ಸೃಷ್ಟಿಯ ಹಿಂದಿರುವ ಗುಟ್ಟುಗಳ ಅರಿವು ನಮಗಿಲ್ಲ; ಜನನ ಮರಣ ಅದರ ನಡುವೆ, ಊಟ ಕೂಟಗಳ ಆಟದ ಪ್ರೇಕ್ಷಕರಷ್ಟೆ ನಾವು.  ಹೀಗಿರುವಾಗ ಎಲ್ಲವನ್ನು ತಿಳಿದಿರುವ ಎಲ್ಲವನ್ನು ನಿಯಂತ್ರಿಸುವ ‘ಸರ್ವಜ್ಞ’ನನ್ನು ನಾವು ಮನನ ಮಾಡಿದರೆ ಆಗ ಸಹಜವಾಗಿಯೇ ನಮ್ಮ ಶ್ರೇಷ್ಠ ಕನಿಷ್ಟಗಳ ಸೀಮಿತ ಲೆಕ್ಕಾಚಾರ ಕೊನೆಯಾಗದಿದ್ದೀತೆ? ಕುಲವನ್ನು ನಿರಾಕರಿಸಲು ಕನಕದಾಸರಿಗೆ ಒದಗಿದ ಮೊದಲ ವಿಚಾರ ನಮ್ಮ ಗೋಚರ ಪ್ರಪಂಚಕ್ಕೆ ಸೇರಿದ ವಿವರಗಳು.                 ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ                 ಜಲದ ಕುಲವನೇನಾದಾರೂ ಬಲ್ಲಿರಾ                 ಜಲದ ದೊಬ್ಬೂಳಿಯಂತೆ ಸ್ಥಿರವಲ್ಲ ಈ ದೇಹ                 ನೆಲೆಯನರಿತು ನೀ ಹರಿದು ನೆನೆ ಮನುಜ ಸೃಷ್ಟಿ ಕ್ರಮದಲ್ಲಿ ಯಾವುದು ಹುಟ್ಟಿತು ಎಂಬ  ಎಣಿಕೆಯ ವಿನಿಕೆ ನಡೆಯುತ್ತಲೇ ಬಂದಿದೆ. ಈ ಎಣಿಕೆಯಲ್ಲಿ ಪರಿಣಾಮವಾದವೋ ವಿಕಾಸವಾದವೊ ಯಾವ ವಾದವೇ ಆಗಿರಲಿ, ಅದು ಯಾವುದೋ ಒಂದು ಮೂಲವಸ್ತುವಿಗೆ ಬಂದು ನಿಲ್ಲಲೇಬೇಕು. ಸೃಷ್ಟಿಯ ಮೂಲ ನೀರು ಎನ್ನುವುದು ಅಂಥದೊಂದು ಎಣಿಕೆ. ಇದನ್ನು ಒಪ್ಪೋಣ: ಹೀಗೆ ಒಪ್ಪಿದರೂ ಪ್ರಶ್ನಾಪರಂಪರೆ ಅಲ್ಲಿಗೆ ನಿಲ್ಲದು; ಆ ನೀರಿನ ಮೂಲ ಯಾವುದು? ಇದಕ್ಕೆ ಉತ್ತರವನ್ನು ಹೇಳಬಲ್ಲವರು ಯಾರು? ಕುಲದ ಘೋಷಣೆ, ತಾನೆ? ನಮ್ಮೆಲ್ಲರಿಗೂ ಮೂಲವಾಗಿರುವ ನೀರಿನ ಮೂಲವೇ ನಮಗೆ ಗೊತ್ತಿಲ್ಲ; ಹೀಗಾಗಿ ನಮ್ಮ ಕುಲಗಳ ಘೋಷಣೆಯಲ್ಲಿ ಎಷ್ಟು ಖಚಿತತೆ ಇದ್ದೀತು? ಕನಕದಾಸರು ಜಲವನ್ನು ‘ತಾಯಿ’ ಎಂದು ಕರೆದಿರುವುದು ಇಲ್ಲಿ ಧ್ವನಿ ಪೂರ್ಣವಾಗಿದೆ. ನಮ್ಮ ತಿಳಿಗೇಡಿತನದ ವಿಕೃತಬುದ್ಧಿಯು ಎಲ್ಲ ಕೊಳೆಯನ್ನು ತೊಳೆದು ಹಾಕಲು ನೀರೆಂಬ ತಾಯಿಯನ್ನು ಅವರು ಬಳಸಿಕೊಳ್ಳುತ್ತಿರುವುದು ಮನನೀಯವಾಗಿದೆ. ನೀರಿನ ಮೂಲವನ್ನು ಕಂಡು ಹಿಡಿಯಲಾಗಿದ್ದ ನಮ್ಮ ಮಂದಮತಿಗೆ ಆ ನೀರಿನ ಶರೀರವೇ ಇಂಥ ಹುಡುಕಾಟದ ಸಾಪೇಕ್ಷತನವನ್ನೂ ನಶ್ವರತೆಯನ್ನೂ ಪ್ರಕಟಿಸುತ್ತಿರುವ ದೃಕ್–ದೃಶ್ಯ ವಿವೇಕವಾಗಿದೆ ಎನ್ನುವುದನ್ನು ಅವರು ತಿಳಿಸಿಕೊಡುತ್ತಿದ್ದಾರೆ.                 “ಏನೆಂತೆಂದೊಲಿವೆ ನಿನ್ನವರಂತೆ ಕೇಡಬುದ್ದಿ ಎನ್ನೊಳಿಲ್ಲ                 ಗುಣಹೀನರಲ್ಲದೆ ದೀನರ ಪಾಲಿಪ ಬುದ್ದಿ ನಿನ್ನೊಳಿಲ್ಲ                 ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ                 ನರನಂತೆ ಬಂಡಿಯ ಬೋಧನ ಮಾಡಿ ನಾ ಹೊಡೆಸಲಿಲ್ಲ                 ಆತ್ಮನಿವೇದನಾಭಕ್ತಿ” ಆತ್ಮನಿವೇದನವು ಎಲ್ಲದಕ್ಕಿಂತ ಹಿರಿದಾಗಿರುವುದು ಎಂದು ಕೀರ್ತನಾಚಾರ್ಯ ಬೇಲೂರು ಕೇಶವದಾಸರು ಹೇಳಿದ್ದಾರೆ.                  “ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ                   ಆಯುಷದ ರಾಸಿಯನು ಅಳೆಯಿರಯ್ಯಾ||                   ಇದು ಕಾರಣ ಕಾಗಿನೆಲೆಯಾದಿಕೇಶವನ||                   ಮುದದಿಂದ ನೆನೆನೆದು ಸುಖಿಯಾಗಿರಯ್ಯಾ ನಮ್ಮ ಜೀವನದ ಪೂರ್ತಿ ಕೃಷಿ ಮಾಡಿ ಒಟ್ಟು ಮಾಡಿದ ಧಾನ್ಯದ ರಾಶಿಯೆಂದರೆ ಅದು ನಮ್ಮ ಜೀವನವಲ್ಲದೆ ಬೇರಲ್ಲ. ಇದನ್ನು ಅಳೆಯುವ ಕೊಳಗ ಎಂದರೆ ಉದಯ ಅಸ್ತಮಾನ: ಎಂದರೆ ನಮ್ಮ ನಿತ್ಯದ ಬದುಕು. ನಾವು ಅಳೆಯ ಬೇಕಾದದ್ದು ನಾರಾಯಣ ಎಂಬ ಧಾನ್ಯವನ್ನು ನಮ್ಮ ಹೃದಯದಲ್ಲಿ ಎಷ್ಟು ಬೆಳೆದಿದ್ದೇವೆ ಎನ್ನುವದನ್ನು ‘ನೆನೆನೆನೆದು’ ಎನ್ನುವಾಗ ಅಳೆಯುವ ಪ್ರಕ್ರಿಯೆಯ ನಿರಂತರತೆಯನ್ನೆ ಅಭಿನಯಿಸಿದಂತಾಗುತ್ತದೆ. ಬೆಳೆ ಹೆಚ್ಚು ಬೆಳೆದಷ್ಟು ಕೃಷಿಕನಿಗೆ ಸಂತೋಷ; ಸುಖ; ಅಂತೆಯೇ ಆದಿಕೇಶವನನ್ನು ನೆನೆದಷ್ಟು ಖುಷಿಗೆ ಸಂತೋಷ; ಸುಖ ಅಂತರAಗದ ಕೃಷಿಕಾರನೇ ದಿಟನಾದ ಖುಷಿ ಎನ್ನುತ್ತಿದ್ದಾರೆ. ಮೇಲುನೋಟಕ್ಕೆ ಜೀವನದ ತತ್ವ ಸಾರವನ್ನು ಹೇಳುವ ಅವರ ಜನಪ್ರಿಯ ಕೀರ್ತನೆಯಾದ            ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ            ತುತ್ತು ಹಿಟ್ಟಿಗಾಗಿ  ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ            ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕೀರ್ತನೆಯೂ ಸಹ ಆಲಯವನ್ನು ಬಿಡಿಸಿಕೊಳ್ಳುವುದರ ಕಡೆಗಿನ ದಾಸರ ನಿರಾಕರಣೆಯ ಕಥನವನ್ನು ಹೇಳುತ್ತದೆ.                         “ಜಪವ ಮಾಡಿದರೇನು, ತಪವ ಮಾಡಿದರೇನು                         ಕಪಟ ಗುಣ ವಿಪರೀತ ಕಲುಷವಿದ್ದವರು” ಎಂದು ಯಾವ ನೇಮ,ಜಪ ತಪ ಮಾಡಿದರು ಫಲವಿಲ್ಲವೆಂದು ಹೇಳುತ್ತಲೇ “ನೇಮವಿಲ್ಲದ ಹೋಮವೇತಕಯ್ಯಾ” ಎಂದು ಢಾಂಬಿಕ ಭಕ್ತಿಯನ್ನು ಖಂಡಿಸುತ್ತಾರೆ.             ಮೇಲ್ವರ್ಗದವರು ಜಾತಿಯನ್ನು ತಮ್ಮ ಹಿರಿಮೆಗೆ ಅಂತಸ್ತಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಕನಕದಾಸರು ಜಾತಿಯ ಬಳಕೆ ಅಪಾಯವೆಂದು; ಮನುಷ್ಯಕುಲದ ಅನಿಷ್ಟವೆಂದು ವಿರೋಧಿಸಿದರು. ಆದರೆ ಜಾತಿಯ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಸ್ಪರ್ಶಿಸುವುದನ್ನು ಕೈಬಿಡಲಿಲ್ಲ. ಅವರು ಜಾತಿಯನ್ನು ಭೇದಿಸಿದ ರೀತಿ ಆಶ್ಚರ್ಯವೆನಿಸುತ್ತದೆ. ಕನಕದಾಸರನ್ನು ಸುತ್ತುವರಿದ ಕತೆಗಳು, ಐತಿಹ್ಯಗಳೂ ಈ ಮೂಲವನ್ನು ನೆನಪಿಸುತ್ತವೆ. ಹೀಗೆ ಹರಿದಾಸ ಸಾಹಿತ್ಯದಲ್ಲಿ ಮೊಟ್ಟ ಮೊದಲು ಹರಿದಾಸ ಕೀರ್ತನೆ ಎಂದು ಪ್ರಖ್ಯಾತಿಯಾದವರು ‘ಎಂತು ಮರುಳಾದೆ ನಾನೆಂತು ಮರುಳಾದೆ’, ಮತ್ತು ‘ಹರಿಯೇ ಇದು ಸರಿಯೇ!’ “ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ” ಎಂದು ತಮ್ಮ ಕೀರ್ತನೆಗಳಲ್ಲಿ ಹರಿಗೆನೇ ಪ್ರಶ್ನಿಸುತ್ತಾನೆ. ಶ್ರೀಪಾದರಾಜನದು ನರಹರಿತೀರ್ಥರ ನಂತರ ದಾಸಸಾಹಿತ್ಯವನ್ನು ಮುಂದುವರಿಸಿದ ಕೀರ್ತಿ ಇವರದಾಗಿದೆ. ‘ರಂಗವಿಠಲ’ ಎಂಬ ಅಂಕಿತನಾಮ ಅನೇಕ ದೇವರ ನಾಮಗಳನ್ನು ರಚಿಸಿದ್ದಾರೆ. ಆಧ್ಯಾತ್ಮ ಅನುರಾಗ ಮಹಿಮಾನ್ವಿತನಾಗಿ ಇತನು ಕಂಡು ಬರುತ್ತಾನೆ. ‘ಭಕ್ತಿ ಬೇಕು, ವಿರಕ್ತಿ ಬೇಕು, ಶಕ್ತಿ ಬೇಕು, ಮುಂದೆ ಮುಕ್ತಿ ಬಯಸುವಗೆ’ ಎಂಬುದು ಈತನ ಆಧ್ಯಾತ್ಮಕ ನಿಲುವಾಗಿದೆ. ವ್ಯಾಸರಾಯರು,ಶ್ರೀಪಾದರಾಜನ ಶಿಷ್ಯನಾದ ವ್ಯಾಸರಾಯನು ನ್ಯಾಯಾಂಮೃತ ತರ್ಕತಾಂಡವ, ತಾತ್ರ‍್ಯಚಂದ್ರಿಕಾ ಮೂರು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾನೆ. ಇವರ ಕೀರ್ತನೆಗಳ ಅಂಕಿತನಾಮ ಕೃಷ್ಣ, ಶ್ರೀಕೃಷ್ಣ, ಸಿರಿಕೃಷ್ಣ ವ್ಯಾಸರಾಯನಿಂದ ವ್ಯಾಸಪಥ, ದಾಸಪಥಗಳೆರಡು ಶ್ರೀಮಂತವಾದವು. ವಿಜಯದಾಸರು ಪ್ರಸನ್ನ ವೆಂಕಟದಾಸರ ಸಮಕಾಲೀನರು. ‘ಹಯವದನ ವಿಠಲ’ ಎಂಬ ಅಂಕಿತದಿಂದ ಅನೇಕ ಹಾಡುಗಳನ್ನು ರಚಿಸಿದ್ದಾರೆ. ಗೋಪಾಲದಾಸರು ‘ಗೋಪಾಲ ವಿಠಲ’ ಇವರ ಅಂಕಿತನಾಮ. ಜಗನ್ನಾಥದಾಸರು ‘ಜಗನ್ನಾಥ ವಿಠಲ’ ಎನ್ನುವ ಅಂಕಿತನಾಮವನ್ನು ಹೊಂದಿದ್ದಾರೆ. ಜಗನ್ನಾಥದಾಸರು ೨೦೦ ಕೀರ್ತನೆಗಳು ಲಭ್ಯವಾಗಿವೆ. ಕೀರ್ತನೆ, ಸುಳಾದಿಗಳನ್ನು ಮಾತ್ರವೇ ಅಲ್ಲದೆ ತ್ರಿಪದಿಯ ಛಂದಸ್ಸಿನಲ್ಲಿ ಭಕ್ತಿ ಭರಿತವಾದ ‘ತತ್ವಸುವಾಲಿಗಳನ್ನು’ ವಿಷ್ಣುಸ್ತುತಿರೂಪವಾದ ೨೭ ನುಡಿಗಳನ್ನು ಒಳಗೊಂಡ ತಂತ್ರಸಾರವನ್ನು ರಚಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ಪುರಂದರದಾಸರು ಹಾಗೂ ಕನಕದಾಸರ ವಿಚಾರಗಳು ದಾರ್ಶನಿಕ ಸಮಾಜವನ್ನು ಕಟ್ಟುವಲ್ಲಿ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ನೈತಿಕ ಪ್ರಜ್ಞೆ, ಗುರುವಿನೊಂದಿಗೆ ಗೌರವದ ಮನೋಭಾವನೆ ಅಸ್ಪೃಶ್ಯತಾ ನಿವಾರಣೆ, ಮೌಢ್ಯತನದ ಖಂಡನೆ ಇದೆ. ಎಲ್ಲ ದಾಸರು ಭಕ್ತಿಯ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ ದಾಸರಾಗಿದ್ದಾರೆ. **********************************************

ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಸಾಮಾನ್ಯ ಸಂಗತಿಗಳಲ್ಲೇ ಅಸಾಮಾನ್ಯ ಬೆರಗನ್ನು ಹಿಡಿದಿಡುವ ಉಮಾ ಮುಕುಂದರ ಕವಿತೆಗಳು . ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ ಇಷ್ಟೂ ದಿನದ ಕಾವ್ಯ ಪರಂಪರೆಯ ಮೂಲಕ ಅರಿತ ಕಾವ್ಯದ ನಡಿಗೆಗೆ ಹೊಸದೇ ದಿಕ್ಕು ತೋರುತ್ತಿರುವ ಮತ್ತು ಫೇಸ್ಬುಕ್ ಕವಿಗಳನ್ನು ಲಘುವಾಗಿ ಕಾಣದೆ ಅವರನ್ನೂ ಮುಖ್ಯ ವಾಹಿನಿಯ ಜೊತೆಗೇ ಪರಿ ಗಣಿಸಲೇಬೇಕೆಂಬ ಎಚ್ಚರವನ್ನೂ ಆ ಅಂಥ ಹೆಸರುಗಳು ಎಚ್ಚರಿಸಿವೆ. ಆ ಅಂಥ ಹೆಸರುಗಳ ಪೈಕಿ ಶ್ರೀಮತಿ ಉಮಾ ಮುಕುಂದರ ಹೆಸರು ಅತಿ ಮುಖ್ಯವಾದುದು. ಓದಿನ ಮೂಲಕ ಅರಿತು ಕವಿತೆಗಳೆಂದು ಯಾವುದನ್ನು ನಾವು ಸಾಮಾನ್ಯವಾಗಿ ಅಂದುಕೊಂಡಿದ್ದೇವೋ ಹಾಗಿರದೆ  ಮೇಲ್ನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಂಡರೂ ಆಳದಾಳದಲ್ಲಿ ಬೆಡಗು ಬೆರಗು ಮತ್ತು ಹೊಳಹನ್ನು ಉಮಾ ಮುಕುಂದರು ಈತನಕ ಪ್ರಕಟಿಸಿರುವ ಫೇಸ್ಬುಕ್ ಕವಿತೆಗಳು ಇಟ್ಟುಕೊಂಡಿವೆ. ಉಮಾ ಮುಕುಂದ ಈವರೆಗೂ ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ೩೬ ಕವಿತೆಗಳನ್ನು ಅವಧಿಯ ಜಿ.ಎನ್.ಮೋಹನರ “ಬಹುರೂಪಿ” ಪ್ರಕಾಶನವು “ಕಡೇ ನಾಲ್ಕು ಸಾಲು” ಹೆಸರಿನಲ್ಲಿ ಪ್ರಕಟಿಸಿದೆ. ಸಂಕಲನದ ನಾಡಿಮಿಡಿತವನ್ನು ಅದ್ಭುತವಾಗಿ ಹಿಡಿದ ಹೆಚ್. ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಮತ್ತು ಇಲ್ಲಿನೆಲ್ಲ ಪದ್ಯಗಳ ಉಸಿರಲ್ಲೂ ಇರುವ ಬಗೆಬಗೆಯ ಏರಿಳಿತಗಳನ್ನು ವೈದೇಹಿಯವರ ಬೆನ್ನುಡಿ ದಾಖಲಿಸಿ ಉಳಿದವರು ಇನ್ನು ಈ ಕುರಿತು ಬರೆಯಲು ಸಾಧ್ಯವೇ ಇಲ್ಲದಂಥ ಅದ್ಭುತ ನೋಟವನ್ನು ಈ ಇಬ್ಬರೂ ಕೊಟ್ಟಿದ್ದಾರೆ. ಈ ಪುಸ್ತಕಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದ “ಕಾವ್ಯ ಮಾಣಿಕ್ಯ” ಪ್ರಶಸ್ತಿಯೂ ಲಭಿಸಿದೆ. ನಿತ್ಯ ದಂದುಗದ ಸಂತೆಯಲ್ಲಿ ಯಾವ ಕಾರಣಕ್ಕೂ ಕಳೆದು ಹೋಗ(ಲೇ)ಬಾರದೆಂಬ ಅತಿ ಎಚ್ಚರದ ಸೂಕ್ಷ್ಮತೆಯ ಜೊತೆಗೇ ಎಂಥ ರಿಕ್ತತೆಯಲ್ಲೂ ಸಂವೇದನಾಶೀಲತೆಯನ್ನು ಬಿಟ್ಟುಕೊಡದೆ ಕಾಪಿಟ್ಟುಕೊಳ್ಳಲೇ ಬೇಕೆಂಬ ಹೆಬ್ಬಯಕೆಯ ಈ ಕವಿಯ ಕವಿತೆಗಳು ಸ್ವಗತದಂತೆ ಮತ್ತು ಮನುಷ್ಯತ್ವದ ಮೇರು ಯಾಚ(ತ)ನೆಗಳಂತೆ ಸರಳವಾದ ಕವಿತೆಗಳಾಗಿ ಅರಳಿವೆ ಮತ್ತು ಮೇಲ್ನೋಟದ ಯಾವ ಸಂಕೀರ್ಣತೆಯನ್ನು ತೋರದೆಯೂ ಆ ಸಂಕೀರ್ಣತೆಯನ್ನೇ ಆಭರಣವನ್ನಾಗಿ ಹೊದ್ದ ಅನುಪಮ ಅನುಭವದ ಸಾರ ಸರ್ವಸ್ವವೇ ಆಗಿ ಬದಲಾಗಿವೆ. ಬದುಕ ಪಯಣದ ನಿರಂತರದ ಹಾದಿಯಲ್ಲೂ ನಿತ್ಯ ಹೊಸತನ್ನೇ ಕಾಣುವ ಬಯಸುವ ಈ ಕವಿ ಮನಸ್ಸು ಅನುಭವದಿಂದ ಮಾಗಿದ ನಿಜದ ಅನುಭಾವವೇ ಆಗಿ ಬದಲಾಗಿದೆ. ಉದಾಹರಣೆಗಾಗಿ “ದೈನಿಕ” ಪದ್ಯದ ಪೂರ್ಣ ಪಾಠವನ್ನು ಗಮನಿಸಿ; ದೈನಿಕ ಅದೇ ಸೂರ್ಯ ಅದೇ ಹಗಲು ಬೆಳಕಿನಾಟ ಬೇರೆ ಬೇರೆ ಅದೇ ಗಿಡ ಅದೇ ಮರ ಎಲೆ ಎಲೆಯ ನವಿರು ಬೇರೆ ಅದೇ ಹಕ್ಕಿ ಅದೇ ಹಾಡು ಪಾಡು ಮಾತ್ರ ಬೇರೆ ಬೇರೆ ಅದೇ ನಡಿಗೆ ಅದೇ ಜನ ಉಸಿರ ಭಾರ ಬೇರೆ ಬೇರೆ ಅದೇ ಅಡುಗೆ ಅದೇ ಸಾರು ಅಂದಂದಿನ ರುಚಿ ಬೇರೆ ಅದೇ ಉಡುಗೆ ಅದೇ ತೊಡುಗೆ ತನುಭಾವ ಬೇರೆ ಬೇರೆ ಅದೇ ನಾನು ಅದೇ ಅವನು ಅನುದಿನದ ಸಾಂಗತ್ಯ ಬೇರೆ ಬೇರೆ ಬೇರೆ. ಪದ್ಯದ ಬಗ್ಗೆ ಬರೆಯುವಾಗ ಅಥವ ಮಾತನಾಡುವಾಗ ಕವಿಯೊಬ್ಬನ ಕವಿತೆಯ ಯಾವುದೋ ಒಂದು ಸಾಲನ್ನು ಕೋಟ್ ಮಾಡುತ್ತ ತನ್ನ ಹೇಳಿಕೆಗಳನ್ನು ಆ ವಿಮರ್ಶಕ/ ಬರಹಗಾರ ಸಮರ್ಥಿಸಿಕೊಳ್ಳುವುದುಂಟು. ಆದರೆ ಈಗ ಮೇಲೆ ಕಂಡಿರಿಸಿದ ಪದ್ಯದ ಯಾವ ಸಾಲನ್ನು ಹೇಳಿದರೂ ಇಡೀ ಪದ್ಯ ಹೇಳಲು ತವಕಿಸುತ್ತಿರುವ ಸಂಗತಿ “ಬೇರೆ ಬೇರೆ ಬೇರೆ” (different, root & totally inter depending) ಅನ್ನುವುದನ್ನು ಮುಟ್ಟಿಸಲಾಗುವುದೇ ಇಲ್ಲ ಮತ್ತು ಅನಿವಾರ್ಯವಾಗಿ ಇಡೀ ಪದ್ಯವನ್ನು ಓದದೇ ಇದ್ದರೆ ಕವಿ ಹೇಳ ಹೊರಟ ಅನುಭೂತಿ ಓದುಗನನ್ನು ತಟ್ಟುವುದೇ ಇಲ್ಲ. ಈ ಇಂಥ ಕಸುಬುದಾರಿಕೆ, ಹೇಳಿಕೆ ಅಥವ ಘೋಷಣೆಗಳ ಮೂಲಕವೇ ಮೊರೆಯುವ ಸಾಮಾನ್ಯ ಕವಿಗೆ ಸಾಧ್ಯವಿಲ್ಲದ ಸಂಗತಿ. ಈ “ತಿಳಿ”ವಳಿಕೆ ಅಗಾಧ ಓದು ಮತ್ತು ಬದುಕಿನ ಆಳ ಅನುಭವಗಳಿಂದ ದಕ್ಕಿದ ಮತ್ತು ಸಾಮಾನ್ಯ ಸಂಗತಿಗಳಿಂದಲೂ “ಅರಿವ”ರೀತಿಯಿಂದ ಮಾಗಿದ ಪದ್ಯಗಳೇ ಆಗಿವೆ. ಹಾಗೆಂದು ಇವು ಮುಕ್ತಕಗಳೂ ಅಲ್ಲ. ಉಪನಿಷತ್ತುಗಳ ಪರಿಚಯ ಇರುವವರಿಗೆ ಅಲ್ಲಿ ಬರುವ ಪ್ರಶ್ನೋತ್ತರಗಳ ಪರಿ ಅರಿತವರಿಗೆ ಇಲ್ಲಿನ ಎಲ್ಲ ಕವಿತೆಗಳೂ ಕವಿತೆಯ ವೇಷ ಧರಿಸಿದ ಅನುಭವ ಪಾರಮ್ಯದ ಬಿಕ್ಕುಗಳು ಎಂದು ಹೇಳಿದರೆ ಈ ಕವಿಗೆ ಸಮಾಧಾನವಾದೀತು. ಏಕೆಂದರೆ ಈ ಕವಿತೆಗಳಲ್ಲಿ ಕೃತ್ರಿಮತೆಯಾಗಲೀ, ಜಿದ್ದಿಗೆ ಬಿದ್ದು ಕವಿತೆ ಬರೆಯಲೇಬೇಕೆಂಬ ಆವುಟವಾಗಲೀ ಅಥವ ಬೇರೆ ಯಾರೂ ಹೇಳದ ಸಂಗತಿಯನ್ನು ತಾನು ಹೇಳಿದ್ದೇನೆ ಎಂಬ ಬಿಂಕವಾಗಲೀ ಎಳ್ಳಷ್ಟೂ ಇಲ್ಲವೇ ಇಲ್ಲ. ” ದಾರಿ” ಹೆಸರಿನ ಪದ್ಯದ ಕಡೆಯ ಸಾಲುಗಳನ್ನು ಗಮನಿಸಿ. ಬಾಗಿ ನೆಲದ ಮೇಲೆ ಚೆಲ್ಲಾಡಿದ್ದ ಕಾಸ ಒಂದೊಂದನ್ನೇ ಹೆಕ್ಕಿ ಮೆಲ್ಲನೆ ಅವಳ ಹೆಗಲು ಬಳಸಿ ಅಂಗೈಯಲ್ಲಿಟ್ಟಾಗ ಥಟ್ಟನೆ ನನ್ನ ಕೈಯನ್ನು ಗಟ್ಟಿ ಹಿಡಿಯುತ್ತಾಳೆ ಇಬ್ಬರ ಉಸಿರೂ ಬೆರೆತು ನಿಟ್ಟುಸಿರಾಗುತ್ತದೆ ಮೆಲ್ಲನೆ ಕೈ ಸಡಿಲಿಸಿ ಮನೆ ದಾರಿ ಹಿಡಿದಾಗ ಹೆಜ್ಜೆಗಳು ವಜ್ಜೆಯಾಗುತ್ತವೆ ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ  ತಾಕಲಾಟಗಳು  ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ. ಇಷ್ಟು ಹೇಳಿದ ಮಾತ್ರಕ್ಕೆ ಸಹಿಸದೇ ಈ ಕವಿಯ ಮೂಲ ಆಶಯವೇನು ಅವರು ಬದುಕಿನ ಬಗೆಗೆ ಕೊಡುವ ವ್ಯಾಖ್ಯೆಯೇನು ಎಂದೂ ರಿಪಿರಿಪಿ ಮಾಡುವವರು ಖಂಡಿತ “ಆ ದಿನ ಈ ದಿನ” ಕವಿತೆಯ ಈ ಸಾಲನ್ನು ಗಮನಿಸಬೇಕು; ಆ ದಿನ.. ಈ ದಿನ.. ಒಬ್ಬೊಬ್ಬರಿಗೂ ಒಂದೇ ದಿನ!!!! ಎಲ್ಲ ದಿನ ಎಲ್ಲರ ದಿನವಾದ ದಿನ.. ಸುದಿನ. ಇದಕ್ಕಿಂತ ಉತ್ತಮವಾದ ಸರ್ವರನ್ನೂ ಒಳಗೊಳ್ಳುವ ಸುದಿನವನ್ನು ಬಯಸುವ ಕವಿ ಮನಸ್ಸು ಇನ್ನು ಹೇಗೆ ತಾನೇ ಲೌಕಿಕದ ತರ ತಮಗಳನ್ನು ಸಹಿಸೀತು? ಹಾಗಾಗಿಯೇ ತೀರ ಸಾಮಾನ್ಯರಲ್ಲೂ ಇರುವ ಅಸಾಮಾನ್ಯ ಸಂಗತಿಗಳ ಶೋಧ ಇವರ ಕಾವ್ಯ ಕಸುಬಿನ ಮೂಲ ಸ್ರೋತ. ಹಾಗೆಂದು ಸ್ವಂತದ ಶೋಧವೂ ಕೂಡ ಬಲು ಮುಖ್ಯವಾದ ಸಂಗತಿಯೇ. ಅದನ್ನು ಈ ಪದ್ಯದಲ್ಲಿ ಗಮನಿಸಿ; ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ ಎನಿಸುತ್ತಿದೆ ನನಗೆ ಇನ್ನು ಫೋಟೋದಲ್ಲಿರುವ ನಾನು ನಾನಾಗಲು ಹೇಗೆ ಸಾಧ್ಯ? ಈ ಇಂಥ “ತಿಳಿ”(ಳು ಅಲ್ಲವೇ ಅಲ್ಲ)ವಳಿಕೆ ಬರುವುದು ನಿರಂತರವಾಗಿ ಕವಿ ಸಾಮಾಜಿಕನಾದಾಗ ಮಾತ್ರ ಸಾಧ್ಯ ಆಗುವ ಮಾತು. ಎಲ್ಲರಿಗೂ ತಿಳಿದಂತೆ ಶ್ರೀಮತಿ ಉಮಾ ಬಾಳ ಸಂಗಾತಿ ಮುಕುಂದ್ ಪ್ರಖ್ಯಾತ ಫೋಟೋಗ್ರಾಫರ್. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗೆ ಸೆರೆ ಸಿಕ್ಕದ ಖ್ಯಾತನಾಮರು ವಿರಳಾತಿವಿರಳ. ” ಮುಖ ಮುದ್ರೆ” ಅವರ ಛಾಯಾಚಿತ್ರಗಳ ವಿಶೇಷ ಆಲ್ಬಂ. ಛಾಯಾ ಚಿತ್ರ ತೆಗೆಯುವುದು ಕೂಡ ಸವಾಲಿನ ಕೆಲಸವೇ ಹೌದು. ಒಂದು ಮಿಂಚಿನ ಕ್ಷಣದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಇಡಿಕರಿಸಿದಂಥ ಫೋಸು ಸಿಕ್ಕಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಅವನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ. ಇದೆಲ್ಲದರಲ್ಲೂ ಮುಕುಂದರಲ್ಲಿ ತಜ್ಞತೆ ಇರುವುದರಿಂದಲೇ “ಮುಖ ಮುದ್ರೆ”ಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳ ಜೊತೆಗೆ ಅವರ ಕುರಿತ ಟಿಪ್ಪಣಿ ಕೂಡ ಈ ಪುಸ್ತಕದಲ್ಲಿ ಇರುವುದು ವಿಶೇಷ. ಸೂಕ್ಷ್ಮತೆ ಮತ್ತು ವ್ಯಕ್ತಿಯೊಬ್ಬರ ಸಹಜತೆಯನ್ನು ಚಿತ್ರಕ್ಕಿಳಿಸುವ ವ್ಯವಧಾನ ಮುಕುಂದರಿಂದ ಉಮಾ ಕಲಿತರೋ ಅಥವಾ ಮುಕುಂದರ ಜೊತೆಗೇ ಇರುತ್ತಾ ಇರುತ್ತಾ ಅವರ ಪಟಗಳಿಗೆ ಆಹ್ವಾನಿತ ಗಣ್ಯರನ್ನು ರೂಪದರ್ಶಿಯಾಗಿಸುವ ಕಾಯಕದಲ್ಲಿ ಉಮಾ ಕಂಡುಕೊಂಡ ಅನುಭವವೆ ಹೀಗೆ ಬದಲಾಯಿತೋ ಈ ದಂಪತಿಗಳೇ ಹೇಳಬೇಕು. ಹೆಗ್ಗೋಡಿನ ನೀನಾಸಂ ಶಿಬಿರ, ಬೆಂಗಳೂರಿನ ಬಹುತೇಕ ಸಾಹಿತ್ಯಕ ಕಾರ್ಯಕ್ರಮಗಳು, ಡಾ.ಎಚ್ಚೆಸ್ವಿ ನಡೆಸಿ ಕೊಡುತ್ತಿದ್ದ ” ಅಭ್ಯಾಸ” ತರಗತಿಗಳಲ್ಲಿ ಈ ದಂಪತಿಗಳನ್ನು ಕಾಣದೇ ಉಳಿದವರಿಲ್ಲ. ಹಾಗೆಂದ ಮಾತ್ರಕ್ಕೆ ದಾಂಪತ್ಯದ ಏಳು ಬೀಳುಗಳು, ಸರಸ ವಿರಸಗಳು ಇವರನ್ನು ಬಾಧಿಸದೇ ಬಿಡದು. ಅದನ್ನು ಕವಿ “ನಡೆ” ಅನ್ನುವ ಹೆಸರಿನ ಪದ್ಯದಲ್ಲಿ  ಹೀಗೆ ಹೇಳುತ್ತಾರೆ; ನಡೆ ಎಲ್ಲೋ ಹುಟ್ಟಿದ ಅವನು ಮತ್ತೆಲ್ಲೋ ಹುಟ್ಟಿದ ನಾನು ಹೇಗೋ ಬೆಸೆದು ಬಂಧ ಶುರುವಾದ ಪಯಣ ಸಾಗಿದೆ ಮೂರು ದಶಕಗಳಿಂದ ಅಂದ ಮಾತ್ರಕ್ಕೆ ನಾವೇನು ಅಪರೂಪವಲ್ಲ ಸಿಟ್ಟು ಸೆಡವು, ಸಣ್ಣತನ ಎಲ್ಲವೂ ಇದ್ದು ಶರಂಪರ ಜಗಳವಾಡಿ ಮುಖ ತಿರುಗಿಸಿ ಮಾತು ಬಿಟ್ಟು ವಾರ ಕಳೆವಷ್ಟರಲ್ಲಿ ಸಾಕೆನಿಸಿ, ‘ಟೋಕಿಯೋ ಸ್ಟೋರಿ’ ಸಿನೆಮಾ ನೋಡೋಣವೇ ಇಂದು ಮತ್ತೆ? ಎಂದು ಕರೆದಾಗ ಅವನು, ಸೊರಗಿ ಸುಕ್ಕಿಟ್ಟ ಶುಂಠಿ ಕೊಂಬೊಂದು ಕೊನರಿದೆ ಕಾಣು ಬಾ.. ಎಂದು ಕರೆದಾಗ ನಾನು ಮರೆತು ಬಿಡುತ್ತೇವೆ ಮಾತು ಬಿಟ್ಟದ್ದನ್ನು ಮುಂದಾಗಿರಬಹುದೊಮ್ಮೆ ಅವನು ಮತ್ತೊಮ್ಮೆ ನಾನು. ಸಾಲ, ಸೋಲುಗಳಲ್ಲಿ ರೋಗ ರುಜಿನಗಳಲ್ಲಿ ದುಃಖ ದುಮ್ಮಾನದಲಿ ಹಮ್ಮು ಬಿಮ್ಮುಗಳಳಿದು ಮುಂದುವರಿದಿದೆ ನಡಿಗೆ ಹೊರಳಿ ನೋಡುತ್ತೇವೆ ಕಂಡ ಕನಸುಗಳನ್ನು ನೆನೆನೆನೆದು ನಗುತ್ತೇವೆ ಹಾರುಗುದುರೆಯನೇರಿ ಹಾರಾಡಿ ಬಿದ್ದದ್ದನ್ನು. ವಸಂತಗಳುರುಳಿ.. ಕೂದಲು ನೆರೆತು ಮಂಡಿ ಸವೆದರೂ ನಡೆಯುತ್ತಿದ್ದೇವೆ ನಿಂತರೂ ಆಗಾಗ ಜೊತೆಗೇ. ರಾಮಾನುಜನ್ ತಮ್ಮ ಯಾವುದೋ ಸಂಕಲನದ ಬಗ್ಗೆ ಮಾತನಾಡುತ್ತ ಆಡುತ್ತ “ಇದು ಯಾಕೋ ಮಾತು ಅತಿಯಾಯಿತು” ಎನ್ನುತ್ತಾರೆ. ಹಾಗೆ ನೀವು ಹೇಳುವ ಮೊದಲು ಮತ್ತು ಸೀಮಿತ ಚೌಕಟ್ಟಿನ ಈ ಅಂಕಣದ ಬರಹವನ್ನು ಎಂದಿನ ಹಾಗೆ ಕವಿಯ ನಾಲ್ಕೋ ಐದೊ ಕವಿತೆಗಳನ್ನು ಆಯ್ದು ಓದಿ ಎಂದು ಹೇಳುವ ಬದಲು ಉಮಾ ಮುಕುಂದರ ಫೇಸ್ಬುಕ್ ಅಕೌಂಟನ್ನು ತೆರೆದು ಅವರ ಎಲ್ಲ ಕವಿತೆಗಳನ್ನು ಓದಿಕೊಂಡರೆ ಸಿಕ್ಕುವ ಅನುಭೂತಿ ನಿಮ್ಮದೂ ಆಗಲಿ ಎಂದು ಹೇಳುತ್ತಲೇ ಹಾಗೆ ಪುರುಸೊತ್ತು ಇಲ್ಲದವರು ಓದಲೇ ಬೇಕಾದ ಐದು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮತ್ತು “ಕಡೇ ನಾಲ್ಕು ಸಾಲು” ಸಂಕಲನವು ಬಹುರೂಪಿ ಅಂತರ್ಜಾಲ ಮಳಿಗೆಯಲ್ಲಿ ಮಾರಾಟಕ್ಕೆ ಇದೆ ಎಂದೂ ಸೂಚಿಸಬಯಸುತ್ತೇನೆ ———————————————————————– . ಉಮಾ ಮುಕುಂದ್ ಅವರ ಕವಿತೆಗಳು ೧. ಅಲ್ಲೂ.. ಇಲ್ಲೂ.. ಅಂದೊಂದು ದಿನ ಅವಳು                                            ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು ಕೂದಲಿಳಿಬಿಟ್ಟು ಬೀಸಿ ನಡೆದವಳು ಥಟ್ಟನೆ ಹಿಂತಿರುಗಿ ತುರುಬುಕಟ್ಟಿ ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು ಇನ್ನೊಂದು ದಿನ ಅವರು ಇದ್ದಕ್ಕಿದ್ದಂತೆ ಬಂದಿಳಿದಾಗ                             ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು ಮೆಣಸು ಜೀರಿಗೆ ಸಾರು ಮಾಡುಣಿಸಿದಳು ಮತ್ತೊಂದು ದಿನ ಇವರು ಹಾಡು ಹಾಡೆಂದು ಕಾಡಿದಾಗ ಒತ್ತರಿಸಿ ಬಂದ ‘ನಾನು ಬಳ್ಳಿಯ ಮಿಂಚ’ ಕತ್ತಲ್ಲೆ ಕತ್ತರಿಸಿ ‘ರಾಮ ಮಂತ್ರವ..’ ಹಾಡಿ ಮುಗಿಸಿದಳು ಕೊನೆಗೊಂದು ದಿನ ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ            ಈಗಿಂದೀಗಲೆ ನಿಂತೇಹೋದರೆ ಉಸಿರು ಏನೆಂದುಕೊಳ್ಳುವರೊ ಜನರು ಎಂದೆಣಿಸಿ..  ಎಣಿಸಿ..  ಧಡಕ್ಕನೆದ್ದು ಬಾಗಿಲು ತೆರೆದಿಟ್ಟು                                            ‘ಜ಼ಿಂದಗಿ ಭರ್ ಭೂಲೇಂಗಿ ನಹಿ..’ ಎಂದು ದೊಡ್ಡಕೆ ಹಾಡತೊಡಗಿದಳು. ೨. ಸೊಪ್ಪಿನವಳು ನಟ್ಟ ನಡು ಹಗಲು ಹೊತ್ತು

Read Post »

ಕಾವ್ಯಯಾನ

ಜೀವನ

ಕವಿತೆ ಜೀವನ ಭಾರತಿ ರವೀಂದ್ರ ನೋವು ನಲಿವುಗಳನೆರಳು ಬೆಳಕಿನ ಜೋಕಾಲಿ ಈ ಜೀವನ. ಹುಣ್ಣಿಮೆಯ ಕಂಡುಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ. ಸುರಿಯೋ ಸೋನೆಗೆಹೆಜ್ಜೆ ಹಾಕೋ ನವಿಲಿನಕಾಲ್ಗೆಜ್ಜೆಯ ದನಿಯ ಹಾಗೆಸದ್ದೇ ಇಲ್ಲದ ಹೆಜ್ಜೆಯಸಂಗೀತ ದಂತೆ ಈ ಜೀವನ. ಬಡತನದ ಬೇಗೆ ಇರಲಿಸಿರಿತನದ ಸೊಬಗಿರಲಿಪ್ರೀತಿಯ ಹೊನಲಾಗಲಿಈ ಜೀವನ. ಸಂತೃಪ್ತಿಯ ಮನಕೆಸಿರಿತನದ ಸೋಗು ಇರದು ಒಲವೇ ನಲಿವುಈ ಜೀವನ **********************************

ಜೀವನ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ  ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು  ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, ನಾ ನಿನ್ನ ನೆನೆವಾಗ// ಭಾವಲೋಕದೀ ಸರಿತ ಸಲ್ಲಲಿತ ಕವನ ಮರುಳಿರಿಸಿ ಹರಿಯುತಿದೆ /ಶಾಲಿನಿಯ ಬಂಧದಲೀ ಒಲವ ಸಿಂಚನ ಕಚಗುಳಿಯಿಡುತಿದೆ ನಾ ನಿನ್ನ ನೆನೆವಾಗ// ********************************************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ನೆನಪಾಗುತ್ತಿದೆ ಚಂದ್ರು ಪಿ ಹಾಸನ್ ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳುಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳುಕೆದಕಿದೆನು ನಾ ಇಂದು ಒಂದೊಂದು ಮನದೊಳುಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲುಅಮ್ಮನ ತೋಳು ಅದು ಸಂತಸದ ಸಾಲುರಾಜ ಸಿಂಹಾಸನ ನನ್ನ ತಾಯಿಯ ಮಡಿಲುಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭಪ್ರಾಥಮಿಕ ಶಾಲೆಯ ಗಂಟೆ ಸದ್ದುಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳುಅಣ್ಣನ ತೋಳು ಪ್ರತಿಸಂಜೆ ನಾ ಕೊಟ್ಟ ಗೋಳುದಿನಂಪ್ರತಿ ಅವಂಗೆ ನನ್ನ ಕಾಯುವ ಕಾರ್ಯರಸ್ತೆಬದಿ ಶುದ್ಧಕ್ಕಾಗಿ ನನ್ನ ಚಡ್ಡಿ ಹಿಡಿವಾಗ ಶೌರ್ಯ ಮತ್ತೆ ನೆನಪಾಗುತ್ತಿದೆ ರಾತ್ರಿಯ ಊಟಸಂಜೆಗೆ ಬಂದ್ ಆಗ್ತಿತ್ತು ಎಲ್ಲ ಆಟ-ಪಾಠಅಜ್ಜಿ ಹಾಸಿಗೆಯಲ್ಲಿ ನುಸುಳಿ ಗೊರಕೆ ಗೋಟರ್ ಗೊಟಮುಂಜಾನೆ ನಾಲ್ಕ್ಘಂಟೆಗೆ ಅಮ್ಮಂಗೆ ಗಿಳಿಪಾಠ ಮತ್ತೆ ನೆನಪಾಗುತ್ತಿದೆ, ಶಾಲೆಯ ಅಡ್ಡರಸ್ತೆಆ ಹಾದಿಯಲ್ಲಿ ಸಾಗಿದರೆ ಕಳೆಯುವುದೆಲ್ಲಾ ಸುಸ್ತುಅಲ್ಲೊಂದಿತ್ತು ಹುಣಸೆ, ಮಾವು, ನೇರಳೆ ಮರಪ್ರತಿ ಸೀಜನ್ ನಲ್ಲೂ ನಮ್ಮದೇ ರಾಜ್ಯಭಾರ ಮತ್ತೆ ನೆನಪಾಗುತ್ತಿದೆ, ಪರೀಕ್ಷೆಗಳ ಪ್ರಗತಿ ಪತ್ರಮಾರ್ಕ್ಸ್ ಕಾರ್ಡ್ ನಲ್ಲಿ ಅಂಕಗಳು ಕಡಿಮೆ ಬಂದದ್ದುಎಷ್ಟು ಬಾರಿ ಅಪ್ಪನ ಭಯದಲ್ಲಿ ತೋರಿಸದೆ ಕುಳಿತದ್ದುಬೆಳಗ್ಗೆ ಹೊರಡುವ ಸಮಯದಲ್ಲಿ ಅಮ್ಮನ ಕಾಲಿಡಿದಿದ್ದು ಮತ್ತೆ ನೆನಪಾಗುತ್ತದೆ, ಗದ್ದೆಯಲ್ಲಿನ ಆಟೋಟಭಾನುವಾರದಿ ನಡೆಯುತ್ತಿತ್ತು ನಮ್ಮದೇ ಒಂದು ಕೂಟಮುಂದಾಳತ್ವ ಸಿಗುತ್ತಿತ್ತು ಮಾಡಿಸಿದಂತೆ ಮಾಟಯಾಕಂದ್ರೆ ನಾ ಆಡ್ತಿದ್ದೆ ಚೆನ್ನಾಗಿ ಮರಕೋತಿಯಾಟ ಮತ್ತೆ ನೆನಪಾಗುತ್ತಿದೆ, ಜಾತ್ರೆ ಹಬ್ಬಗಳುಬಗೆಬಗೆಯ ತಿಂಡಿಗಳ ಬಿಡ ಬಿಡದೆ ಸವಿದಿದ್ದುಬಚ್ಚಿಟ್ಟಿದ್ದ ತಿನಿಸುಗಳ ಒಂದೊಂದೇ ಕದ್ದದ್ದುಎಂಟಾಣೆ ಹಿಡಿದು ಜಾತ್ರೆಯೆಲ್ಲಾ ಸುತ್ತಿದ್ದು ಮತ್ತೆ ನೆನಪಾಗುತ್ತಿದೆ ಕಾಲೇಜಲ್ಲಿ ನನ್ನ ಸ್ಥಿತಿಗತಿಅಲ್ಲಿ ಕಾಡಿತು ಪ್ರತಿದಿನ ವಿಜ್ಞಾನ ಕೋರ್ಸ್ನ ಭೀತಿಪ್ರಾರಂಭದಲ್ಲಿ ಹೃದಯದಲ್ಲಿ ಅಡಗಿಸಿದ್ದೆ ಚೊಚ್ಚಲ ಪ್ರೀತಿನಿಧಾನ ಹಂತದಲ್ಲಿ ಪಡೆದು ಜೀವನದಿ ಪ್ರಗತಿ ಮತ್ತೆ ಮತ್ತೆ ನೆನಪಾಗುತ್ತಿದೆ ಕಾಲೇಜು ಪಯಣಬಸ್ಸಿನಲ್ಲಿ ರಶ್ಶಾದರೆ ಬಾಗಿಲಲ್ಲಿ ನೇತಾಡ್ತಾ ನಮನಗೆಳತಿಯರ ಸೆಳೆಯಲು ಮಾಡ್ತಿದ್ದೆ ಆರೋಗ್ಯಕರ ಗಮನಸ್ನೇಹದ ಕಡಲಲ್ಲಿ ಹೇಗೋ ಸಾಗಿಸಿದ ಪಾರ್ವತಿರಮಣಾ ಮತ್ತೆ ನೆನಪಾಗುತ್ತಿದೆ ಪ್ರತಿ ಹೆಜ್ಜೆಗಳಲ್ಲಾಟಒಂದೊಂದು ಪರಿಸರದಲ್ಲೂ ಅನುಭವದ ಪಾಠಶಿಕ್ಷಕನಾಗಿ ಕಲಿಸಿದ ಕಂಡದ್ದೆಲ್ಲ ಬರೆಯುವ ಚಟಪರ ವಾಯಿತು ವಿಧಿಯಾಟ ಕಲಿಸಿತು ನೀತಿಪಾಠ ಮತ್ತೆ ನೆನಪಾಗುತ್ತಿದೆ ಬಾಲ್ಯದ ಸ್ನೇಹಜೀವಿಗಳುಕಂಡಾಗ ಹಾಯ್ ಹೋಗುವಾಗ ಬಾಯ್ ಅನ್ನೋ ಸಿಹಿ ಕ್ಷಣಗಳುಕಾಲಚಕ್ರವು ಎಲ್ಲವ ತಿರುಗಿಸಿ ಮರೆಸಿತುಆದರೆ ಮನಸ್ಸಿನ ಪುಟದಲ್ಲಿ ಅಚ್ಚರಿಯಾಗಿವೆ ನೆನಪುಗಳು ಮತ್ತೆ ನೆನಪಾಗುತ್ತಿದೆ ನೆನಪುಗಳ ನೆನಪುಗಳು ****************************************

ಕಾವ್ಯಯಾನ Read Post »

ಇತರೆ, ಪ್ರವಾಸ ಕಥನ

ಪ್ರವಾಸ ಕಥನ

ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ  ನಿಸರ್ಗಾರಾಧಕರಿಗೆ ಆಗಾಗ ತವರೂರು ನೆನಪಾಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಗರ ನರಕ ಸಮಾನವೆಂದೆನಿಸಿ ಬಿಡುತ್ತದೆ.  ಉಸಿರು ಕಟ್ಟುವ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಎಲ್ಲಾದರೂ ನಿರ್ಜನ ಹಾಗೂ ಪ್ರಕೃತಿಯಿರುವಲ್ಲಿ ಕಾಲಕಳೆಯ ಬೇಕೆನಿಸುವುದರಲ್ಲಿ ತಪ್ಪೇನಿದೆ.ನಗರಗಳು ಕದಂಬ ಬಾಹುವಿನಂತೆ ಹಳ್ಳಿ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು  ಬೆಳೆಯುತ್ತಿರುವಾಗ ಪಶ್ಚಿಮಘಟ್ಟಗಳಿಂದ ಬಂದ ನಮಗೆ ಮರಗಿಡಗಳ ಹಾಗೂ ಹಕ್ಕಿಗಳ ಕಲರವ ನೀರಿನ ಜುಳುಜುಳು ನಾದ ನೆನಪಾಗದೇ ಉಳಿಯಲು ಸಾಧ್ಯವೇ ? ಅಕ್ಟೋಬರ್ ಇಪ್ಪತ್ತಾರನೇ ದಿನದಂದು ನಮ್ಮ ಮನೆಯಿಂದ ಸುಮಾರು ಇಪ್ಪತ್ತು ಮೈಲು ದೂರದಲ್ಲಿರುವ  ವೃಕ್ಷ ಉದ್ಯಾನಕ್ಕೆ ಹೊರಟೆವು.  ಸ್ವಲ್ಪ ನಗರದ ವಾಹನ ದಟ್ಟಣೆ ಕಳೆದ ತಕ್ಷಣ ಮರಗಳ ಸಾಲುಗಳು ನಮ್ಮನ್ನು ಕೈಬೀಸಿ ಕರೆದವು. ನಗರದಿಂದ ಅನತಿ ದೂರದಲ್ಲಿ ಇದ್ದ ಈ ವೃಕ್ಷಗಳು ಸ್ವೇಚ್ಛೆಯಾಗಿ ನೀಳವಾಗಿ ಎತ್ತರವಾಗಿ ವಿಸ್ತಾರವಾದ ಈ ಪ್ರದೇಶದಲ್ಲಿ ಕಂಗೊಳಿಸುತ್ತಿದ್ದವು. ವಾವ್ ಎನ್ನುವ ವಾತಾವರಣ ಹಾಯ್ ಎನ್ನಿಸಿದ್ದುಇದೇ ರಾಮಗೊಂಡನ ಹಳ್ಳಿಯಲ್ಲಿರುವಂತಹ  ‘ ಜಾರಕಬಂಡೆ ಕಾವಲ್ ವೃಕ್ಷ ಉದ್ಯಾನ ವನ ‘. ಇದು ನಿಸರ್ಗ ಪ್ರಿಯರಿಗೆ ಹೇಳಿಸಿದ ತಾಣ. ಸುಮಾರು ಸಾವಿರ ಹೆಕ್ಟೇರ್ ಜಾಗವನ್ನು ಒಳಗೊಂಡ ಈ ಉದ್ಯಾನವನದಲ್ಲಿ ಸುಮಾರು 5000 ಸಸ್ಯ ಪ್ರಬೇಧ‌ಗಳಿವೆ.ಇಕ್ಕೆಡೆಗಳಲ್ಲಿ ಮರ ಹಾಗೂ ಅಲ್ಲಲ್ಲಿ ದಣಿವು ತಣಿಸಿಕೊಳ್ಳಲು ಕಲ್ಲು ಆಸನಗಳೂ ಇವೆ. ಈ ಉದ್ಯಾನವನವನ್ನು ತುಂಬಾ ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಇದರ ಒಳಗಡೆ ಹಳ್ಳಿಯಲ್ಲಿ ಇರುವಂತಹ ಮಣ್ಣಿನ ರಸ್ತೆ , ಕಾಲುದಾರಿ ,ವಿವಿಧ ರೀತಿಯ ಗಿಡಗಳು ಪೊದೆಗಳು ಹೀಗೆ ನಡೆದಾಡುವ ಅಭ್ಯಾಸ ಇರುವವರಿಗೆ ಮನೋಲ್ಲಾಸವನ್ನು ನೀಡುತ್ತದೆ. ಅಲ್ಲಲ್ಲಿ ಕಣ್ತಣಿಸುವ ಮಲೆನಾಡಿನ ಸಸ್ಯಗಳನ್ನು ನಾವು ಕಾಣಬಹುದು. ನಾವು ಬಾಲ್ಯದಲ್ಲಿ ತಿನ್ನುತ್ತಿದ್ದ ಕೆಲವೊಂದು ಗಿಡಗಳೂ ಅಲ್ಲಿ ಫಲಭರಿತವಾಗಿ ಕಂಡು ಬಂದವು. ಪಕ್ಷಿ ಪ್ರಿಯರಿಗೂ ಅದ್ಭುತ ಸ್ಥಳ. ಅಲ್ಲಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೋದರೆ ಅಲ್ಲಿ ಚಿಟ್ಟೆಗಳ ಪ್ರಪಂಚ ಇರುವುದರಿಂದ  ವರ್ಣರಂಜಿತ ವಿವಿಧ ರೀತಿಯ ಚಿಟ್ಟೆಗಳನ್ನೂ ಕಾಣಬಹುದು.ಬೈಸಿಕಲ್ ಸವಾರರಿಗೆ ಮತ್ತು ಕಾಲುನಡಿಗೆ ಮಾಡುವವರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ. ಸುಮಾರು ಏಳೂವರೆ ಮೈಲಿಯಷ್ಟು ನಡಿಗೆ.  ತುಂಬಾ ವಿಸ್ತಾರವಾದ ಜಾಗವಾಗಿರೋದ್ದರಿಂದ ಒಬ್ಬರೇ ಹೋಗುವುದಕ್ಕಿಂತ  ಜೊತೆಯಲ್ಲಿ ಹೋಗುವುದು ಸುರಕ್ಷಿತ .ಮುಖ್ಯದಾರಿಯ ನಂತರ ಕಾಲು ದಾರಿಗಳಲ್ಲಿ ನಡೆಯುತ್ತಾ ನಡೆಯುತ್ತಾ ಮೈಮರೆತರೆ ಪುನ: ಹೊರಗಡೆ ಬರುವುದು ಕಷ್ಟವಾಗ ಬಹುದು. ಮಖ್ಯದ್ವಾರದಲ್ಲಿ ಇರುವ ಸಿಬ್ಬಂಧಿಗಳಲ್ಲಿ ವಿಚಾರಿಸಿಕೊಂಡು ನಿಮ್ಮ ಪ್ರಯಾಣವನ್ನು ಶುರು ಮಾಡುವುದು ಒಳ್ಳೆಯದು. ಬೆಳಿಗ್ಗೆ ಆರು ಗಂಟೆಯಿಂದ ಹತ್ತರವರೆಗೆ ಹಾಗೂ ಸಂಜೆ ಮೂರು ಗಂಟೆಯಿಂದ ಆರರವರೆಗೆ ತೆರೆದಿರುವುದರಿಂದ  ಸೂರ್ಯೋದಯ  ಮತ್ತು ಸಂಜೆಯ ಸೂರ್ಯಾಸ್ತದ ಸಮಯವನ್ನು ಆನಂದಿಸ ಬಹುದು. ನಾವು ಮುಸ್ಸಂಜೆಯಲ್ಲಿ ಹಕ್ಕಿಗಳ ಕಲರವದ ಜೊತೆಜೊತೆಗೆ ಸೂರ್ಯಾಸ್ತದ ಸಮಯವನ್ನು ಆನಂದಿಸಿದೆವು.  ಮೂರು ಘಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಮುಖ ಕವಚವಿಲ್ಲದೆ ಶುದ್ಧ ಪ್ರಾಣವಾಯುವನ್ನು ಸೇವಿಸುತ್ತಾ ನಡೆಯುತ್ತಾ ಮಲೆನಾಡು ಸೊಬಗನ್ನು ಸವಿದೆವು. ಸೂರ್ಯಾಸ್ತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಮನೆಯತ್ತ ಸಾಗಿದೆವು. ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಹಸಿರು ಸೊಬಗನ್ನು ಬಹುಶಃ: ಅಲ್ಲಿ ಕಾಣಬಹುದು.ದಯವಿಟ್ಟು ಅಲ್ಲಿಗೆ ನಿಸರ್ಗ ಪ್ರೇಮಿಗಳು ಮಾತ್ರ ಹೋಗಬೇಕು ಏಕೆಂದರೆ ಈ ಮಹಾನಗರ ವ್ಯಾಪ್ತಿಯಲ್ಲಿ ಇದು ಅಳಿದುಳಿದು ಕೊಂಡಂತಹ ಏಕೈಕ ತಾಣ ಹಾಗೂ ನೈಸರ್ಗಿಕವಾಗಿ ಕಲ್ಮಷರಹಿತವಾಗಿಟ್ಟಂತಹ ನೆಮ್ಮದಿಯ ತಾಣ ಎಂದರೂ ಅತಿಶಯೋಕ್ತಿಯಾಗಲಾರದು. ಅಂತಹ ಅಮೂಲ್ಯವಾದ ಜಾಗಗಳನ್ನು ಹಾಗೇ ಉಳಿಸಿಕೊಳ್ಳೋಣ. ಗೌರವಿಸೋಣ.*******************************************

ಪ್ರವಾಸ ಕಥನ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ ಮುಖಾಮುಖಿಯಲ್ಲಿ ಈ ಸಲ ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ. ” ನಾನು ದೇವರನ್ನು ಖಂಡಿತಾ ನಂಬುತ್ತೇನೆ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ನನ್ನ ಮನಸ್ಸಿನ ನೋವನ್ನಾಗಲಿ,  ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ,  ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ .   ಕವಿತೆ ಹುಟ್ಟುವ ಕ್ಷಣ ಯಾವುದು ?     ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ . ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? . ಹೆಚ್ಚಾಗಿ ನನ್ನ  ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ      ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ . ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ. ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ .  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ.  ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ .  ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ .  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು  ಗಮ್ಯವನ್ನೇ ಮುಟ್ಟುತ್ತವೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?         ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ.  ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ  ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ .    ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ. ಇನ್ನು ಪರಿಷತ್ತು ಹಾಗೂ  ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ  ಹಿಡಿಯಬೇಕಾದ ಹಾದಿಯನ್ನು ಬಿಟ್ಟು   ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ  ಮತ್ತೊಂದು ಇತಿಹಾಸ     ಸೃಷ್ಟಿಸುವ ಕೆಲಸ ಆಗಬೇಕಿದೆ.  ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ.  ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು . ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?     ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ.  ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ  ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ. ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು. ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ  ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ . ಈಚೆಗೆ ಓದಿದ ಕೃತಿಗಳಾವವು? ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು  ” ಅಪ್ಪನ ಹೆಗಲು “. ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ. ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು  ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರವಣಿಗೆ ಬಿಟ್ಟರೆ,  ಅಡುಗೆ ಮಾಡುವುದು  ನಿಮಗೆ ಇಷ್ಟವಾದ ಸ್ಥಳ ಯಾವುದು ? ಕುಪ್ಪಳ್ಳಿಯ ಕವಿಶೈಲ.  ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ,  ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ .  ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ಹಿಂದಿಯ ದೋ ಆಂಖೆ ಬಾರಹ್  ಹಾಥ್ ಹಾಗೂ ಕನ್ನಡದ ಶರಪಂಜರ ನೀವು ಮರೆಯಲಾರದ‌ ಘಟನೆ‌ ಯಾವುದು?      ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ  ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು.  ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು ಹೇಳಲೇ ಬೇಕಾದ ಕೆಲ ಸಂಗತಿಗಳು; ಕಾಲೇಜು ಓದುವ ಕಾಲದಲ್ಲಿ ಬರೆಯುವ  ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ.  ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ  “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ . ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ . ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ  ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ,  ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಇತರೆ, ಪ್ರಬಂದ

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಬಸ್ ನಲ್ಲಿ   ಪ್ರಯಾಣಿಸುತ್ತಿದ್ದೆ‌. ಸಾಮಾನ್ಯವಾಗಿ ನಾನು ಪ್ರಯಾಣ ಮಾಡುವಾಗ ನಿದ್ದೆ ಮಾಡುವುದಿಲ್ಲ. ಅದು ಹಳ್ಳಿಗಳನ್ನು ಸುತ್ತಿಕೊಂಡು ಹೋಗುವಂಥ ಖಾಸಗಿ ಬಸ್.ಬಸ್ ನಲ್ಲಿ ಎಲ್ಲಾಆಸನಗಳು ಭರ್ತಿಯಾಗಿದ್ದವು ಎನ್ನುವುದಕ್ಕಿಂತ ಬಸ್ನಲ್ಲಿ ಜನರನ್ನು ತುಂಬಿದ್ದರು ಎಂಬ ಹೇಳಿಕೆಯೇ ಸೂಕ್ತ.  ತುಂಬಿದ ಬಸುರಿ ಹೆಣ್ಣಿನಂತೆ ಗಜ ಗಮನೆಯಂತೆ ಬಸ್ ಚಲಿಸತೊಡಗಿತು. ದಾರಿ ಸಾಗುತ್ತ ಹಳ್ಳಿಗಳು ಬಂದಾಗ ಜನರಿಳಿದಂತೆ ಬಸ್ಸಲ್ಲಿದ್ದವರೆಲ್ಲಾ ಸಾವಕಾಶವಾಗಿ ಕುಳಿತರು. ಇದ್ದಕ್ಕಿದ್ದಂತೆಯೇ ” ಅಣ್ಣಾ ಡ್ರೈವರಣ್ಣ ಬಸ್ ನಿಲ್ಲಿಸಣ್ಣ” ಎಂದು ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಳು. ಡ್ರೈವರ್ ನೊಂದಿಗೆ ಮಾತು ಕತೆಯಲ್ಲಿ ಮಗ್ನನಾಗಿದ್ದ  ಬಸ್ ಕಂಡಕ್ಟರ್ “ಯಾಕೆ, ಏನು ಏನಾಯ್ತು “ಎಂದು ಗಾಬರಿಯಾಗಿ  ಕೇಳಿದ. ಎಲ್ಲರೂ ಆ ಧ್ವನಿ ಬಂದ ಕಡೆಗೆ ತಿರುಗಿದರು. ಆ ಹೆಣ್ಣುಮಗಳೊಬ್ಬಳು   ಡ್ರೈವರ್ ಹತ್ತಿರ ಬಂದು,”ಅಣ್ಣ,ಬಸ್ ನಿಲ್ಲಿಸಣ್ಣ ನನ್ನ ಈ ಕಿವಿದು ವಾಲೆ( ಓಲೆ)ಕಳೆದು ಹೋಗೈತೆ. ಹುಡುಕ್ತೀನಣ್ಣ”  ಕೈಮುಗಿಯುತ್ತ ಅವಳು ಅಂಗಲಾಚಿ ಬೇಡಿಕೊಂಡಳು. ತಕ್ಷಣವೆ ಬಸ್ ನಿಂತಿತು. ಅವಳು ಹಾಕಿಕೊಂಡಿದ್ದ ಎರಡು ಕಿವಿಯೋಲೆಯಗಳಲ್ಲಿ ಒಂದು ವಾಲೆಯು ಎಲ್ಲೋ ಬಿದ್ದು ಹೋಗಿದ್ದು ಈಗ ಅದು ಅವಳ ಅರಿವಿಗೆ ಬಂದಿತ್ತು.ತಕ್ಷಣ ಗಾಬರಿಯಿಂದ  ಕೂಗಿಕೊಂಡಿದ್ದಳು. ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಲೇ ಡ್ರೈವರ್ ಕಡೆ ಬಂದಳು.ಸುಮಾರು ನಲವತ್ತರ ವಯೋಮಾನ. ಆಗ ಕಂಡಕ್ಟರ್ “ಎಲ್ಲಿ ಬಿತ್ತೊ ಏನು ಕತೆನೋ ನೀನು ಮನೆಯಿಂದ ಬರುವಾಗ ಕಿವಿಲೇ  ಇತ್ತೇನಮ್ಮ ಎಲ್ಲಿ ಅಂತ ಹುಡುಕ್ತೀಯ ಎಂದಾಗ  “ಅಣ್ಣ ನಾನು ಕುಂತಿರ  ಸೀಟ್  ಹಿಂದೆ ಮುಂದೆಲ್ಲ ಹುಡುಕ್ತೀನಿ” ಎಂದು ಹೇಳಿದಳು. ಬಸ್ ನಲ್ಲಿದ್ದವರು ಅವಳ ಮನವಿಗೆ ಸ್ಪಂದಿಸಿ ಬೇಗನೆ ಕೆಳಗಿಳಿದು ಸಹಕರಿಸಿದರು “ಬೇಗ ಬೇಗ ನೋಡ್ಬೇಕಮ್ಮ” ಕಂಡಕ್ಟರ್ ಹೇಳಿದಾಗ “ಅಣ್ಣ ನಾನಿವತ್ತು  ವಾಲೆ ಕಳ್ಕೊಂಡು ಮನೆಗೆ ಹೋದ್ರೆ ನನ್ನ ಗಂಡ ಹೊಡೆದು ಸಾಯಿಸಿಬಿಡ್ತಾನೆ” ಎಂದು ಹೇಳಿದಾಗ  ಎಲ್ಲರು ಅಯ್ಯೋ  ಪಾಪ ಎಂದು ಮರುಗುತ್ತ ಕೆಲವರು ಅವಳೊಡನೆ  ತಾವು ಸಹಾ ಹುಡುಕಿದರು.ಅದು ಬಸ್ನಲ್ಲೆ  ಬಿತ್ತೋ ಅಥವ ಬಸ್  ಹತ್ತುವ ಮೊದಲೇ ಬಿದ್ದಿತ್ತೊಎಂಬ ಬಗ್ಗೆ ಅವಳಿಗೂ ಸಹ ಖಾತ್ರಿಯಿರಲಿಲ್ಲ  ಒಂದು ಇಪ್ಪತ್ತು ನಿಮಿಷ ಹುಡುಕಿದ್ರೂ ಸಿಗಲಿಲ್ಲ.ಆಗ ಕಂಡಕ್ಟರ್ “ಅದೆಲ್ಲಿ ಬಿದ್ದೋಯ್ತೋ ಏನೋ ಸಿಗಲ್ಲ. ಬಸ್ ಬಹಳ ಹೊತ್ತು ನಿಲ್ಲಿಸಕ್ಕಾಗಲ್ಲಮ್ಮ. ಎಲ್ಲರು ಬನ್ರಿ. ಕುಳಿತ್ಕಳಿರಿ” ಎಂದಾಗ ಎಲ್ಲರೂಬಸ್ ನಲ್ಲಿ ಬಂದು ಕೂತರು. ನಿಲ್ಲದ ಆ ಹೆಂಗಸಿನ ಅಳುವನ್ನು ಕಂಡು ಎಲ್ಲರ ಮನ ಕರಗಿತ್ತು. ಅವಳ ದು:ಖ  ನೋಡಲಾಗದೇ ಹಿರಿಯ ವ್ಯಕ್ತಿಯೊಬ್ಬರು “ಹೋಗ್ಲಿ ಬಿಡಮ್ಮ ಆಗಿದ್ದು ಆಗೋಯ್ತು ಸಮಾಧಾನ ಮಾಡ್ಕಳಮ್ಮ”ಎಂದು  ಹೇಳಿದಾಗ ಅವಳು “ನನ್ನ ಗಂಡನ ಬುದ್ಧಿ ನಿನಗೆ ಗೊತ್ತಿಲ್ಲಪ್ಪ. ನನ್ನ ಹೊಡೆದು ಸಾಯಿಸಿಬಿಡ್ತಾನೆ” ಎನ್ನುತ್ತ ಕಣ್ಣೀರು ಹಾಕಿದಳು. ವಾಲೆ ಕಳೆದುಕೊಂಡ ದುಃಖಕ್ಕಿಂತ ಹೆಚ್ಚಾಗಿ ತನಗೆ ಬೀಳಲಿರುವ ಗಂಡನ ಬಡಿತಗಳಿಗೆ ಬೆಚ್ಚಿ ಬಿದ್ದಂತೆ ಕಂಡಳು. ಸುಮ್ಮನೇ ಮೌನವಾಗಿ ತನ್ನ ಸೀಟ್ ನಲ್ಲಿ ಕುಳಿತು ಬಿಟ್ಟಳು.ಏನಾದ್ರು ಆಗಲಿ ಎಲ್ಲದಕ್ಕೂ ತಾನೂ ಸಿದ್ದವಾಗಿದ್ದೇನೆಂಬಂತಿದ್ದ ಆ ಹೆಣ್ಣುಮಗಳು ಅಸಹಾಯಕತೆಯ ಪರಮಾವಧಿಯಂತೆ ಕಂಡಳು.ಆಕೆ ಬಸ್ ಇಳಿದು ಹೋಗುವಾಗ “ಏನು ಆಗಲ್ಲ ಧೈರ್ಯವಾಗಿರಕ್ಕ. ದೇವರ ಮೇಲೆ ಭಾರ ಹಾಕಕ್ಕ’ ಎಂದು ಕಂಡಕ್ಟರ್ ಧೈರ್ಯ ಹೇಳಿದನು.ಅವಳ ಸಿಡುಕ ಗಂಡನಿಗೆ  ಕೆಟ್ಟಸಿಟ್ಟು ಬಾರದಂತೆ ಮಾಡಪ್ಪ ದೇವರೇ ಎನ್ನುವುದನ್ನು  ಬಿಟ್ಟರೆ ಮತ್ತೇನನ್ನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದು. ಅವಳ ಮನೆಯಲ್ಲಿ ಮಂದೆ ನಡೆಯಲಿರುವ ಎಲ್ಲಾ ಸನ್ನಿವೇಶಗಳನ್ನು ನನ್ನದೇ ಆದ ರೀತಿಯಲ್ಲಿ ಕಲ್ಪನೆ  ಮಾಡಿಕೊಂಡು ಮನೆ ಸೇರಿ ಆ ಗುಂಗಿನಲ್ಲೇ ಎರಡು ದಿನ ಕಳೆದಿದ್ದೆ. ಉದ್ದೇಶಪೂರ್ವಕವಾಗಿ ತಾನು ಮಾಡದಿದ್ದರೂ ತನಗರಿವಿಲ್ಲದೆ ಆಕಸ್ಮಿಕವಾಗಿ ಆದ ತಪ್ಪಿನಿಂದ ಆ ಹೆಣ್ಣು ಮಗಳು ಎಂಥಾ ಶಿಕ್ಷೆ ಅನುಭವಿಸಿದಳೋ ಆ ದೇವರಿಗೇ ಗೊತ್ತು! ಅಷ್ಟೊಂದು ಭಯ ಬಿದ್ದ ಅವಳಿಗೆ ಅವಳ ಕೆಟ್ಟ ಗಂಡನ ಹೊಡೆತಗಳು ಅದೆಷ್ಟು ನೋವು ಕೊಟ್ಟಿರಬೇಕು !  ನಮ್ಮ ಹೆಣ್ಣುಮಕ್ಕಳ ಮೇಲಿನ ಕೊನೆಯಿಲ್ಲದ ಕ್ರೌರ್ಯದ ಶೋಷಣೆಯ ನಾನಾ ರೂಪಗಳು! ಆದೆಷ್ಟು ವರ್ಷಗಳು  ಕಳೆದರೂ ಆ ಘಟನೆ ಮಾತ್ರ ನನ್ನ ಚಿತ್ತದಲ್ಲಿ ಹಾಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ! ಇಂತಿಪ್ಪ ಬಸ್ ಪಯಣದಲ್ಲೇ,ಒಮ್ಮೆ ನಾನೂ ಸಹ  ನನ್ನ ರಿಸ್ಟ್ ವಾಚ್ ಕಳೆದುಕೊಂಡಿದ್ದೆ. ಅದು ನನ್ನ ಮಗ ನನಗೆ ತನ್ನ ಮೊದಲ ಸಂಬಳದಲ್ಲೇ ಕೊಡಿಸಿದ್ದ ಬೆಲೆ ಬಾಳುವ ವಾಚು.ಕಳೆದುಕೊಂಡ ಬೇಸರದಲ್ಲಿ ಬೇಸರದಲ್ಲೆ ನಾನು ವಿಷಯವನ್ನು ಮಗನಿಗೆ ತಿಳಿಸಿದೆ. ಇದನ್ನು ಕೇಳಿಧ ನನ್ನ ಮಗನು ಒಂದಿಷ್ಟೂ ಬೇಸರ ಪಡದೆ “ಹೋಗ್ಲಿ ಬಿಡಮ್ಮ” ಎಂದು ಸಲೀಸಾಗಿ ಹೇಳಿದ್ದಲ್ಲದೆ ಅಂತಹದೆ ಮತ್ತೊಂದು ವಾಚ್ ಕೊಡಿಸಿದ್ದನು.ಎಲ್ಲವು ಅಷ್ಟೆ ಅವರವರ ಭಾವಕ್ಕೆ! ನಾನು ಬಿ.ಇಡಿ. ಓದುವಾಗ ಪ್ರತಿದಿನ ಬಸನಲ್ಲಿ ದುರ್ಗಕ್ಕೆ ಪಯಣ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ  ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆಂದೇ ಮೀಸಲಾದಂತಿತ್ತು. ಆ ದಿನ ನಮಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಿಯೋಜಿಸಲ್ಪಟ್ಟಿದ್ದ ಶಾಲೆಗೆ ನಾವು ಸರಿಯಾದ ವೇಳೆಗೆ ತಲುಪಬೇಕಾಗಿತ್ತು.  ರೋಡ್ ಬ್ಲಾಕ್ ಆದ ಕಾರಣ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಕಾರಣ ಕೆಲವೇ  ಕ್ಷಣಗಳ ಹಿಂದೆ ಅಲ್ಲೊಂದು ಅಪಘಾತವಾಗಿತ್ತು. ರಾಷ್ಟೀಯ ಹೆದ್ದಾರಿ ಬೇರೆ ನಮಗೆ ಆತಂಕ ಶುರು ಆಯಿತು. ಸಮಯಕ್ಕೆ  ಸರಿಯಾಗಿ ಶಾಲೆ ತಲುಪಲು ಸಾಧ್ಯವೇ ಎಂದು. ನಾವು ಡ್ರೈವರ್ ಅವರನ್ನ  ಕೇಳಿದೆವು. ಹತ್ತಿರದ ಇನ್ನೊಂದು ದಾರಿಯಲ್ಲಿ ಹೋಗಿರಿ  ನಮಗೆ ಎಕ್ಸಾಂ ಇದೆ. ಅವರು ಇಲ್ಲ ಅದು ಸಾಧ್ಯವಾಗಲ್ಲ ಎಂದರು. ಆಗ ನಾವು ಪೆಚ್ಚು ಮೋರೆ ಹಾಕಿಕೊಂಡೆವು. ಆಗ ಅವರು ಸಾವಧಾನವಾಗಿ ಅವರದೇ ಆದ ಕೆಲವು  ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಒತ್ತಾಯಕ್ಕೆ  ಮಣಿದು ಅವರು ಬೇರೆ ರೂಟ್ ನಲ್ಲಿ ಹೋದಾಗ ಅಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅವನ ತಪ್ಪೆಂದು ಪರಿಗಣಿಸಿ ಅವನನ್ನು  ಕರ್ತವ್ಯದಿಂದ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ಯಾವುದೇ ಕ್ಷೇತ್ರ ಇರಬಹುದು, ಅಲ್ಲಿನ ಒಳ ಹೊರಗು  ಅಲ್ಲಿ ಇರುವವರಿಗೆ ತಿಳಿದಿರುವುದೆ ಹೊರತು ದೂರದಲ್ಲಿ ನಿಂತು ಮಾತನಾಡುವವರಿಗಲ್ಲ. ಇದು ಎಲ್ಲಕ್ಕು ಅನ್ವಯ ಆಗುತ್ತದೆಯಲ್ಲವೇ ? ನಾವು ತರಗತಿಗಳನ್ನು ತೆಗೆದುಕೊಳ್ಳಲು ನಿಯೋಜಿಸಿದ ಶಾಲೆಗೆ ನಾವು ಹೋಗಬೇಕಿತ್ತು. ಅಂತಹ ದಿನಗಳಲ್ಲಿಯೇ ಅನಿವಾರ್ಯ ಕಾರಣಗಳಿಂದ ನಮಗೆ ಬಸ್ ಸಿಗುವುದು ತಡವಾಗುತ್ತಿತ್ತು.ಮಾಗಿ ಕಾಲದ ದಿನಗಳಾಗಿದ್ದರೆ ಬೇಗನೆ ಕತ್ತಲು ಕವಿದು ಬಿಡುತ್ತಿತ್ತು  ಕೆಲವು ಬಸ್ ನಿರ್ವಾಹಕರು ಪಾಸ್ ಸೌಲಭ್ಯ ಹೊಂದಿದ ನಮ್ಮ ಮೇಲೆ ಸಿಡುಕುತ್ತಾ ಸಹನೆಯಿಲ್ಲದೆ ನೀವೆಲ್ಲಾ ಮ್ಯಾಟ್ನಿ ( ಮಧ್ಯಾನ್ಹದ ಚಲನ ಚಿತ್ರ ಪ್ರದರ್ಶನ )ಸಿನಿಮಾ ನೋಡಿಕೊಂಡು ಬರ್ತಿರಾ ಎಂದು ಗೊಣಗುತ್ತಾ ಪೂರ್ವಾಗ್ರಹ ಪೀಡಿತ ತೀರ್ಪನ್ನು ಕೊಟ್ಟೇ ಬಿಡುತ್ತಿದ್ದರು.ಆಗ ನಾವು ನಮಗೇನೂ ಕೇಳಿಸೇ ಇಲ್ಲವೆಂಬಂತೆ ಇರುತ್ತಿದ್ದೆವು.ಒಮ್ಮೆ ಹೀಗೆ ತಡವಾಗಿ ಬಸ್ ಹತ್ತಿ ಕೂತು ಅಂದಿನ ತರಗತಿ ಹಾಗೂ ವಿಷಯದ ಬಗ್ಗೆ ಮಾತನಾಡುತ್ತಾ ಅಂದಿನ ಬಸ್ ಕಂಡಕ್ಟರ್ ಗೆ ಪಾಸ್ ತೋರಿಸಿದಾಗ”ನೀವೆಲ್ಲಾ ಬಿ.ಇಡಿ. ಓದುತ್ತಿದ್ದೀರಾ?ನೀವು ಸ್ಕೂಲ್ ಗಳಿಗೆ ಹೋಗಿ ಪಾಠ ಮಾಡಬೇಕು ಅಲ್ವೇನ್ರಮ್ಮ. ನನ್ನ ಮಗಳೂ ಬಿ. ಇಡಿ. ಮಾಡ್ತಾ ಇದಾಳೆ ‘ ಎಂದವರು ಹೇಳಿದಾಗ ಒಬ್ಬ ಸಹೃದಯ ಸಜ್ಜನರಂತೆ ಕಂಡುಬಂದರು ಕಾಲೇಜು ವಿದ್ಯಾರ್ಥಿಗಳಿದ್ದ ಆ ಬಸ್ನಲ್ಲಿ ಜೋರು ಮಾತು ಕತೆ, ವಿನಾಕಾರಣ ನಗು,ಸಿನಿಮಾ,ರಾಜಕೀಯ,ಕಾಲೇಜ್  ಟೀಕೆ ಟಿಪ್ಪಣಿ, ತರಲೆ ತುಂಟಾಟಗಳ ಲವಲವಿಕೆ ತುಂಬಿದ ಉತ್ಸಾಹ ಪುಟಿಯುತ್ತಿತ್ತು ! ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಪ್ರತಿದಿನ ನಾವು ಬಸ್ ನಲ್ಲಿ ಹೋಗಬೇಕಿತ್ತು. ಹದಿನೈದುನಿಮಿಷದ ಅಲ್ಲಿನ ಪ್ರಯಾಣಕ್ಕೆ ಅರ್ಧಗಂಟೆಗೂ ಹೆಚ್ಚಿನ ಸಮಯವೆ ಬೇಕು ಪ್ರತಿಯೊಂದು ಹಳ್ಳಿಯಲ್ಲೂ ಹತ್ತಿ ಇಳಿಯುವವರಿಂದಾಗಿ ಅದು ಅನಿವಾರ್ಯ ಸಹ. ಒಮ್ಮೆಬಸ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆಯೇ ಗದ್ದಲ ಎದ್ದಿತು. ಏನೋ ದುರ್ವಾಸನೆ ಬರುತ್ತಿದೆ ಎಂದು ಎಲ್ಲರು ಜೋರಾಗಿ ಹೇಳತೊಡಗಿದರು  ದುರ್ವಾಸನೆ ಬೀರುವ ವಸ್ತುವನ್ನು ಬಸ್ಸಲ್ಲಿ ಇಡಲಾಗಿದೆ  ಎಂದು ಜನರು ಗುಮಾನಿ ಪಟ್ಟರು.ಆಗ ಬಸ್ ಕಂಡಕ್ವರ್ ( ಖಾಸಗಿ ಬಸ್) ಅಂತಹುದೇನೂ ಇಟ್ಟಿಲ್ಲ ಎಂಬುದಾಗಿ ಸ್ವಷ್ಟಪಡಿಸಿದನು. ಆಗ ಬಸ್ ನಲ್ಲಿದ್ದ ಯಾರೋ ಒಬ್ಬರು   ಮತ್ತೊಬ್ಬನ ಕಡೆ ಕೈ ತೋರಿಸುತ್ತ “ಅಗೋ ಅವನಿಂದಲೇ ಆ ಕೆಟ್ಟ ದುರ್ವಾಸನೆ ಬರ್ತಾ ಇರೋದು ಅವನ ಕಾಲಿಗೆ ಕೊಳಕು ಮಂಡಲ(ಒಂದು ರೀತಿಯಹಾವು) ಕಚ್ಚಿಬಿಟ್ಟಿದೆ ಅದಕ್ಕೆ ಈ ವಾಸನೆ”ಎಂದರು ಬಹಳಷ್ಟು ಜನರು ವಾಸನೆ  ತಡಯಕಾಗ್ತಿಲ್ಲ ಅವನನ್ನು ಕೆಳಗಿಳಿಸಿ ಎಂದಾಗ ಅವನು ತಾನೇ ತಾನಾಗಿ ಮುಖಕ್ಕೆ ಟವಲ್ ಮುಚ್ಚಿಕೊಂಡು ಕೆಳಗೆಇಳಿದು ಬಿಟ್ಟ. ಅಬ್ಬಾ! ಎಷ್ಟೊಂದು ಅವಮಾನ ! ಎಷ್ಟು ತಿರಸ್ಕಾರ ! ನನಗಂತು ಆ ರೀತಿಯ ಹಾವಿನ ಕಡಿತದ ಬಗ್ಗೆ ಅದರ ಪರಿಣಾಮ ಏನೂ ಗೊತ್ತಿಲ್ಲ ಎಲ್ಲವೂ ಹೊಸದೇ  ಅದು ನಿಜ ಅಥವ ಸುಳ್ಳೇಎಂಬುದು ಸಹ ತಿಳಿದಿರಲಿಲ್ಲ  ಅವನಿಗೆ ಅಂಥ ಅವಮಾನ ಮಾಡಿ ನಿರ್ದಯಿಗಳಾದ ಕಟುಕರಂತೆ ಕೆಳಗೆ ಇಳಿಸಿದ್ದು ಮಾತ್ರ ಅಮಾನುಷ ಕೃತ್ಯ ಎನಿಸಿತು. ಅಂತಹದೊಂದು ಹೀನಾಯ ಕ್ರಿಯೆಗೆ ನಾನು ಮೂಕ ಪ್ರೇಕ್ಷಕಳಂತೆ ಇದ್ದದ್ದು ತುಂಬಾನೇ ಕೆಡುಕೆನಿಸಿತು. ಕೆಲವೊಮ್ಮೆ ಜನರು ಸಮೂಹ  ಸನ್ನಿಗೊಳಗಾದವರಂತೆ ವರ್ತಿಸುತ್ತಾರೆ ಅನಿಸಿತು.  ನಾನು ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಶಾಲೆಗೆ ಅಕ್ಕಪಕ್ಕ ಅಕ್ಕಪಕ್ಕದ ಗ್ರಾಮಗಳಿಂದ ಬರುವ  ವಿದ್ಯಾರ್ಥಿಗಳಿದ್ದರು. ಆಗ ಸರ್ಕಾರಿ ಬಸ್ ಗಳ ಸ್ಟಾಪ್ ಇರಲಿಲ್ಲ.ಖಾಸಗಿ ಬಸ್ಗಳೆ ನಮ್ಮಆಪತ್ಬಾಂಧವರು ಹತ್ತು ಗಂಟೆಗೆ ಸರಿಯಾಗಿ ನಾವು ಶಾಲೆಯಲ್ಲಿರ ಬೇಕಿತ್ತು. ಒಂಭತ್ತು ಗಂಟೆಗೆ ಹೊರಡುತ್ತಿದ್ದ  ಏಕೈಕ ಬಸ್ “ರಾಘವೇಂದ್ರ’ ನಮ್ಮನ್ನು ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ !  ಎಂಬಂತೆ ನಾವು ಅದನ್ನೇ ನಂಬಿದ್ದೆವು. ಪ್ರತಿಯೊಂದು ಸ್ಟಾಪನಲ್ಲೂ ನಮ್ಮವಿದ್ಯಾರ್ಥಿಗಳು ಹತ್ತುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ನಿಲ್ಲುವಷ್ಟು ಜಾಗ ಸಿಕ್ರೆ ಸಾಕು ಎಂದು ಬಸ ನಲ್ಲಿ  ತೂರಿ ಬಿಡುತ್ತಿದ್ದರು.ಆದ್ರೆ ನಮ್ಮ ಹುಡುಗ್ರು ಮಾತ್ರ ಬಸ್ ನಿಂತಾಕ್ಷಣ ಚಕ್ಕನೆ ಬಸ್ ಮೇಲೆ ಹತ್ತಿ ಕೂತುಬಿಡುತ್ತಿದ್ದರು  ಜಾಗ ಇಲ್ಲದಿದ್ದರೆ ಅವರು ತಾನೇ ಏನು ಮಾಡಿಯಾರು! ಆ ಬಸ್ ಬಿಟ್ಟರೇ ನಮಗೆ ಬೇರೆ ಬಸ್ ಇಲ್ಲ. ಹುಡುಗರು ಬಸ್ ಮೇಲೆ ಹತ್ತುವಾಗ ಸುಮ್ಮನಿರುತ್ತಿದ್ದ ಕಂಡಕ್ಟರಪ್ನ ಅವರೆಲ್ಲ ಇಳಿಯುವಾಗ ಅವರನ್ನು ಬೈಯುತ್ತಾ”ಇದೇ ಏನ್ರೋ ನೀವು ಸ್ಕೂಲಲ್ಲಿ ಕಲಿಯೋದು?” ಪರೋಕ್ಷವಾಗಿ ನಮ್ಮ ಮೇಲೆ ಆರೋಪ ಹೊರಿಸಿ ಕೂಗಾಡುತ್ತಿದ್ದ. ಆಗೆಲ್ಲ ಬೇಸರವಾದರೂ ಸಹ ನಮ್ಮ ಮಕ್ಕಳದೇ ತಪ್ಪಾಗಿರುತ್ತಿದ್ದ ಕಾರಣ ನಾವೂ ಸುಮ್ಮನಿರುತ್ತಿದ್ದೆವು. ದಿನಾ ಅದೇ ರಾಗ ಆಗಿದ್ದರಿಂದ ನಾವು ನಮ್ಮ ಮಕ್ಕಳು ಮೊಂಡು ಬಿದ್ದಿದ್ದೆವು ದಿನದಲ್ಲಿ ಎಂಟು ಗಂಟೆ ಮಾತ್ರ ಮಕ್ಕಳು ಶಿಕ್ಷಕರೊಂದಿಗೆ ಇರುತ್ತಾರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಹಿರಿದೆಂಬುದರಲ್ಲಿ ಎರಡು ಮಾತಿಲ್ಲ. ಅದರೂ  ಮಕ್ಕಳ ಬದುಕಿನಲ್ಲಿ ತಂದೆತಾಯಿಗಳ ಪಾತ್ರವೇನೂ ಇಲ್ಲ ಎಂಬಂತೆ ಆಡುವ ಮಾತುಗಳನ್ನು ಕೇಳಿದಾಗ  ಶಿಕ್ಷಕರಿಗೆ ಬೇಸರವಾಗುವುದು ಸಹಜವೇ ಆಗಿದೆ. ಒಮ್ಮೊಮ್ಮೆ ವಿಚಿತ್ರವಾದರೂ ನಿಜವೆನಿಸುವಂಥ ಅನೇಕ ಪ್ರಸಂಗಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತೇವೆ. ಶಿಕ್ಷಕರೆ ಹೆಚ್ಚು ಹೋಗುವ

ಬಸ್ ಪಯಣ Read Post »

You cannot copy content of this page

Scroll to Top