ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ ತ್ಯಾಗಗಳ ಸೇವಾ ಸಂಘರ್ಷಗಳಲಿಬಾಪುವಿನ ಬಲಗೈ ಆದ ಬಾ ಭಾರತಾಂಬೆಯ ಸೆರೆಯ ಬಿಡಿಸಲುಬ್ರಿಟಿಷರ ಕಪಿಮುಷ್ಟಿ ಸಡಿಸಲುಸೆರೆಮನೆಯೇ ಮನೆಯಾಗಿಸಿದಬಾಪೂ ಬಾ ರ ಜೀವನ ಯಾನಸ್ವಾತಂತ್ರö್ಯ ತಂದಿತ್ತು ಸ್ವಾತಂತ್ರö್ಯ ಗೀತೆ ಹಾಡಿಹೇ ರಾಮ್ ಹೇ ರಾಮ್ಎನ್ನುತ ಅಮರನಾದನಮ್ಮ ಮಹಾತ್ಮ ******************************
ಗಾಯ
ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ ಹಾಯಾಗಿ ಊರೂರು ಸುತ್ತುತ್ತದೆ!ನೀನಾಗ ಬಂದು ನನ್ನ ರುಂಡವನ್ನುಮುಂಡಕ್ಕೆ ಜೋಡಿಸುತ್ತಿ” ಹೀಗೆಲ್ಲ ರುಂಡವಿಲ್ಲದೆ ಅಲೆಯಬೇಡ!” ಅನ್ನುತ್ತಿ! ನನ್ನ ರುಂಡ ಈಗಾಗಲೇಆಕ್ಷೋಹಿಣಿ ಚತುರಂಗ ಬಲಗಳಬಬ೯ರ ಕುರುಕ್ಷೇತ್ರ ಯುದ್ಧವನ್ನೇ ನೋಡಿಬಿಟ್ಟಿದೆಘಟೋತ್ಕಚನ ಮಗ ಬಬ೯ರಿಕನಂತೆಮು೦ಡವಿಲ್ಲದೆಯೇ… ಈಗ ಮತ್ತೆ ಬಾಳ ಪಯಣಮೊದಲoತೆಯೇನೀನು ಅಂದದ್ದಕ್ಕೆಅನ್ನಲಾರದ್ದಕ್ಕೆ!ಈ ಮೆದುಳು ಹೃದಯವೆಂಬಎರಡು ಗಾಯಗಳಿಗೆಮದ್ದೇ ಇಲ್ಲದ್ದಕ್ಕೆ.. ನಾನೇ ಒಂದು ಗಾಯ!ಇನ್ನೂ ಎಷ್ಟು ಆಳ! **************************************
ಅವಳೂ ಹಾಗೇ .
ಕವಿತೆ ಅವಳೂ ಹಾಗೇ . ಡಾ. ರೇಣುಕಾ ಅರುಣ ಕಠಾರಿ ಬೀಜ ಸಸಿಯಾಗುವ ಹಾಗೆ,ಸಸಿ ಮರವಾಗುವ ಹಾಗೆ,ಮರದಲಿ ಕಾಯಾಗಿ ಹಣ್ಣಾದ ಹಾಗೇಅವಳೂ ಹಾಗೆ., ಮಳೆ ಹನಿಗೆ ಸೂರ್ಯ ಚುಂಬನಕಾಮನ ಬಿಲ್ಲಿನಂದದ ಹಾಗೇಅವಳೂ ಹಾಗೇ., ಮುಡಿಬಿಟ್ಟು ಮೊಲೆಮೂಡಿಚಿತ್ತರಾದಿ ರವಕೆ ಬಿಗಿಯಾದ ಹಾಗೇಅವಳೂ ಹಾಗೇ., ನಿತ್ಯವೂ ಕುಡಿ ಕುಡಿದಷ್ಟುಮಧು ತು..$ ತುಂಬಿ ಬಂದುಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇಅವಳೂ ಹಾಗೇ., ಮೈಮುರಿದು ನಾಚಿ ಕೆನ್ನೆ ಕೆಂಪಾದAತೆಮುಸ್ಸೂಂಜೆ ಮೂಡಣ ನಕ್ಕಂತೆಅವಳೂ ಹಾಗೇ., ಬಯಕೆಯ ಕಾತರಕೆ ಬಾಯಾರಿದಳವಳುಬಾಯಾರಿದೆ ನೆಲಕ್ಕೆಮಳೆ ಬೀಳುವ ತವಕವು ಕಾದಂತೆಅವಳೂ ಹಾಗೇ., ಬಯಕೆಯು ಬೆರ್ನೀರಿನಂತೆಹಸಿದ ಗರ್ಭದೊಳಗೆ ಜಾರಿ ಜಾರಿ ಇಳಿದಂತೆಅವಳೂ ಹಾಗೇ., ಭಾವದ ನಂಟಿಗೆ ಅಂಟಿಕೊAಡ ಚಿಗುರುಅರಿವಾದ ಅಗೋಚರ ಹೆಜ್ಜೆಗಳುಕಡ¯ದ ಆಳದಂತೆಅವಳೂ ಹಾಗೇ.,ಮುಸುಕೆಲ್ಲಾ ಸಿಂಗರಗೊAಡAತೆಹಣತೆಯೊಳಗಿನ ತೈಲ ಮಯವಾದಂತೆಅವಳೂ ಹಾಗೇ., ಸುತ್ತ ಹಸರೆಲ್ಲ ಕಾಡಿಗಣ್ಣಿನಂತೆಇಳೆಯ ಸ್ಪರ್ಷಕೆ ನಿರಗೆಗಳ ಆಲಿಂಗನವಾದAತೆಅವಳೂ ಹಾಗೇ., ಉರಿವ ಬಿಸಿಲೊಳಗೆ ಮೈಮಿಡುವಂತೆಬೆಳದಿAಗಳಿನ ಮಳೆ ನಿತ್ಯ ಸುರಿದ ಹಾಗೆಅವಳೂ ಹಾಗೇ., ನಿನ್ನೊಳಗೆ ನಾನು ನನ್ನೊಳಗೆ ನೀನುಏನೋ ಹೆಣೆದಿರುವಭಾವ ಬಂಧನವ ಕಳಚಿದ ಹಾಗೆನಾವುಗಳೂ ಹಾಗೇ ಅಲ್ವೆ? ಅರ್ಧರೊಟ್ಟಿ ಹಿಡಿದುಪರರ ನೋವಿಗೆ ಚಿಂತೆ ಮಾಡುವ ತಾಯಂತೆಅವಳು ಹಾಗೇ., *************************************
ಹೊಸ ದನಿ – ಹೊಸ ಬನಿ – ೮. ತಲೆ ಬರಹ ಇಲ್ಲದೆಯೂ ತಲೆದೂಗಿಸುವ ನಾಗಶ್ರೀ ಎಸ್ ಅಜಯ್ ಕವಿತೆಗಳು. ಬೆಂಗಳೂರಿನ ಗಾಂಧಿ ಬಜಾರಿಗೆ ಕಾಲ್ನಡಿಗೆಯ ಅಂತರದ ಬಿ.ಪಿ.ವಾಡಿಯಾ ಸಭಾಂಗಣ. ಕವಿ ವಾಸುದೇವ ನಾಡಿಗರ ಕವನ ಸಂಕಲನದ ಬಿಡುಗಡೆ ಸಮಾರಂಭ. ವೇದಿಕೆಯಲ್ಲಿ ಸರ್ವ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ಕೆ.ರವೀಂದ್ರ ಕುಮಾರ್, ಸುಬ್ರಾಯ ಚೊಕ್ಕಾಡಿಯಂಥ ಅತಿರಥ ಮಹಾರಥರು. ಪುಸ್ತಕ ಬಿಡುಗಡೆಯ ಆತಂಕದಲ್ಲಿ ಕವಿ ದಂಪತಿ. ತುಂಬಿದ ಸಭೆಯ ಗೌರವಾನ್ವಿತರಿಗೆಲ್ಲ ಕಲಾಪದ ಸೊಗಸು ಮತ್ತು ಸಂದರ್ಭಕ್ಕೆ ತಕ್ಕ ಕವಿ ನುಡಿಗಳನ್ನೂ ಹಿತದ ಮಾತುಗಳನ್ನೂ ಆಡುತ್ತ ಸಭೆಗೆ ಶೋಭೆ ತರುತ್ತಿದ್ದ ನಿರೂಪಕಿ. ಇತ್ತೀಚೆಗೆ ಸಮಾರಂಭಗಳಲ್ಲಿ ನಿರೂಪಕರದೇ ಕಾರುಬಾರು. ಬರಿಯ ವಾಚಾಳಿತನ ಮತ್ತು ಹಗುರ ನಗೆ ಚಟಾಕಿ ಹಾರಿಸಿ ವೇದಿಕೆಯ ಗಣ್ಯರನ್ನು ನೋನುತ್ತ ಅಭಿನಂದಿಸಿದರೆ ಅವರ ಕೆಲಸ ಮುಕ್ತಾಯ. ಕಾರ್ಯಕ್ರಮ ಯಾವುದೇ ಇರಲಿ, ಈ ನಿರೂಪಕರ ಶೈಲಿ ಮಾತ್ರ ಬದಲಾಗದು. ಹಾಡಿದ್ದೇ ಹಾಡುವ ಹೇಳಿದ್ದೇ ಹೇಳುವ ಅವೇ ಅವೇ ಹಗುರ ಚಟಾಕಿಗಳು. ಅಪರೂಪಕ್ಕೆ ಈ ಬರಹದ ಮೊದಲಲ್ಲಿ ಹೇಳಿದ ಸಭೆಯಲ್ಲಿ ಆ ಸಮಾರಂಭದ ನಿರೂಪಕಿಯ ಮಾತು, ಆಕೆ ನಡು ನಡುವೆ ಕೋಟ್ ಮಾಡುತ್ತಿದ್ದ ಕನ್ನಡದ ಮಹಾ ಕವಿಗಳ ಪದ್ಯದ ಸಾಲುಗಳು, ಹಿತ ಮಿತದ ಸಂಕ್ಷೇಪ…ಆಕೆ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದಾರೆಂದು ಮತ್ತು ಸಾಹಿತ್ಯದ ಮೇಲೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿತ್ತು. ಆಕೆಯ ಹೆಸರು ನಾಗಶ್ರೀ ಅಜಯ್ ಎಂದು ಆಮೇಲೆ ಗೊತ್ತಾಯಿತು. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ೯ ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಕನ್ನಡ ಸಾಹಿತ್ಯದಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಯಲ್ಲಿ ಆಕೆ ಆಸಕ್ತರು ಎಂದೂ ಆಮೇಲೆ ತಿಳಿಯಿತು. ಸುರಹೊನ್ನೆ, ಅವಧಿ ಜಾಲತಾಣಗಳಲ್ಲಿ ಮತ್ತು ಫೇಸ್ಬುಕ್ಕಿನಲ್ಲೂ ಅವರ ಕವಿತೆಗಳನ್ನು ಗಮನಿಸುತ್ತ ಬಂದಂತೆ ನಿರೂಪಕರು ಎಂದ ಕೂಡಲೇ ಬಾಯಿಪಾಠ ಮಾಡಿದ ಮಾತನ್ನು ನಾಟಕೀಯವಾಗಿ ಒಪ್ಪಿಸುವವರು, ಸುಮ್ಮನೇ ನೋನುತ್ತ ಜೋಕ್ ಹೇಳುವವರು ಎಂದು ಅಂದುಕೊಂಡಿದ್ದ ನನ್ನ ಅರಿವನ್ನು ಬದಲಾಯಿಸಿಕೊಳ್ಳಬೇಕಾಯಿತು!! ಬದುಕೆಂದರೇನೆಂದು ಹುಡುಕುವ ಹೊತ್ತಿಗೆ ಮುಕ್ಕಾಲು ಉರಿದ ಊದುಬತ್ತಿ ಸುತ್ತ ಪರಿಮಳ ಉಸಿರಿಗೂ ಚೌಕಾಸಿ. ಇಂಥ ಅದ್ಭುತ ರೂಪಕಗಳ ಕವಿತೆಯ ಮೂಲಕವೇ ಬದುಕ ಅರ್ಥವನ್ನು ತೇದು ತೇದು ಅದರ ಘಮದಲ್ಲೇ ಉಳಿದು ಬಿಡುವ ತಹತಹಿಕೆ ಇವರ ಕವಿತೆಗಳ ಆಂತರ್ಯ. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಪ್ರೀತಿ ಪ್ರೇಮ ಪ್ರಣಯಗಳನ್ನು ಕುರಿತು ಬರೆಯದೇ ‘ಕವಿ’ ಎನ್ನುವ ಅಭಿದಾನಕ್ಕೆ ಪಾತ್ರರಾಗುವುದಾದರೂ ಹೇಗೆ ಸಾಧ್ಯ ಎನ್ನುವ ಪುರಾತನ ಪ್ರಶ್ನೆಗೆ ನಾಗಶ್ರೀ ಪದ್ಯಗಳೂ ಹೊರತಲ್ಲ! ತಾನು ಕವಿಯೆಂದು ಘೋಷಿಸದೆಯೂ ಓದುಗನಲ್ಲಿ ಇದನ್ನು ಬರೆದವರು ಕವಿಯಲ್ಲದೇ ಮತ್ತಿನ್ನೇನು ಅನ್ನುವ ಪ್ರಶ್ನಿಸುವ ಸಾಲನ್ನೇ ಗಮನಿಸಿ; ಅಕ್ಷರ ಗೊತ್ತಿರುವವರೆಲ್ಲ ಅನ್ನಿಸಿದ್ದನ್ನು ಗೀಚಬಹುದು, ಆದರೆ ಆಂತರ್ಯದ ಸಾಲುಗಳು ಮಾತ್ರ ಕವಿತೆಯಾಗಿ ಅರಳಬಲ್ಲವು. ಉಬ್ಬಸವೇ ಮೂಲತಃ ಪ್ರಾಣಾಂತಿಕ ವ್ಯಾಧಿ. ಅಂಥ ವ್ಯಾಧಿಯಲ್ಲಿ ನರಳುತ್ತಿದ್ದರೂ ತನ್ನಿನಿಯನ ಧ್ಯಾನದಲ್ಲೇ ಅವನನ್ನು ಹಚ್ಚಿಕೊಳ್ಳುವ ಆ ಹುಡುಗಿಯನ್ನು ಮೆಚ್ಚಲಾರದೇ ಹೇಗೆ ಉಳಿಯಬಹುದು? ಇದೇ ಪದ್ಯದ ಮುಂದಣ ಸಾಲುಗಳನ್ನು ಅಲ್ಲಲ್ಲಿಗೆ ತುಂಡು ಮಾಡದೇ ಗದ್ಯವಾಗಿಸಿ ಓದಿ ನೋಡಿದರೆ; ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮ ಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸು ಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ, ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ಪ್ರಾಯಶಃ ಪ್ರಯೋಗ ಎಂದರೆ ಇದೇ ಇರಬೇಕು. ಪದ್ಯಗಂಧೀ ಗದ್ಯ ಎಂದೆಲ್ಲ ಕರೆದುಕೊಳ್ಳುವವರ ನಡುವೆ ಗದ್ಯ ಗಂಧೀ ಪದ್ಯ ಬರೆಯುವ ಈ ಕವಿ ಯಾಕೋ ತೀರ ಸಹಜವಾಗಿ ನಿತ್ಯವೂ ಘಟಿಸುವ ಘಟನಾವಳಿಗಳನ್ನೆಲ್ಲ ಒಟ್ಟಾಗಿಸಿ ಬದುಕಿನ ಪ್ರಭಾವಳಿಯನ್ನಾಗಿಸುತ್ತಾರಲ್ಲ ಈ ಕವಿ ಇವರನ್ನು ಪ್ರಭಾವಿಸುತ್ತಿರುವುದು ಕೆ ಎಸ್ ನ ಅಲ್ಲದೇ ಮತ್ತಿನ್ನಾರು ಎನ್ನುವುದೂ ಆತುರದ ನಿರ್ಧಾರವೇ ಆದೀತು! ಜನಜಂಗುಳಿಯ ಮಧ್ಯೆಯೇ ತೀರಾ ಒತ್ತರಿಸಿ ಬಂದ ಅಳು ಕಡಿಮೆ ಬಿದ್ದ ಟಿಕೇಟು ಕಾಸು ಎಡವಿದಾಗ ಹರಿದ ಅಂಗಿ ಸದಾ ಮೇಲಾಟ ತೋರಿದವರ ಅಣಕು ನೋಟ ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ ಜಾತ್ರೆಯಂತಹ ಮದುವೆಗೆ ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ ಇಲ್ಲಿ ಕವಿ ಬದುಕಿನ ಸೂಕ್ಷ್ಮಗಳನ್ನು ಅವಲೋಕಿಸುವ ರೀತಿ ಸದ್ಯ ಅಬ್ಬರದಲ್ಲಿ ಬೊಬ್ಬಿರಿಯುವ, ಸಮಾನತೆಯ ಬೇಡಿಕೆ ಇಟ್ಟು ಇದ್ದವರಿಂದ ಕಿತ್ತು ತಮ್ಮದಾಗಿಸಿಕೊಳ್ಳುವ ಹಕ್ಕೊತ್ತಾಯದ ಗದರಿಲ್ಲ, ತಮ್ಮನ್ನು ಯಾರೋ ತುಳಿದರು ಎನ್ನುವ ದೂರು ಮೊದಲೇ ಇಲ್ಲ ಅಥವ ಹತಭಾಗ್ಯದ ಬಗ್ಗೆ ದುಃಖವೂ ಇಲ್ಲ; ಇರುವುದು ಬರಿಯ ವಾಸ್ತವದ ನಿಜ ಚಿತ್ರ. ನಾಗಶ್ರೀ ಕವಿತೆಗಳಲ್ಲಿ ಹೆಚ್ಚಿನವು ಶೀರ್ಷಿಕೆಯೇ ಇಲ್ಲದೆ ಪ್ರಕಟವಾದವು. ಫೇಸ್ಬುಕ್ಕಿನಲ್ಲಿ ಶೀರ್ಷಿಕೆ ಇಲ್ಲದೆಯೂ ಪ್ರಕಟಿಸಬಹುದು. ಆದರೆ ಅಂತರ್ಜಾಲದ ಪತ್ರಿಕೆಗಳಲ್ಲೂ ಇವರ ತಲೆ ಬರಹ ಇಲ್ಲದೆಯೂ ಆ ಪದ್ಯಗಳ ಝಳದಲ್ಲಿ ತಲೆದೂಗಿಸುವಂತೆ ಮಾಡಬಲ್ಲ ಹಲವು ಪದ್ಯಗಳು ಇವೆ. ಅಪರೂಪಕ್ಕೆಂಬಂತೆ “ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ” ಶೀರ್ಷಿಕೆಯ ಕವಿತೆಯಲ್ಲಿ ವಾಸ್ತವವಾಗಿ ಗಾಳಿಪಟದ ಚಿತ್ರ ಬರುವುದೇ ಇಲ್ಲ! ಬರಿಯ ಶೀರ್ಷಿಕೆಯಲ್ಲೇ ಬದುಕನ್ನೇ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟವನ್ನಾಗಿಸಿರುವ ಕವಿತೆ ಹೇಳುತ್ತಿರುವುದು ದುರಂತಗಳ ಸರಮಾಲೆಯಲ್ಲಿ ಸಿಕ್ಕೂ ಮತ್ತೆ ಮೇಲೇರಬಯಸುವ ಗಾಳಿಪಟದ ಆಶೆಯಂಥ ಬದುಕನ್ನು!! ಪದ್ಯದ ಕಡೆಯ ಸಾಲು ಹೀಗಿದೆ; ಹೀಗಂತ ಗೊತ್ತಿದ್ದೂ ನಾನೇನೂ ಮಾಡಲಾರೆ ನಾಲ್ಕು ಹನಿ ಕಂಬನಿ ಹೊರತು ಮತ್ತೇನೂ ಕೊಡಲಾರೆ ಕೊಸರಷ್ಟು ಹಸಿಪ್ರೀತಿ ಉಳಿಸಿಟ್ಟಿರುವೆ ಸ್ವೀಕರಿಸು. ಬರಿಯ ಇಂಥ ಹತಾಶೆಗಳ ಚಿತ್ರಣದಲ್ಲಿ ವಾಸ್ತವವನ್ನು ಮರೆಮಾಚುತ್ತ ರಮ್ಯತೆಯನ್ನು ಬಯಸುವ ರೀತಿ ಕೆ ಎಸ್ ನ ಅವರಲ್ಲದೇ ಈ ನಾಗಶ್ರೀಗೂ ಒಲಿದಿರುವುದು ಅಪ್ಪಟ ಸತ್ಯ. ಬಹಳ ಗೊತ್ತೆಂಬ ಹಮ್ಮಿನಲಿ ಹೊಸ ಬಣ್ಣಗಳ ಹುಡುಕುವೆವು ಸೃಜಿಸಿದ ಮತ್ತಾವ ಬಣ್ಣಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ ಇದರ ಹೆಸರಿಗೆ ಅದರ ಉಲ್ಲೇಖ ಅದರ ಚಿತ್ತಾರಕ್ಕೆ ಇದರ ಸಹಯೋಗ ಹೊಸತು-ಹಳತು ಹೆಸರಿಗಷ್ಟೇ ವಿರುದ್ಧ ನನ್ನ ತಿಳುವಳಿಕೆಗದು ಜೋಡಿಪದ ಎಂದು ಮುಂದುವರೆಯುವ ಪದ್ಯ ಸಾಮಾನ್ಯ ಪ್ರತಿಮೆಗಳ ಅನಾವರಣದಲ್ಲೇ ಅಸಾಮಾನ್ಯ ರೂಪಕವೊಂದನ್ನು ಸೃಷ್ಟಿಸಿ ಭಲ ಭಲಾ ಎನ್ನಿಸುತ್ತದೆ. ಪದ್ಯ ಮುಗಿಯುವುದು ಹೀಗೆ; ಹಾಗಲ್ಲ ಹೀಗೆಂದರೂ ಹೀಗಲ್ಲ ಹಾಗೆಂದರೂ ಒಪ್ಪುವದು ಬಿಡುವುದು ಅವರವರ ಇಷ್ಟ ಇದ್ದ ಬಣ್ಣಗಳಲೆ ಹೊಸ ಕನಸು ಕಾಣುವುದು ಇರುವ ಭಾವಗಳಲೆ ಹೊಸ ಸಾಲು ಬರೆಯುವುದು ನನಗಿಷ್ಟ ಎಂದೆಂದೂ ಇಂಥ ಸಹಜ ಆಸೆಗಳನ್ನು ಮಾತ್ರ ತನ್ನ ಕವಿತೆಗಳ ಮುಖ್ಯ ಶೃತಿಯನ್ನಾಗಿರಿಸಿಕೊಂಡಿರುವ ಈ ಕವಿತೆಗಳು ಮತ್ತೆ ಮತ್ತೆ ಓದಿದರೆ ಹಳಹಳಿಕೆಯಂತೆ, ತನ್ನ ಕೈಗೆಟುಕದ ಸಂತಸದ ಬಗೆಗಿನ ತಿರಸ್ಕಾರದಂತೆ ಅಥವ ಶ್ರೇಣೀಕೃತ ಸಮಾಜದ ಶ್ರೇಣೀಕರಣದ ಉತ್ತುಂಗದಲ್ಲಿದ್ದೂ ಒಳಗೇ ಟೊಳ್ಳಾಗಿರುವ ಆ ಸಮಾಜದ ಕಿರೀಟದ ಹೊಳಪು ಕಳೆದ ಮಣಿಯಂತೆ ಕಾಣುತ್ತದೆ. ಆದರೆ ಬರಿಯ ಇಂಥ ಹಳಹಳಿಕೆಗಳು ಸದಾ ಸರ್ವದಾ ಯಾವುದೇ ಕವಿಯ ನಿತ್ಯ ಮಂತ್ರವಾಗಬಾರದು. ಹಾಗಾದಲ್ಲಿ ಅಳುಬುರುಕ ಕವಿ ಎಂಬ ಅಭಿದಾನಕ್ಕೆ ಸಿಕ್ಕು ತಾನೇ ತೋಡಿಕೊಂಡ ಹೊಂಡದಲ್ಲಿ ಕವಿ ಬೀಳುತ್ತಾನೆ. ಹಾಗಾಗದೇ ಇರಲು ಮೊದಲು ಈ ಕವಿ ತಾನಿರಿಸಿಕೊಂಡು ಬಂದಿರುವ ಕ್ಷೋಬೆಯಿಂದ ಹೊರಗೆ ಬರಬೇಕು ಮತ್ತು ನಿಜಕ್ಕೂ ಈ ಹಳವಂಡದಿಂದ ಮೇಲೆದ್ದು ಬರುವ ಮಾರ್ಗವನ್ನು ಹುಡುಕಬೇಕು. ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ ಏನೋ ಹೇಳ ಹೊರಟು ಮತ್ತೇನೋ ಆಗುವಾಗ ಒಂದು ಮನಸ್ಸು ಒಡೆಯಬಹುದು ಮತ್ತೆ ಸೇರಲೆಂದು ಶತಪ್ರಯತ್ನ ಏಕೆ? ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ ಈ ಪದ್ಯ ಕಾವ್ಯದ ಪ್ರಯೋಗದಲ್ಲಿ ನಿಷ್ಕ್ರಮಣದ ಹಾದಿಯಲ್ಲಿದ್ದ ಅಧ್ಯಾತ್ಮದ ಪುನರ್ಪ್ರವೇಶ ಎಂದೇ ಅನ್ನಿಸುತ್ತಿದೆ. ಬದುಕಿನಾಚೆಗೆ ಏನಿದೆ, ಸತ್ತವರು ನಂತರ ಎಲ್ಲಿಗೆ ಹೋಗುತ್ತಾರೆ, ಪೂರ್ವಾಪರದ ಸಂಗತಿಗಳು ಏನಿವೆ ಎನ್ನುವುದನ್ನೆಲ್ಲ ಪದ್ಯದ ವಸ್ತುವನ್ನಾಗಿಸುವುದಕ್ಕೆ ಸಾಕಷ್ಟು ಅಧ್ಯಯನ ಮತ್ತು ಅಧ್ಯಾಪನಗಳ ಅನುಕ್ರಮಣಿಕೆಯ ಅವಶ್ಯಕತೆ ಅನಿವಾರ್ಯ. ನಾಗಶ್ರೀ ಈ ವಿಚಾರದಲ್ಲಿ ಸಾಕಷ್ಟು ದೂರ ಕ್ರಮಿಸಿರುವುದು ಅವರ ಪದ್ಯಗಳ ರೀತಿಯಲ್ಲೇ ಶೃತವಾಗುತ್ತದೆ. ನಡೆದು ಬಿಡಬೇಕು ಆಚೆ ಹಚ್ಚಹಸುರಿನ ಬಯಲಿನೆಡೆಗೆ ವಿಶಾಲ ಸಮುದ್ರದ ಏಕಾಂತಕೆ ಕಡೇಪಕ್ಷ ರಾತ್ರಿಯಾಗುವುದನೆ ಕಾದಿದ್ದು ನಕ್ಷತ್ರಲೋಕದ ವಿಹಂಗಮ ದರ್ಶನಕೆ ಇವೆಲ್ಲಾ ದುರ್ಲಭದ ನಗರಜಾತ್ರೆಯಲಿ ಮಗುವೊಂದರ ಕಣ್ಣಬೆಳಕೊಳಗೆ ಹಣ್ಣುಮುದುಕರ ಮನೆಯಂಗಳಕೆ ನಡೆದುಬಿಡಬೇಕು ದೂರ ದೂರ ಮತ್ತೆ ಸಣ್ಣತನಗಳು ನಂಬಿಕೆಯ ನೆಲೆಯ ಕುರೂಪಗೊಳಿಸದಂತೆ ಈ ಇಂಥ ಆಶಯ ಸದಾ ಉನ್ಮತ್ತತೆ ಮತ್ತು ಸ್ವಪ್ರತಿಷ್ಠೆಯನ್ನು ಮುಂದು ಮಾಡುವ ಲೋಕಾಂತದ ನಾಯಕ ಮಣಿಗಳಲ್ಲಿ ಅಸಾಧ್ಯದ ಧಾತು. ಲೋಕಾಂತದ ದಂದುಗಗಳಲ್ಲಿದ್ದೂ ಏಕಾಂತದ ಸಂಗತಕ್ಕಷ್ಟೇ ಹಾತೊರೆಯುವ ಮೃದು ಮನಸ್ಸಿನ ಅಸ್ತಿವಾರ. ಇಂಥ ಲೌಕಿಕದಾಚೆಗಿನ ಸಂಗತಿಗಳಲ್ಲೇ ಇರುವ ಈ ಕವಿ ಒಮ್ಮೊಮ್ಮೆ ಹೀಗೂ ಹೇಳಬಲ್ಲರು; ಉದ್ದು-ಕಡಲೆ-ಹೆಸರು ಗುರುತಿಸಲೂ ಇಪ್ಪತ್ತು ವರ್ಷ ತೆಗೆದುಕೊಂಡ ಜಾಣರಲ್ಲವೆ ನೀವು ಗಂಡು ಹೆಣ್ಣುಗಳ ನಡುವಿನ ಗುದ್ದಾಟ ನಿನ್ನೆ ಮೊನ್ನೆಯ ಪ್ರಶ್ನೆ ಏನಲ್ಲ. ಗಂಡು ಹೆಚ್ಚೆಂಬ ವಾದದ ಜೊತೆಯೇ ಹೆಣ್ಣು ಕೀಳಲ್ಲವೆಂಬ ಸಮದರ್ಶತ್ವವೂ ಇದ್ದೇ ಇದೆ. ಆದರೆ ಬದುಕನ್ನು ಅರಿಯುವುದಕ್ಕೆ ಅನುಭವಗಳೇ ಮುಖ್ಯ. ಅದು ಗಂಡೋ ಹೆಣ್ಣೋ ಲಿಂಗಾಧಾರಿತ ಅಲ್ಲದ ಆದರೆ ಬದುಕಿನ ನಿಜ ದರ್ಶನದಿಂದ ಹುಟ್ಟುವ ದರುಶನ. ಅದನ್ನು ಕಾಂಬುವ ಪರಿ ಬೇರೆ ಬೇರೆ ಅಷ್ಟೆ. ನಾಗಶ್ರೀ ಕವಿತೆಗಳಲ್ಲಿ ಪುರಾಣ ಪಾತ್ರಗಳು ನೇರವಾಗಿ ಪ್ರಸ್ತಾಪ ಆಗುವುದಿಲ್ಲ. ಆ ಅಂಥ ಕಾವ್ಯ ನಾಯಕರ ಒಣ ಉಪದೇಶಗಳೂ, ಹುಚ್ಚು ಆವೇಶಗಳೂ ಮೈ ತಳೆಯದೇ ಆ ಅಂಥ ಕಾವ್ಯ ನಾಯಕರು ಈ ಒಣ ನೆಲದಲ್ಲಿ ಉದುರಿಸಿ ಹೋದ ಆದರ್ಶಗಳು ಮಾತ್ರ ಸ್ಥಾಯಿ ಶೃತಿಯಾಗಿ ಈ ಕವಿಯ ಹಾಡಿಗೆ ಹಾದಿಯ ಸಾಥಿಯಾಗಿವೆ ಮತ್ತು ಆ ಅದೇ ಕಾರಣಕ್ಕೇ ಸದ್ಯ ಬರೆಯುತ್ತಿರುವವರಿಗಿಂತ ಭಿನ್ನವಾಗಿ ಅವರ ಕವಿತೆಗಳ ಆಪ್ತ ಓದಿಗೆ ಅನುಗೊಳಿಸುತ್ತವೆ. ಸಹೃದಯರ ಸಾಧಾರಕ್ಕಾಗಿ ನಾಗಶ್ರೀ ಅಜಯ ಅವರ ಆಯ್ದ ಆರು ಪದ್ಯಗಳು; ೧. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಥಂಡಿ ಹವೆಯಲಿ ಎದ್ದ ಎದೆನಡುಕ ವಿರಹ ಬೆಚ್ಚನೆಯ ಉಣ್ಣೆಯಂಗಿ ಸುಡುವ ಚಹಾ ಬಿಸಿಯಾಗಿಸದು ಎಂದು ನಿನ್ನ ನೆವದಿಂದ ಜೋಮು ಬಿಡಿಸಿ ಕುಣಿಕುಣಿದು ಓಡುವ ಮರಿಜಿಂಕೆ ಪಾದಗಳು ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸುಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ೨. ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ನೀನು ದೂರದ ಬೆಟ್ಟದಲಿ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ಬೇಸಿಗೆಯ ಸುಡು ಮಧ್ಯಾಹ್ನ ಮೊಸರಲಿ ಅದ್ದಿ, ಉಪ್ಪು ಹಚ್ಚಿ ಒಣಗಲೆಂದೇ ಇಟ್ಟ ಮೆಣಸಿನಕಾಯಿ ಮಳೆಗಾಲದ ಸಂಜೆ ಜಡಿಯಲಿ ತೊಯ್ದು ತೊಪ್ಪೆಯಾದ ಒದ್ದೆ



