ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದ್ವೇಷ

ಅನುವಾದಿತ ಕವಿತೆ ದ್ವೇಷ ಇಂಗ್ಲೀಷ್ ಮೂಲ: ಸ್ಟೀಫನ್ಸ್ ಕನ್ನಡಕ್ಕೆ: ವಿ.ಗಣೇಶ್ ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ ಒಡಕಾದ ಮಾತ್ರಕ್ಕೆನಮ್ಮಿಬ್ಬರ ಪ್ರೀತಿಯ ತೊರೆ ಬತ್ತಿ ಬರಡಾಗಿಬದುಕು ಇಲ್ಲಿಗೇ ಮುಗಿದು ಹೋಯಿತೆನ್ನುವೆಯಾ?” “ನಿನ್ನ ಬತ್ತಳಿಕೆಯ ವಿಷಪೂರಿತ ಮೊನಚಾದಬಾಣಗಳೆಲ್ಲಾ ಬರಿದಾದಾಗ, ‘ನಾವೇಕೆ ಹೀಗೆದ್ವೇಷಿಸುತ್ತಿದ್ದೆವು?’ ಎಂಬುದಕ್ಕೆ ಉತ್ತರಿಸಬಲ್ಲೆಯಾ?ಅರ್ಥವಿಲ್ಲದ ಈ ದ್ವೇಷಕ್ಕೆ ಕೊನೆಯಿಲ್ಲವೇ?” ಎಂದಾಗ ಆ ವೈರಿಯ ಮುಂದೆ ತುಂಬಾ ಚಿಕ್ಕವನಾಗಿಮಾತೇ ಹೊರಡದೆ ಮೂಕನಾಗಿಬಿಟ್ಟೆತಗ್ಗಿಸಿದ ತಲೆಯನಾಗ ಮೇಲೆತ್ತಲಾರದೇಅದಾಗಲೇ ತಣ್ಣಗಾಗಿ ಕುಸಿಯ ತೊಡಗಿದೆ ಪ್ರೀತಿಯ ಸಿಹಿ ಕೋಪದ ಕಹಿಯ ಕರಗಿಸಿದಾಗನಾಚಿ ನೀರಾಗುತ್ತ ಅವನತ್ತ ನೋಡಿದೆನಮ್ಮಿಬ್ಬರ ದೃಷ್ಟಿ ಮತ್ತೆ ಕಲೆತಾಗ, ಬಾಲ್ಯದನೆನಪು ಮನದಾಳದಿಂದ ಚಿಮ್ಮತೊಡಗಿತು ಆಗ ನಾನೇನು ಹೇಳುವೆನೋ ಎಂದು ಕಾತರದಿನನ್ನೆಡೆಗೆ ನೋಡುತ್ತಿದ್ದವನ ಎದುರಿಸಲಾಗದೇಎಲ್ಲಿ ಹಿಡಿದು ಮುತ್ತಿಡುವೆನೋ ಏನೋ ಎಂದುಮುಖನೋಡಲಾಗದೇ ಹಾಗೇ ಒಳಕ್ಕೆ ಓಡಿದೆ. ಬಾಡಿ ಮುದುಡಿದ ಗೆಳೆತನದ ಸಸಿ ಅಂದುಚಿಗುರೊಡೆದು ಹಸಿರಾಗಿ ಬೆಳೆಯತೊಡಗಿದಾಗನನ್ನ ಕೋಪದ ಬಂಡೆ ಅದಾಗಲೇ ಕರಗಿ ನೀರಾಗಿಚಿಗುರುತಿಹ ಆ ಸಸಿಗೆ ನೀರೆರೆಯತೊಡಗಿತ್ತು. ********************************

ದ್ವೇಷ Read Post »

ಇತರೆ

ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..!

ಲೇಖನ ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..! ಮಹಿಳೆಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂಬ ಚರ್ಚೆಗೆ ಜೀವ ಬಂದಿದೆ. ಶತಮಾನ ಪೂರೈಸಿರುವ ಈ ಸಂಸ್ಥೆಯು ಇದುವರೆಗೆ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಅಧಿಕಾರ-ಹಣ-ವರ್ಚಸ್ಸು ಇರುವ ಕ.ಸಾ.ಪ,ದಲ್ಲಿ ಚುನಾವಣೆಯ ಬಲಾಬಲ ಪರೀಕ್ಷೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳಬಹುದೇ? ಅಂತಹ ಅವಕಾಶವನ್ನು ’ಮತ’ ಚಲಾಯಿಸುವ ಸದಸ್ಯರು ಒಪ್ಪಿಕೊಳ್ಳುವರೇ? ಎಂದು ಕೇಳಿರುವ ಪತ್ರಕರ್ತವೊಬ್ಬರು ಚರ್ಚೆಯನ್ನು ಆರಂಭಿಸಿದ್ದಾರೆ. ನೂರೈದು ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲ ವರುಷಗಳಿಂದ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾದದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ’ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎಂದು ಗುರುತಿಸಲಾಗುವ ಈ ಸಂಸ್ಥೆ ಹಾಗೆ ನಡೆದು ಕೊಂಡದ್ದು ಮಾತ್ರ ಅಪರೂಪದಲ್ಲಿ ಅಪರೂಪ. ಚಾರಿತ್ರಿಕ ಮಹತ್ವದ ಈ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದವರು ಇತ್ತೀಚಿನ ದಿನಗಳಲ್ಲಿ ಅದರ ಘನತೆಗೆ ತಕ್ಕಂತೆ ವರ್ತಿಸದೇ ಇರುವದಕ್ಕೂ ಸಾಕ್ಷಿಯಾಯಿತು. ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಅಧಿಕಾರ ಲೋಲುಪತೆ ಸೇರಿದಂತೆ ಸಕ್ರಿಯರಾಗಿ ರಾಜಕಾರಣದ ಎಲ್ಲ ರೋಗಗಳನ್ನೂ ಹೊಂದಿದೆ. ನಿಂತ ನೀರಾಗಿರುವುದರ ಜೊತೆಗೆ ಮಲೆತು ವಾಸನೆ ಬರುವ ಹಂತ ತಲುಪಿರುವ ಸಾಹಿತ್ಯ ಪರಿಷತ್ತು ಕಾಯಕಲ್ಪಕ್ಕಾಗಿ ಕಾಯುತ್ತ ನಿಂತಿದೆ. ಅಧಿಕಾರ-ಹಣಗಳೆರಡೂ ಒಂದೆಡೆಯೇ ಸೇರಿದ ಮೇಲೆ ಅದರ ಜೊತೆಗೆ ರಾಜಕಾರಣ ಕೂಡ ಸಹಜವಾಗಿಯೇ ಬಂದು ನಿಲ್ಲುತ್ತವೆ. ತೋಳ್ಬಲ-ಸಂಖ್ಯಾಬಲಗಳೇ ಬಹುಮುಖ್ಯವಾದ ಮೇಲೆ ಆ ಮೂಲಕ ಆಯ್ಕೆಯಾಗಿ ಬಂದವರಿಂದ ಶಿಸ್ತು, ಸೌಜನ್ಯ, ಮೌಲ್ಯ, ಪ್ರಾಮಾಣಿಕತೆ ನಿರೀಕ್ಷಿಸುವುದು ದುರಾಸೆಯಾದೀತು. ಇಂತಿಪ್ಪ ಈ ಸಾಹಿತ್ಯ ಪರಿಷತ್ತಿನ ಗದ್ದುಗೆಯಲ್ಲಿ ಕುಳಿತವರು ಮೂರನ್ನೂ ಬಿಡದೇ ಇದ್ದಿದ್ದರೆ ಈ ಹಿಂದೆ ಚುನಾವಣೆ ನಡೆದು ಎರಡು ವರ್ಷ ಕಳೆಯಬೇಕಿತ್ತು. ಸಾಹಿತ್ಯಲೋಕದ ಒಬ್ಬ ಪ್ರತಿನಿಧಿಯಂತೆ ವರ್ತಿಸದೇ ದುರಾಸೆಯಿಂದ ಬೈಲಾ ತಿದ್ದುಪಡಿ ಅದನ್ನು ತನ್ನ ಅವಧಿಗೇ ಅಳವಡಿಸಿಕೊಂಡು-ವಿಸ್ತರಿಸಿಕೊಂಡ ನಾಚಿಕೆಗೇಡಿನ ಸಂಗತಿಗೂ ಕಸಾಪ ಸಾಕ್ಷಿಯಾಯಿತು. ಸಾಹಿತ್ಯ ಪರಿಷತ್ತಿಗೆ ’ಕಪ್ಪುಚುಕ್ಕೆ’ ಬಳಿಯಲೂ ಕಾರಣವಾಯಿತು. ಈ ಹಿಂದೆಯೂ ಬೈಲಾ ತಿದ್ದುಪಡಿಯ ಚರ್ಚೆ ನಡೆದಿತ್ತು. ಆದರೆ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಆಗ ಅಧ್ಯಕ್ಷರಾಗಿದ್ದವರು ಮೂರನ್ನೂ ಬಿಡುವಷ್ಟು ಧೈರ್ಯವಂತರಾಗಿರಲಿಲ್ಲ. ಕನಿಷ್ಠ ಮಟ್ಟದ ಸ್ವಪ್ರಜ್ಞೆಯ ಜೊತೆಗೆ ಪರಿಷತ್ತಿನ ಘನತೆಯೂ ಅವರನ್ನು ತಮಗೆ ಬೇಕಾದಂತೆ ಮಾಡದೇ ಇರುವಂತೆ ತಡೆದಿತ್ತು. ಜೀವ ವಿರೋಧಿ- ಜನವಿರೋಧಿ ನಡೆ ನಡೆದುಕೊಳ್ಳಲೂ ಹಿಂದೇಟು ಹಾಕದ ಸ್ಥಿತಿಗೆ ಸಾಹಿತ್ಯ ಪರಿಷತ್ತು ತಲುಪಿದೆ. ಅದು ನಡೆಸುವ ವಾರ್ಷಿಕ ಕ್ರಿಯಾವಿಧಿಯ ಸಾಹಿತ್ಯ ಸಮ್ಮೇಳನದಲ್ಲಿಯೇ ಪರಿಷತ್ತಿನ ಅಧ್ಯಕ್ಷರ ನಡವಳಿಕೆ ಬಗ್ಗೆ ಬಹಿರಂಗ ಪ್ರತಿರೋಧವೂ ವ್ಯಕ್ತವಾಯಿತು. ತೋಯ್ದ ಮುಖ ನನ್ನದಲ್ಲ ಎಂದು ಒರೆಸಿಕೊಂಡದ್ದನ್ನೂ ಕನ್ನಡ ಜನತೆ ನೋಡಬೇಕಾಯಿತು. ಇಂತಹ ಘನ ಇತಿಹಾಸ-ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರು ಅಧ್ಯಕ್ಷರಾದರೆ? ಎಂಬ ಪ್ರಶ್ನೆ ತೇಲಿಬಂದಿತು ಆಗಲೇ. ತೇಲಿ ಬಂದ ಮಾತು ಚರ್ಚೆ- ಸಂವಾದಕ್ಕೂ ಕಾರಣವಾಗಿಯಿತು. ಅಪರೂಪಕ್ಕೆ ಪರಿಷತ್ತು ಧನಾತ್ಮಕ ಕಾರಣಕ್ಕಾಗಿ ಚರ್ಚೆಗೆ ಒಳಗಾಗಿದೆ. ಅಥವಾ ಪರಿಷತ್ತಿನ ಬಗ್ಗೆ ಕಾಳಜಿ ಇರುವವರು ಧನಾತ್ಮಕ ನೆಲೆಯಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಅದರ ಫಲ-ಫಲಿತ ಧನಾತ್ಮಕವಾಗಿಯೇ ಇರಬೇಕು ಎಂದೇನಿಲ್ಲ. ಅಲ್ಲವೇ? ಸಾಹಿತ್ಯ ಪರಿಷತ್ತು ಘನತೆಯಿಂದ ವರ್ತಿಸಿದ್ದನ್ನೂ ನೋಡಿ ದೀರ್ಘ ಕಾಲವಾಗಿದೆ. 1905 ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುವ ಪರಿಪಾಠ ಇಟ್ಟುಕೊಂಡಿದೆ. ಆರಂಭದ ದಿನಗಳಲ್ಲಿ ಪರಿಷತ್ತಿನ ಅಧ್ಯಕ್ಷರೇ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸುತ್ತಿದ್ದರು. ಕೆಲವರ್ಷಗಳ ನಂತರ ಈ ಪರಿಪಾಠ ಬದಲಾಯಿಸಿ, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸಾಹಿತಿ-ಲೇಖಕರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಗೆ ಬಂತು. ಕಳೆದ ನೂರೈದು ವರ್ಷಗಳಲ್ಲಿ ಸಾಹಿತ್ಯ ಪರಿಷತ್ತು ಇದುವರೆಗೆ 85 ರ ಮೇಲೆ ಸಮ್ಮೇಳನಗಳನ್ನು ನಡೆಸಿದೆ. ಮತ್ತು ನಡೆಸುತ್ತದೆ. ಈ ಸಮ್ಮೇಳನ ಅಧ್ಯಕ್ಷರ ಪಟ್ಟಿ ಮೇಲೆ ಕಣ್ಣು ಹಾಯಿಸಿದರೆ ಪರಿಷತ್ತಿನ ಪುರುಷ ಪ್ರಧಾನ ’ಮ್ಯಾಚೋ’ ಗುಣ ಢಾಳಾಗಿ ಎದ್ದು ಕಾಣುತ್ತದೆ. ಅಪರೂಪಕ್ಕೆ ಆಗಾಗ ಅಂದರೆ ಬೆರಳೆಣಿಕೆಗಿಂತ ಕಡಿಮೆ ಸಲ ಪರಿಷತ್ತು ತನ್ನದೇ ರೂಢಿಯನ್ನು ಮುರಿಯುವ ಧೈರ್ಯವನ್ನೂ ಮಾಡಿದೆ. ಉತ್ತರದ ಗಡಿಭಾಗದಲ್ಲಿ ಕನ್ನಡದ ಕೆಲಸ ಮಾಡಿದ ಲೇಖಕಿ, ಕನ್ನಡಕ್ಕಾಗಿ ಸಿಂಹಿಣಿಯಂತೆ ಹೋರಾಟ ಮಾಡುತ್ತಿದ್ದ ಜಯದೇವಿ ತಾಯಿ ಲಿಗಾಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಅಪ್ಪಟ ಕನ್ನಡದ ನೆಲ ಸಿದ್ಧರಾಮನ ಸೊನ್ನಲಿಗೆಯವರಾದ ತಾಯಿ ಲಿಗಾಡೆ ಅವರು ಏಕೀಕರಣ ಮತ್ತು ನಂತರದ ದಿನಗಳಲ್ಲಿ ನಡೆದ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ತಾಯಿಯ ಪದಗಳು, ಸಿದ್ಧರಾಮ ಪುರಾಣದಂತಹ ಗಮನಾರ್ಹ ಕೃತಿ ರಚಿಸಿದ ಜಯದೇವಿ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಮಂಡ್ಯದಲ್ಲಿ (1972) ದಲ್ಲಿ ನಡೆದ 48 ನೇ ಸಾಹಿತ್ಯ ಸಮ್ಮೇಳನಕ್ಕೆ ಜಯದೇವಿ ತಾಯಿ ಲಿಗಾಡೆ ಅವರು ಅಧ್ಯಕ್ಷರಾಗಿದ್ದರು. ಅದಾದ ಮೇಲೆ ಮತ್ತೊಮ್ಮೆ ಮಹಿಳೆಯೊಬ್ಬರಿಗೆ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆತದ್ದು 1999 ರಲ್ಲಿ. ಬಾಗಲಕೋಟೆಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಗೆ ಹಿರಿಯ ಲೇಖಕಿ ಶಾಂತಾದೇವಿ ಮಾಳವಾಡ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಾದ ಮೇಲೆ 2003 ರಲ್ಲಿ ಮೂಡಬಿದರೆಯಲ್ಲಿ ನಡೆದ 71ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ.ಕಮಲಾ ಹಂಪನಾ ಆಯ್ಕೆಯಾಗಿದ್ದರು. ಅದಲ್ಲದೇ ಗದಗದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಗೀತಾ ನಾಗಭೂಷಣ ಆಯ್ಕೆಯಾಗಿದ್ದರು. ಈ ನಾಲ್ಕು ಅಪರೂಪದ ಅಪವಾದಗಳನ್ನು ಹೊರತು ಪಡಿಸಿದರೆ ಪರಿಷತ್ತು ಅಂದರೆ ಅದರ ಅಧಿಕಾರದ ಚುಕ್ಕಾಣಿ ಹಿಡಿದವರು-ಪದಾಧಿಕಾರಿಗಳು ಅರ್ಧದಷ್ಟು ಕನ್ನಡಿಗರಿರುವ ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಹಾಗೆಂದರೆ ಅದು ಪೂರ್ಣ ಸತ್ಯ ಅಲ್ಲ ಎಂದು ವಾದಿಸಬಹುದು. ಕಾರ್ಯಕಾರಿ ಮಂಡಳಿಯಲ್ಲಿ ’ಮಹಿಳಾ ಪ್ರತಿನಿಧಿ’ಯ ನೇಮಕ ಮತ್ತು ಮಹಿಳಾ ಸಾಹಿತ್ಯದ ಕುರಿತ ಚರ್ಚೆ-ಸಂವಾದ-ಗೋಷ್ಠಿ ನಡೆಸುವ ಔದಾರ್ಯವನ್ನು ಪರಿಷತ್ತು ತೋರಿಸುತ್ತಲೇ ಬಂದಿಲ್ಲ. ಇಂತಹ ಪುರುಷ ಪ್ರಧಾನ, ಯಜಮಾನಿಕೆಯನ್ನು ಹೊಂದಿರುವ ಕನ್ನಡದ- ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಚುಕ್ಕಾಣಿ ಮಹಿಳೆಯೊಬ್ಬರಿಗೆ ಯಾಕೆ ಸಿಗಬಾರದು? ಎಂಬ ಪ್ರಶ್ನೆ ಸಕಾರಣ ಮತ್ತು ಸಕಾಲಿಕ. ಆದರೆ, ಪ್ರಶ್ನೆ ಇರುವಷ್ಟು ಸುಲಭವಾಗಿ ಉತ್ತರ ಇರುವುದಿಲ್ಲ. ಉತ್ತರ-ದಕ್ಷಿಣ, ಪ್ರಬಲ ಸಮುದಾಯಗಳ ಹಿಡಿತದಲ್ಲಿ ಇರುವ ಹಣ ಮತ್ತು ಅಧಿಕಾರ ಇರುವ ಈ ಸ್ಥಾನ ಮಹಿಳೆಗೆ ಸಿಗಬಹುದೇ? ಎಂದು ಯೋಚಿಸಿದರೆ ’ಬೆಳಕಿನ ಕಿರಣ’ ಪರಿಷತ್ತಿನ ಸುತ್ತೆಲ್ಲೂ ಕಾಣಿಸುವುದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿರುವ ಪರಿಷತ್ತು ಚುನಾವಣಾ ರಾಜಕಾರಣದ ಅಖಾಡವಾಗಿದೆ. ತೋಳ್ಬಲ-ಧನಬಲ-ಜಾತಿಬಲ ಇಲ್ಲದವರಾರೂ ಪರಿಷತ್ತಿನ ಸುತ್ತ ಸುಳಿಯುವ ಹಾಗಿಲ್ಲ. ಅಧ್ಯಕ್ಷರಾಗಲು ಅರ್ಹ ಮಹಿಳೆಯರಿಲ್ಲವೇ? ಈಗ ಪರಿಷತ್ತಿನ ಅಧ್ಯಕ್ಷರಾಗಲು ಬೇಕಿರುವುದು ಸಾಹಿತ್ಯ ರಚನೆ, ಸಾಹಿತ್ಯದ ಒಡನಾಟ, ಸಾಹಿತ್ಯಾಸಕ್ತಿ, ಆಡಳಿತದ ಅನುಭವ ಯಾವುದೂ ಮುಖ್ಯವಲ್ಲ. ಇಂತಿಪ್ಪ ಸಕಾರಣ ಕಾರಣಗಳ ಅಗತ್ಯವೇ ಇಲ್ಲದ ಅಧ್ಯಕ್ಷ ಹುದ್ದೆಯು ಮಹಿಳೆಯರಿಗೆ ಪೈಪೋಟಿಯಾಚೆಗಿನ ಸಂಗತಿ ಎಂಬಂತೆ ಗೋಚರವಾಗುತ್ತಿದೆ. ಮಹಿಳೆಯರಿಗೆ ಅಧಿಕಾರ ’ನೀಡುವ’? ಔದಾರ್ಯ ಪರಿಷತ್ತಿನ ಸದಸ್ಯರು ತೋರಬಹುದೇ? ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ನಿಂತರೆ ಅಥವಾ ಅವಿರೋಧ ಆಯ್ಕೆಯಾದರೆ ಮಾತ್ರ ಪರಿಷತ್ತು ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು. ಅದಿಲ್ಲದಿದ್ದರೆ ತೋಳ್ಬಲದ ಪೈಪೋಟಿಗೆ ಇಳಿದು ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಕಷ್ಟಸಾಧ್ಯದ ಸಂಗತಿ ಎಂದೇ ತೋರುತ್ತದೆ. ಈಗಿನ ದಿನಮಾನದಲ್ಲಿ ಚುನಾವಣೆ ನಡೆಯುವ ಹುದ್ದೆಗಳಿಗೆ ಅವಿರೋಧ ಆಯ್ಕೆ ನಿರೀಕ್ಷಿಸುವುದು ಅಸಾಧ್ಯವಾದ ಸಂಗತಿ. ಹೀಗಿರುವಾಗ ಉಳಿಯುವ ಒಂದೇ ಆಯ್ಕೆ ಎಂದರೆ ಇಬ್ಬರು ಮಹಿಳೆಯರನ್ನು ಚುನಾವಣೆಯ ಕಣಕ್ಕೆ ಇಳಿಸುವುದು ಅಥವಾ ಮಹಿಳೆಯರಿಬ್ಬರು ಚುನಾವಣೆಗೆ ಸ್ಪರ್ಧಿಸುವುದು. ಸಾರ್ವಜನಿಕ ಹುದ್ದೆಗಳಲ್ಲಿ ಅಂದರೆ ಅಧಿಕಾರ ನಡೆಸಿದ ಅನುಭವ, ಸಾಹಿತ್ಯದ ಆಸಕ್ತಿ, ಬರವಣಿಗೆಯಲ್ಲಿ ಆಸಕ್ತಿ ಇರುವ ಕೆಲವು ಮಹಿಳೆಯರು ಪರಿಷತ್ತಿನ ಅಧ್ಯಕ್ಷತೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ನನ್ನದು. ಹಿರಿಯ ಕಾದಂಬರಿಕಾರ್ತಿ-ಲೇಖಕಿ ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದವರು. ಇಂಗ್ಲಿಷ್‌ ಸಾಹಿತ್ಯದ ಅಧ್ಯಾಪಕಿಯಾಗಿದ್ದ ವೀಣಾ ಶಾಂತೇಶ್ವರ ಅವರು ಕನ್ನಡದಲ್ಲಿ ಗಮನಾರ್ಹ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ವೀಣಾ ಶಾಂತೇಶ್ವರ ಅವರ ಅಧ್ಯಕ್ಷರಾದರೆ ತಪ್ಪೇನು? ಸ್ವದೇಶಿ ಹೆಲಿಕ್ಯಾಪ್ಟರ್‌ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನ ಲೇಖಕಿ-ಕತೆಗಾರ್ತಿ ನೇಮಿಚಂದ್ರ, ಕನ್ನಡ ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಕಾರ್ಯನಿರ್ವಹಿಸಿದ, ಪತ್ರಿಕೆಯೊಂದರ ಸಂಪಾದಕರೂ ಆಗಿದ್ದ ಆರ್‌.ಪೂರ್ಣಿಮಾ, ಮಾತು-ಚಟುವಟಿಕೆ ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆ.ನೀಲಾ, ತಮ್ಮ ಸೊಗಸಾದ ಕವಿತೆಗಳ ಮೂಲಕ ಗಮನ ಸೆಳೆದಿರುವ ಸವಿತಾ.ನಾಗಭೂಷಣ, ವಿಮರ್ಶಕಿಯಾಗಿ ಚಿರಪರಿಚಿತರಿರುವ ಎಂ.ಎಸ್‌.ಆಶಾದೇವಿ… ಹೀಗೆಯೇ ಪಟ್ಟಿಯನ್ನು ಬೆಳೆಸಬಹುದು. ಪರಿಷತ್ತಿನ ಚುನಾವಣೆಯು ಇಂತಹ ’ಹೊಸ’ ಆಲೋಚನೆಗೆ ಇಂಬು ನೀಡುವಷ್ಟು ಪ್ರಗತಿಪರವಾಗಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಮತ್ತು ನೀಡಬೇಕು..! ************************************* ಕೆ.ಶಿವು.ಲಕ್ಕಣ್ಣವರ

ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..! Read Post »

ಇತರೆ, ಲಹರಿ

ಏಕೀ ಏಕತಾನತೆ

ಲಹರಿ ಏಕೀ ಏಕತಾನತೆ ಸ್ಮಿತಾ ಭಟ್ ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ. ನನಗೋ ಅಳುವೇ ತುಟಿಗೆ ಬಂದ ಅನುಭವ. ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು ಯಾರದ್ದಾದರೂ ಮನೆಯಲ್ಲಿ, ಹೋಟೆಲ್‌ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ ನನಗೆ ಕೊಟ್ಟ ಸರ್ಟಿಫಿಕೇಟ್ ನ ಲೆಕ್ಕವೇ ಇಲ್ಲ. ಇದೇನು ಇದ್ದಕ್ಕಿದ್ದಂತೆ ಈ ಪರಿ ಬದಲಾವಣೆ!? ನಿರಿಕ್ಷೆಗೂ ಮೀರಿದ ಪ್ರತಿಕ್ರಿಯೆ ಅಡುಗೆಯೆಂಬ ಅರಮನೆಯಲ್ಲಿ ನನ್ನ ಜಂಗಾಬಲವೇ ಉಡುಗಿಹೋಗಿತ್ತು. ಎದ್ದು ಹೊರಟವನ ಹಿಂದಿಂದೇ ಹೋಗಿ ಯಾಕೋ ಏನಾಯ್ತು ಹೇಳು. ಮತ್ತೆ ಇಷ್ಟು ದಿನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿಂತಾ ಇದ್ದೆ ಈಗೆನಾಯ್ತು ಅಂತದ್ದು. ಸೋತ ಭಾವದೊಳಗೆ ಅವನ ಪರಿ ಪರಿಯಾಗಿ ಕೇಳುತ್ತಿದ್ದೆ. ಅದು ಆವಾಗ ಆಗಿತ್ತು,ಈಗ ಅಲ್ಲ. ಈಗಂತೂ ನಿನ್ನ ಫಲಾವ್ ಯಾಕೋ ಮೊದಲಿನ ರುಚಿ ಬರೋದೇ ಇಲ್ಲ. ಮರೆತೇ ಹೋಗಿದೆ ಅಮ್ಮಾ ನಿಂಗೆ ಆವತ್ತಿನ ರುಚಿ ಎನ್ನುತ್ತ, ಯಾವ ಪ್ರತಿಕ್ರಿಯೆಗೂ ಕಾಯದೇ ಹೊರಟೇ ಹೋಗಿದ್ದ. ಮನೆಯ ಎಲ್ಲ ಸದಸ್ಯರಿಂದ ಇಂತಹದ್ದೊಂದು ತಕರಾರು ಸದಾ ಸ್ವೀಕರಿಸುವ ನನಗೆ,ರೂಡಿಯಾದ ವಿಚಾರವೇ ಆದರೂ ಮಗನಿಂದ ಬಂದ ಪ್ರತಿಕ್ರಿಯೆಗೆ ಬೆರಗಾಗಿದ್ದೆ. ಮತ್ತದರ ನಿರೀಕ್ಷೆಯೂ ಇರಲಿಲ್ಲ. ಇಲ್ಲ ಕಣೋ ಬಹಳ ದಿನದಿಂದ ಒಂದೇ ತೆರನಾದ ರುಚಿ, ಕೈ ಅಡುಗೆ ತಿಂತಾ ಇದ್ದೀಯಲ್ಲ.ಅದೂ ಅಲ್ಲದೇ ನಿತ್ಯ ಫಲಾವ್ ಬೇಕು ಅಂತೀಯಲ್ಲ,ಅದಕ್ಕೆ ನಿನಗೆ ಬೇಜಾರು ಬಂದಿದೆ. ಎಂದು ವಾಸ್ತವದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೆ. ಇರಬಹುದು ಬಿಡು ಅಮ್ಮಾ,, ಆದ್ರೂ ನೀನ್ಯಾಕೆ ಮೊದಲಿನಂತೆ ಅಡುಗೆ ಮಾಡೋದಿಲ್ಲ ಈಗ, ಎನ್ನುತ್ತಲೇ ಎದ್ದು ನಡೆದಿದ್ದ. ಅಡುಗೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಬೇಸಿನ್ ಒಳಗೆ ಇದ್ದ ಪಾತ್ರೆಗಳು. ಅಲ್ಲಲ್ಲೇ ತಿಂದು ಎದ್ದು ಹೋದ ತಟ್ಟೆಗಳು. ಒರೆಸಿ ಇಡಬೇಕಾದ ಪಿಂಗಾಣಿಗಳು. ಪಿಲ್ಟರ್ ಕೆಳಗೆ ಚೆಲ್ಲಿದ ನೀರು. ತುಂಬಿಟ್ಟ ತರಕಾರಿಳ ದಂಡು. ಜಾಗ ತಪ್ಪಿದ ಡಬ್ಬಿಗಳು. ಮಾಡಬೇಕಾದ ನಿತ್ಯದ ಏಕತಾನತೆಯ ನೋವನ್ನು ನೆನಪಿಸುತ್ತಿತ್ತು. ಸ್ವಲ್ಪ ಯೋಚಿಸಿ ಊಟ ಮಾಡುವವರಿಗೇ ಏಕತಾನತೆ ಕಾಡುವಾಗ ಅಡುಗೆ ಮಾಡುವರಿಗೆ ಇನ್ನೆಂತ ಏಕತಾನತೆ ಕಾಡುತ್ತದೆ ಎಂದು. ಕೇವಲ ಊಟ, ಅಡುಗೆ ವಿಷಯ ಮಾತ್ರವಲ್ಲ, ಪ್ರತೀ ಕೆಲಸದಲ್ಲೂ ಅಷ್ಟೇ ಮಾಡುವ ಕಷ್ಟ ಆಡುವವನಿಗೆ ಎಂದೂ ಅರ್ಥವಾಗುವದಿಲ್ಲ. ಅದಕ್ಕೇ ಹೇಳೋದು ಮಾತೊಗೆದು ಹೋಗುವಾಗಿನ ಅಹಂಕಾರ ಮೈ ಮುರಿದ ದುಡಿಯುವಾಗ ಇರೋದಿಲ್ಲ ಎಂದು. ಈಗ ಐದಾರು ತಿಂಗಳಿನಿಂದ ಕರೋನಾ ಕಾರಣದಿಂದಾಗಿ, ಕಾಲ ಎಲ್ಲರನ್ನೂ ಬದಿಗೆ ಸರಿಸಿ ತಾನು ಮಾತ್ರ ಓಡುತ್ತಿದೆಯೇ ಅನ್ನಿಸುತ್ತಿದೆ. ಅದೆಷ್ಟೋ ಜನರ ಮನದೊಳಗೆ ಏಕತಾನತೆ ರೇಜಿಗೆ ಹುಟ್ಟಿಸುವಷ್ಟು ಹರಡಿಕೊಂಡಿದೆ. ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಪದ್ದತಿಗೆ ಪುಲ್ ಸ್ಟಾಪ್ ಇಟ್ಟು ನಗುತ್ತಿದೆ. ಕರೋನಾ. ಇಂದು ಸರಿ ಹೋಗುತ್ತದೆ, ನಾಳೆ ಸರಿ ಹೋಗುತ್ತದೆ, ಎಂದು ಕಾದು ಕಾದು ಸುಸ್ತಾದ ಭಾವಗಳಿಗೆ ವಾಸ್ತವದ ಅರಿವು ಮೂಡಿಸಲು ಶತ ಪ್ರಯತ್ನ ಪಡುತ್ತಿದ್ದೇವೆ. ಒಂದೇ ಊಟ, ಒಂದೇ ನೋಟ, ಒಂದೇ ಮಾತು,ಕುಳಿತಲ್ಲೇ ಕೆಲಸ,ಪಿಳಿ ಪಿಳಿ ಕಣ್ಣು ಅದೇ ಮುಖ,ಅದೇ ಭಾವ,ಎಲ್ಲಿಯೂ ಹೋಗೋದು ಬರೋದು ಅಂತೂ ಇಲ್ವೇ ಇಲ್ಲ.ಕೇವಲ ಭಯ ಭಯ. ಕಪಾಟಿನಲ್ಲಿ ಡ್ರೆಸ್ಸುಗಳಂತೆ ಬದುಕು ಬಣ್ಣ ಮಾಸುತ್ತಿದೆ ದುಬಾರಿ ಮೇಕಪ್ ಕಿಟ್‌ಗಳಂತೆ ಭಾವಗಳು ಡೇಟ್ ಬಾರ ಆಗುತ್ತಿವೆ. ಒಂದಿನ ರಜೆ ಸಿಕ್ಕಿದ್ರೆ ಸಾಕಪ್ಪ ಅಂತಿದ್ದವರು ಯಾವಾಗಪ್ಪ ಕೆಲಸಕ್ಕೆ ಹೋಗೋದು ಎಂದು ಒದ್ದಾಡುತ್ತಿದ್ದಾರೆ. ಮಾಡಬೇಕಾದ ಕೆಲಸಗಳೆಲ್ಲ ಮಕಾಡೆ ಮಲಗಿವೆ. ಆದರೆ ರಾತ್ರಿ ಬೆಳಗು ಮಾತ್ರ ಆಗುತ್ತಲೇ ಇದೆ,  ನಾವು ಮಾತ್ರವೇ ನಿಂತ ನೀರಾಗಿದ್ದೇವೆ ಎಂದು ಅಲವತ್ತು ಕೊಳ್ಳುತ್ತ,  ಆವಾಹನೆ ಮಾಡದೇ ಹೋದರೂ ಬರುವ ಬೇಸರದ ಬೂತಕ್ಕೆ ಬಸವಳಿದು ಹೋಗಿದ್ದೇವೆ. ಆರಂಭದ ಬದಲಾವಣೆಯನ್ನು ನಗು ನಗುತ್ತಲೇ ಸ್ವೀಕರಿಸಿದ ನಾವು,ಹೊಸ ಮಾರ್ಪಾಡಾಗಿ ಬದಲಾಯಿಸಿಕೊಳ್ಳಬೇಕೆಂದುಕೊಂಡ ನಾವು, ಈಗ ಮುಗುಮ್ಮಾಗಿ ಕುಳಿತಿದ್ದೇವೆ. ಉತ್ಸಾಹ ಕುಂದಿದೆ.ಅಯ್ಯೋ ಏನಾದರೂ ಆಗಲಿ, ಒಂದು ಬದಲಾವಣೆ ಬರಲಿ, ಎಂದು ಬಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಬಂದಿಸಿಟ್ಟ ಸಮಯವನ್ನೂ ಸಂಯಮದಿಂದ ಕಳೆಯಬೇಕು. ಹೊಸತೇನ್ನೋ ಕಂಡುಕೊಳ್ಳಬೇಕು,ಎಂದು ಮನಸಿನಲ್ಲಿ ಲೆಕ್ಕ ಹಾಕಿದ ಸರಕುಗಳೆಲ್ಲ ಮುಗಿದು ಹೋಗಿವೆ. ಏನನ್ನೇ ಆದರೂ ಎದುರಿಸುವ ಛಲ ಕಳ್ಳಬೆಕ್ಕಿನಂತೆ ಓಡಾಡುತ್ತಿದೆ. ಯಾವ ಏಕತಾನತೆಯೇ ಆದರೂ ಬೇಸರ ತರಿಸುವುದು ಮನುಷ್ಯನ ಸ್ವಾಭಾವಿಕ ಗುಣಲಕ್ಷಣ,ಬಂಗಲೆಯಲ್ಲಿ ಬದುಕುವವಗೆ ಗುಡಿಸಲು ಆಕರ್ಷಿಸುವಂತೆ, ಗುಡಿಸಲು ಅರಮನೆಯ ಕನಸು ಕಾಣುವಂತೆ, ನಿರಂತರವಾದ ಸುಖ, ಪ್ರೀತಿ,ನೋವು, ಕಷ್ಟಗಳೂ, ಬದಲಾವಣೆಯನ್ನು ಬಯಸುತ್ತವೆ ಮತ್ತು ಬದಲಾವಣೆಯ ಮಾರ್ಗವನ್ನೂ ಕಂಡುಕೊಳ್ಳುತ್ತವೆ. ಯಾಕೆಂದರೆ ಮನುಷ್ಯ ಸದಾ ಚಲನೆಯನ್ನು ಇಷ್ಟಪಡುತ್ತಾನೆ. ನಿಂತ ನೀರಾದರೆ ಅಸಾಧ್ಯ ಅಸಹನೆಯಿಂದ ಗಬ್ಬುನಾರಲು ಶುರುವಾಗುತ್ತಾನೆ. ಓಡುವ ಮೋಡ,ಹರಿಯುವ ನದಿ. ಬೀಸುವ ಗಾಳಿ,ಕೊನೆಗೆ ಭೂಮಿ ಸೂರ್ಯ ಚಂದ್ರ ಸಕಲ ಗ್ರಹಗಳೂ ಚಲನೆಯ ಪ್ರತೀಕವೇ.ಅವುಗಳನ್ನೆಲ್ಲ ಹೇಗೆ ತಡೆದು ಹಿಡಿಯಲು ಸಾಧ್ಯವಿಲ್ಲವೋ , ತಡೆದರೂ ಅನಾಹುತವಾಗುವದೋ, ಮನುಷ್ಯನ ಚಲನೆಯನ್ನು ತಡೆದರೂ ಅದೇ ಸಂಭವಿಸುತ್ತದೆ.  ಇನ್ನು ಪುಟ್ಟ ಪುಟ್ಟ ಮಕ್ಕಳನ್ನು ಹೇಗೆ ಒಂದೇ ಗತಿಯಲ್ಲಿ ಇಡಲು ಸಾಧ್ಯ. ಬಹಳವೇ ಖಿನ್ನರಾಗುತ್ತಿದ್ದಾರೆ ಅವರು. ಶಾಲೆ ಎನ್ನುವುದು ಮಕ್ಕಳಿಗೆ ಬೇಸರಕ್ಕಿಂತ ಹೆಚ್ಚು ಆಪ್ತಸಂಗತಿ. ಮನೆಯಲ್ಲಿ ಇದ್ದೂ ಇದ್ದೂ ಏನೂ ಘಟಿಸದ ಬದುಕಿನಿಂದ ಬೇಸತ್ತ ಭಾವ ಹಲವು ಮಕ್ಕಳಲ್ಲಿ ವ್ಯಕ್ತವಾಗುತ್ತಿದೆ. ಸ್ವಚ್ಚಂದ ಹಕ್ಕಿಗಳ ಗೂಡಿನಲ್ಲಿ ತುಂಬಿದರೆ ಏನಾದೀತು ಅಲ್ಲವೇ!? ಎನನ್ನೇ ಆದರೂ ಸ್ವಲ್ಪ ದಿನ ಸಹಿಸಿಕೊಳ್ಳುತ್ತದೆ. ಮನಸು. ಬಹಳ ಧೀರ್ಘಕಾಲದವರೆಗಿನ ಏಕತಾನತೆಗೆ ಒಳಗಾಗಲಾರದು. ಬದಲಾವಣೆ ಬಯಸುತ್ತಲೇ ಇರುತ್ತದೆ. ಆಗಲೇ ಅಲ್ಲವೇ? ನಾವು ಪ್ರವಾಸ, ಶಾಪಿಂಗ್,ಸಂಬಂಧಿಕರಮನೆ,ಅಂತೆಲ್ಲ ತಾತ್ಕಾಲಿಕ ಗ್ಯಾಪ್ ತೆಗೆದುಕೊಂಡು ಮತ್ತೆ ಸ್ವಕ್ಷೇತ್ರಕ್ಕೆ ಮರಳುವದು. ಜೀವನದ ಪರ್ಯಂತ ನಾವು ಹೀಗೆ ಮನಸ್ಸನ್ನು, ಬದುಕನ್ನು, ರಿಪ್ರೆಷ್ ಆಗುವ ಕಾರ್ಯ ಮಾಡುತ್ತಲೇ ಇರುತ್ತೇವೆ,ಏಕೆಂದರೆ ಆಗಾಗ ಬರುವ ಏಕತಾನತೆಯಿಂದ ಮಕ್ತಿಪಡೆಯಲು,ಅದು ಸರಿಕೂಡಾ. ಆದರೆ ಈಗ !? ಬದಲಾವಣೆಗಳನ್ನು ಬರಮಾಡಿಕೊಳ್ಳಲಾಗದೇ ಅಸಹಾಯಕರಾಗಿ ಪರ ಪರ ಕೆರೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಅಪರೂಪಕ್ಕೆ ಹೊರಗೆ ಕಾಲಿಟ್ಟ ಗಳಿಗೆಯನ್ನೇ ಭಯಂಕರ ಖುಷಿಯಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ಬದಲಾವಣೆಗಳನ್ನು ಮನಸು ಬಯಸುವಾಗ, ಇನ್ನೆಷ್ಟು ದಿನ ಒಂದೇ ರುಚಿಯ ಫಲಾವ್ ಅನ್ನೇ ಹೊಗಳಿ ಹೊಗಳಿ ತಿನ್ನಲು ಸಾಧ್ಯ!? ಅವನ ಏಕತಾನತೆಗೂ ಅರ್ಥವಿದೆ ಅಂತನ್ನಿಸಿತು ನನಗೂ. ಮತ್ತೆ ನನ್ನೆದುರು ಬಂದು ಅಮ್ಮಾ ಶಾಲೆ ಶುರುವಾದರೆ ಎಲ್ಲ ಸರಿಯಾಗುತ್ತೆ ಅಂದ. ಹೌದು ಕಣೋ ಶಾಲೆಗೆ ಹೋಗಿ ಬಿಸಿಯೂಟ ಉಂಡು ಸ್ನೇಹಿತರ ಜೊತೆ ಕಳೆದು ಓದು ಬರಹ ತಲೆ ತುಂಬಾ ಹೊದ್ದು ಹೈರಾಣಾದಾಗ. ಖಂಡಿತವಾಗಿ ಮತ್ತದೇ ಫಲಾವ್ ಗೆ ಬಾಯಿ ಚಪ್ಪರಿಸುತ್ತೀಯಾ. ಬದುಕೂ ಹಾಗೆ  ಸಂಪೂರ್ಣವಾಗಿ ನಿರಂತರ ಬದಲಾವಣೆಯೊಂದಿಗೇ ಅನುಭವಿಸುತ್ತಿರಬೇಕು ಆಗಲೇ ಲವಲವಿಕೆ. ಕಾಲ ಚಕ್ರದ ಗತಿಯಲ್ಲಿ ಏಳುಬೀಳುಗಳ ಸರಿದೂಗಿಸಿ ಹೋರಾಡುತ್ತಿದ್ದರೇ ಬದುಕಿಗೊಂದು ಅರ್ಥ ಎಂದೆ. ಬೇಗ ಶಾಲೆ ಶುರುವಾಗಲಿ ಎಂದು ಪ್ರಾರ್ಥಿಸುತ್ತಿದ್ದ. *******************************************************

ಏಕೀ ಏಕತಾನತೆ Read Post »

ಕಾವ್ಯಯಾನ

ಮಿಗೆಯಗಲ ನಿಮ್ಮಗಲ

ಕವಿತೆ ಮಿಗೆಯಗಲ ನಿಮ್ಮಗಲ ನೂತನ ದೋಶೆಟ್ಟಿ ದೇಹವನೆ ದೇಗುಲ ಮಾಡಿಜಗ ಮುಗಿಲುಗಳಗಲ ನಿಂತಕಾಣಲಾರದ ಕೂಡಲಸಂಗನಕರಸ್ಥಲದಲ್ಲೆ ಕರೆಸಿಭಕ್ತಿ ದಾಸೋಹವನೆಗೈದಜಗದ ತಂದೆ ಸಕಲ ಜೀವರಾತ್ಮವೂ ಪರಶಿವನ ನೆಲೆಮೇಲು – ಕೀಳೆಂಬುದು ಇಳೆಯ ಕೊಳೆಇದ ತೊಳೆವುದೇ ಶಿವ ಪಾದಪೂಜೆಕೂಡುಂಡ ಅನ್ನವೇ ಕರಣಪ್ರಸಾದಅರಿವ ಜ್ಯೋತಿ ಬೆಳಗಿಸಿದಕ್ರಾಂತಿಕಾರಿ ಅಣ್ಣ ದಯೆಯ ಬೀಜಮಂತ್ರವ ಪಠಿಸಿಸುಳ್ಳು- ಸಟೆ ಬಿಡುನೀತಿ ನಡೆ ನುಡಿಯೇ ಕೂಡಲಸಂಗಮಆವು ತಾವೆಂಬ ಸರಳತೆಯ ಕಲಿಸಿದಮಮತೆಯ ಮಾತೆ ಚಂದ್ರ- ಚಕೋರರ, ಭ್ರಮರ – ಬಂಡುವಅಂಬುಜ- ರವಿ, ಜ್ಯೋತಿ – ತಮಂಧಆಡುವ ನವಿಲು, ಓದುವ ಗಿಳಿಜಗವ ಅವನಲಿ ಕಂಡುತನ್ನ ಅವನಲಿ ಪಡೆದುಆರಾಧಿಪ ಕವಿ ಇಳೆಯ ಬಾಚಿ ನಿಂತುಭಕ್ತಿ -. ವಿರಕ್ತಿಗಳ ಮುಕ್ತಿಸಿನೀತಿ – ದಯೆಗಳ ನುಲಿಸುವಆನು – ತಾನುಗಳ ಪ್ರಣವಜಂಗಮಕ್ಕಳಿವಿಲ್ಲ ದಿಟ. *************************************************

ಮಿಗೆಯಗಲ ನಿಮ್ಮಗಲ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಮರೆವಿಗೆ ಇಲ್ಲಿದೆ ರಾಮಬಾಣ           ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು ಹೆತ್ತವರ ಗೋಳು. ಈ ಸಮಸ್ಯೆಗೆ ಅವರಿವರ ಜೊತೆ ಚರ್ಚಿಸಿ ಕೆಲ ಟಿಪ್ಸ್ ಸಿಕ್ಕರೂ ಅವು ಅಷ್ಟೊಂದು ಫಲ ನೀಡುತ್ತಿಲ್ಲ ಅನ್ನೋದು ಕೆಲವು ಪಾಲಕರ ಚಿಂತೆ. ಮರೆವು ಎನ್ನುವುದು ಒಂದು ರೋಗವೇ? ಇದಕ್ಕೆ ಮದ್ದು ಇಲ್ಲವೇ? ನನಗೆ ಜ್ಞಾಪಕ ಶಕ್ತಿ ಕಡಿಮೆ ಎಂಬ ಭ್ರಮೆ ತಲೆಯಲ್ಲಿ ಪ್ರ್ರಾರಂಭವಾದರೆ  ಅದನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.ಮರೆವು ಒಂದು ವರವೂ ಹೌದು. ಮರೆವು ಇರದಿದ್ದರೆ ಕಹಿ ಘಟನೆಗಳನ್ನು ದುಃಖದ ಸಂಗತಿಗಳನ್ನು ಮರೆಯಲು ಸಾಧ್ಯವಾಗದೇ ಬಾಳು ನಿತ್ಯ ನರಕವಾಗುತ್ತಿತ್ತು. ಪ್ರಮುಖ ವಿಷಯಗಳನ್ನು ಮರೆಯದೇ ನೆನಪಿÀಡಬೇಕೆ? ಹಾಗಾದರೆ ಇಲ್ಲಿದೆ ಅದಕ್ಕೆ ರಾಮಬಾಣ.  ಅಟೋ ಸಜೇಷನ್  ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಎಲ್ಲರಲ್ಲೂ ಒಂದೇ ರೀತಿಯಲ್ಲಿರುತ್ತದೆ. ಇದನ್ನು ದಿನ ನಿತ್ಯ ಮೊಂಡಾದ ಚಾಕು ಹರಿತಗೊಳಿಸುವಂತೆ, ಪರಿಶ್ರಮದಿಂದ ವೃದ್ಧಿಸಿಕೊಳ್ಳುತ್ತಾರೆ. ಗೆಲುವು ಸಾಧಿಸುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿ ಜ್ಞಾಪಕ ಶಕ್ತಿಯ ಪ್ರಮಾಣವೇ ಕಡಿಮೆ ಇದೆ ಎಂಬ ಭ್ರಮೆಗೆ ಜೋತು ಬಿದ್ದು ವಿಫಲರಾಗುತ್ತಾರೆ. ಕೆಲ ಜನರು ತೀರಾ ಅನಗತ್ಯವೆನಿಸುವ ವಿಷಯಗಳನ್ನು ಪ್ರಮುಖವೆಂದು ಭಾವಿಸಿ ಆ ಸಂಗತಿಗಳು ತಮ್ಮ ತಲೆಯಲ್ಲಿ ಉಳಿಯುವುದಿಲ್ಲ ಎಂದು ಚಿಂತಿಸುತ್ತಾರೆ. ನಿಜ ಹೇಳಬೇಕೆಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಖುಷಿ ¥ಡಬೇಕು ನೀವು ಪುಸ್ತಕ ಪೆನ್ನು ಇತ್ಯಾದಿ . ದಿನ ನಿತ್ಯ ಇಡುವ ಜಾಗದಲ್ಲಿ ಇಡದೇ ಬೇರೆ ಜಾಗದಲ್ಲಿಟ್ಟು ಹುಡುಕುತ್ತ ಇತ್ತೀಚಿಗೆ ನನಗೆ ಮರೆವು ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಂಡರೆ ಅದೊಂದು ರೀತಿಯ ಮೂರ್ಖತನವೇ ಅಲ್ಲವೇ? ಎಲ್ಲೋ ಇಟ್ಟು ಎಲ್ಲೋ ಹುಡುಕಿದರೆ ಸಿಗುವುದಾದರೂ ಹೇಗೆ? ನನಗೆ ಜ್ಞಾಪಕ ಶಕ್ತಿ ಕಡಿಮೆ ಮರೆವು ಜಾಸ್ತಿ ಎಂದು ಪದೇ ಪದೇ ಹೇಳಬೇಡಿ. ಈ ಸಂಗತಿ  ಮೆದುಳಲ್ಲಿ ಪ್ರತಿಷ್ಟಾಪಿಸಿದರೆ ಅಪಾಯಕಾರಿ. ನನಗೆ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಅಟೋ ಸಜೆಷನ್ (ಸ್ವ ಸಲಹೆ) ಕೊಟ್ಟುಕೊಳ್ಳಿ ಪರಿಣಾಮವೂ ಅದ್ಭುತವಾಗಿರುತ್ತದೆ. ಆಸಕ್ತಿ ವಲಯ ಬದಲಿಸಿ ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದರೆ ಯಾರು ಎಷ್ಟು ಶತಕ ಬಾರಿಸಿದರು? ಭಾರತ ಯಾವಾಗ ವಿಶ್ವ ಕಪ್ ಗೆದ್ದಿತು? ಯಾರು  ಬ್ಯಾಟಿಂಗ್  ದಾಖಲೆ ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸುತ್ತೀರಿ. ಒಂದು ವೇಳೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಯಾವ ಸಿನಿಮಾದಲ್ಲಿ ಯಾರು ಹೀರೋ? ನಿರ್ದೇಶನ ಯಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತೀರಿ. ಸಂಗೀತದಲ್ಲಿ ಆಸಕ್ತಿ ಇದ್ದರೆ ಗೀತೆ ರಚನೆಕಾರರು ಯಾರು? ಹಾಡಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಅರೆ ಕ್ಷಣ ಯೋಚಿಸದೇ ಫಟಾ ಫಟ್ ಉತ್ತರಿಸಿ ಬಿಡುತ್ತಿರಿ. ಇಷ್ಟವಾದ ವಿಷಯಗಳನ್ನು ನೆನಪಿಡಲು ಕಷ್ಟವೆನಿಸುವುದಿಲ್ಲ. ಆದರೆ ಇಷ್ಟ ಇಲ್ಲದ ವಿಷಯ ಬಂದಾಗ ಮರೆವು ಜಾಸ್ತಿ ಇದೆ ಎನ್ನುವ ದೂರು ನೀಡುವ ನಿಮಗೆ ಇದೆಲ್ಲ ಉತ್ತರಿಸೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಭ್ರಮೆಯಲ್ಲಿರುವವರಿಗೆ ಹೆಚ್ಚಾಗಿ ಮೂಡುವುದಿಲ್ಲ. ಒಮ್ಮೆ ಪ್ರಶ್ನಿಸಿಕೊಂಡು ನೋಡಿ ಹೌದು ನನ್ನಲ್ಲಿ ಜ್ಞಾಪಕ ಶಕ್ತಿ ಅಗಾಧವಾಗಿದೆ. ಆದರೆ ನನ್ನ ಆಸಕ್ತಿ ವಲಯ ಬದಲಿಸಿದರೆ ನಾನು ಓದಿಗೆ ಸಂಬಂಧಿಸಿದ ಅಥವಾ ನನಗೆ ಬೇಕಾದ ವಿಷಯ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಎಂಬುದು ಸ್ಪಷ್ಟವಾಗುವುದು. ಪುನರಾವಲೋಕನ  ನೀವು ಓದಿದ ವಿಷಯಗಳನ್ನು ಮೇಲಿಂದ ಮೇಲೆ ಪುನರಾವಲೋಕನ ಮಾಡಿಕೊಳ್ಳುತ್ತಿರಬೇಕು  ಪುನರಾವರ್ತನೆಗೊಳ್ಳುವ ವಿಷಯಗಳನ್ನು ಮೆದುಳು ಅಷ್ಟು ಸಲೀಸಾಗಿ ಮರೆಯಲು ಸಾಧ್ಯವಿಲ್ಲ. ಪರೀಕ್ಷೆ ಬರೆಯುವಾಗ ಈ ವಿಷಯಗಳು ಖಂಡಿತ ನೆನಪಿಗೆ ಬರುವವು. ಒಮ್ಮೆ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸಿ ಪರೀಕ್ಷಿಸಿ ನೋಡಿ. ನಿಮಗೆ ಅಚ್ಚರಿ ಎನಿಸುತ್ತದೆ. ಪುನರಾವಲೋಕನ ಮನೋಬರಲವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು ಎಂದು ವಿಷ್ಣು ಶರ್ಮ ಹೆಳಿದ್ದಾನೆ. ಅಂತೆಯೇ ಓದಿದ ವಿಷಯಗಳನ್ನು ಅರ್ಥೈಸಿಕೊಂಡು ಪುನರಾವಲೋಕನ ಮಾಡಿಕೊಳ್ಳಿ. ಅಕ್ರೋನಿಮ್ಸ್ ಬಳಸಿ ಹತ್ತು ಹಲವು ಅಂಶಗಳುಳ್ಳ ದೊಡ್ಡ ದೊಡ್ಡ ಉತ್ತರಗಳನ್ನು ನೆನಪಿನಲ್ಲಿಕೊಟ್ಟುಕೊಳ್ಳುವುದು ತುಂಬಾ ಕಷ್ಟ ಎನಿಸುವುದು ಸಹಜ. ಕಂಠ ಪಾಠ ಮಾಡುವ ಪದ್ದತಿ ಇಲ್ಲಿ ಉಪಯೋಗಕ್ಕೆ ಬಾರದು. ಶ್ಲೋಕಗಳು ಪದ್ಯಗಳು ಸುಭಾಷಿತಗಳನ್ನು ನೆನಪಿಡಲು ಮಾತ್ರ ಕಂಠ ಪಾಠ ಸೂಕ್ತ. ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ವಿಬ್ಗಾರ್ ಎಂದು ಅಕ್ಷರ ಮುದ್ರಿಕೆಯನ್ನು ಉಪಯೋಗಿಸುತ್ತಾರೆ.  ದೊಡ್ಡ ಉತ್ತರಗಳ ಅಂಶಗಳ ಮೊದಲ ಅಕ್ಷರಗಳನ್ನು ಒಟ್ಟುಗೂಡಿಸಿದರೆ ಅಕ್ಷರ ಮುದ್ರಿಕೆ (ಸಣ್ಣ ಪದಗಳು) ಅಬ್ರಿವೇಶನ್ಸ್ನಂತೆ  ಆಗುತ್ತದೆ. ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ವಾಕ್ಯವನ್ನು ರಚಿಸಿಕೊಳ್ಳಬಹುದು.ಅದೂ ಪರಿಣಾಮಾಕಾರಿ ಆಗಿರುತ್ತದೆ. . ಬೇಡ ಒತ್ತಡ ಕೇಳಿದ ಓದಿದ ನೋಡಿದ ವಿಷಯಗಳು ಮನದಲ್ಲಿ ಅಚ್ಚೊತ್ತಿದಮತೆ ಉಳಿಯಬೇಕೆಂದರೆ ಮನಸ್ಸು ಪ್ರಫುಲ್ಲವಾಗಿರಬೇಕು. ಒತ್ತಡದಿಂದ ಕೂಡಿದ್ದರೆ ಸಣ್ಣ ಸಂಗತಿಗಳನ್ನು ನೆನಪಿಲ್ಲಿಡಲು ಸಾಧ್ಯವಾಗುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ ನಿಮ್ಮ ಓದು ಬರಹ ಸಾಗಲಿ. ದಿನ ನಿತ್ಯ ಕಲಿತ ಹೊಸ ಸಂಗತಿಗಳನ್ನು ಪುರ್ನಮನನ ಮಾಡಿಕೊಳ್ಳಿ. ಶ್ರೀರಂಗರು ಹೇಳಿದಂತೆ ಮಾನವರಿಗೆ ವಿಚಾರಕ್ಕಿಂತ ಆಚಾರದ ಮಹತ್ವವಿದೆ. ಬುದ್ಧಿಗಿಂತ ಶ್ರದ್ಧೆಗೆ ಮಹತ್ವವಿದೆ. ಹೀಗಾಗಿ ನೆನಪಿನ ಶಕ್ತಿಗೆ ಶ್ರದ್ಧೆ ಅತಿ ಮುಖ್ಯವಾದುದು. ಏಕಾಗ್ರತೆ ವಿವೇಕಾನಂದರು ನುಡಿವಂತೆ ಇಂದ್ರೀಯಗಳು ಪ್ರತಿಕ್ಷಣದಲ್ಲೂ ನಮ್ಮನ್ನು ಮೋಸಪಡಿಸುತ್ತಿರುತ್ತವೆ.ನಮ್ಮೆಲ್ಲ ಇಂದ್ರೀಯಗಳನ್ನು ನಿಗ್ರಹಗೊಳಿಸಿ ಒಂದೇ ಕಡೆ ಚಿತ್ತದ ಗಮನ ಹರಿಸುವುದೇ ಏಕಾಗ್ರತೆ. ಇಂದ್ರೀಯಗಳು ಯಾವಾಗಲೂ ಪರತಂತ್ರವಾಗಿವೆ. ಹೊರಗಣ ತಂತ್ರಗಳನ್ನು ಅವಲಂಬಿಸಿವೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅದರಾಚಿಗಿನ ವಿಷಯವನ್ನು ಎಂದಿಗೂ ಯೋಚಿಸಬಾರದು. ವರ್ತಮಾನದಲ್ಲಿ ಮಾತ್ರ ಚಿತ್ತ ಮುಳಗಿರಬೇಕು. ಅಡುಗೆಗೆ ಉಪ್ಪು ಹೇಗೋ ಹಾಗೆ ಜ್ಞಾಪಕ ಶಕ್ತಿಯ ವೃದ್ಧಿಗೆ ಏಕಾಗ್ರತೆ. ಏಕಾಗ್ರತೆ ಇಲ್ಲದೇ ಸಣ್ಣ ಸಂಗತಿಯನ್ನು ಮೆದುಳಿನಲ್ಲಿ ದಾಖಲಿಸಲಾಗುವುದಿಲ್ಲ.  ಮನೆ ಮದ್ದು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಮನೆ ಮದ್ದುಗಳನ್ನು ಬಳಸಿ. ಸರಿಯಾದ ಸಮಯಕ್ಕೆ  ಸಮತೋಲಿತ ಆಹಾರ, ನೀರಿನ ಸೇವನೆ ವ್ಯಾಯಾಮ ನಿದ್ದೆ ಮೆದುಳಿಗೆ ಕಸರತ್ತು ನೀಡುವ ಮೆಮರಿ ಗೇಮ್ಸ್ಗಳನ್ನು ಆಡಿ ಅವು ಮೆದುಳನ್ನು ಬಲಪಡಿಸುತ್ತವೆ ಅದರೊಂದಿಗೆ ಈ ಎಲ್ಲವೂ ಜ್ಞಾಪಕ ಶಕ್ತಿಗೆ ಪರೋಕ್ಷವಾಗಿ ಪುಷ್ಟಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಮತ್ತು ಮಾನಸಿಕ ತಜ್ಞರು ಜ್ಞಾಪಕ ಶಕ್ತಿ ಹೆಚ್ಚಿಸಲು ಅನೇಕ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರೆವಿಗೆ ಮದ್ದು ನೀಡುವ ಪುಸ್ತಕಗಳನ್ನು ಓದಿ. ಜ್ಞಾಪಕ ಸಕ್ತಿ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿ. ********** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ.  ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ.  ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ  `ಸಂಚಯ’ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಐದು ಬಾರಿ ಬಹುಮಾನ ಪಡೆದಿದ್ದಾರೆ. ಕಾರವಾರ, ಧಾರವಾಡ, ಭದ್ರಾವತಿ  ಆಕಾಶವಾಣಿ ಕೇಂದ್ರಗಳಲ್ಲಿ ಕತೆ, ಕವಿತೆ ಪ್ರಸಾರವಾಗಿವೆ. ಗೋವಾದಲ್ಲಿ ನಡೆದ ಅಂತರರಾಜ್ಯ ಕವಿಗೋಷ್ಟಿ ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರ ಮೊದಲ ಕವನ ಸಂಕಲನ `ಮಾಮೂಲಿ ಮಳೆಯಲ್ಲ’ ಪ್ರಕಟಿಸಿದೆ. ` ಅಶಾಂತ ಕಡಲು ಪ್ರಶಾಂತ ಮುಗಿಲು’ ಎಂಬ ಪ್ರಬಂಧ ಸಂಕಲನ ಪ್ರಕಟವಾಗಿದೆ. ಚೌಕಿಮನೆ(ಕವನ ಸಂಕಲನ), ಬಕ್ಕೆಮರ (ಕಥಾ ಸಂಕಲನ) ಸಿದ್ದತೆಯಲ್ಲಿದ್ದಾರೆ.  ದಾಂಡೇಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ `ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಕಾರವಾರದ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತ ನಗರದ ದಿವೇಕರ ವಾಣಿಜ್ಯ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅಂಕೋಲೆಯ ಪಿ.ಎಂ.ಸಂಯುಕ್ತ ಪ.ಪೂ.ಕಾಲೇಜಿನಲ್ಲಿ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. …………………………………  ಕತೆ, ಕವಿತೆ ಯಾಕೆ ಬರೆಯುತ್ತೀರಿ? ಎಲ್ಲೋ ಕಂಡ ಸನ್ನಿವೇಶಗಳು, ಸಂದರ್ಭಗಳು ನನ್ನ ಮನಸ್ಸನ್ನು ತಟ್ಟಿದರೆ ತಕ್ಷಣ ಬರೆಯಲು ತೊಡಗುತ್ತೇನೆ. ಕೆಲವು ಪಾತ್ರಗಳು ನನ್ನನ್ನು ಕಾಡಿದರೆ ಅದೇ ವಸ್ತುವಾಗಿ ಒಂದು ಕಥೆಯಾಗಬಹುದು. ಯಾವುದೋ ಒಂದು ಸನ್ನಿವೇಶ ನನ್ನದೆಯ ಭಾವನೆಗಳನ್ನು ಉಕ್ಕಿಸಿದರೆ ಅದು ಕವಿತೆಯಾಗುತ್ತದೆ. ಯಾವುದಕ್ಕೂ ಸ್ಫೂರ್ತಿ ಬೇಕೇ ಬೇಕು. ಸ್ಫೂರ್ತಿ ಸಿಕ್ಕರೆ ಅದನ್ನು ಕಥೆ, ಕವಿತೆಯಾಗಿಸುವುದಕ್ಕೆ ಪ್ರತಿಭೆ ಕೂಡಾ ಬೇಕಾಗುತ್ತದೆ. ಬರೆಯುವುದಕ್ಕೆ ಶುರು ಮಾಡಿದರೆ ಮಾತ್ರ ಮನಸ್ಸಿನ ಕದ ತೆರೆದು ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ತನಗೆ ತಾನೇ ಹೇಗೆ ಬರೆಯಬೇಕೆಂದು ನಿರ್ದೇಶಿಸುತ್ತದೆ. ನನ್ನ ಪ್ರೀತಿಯ ಚಿತ್ತಾಲರು ಹೇಳಿದ ಹಾಗೆ ‘ನಾನು ತಿಳಿದದ್ದನ್ನು ಬರೆಯುವುದಲ್ಲ, ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುತ್ತೇನೆ’. ಈ ಹೇಳಿಕೆ ನನಗೆ ತುಂಬಾ ಇಷ್ಟ. ಆಗಲೇ ಹೇಳಿದಂತೆ ನನಗೆ ಕಾಡಿದ ಪಾತ್ರಗಳು, ಸನ್ನಿವೇಶಗಳು ಕಾಡಿದ್ದರಿಂದಲೇ ನಾನು ಬರೆಯುವುದಕ್ಕೆ ತೊಡಗುತ್ತೇನೆ. ಕತೆ, ಕವಿತೆ ಹುಟ್ಟುವ ಕ್ಷಣ ಯಾವುದು?  ಅಕಾರಣ ಭಾವವೊಂದು ಸ್ಪೂರ್ತಿಯ ಬಿಂದುವಿನಲ್ಲಿ ಲೀನವಾದಾಗ ಮೂರ್ತರೂಪ ಪಡೆದು ಕೆಲವೇ ಸಾಲುಗಳಲ್ಲಿ ಬರೆದರೆ ಅದು ಕವಿತೆ. ಅದು ವಿಸ್ತಾರ ಪಡೆದರೆ ಕಥೆಯಾಗುತ್ತದೆ. ಆ ಕ್ಷಣ ಲೌಕಿಕವಾದ್ದು. ಅದು ಅಕಾರಣ ಪ್ರೀತಿಯಂತೆ. ನಾವು ಅನುಭವಿಸಿದ ನೋವುಗಳು ಕೂಡ ಕಥೆ, ಕವಿತೆಯ ರೂಪ ಪಡೆಯುತ್ತದೆ. ಕವಿಯಾದವ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ಕವಿತೆಯ ಭಾವವೋ ಕಥೆಯ ಪಾತ್ರವೋ, ವಸ್ತುವೋ ಮನಸ್ಸಿನ ತುಂಬ ತುಂಬಿ ಅದು ಬರವಣಿಗೆ ರೂಪ ಪಡೆದಾಗಲೇ ಮನಸ್ಸು ನಿರಾಳತೆ ಅನುಭವಿಸುವುದು. ಹೆಣ್ಣು ಅನುಭವಿಸುವ ಹೆರಿಗೆ ನೋವನ್ನು ಒಬ್ಬ ಕವಿ, ಕಥೆಗಾರನೂ ಅನುಭವಿಸುತ್ತಾನೆ.  ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಸಾಮಾನ್ಯವಾಗಿ ದುರ್ಬಲ ವರ್ಗದವರ ಮೇಲೆ ಮಾಡುವ ಉಳ್ಳವರ ಶೋಷಣೆ ಪ್ರೀತಿಯ ಅಗಾಧತೆ ಸಮಾಜವನ್ನು ನಡೆಯುವ ಘಟನೆಗಳು ಉದ್ಯೋಗಸ್ತರ ಮಾನಸಿಕ ತಾಕಲಾಟಗಳು, ದ್ವೇಷ ತುಂಬಿದ ವ್ಯಕ್ತಿತ್ವಗಳ ಮನೋಧರ್ಮಗಳು ಕಥೆಯಾಗುವಲ್ಲಿ ಕಾರಣವಾಗಿವೆ. ನನಗೆ ತುಂಬಾ ಕಾಡುವ ವಿಷಯವೆಂದರೆ ಪ್ರಾಮಾಣಿಕತೆ, ನಿಷ್ಠೆಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು. ಅಸೂಯೆ ತುಂಬಿದ ಸಣ್ಣತನದ ವ್ಯಕ್ತಿತ್ವಗಳು, ಹೆದ್ದಾರಿಯಲ್ಲಿ ಹೂಮಾರಿ ಶಾಲೆಗೆ ಹೋಗುವ ಹುಡುಗಿಯರು, ಹತ್ತಾರು ಕೀಲೋಮೀಟರ್ ಬೆಟ್ಟ ಸುತ್ತಿ ಸೌದೆ ತಂದು, ಮತ್ತೆ ಅಷ್ಟೇ ಕೀಲೋ ಮೀಟರ್ ಸೌದೆ ಹೊತ್ತು ಅದನ್ನು ಕಡಿಮೆ ದುಡ್ಡಿಗೆ ಮಾರಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆ ಮುನ್ನಡೆಸುವ ‘ಲಂಕೇಶರ ಅವ್ವ’ನಂತ ನನ್ನ ಜನಾಂಗದ ಮಹಿಳೆಯರು. ಮನುಷ್ಯನಲ್ಲಿ ಮಾನವೀಯತೆ ಕಳಕೊಂಡಾಗ ಪ್ರಾಣಿಗಳಲ್ಲಿ ಅದು ವ್ಯಕ್ತವಾಗುತ್ತದಲ್ಲ ಅದು ನನ್ನನ್ನು ತುಂಬಾ ಕಾಡುತ್ತದೆ. ವಿಕಲಚೇತನ ವ್ಯಕ್ತಿ ಇರುವ ಒಂದೇ ಅದೂ ಸೊಟ್ಟಗಾಗಿರುವ ಕಾಲಿನಲ್ಲಿ ಚಿತ್ರ ಬಿಡಿಸಿ, ಬಣ್ಣ ತುಂಬಿ ಅದನ್ನು ದಾರಿಹೋಕರಿಗೆ ಮಾರಿ ಮನೆಯಲ್ಲಿರುವ ತಾಯಿ ತಂಗಿಯನ್ನು ಸಾಕುವ ಬೆಂಗಳೂರಿನ ಒಬ್ಬ ವ್ಯಕ್ತಿಯೊಬ್ಬ ನನ್ನನ್ನು ತುಂಬಾ ಕಾಡುತ್ತಾನೆ.  ಕಥೆ, ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ? ಹೌದು. ಬಾಲ್ಯವಿಲ್ಲದೆ ಯಾವುದು ಇಲ್ಲ. ನಾನು ಬರೆಯುವ ಕಥೆ ಮತ್ತು ಕವಿತೆಗಳಲ್ಲಿ ಬಾಲ್ಯದ ಅನುಭವಗಳೇ ಜಾಸ್ತಿಯಾಗಿವೆ. ಬಾಲ್ಯ ಅನುಭವಿಸದೆ ಹರೆಯಕ್ಕೆ ಅರ್ಥವಿಲ್ಲ. ಈಗ ಮಕ್ಕಳ ಬಾಲ್ಯವೆಲ್ಲಾ ಹೋಮ್ ವರ್ಕ, ರಿಯಾಲಿಟಿ ಶೋಗಳ ತಯಾರಿ, ಮೊಬೈಲಿನ ವಿಡಿಯೋ ಗೇಮ್‌ಗಳಲ್ಲಿ. ಮಕ್ಕಳ ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ, ಪ್ರಖ್ಯಾತಿಯ ಹುಚ್ಚಿನ ಪಾಲಕರು ಮಕ್ಕಳಿಗೆ ಉಂಟು ಮಾಡುವ ಒತ್ತಡ ಕಂಡಾಗ ಅಚ್ಚರಿಯೆನಿಸುತ್ತದೆ. ಬಾಲ್ಯದ ಮುಗ್ಧತೆ ಅನುಭವಿಸುವುದನ್ನು ಪಾಲಕರು ನೋಡಬೇಕು. ಆ ನಂತರ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ‘ಸೇವೆ’ ಎನ್ನುವುದು ಅರ್ಥ ಕಳೆದು ಕೊಂಡಿದೆ ಪ್ರಸ್ತುತ ರಾಜಕೀಯ ಅವಕಾಶವಾದಿ ರಾಜಕಾರಣವಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂದೋ ಕಳೆದು ಹೋಗಿದೆ. ವಿರೋಧ ಪಕ್ಷ ಇದ್ದು ಇಲ್ಲದಂತಾದ ಎಂಬತ್ತರ ದಶಕದಲ್ಲಿ ಲಂಕೇಶರ ‘ಲಂಕೇಶ ಪತ್ರಿಕೆ’ ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿತ್ತು. ಅದು ದೇಶಕ್ಕೇ ಮಾದರಿ. ಯಾವ ಜಾಹಿರಾತಿಲ್ಲದೇ ಪತ್ರಿಕೆ ನಡೆಸಿ ರಾಜಕೀಯ ಪಕ್ಷಗಳನ್ನು, ಸರ್ಕಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಎಲ್ಲಾ ತರದ ಪತ್ರಿಕೆಗಳಿಗೆ ಮಾದರಿ. ಪತ್ರಿಕೆಗಳೂ ಕೂಡಾ ಪಕ್ಷಗಳ ಮುಖವಾಣಿಯಾಗಬಾರದು. ನಮ್ಮ ದಿನಕರ ದೇಸಾಯಿಯಂತವರು ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯನ್ನು ಆವರಿಸಿದೆ. ಶಿಕ್ಷಣ, ರೈತ ಹೋರಾಟ, ದುರ್ಬಲ ವರ್ಗದವರ ಅಭ್ಯುದಯ ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ. ಆಗಿನ ಅವರ ರೈತ ಹೋರಾಟ ಕರ್ನಾಟಕದ ಮೊದಲ ರೈತ ಹೋರಾಟ ಎಂದು ಲಂಕೇಶ ಕರೆದಿದ್ದರು. ಕಾಗೋಡ ಹೋರಾಟದ ಭರಾಟೆಯಲ್ಲಿ ದೇಸಾಯಿಯವರ ರೈತ ಹೋರಾಟಕ್ಕೆ ಅಷ್ಟು ಪ್ರಭಾವ ಸಿಗಲಿಲ್ಲವೆನ್ನಬೇಕು. ಈಗಲೂ ಕೂಡ ಉತ್ತಮ ರಾಜಕಾರಣಿಗಳು ಖಂಡಿತಾ ಇದ್ದಾರೆ. ಅಂತವರಿಂದಲೇ ನಾಡಿನ ಅಭಿವೃದ್ಧಿಯನ್ನು ನೀರಿಕ್ಷಿಸಬಹುದು. ಹಣ, ಅಧಿಕಾರದ ದುರಾಸೆ ಇಲ್ಲದ ಯುವಕರು ಕಾರಣಕ್ಕೆ ಬರಬೇಕು. ಮತ ಕೂಡ ಮಾರಾಟದ ಸರಕಾಗಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹೆಚ್ಚೇನು ಕೈಗಾ ಅಣುಸ್ಥಾವರ ಸ್ಥಳಾಂತರ ಮಾಡಲು ಚುನಾವಣೆಗೆ ನಿಂತ ಕಾರಂತರನ್ನು ಸೋಲಿಸಿದ ಜಿಲ್ಲೆ ನಮ್ಮದು.  ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು?  ಧರ್ಮದ ಬಗ್ಗೆ ಮಾತಾಡುವುದೇ ಕಷ್ಟ. ಅದೊಂದು ಧರ್ಮ ಸೂಕ್ಷ್ಮ. ದಯವೇ ಧರ್ಮದ ಮೂಲವೆಂದರು ಬಸವಣ್ಣನವರು. ಮನುಷ್ಯ ಮಾನವೀಯವಾಗುವುದೇ ಧರ್ಮವೆನ್ನುವುದು ನನ್ನ ಭಾವನೆ. ನಮ್ಮ ಆಚಾರ ವಿಚಾರಗಳು ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದೇ ನಿಜವಾದ ಧರ್ಮ ಮತ್ತೆ ‘ನಮ್ಮನ್ನು ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿತಾಯಿಗಿಂತ ದೊಡ್ಡ ಧರ್ಮವಿಲ್ಲ’ವೆಂದು ನನಗನಿಸುತ್ತದೆ. ಈ ಸೃಷ್ಠಿಯ ಹಿಂದೆ ಒಂದು ಕಾಣದ ಕೈ ಕೆಲಸ ಮಾಡುತ್ತಿದೆ. ಅದೇ ದೇವರು. ಅದಕ್ಕೆ ಮನುಷ್ಯ ಹಲವು ಹೆಸರುಗಳನ್ನಿಟ್ಟು ಪೂಜಿಸುತ್ತಿರುವದು. ಅದು ಅವರವರ ನಂಬಿಕೆಗೆ ಬಿದ್ದದ್ದು. ಯಾಕೆಂದರೆ ನಮ್ಮ ಬದುಕು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ. ಅಲ್ಲವೇ? ಅದರ ಸಾಕ್ಷಾತ್ಕಾರ ಆದವರಿಗೆ ಅದರ ಬಗ್ಗೆ ನಂಬಿಕೆ ಇರುತ್ತದೆ. ರಾಜಕುಮಾರ ಹೇಳ್ತಾರೆ. “ಮಕ್ಕಳೇ ದೇವರು, ದೇವರು ಒಂದು ಮಗು” ಅಂತ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?  ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸದಾ ನಡೆಯುತ್ತಿದ್ದರೆ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜನಗಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಜಾಗತೀಕರಣದ ಮಾರಿ ನಮ್ಮ ಭಾಷೆ, ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿದೆ. ಜಾಗತೀಕರಣ ಎಂಬ ವಿಷಕನ್ಯೆ ಮನೆ ಬಾಗಿಲಿಗೆ ಬಂದು ನಿಂತಿದೆ. ಅದರ ಕಬಂಧ ಬಾಹುಗಳ ಆಲಿಂಗನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಅದಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಉಳಿಸುವ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕು. ನಮ್ಮ ಜನಪದರ ಹಾಡುಗಳು, ಗುಮಟೆ ಪಾಂಗ್, ಸುಗ್ಗಿ ಕುಣಿತ, ತರ‍್ಲೆ, ಪುಗಡಿ ಜೊತೆಗೆ ಬಹುತೇಕ ಜನಾಂಗಗಳಲ್ಲಿ ಉಳಿದಿರುವ ಜನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರಿಗೆ ವೇದಿಕೆ, ಗೌರವಧನ ನೀಡಿ ಪ್ರೋತ್ಸಾಹಿಸಬೇಕು. ಅವರಿಗೆ ಸರ್ಕಾರ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆಯ ಕರಾವಳಿ ಉತ್ಸವ, ಹಂಪಿ ಉತ್ಸವ, ನಮ್ಮ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳ ಕಾರ್ಯ ಖಂಡಿತಾ ಶ್ಲಾಘನೀಯ. ಜಿಲ್ಲೆಯ ಕಲಾವಿದರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ನಿಜವಾಗಿಯೂ ಭಾಷೆ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ. ಬೆಂಗಳೂರು ತುಮಕೂರಿನವರೆಗೆ ವಿಸ್ತಾರ ಪಡೆದರೆ ಅದು ಅಭಿವೃದ್ಧಿಯಲ್ಲ ; ನಾಡಿನ ಬೆಳವಣಿಗೆಯ ಮೂಲ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂದೀಜಿ ಹೇಳ್ತಾರೆ. ಹಳ್ಳಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದರೆ ಹಾಗೆಯೇ ಅವರ ನಂತರದ ಪೀಳಿಗೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈಗ ಬೆಳಂಬಾರದ ಸುಗ್ಗಿ ಜನಪದ ಪ್ರಕಾರಕ್ಕೆ ಯಾವ ಜಾಗತೀಕರಣದ ಬಿಸಿ ಇನ್ನೂ ತಟ್ಟಿಸಿಕೊಂಡಿಲ್ಲ. ಒಂದೊಂದು ತುರಾಯಿ ಮಾಡಿಸಲು ಸಾವಿರಗಟ್ಟಲೆ ಖರ್ಚು ಮಾಡುವ ಆ ಹಾಲಕ್ಕಿಗಳಿಗೆ ಸರ್ಕಾರ ಇಲಾಖೆಗಳು ಪ್ರೋತ್ಸಾಹಿಸಬೇಕು. ನಮ್ಮ ಅಂಕೋಲಾ, ಕಾರವಾರ ಮತ್ತು ಜಿಲ್ಲೆಯ ಜನಸ್ಪಂದಿ ಪತ್ರಕರ್ತರು ಇಲಾಖೆಗಳ ಗಮನ ಸೆಳೆಯಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಸಾಹಿತ್ಯದ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಪಂಗಡಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಗಬೇಕು. ನಿಜವಾದ ಸಾಹಿತ್ಯಕ್ಕೆ ಕೃತಿಗೆ ಮನ್ನಣೆ ಸಿಗಬೇಕು. ಸುಮ್ಮನೆ ಕೂತು ಬರೆಯುವುದು, ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬೀಳದೆ ಬರೆಯುವುದು. ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುವುದು, ಆರೋಗ್ಯಕರ ಸಮಾಜವನ್ನು ಕಾಪಾಡಿಕೊಂಡು ಹೋಗುವಂತಹ ಬರಹಗಳನ್ನು ಬರೆಯುವುದು ಒಬ್ಬ ಬರಹಗಾರನ ಜವಾಬ್ದಾರಿಯಾಗಬೇಕು. ‘ನಾನು ತಿಳಿದಿದ್ದನ್ನು ಬರೆಯಲು ಪ್ರಯತ್ನಿಸುವುದಿಲ್ಲ. ಬರೆಯುವುದರ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನನ್ನ ಪ್ರೀತಿಯ ಚಿತ್ತಾಲರು ಹೇಳುತ್ತಾರೆ. ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ.  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸದ್ಯ ಕಾವ್ಯ ಬರೆಯುತ್ತಿರುವೆ. ಕಥೆ ಬರೆಯುವುದು ನನ್ನದೇ ಒತ್ತಡಗಳ ಮಧ್ಯೆ ನಿಂತು ಹೋಗಿದೆ. ಮತ್ತೆ ಬಿಡುವು ಮಾಡಿಕೊಂಡು ಸುಮ್ಮನೆ ಬರೆಯಬೇಕು. ಇನ್ನು ತುಂಬಾ ಓದಬೇಕು. ಕವಿತೆ, ಕಥಾ ಸಂಕಲನ ಪ್ರಕಟಿಸಬೇಕು. ಒಂದು ಕಾದಂಬರಿ ಬರೆಯುವ ಇರಾದೆ ಇದೆ. ಜಯಂತ ಸರ್ ಕಾದಂಬರಿ ಬರೆ ಎಂದು ಹೇಳುತ್ತಿರುತ್ತಾರೆ. ಅವರ ಕಾದಂಬರಿ ನೀರಿಕ್ಷೆಯಲ್ಲಿ ನಾವಿದ್ದೇವೆ. ಇನ್ನು ನನ್ನ ನೆಚ್ಚಿನ ಮತ್ತು ಕಾಡಿದ ಸಾಹಿತಿಗಳು ಹಲವಾರು ಜನ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಜಯಂತ್ ಸರ್ ಹೇಳಿದಂತೆ ಅವರನ್ನು ಇಷ್ಟ ದೇವತೆಗಳು ಎನ್ನುತ್ತೇವೆ. ಶಿವರಾಮ ಕಾರಂತ, ತೇಜಸ್ವಿ, ಲಂಕೇಶ, ಅನಂತಮೂರ್ತಿ, ಚಿತ್ತಾಲ, ಬರಗೂರು, ಜಯಂತ ಕಾಯ್ಕಿಣಿ, ಎಸ್. ಮಂಜುನಾಥ ಮುಂತಾದವರು ನನಗೆ ಬಹಳ ಇಷ್ಟ. ಶಿವರಾಮ ಕಾರಂತರ ಬಗ್ಗೆ ಅವರ ಪರಿಸರ ಪ್ರೀತಿಯ ಕಾರಣಕ್ಕೆ ಬಹಳ ಗೌರವ. ಚಿತ್ತಾಲರ ‘ಸೆರೆ’ ಕಥೆ ನನ್ನನ್ನು ಕಥೆಗಾರನನ್ನಾಗಿ ಮಾಡಿತ್ತು. ಅವರ ಶೈಲಿಯ

Read Post »

You cannot copy content of this page

Scroll to Top