ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ಸ್ಮಿತಾ ಅಮೃತರಾಜ್ ಇಂಗ್ಲೀಷಿಗೆ: ಸಮತಾ ಆರ್. ಹಸಿ ಮಣ್ಣ ಧ್ಯಾನ. ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂದುರ್ಬೀನು ಧರಿಸಿ ಹಸಿ ಮಣ್ಣ ಅರಸಿಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರುಫೌಂಡೇಶನ್ ಕ್ರೀಂ ಹಚ್ಚುವಂತೆ. ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆಎಷ್ಟು ಚಂದದ ಮಿರುಗು ಬಣ್ಣದ ಲೇಪ. ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯುಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆಚಿತ್ರಕ್ಕೆ ಬಣ್ಣ ತುಂಬುವ ಪಾಠಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ. ತಲೆಯೆತ್ತಿದೆ ವಿಶಾಲ ಸಭಾಂಗಣತೇವದ ಗುರುತೇ ಸಿಗದಂತೆ,ಕೆರೆಯ ಸಮಾಧಿಯ ಮೇಲೆ.ನಡೆಸುತ್ತಿದ್ದಾರೆ ಹಿರಿಯರುಶುಷ್ಕ ಸಮಾಲೋಚನೆ ಒಳಗೆ. ಮೋಡ ಬಿತ್ತನೆ, ನದಿ ತಿರುವುಗಹನ ಚರ್ಚೆಯ ಕಾವುಎಸಿಯ ಒಳಗೂ ಸುರಿವ ಬೆವರುಸೈ ಎನ್ನಲಾಗದ ತೀರ್ಮಾನಕ್ಕೆಮುಂದೂಡಲಾಗಿದೆ ಸಭೆ ನಾಳೆಗೂ. ಎಲ್ಲಿಂದಲೋ ತೂರಿಬಂದ ಹಿಡಿ ಬೀಜವೀಗಕಾದ ಟಾರು ರಸ್ತೆಯ ಮೇಲೆ ಬಿದ್ದುಪಟಪಟನೆ ಸಿಡಿದೇಳುತ್ತಿವೆತಾಳ್ಮೆಗೆಟ್ಟು. ಸಾವಿಗೆ ಸೆಡ್ಡುಹೊಡೆದ ದೈತ್ಯ ಮಹಲುಗಳುದಿಟ್ಟಿಸುವಾಗ ಬಿಡುಗಣ್ಣಿನಿಂದನಾನಿಲ್ಲಿ ಧ್ಯಾನಿಸುತ್ತಿರುವೆತೊಂಡೆ, ಬೆಂಡೆ ,ಬಸಳೆಬೇರು ಸೋಕುವ ಹಸಿ ಮಣ್ಣ. ನಾನೀಗ ಉಮೇದಿಗೆ ಬಿದ್ದಿದ್ದೇನೆಹಸಿಮಣ್ಣು ಹಂಚುವುದಕ್ಕಾಗಿಇಲ್ಲಿಯ ಮಣ್ಣು ಅಲ್ಲಿಯ ಸಸಿಬೇರಿಳಿಸಿ ಬಿಟ್ಟ ಉಸಿರು.. ಪವಡಿಸಲಿ ಜಗದ ಜಗುಲಿಯಲ್ಲಿಪ್ರಭುವೇ. —- A yearning for some wet soil. Holding the binoculars,Everyone is competing hard,To search for a fistful of wet soil. Worshipping the spadeWork is inaugurated,As a foundation creamRoads are smeared with coal tar. Pain is not easily empathised now,How nice to overlayThese fidgeting dust particles,Who want to fly away,with glistening hues. The breath gets transformedWhile gasping for air in the hot sun.Here kids are taught to fill colours to the sketches ,sitting under a fan. .A capacious auditorium is erectedWithout the traces of any moistureOn the grave of a vast lake.Leaders are busy insideWith their dry speeches. Deep discussions on“Cloud seeding,linking rivers”Are heating up the air,Sweating even inside an ac room,When Conclusions are hard to findThe meeting is carried overDay after day.. A handful of seeds came flyingFrom nowhere and fell on theHot tar road,and unable to bearExploding aloud. When the immortal giant mansionsAre staring with eyes wide open,I am yearning for some fresh wet soilTo root my greens,gourds and creepers. One of my apartment friendsCalled me up forAn urgent supply ofSome fresh wet soil,For a potted Tulasi plant. Now I am all eagerTo distribute the wet soil.Soil from here ,will root deepThe plant over thereand let the breath out.. And let the Lord restOn the stage of the world. *******************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಬೆವರು ಹಾಗೂ ಹೆಣ್ಣು Read Post »

ಕಾವ್ಯಯಾನ

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ ಪ್ರೀತಿಸುವುದ ಕಲಿಸೋಣಪಿಸುಮಾತು ಎದೆಯೊಳಗೆನುಡಿಗಟ್ಟು ಕಣ್ಣೊಳಗೆಹಾಡಾಗುವ ಗುಟ್ಟನಲಿಸಿ ಕಲಿಸೋಣ ಪ್ರೀತಿ ಎಂಬುದು ಹಿಗ್ಗುಬದುಕು ಎಂಬುದು ಸುಗ್ಗಿಹೋರಾಡಿ ಪಡೆದ ಸುಖವುಕೊನೆತನಕ ಎಂಬ ಗುಟ್ಟಕಲಿಸೋಣ ಹಣೆಗೆ ಹಣೆ ಹಚ್ಚಿ ಪ್ರೀತಿಸೋಣಕೊನೆಯಿರದ ಬದುಕಿನ ಹಾಡ ಹಾಡೋಣಕೊನೆಯಿರದ ಬದುಕಿನ ಪ್ರೀತಿ ಕಲಿಸೋಣ**************************

ಹಣೆಗೆ ಹಣೆ ಹಚ್ಚಿ Read Post »

ಕಾವ್ಯಯಾನ

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ ಆಡು ಕುರಿ ಕೋಳಿಗಳನಡುವೆ ಹಿಟ್ಟು ನಾದಿ ಮೊಟ್ಟೆಯಾಕಾರದಲ್ಲಿ ಲಟ್ಟಿಸಿಬೆಂಕಿಯಲ್ಲಿಅಹಿಂಸಾ… ಅಹಿಂಸಾ… ಎಂದುಚೀರುತ್ತಲೇ ಸುಟ್ಟ ರೊಟ್ಟಿಯಂತಹ ಹೃದಯ ಹೊತ್ತು ಒಣಕಲು ರೊಟ್ಟಿಯಂತಹ ದೇಹದ ದಂಟು ಕೈ ಕಾಲುಗಳಲ್ಲಿ ಹಾರು ನಡಿಗೆಯಲ್ಲಿ ಓಡುತ್ತಿದ್ದಾನೆಕಡಲ ತಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕುಳಿತವನ ಹೃದಯಬಾಯ್ಬಾಯ್ ಬಿಡುತ್ತಿರುವ ಬಂಗುಡೆ ಮೀನಿನ ಮೈಗೆ ಉಪ್ಪು ಖಾರ ಹಚ್ಚಿದಂತೆ ಬೇಯುತ್ತ ಚೀರುತ್ತಿದೆ ಕೃತ ತ್ರೇತಾ ದ್ವಾಪರ ಕಲಿ ಕಾಲಗಳುಯುದ್ಧ ಕೊಲೆ ರಕ್ತಪಾತದಲ್ಲಿ ನೆಂದುಪೂವ೯ದಲ್ಲಿ ಮೂಡಿದ ಸೂಯ೯ನನ್ನೇ ನುಂಗಿ ಪಶ್ಚಿಮಕ್ಕೆ ಉಗುಳುತ್ತಿವೆನೀಲಿ ಆಗಸದಲ್ಲಿ ನೀಲಿ ಕಡಲಲ್ಲಿಕೆಂಪು ಬಟ್ಟೆಯ ಹೆಣಗಳ ರಾಶಿತೇಲುತ್ತಿವೆಕೈಗಳನ್ನು ಚಾಚುತ್ತ ಅಹಿಂಸೆ ಅಹಿಂಸೆ… ಹೇ ರಾಮ್ ಹೇ ರಾಮ್ ಎಂದು ಚೀರುತ್ತಲೇ ಇವೆ ಅಡ್ಡೆ ಹೊತ್ತ ತಾತ ನಡೆಯುತ್ತಲೇ ಇದ್ದಾನೆಅವನ ಎದೆಯೊಳಗಿನ ಅಹಿಂಸೆಯಬೆಂಕಿಯ ಬೇಗೆ ಸಹಿಸಲಾಗದೆಫರಂಗಿಗಳು ಹೊರಗೆ ಓಡಿ ಹೋಗಿದ್ದಾರೆ…ಗೋಡ್ಸೆ ಕೋವಿ ಸಹಿತ ಒಳ ನುಗ್ಗಿದ್ದಾನೆಹೇ ರಾಮ್….! ಕಣ್ಣು ಮುಚ್ಚಿದಾಗೆಲ್ಲಎವೆಗಳ ಪರದೆಯ ಒಳಗೆಬಿಳಿ ಕಚ್ಚೆಯ ಸಣಕಲು ಕಪ್ಪು ಮೈಯ ಆತ ಬೀಸ ಬೀಸಓಡು ನಡಿಗೆಯಲ್ಲಿ ನಡೆಯುತ್ತಲೇ ಇರುತ್ತಾನೆಮೆದುಳಿನಿಂದ ಹೃದಯಕ್ಕೆಹೃದಯದಿಂದ ಮೆದುಳಿಗೆಬೆಳಕು ಹೊತ್ತ ಮಿಣುಕು ಹುಳದಂತೆ ಇಡೀ ಲೋಕದ ಹೃದಯ ಹೊಕ್ಕುಅಲ್ಲಿಂದ ಮೆದುಳಿಗೇರುತ್ತ ಇಳಿಯುತ್ತ ಏರುತ್ತ ಇಳಿಯುತ್ತನಡೆಯುವ ಮೊದಲುಆತ ತನ್ನೊಳಗೆೇ ಕವುಚಿ ಬಿದ್ದು ಹೊಟ್ಟೆ ಎಳೆದು ಅಂಬೆ ಹರಿದುಕುಳಿತು ನಿಂತು ಬಿದ್ದು ಎದ್ದುನಡಿಗೆ ಕಲಿತಿದ್ದನಂತೆಅದನ್ನು ನೋಡಲೆಂದು ಅವನೊಳಗೇಸೂಯ೯ ಮೂಡಿದ್ದನಂತೆ ಬೆಳಕು ಕೋಲನು ಊರಿಕತ್ತಲ ಕೋಲ್ಮಿಂಚಂತೆಬೀಸ ಬೀಸ ನಡೆಯುವ ಈ ಅಜ್ಜಅಜ್ಜನಲ್ಲ… ಗಲ್ಲದಲ್ಲಿ ಮೊಲೆಹಾಲುಕ್ಕಿಸುತಬೊಚ್ಚು ಬಾಯಲ್ಲಿ ನಗುವ ಮಗುಎದೆ ಎದೆಗಳಲ್ಲಿ ಹರಿಯುವ ಶಾಂತಿಗೊಂದು ರೂಪ ಕೊಟ್ಟು ನೋಡಿರಿ…ಅವ ಗಾಂಧಿ ಮನೆ ಮನೆಯಲ್ಲೂ ಗಾಂಧಿಯುಹುಟ್ಟುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಮುದ್ದು ಮುದ್ದಾಗಿ ನಗುತ್ತಮನೆ ಮನೆಯಲ್ಲೂ ಗಾಂಧಿ ಸಾಯುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಹೇರಾo ಎನ್ನುತ್ತಗೋಡ್ಸೆಯ ಗೋಡೆ ಗೋಡೆಗಳ ನಡುವೆ ಹಿಂಸೆಯ ಗೋಲಿಗಳಿಗೆ ಎದೆಯೊಡ್ಡಿ… ಇವನನ್ನು ಕ್ಷಮಿಸು ಎಂದು ಯೇಸು ವಾಗುತ್ತಅಂಗುಲೀ ಮಾಲನ ಕಂಬನಿಯಲ್ಲಿ ತೊಯ್ದ ಬುದ್ಧನಾಗುತ್ತ ***********************

ಗಾಂಧಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪   ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ‘ಮಾನವೀನಿ ಭಾವೈ’ಎಂಬ ಮೂರು ಭಾಗಗಳಲ್ಲಿರುವ ಕೃತಿಯ ಮೊದಲ ಭಾಗ ‘ಮಾಲೇಲ್ ಜೀವ್’ ಇದರ ಭಾಷಾಂತರ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಅನುವಾದವನ್ನು ಶಾಂತಕುಮಾರಿಯವರಿಂದ ಮಾಡಿಸಿದೆ. ನಲವತ್ತರ ದಶಕದಲ್ಲಿ ಪನ್ನಾಲಾಲ್ ಅವರು ಬರೆದ ಈ ಕಾದಂಬರಿ ಕಾಲ್ಪನಿಕ ಕಥನ ಶೈಲಿಯಲ್ಲಿದೆ.  ಅದುವರೆಗೆ ಗುಜರಾತಿ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭೂಯಿಷ್ಠವಾದ ಶಿಷ್ಟ ಕಥಾಸಾಹಿತ್ಯಕ್ಕೊಂದು ತಿರುವು ಕೊಟ್ಟ ಕೃತಿಯಿದು. ತತ್ವ ಚಿಂತನೆಯ ಅತಿಭಾವುಕತೆ, ಆದರ್ಶಗಳ ಬೋಧನೆ ಮತ್ತು ತದ್ರೂಪಿ ಪಾತ್ರ ಚಿತ್ರಣಗಳನ್ನು ನಾವಿಲ್ಲಿ ನೋಡಬಹುದು. ಸಾಂಪ್ರದಾಯಿಕ ಶೈಲಿಯ ಕೃತಕತೆ ಹಾಗೂ ಸಂಕೀರ್ಣತೆಯಿಂದ ಮುಕ್ತವಾದ ಸರಳವೂ ನೇರವೂ ಆದ ನಿರೂಪಣೆ ಇಲ್ಲಿದೆ.      ಈ ಕಾದಂಬರಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ರೈತಾಪಿ ಜನರ ಬದುಕು, ಅವರು ಅನುಭವಿಸುವ ಕಷ್ಟ ಕೋಟಲೆಗಳು, ಅವರ ಪದ್ಧತಿ-ಸಂಪ್ರದಾಯಗಳು, ಜೀವನ ಕ್ರಮ, ಅವರ ನಡುವಣ ಪ್ರೀತಿಯ ಸಂಬಂಧಗಳು ಮತ್ತು ಅಂಧ ವಿಶ್ವಾಸಗಳ ಚಿತ್ರಣಗಳಿವೆ. ಜತೆಗೆ ನಿಸರ್ಗದ ರಮ್ಯ ಮನೋಹರ ಹಿನ್ನೆಲೆಯೂ ಇದೆ. ಆದರೆ ಕಾದಂಬರಿಯುದ್ದಕ್ಕೂ ಕಾಣುವ ಬರಗಾಲದ ಚಿತ್ರಣವು ಭಯಾನಕವಾಗಿದೆ. ಹಳ್ಳಿಗಳನ್ನೂ ಬೆಟ್ಟ ಗುಡ್ಡಗಳನ್ನೂ ಕೊಚ್ಚಿಕೊಂಡು ಹೋಗಿ ಜನರ ಬದುಕನ್ನು ಛಿದ್ರಗೊಳಿಸುವ ಚಿತ್ರಗಳು, ಗುಡ್ಡಗಾಡಿನ ಮಂದಿ ಗ್ರಾಮೀಣರ ಮೇಲೆ ನಡೆಸುವ ಲೂಟಿ-ಆಕ್ರಮಣಗಳು, ಕ್ಷಾಮದ ಅಸಹಾಯಕ ಸ್ಥಿತಿಯಲ್ಲಿ ದನಗಳನ್ನು ಹಸಿಹಸಿಯಾಗಿಯೇ ತಿನ್ನುವ ಮತ್ತು  ತಾಯಿಯೇ ತನ್ನ ಮಗುವನ್ನು ತಿನ್ನುವ ದೃಶ್ಯಗಳು ಭೀಭತ್ಸವಾಗಿವೆ.      ಕಾಳು ಮತ್ತು ರಾಜೂ ಇಲ್ಲಿನ ಮುಖ್ಯ ಪಾತ್ರಗಳು. ಬಹಳ ಚಿಕ್ಕವರಿದ್ದಾಗಲೇ ಅವರಲ್ಲಿ ಅಂಕುರಿಸಿದ್ದ ಪ್ರೇಮವು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿ ನಲುಗಿದರೂ ಕಾದಂಬರಿ ಕೊನೆ ಮುಟ್ಟುತ್ತಿದ್ದಂತೆ ಶುದ್ಧ ಸಲಿಲದ ಕಾರಂಜಿಯಾಗಿ ಚಿಮ್ಮಿ ಹರಿಯುವ ಹೃದಯಂಗಮ ಚಿತ್ರಣವು ಓದುವವರ ಮನಸ್ಸಿಗೆ ಕಚಗುಳಿಯಿಡುತ್ತದೆ.    ಕಾಳು-ರಾಜೂರ ನಡುವಣ ಉದಾತ್ತ ಪ್ರೇಮವು ಕಾದಂಬರಿಯ ಕೊನೆಯಲ್ಲಿ ಮನಸೂರೆಗೊಳ್ಳುತ್ತದೆ. ಬರದ ಬೇಗೆಯನ್ನು ತಾಳಲಾರದೆ ಅವರಿಬ್ಬರೂ ಊರು ಬಿಟ್ಟು ಹೋಗುತ್ತಾರೆ. ತಡೆಯಲಾರದ ಹಸಿವಿನಿಂದ ಬಳಲುವ ಕಾಳು ‘ನೀರು ಬೇಕು’ ಅನ್ನುತ್ತ ಕುಸಿದು ಬೀಳುತ್ತಾನೆ.  ಬರದ ಬೆಂಗಾಡಿನಲ್ಲಿ ರಾಜು ಎಲ್ಲಿಂದ ತರಬೇಕು ನೀರು? ಅವಳ ಮಾತೃಹೃದಯ ವಿಲವಿಲ ಒದ್ದಾಡುತ್ತದೆ. ಕಾಳೂನ ಎದೆಯ ಮೇಲೆ ಮಲಗಿ ಅವಳು ಅಳುತ್ತಾಳೆ. ತನ್ನ ಎದೆಯನ್ನು ತೋರಿಸಿ ‘ ಇಲ್ಲೂ ಏನೂ ಇಲ್ಲ. ಎಲ್ಲ ಒಣಗಿ ಹೋಗಿದೆ’ಅನ್ನುತ್ತಾಳೆ. ಅವಳ ಮೊಲೆಗಳಿಂದ ದ್ರವ ಜಿನುಗಿತೋ ಅಥವಾ ಅವಳ ಬಾಯಿಯಿಂದ ರಸದ ಸ್ಪರ್ಶವಾಯಿತೋ ದೇವರೇ ಬಲ್ಲ. ಪವಾಡದಂತೆ ಕಾಳು ಎದ್ದು ನಿಲ್ಲುತ್ತಾನೆ.  ಪ್ರಕೃತಿಯನ್ನು ಪ್ರತಿನಿಧಿಸುವ ಹೆಣ್ಣು ತಾನು ಪ್ರೀತಿಸುವ ಪುರುಷನ ಪಾಲಿಗೆ ಚೈತನ್ಯದಾಯಿನಿಯಾಗುತ್ತಾಳೆ ಎಂಬ ಅರ್ಥದಲ್ಲಿ ಈ ದೃಶ್ಯವು ಚಿತ್ರಿಸಲ್ಪಟ್ಟಿದೆ ( ಪು.೪೨೨). ಶಾಂತಕುಮಾರಿಯವರ ಸುಂದರ ಅನುವಾದವು ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top