ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ

ಪುಸ್ತಕ ಸಂಗಾತಿ ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ ಸದ್ದುಗದ್ದಲವಿಲ್ಲದೆ ಈಗಾಗಲೇ ಸಾಕಷ್ಟು ಕೃತಿಗಳನ್ನು ಬರೆದೂ ಸಾಹಿತ್ಯದ ಜನಜಂಗುಳಿಯಿಂದ ದೂರವೇ ಇದ್ದು, ತನ್ನ ಪಾಡಿಗೆ ತಾನು ಬರೆಯುವುದರಲ್ಲಿಯೇ ಸುಖ ಕಾಣುವ ಕಣಿವೆ ಭಾರದ್ವಾಜ ಕೊಡಗಿನ ಕುಶಾಲನಗರದವರು. ಅವರ ಬರೆಯುವ ಓಘ ನಿಜಕ್ಕೂ ನನ್ನನ್ನು ಚಕಿತಳನ್ನಾಗಿಸುತ್ತದೆ. ಈ ಕೊರೋನೋ ಲಾಕ್ ಡೌನ್ ಸಮಯದ ಕೆಲವೇ ತಿಂಗಳುಗಳಲ್ಲಿ ವಿಭಿನ್ನ ಕಥಾ ಹಂದರದ ಎರಡು ಕಾದಂಬರಿಗಳನ್ನು ನಮ್ಮ ಮುಂದೆ ತಂದು ಇಟ್ಟಿದ್ದಾರೆ. ಅವರ ಕಥನ ಕುಶಲತೆಗೆ ಶರಣೆನ್ನುತ್ತಾ, ಈಗಷ್ಟೇ ಓದಿ ಮುಗಿಸಿದ             ‘ ಸಂದಾಯಿಯ ’ ಕುರಿತು ಹೇಳದಿದ್ದರೆ ನನ್ನ ಓದು ಅಪೂರ್ಣ ಅನ್ನಿಸುತ್ತದೆ.   ಮುಖ್ಯವಾಗಿ ‘ ಸಂದಾಯಿ ‘ ಮೇಲ್ನೋಟಕ್ಕೆ ಒಂದು ರಾಜಕೀಯ ಚಿತ್ರಣವನ್ನು ಕಟ್ಟಿಕೊಡುವಂತೆ ಭಾಸವಾದರೂ ಅದರೊಳಗೆ ಸಾಮನ್ಯರ ಬದುಕಿನ ಒಳತೋಟಿಗಳನ್ನ ಆ ಮೂಲಕ ಸಶಕ್ತವಾಗಿ ಕಟ್ಟಿಕೊಡುವಲ್ಲಿ ಲೇಖಕರು ಸಫಲರಾಗಿದ್ದಾರೆ. ಬದುಕಲು ಮಾಡಬೇಕಾದ ಯಾವುದೇ ಕೆಲಸ ಆಗಲಿ ಅಲ್ಲಿ  ನಿಷ್ಠೆ ಅನ್ನುವಂತದ್ದು ಬಲು ಮುಖ್ಯ ಅನ್ನುವಂತದ್ದನ್ನ ಇಲ್ಲಿಯ ಕಾದಂಬರಿಯ ಪಾತ್ರಗಳು ಪ್ರಾಮಾಣೀಕರಿಸುತ್ತವೆ. ಹಣ ಯಾವೊತ್ತೂ ಇಲ್ಲಿ ಮುಖ್ಯ ಅನ್ನಿಸುವುದಿಲ್ಲ. ನಂಬಿಕೆ ಮತ್ತು ನಿಷ್ಠೆಯೊಳಗೆ ಹೇಗೆ ಬದುಕಿನಲ್ಲಿ ತೃಪ್ತಿ ಕಾಣಬಹುದು ಅನ್ನುವಂತದ್ದು ಒಂದು ಕಡೆಯಾದರೆ, ಅದೇ ನಂಬಿಕೆ ಮತ್ತು ನಿಷ್ಠೆಗೆ ಹೇಗೆ ತನ್ನ ಬದುಕನ್ನು ಗಂಧದAತೆ ತೇಯಬೇಕು, ಜೀವ ಪಣಕ್ಕಿಟ್ಟು ಸವಾಲುಗಳನ್ನು ಎದುರಿಸ ಬೇಕೆಂಬುದು ನಿಚ್ಚಳವಾಗುತ್ತದೆ. ಇದಕ್ಕೆ ಇಲ್ಲಿನ ಯಾವ ಪಾತ್ರಗಳೂ ಹೊರತಲ್ಲ. ಅದರಲ್ಲೂ ಮುಖ್ಯವಾಗಿ ಭದ್ರಪ್ಪ ಮತ್ತು ಕುಬೇರ.   ತನ್ನ ಬದುಕಿಡೀ ಅಕ್ಕಿ ಗಿರಣಿಯಲ್ಲಿಯೇ ಕಳೆದರೂ, ಅಲ್ಲಿ ಸಿಗುವ ೪-೫ ಕೆ,ಜಿ ಅಕ್ಕಿಯಲ್ಲಷ್ಟೇ ನೆಮ್ಮದಿಯನ್ನು ಕಾಣುವ ಮುಗ್ಧ ಮನಸು ಭದ್ರಪ್ಪನದ್ದಾದರೂ ಅವನ ಪೆದ್ದು ತನವನ್ನು  ಧಣಿಗಳು ಎಲ್ಲೂ ದುರುಪಯೋಗ ಮಾಡಿಕೊಳ್ಳಲಿಲ್ಲವೆಂಬುದು ಶೋಷಣೆ ರಹಿತ ಸಮಾಜದ, ವ್ಯವಸ್ಥೆಯ ಕುರಿತು ಆಶಾಭಾವನೆಯನ್ನು ಹೊಂದುವಂತೆ ಮಾಡುತ್ತದೆ.  ಯಾಕೆಂದರೆ ಭೋಳೆ ಸ್ವಭಾವದ ಭದ್ರಪ್ಪನ ಸಂಬಳದಲ್ಲಿ ಒಂದಷ್ಟು ಎತ್ತಿಟ್ಟು, ಅದರಲ್ಲೇ ಅವನ ಮಗಳ ಮದುವೆಗೆ ಬೇಕಾದ ಚಿನ್ನಬಣ್ಣದ ವ್ಯವಸ್ಥೆಯನ್ನು ಮಾಡುವುದು.  ತಾನೇನೂ ಹೆಚ್ಚಿಗೆ ಕೊಡುವುದಲ್ಲ, ನಿಮ್ಮದೇ  ದುಡಿದ ಹಣ ಅಂತ ಹೇಳುವ ಮಾಲಿಕ ರಮೇಶ್ ಗೌಡರ ಔದಾರ್ಯ ಕೂಡ  ಅಷ್ಟೇ ದೊಡ್ಡದ್ದು.  ಇತ್ತ ಮಗ ಕುಬೇರನ ಬದುಕಿನ ಕಡೆಗೆ ಬಂದರೆ ಆಕಸ್ಮಿಕ ಆಕ್ಸಿಡೇಂಟ್ ಗೆ ತುತ್ತಾದ  ಸದಾಶಿವ ಅವರನ್ನು ಆಸ್ಪತ್ರೆಗೆ ಸಾಗಿಸಿ ಅವರನ್ನು ಬದುಕಿಸಿದ ಮೇಲೆ , ಕುಬೇರನ ಹೆಸರಿಗೆ ಅನ್ವರ್ಥಕದಂತೆ ಅವನ ಬದುಕು ತೆರೆದುಕೊಂಡದ್ದು ಮತ್ತೊಂದು ಅಚ್ಚರಿ.   ಈ ಮೇಲಿನ ಎರಡೂ ಸಂದರ್ಭಗಳಲ್ಲಿ ಹೆಂಡತಿಯರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅವರ ಒಳಿತಿಗಾಗಿ ಶ್ರಮಿಸುವುದು, ಈ ಮೂಲಕ ಈ ಕಾದಂಬರಿಯಲ್ಲಿ ಹೆಣ್ಣು ಕೂಡ ಮುಖ್ಯ ಭೂಮಿಕೆಯಲ್ಲಿ ಇರುವುದು ಮಹಿಳಾ ಸ್ವಾತಂತ್ರವೆಂಬುದು ನಿಜಕ್ಕೂ ಇದೆ ಅನ್ನುವ ಸಮಾಧಾನದ ಉಸಿರೊಂದು ಹೊಮ್ಮಿ ಬಿಡುತ್ತದೆ. ಇಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಬೆಸೆದು ಕೊಂಡೇ ಇದೆ.  ಯಾರು ಯಾರ ಸ್ವಾತಂತ್ರ÷್ಯವನ್ನು ಕಸಿದು ಕೊಳ್ಳುವುದಾಗಲಿ, ದಬ್ಭಾಳಿಕೆ ಮಾಡುವುದಾಗಲಿ , ಸವಾರಿ ಮಾಡುವುದಾಗಲಿ ತೋರಿ ಬರುವುದಿಲ್ಲ. ಒಮ್ಮೆ ನಂಬಿದರೆ ಮುಗಿಯಿತು, ಮತ್ತೆ ನಂಬಿಕೆಯನ್ನು ಉಳಿಸಿಕೊಳ್ಳಲೇ ಇಲ್ಲಿಯ ಪಾತ್ರಗಳು ಬದುಕುವುದು. ಇಷ್ಟೆಲ್ಲದರ ನಡುವೆಯೂ ಈ ಕಾದಂಬರಿ ಏನು ಹೇಳ ಹೊರಟಿದೆ ಅನ್ನುವಂತ ಗೊಂದಲ  ಸಣ್ಣ ಮಟ್ಟಿಗೆ ನನ್ನ ಕಾಡಿದ್ದು ಸುಳ್ಳಲ್ಲ.   ಈ ನಡುವಿನಲ್ಲಿ ಕುಬೇರನಿಗೆ ಒಂದು ಪ್ರಶ್ನೆ ಹುಟ್ಟುತ್ತದೆ, ಅಪಘಾತಕ್ಕೀಡಾದ ಚಿಕ್ಕ ಯಜಮಾನ ಸದಾಶಿವರು ಯಾಕೆ ಪೈಸಾರಿ ಗುಡ್ಡಕ್ಕೆ ಬಂದರು ಅನ್ನುವಂತದ್ದು. ಇದೊಂದು ಕುತೂಹಲ ಓದುಗನ ಎದೆಯೊಳಗೆ ತಣಿಯದೆ ಹಾಗೇ ಉಳಿದುಕೊಳ್ಳುತ್ತದೆ. ಕುಬೇರನ ಮಾತಿನಲ್ಲಿ ಸದಾಶಿವರಾಯರ ಇಡೀ ಕುಟುಂಬದ ಚಿತ್ರಣವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಆ ಮನೆಯೊಳಗಿನ ಎಲ್ಲಾ ಮನುಷ್ಯರೂ ಮೇಲ್ನೋಟಕ್ಕೆ ಸುಖಿಗಳು ಮತ್ತು ಎಲ್ಲವರೂ ಒಳ್ಳೆಯವರೆ.  ತಮ್ಮ ತಮ್ಮ ಕೆಲಸಕ್ಕೆ ಬದ್ಧರಾಗುವ, ಬದುಕನ್ನು ಯಶಸ್ವಿಗೊಳಿಸುವುದರಲ್ಲಿ ನಿಸ್ಸೀಮರು. ಆದರೆ ಆಳದಲ್ಲಿ ಎಲ್ಲರೂ ಒಂಟಿಗಳು ಮತ್ತು ಅಸುಖಿಗಳು. ಆ ಪಾಡು ಯಾರಿಗೂ ಬೇಡ ಅನ್ನುವಂತದ್ದು. ಬಹುಶ: ಇದು ಸದಾಶಿವ ಅವರ  ಕುಟುಂಬದ ಕತೆ ಮಾತ್ರ ಅಲ್ಲ, ಬದುಕುವ ಎಲ್ಲಾ ಜೀವಿಗಳ ತಹತಹಿಕೆಯಂತಿದೆ.   ಈ ಕಾದಂಬರಿಯಲ್ಲಿಮೆಚ್ಚಿಕೊಳ್ಳುವ ಪ್ರಮುಖ ಅಂಶ, ಸಮನ್ವಯತೆ ಮತ್ತು ಸಮಾನತೆ ಮತ್ತು ಬಡತನವನ್ನು ಮೆಟ್ಟಿನಿಲ್ಲುವ ಛಲಗಾರಿಕೆ.  ಸದಾಶಿವ ಅವರಿಗೆ ಮೊದಲೇ ಕ್ರಿಶ್ಚಿಯನ್ ಹೆಣ್ಣು ಮಗಳೊಬ್ಬಳ ಜೊತೆ ಮದುವೆಯಾಗಿರುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಭವಾನಿಯವರೊಂದಿಗೆ ಮದುವೆಯಾಗುತ್ತದೆ. ಒಳಗೊಳಗೆ ಹೆಣ್ಣೊಬ್ಬಳು ಅನುಭವಿಸ ಬಹುದಾದ ಸಂಕಟಗಳನ್ನು ಭವಾನಿ ಅನುಭವಿಸಿದರೂ, ಇಲ್ಲಿ ಯಾರೂ ಯಾರಿಗೂ ಮೋಸ ಮಾಡುವುದಿಲ್ಲ, ತೊಂದರೆ ಕೊಡುವುದಿಲ್ಲ. ಯಾವ ಸಂಸಾರಕ್ಕೂ ಅಡ್ಡಗಾಲಗದಂತ, ಎಲ್ಲೆ ಮೀರದ, ನೈತಿಕ ಚೌಕಟ್ಟಿನೊಳಗೇ ಇರುವಂತಹ ಸಾಂಸಾರಿಕ ಚಿತ್ರಣವನ್ನು  ಲೇಖಕರು ಕಟ್ಟಿಕೊಡುತ್ತಾರೆ.  ಸದಾಶಿವರ ಮೊದಲ ಹೆಂಡತಿಗೆ ಅಪ್ಪ ತೋಟ, ಮನೆ ಮಾಡಿಕೊಟ್ಟರೂ ಆಕೆ ಅದೇ ಋಣದಲ್ಲಿ ಇರಬಯಸದೆ, ಅದಲ್ಲೆವನ್ನು ಭವಾನಿಗೆ ಒಪ್ಪಿಸಿ, ಎಲ್ಲರಿಂದಲೂ ದೂರ ಆಗಿ ಬೇರೆಯದೇ ರಾಜ್ಯಕ್ಕೆ ಹೋಗಿ ನೆಲೆ ನಿಂತು ಬಿಡುತ್ತಾಳೆ. ಸದಾಶಿವ ಚುನಾವಣೆಗೆ ನಿಂತಂತಹ ಸಂದರ್ಭದಲ್ಲಿ, ಅವರ ಎರಡು ಮದುವೆಯ ಕುರಿತು ಗುಲ್ಲಾದಾಗ ಮೊದಲನೆ ಹೆಂಡತಿ ತಾನೇ ಎದುರು ನಿಂತು ವಾತವರಣವನ್ನು ತಿಳಿಗೊಳಿಸಿ, ಭವಾನಿಯೇ ಅವರ ಪತ್ನಿ ಎಂಬುದನ್ನು ಸಾಬೀತು ಪಡಿಸಿದ್ದು ಎಲ್ಲವೂ ಉದ್ಧಾತ ಗುಣಗಳೇ.   ಕಾದಂಬರಿಯ ಕೊನೇಯಲ್ಲಿ, ಸದಾಶಿವರವರ ಮಗಳು ದಿವ್ಯ, ಸಾಬರ ಹುಡುಗರನ್ನು ಪ್ರೀತಿಸುವುದು, ಮಗಳು ಅಪ್ಪನಂತೆ ಆದಳೆಂದು ಭವಾನಿ ಮರಗುವುದು, ಮೇಲ್ನೋಟಕ್ಕೆ ಸದಾಶಿವರವರು ಮಗಳ ಈ ಸಂಬAಧಕ್ಕೆ ಒಪ್ಪಿಗೆ ಮುದ್ರೆ ಕೊಟ್ಟಂತೆ ಅನ್ನಿಸುವುದು ಅವರ ನಿಜದ ಮನಸೋ , ರಾಜಕೀಯದ ಮತ್ತೊಂದು ಮುಖವೋ ಅನ್ನುವುದು ಕಾದಂಬರಿ ಅಂತ್ಯದಲ್ಲಿ ಸಣ್ಣ ಅನುಮಾನವೊಂದನ್ನ ಹುಟ್ಟಿ ಕಾಕಿ ಬಿಡುತ್ತದೆ.  ಭವಾನಿಯವರ ನಿರಾಕರಣೆ ಇರುವುದು, ಜಾತಿ ಧರ್ಮಕ್ಕಿಂತಲ್ಲೂ ಮಿಗಿಲಾಗಿ ಜನ ಈ ಸಂಬಂಧವನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಅವರಿಗೆ ಸಹಜವಾಗಿ ಎಲ್ಲರಂತೆ ಬದುಕಲು ಸಾಧ್ಯವಾ?  ಅನ್ನುವಂತದ್ದು.  ಕುಬೇರ ಭವಾನಿಯವರನ್ನು ಸಮಾಧಾನ ಪಡಿಸಿದಂತೆ ಈ ಮದುವೆಯನ್ನು ತಪ್ಪಿಸಲು ಪಣ ತೊಡುತ್ತಾನೆ. ಅಜಂಖಾನ್ ನ ಮುಗಿಸಲು ಬೇರೆಯೇ ರೀತಿಯಲ್ಲಿ ಹವಣಿಸುತ್ತಾನೆ. ಆದರೆ ಕುಬೇರನ ವ್ಯಕ್ತಿತ್ವ ಇದಕ್ಕೆ ಒಪುö್ಪವಂತದ್ದಲ್ಲ ಅನ್ನುವ ಒಂದು ಅಸಮಾಧಾನ, ಅಸಹನೆ ಓದುಗನ ಎದೆಯೊಳಗೆ ಹುಟ್ಟಿಕೊಳ್ಳುತ್ತದೆ. ಆದರೆ ಅವನ ಮನಸ್ಥಿತಿ ಅಂತದ್ದಕ್ಕೆ ಒಪುö್ಪವುದಿಲ್ಲ ಅನ್ನುವುದಕ್ಕೆ ಅವನೊಳಗೆ ಉಂಟಾದ ಒಂದು ಮಾನಸಿಕ ಕ್ಷೋಭೆಯಿಂದ ಇದು ವ್ಯಕ್ತವಾಗುತ್ತದೆ. ಕೊನೇಗೆ ಅಜಂಖಾನ್, ಕುಬೇರನ ಇಚ್ಚೆಯಂತೆಯೇ ಆಕಸ್ಮಿಕವಾಗಿ ಅಪಘಾತದಲ್ಲಿ ಮರಣವನ್ನಪ್ಪುತ್ತಾನೆ.. ಜನ ಅಪಘಾತ ಮರಣ ಅಂತ ಶರ ಬರೆಯುತ್ತಾರೆ. ಇದು ಸಹಜ ಸಾವಲ್ಲ ಅಂತ ದಿವ್ಯ ಅಮ್ಮನ ಮೇಲೇ ರೇಗಾಡುತ್ತಾಳೆ. ಅಪ್ಪ ಸದಾಶಿವ ಅದೇ ಸಮಯದಲ್ಲಿ ಕೆಲಸದ ಮೇಲೆ ನಾಕು ದಿನದ ಮಟ್ಟಿಗೆ ದೆಹಲಿಯಲ್ಲಿಯೇ ಉಳಿಯುತ್ತಾನೆ.  ಈ ಸಂಗತಿ ಅನೇಕ ಪ್ರಶ್ನೆಗಳನ್ನು ಬಿಟ್ಟು ಕೊಟ್ಟರೂ ಬಿಡದಂತೆ ನಮ್ಮನ್ನು ಕಾಡುತ್ತದೆ. ಆದರೆ ಮಾನಸಿಕವಾಗಿ ಕುಬೇರ ಕೊಲೆಗಾರನ ಪಟ್ಟವನ್ನು ಹೊರುವ ಒಂದು ಮಾನಸಿಕ ವೇದನೆಯ ಮುಳ್ಳು ನಮ್ಮ ಎದೆಯೊಳಗೂ ಛಳ್ಳೆಂದು ಹಾದು ಹೋಗುತ್ತದೆ. ದೇವರು ಉದರದಿಂದ ಮಾತ್ರ ಸಂಬಂಧಗಳನ್ನು ಸೃಷ್ಟಿ ಮಾಡುವುದಿಲ್ಲ, ಆಕಸ್ಮಿಕಗಳಿಂದನೂ ಸಂಬಂಧಗಳನ್ನು ಸೃಷ್ಟಿ ಮಾಡುತ್ತಾನೆ ಅಂತ ಭಾವಿಸಿಕೊಂಡಿದ್ದ  ಕುಬೇರ , ಅಂತೆಯೇ ಬದುಕಿದ್ದ ಕೂಡ. ಇಲ್ಲದಿದ್ದರೆ, ಜೋಗಿ ಗುಡ್ಡದ ಪೈಸಾರಿಯ ಬರೇ ಡಿಗ್ರಿ ಓದಿಕೊಂಡ ಹುಡುಗನಿಗೆ ಇಷ್ಟೆಲ್ಲಾ ಬದುಕಿನ ತಿರುವುಗಳಿಗೆ ಒಡ್ಡಿಕೊಳ್ಳಲು ಸಾಧ್ಯವಿತ್ತೇ?  ಸಹಜವಾಗಿ ಓದಿಸಿಕೊಂಡು ಹೋಗುವ ಇಲ್ಲಿಯ ಕಾದಂಬರಿಯ ಪಾತ್ರಗಳು ಭಾರದ್ವಾಜರ ಹೆಚ್ಚಿನ ಕಾದಂಬರಿಗಳಂತೆ ಇದುವೂ ಹೆಚ್ಚು ಮಾತನಾಡದೆ ಹೇಳ ಬೇಕಾದನ್ನಷ್ಟೇ ಹೇಳಿ ಮುಗಿಸುತ್ತದೆ.  ಒಂದು ಘಟನೆಯ ಚಿತ್ರಣವನ್ನಷ್ಟೇ ನಮ್ಮ ಮುಂದೆ ತಂದು ನಿಲ್ಲಿಸುತ್ತಾರೆ. ನಮ್ಮ ಮನಸಿನೊಳಗೆ ಅದಕ್ಕೆ ನೂರೆಂಟು ಬಣ್ಣಗಳು ತುಂಬಿ ಕೊಳ್ಳುತ್ತಾ ಹೋಗುತ್ತವೆ.  ‘ಸಂದಾಯಿ’ ಯೆಂಬ ಒಳ್ಳೆಯು ಕಾದಂಬರಿಗಾಗಿ  ಕಣಿವೆ ಭಾರದ್ವಾಜರವರಿಗೆ ಅಭಿನಂದನೆಗಳು.  ಕನ್ನಡ ಸಾರಸ್ವತ ಲೋಕ ಈ ಕಾದಂಬರಿಯನ್ನು ಮೆಚ್ಚಿಕೊಳ್ಳುತ್ತದೆ ಎನ್ನುವ ಭರವಸೆಯಿದೆ. *****************************************   –ಸ್ಮಿತಾ ಅಮೃತರಾಜ್. ಸಂಪಾಜೆ

ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ Read Post »

ಇತರೆ, ಲಹರಿ

ನಾದಬೇಕು …ನಾದ ಬೇಕು !!

ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ

ನಾದಬೇಕು …ನಾದ ಬೇಕು !! Read Post »

ಇತರೆ, ಪ್ರಬಂಧ

ಒಕ್ಕಲುತನ

ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು.

ಒಕ್ಕಲುತನ Read Post »

You cannot copy content of this page

Scroll to Top