ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಯಕ್ಷಿಣಿ ಗಾನ

ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ ಪೂರ್ಣಿಮಾ ಸುರೇಶ್ ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು  ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ.  ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ  ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು.    ರಾತ್ರಿ ನೋಡಿದ ಬಯಲಾಟ,ಸಂಜೆ ಓದಿದ ಚಂದಮಾಮದ ಕಥೆಗಳನ್ನು ಕಣ್ಣೊಳಗೆ ತುಂಬಿ, ಕಲ್ಪನೆಯನ್ನು ಮತ್ತಷ್ಟು ಹಿಗ್ಗಿಸಿ, ಒಬ್ಬ ಸುಂದರ ರಾಜಕುಮಾರಿ,ಒಬ್ಬ ರಾಕ್ಷಸ,ದೂರದಲ್ಲಿ ಒಬ್ಬ ರಾಜಕುಮಾರನನ್ನು ಮನದ ಭಿತ್ತಿಯಲ್ಲಿ ಚಿತ್ರಿಸಿ, ಅದರ ನಶೆಗೆ ದೇಹ,ಮನಸ್ಸಿನ ಹೆಜ್ಜೆಗಳು ಗೆಜ್ಜೆ ಕಟ್ಟಿಕೊಳ್ಳುತ್ತಿದ್ದವು. ಇವುಗಳ ಭಾರ ಇಳಿಸಿಕೊಳ್ಳುವ ಆತುರ. ಸಿಕ್ಕಿಸಿಕ್ಕಿದ ಗೆಳತಿಯರನ್ನು ಎಳತಂದು ಮನೆಯ ಪಕ್ಕದ ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳ್ಳಿರಿಸಿ ಕಲ್ಪನೆಯ ರಾಜಕುಮಾರಿಯಿಂದ ಕಥೆ ಆರಂಭಗೊಂಡು ರಾಕ್ಷಸನ ಎಳತಂದು ರಾಜಕುಮಾರ ಬಂದು. ರಾಕ್ಷಸನ ಕೊಂದು,ಅವಳನ್ನು ಮದುವೆಯಾದ ಎಂಬಲ್ಲಿಗೆ ಕಥೆಗೊಂದು ಚುಕ್ಕಿ ಬಿದ್ದು..ಮೈ ಭಾರ ಇಳಿಸಿಕೊಂಡು ಮನದ ಕೂಸನ್ನು ಅವರ ಮಡಿಲಿಗಿಟ್ಟ ಸಂತೃಪ್ತಿ.    ಒಬ್ಬಳೇ ಕೂತಾಗಲೂ ಮರುದಿನ ರೂಪುಗೊಳ್ಳುವ ರೂಪಸಿ ರಾಜಕುಮಾರಿಗೆ ಅಷ್ಟೇ ಸುಂದರ ಹೆಸರಿಡುವ ತಾಳಲಾಗದ ಚಡಪಡಿಕೆ.   ಈ ಚಕ್ರಬಂಧದಲ್ಲಿ ಇರುವಾಗ ಬಲು ದೊಡ್ಡ ಸಮಸ್ಯೆಯೊಂದು ನನ್ನ ಇರಿಯಲು ಆರಂಭಿಸಿತ್ತು. ನನಗಿಂತ ನಾಲ್ಕು ವರ್ಷ ಕಿರಿಯಳಾದ ತಂಗಿ ಅಮ್ಮನ ಮುದ್ದಿನ ಮಗಳು. ಸಹಜವಾಗಿ ಮೊದಲ ಪ್ರಾಧಾನ್ಯತೆ ಅವಳಿಗೇ ಸಿಗುತ್ತಿತ್ತು. ಜೊತೆಜೊತೆಗೆ ನನ್ನ ಅವಳ ಜಗಳದ ನಡುವೆ ಅವಳ ಗೆಲುವಿಗೆ ಸಿಕ್ಕುವ ಬ್ರಹ್ಮಾಸ್ತೃವೆಂದರೆ ಅಮ್ಮ. ಅಮ್ಮನ ಪ್ರೀತಿಗಾಗಿ  ನಮ್ಮಿಬ್ಬರ ಕಾದಾಟ, ಆಕೆಗೆ ಕೆಲಸದ ನಡುವೆ, ಕಿರಿಕಿರಿ ಉಂಟು ಮಾಡುತ್ತಿತ್ತು. ಇದರಿಂದ ದೊಡ್ಡವಳಾದ ನಾನು ಪೆಟ್ಟು ತಿನ್ನುತ್ತಿದ್ದ ಸಂದರ್ಭಗಳೂ ಕಡಿಮೆಯೇನಿಲ್ಲ. ಈ ಸೋಲಿನ ನೋವು ತಂಗಿಯ ಜೊತೆಜೊತೆಗೆ, ಅಮ್ಮನ ಜೊತೆಗೂ ವಿರಸದಂತಹ ಅನಾಮಿಕ ಭಾವ ಒಂದನ್ನು ನನಗೆ ಪರಿಚಯಿಸಿತು.  ಯಾವುದನ್ನೂ ಬಹಳ ಕಾಲ ನನ್ನ ಜೊತೆ ಅಡಗಿಸಲಾಗದ ನಾನು ಇದರಿಂದ ಮುಕ್ತಿ ಹೊಂದಬೇಕಿತ್ತು. ಇದನ್ನೆಲ್ಲ ಕಥೆಯ ಒಳಗೆ ತುಂಬುವ ಚಾಕ್ಯತೆ ಆಗಿನ್ನೂ ಕಲಿತಿರಲಿಲ್ಲ. ಕಥೆಯೆಂದರೆ ರಾಜಕುಮಾರಿಗೇ ಸೀಮಿತ!. ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಹರಕು ಪರಕು ಫ್ರಾಕು ಧರಿಸಿ,ಕೆದರಿದ,  ನನ್ನ ಪುಟ್ಟ ತಲೆಗೆ ಮೀರಿದ ಕಥಾ ವಸ್ತುವಿದು. ಆದರೆ ತಿಂಡಿ, ನಿದ್ದೆ, ಪ್ರೀತಿ ಎಲ್ಲವೂ ಅಮ್ಮನಿಂದ ಮೊದಲು ಸಿಗಬೇಕಾದದ್ದು ತನಗೇ ಎಂಬ ಹಕ್ಕೊತ್ತಾಯ.  “ದಿನವೂ ಏನು ನಿನ್ನ ರಂಪ. ನೀನು ದೊಡ್ಡವಳು. ಅರ್ಥ ಮಾಡಿಕೊಳ್ಳಬೇಕು” ಎಂಬ ಅಮ್ಮನ ಸಮಾಧಾನದ ಮಾತುಗಳು. ಹೊಸದೊಂದು ಕಿಚ್ಚಿನ ಕಿಡಿ ಮನದೊಳಗೆ ಹಚ್ಚಿತ್ತು . ಅಮ್ಮನ ಮೇಲೆ ಕೋಪ,ತುಂಟಿ ತಂಗಿ ಮೇಲೆ ಹಠ ಎಲ್ಲವನ್ನೂ ಹೊರಹಾಕಿ ಮತ್ತೆ ನನ್ನ ರಾಜಕುಮಾರಿ ಕಥೆ ತಯಾರಿಗೆ ಹೋಗಬೇಕು. ಏನು ಮಾಡುವುದು. ಇಂತಹ ಮಹಾನ್ ದುಃಖ ಯಾರಿಗೂ ತಿಳಿಯುತ್ತಿರಲಿಲ್ಲ. ಏನು ಮಾಡುವುದು? ಆಗಲೇ ಹುಟ್ಟಿತ್ತು ಕವನ. ಅದು ಬಾಲಕಿ ಕುಂತಿಗೆ ಹುಟ್ಟಿದ  ಕರ್ಣ ನಂತಹಾ ಮಗು. ಹಳೇ ಪುಸ್ತಕ ಒಂದರಲ್ಲಿ ಗೀಚಿದ್ದು.”ಅಮ್ಮ ಪ್ರೀತಿಸುವುದಿಲ್ಲ” ಎಂಬ ಭಾವಾರ್ಥದ ನನ್ನ ಮೊದಲ ಕವನ. ಜೊತೆಗೆ ದಿನಾಂಕ ನಮೂದಿಸಿದ್ದೆ. ಅದು ಯಾರಿಗೂ ಕಾಣಲಿಲ್ಲ , ಕಾಣುವ ಪುಟದಲ್ಲಿ ದಾಖಲಾಗಲೂ ಇಲ್ಲ. ಆ ಹಳೆಯ ಪುಸ್ತಕ ಬಹು ಕಾಲ ಇದ್ದು‌ ಕೊನೆಗೆಲ್ಲೋ ಮಾಯವಾಯಿತು. ನಂತರ ಮತ್ತೆ ರಾಜಕುಮಾರಿಯನ್ನು ಪೋಷಿಸಿ ಹೊರತಂದು ಸ್ನೇಹಿತರ ಎದುರು ತಂದು ನಿಲ್ಲಿಸುವ ಕಥನ ಕಾಯಕವೇ ಮುಂದುವರೆದಿತ್ತು.    ಕವನ,ಕವಿತೆ,ಬುದ್ದಿವಂತರಿಗೆ ಮಾತ್ರ ಸರಿ. ಕವಿಗಳೆಂದರೆ ಅದ್ಭುತವೇನೋ ಕಂಡಂತೆ: ಆ ಕವಿತೆ, ನಿಜವಾದ ಕವಿತೆ ಆಗಿತ್ತೇ..ತಿಳಿಯದು.  ಆದರೆ ನಂತರದ ದಿನಗಳಲ್ಲಿ ಅಮ್ಮನಿಗೆ  ಅದನ್ನು ತೋರಿಸಿ ಅವಳು ನಕ್ಕು ನನ್ನ ಪೆದ್ದು ನಡವಳಿಕೆಗಾಗಿ,  ನಗಲು  ಬಹಳ ಕಾಲ ಕಾರಣವಾಗಿತ್ತು. ಮುಂದೆ ಕವಿತೆ ಹೇಗಿರಬೇಕು? ನಾನೂ ಕವಿತೆ ಬರೆಯಲು ಸಾಧ್ಯವೇ ಎಂದು ಯೋಚನೆಗೆ ಒಳಗಾಗಿದ್ದೆ. ಕವಿತೆ ಬರೆಯುವವರೆಲ್ಲ ಮೇಧಾವಿಗಳು. ಅದು ನನ್ನಂತಹ ಸಾಧಾರಣ ಮಂಡೆಯ ಹೆಣ್ಣಿಗೆ ಒಲಿಯುವಂತಹದಲ್ಲ. ಹೆಚ್ಚೆಂದರೆ ಕಥೆ ಬರೆಯಬಹುದು ಎಂದು ನನ್ನ ಕನಸಿಗೆ ಕಥೆಯ ಆಹಾರ ನೀಡಿ ಸಮಾಧಾನ ಮಾಡಿದ್ದೆ.   ಆದರೂ ಹಳೇ ನೋಟ್ ಪುಸ್ತಕಗಳಲ್ಲಿ ನನಗೂ ಸರಿಯಾಗಿ ಅರ್ಥ  ಆಗದ,ಬೇರೆಯವರಿಗೆ ಏನೆಂದೇ ತಿಳಿಯಲಾಗದ ಸಾಲುಗಳನ್ನು ಗೀಚಿ ಖುಷಿ ಪಟ್ಟದ್ದೂ ಇದೆ. ಆದರೆ ಇದಾವುದೂ ಕವಿತೆಯ ದರ್ಜೆಗೆ ಏರದೆ, ಕವಯತ್ರಿ ನಾನು ಆಗಲೇ ಇಲ್ಲ.   ಕಾಲೇಜಿನಲ್ಲಿ ನಮ್ಮ ಕನ್ನಡ ಪ್ರಾಧ್ಯಾಪಕರು ನಿನ್ನ ಭಾಷೆ ಚೆನ್ನಾಗಿದೆ. ಕವನ ಬರೆಯುತ್ತೀಯಾ..ಎಂದಾಗ ಬಾಂಬ್ ಸ್ಪೋಟವಾದಂತೆ ಬೆಚ್ಚಿ,ಅಂಜಿ ಓಡಿದ್ದೆ. “ಅಬ್ಬ! ಕವನ ? ನಾನು ಹೇಗೆ ಬರೆಯೋದು..ಅದು ನನಗಲ್ಲ.”    ಕೊನೆಗೂ ಒಮ್ಮೆ ಕವಿತೆ ನನ್ನಲಿ ಬಂದು ಗುನುಗುನು ಗುನುಗಿ ಲಹರಿಯೊಂದನ್ನು ತೇಲಿಸಿ ಬಿಟ್ಟಳು. ನಮ್ಮ ಮನೆಯ ಬಳಿ ಒಂದು ಮನೆಯಿತ್ತು. ಕೇವಲ ಹೆಂಗಸರಿದ್ದ ಮನೆ. ಸುಂದರ ಮಹಿಳೆಯರು. ನನಗೋ ವಾತ್ಸಲ್ಯದ ಮಹಾಪೂರ ಹರಿಸಿದವರು. ಅವರನ್ನು ಅಜ್ಜಿ,ದೊಡ್ಡಮ್ಮ,ಸಣ್ಣಜ್ಜಿ ಅಂತೆಲ್ಲ ಕರೆಯುತ್ತಿದ್ದೆ. ಬಾಲ್ಯ ಬಸಿದು ಹರೆಯ ಅಪ್ಪಿ ಯೌವನ ಕೂತು ಒಳಗೊಳಗೆ ಸಂಚಲನ ಮೂಡಿಸಿದ ಬಳಿಕ ಅವರು ನನ್ನ ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಕೂತು ವೇದನೆ, ನೋವಿನ, ಪ್ರೇಮದ ಬಿಗಿದ ತಂತಿ ಎಳೆದಂತೆ .ಯಾವುದೋ ತಳಮಳ. ಬರೆಯಬೇಕು..ಹೇಗಾದರೂ..ಯಾರಿಗೂ ತಿಳಿಯಬಾರದು..ಆದರೂ ಆ ಅವರ ನೋವು ದಾಖಲಾಗಬೇಕು. ಆಗ ತಿಳಿವಿನಾಚೆಯಿಂದ ಕೆಲವು ಸಾಲುಗಳು ಹೊಳೆದು ಪುಟಗಳಲ್ಲಿ ದಾಖಲಾಗಿದ್ದವು. ಬರೆದು ನಾನೇ ಓದಿ ಕಣ್ಣೀರಾಗುತ್ತಿದ್ದೆ.    ಪ್ರೇಮ,ಪ್ರೀತಿ ಹರೆಯದ ಕನಸು ನನ್ನ ಕವಿತೆಗೆ ವಸ್ತುವಾಗದೆ, ದೇವದಾಸಿಯರು ಎಂದು ಕರೆಸಿಕೊಳ್ಳುವ ಆ ನಾಲ್ಕು ಅಮ್ಮಂದಿರ ಒಡಲ ಬಿಸುಪು ಕವನವಾಗಿತ್ತು.  ಅಂತರಂಗದ ಬಯಲಾಟ ಮಬ್ಬಾದ ಕಣ್ಣಂಗಳದಲಿ ಹಿತ್ತಲ ಬಯಲಾಟ ಪಾತ್ರಧಾರಿಗಳು ಅದಲು ಬದಲು ಪ್ರಸಂಗ ಮಾತ್ರ ಅದೇ.. ಸುಕ್ಕುಗಟ್ಟಿದ ಕೆನ್ನೆಗಳಲೂ ಮೂಡಲ ಮನೆಯ ರಂಗು ಕರಗುತ್ತಿದ್ದ ಬಣ್ಣಗಳಲಿ ಉಳಿದಿಹುದು ಕೆಂಪೊಂದೇ ಜೋತು ಬಿದ್ದ ಪ್ರಾಯ ಬಾಲ್ಯ ಯೌವನಗಳ ಯುಗಾದಿ ಮರೆತು ಬಿಟ್ಟ ಸಿಹಿಯೂಟ ಅಂಟು ಜಾಡ್ಯ ಕಹಿಯೊಂದೇ ಸಡಿಲಿಸಿದ ತೋಳುಗಳಲಿ ದಂಡ ನಾಯಕರ ಗುರುತು ಕನಸುಗಳ ಅಚ್ಚಿನಲಿ ಬಡ್ಡಿಗಳಿಸುತಿಹ ವೇದನೆ ಕುಸಿಯುತಿಹ ಕಾಲುಗಳು ನವಿಲ ಗೆಜ್ಜೆ  ಕುರುಹು ಗಂಡು ಹೆಜ್ಜೆಯ ಭಾರಕೆ ಧರೆಗಂಟಿದ ದೇಹ ಮೌನವೃತಕೆ ವಾಲುತಿಹ ಮಸ್ತಿಷ್ಕದಲಿ ಕುರುಕ್ಷೇತ್ರದ ಶಂಖನಾದ ಕೈ ಚೆಲ್ಲುತಿಹ ಸಾರಥಿ ವಿಜಯ ದುಂಧುಬಿ ಎಲ್ಲಿಯೋ.. **     **   **  ** ಅದನ್ನು ಓದಿದ ಹಿರಿಯ ಕವಯತ್ರಿಯೊಬ್ಬರು ಕೇಳಿದ್ದರು ” ಇದೇನೇ,ಈ ಹರೆಯದಲ್ಲಿ ಇಂತಹ ಕವನ ಬರೆದಿರುವೆ. ನಿನಗೆ ಹೊಂದುವ,ನಿನ್ನ ವಯಸ್ಸಿನ ಭಾವನೆಗಳನ್ನು ಬರಿ. ಇದೆಲ್ಲಿ ಸಿಕ್ತು.” ನಸುನಕ್ಕಿದ್ದೆ.  ಅಂತರಂಗದಲ್ಲಿ ಪಟ್ಟಾಗಿ ಕೂತ ಅನುಭೂತಿ ಹಾಗೆ ಸಾರ್ವಜನಿಕವಾಗಿ ಬಿಡಿಸಿಡಲಾದೀತೇ.. ಅದು ಅನನ್ಯ. ಅದರ ಸಾರವಷ್ಟೇ ಬಸಿದು ಬೇರೊಂದು ಬಗೆಯಲ್ಲಿ ಅಕ್ಷರದ ಬಸಿರಲ್ಲಿಟ್ಟು ಹಿತದ ನೋವಿನಲ್ಲಿ ಅರಳಿಸುವ ಯತ್ನ ಮಾಡಬಹುದು. ಆ ಕವನ ನೋವಿನ ಜೊತೆಜೊತೆ ಆಪ್ತವಾದ ನೆನಪುಗಳೊಂದಿಗೆ “ನನ್ನ ಮೊದಲ ಕವನ” ಎಂಬ ಮುದ್ದೂ ಜೊತೆ ಸೇರಿಕೊಂಡಿದೆ.    ಮುಂದೆ  ಕವನ ಹೇಗಿರುವುದು..ಇದು ಕವನ ಆಗಿದೆಯೇ..ನಾನು ಬರೆದಿರುವುದು ಕವಿತೆಯೇ ಎಂಬ ಗೊಂದಲಗಳೊಂದಿಗೆ ಕವಿತೆ ಹಾಗೂ ನಾನು ಜೊತೆಜೊತೆಯಾಗಿ ಬದುಕು ಸಾಗಿಸುತ್ತಿದ್ದೇವೆ. ****************************

ಯಕ್ಷಿಣಿ ಗಾನ Read Post »

ಅನುವಾದ

ಸಂವಿಧಾನ ಶಿಲ್ಪಿಗೆ

ಅನುವಾದ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ. ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು ನಿಂತವರಲ್ಲವೇ?ಶತಮಾನದ ಸಂಕೋಲೆತುಕ್ಕು ಹಿಡಿದು ವಿಷವಾಗಿದೆಅಪಮಾನದ ಬೂದಿಯಿಂದಹೊಸ ಹುಟ್ಟನ್ನುಕಟ್ಟಿ ನಡೆದಾಡಬೇಕು. ಇದೋ,ಹೆಜ್ಜೆ ಎತ್ತಿಟ್ಟಿದ್ದೇವೆ.ನೀವು ನಮ್ಮೊಳಗಿದ್ದೀರಿ. Wouldn’t you be a boy?a sharp sickle ofher painful sighwas piercings hardmy inner core.Soil under my footto be held pressednot to be slipped off.I were looking at her. ….I remember thee. Is your daughter,matured?push her inside the room.The burning pain,from my heart, spreadedthroughout the body.Yes! The lava also tobe preserved.I were looking through. …I remember thee. Forget not! Now you’re a wife!bend your head at his feet.follow him unto the last.at once I had slipped off.but she was tobe confident.who was within me.I were looking sharp …I remember thee. The wound of insultpain of rejectionyou injested.still stood strong.centuries restraints of societyrusted and poisonous Must build a new lifeout of this exploitation ash.and walk with firm steps Now! We are on our wayYou are within us. *******************************

ಸಂವಿಧಾನ ಶಿಲ್ಪಿಗೆ Read Post »

ಕಾವ್ಯಯಾನ

ಜಂಜಾಟದ ಬದುಕು

ಕವಿತೆ ಪೂಜಾ ನಾರಾಯಣ ನಾಯಕ ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕುಕಂಡರೇನಂತೆ, ಅತ್ತ ಪೋದರೆ ಸಿಗದಾ ಹಕ್ಕುಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗನಿತ್ಯವೂ ದಿನಪೂರ್ತಿ ಜಂಜಾಟಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳುನಿಬ್ಬಣದಂತೆ ಸಾಗುತಿವೆಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆಸಹಿಸಲಾಗದ ಸಂಕಟಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,ಕುಹಕ ಮಾತುಗಳೇಳುತಿವೆಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.ತಪ್ತ ಹೃದಯಕೆ ತಿರಸ್ಕಾರಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿದಿಕ್ಕು-ಹಕ್ಕುಗಳಿಲ್ಲದೇಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆನಿತ್ಯವೂ ದಿನಪೂರ್ತಿ ಜಂಜಾಡುತ್ತಾಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ********

ಜಂಜಾಟದ ಬದುಕು Read Post »

ಅನುವಾದ

ಅನುವಾದ ಸಂಗಾತಿ

ಕವಿತೆ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಸಂವಿಧಾನ ಶಿಲ್ಪಿಗೆ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು ನಿಂತವರಲ್ಲವೇ?ಶತಮಾನದ ಸಂಕೋಲೆತುಕ್ಕು ಹಿಡಿದು ವಿಷವಾಗಿದೆಅಪಮಾನದ ಬೂದಿಯಿಂದಹೊಸ ಹುಟ್ಟನ್ನುಕಟ್ಟಿ ನಡೆದಾಡಬೇಕು. ಇದೋ,ಹೆಜ್ಜೆ ಎತ್ತಿಟ್ಟಿದ್ದೇವೆ.ನೀವು ನಮ್ಮೊಳಗಿದ್ದೀರಿ. ************************* To the father of constitution Wouldn’t you be a boy?a sharp sickle ofher painful sighwas piercings hardmy inner core.Soil under my footto be held pressednot to be slipped off.I were looking at her.….I remember thee. Is your daughter,matured?push her inside the room.The burning pain,from my heart, spreadedthroughout the body.Yes! The lava also tobe preserved.I were looking through.…I remember thee. Forget not! Now you’re a wife!bend your head at his feet.follow him unto the last.at once I had slipped off.but she was tobe confident.who was within me.I were looking sharp…I remember thee. The wound of insultpain of rejectionyou injested.still stood strong.centuries restraints of societyrusted and poisonous Must build a new lifeout of this exploitation ash.and walk with firm steps Now! We are on our wayYou are within us. ********************

ಅನುವಾದ ಸಂಗಾತಿ Read Post »

ಇತರೆ, ಜೀವನ

ಬಸವಣ್ಣನಿಗೊಂದು ಪತ್ರ

ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು. ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ. ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

ಬಸವಣ್ಣನಿಗೊಂದು ಪತ್ರ Read Post »

ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ನಾಗರೇಖಾ ಗಾಂವಕರ್ ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ ಹುಳವಾಗಿದ್ದೆ. ಕಾಲೇಜಿನ ಅಭ್ಯಾಸಗಳ ಜೊತೆ ಕಾಲೇಜಿನ ಗ್ರಂಥಾಲಯಗಳಲ್ಲಿ ಸಿಗುವ ಬಹುತೇಕ ಪ್ರೇಮ ಕಾದಂಬರಿಗಳು, ವಾರಕ್ಕೊಂದಾವರ್ತಿ ಬದಲಾಯಿಸುತ್ತಾ, ಪಾಠ ಪ್ರವಚನದ ಕಾಲದಲ್ಲಿ ಪಠ್ಯದ ಪುಸ್ತಕದ ಒಳಗೆ ಬೆಚ್ಚಗೆ  ಕಾದಂಬರಿಗಳು ಕೂತಿರುತ್ತಿದ್ದ್ದ್ತವು. ತಲೆ ಒಮ್ಮೆ ಪ್ರಾದ್ಯಾಪಕರ ಉಪನ್ಯಾಸದ ಕಡೆ ನೋಡುವಂತೆ ಮೇಲೆತ್ತಿದರೆ, ಇನ್ನೆರಡು ಪಟ್ಟು ಹೆಚ್ಚು ವೇಳೆ ಕೆಳಗೆ ಕೂತಿದ್ದ ಕಾದಂಬರಿಯ ಪಾತ್ರಗಳಲ್ಲಿ ಮುಳುಗಿರುತ್ತಿತ್ತು. ಅಷ್ಟಕ್ಕೂ ಕಲಾ ವಿಭಾಗದ ನಮಗೆ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕಾಲೇಜು ಕ್ಲಾಸುಗಳ ಬಂಕ್ ಮಾಡಿ ಮನೆಯಲ್ಲಿ ಮನೆಗೆಲಸ ಮಾಡಿ, ಓದಿದರೂ ಪ್ರಥಮ ದರ್ಜೆಗೇನೂ ಕೊರತೆ ಆಗುತ್ತಿರಲಿಲ್ಲ. ಇಂತಿಪ್ಪ ದಿನಗಳಲ್ಲಿಯೇ ಅದೆಷ್ಟೋ ಸಾಯಿಸುತೆ, ಉಷಾ ನವರತ್ನರಾವ್, ಯಂಡಮೂರಿ ಇತ್ಯಾದಿ ಇತ್ಯಾದಿ ಲೇಖಕರ ಲೌಕಿಕ ಕಾದಂಬರಿಗಳ ಓದಿ ಮುಗಿಸಿದ್ದೆ. ಇದಕ್ಕೂ ಮುಂಚೆ ಹೈಸ್ಕೂಲು ಕಲಿಯುವಾಗ ಹಳ್ಳಿಯಿಂದ ಹೋಗಿ ಬರುವುದು ಕಷ್ಟವೆಂದು ಬಾಡಿಗೆ ಮನೆಯೊಂದರಲ್ಲಿ ನಾವು ಅಣ್ಣ ಅಕ್ಕ ತಂಗಿ  ಎಲ್ಲರೂ ಸೇರಿ ಒಟ್ಟಿಗೆ  ಬಾಡಿಗೆ ಮನೆಯೊಂದರಲ್ಲಿ  ಇರುತ್ತಿದ್ದೆವು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಳಿದವರ ಪರೀಕ್ಷೆಯೆಲ್ಲ ಮುಗಿದು ಮನೆಗೆ ಹೋಗಿದ್ದರೆ, ನಾನು ಒಬ್ಬಳೇ ಬಾಡಿಗೆ ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಉಣ್ಣುತ್ತಾ  ಪರೀಕ್ಷೆ ಬರೆಯುತ್ತಿದ್ದೆ. ಅದು ಗಣಿತ ಪರೀಕ್ಷೆಯ ಹಿಂದಿನ ದಿನ. ಓದುತ್ತಾ ಕೂತವಳಿಗೆ ಅಕ್ಕ ತಂದಿಟ್ಟಿದ್ದ ಕಾದಂಬರಿಯೊಂದು ಕಣ್ಣಿಗೆ ಬಿದ್ದಿತ್ತು. ಅದು ತ.ರಾ.ಸು ಅವರ ಚಂದವಳ್ಳಿಯ ತೋಟ ಮಾರನೇ ದಿನ ಗಣಿತ ಪರೀಕ್ಷೆ.  ಕಣ್ಣಿಗೆ ಕಂಡ ಕಾದಂಬರಿಯನ್ನು ಬಿಡಲು ಮನಸ್ಸಾಗದೇ ಲೆಕ್ಕ ಬಿಡಿಸುವುದು ಅರ್ಧಮರ್ಧ ಮಾಡಿ ಕಾದಂಬರಿ ಹಿಡಿದವಳು ಹನ್ನೆರಡುವರೆಗೆ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಮಾರನೇ ದಿನ ಮತ್ತೆ ಪರೀಕ್ಷೆ ಬರೆದಿದ್ದೆ. 45 ಅಂಕಗಳಷ್ಟೇ ಗಣಿತಕ್ಕೆ ಪಡೆದಿದ್ದೆ. ಇದೆಲ್ಲ ನೆನಪಾಗುತ್ತಲೂ ಮೊದಲ ಕವಿತೆಯ ಸುಖ ಎಂತದ್ದೆಂದೂ ಹೇಳಲೇ ಬೇಕು. ಅದೆಂತಹುದೋ ಅಳಕು, ಮೊದಮೊದಲು ಬರೆದ ಅರೆಬರೆ ಅರೆಬೆಂದ ಕವಿತೆಗಳ ಮೇಲೆ ಕೆಳಗೆ ನೋಡಿ, ಶಬ್ದಗಳ ಚೌಕಟ್ಟು ಸರಿಯಾಗಿದೆಯೇ?ಎಂಬೆಲ್ಲ ಚಿಂತೆಗಳು. ಈ ಕವಿತೆ ಬರೆಯಲು ಪ್ರೇರಣೆ ಒಂದು ಬೇಕೆ ಬೇಕು. ಆಗ ತಾನೇ ಪದವಿ ಹಂತದಲ್ಲಿದ್ದೆ. ಗೆಳತಿಯೊಬ್ಬಳ ಪ್ರೇಮ ಕವಿತೆ ಕಾಲೇಜಿನ ಲಿಟರೇಚರ್ ಬುಲೆಟಿನ್ನಲ್ಲಿ ರಾರಾಜಿಸುತ್ತಿತ್ತು. ಎಲ್ಲರ ಬಾಯಲ್ಲಿಯೂ ಅದೇ ವಿಷಯ. ಎಷ್ಟು ಚೆನ್ನಾಗಿದೆ? ಹಾಗಿದೆ.., ಹೀಗಿದೆ.. ಮನೆಗೆ ಹೋದವಳೆ ನಾನೂ ಒಂದು ಬರೆದರೆ ಹೇಗೆ ?ಎಂಬ ಹುಕಿ ಹುಟ್ಟಿದ್ದೆ ತಡ, ಬರೆದೆ ಬರೆದೆ. ಅದನ್ನು ಯಾರಾದರೂ  ಓದಿದರೆ ನಕ್ಕಾರು, ಅನ್ನಿಸಿ ಬರೆದಷ್ಟನ್ನು  ಮತ್ತೆ ಮತ್ತೆ ಹರಿದು ಎಸೆದೆ. ನನಗೇ ನಗು ಬಂದಿತ್ತು. ಪ್ರೀತಿ ಪ್ರೇಮ ಇಂತಹ ನಾಜೂಕಿನ ವಿಷಯವನ್ನೆಲ್ಲಾ  ಶಬ್ದಗಳಲ್ಲಿ ಮುದ್ಧಾಗಿ ಮೂಡಿಸುವ ಗಟ್ಟಿತನ ಹೇಗೆ ಬರುವುದು  ಎಂಬ ಅಚ್ಚರಿ. ಬೇಡ ಬಿಡು, ಮನೆಯಲ್ಲಿ ನನ್ನ ಅಣ್ಣಂದಿರೇನಾದರೂ ನನ್ನ ಕವಿತೆ ಓದಿದರೆ ಕಥೆ ಮುಗಿಯಿತು. ಇದರ ಗೋಜು ಬೇಡವೇ ಬೇಡವೆಂದು ನಿರ್ಧರಿಸಿದೆ. ಆದರೆ ಇದು ಒಂದು ಖಯಾಲಿ. ಒಳಗಣ ತುಡಿತ, ನನ್ನೊಳಗಿನ ತೆರೆದುಕೊಳ್ಳುವ ಹಂಬಲ. ಅದೆಷ್ಟೋ ಕನಸುಗಳು ನನಸಾಗದ ನೆಲೆಯಲ್ಲಿ ಮನದ ಮೂಲೆಯಲ್ಲಿ ಮಿಡುಕಿದ ಭಾವಗಳು, ಮತ್ತೆ ಚಿಗುರಿದ ಕನಸುಗಳು, ವ್ಯಾಮೋಹದ ಪರದೆಯಲ್ಲಿ ಕಟ್ಟಿದ ಕಣ್ಣು, ಮತ್ತೆ ಬರೆದೆ. ಆದರೆ ಈಗ ಪ್ರೇಮ ಕವಿತೆ ಬರೆಯುವ ಪ್ರಮಾದ ಮಾಡಲಿಲ್ಲ. ನಾನು ಪ್ರಯತ್ನಿಸಿದ ಪ್ರೇಮ ಕವಿತೆಗಳು ಅಂತಹ ಉದ್ದಿಪನಗೊಳಿಸುವ ಪ್ರಭಾವ ಬೀರುವಂತಹುಗಳಾಗಿರಲಿಲ್ಲ. ಹಾಗಾಗಿ ದೇವರ ಅಸ್ತಿತ್ವದ ಕುರಿತ ಒಂದು ಕವಿತೆ ಬರೆದೆ. ಆಗ ನಾನು ಎಳಸಲ್ಲ. ಬೆಳೆದ ಮನಸ್ಸು. ಭಯದ ನೆರಳಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾದಿನಗಳ ಹಂತದಲ್ಲಿ ನನಗೆ ಕಲಿಸಿದ ಗುರುಗಳಾದ ಕವಿ ಶಾಂತಾರಾಮ ಬಾಳೆಗುಳಿಯವರ ಪ್ರಭಾವವಿತ್ತು. ಹಾಗೆಂದು ನಾನವರ ನೆಚ್ಚಿನ ಶಿಷ್ಯೆಯಾಗಿರಲಿಲ್ಲ. ಎಲ್ಲರಿಂದ ಕೊಂಚದೂರವಾಗಿಯೇ ಉಳಿಯುವ ಜಾಯಮಾನ ನನ್ನದು. ಅವಕಾಶಕ್ಕಾಗಿಯೋ, ಇನ್ನೊಬ್ಬರ ಆದರಕ್ಕಾಗಿ ಹಂಬಲಿಸುವ ಗುಣವೇ ಇಲ್ಲ. ಹಾಗೇ ಗುರುಗಳ ಆತ್ಮೀಯತೆಯನ್ನು ಗಳಿಸಿಕೊಂಡಿರಲಿಲ್ಲ.ನನ್ನ ಬರೆಯುವ ಆಸೆಯನ್ನು ಅವರೆಲ್ಲೆಂದು ತೋಡಿಕೊಂಡಿರಲೇ ಇಲ್ಲ. ಕಾಲೇಜು ದಿನಗಳು ಮುಗಿದು,ನೌಕರಿಯ ಹುಡುಕಾಟದಲ್ಲಿದ್ದ ಕಾಲದಲ್ಲಿ ನಾನು ಬರೆದ ಮೊದಲ ಕವಿತೆ. ವಿಶ್ವಕರ್ತನ ಗುಡಿ ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೇ ಅಲ್ಲಿ ಬಂಧೀ ವಿಶ್ವಕರ್ತನ ತಂದು ಗುಡಿಯ ಬಂಧನವಿಟ್ಟು, ಮೆರೆದ ಮೌಢ್ಯವು ಮನುಜ ಬುದ್ಧಿ. ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೇ ಬೇಕೆ ಒಂದು ಮನೆಯು ಜೀವಜೀವದ ಒಳಗೆ ಹುದುಗಿರುವ ಆತ್ಮನವ ಭಾವಿಸಲು ಸರ್ವರೂ ಅವನ ಕುಡಿಯು.                                     ಹೀಗೇ ಸಾಗಿತ್ತು ಕವಿತೆ. ಇದೇ ಸಮಯಕ್ಕೆ ಕೆಲಸವೂ ದೊರಕಿ ಖುಷಿಯಾಗಿದ್ದೆ. ಸಿನೇಮಾ, ಮಾರ್ಕೆಟ್ಟು ತಿರುಗುವುದು ಕೊಂಚ ಜಾಸ್ತಿಯಾಗಿತ್ತು. ಮನೆಯಲ್ಲಿ ವಿವಾಹದ ತಯಾರಿಯೂ ನಡೆಯುತ್ತಿತ್ತು. ಸುತ್ತ ಸಮಾನ ಮನಸ್ಕ  ಸ್ನೇಹವಲಯವೂ ಇತ್ತು.  ಸ್ನೇಹ ಪ್ರೇಮದ  ಪರಧಿಯಲ್ಲಿ ಆ  ಭಾವವೊಂದು ನನ್ನ ಎದೆಯಲ್ಲಿ ಮೀಟುತಿತ್ತು. ಇನ್ನೊಂದು ಕವಿತೆ ಬರೆದಿದ್ದೆ. ಅದೊಂದು ಸ್ನೇಹ ಮತ್ತು ಪ್ರೇಮದ  ಬಗ್ಗೆ ಬರೆದ ಕವಿತೆ. ಶೀರ್ಷಿಕೆ ಗೆಳತಿ ಅದನ್ನು ಗಂಡುದನಿಯಾಗಿ ಬಳಸಿದ್ದೆ. ಗೆಳೆಯ ಎಂದರೆ ಯಾರಾದರೂ ನನ್ನ ಬಗ್ಗೆ ತಪ್ಪು ತಿಳಿದಾರು ಎಂಬ ಭಯ. ಹಾಗಾಗಿ ಗೆಳೆಯ ಇರಬೇಕಾದಲ್ಲಿ ಗೆಳತಿ ಬಂದಿದ್ದಳು. ಏಕೆ ಗೆಳತಿ, ಮನ ಬಾಗಿಲವರೆಗೂ ಬಂದು ತಟ್ಟಿ ಕರೆಯಲಿಲ್ಲ. ನಿನ್ನ ಭಾವನೆಗಳೇಕೆ ನನ್ನವರೆಗೂ ಮುಟ್ಟಲೇ ಇಲ್ಲ. ನನಗೂ ಇತ್ತಲ್ಲ ಆಸೆ ನಿನ್ನಂತೆ.. ಗೆಳತಿಯಾಗಿ ಬಂದವಳು ಪ್ರೇಮಿಯಾಗಿ ಬರಲೆಂದು ಜೀವನಕೆ ಜೊತೆಯಾಗಲೆಂದು.. ಅದಕ್ಕೇಕೆ ತಣ್ಣಿರನ್ನೆರಚಿದೆ? ಕಡೇತನಕ ಬಗೆಗೂಡು ಹೊಗೆ ಗೂಡಾಗಲೆಂದೇ? ಬಣ್ಣದ ಚಿತ್ತಾರ ಬಿಡಿಸ ಹೊರಟಾಗ ಕಪ್ಪು ಮಸಿ ಚೆಲ್ಲಿ ಕಲೆಯಾಯಿತೇ? ವ್ಯಥೆ ಬೇಡ ಗೆಳತಿ,  ನವ್ಯ ಕಲೆಯ ರೀತಿ ಗೆರೆ ಎಳೆದು ಚಿತ್ರವಾಗಿಸುವೆ. ಹೊಗೆಗೂಡ ಕಿಂಡಿಯನು  ತೆರೆದುಬಿಡು. ಶುದ್ಧವಾತ ಹರಿದು ಬರಲಿ. ಪ್ರೇಮವಿರದಿರೆ ಸ್ನೇಹವಾದರೂ ಇರಲಿ ಈ ಪರಿ.. ಸ್ವಾರ್ಥದ ನೆರಳಿಲ್ಲ ಏಕತಾನತೆಯ ಕೊರಗಿಲ್ಲ ವಿಳಂಬ ಬೇಡ ಗೆಳತಿ ಈಗಲಾದರೂ ಪ್ರೇಮಸೌಧದ ತಳಪಾಯದ ಮೇಲೆ ಕಟ್ಟೋಣ ನಡಿ ಸ್ನೇಹ ಸೌಧ! ಆನಂತರವೇ ತಿಳಿದದ್ದು ಆ ಕವಿತೆ ಓದಿದ ಗೆಳತಿಯೊಬ್ಬಳು ಇಷ್ಟಪಟ್ಟಳು. ಉಳಿದವರಿಗೆ ತೋರಿಸಿ, ಚೆನ್ನಾಗಿದೆಯೆಂಬ ಬಿರುದು. ನನ್ನೊಂದಿಗೆ ಕೆಲಸ ಮಾಡುವ ಸ್ನೇಹಿತ ಸ್ನೇಹಿತೆಯರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಾಹಿತ್ಯ ಸಂವಾದ ಬೇರೆ ಬೇರೆ ಲೇಖಕರ ಪುಸ್ತಕಗಳ ಚರ್ಚೆ ಇವುಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಎಳಸು. ಒಂದೆರಡು ವರ್ಷದಲ್ಲಿ ಕೊಂಚ ಚಿಗುರಿದ್ದೆ. ಹತ್ತಾರು ಕವನಗಳ ಬರೆದೆ. ಆಪ್ತರಿಂದ ಪ್ರೋತ್ಸಾಹವೂ ದೊರೆಯುತ್ತಿತ್ತು. ಆದರೆ ಮತ್ತೆ ವಿವಾಹ ಬಂಧನ ನನ್ನ ಕವಿತಾ ಬರವಣಿಗೆಯನ್ನು ಕುಂಠಿತಗೊಳಿಸಿತು. ಸಾಂಸಾರಿಕ ಸುಖದಲ್ಲಿ ಮುಳುಗಿಹೋದೆ.  ಮನೆ ಗಂಡ ಮಕ್ಕಳು ಕೆಲಸ  ಇದಿಷ್ಟೇ ನನ್ನ ಪ್ರಪಂಚವಾಯ್ತು. ಹಾಗೇ ಕವಿತೆ ಬರೆಯುವುದು ನನ್ನಲ್ಲಿ ಆಗಾಗ ಪ್ರತ್ಯಕ್ಷವಾಗಿ ಮತ್ತೆ ಕೆಲವು ಕಾಲ ಕಾಲಗರ್ಭ ಸೇರಿದಂತೆ ಮರೆಯಾಗಿ ಹೋಗಿತು. ಆದರೆ ಭೂಮಿಯಲ್ಲಿ ಚಿಗುರುವ ಪ್ರತಿಯೊಂದು ಗಿಡ, ಮರ ಬಳ್ಳಿ, ಜೀವ ಸಂಕುಲ ಎಲ್ಲಕ್ಕೂ ಒಂದು ಮೊದಲ ಅನುಭವವಿದ್ದೆ ಇದೆ. ಬೀಜದೊಳಗಿನ ಸತ್ವ ಆಹಾರ ಪೂರೈಕೆ ಆಗುವವರೆಗೆ ಏನೂ ಗೊತ್ತಿಲ್ಲದ ಆಗಷ್ಟೇ ಚಿಗುರಿದ ಸಸಿ, ಆನಂತರ ತಾನೇ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಲೇ ಬೃಹದಾಕಾರವಾಗುತ್ತ ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆಯುವುದು. ಜೀವ ಸಂಕುಲದ ಆದಿಮ ಜೀವಿಗಳಿಂದ ಹಿಡಿದು ಮಾನವನಂತಹ ಪ್ರಚಂಡ ಬುದ್ದಿಶಕ್ತಿಯ ಜೀವಿಯೂ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ತನ್ನದೇ ಆದ ಪ್ರಥಮ ಅನುಭವಕ್ಕೆ ಒಳಗಾಗುತ್ತಲೇ ಗಟ್ಟಿಗೊಳ್ಳುತ್ತಲೇ ಹೋಗುವುದು.ವಿಕಸನದ ಹಾದಿಯೇ ಹಾಗೇ? ಅವಸಾನದ ತುದಿಯಲ್ಲೂ  ಕೆಲವೊಮ್ಮೆ ಮತ್ತೇ ಉತ್ಕರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆಗಳು ಹೇರಳ. ಹಾಗೇ ಭೂಮಿಯೊಳಗಣ ಎಂದೂ ಒಣಗದ ತೇವದಂತೆ ಕವಿತೆ ನನ್ನೊಳಗನ್ನು ತಡಕಾಡಿ, ತಿವಿದು, ಎಬ್ಬಿಸಿ,ಉದ್ದೀಪಿಸುತ್ತಲೇ ಇತ್ತು. ನನ್ನ ಅಪ್ರಬುದ್ಧ ಭಾವನೆಗಳು, ಬಂಡಾಯದ ಗುಣ, ಪ್ರಕೃತಿಯೊಂದಿಗಿನ ಪ್ರೀತಿ ಜೀವಂತವಾಗಿಯೇ ಇದ್ದವು. ಹಾಗಾಗಿ ಇತ್ತೀಚೆಗೆ   ನಡು ವಯಸ್ಸಿನಲ್ಲಿ ಅಕ್ಷರದ ಕೊಳದಲ್ಲಿ ನನ್ನ ಮುಖ ಕಾಣಬಹುದೇ ಎಂಬ ಆಸೆಯಿಂದ ಅದರಲ್ಲಿ ಇಣುಕಿ ಇಣುಕಿ ನೋಡುತ್ತಿದ್ದೇನೆ. ಈಗ ಮತ್ತೆ ವಿಸ್ಮಯವೆನ್ನುವಂತೆ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ. ಹೂ ಹಣ್ಣು ನೀಡುವ ಹೆಮ್ಮರವಾಗುವುದೇ ಕಾದು ನೋಡಬೇಕಿದೆ ನನಗೆ.. ***********************

ಮೊದಲ ಕವಿತೆ Read Post »

ಕಾವ್ಯಯಾನ

ಅಸಹಾಯಕತೆ

ಕವಿತೆ ಎನ್. ಶೈಲಜಾ ಹಾಸನ ಅವೀರ್ಭವಿಸಿದೆ ಮೂರ್ತಅಮೂರ್ತಗಳ ನಡುವಿನ ಸ್ವರೂಪಮುಂದಕ್ಕಿಡುವ ಹಾದಿಹಿಂದಕ್ಕೋಡುತಿದೆ ಅಲ್ಲೊಂದು ಕಡಲುಮೇಲೊಂದು ಮುಗಿಲುದಾಟಿ ನದಿ ತಟವಕಾಡು ಗಿರಿಯ ಹಾದು,ಮುಗಿಲಂಚನು ಮುಟ್ಟುವಾಗಿನ ಸಂಭ್ರಮಗೆಲುವ ಮೀಟಿಪಿಸು ಪಿಸು ಧ್ವನಿಎಲ್ಲಿ? ಎಲ್ಲಿ? ಬೆನ್ನ ಹಿಂದೆ!ಹಿಂತಿರುಗಿದರೆ ಧ್ವನಿ ಮಾಯಮುನ್ನಡೆದರೆಮತ್ತೆ ಧ್ವನಿ, ಮತ್ತೂನಡೆದರೆ ಗಹಗಹಿಸುವವಿಕಟನಗೆಸೋಲೋ ಗೆಲುವೋಮೂರ್ತವೋಅಮೂರ್ತವೋ? *********************

ಅಸಹಾಯಕತೆ Read Post »

ಕಾವ್ಯಯಾನ

ನಿನ್ನ ನೆನಪು

ಕವಿತೆ ಮಾಲತಿ ಶಶಿಧರ್  ನಿನ್ನ ನೆನಪೊಂದು ಉತ್ತರಗೋಳಾರ್ಧದ ಬೇಸಿಗೆದಿನದಂತೆಎಷ್ಟು ಮುದ ಅಷ್ಟೇ ತಾಪ ಗಾಳಿಯ ಒರಟುಸ್ಪರ್ಶಕ್ಕೆ ಹಿತ್ತಲಿನಚಂಗುಲಾಬಿಯೊಂದುಉದುರಿದಂತೆಹಿತ್ತಿಲ ತುಂಬೆಲ್ಲಾಚದುರಿದಂತೆ.. ಸಣ್ಣ ಇರುಳೊಂದಗುತ್ತಿಗೆ ಪಡೆದಿರುವೆ,ಅಧಿಕ ದಿನಯೊಂದಕ್ಕೆಬಾಡಿಗೆ ಇಟ್ಟಿರುವೆಎರಡೂ ನನ್ನದ್ದೇಆದರೂ ಖಾಸಾ ಅಲ್ಲಾ. ಸಂಜೆ ವೇಳೆಗೆ ರಸ್ತೆಬದಿಯಲ್ಲಿ ಸೆರಗೊಡ್ಡಿ ನಿಂತೆಮುಗಿಲ್ಗಲ್ಲಿನ ನಿರೀಕ್ಷೆಯಲ್ಲಿಸೆರಗು ತುಂಬಿದ್ದು ಮಾತ್ರಕಟು ತಾಪ.. ತೊಟ್ಟ ಚಿನ್ನದ ಬೆಂಡೋಲೆಮಂಕಾಯಿತೆ ಹೊರೆತುಕಾವು ಮಾತ್ರಹೆಚ್ಚುತ್ತಲೇ ಇತ್ತು ನೆನಪಿನಕುಲುಮೆಯಲ್ಲಿ.. ಹಸಿರು ಮರದ ರೆಂಬೆಯೊಂದನೀ ಕತ್ತರಿಸಿದಷ್ಟುಸುಲಭವಾಗಿನೆನಪಿನ ಕೊಂಬೆಯಛೇದಿಸಲಾಗದು,ನ್ಯಾಯೋಚಿತ ಸ್ವಾಧೀನದಕ್ಲೇಶವನು ಸಹಿಸಲಾಗದು. ***********************

ನಿನ್ನ ನೆನಪು Read Post »

ಇತರೆ

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ

ಒಳನೋಟಿ ನಾಗರಾಜ ಹರಪನಹಳ್ಳಿ ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ ಎಂಬುದು ಕವಿ ಬಸವಣ್ಣನ ಪ್ರಸಿದ್ಧ ಸಾಲು. ಸಂಸ್ಕೃತ ಭೂಯಿಷ್ಟವಾಗಿದ್ದ ಕನ್ನಡ ಕಾವ್ಯ, ಅರಮನೆಗೆ,ಪಂಡಿತರಿಗೆ ಮೀಸಲಾಗಿದ್ದ ಕನ್ನಡ ಕಾವ್ಯವನ್ನು ಜನ ಸಾಮಾನ್ಯನ ನೋವು ನಲಿಗೆ, ಮನಸಿನ ಸೂಕ್ಷ್ಮತೆ ಮತ್ತು ಬದುಕಿಗೆ  ಒಗ್ಗಿಸಿದ್ದು ವಚನ ಸಾಹಿತ್ಯ. ಜನ ಸಾಮಾನ್ಯನ ಕುರಿತಾಗಿ ಅಷ್ಟೇ ಅಲ್ಲ, ಜನ ಸಾಮಾನ್ಯನೂ ಬರೆಯುವಂತೆ ಮಾಡಿದ ಕಾಲ ಅದು. 12ನೇ ಶತಮಾನದ 25 ವರ್ಷಗಳ ಕಾಲ ಕರ್ನಾಟಕವನ್ನು ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಹರಡಿಕೊಂಡಿದ್ದ ವಚನ ಚಳುವಳಿ ಅಕ್ಷರ ಚಳುವಳಿ ಸಹ ಹೌದು. ಸಾಮಾಜಿಕ ಸಮಾನತೆಗಾಗಿ ನಡೆದ ಜೀವಪರ ಕಾಳಜಿಯ  ಹಂಬಲ, ಗಂಡು ಹೆಣ್ಣು ಬೇಧವಿಲ್ಲದ ಸಮ ಸಮಾಜಕ್ಕಾಗಿ ನಡೆದ  ಹೋರಾಟ, ಬದುಕಿನ ಕಾಯಕದ ಜೊತೆ ನಡೆದದ್ದು ಮತ್ತೊಂದು ದಾಖಲೆ. ಈ ಮಾದರಿಯ ಚಳುವಳಿ ಜಗತ್ತಿನ ಯಾವ ದೇಶದಲ್ಲೂ, ಅವುಗಳ ಇತಿಹಾಸದಲ್ಲೂ ಕಾಣಸಿಗುವುದಿಲ್ಲ. ಹಾಗಾಗಿ ಕನ್ನಡಿಗರಾದ ನಮಗೆ 12ನೇ ಶತಮಾನ ಮತ್ತು ವಚನ ಚಳುವಳಿ ಮಹತ್ವದ್ದು. ಅದರಲ್ಲೂ ಮಹಿಳೆ ಮತ್ತು ಶ್ರಮಜೀವಿಗಳಿಗೆ 12ನೇ ಶತಮಾನದ ಒಂದು ಮಹೋನ್ನತ ಘಟನೆಯನ್ನು ನಾವು ಆಗಾಗ ಬರೆಯುವ ಮೂಲಕ, ಮಾತನಾಡುವ ಮೂಲಕ ಮುನ್ನೆಲೆಗೆ ತರಬೇಕಾಗಿದೆ.  ಕನ್ನಡ ಕವಿಗಳು ನನಗೆ ಕಲಿಸಿದ ಪಾಠ ಎಂಬ ಸಾಲು ಜಗ್ಗನೆ ದೀಪದಂತೆ ನನಗೆ ಜು.19 ರವಿವಾರ ಹೊಳೆಯಿತು. ಇದಕ್ಕೂ ಮುನ್ನ ಅಭಿನವ ಪಂಪನೆಂದೇ ಹೆಸರಾದ ನಾಗಚಂದ್ರನ ರಾಮಚಂದ್ರಚರಿತ ಪುರಾಣ ಎಂಬ ಕಾವ್ಯದ ಒಂದು ಸಾಲು ಮಿಂಚಿತು. “ಅಬ್ದಿಯುಂ ಓರ್ಮೆ ಕಾಲ ವಶದಿಂ ಮರ್ಯಾದೆಯಂ ದಾಂಟದೆ” ಅಂದರೆ ಕಾಲದ ಕಾರಣದಿಂದ ಸಮುದ್ರವೂ  ಸಹ ತನ್ನ ಸೀಮಾ ರೇಖೆಯನ್ನು ಮೀರುತ್ತದೆ ಎಂದು. ಸೀತೆಯನ್ನು ನೋಡಿದಾಗ ರಾವಣನ ಮನಸು ಹೇಗೆ ನೀತಿಯ ಗೆರೆ ದಾಟಿತು ಎಂಬುದನ್ನು ವಿವರಿಸಲು ನಾಗಚಂದ್ರ ಈ ಉಪಮೆಯನ್ನು,ಹೋಲಿಕೆಯನ್ನು ನೀಡುತ್ತಾನೆ. ಹಾಗೆ ಮುಂದುವರಿದು  ರಾವಣನ ಚಂಚಲತೆ ಕುರಿತು ಹೇಳುತ್ತಾ “ಪದ್ಮಪತ್ರದ ಜಲಬಿಂದುವಿನಂತೆ ಚಲಿತ ಮಾದುದು ಚಿತ್ತಂ” ಎನ್ನುತ್ತಾನೆ. ಕಮಲದ ಎಲೆಯ ಮೇಲಿನ ನೀರಿನ ಬಿಂದು ಅತ್ತಿತ್ತ ಓಡಾಡುವಂತೆ ಸೀತೆಯನ್ನು ನೋಡಿದಾಗ ರಾವಣನ ಮನಸ್ಸಿನಸ್ಥಿತಿಯಾಯಿತು ಎಂದು ನಾಗಚಂದ್ರ ವಿವರಿಸುತ್ತಾನೆ. ಒಂದು ಕಡೆ ಬಸವಣ್ಣ, ಮತ್ತೊಂದು ತುದಿಯಲ್ಲಿ ನಾಗಚಂದ್ರ ಇಬ್ಬರೂ ಮನದಲ್ಲಿ ಹಾದುಹೋದರು. ಸಾಹಿತ್ಯದಿಂದ, ಕಲೆ ಕಾವ್ಯದಿಂದ ಮನುಷ್ಯ ಕಲಿಯುವುದು ತುಂಬಾ ಇದೆ. ಸಾಹಿತ್ಯದ ಒಡನಾಟ ಮನುಷ್ಯ ಏಕಾಂತ ಗೆಲ್ಲಲು, ಬದುಕನ್ನು ಗೆಲ್ಲಲು ಇರುವ ಪ್ರಮುಖ ಸಾಧನ. ಸಂಗೀತ ನೀಡುವ ಸಂತೋಷವನ್ನು, ಸಾಹಿತ್ಯ ನೀಡಬಲ್ಲದು. ಬಸವಣ್ಣನ ವಚನಕ್ಕೆ ಮರಳಿ ಬರೋಣ, ಕೂಡಲಸಂಗಮನನ್ನು ಸಾಕ್ಷಿಯಾಗಿಟ್ಟುಕೊಂಡೇ ವಚನಗಳನ್ನು ಬರೆದ ಬಸವಣ್ಣ ಆನು ಒಲಿದಂತೆ ಹಾಡುವೆನು, ನಿನಗೆ ಕೇಡಿಲ್ಲವಾಗಿ ಅಂದರೆ ದೇವರಿಗೆ ಕೇಡಾಗದಂತೆ ನಾನು ಬರೆಯುವೆ, ಬದುಕುವೆ ಎನ್ನುತ್ತಾನೆ. ಹಾಗದರೆ ಬಸವಣ್ಣನ ದೃಷ್ಟಿಯಲ್ಲಿ ಯಾರು ದೇವರು? ಇದನ್ನು ಮೊದಲು ನೋಡೋಣ. ಬಸವಣ್ಣನ ದೃಷ್ಟಿಯಲ್ಲಿ ಮನುಷ್ಯರೇ ದೇವರು. ಇತರರೆಗೆ ಕೇಡು ಬಗೆಯದಿರುವ, ದುಡಿದು ತಿನ್ನುವವ ದೇವರು. ಕಾಯಕದಲ್ಲಿ ನಿರತನಾದೆಡೆ ಲಿಂಗವನ್ನಾದರೂ ಮರೆಯಬೇಕು, ಅಂಗವನ್ನಾದರೂ ಮರೆಯಬೇಕು, ಜಂಗಮವನ್ನಾದರೂ ಮರೆಯಬೇಕು ಎಂಬುದು ಬಸವಣ್ಣನ ನಿಲುವು. ಸ್ಥಾವರವಾದ ಲಿಂಗ ಮತ್ತು ಅಶಾಶ್ವತವಾದ ದೇಹ, ಸಂಚಾರಿಯಾದ ಜಂಗಮ( ನೀತಿ ಸಾರುತ್ತಾ , ನೀತಿಯನ್ನೇ ಬದುಕುತ್ತಾ, ಚಲನಶೀಲವಾಗಿರುವ ಶರಣರು, ಕೂಡಲ ಸಂಗಮನ ಪ್ರತಿನಿಧಿಗಳು ಅನ್ನೋಣ) ಇವರೇ ಬಂದು ಎದುರು ನಿಂತರೂ ಕಾಯಕ ಮಾಡುವಾಗ ಮರೆಯಬೇಕು. ಕಾಯಕ(ಕೆಲಸ)ದ ನಂತರ ಲಿಂಗ, ಅಂಗ, ಗುರು ಜಂಗಮರು. ಕಾಯಕಕ್ಕೆ ಮೊದಲ ಆದ್ಯತೆ, ಲಿಂಗ, ಗುರುವಿಗೆ ಎರಡನೇ ಆದ್ಯತೆ. ಇದು ಶರಣರು ಕಾಯಕಕ್ಕೆ,ದುಡಿಮೆಗೆ ನೀಡಿದ ಮಹತ್ವ. ಬಸವಣ್ಣ ತುಂಬಾ ವೈಚಾರಿಕ, ಭಾವುಕ ಮನುಷ್ಯ ಎಂಬುದಕ್ಕೆ ಆತನ ವಚನದ ಅನೇಕ ಸಾಲುಗಳನ್ನು ನೆನಪಿಸಿಕೊಳ್ಳಬಹುದು. ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವ ಬಸವಣ್ಣ, ವ್ಯವಸ್ಥೆಯ ಭ್ರಷ್ಟಾಚಾರ ನೋಡಿ, ಬೇಲಿಯೇ ಎದ್ದು ಹೊಲವ ಮೇಯ್ದೊಡೆ, ಏರಿ ನೀರುಂಬೊಡೆ, ತಾಯಿಯ ಮೊಲೆ ಹಾಲು ವಿಷವಾದೊಡೆ ಇನ್ನಾರಿಗೆ ದೂರಲಿ ಕೂಡಲಸಂಗಮದೇವಾ ಎನ್ನುತ್ತಾನೆ. ಬಿಜ್ಜಳನ ಅರಮನೆಯಲ್ಲಿ ಪುರೋಹಿತಶಾಹಿಯ ಜನ ವಿರೋಧಿ ಆಲೋಚನೆಗಳನ್ನು ಕಂಡೇ ಬಸವಣ್ಣ ಈ ವಚನ ಬರೆದಿರುವಲ್ಲಿ ಅನುಮಾನವೇ ಇಲ್ಲ. ಬಿಜ್ಜಳನ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಜನಪರ ಅರ್ಥನೀತಿ ರೂಪಿಸಿದ್ದು, ಬಿಜ್ಜಳನ ಸುತ್ತ ಇದ್ದ ವಂಧಿಮಾಗಧರಿಗೆ ಕಿರಿಕಿರಿಯನ್ನು, ಅಸಹನೆಯನ್ನು ತಂದಿತ್ತು. ಬಸವಣ್ಣನನ್ನು ಹಣಿಯಲುನ ಸೂಕ್ತ ಸಂದರ್ಭಕ್ಕೆ ಅವರು ಕಾದಿದ್ದರು. ಮುಂದೆ ಬಿಜ್ಜಳನ ರಾಜ್ಯದಲ್ಲಿ ಅಂತರ್ಜಾತಿ ವಿವಾಹದ ಸಂದರ್ಭ, ಸನ್ನಿವೇಶ ಬಂದದ್ದೇ ತಡ, ಧರ್ಮ ವಿರೋಧಿ ಕೃತ್ಯ ಇದು ಎಂದು ಬಿಜ್ಜಳನ ಕಿವಿಯೂದುವಲ್ಲಿ ಯಶಸ್ವಿ ಯಾಯಿತು ವ್ಯವಸ್ಥೆ. ಇವತ್ತಿನ ಅರಸೊತ್ತಿಗೆಯಲ್ಲಿ ನಡೆಯುವ ರಾಜಕಾರಣಕ್ಕೂ, 12 ನೇ ಶತಮಾನದಲ್ಲಿ ಬಿಜ್ಜಳನ ಸುತ್ತ ನಡೆದ ವಿದ್ಯಮಾನಕ್ಕೂ ಅಂತ ವ್ಯತ್ಯಾಸವೇನಿಲ್ಲ. ಘಟನೆಗಳು, ಕಾರಣಗಳು ಭಿನ್ನ ಭಿನ್ನ ಇರಬಹುದು ಅಷ್ಟೇ. 12ನೇ ಶತಮಾನದ ಘಟನಾವಳಿಗಳ ಕುರಿತೇ ಕನ್ನಡದಲ್ಲಿ ನಾಲ್ಕು ನಾಟಕಗಳು ಬಂದಿವೆ. ಸಂಕ್ರಾತಿ, ತಲೆದಂಡ, ಕೆಟ್ಟಿತ್ತು ಕಲ್ಯಾಣ, ಮಹಾಚೈತ್ರ. ಲಂಕೇಶ್, ಗಿರೀಶ್ ಕಾರ್ನಾಡ,ಎಂ.ಎಂ.ಕಲಬುರ್ಗಿ,ಎಚ್.ಎಸ್.ಶಿವಪ್ರಕಾಶ್. ಈ ನಾಲ್ವರು ನಾಟಕಗಳ ಮೂಲಕ 12ನೇ ಶತಮಾನದ ಘಟನಾವಳಿಗಳನ್ನು ಪುರ್ನನಿರ್ಮಿಸಲು ಯತ್ನಿಸಿದ್ದಾರೆ. ಇದು ಕನ್ನಡದ ಪರಂಪರೆ ಎಷ್ಟು ಮಹತ್ವದ್ದು, ಯಾವ ಕಡೆಗೆ ಕನ್ನಡದ ಸಂಸ್ಕøತಿಯ ತುಡಿತ ಇತ್ತು  ಎಂಬುದುನ್ನು ತೋರಿಸುತ್ತದೆ. ಇದನ್ನೇ ನಾವು ಆಗಾಗ ಮುನ್ನೆಲೆಗೆ ತಂದು ಯುವಜನರ ಮುಂದೆ ಇಡಬೇಕಾಗಿದೆ. ಇಂಥ ಮಾನವಪರ ಪರಂಪರೆ ಪರಿಚಯಿಸಲು ಪ್ರಯತ್ನಗಳು ಆಗಿಯೇ ಇಲ್ಲ ಎನ್ನುವಂತಿಲ್ಲ. 21ನೇ ಶತಮಾನದಲ್ಲಿ ಸಹ ವಚನ ಚಳುವಳಿಯ ಮಹತ್ವ ಸಾರಲು ಪ್ರಯತ್ನಗಳು ನಡೆದಿವೆ. ಆದರೆ ಅಂಥ ಹೋರಾಟಕ್ಕೆ ವ್ಯಾಪಕತೆ ದಕ್ಕಿಲ್ಲ. ಕಾರಣ ನಮ್ಮ ಸಮಾಜ ಜಾತಿ ವ್ಯವಸ್ಥೆಯಲ್ಲಿ ಹಂಚಿಹೋಗಿದೆ. ಮೀಸಲಾತಿಯ ಉದ್ದೇಶ ಸಹ ಸಮಾನತೆ ಸಾರುವ ಸಮಾಜ ಕಟ್ಟಲು ಎಂಬ ಅದರೊಳಗಿನ ಆಶಯವನ್ನು ಮೀಸಲಾತಿ ಅನಭವಿಸುವವರು ಮತ್ತು ಮೀಸಲಾತಿ ವಿರೋಧಿಸುವವರು ಕುಳಿತು ಚರ್ಚಿಸಲು ಸಿದ್ಧರಿಲ್ಲ. ಸಾಣೇಹಳ್ಳಿಮಠದ ಶ್ರೀ ಪಂಡಿತಾರಾಧ್ಯರು ಮತ್ತೆ ಕಲ್ಯಾಣ ಎಂಬ ಪ್ರಮುಖ ತಲೆಬರೆಹದಡಿ 2019ರಲ್ಲಿ ಇಡೀ ಕರ್ನಾಟಕದ 30 ಜಿಲ್ಲೆಗಳನ್ನು ಸುತ್ತಿದರು. ಆಗ ಯುವಜನರನ್ನೇ ಪ್ರಮಖವಾಗಿಟ್ಟುಕೊಂಡು ಅವರೆತ್ತುವ ಎಲ್ಲಾ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದರು. ವಚನಕಾರರನ್ನು, ಅವರ ಅಶಯಗಳನ್ನು, ಅವರ ಉದ್ದೇಶದ ಸಮಾಜವನ್ನು ವಿದ್ಯಾರ್ಥಿ ಯುವಜನರ ಮುಂದಿಡುವುದು ಮತ್ತೆ ಕಲ್ಯಾಣದ ಉದ್ದೇಶವಾಗಿತ್ತು. 30 ಜಿಲ್ಲೆಗಳಲ್ಲಿ ನಡೆದ  ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಇದೀಗ ಕನ್ನಡಿಗರ ಮುಂದೆ ಪುಸ್ತಕರೂಪದಲ್ಲಿ ದಾಖಲಾಗಿವೆ. ಸಾಸಿವೆಯಷ್ಟು ಸುಖಕ್ಕೆ : ವಚನ ಸಾಹಿತ್ಯ ಕಾಲದಲ್ಲಿಯೇ ಬಂದ ಅನುಭಾವಿ ಕವಿ ಅಲ್ಲಮ ಪ್ರಭು ಮಾತೆಂಬುದು ಜೋತಿರ್ಲಿಂಗ ಎನ್ನುತ್ತಾನೆ. ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದ ಎತ್ತ ಸಂಬಂಧವಯ್ಯ ಎಂದ. ಬೆಡಗಿನ ವಚನಗಳನ್ನು ಬರೆದ, ಅವುಗಳನ್ನು ಅನುಭವ ಮಂಟಪದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕ ಮಹಾದೇವಿ, ಶಿವಯೋಗಿ ಸಿದ್ಧರಾಮರೊಡನೆ ವಾದಕ್ಕಿಳಿದು ಮಂಡಿಸುತ್ತಿದ್ದ ಅಲ್ಲಮ ಪ್ರಭು ಕನ್ನಡಿಗರಿಗೆ ಒಂದು ಅಚ್ಚರಿ.  “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂದ ಅಲ್ಲಮಪ್ರಭು ನಮ್ಮ ಬದುಕಿನ ಬಹುದೊಡ್ಡ ಗುರು. ಬುದ್ಧ ಸಹ ಸಾವಿಲ್ಲದ ಮನೆಯ ಸಾಸಿವೆ ತರುವಂತೆ ಒಬ್ಬ ಹೆಣ್ಮಗಳಿಗೆ ಹೇಳಿದೆ. ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸಿಕೊಡು ಎಂದು ಬಂದ ತಾಯಿಗೆ ಬುದ್ಧನ ಸಾಂತ್ವಾನ…ಸಾವಿಲ್ಲದ ಮನೆಯ ಸಾಸಿವೆ ಕಾಳು ತರುವಂತೆ ಹೇಳಿದ್ದು. ಇದು ನಮ್ಮ ಸಾಧಕರು ಜನ ಸಾಮಾನ್ಯರ  ದುಃಖಕ್ಕೆ ಹುಡುಕಾಡಿದ ಉತ್ತರ.  ವಚನಕಾರ ಅಲ್ಲಮ ಹೇಳುತ್ತಾನೆ ; ` ಹರಿವ ನದಿಗೆ ಮೈಯಲ್ಲಾ ಕಾಲು, ಬೀಸುವ ಗಾಳಿಗೆ ಮೈಯಲ್ಲಾ ಕಿವಿ, ಉರಿವ ಆಗ್ನಿಗೆ ಮೈಯಲ್ಲಾ ನಾಲಿಗೆ ‘ ಇಂತಹ ಪ್ರತಿಮೆಗಳ ಸೃಷ್ಟಿ , ಅನುಭಾವದ ಶರಣರಿಗೆ ಮಾತ್ರ ಸಾಧ್ಯ. ಹಾಗೂ 12ನೇ ಶತಮಾನದಲ್ಲೇ ಕನ್ನಡ ಭಾಷೆಯ ಬಳಕೆಯ ಬೆಡಗನ್ನು ಸಹ ಇದು ದಾಖಲಿಸುತ್ತದೆ. ಸಂತೆಯಲ್ಲೊಂದು ಮನೆಯ ಮಾಡಿ: ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನ ಹುಡುಕಿ ಹೊರಟವಳು. ಶಿವಮೊಗ್ಗ ಜಿಲ್ಲೆಯ ಅರಸು ಮನೆತನವೊಂದರ ರಾಜ ಕೌಶಿಕನ ಪತ್ನಿಯಾಗಿದ್ದ ಅಕ್ಕ ಉಡುತಡೆಯಿಂದ ಶ್ರೀಶೈಲಕ್ಕೆ ಹೊರಟವಳು. ದಾರಿಯಲ್ಲಿ ಅನುಭವ ಮಂಟಪದಲ್ಲಿದ್ದು, ಅಲ್ಲಿಯ ಶರಣರ ಜೊತೆ ತನ್ನ ಅರಿವಿನ, ಜ್ಞಾನದ ಬೆಳಕು ಚೆಲ್ಲಿದವಳು. “ಸಾಯುವ ಕೆಡುವ ಗಂಡನನ್ನು ಉರಿಯ ಒಲೆಯೊಳಗಿಕ್ಕು” ಎಂದು ಬರೆದು ಹಾಡಿದಾಕೆ. ಆಕೆಯ ಪ್ರಸಿದ್ಧ ವಚನ ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆತೊರೆಗಳಿಗೆ  ಅಂಜಿದೊಂಡೆಯೆಂತಯ್ಯ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಖಗಮೃಗಗಳಿಗೆ ಅಂಜಿದೊಡೆಯೆಂತಯ್ಯ, ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಯೆಂತಯ್ಯ….? ಇದು ನಮ್ಮ ಇವತ್ತಿನ ಮಹಿಳೆಯರು ಆಗಾಗ ನೆನಪಿಸಿಕೊಳ್ಳಬೇಕಾದ ವಚನ. ಕೊನೆಯ ಮಾತು: ಮಾತು ಸೋತಾಗ ಮೌನಕ್ಕೆ ಶರಣಾಗಿ ಓದಬೇಕು. ಪಂಪನ್ನು ಎದೆಗೆ ಹಾಕಿಕೊಂಡರೆ, ವಚನಕಾರರು ನಿಮ್ಮ ಹೃದಯ ತುಂಬುತ್ತಾರೆ. ಕನಕದಾಸ, ಶರೀಫರು ನಿಮಗೆ ಕಿವಿಮಾತು ಹೇಳಿಯಾರು. ಆಧುನಿಕ ಕನ್ನಡ ಕಾಲಕ್ಕೆ ಬಂದೆ ಬೆಳಕಿನ ಬದಿಯಲ್ಲಿ ಪ್ರೀತಿ ಕಂಡ ಬೇಂದ್ರೆ, ಎದೆಯ ದನಿಗೆ ಮಿಗಿಲಾದ ಶಾಸ್ತ್ರವಿಹುದೇ ಎಂದ ಕುವೆಂಪು ಕೈ ಹಿಡಿದು ನಡೆಸಿಯಾರು. ಅಕ್ಷರವನ್ನು ಬೆಳಕಾಗಿಸಿಕೊಳ್ಳುವುದು, ಪ್ರತಿಭೆಯನ್ನು ಬಿತ್ತಿ ಬೆಳೆಯುವುದು ನಮ್ಮ ಮನದೊಳಗೆ ಇದೆ. **********************************************

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ Read Post »

ಇತರೆ

ಸಂತಸ ಅರಳಿದ ಸಮಯಾ

ಮೊದಲ ಕವಿತೆಯ ರೋಮಾಂಚನ ವಸುಂದರಾ ಕದಲೂರು    ‘ಸಂಗಾತಿ’ ಬರಹಗಾರರನ್ನು ತಮ್ಮ ಮೊದಲ ಕಾವ್ಯದ ಹುಟ್ಟನ್ನು ಕುರಿತು ಬರೆಯುವಂತೆ ಪ್ರೇರೇಪಿಸಿದೆ. ಎಲ್ಲರೂ ಅಂದದ ತೊಟ್ಟಿಲೊಳಗೆ ಮಲಗಿ ನಿದ್ರಿಸುವ ತಮ್ಮ ಮುದ್ದಿನ ಮಗುವನ್ನು ಜತನದಿಂದ ಮೇಲೆತ್ತಿ ಮುದ್ದು ಮಾಡಿ ಓಲೈಸಿ ಆಡಿಸುವಂತೆ ಮೊದಲ ಕವನದ ನವಿರು ನೆನಪುಗಳನ್ನು ಕುರಿತು ಹೇಳುತ್ತಿದ್ದಾರೆ. ಓದಲು ಬಹಳ ಖುಷಿ ಎನಿಸುತ್ತದೆ.  ಹಳೆಯದನ್ನು ನೆನೆದು ಬರೆಯುವುದು ಆ ಕ್ಷಣದ ಮಟ್ಟಿಗೆ  ಒಂದು ಆನಂದ ಲಹರಿಯೇ..    ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಸಾಹಿತ್ಯ ಪ್ರಿಯರು. ಮನೆಗೆ  ತಪ್ಪದೇ ಮಯೂರ, ಸುಧಾ, ತರಂಗ, ಪ್ರಜಾವಾಣಿ ಬರುತ್ತಿದ್ದವು. ಮನೆಮಂದಿಯೆಲ್ಲಾ ಪೈಪೋಟಿ ಮೇಲೆ ಅವುಗಳನ್ನು  ಓದುತ್ತಿದ್ದೆವು. ಬಾಲಮಂಗಳ, ಚಂದಾಮಾಮದ ಖಾಯಂ ಓದುಗರು ನಾವು(ಅಕ್ಕ, ಅಣ್ಣ ಮತ್ತು ನಾನು). ನಾನಂತೂ ಮಿಡ್ಲ್ ಸ್ಕೂಲ್ ಇದ್ದಾಗಲೇ ಪಠ್ಯಪುಸ್ತಕದ ನಡುವಲ್ಲಿ ಮರೆಮಾಡಿಕೊಂಡು ಸುಧಾ,ಮಯೂರದ ಕತೆಗಳನ್ನು ಓದಿ ವಿಸ್ಮಯ ಪಡುತ್ತಿದ್ದೆ.            ನಾನು ಯಾವಾಗ ಬರೆದೆನೋ ನಿಶ್ಚಿತವಾಗಿ ಗೊತ್ತಿಲ್ಲ. ಆದರೆ ‘ನಾನೂ ಬರೆಯಬಲ್ಲೆನೆ!?’ ಎಂಬ ಯಾವ ಶಂಕೆ  ಸಂದೇಹಗಳೂ ನನಗೆ ಇರಲಿಲ್ಲ ಎಂದು ಕಾಣುತ್ತದೆ. ಜಂಭ ಇವಳಿಗೆ ಎನಿಸುವಂತೆ ಇತರರಿಗೆ  ಕಾಣುವ  ನಾನು ಸ್ವಲ್ಪ ಹೆಚ್ಚೇ ಎನಿಸುವ ಆತ್ಮವಿಶ್ವಾಸದ ಹುಡುಗಿ. ಅದೇನು ಹುಕಿ ಹುಟ್ಟಿತೋ ಹೇಗೆ ಹುಟ್ಟಿತೋ ಗೊತ್ತಿಲ್ಲ. ಅಂತೂ ನಾನೂ ಬರೆಯುವುದಕ್ಕೆ ಶುರು ಮಾಡಿದೆ. ಬರೆದ ಮೇಲೆ ಸುಮ್ಮನಿರೋದು ಹೇಗೆ? ಮನೆಯಲ್ಲಿ ಅಮ್ಮ ನನ್ನ ಬೆಸ್ಟ್ ಫ್ರೆಂಡ್. ಅವರ ಮುಂದೆ ನಾನು ಬರೆದುದನ್ನು ಓದಿ ಹೇಳುವುದು ಸ್ನೇಹಿತರ ಮುಂದೆ ಓದುವುದು ಮಾಡುತ್ತಿದ್ದೆ. ನಾಕಾರು ಸಾಲು ಪದ್ಯ ಬರೆದುದನ್ನೇ ದೊಡ್ಡದು ಮಾಡಿದ ಗೆಳತಿಯರು ನನ್ನನ್ನು ‘ಕನ್ನಡ ಪಂಡಿತೆ’ ಎಂದು ಕರೆಯಲು ಶುರು ಮಾಡಿಬಿಟ್ಟರು.. ಆಗೆಲ್ಲಾ ಎಷ್ಚು ಖುಷಿಯಿಂದ ಬೀಗುತ್ತಿದ್ದೆ…! ಅವರು ನನ್ನನ್ನು ಗೇಲಿ ಮಾಡಿರಬಹುದೇ..?! ಇರಲಿ ಬಿಡಿ, ಆಗಂತೂ ಬಹಳ ಅಭಿಮಾನದಿಂದ ಬೀಗಿದ್ದೆ. ಬರೆಯುತ್ತಿದ್ದೆ. ಹಾಗೆ ಬರೆದುದನ್ನು ಅಪ್ಪ ಅಮ್ಮನಿಗೆ, ಗೆಳೆಯರಿಗೆ, ಶಿಕ್ಷಕರಿಗೆ ತೋರುತ್ತಿದ್ದೆ. ಖುಷಿಪಡುತ್ತಿದ್ದೆ.      ಎಲ್ಲರೂ ಏನೋ ಬರೆಯುತ್ತೆ ಹುಡುಗಿ, ಬರೆಯಲಿ ಬಿಡು ಎಂದುಕೊಳ್ಳುತ್ತಿದ್ದರೇನೋ.. ಇದೆಲ್ಲಾ ನಡೆದದ್ದು ನಾನು ಆರು ಏಳನೆಯ ತರಗತಿಯಲ್ಲಿದ್ದಾಗ. ಆದರೆ ಹಳ್ಳಿಗಳ ತೆಕ್ಕೆಯಿಂದ ಪಟ್ಟಣದ ಮಡಿಲಿಗೆ ಬಿದ್ದಾಗಲೇ ಗೊತ್ತಾದದ್ದು ನಗರವಾಸಿಗಳು ಬಹಳ ಹುಶಾರಿಗಳೆಂದು. ಅವರು ಬಹಳ ಚೆನ್ನಾಗಿ ಓದುತ್ತಾರೆ ಮತ್ತು ಬರೆಯುತ್ತಾರೆಂದು!! ಪಟ್ಟಣದ ಶಿಸ್ತಿನ ಶಾಲೆ, ಪಠ್ಯಕ್ರಮ, ಜೀವನ ವಿಧಾನ ಕಂಡು ನಾನು ದಂಗಾದೆ. ಆದರೆ ಅಂತಹ ಸಂದರ್ಭದಲ್ಲೂ ನನ್ನನ್ನು ಕಳವಳಗೊಳ್ಳದಂತೆ, ಕಳೆದು ಹೋಗದಂತೆ ಕಾಪಾಡಿದ್ದು ನಾನು ಬರೆಯುವ ನಾಲ್ಕಾರು ಸಾಲುಗಳೇ. ಇಲ್ಲಿಯೂ ಅದು ನನ್ನ ‘ಕನ್ನಡ ಪಂಡಿತೆ’ಯ ಸ್ಥಾನವನ್ನು ಗಟ್ಟಿಗೊಳಿಸಿತು.   ೧೯೯೫ ರಿಂದ ನಾನು ಬರೆದುದನ್ನೆಲ್ಲಾ ದಿನಾಂಕವನ್ನು ನಮೂದಿಸುತ್ತಾ ಒಂದು ಡೈರಿಯಲ್ಲಿ ಬರೆದಿಡುತ್ತಾ ಬಂದೆ. ಆ ಮುಂಚೆ ಬರೆದುದು ಏನಾಯಿತೋ ಗೊತ್ತಿಲ್ಲ. ಆದರೆ ಹಾಗೆ ೧೯೯೫ರಿಂದ ಬರೆದಿಟ್ಟ ಡೈರಿ ನನ್ನ ಬಳಿ ಈಗಲೂ ಇದೆ. ಪುಸ್ತಕದ ಹಲವು ಪುಟಗಳು ಬಿಡಿಬಿಡಿಯಾಗಿ ಬಿಡಿಸಿಕೊಂಡಿವೆ. ಅದರಲ್ಲಿನ ಸಾಲುಗಳನ್ನು ಈಗ ಓದುವಾಗ ಬಾಲಿಶವೆನಿಸಿದರೂ ನನಗೆ ಅಪಾರ ಸಂತಸವನ್ನು ನೀಡುತ್ತವೆ.      ನಾನು ಬರೆದ ಕವನಗಳೆಲ್ಲಾ ಸಾಮಾನ್ಯವಾಗಿ ಪುಟ್ಟ ಸಾಲುಗಳುಳ್ಳವು.  ಅದರಲ್ಲೂ ಚುಟುಕು ಗಳೇ ಹೆಚ್ಚಿದ್ದವು. ಸಮಕಾಲೀನ ಸನ್ನಿವೇಶಗಳನ್ನು ಗಮನಿಸಿ ಬರೆದಂತಹವು.  ಒಂದೆರಡು ಉದಾರಹಣೆ ನೀಡುವೆ.  ೧.                         ‘ಯಾಕೆ!?’            ಪುಟ್ಟನಿಗೆ ಹೇಳಿದರು ಅವರಪ್ಪ            ಆಗೋ ನೀ ಪುಟ್ಟ ಪೋಲಿಸಪ್ಪ        ಪುಟ್ಟ ಹೇಳಿದ ನಾ ಪೋಲಿಸ್* ಆಗಲ್ಲಪ್ಪ        ಯಾಕೋ? ಕಮಂಗಿ ಎಂದರವರಪ್ಪ                ಅದಕೆ ಹೇಳಿದ ಪುಟ್ಟಪ್ಪ         ಇನ್ನೂ ಇರುವನು ‘ವೀರಪ್ಪ’ನ್ (ವೀರಪ್ಪನ್ ಪೊಲೀಸರನ್ನು ಅಪಹರಿಸಿದ ಸಂದರ್ಭಕ್ಕೆ ಬರೆದದ್ದು. ೨೬/೧೧/೯೫ ರಲ್ಲಿ ಬರೆದ ಕವಿತೆ.) * ‘ಪೊಲೀಸ್’ ಎಂಬುದು ಸರಿಯಾದ ಬಳಕೆ ಆದರೆ ಆಗ ನನಗಿದ್ದ ತಿಳುವಳಿಕೆಗೆ ನಾನು ಪೋಲಿಸ್ ಪದ ಬಳಸಿರುವೆ.   ೨.                   ‘ಪ್ರಧಾನಿ’                      ನಲ್ಲೆಗೆ ಹೇಳಿದ ನಲ್ಲ              ನಡೆದು ಬಾ ನೀ ಮೆಲ್ಲ- ನೆ             ನಸುಗೋಪದಿ ನುಡಿದಳು ನಲ್ಲೆ                   ನಾನೇನು ಪ್ರಧಾನಿ ಅಲ್ಲ  ( ಇದು ೨೭/೦೧/೯೬ ರಲ್ಲಿ ಬರೆದ ಕವಿತೆ. ಶ್ರೀ ಪಿ. ವಿ. ಎನ್.  ಆಗ ನಮ್ಮ ಪ್ರಧಾನಿಗಳಾಗಿದ್ದರು. ‘ನಿಧಾನವೇ ಪ್ರಧಾನ’ ಎಂಬ ಧ್ಯೇಯವನ್ನು ಪತ್ರಿಕೆಗಳು ‘ನಿಧಾನವೇ ಪ್ರಧಾನಿ’  ಎಂದು ಬರೆದು ಗೇಲಿ ಮಾಡುತ್ತಿದ್ದವು. ಅದರ ಪ್ರತಿರೂಪ ಈ ಚುಟುಕ.)   ಹೀಗೆ ಮೊದಲ ಕವನಗಳನ್ನು  ಕುರಿತು ಹಿಂದಿರುಗಿ ನೋಡಿದಾಗ ಈಗ ‘ಅಯ್ಯೋ ಹೀಗೆಲ್ಲಾ ಬರೆದಿರುವೆನಾ?!’ ಎಂದು ಅಚ್ಚರಿಯ ಪ್ರಶ್ನೆ ಮೂಡುತ್ತದೆಯೇ ಹೊರತು, ಅದರ ಹೊರತಾಗಿ ಹೀಗೆಲ್ಲಾ ಪೆದ್ದುಪೆದ್ದಾಗಿ ಬರೆದಿರುವೆನಲ್ಲಾ ಎಂದು ಯಾವತ್ತಿಗೂ ನಾಚಿಕೆ ತರಿಸಿಲ್ಲ. ಏಕೆಂದರೆ ಬರೆಯುವುದು ನನಗೆ ಎಂದಿಗೂ ಅಪರಾಧ ಎನಿಸಿಯೇ ಇಲ್ಲ.    ಹೀಗೆ ಹಳೆಯ ನೆನಪು ಮರಳಿಸಿ ಕೊಟ್ಟ ‘ಸಂಗಾತಿ’ಗೆ ಧನ್ಯವಾದಗಳು. *************************

ಸಂತಸ ಅರಳಿದ ಸಮಯಾ Read Post »

You cannot copy content of this page

Scroll to Top