ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ಡಾ.ಎಂ.ಗೋಪಾಲಕೃಷ್ಣ ಅಡಿಗ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?ಸಪ್ತ ಸಾಗರದಾಚೆಯೆಲ್ಲೊಸುಪ್ತ ಸಾಗರ ಕಾದಿದೆಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನುಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು. ನವೋದಯ ಕಾಲದ ಕಾವ್ಯಗಳ ಸಾಲಿನಲ್ಲಿ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ “ಕಟ್ಟುವೆವು ನಾವು” ಕವನ ಸಂಗ್ರಹದಲ್ಲಿ ” ಯಾವ ಮೋಹನ ಮುರಳಿ ಕರೆಯಿತು” ಕವಿತೆಯೂ ಒಂದು.೧೬ ಸಾಲುಗಳ ಈ ಕವನ ಪ್ರಸಿದ್ಧ ಭಾವಗೀತೆಯೂ , ಚಿತ್ರಗೀತೆಯೂ ಹೌದು.    ಜೋಡಿ ಸಾಲುಗಳಲ್ಲಿ ಅಂತ್ಯಪ್ರಾಸ ತ್ರಾಸವಿಲ್ಲದೇ ಸರಳವಾಗಿ , ಲಯ, ಗೇಯತೆ, ಮಾಧುರ್ಯತೆಯಿಂದ ಕೂಡಿದ ಹೃದ್ಯವೆನಿಸುವ ಸುಂದರ ಪದ್ಯ. ಕೆಲವು ಸಾಲುಗಳಂತೂ ಹಾಗೆಯೇ ನಾಲಿಗೆಯ ಮೇಲೆ ನರ್ತಿಸುವಂತೆ ಭಾಸವಾಗುತ್ತವೆ.    ಭಕ್ತಿ ಭಾವದೊಂದಿಗೆ ಕೃಷ್ಣ ಹಾಗೂ ಬೃಂದಾವನ ಗಳ ಉದಾಹರಣೆಯೊಂದಿಗೆ ನಮ್ಮ ಜೀವನ ಹಾಗೂ ನಶ್ವರವಾದ ಲೌಕಿಕ ಸುಖದಿಂದ ದೂರ ಸರಿಯುವ ಸಂದೇಶವನ್ನು ಈ ಸಾಲುಗಳು ನೀಡುತ್ತವೆ. ಅದೂ ಯಾರೋ ಕಿವಿಯಲ್ಲಿ ಮಧುರ ಕಂಠದಿಂದ ಜೇನ್ಮಳೆಯನ್ನು ಸುರಿಸಿದಂತೆ ಪದಗಳು ಲೀಲಾಜಾಲವಾಗಿ ಮನಸ್ಸಿಗೆ ನಾಟುವಂತೆ ಮೂಡಿಬಂದಿದೆ.ಪದಗಳ ಬಳಕೆಯಲ್ಲಿ ಪರ್ಯಾಯ ಪದಗಳಿಗೆ ಅವಕಾಶವೇ ಇಲ್ಲವೆಂಬಂತೆ ಪ್ರಯೋಗವಾಗಿದೆ. ಯಾವ ಮೋಹನನ ಕರೆಗೆ ಮನಸ್ಸು ಕರಗಿದೆಯೋ ಅಲ್ಲಿಗೇ ಸೆಳೆತ ಹೆಚ್ಚಾಗಿ ದೂರಕ್ಕೆ ಸಾಗುವಂತೆ ಮಾಡುವ ಅದಮ್ಯ ಶಕ್ತಿಯಿಂದಾಗಿ ಇಲ್ಲಿವರೆಗೂ ದೊರೆತದ್ದೆಲ್ಲವೂ ಬೇಡವೆನಿಸಿದೆ. “ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?”     ಮಾನವ ಶರೀರದ ರಚನೆಯಲ್ಲಿ ರಕ್ತ- ಮಾಂಸ, ಚರ್ಮದ ಹೊದಿಕೆಯಿಂದ ಕೂಡಿದ್ದು ಕ್ಷಣಿಕ ಆಸೆಗಳೆಡೆಗೆ ಬಹುಬೇಗ ಮರುಳಾಗಿಬಿಡುತ್ತದೆ. ಪ್ರೀತಿ, ಪ್ರೇಮಗಳೆಂಬ ಮೋಹವು ಕಾಮದ ಜಾಡು ಹಿಡಿದು ಇದಿಷ್ಟೇ ಸಾಕೆಂಬ ನಿರ್ಧಾರ ಮಾಡಿದಂತಿತ್ತು.ಹಾಗೆಯೇ ತನ್ನನ್ನು ಲೌಕಿಕ ಜಗತ್ತಿನ ಗೊಡವೆಗಳ ,ಆಕರ್ಷಣೆಯ ಗುಲಾಮನಾಗಿಸಿತ್ತು. ಆದರೇಕೋ ಬಯಸಿದ, ಅನುಭವಿಸಿದ ಎಲ್ಲಾ ಸುಖ ಲೋಲುಪತೆಗಳು ಬೇಡವೆನಿಸಿ ಏಕತಾನತೆಗೆ ಮನಸ್ಸು ಹಪಹಪಿಸುತ್ತಿದೆ ಎಂಬುದು ಇದರ ಮೂಲಕ ಕಂಡುಬರುತ್ತದೆ.   ಬೇಸರಿಕೆಯೊಂದು ಮನದ ಮೂಲೆಯಲ್ಲಿ ಮೊಳೆತು ಜೀವನವೆಂದರೆ ಕೇವಲ ಪ್ರಾಪಂಚಿಕ ಸುಖದಲ್ಲಿ ಮುಳುಗಿ ಸದಾಕಾಲವೂ ಖಿನ್ನತೆ, ಮಾನಸಿಕ ವೇದನೆ ಅನುಭವಿಸುತ್ತಾ ತೊಳಲಾಡುತ್ತಿರುವುದಲ್ಲ , ಬದಲಾಗಿ ಇದೆಲ್ಲವನ್ನೂ ಮೀರಿದ ದಿವ್ಯ ಅನುಭವವೊಂದು ನಮಗಾಗಿ ಕಾದಿದೆ. ಅದನ್ನು ನಾವು ಪಡೆಯಲು ಸಜ್ಜಾಗಬೇಕಿದೆ.   ” ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?” ಈ ಅದ್ಭುತ ಸಾಲುಗಳು ನೀಡುವ ಅರ್ಥ. ” ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲಿನಲ್ಲಿ ಎಲ್ಲಿಯೋ ಅಗೋಚರವಾದ ಸಪ್ತ ಸಾಗರದ ತೀರಕೆ ಸೆಳೆಯುವ ಕವಿಯ ಮನಸ್ಸಿಗೆ ಮೂಕವಾದ ಮರ್ಮರವೊಂದು ತಲುಪಿರುವಂತೆ ಭಾಸವಾಗುತ್ತಿದೆ. ನನ್ನ ಮನಸ್ಸನ್ನು ಮೆಚ್ಚಿದ ಸಾಲು ಹಾಗೂ ಸದಾ ಕಾಡುವ ಭಾವ. ಯಾವುದೋ ಅಲೌಕಿಕ ಶಕ್ತಿಯೊಂದು ಈ ಲೋಕದ ಜನರನ್ನು ಮೃದುವಾಗಿ ಎಚ್ಚರಿಸಿ ಇಹವನ್ನು ಬಿಡಲಾಗದೇ ಅಸಹಾಯಕ ಮನಸ್ಥಿತಿಯಲ್ಲಿರುವ ಯಾತನಾಮಯ ಜೀವಗಳನ್ನು ಚೈತನ್ಯಯುಕ್ತ ಜಗತ್ತಿಗೆ ಸೇರಿಸುತ್ತಿದೆ. ಹಾಗೆಯೇ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”ಈ ಸಾಲೂ ಕೂಡ ನಮ್ಮ ಸಾರ್ವಕಾಲಿಕ ಬದುಕಿಗೆ ಹಿಡಿದ ಕನ್ನಡಿಯೇ ಸರಿ. ಬದುಕೆಂದಿಗೂ ಗೊಂದಲಗಳ ಗೂಡಾಗದೇ ನೆಮ್ಮದಿಯ ತಾಣವಾಗಿರಬೇಕು.”ಇಲ್ಲ” ಗಳ ಕಡೆ ಮನಸ್ಸು ವಾಲಿರುವುದರಿಂದ ನಿಜವಾದ ಆನಂದವನ್ನು ಕೈಚೆಲ್ಲಿ ಮತ್ತೆಲ್ಲೋ ವ್ಯರ್ಥ ಪ್ರಯತ್ನ ಮಾಡುವುದೆಷ್ಟು ಸರಿ ಅಲ್ಲವೇ? ಇದ್ದುದರಲ್ಲಿ ನೆಮ್ಮದಿಯ ಕಂಡಾಗ ದೊರೆಯಬಹುದಾದ ಸಂತಸ ಪರರಿಂದ ಕಿತ್ತುಕೊಳ್ಳುವುದರಿಂದ ಸಿಗಲಾರದು, ಸಿಕ್ಕರೂ ಕ್ಷಣಿಕ.ತಮ್ಮ ಹತ್ತಿರ ಏನೋ ಇರುವುದಿಲ್ಲ ತಮಗೆ ಅದು ಬೇಕಾಗಿರುತ್ತದೆ.ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತಲೇ ಇರುವುದನ್ನು ಕಾಣುತ್ತೇವೆ. ಪಡೆದಾಗ ಸಂತಸ ಪಡುವ ಮನಸ್ಸು ಕ್ರಮೇಣ ಮತ್ತೇನೋ ಬಯಸುತ್ತದೆ ಅಥವಾ ಇರುವುದು ಕಡಿಮೆ ಯೂ ಎನಿಸಬಹುದು. ಪುನಃ ಮನಸ್ಸು ಹಾತೊರೆಯುತ್ತದೆ.ಹೀಗೆ ಜೀವ ಇರುವ ತನಕ ಕೊರತೆಗಳಿಗೂ ಬರವಿಲ್ಲ.ಆಸೆಗಳಿರಲಿ ದುರಾಸೆಗಳು ನಿಷಿದ್ಧ. ಹೀಗೆ ಪ್ರಶ್ನೋತ್ತರಗಳ ಮೂಲಕವೇ ಸಹೃದಯ ಓದುಗರ ಅಭಿರುಚಿಗೆ ತಕ್ಕಂತೆ ಮನಮುಟ್ಟುವ , ಭಾವಗಳನ್ನು ತನ್ನೆಡೆಗೆ ಸೆಳೆಯುವ ಮೋಹಕ ಶಕ್ತಿಯಿರುವ ಪದ್ಯ. ಮರದೊಳಡಗಿದ ಬೆಂಕಿ ಕಣ್ಣಿಗೆ ಅಗೋಚರ.ಹಾಗೆಯೇ ಮನದೊಳಡಗಿರುವ ಬೇಸರವೂ. ಮನದ ಬೇಸರವು ಹೊತ್ತಿ ಉರಿದು ಕಾತರದ ರೂಪವಾಗಿದೆ. ಏನು- ಏಕೆ ಎಂಬ ಅತೀವ ಉತ್ಸುಕತೆಯ ಮನಸ್ಸಿಗೆ ಬಹಳಷ್ಟು ಕಾಡುತ್ತದೆ. ಜೀವಾಂಶವೇ ನನ್ನ ಬಿಟ್ಟು ದೂರ ಹೋದಂತೆ ಇರುವುದೆಲ್ಲವನ್ನು ಬಿಟ್ಟು ಮತ್ತೆಲ್ಲೊ ಮನಸ್ಸು ಏನನ್ನೊ ಅರಸುತ್ತಾ ಹೊರಡುತ್ತದೆ. ನಾ ಮೆಚ್ಚುವ ಈ ಕವಿತೆಯು ಸದಾ ಗುಯ್ಗುಡುತ್ತದೆ ನನ್ನ ಕಿವಿಯಲ್ಲಿ. ****************************** ಸರಿತಾ ಮಧು

ನನ್ನ ಇಷ್ಟದ ಕವಿತೆ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ. ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ     ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು. ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು ….. ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ  ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ. ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ. ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ. ” ನಕ್ಷತ್ರಗಳ ಮೋಹದಲ್ಲಿ ಹಗಲನ್ನು ಮರೆತು ಬಿಟ್ಟೆ..” ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ. “ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು. ” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ. “ಬರೆಯುವ ಹಾಳೆ ಬೋರಲಾಯಿತು ಆದರೆ ಕವಿತೆಗೆ ಮಳೆಯಂತಹ ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು. ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ. “ಕೂಡಲ ಸಂಗಮದಲ್ಲಿ ಕೃಷ್ಣ ಮಲಪ್ರಭೆಯರು ಹರಿಯುತ್ತಿಲ್ಲ ಅಳುತ್ತಿದ್ದಾರೆ” ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ. ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ. ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ! ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ          ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು. “ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ. “ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು. ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ. “ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ. ಇವರ ಪದ್ಯಗಳಲ್ಲಿ ನನ್ನನ್ನು  ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ!  “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ. “ನಿನ್ನ ಧ್ಯಾನದ ಯೋಗದಲಿ ನನ್ನಿರವನ್ನು ನಾನೇ ಮರೆ ತು ಹಟ ಮುನಿಯಂತೆ ಇಲ್ಲಿ ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ, “ತೀಡಿದಂತೆಲ್ಲ ಘಮ ಘಮಿಸುವ ಗಂಧದ ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ ಆನಂದ ಪ್ರೇಮಾನಂದವು ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ. “ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ ಕೊಳ್ಳಬಹುದು ಅನ್ನುವುದು ಸಹಜ ಆಶಯ. “ರಾತ್ರಿ ತುಂಬಾ ನೆನಪುಗಳು ಬಣ್ಣ ಬಣ್ಣ ತುಂಬಿದ ಸಿನಿಮಾ ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ; “ದನ ಕಾಯುವ ಹುಡುಗನೊಬ್ಬ ದಿನವೂ ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ; ಅವನಿಗೆ ಅದು ಬದುಕು:

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು Read Post »

ಇತರೆ

ನನ್ನ ಇಷ್ಟದ ಕವಿತೆ

ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳ್ಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.                          _________  ನಾನು ನನ್ನ ಕನ್ನಡ ತರಗತಿಗಳಲ್ಲಿ   ವಿದ್ಯಾರ್ಥಿಗಳಿಗೆ ಆಗಾಗ ಓದಿಹೇಳುವ ಮತ್ತುನನಗಿಷ್ಟವಾದ ಕೆಲವೊಂದು ಕವಿತೆಗಳ ಸಾಲಿನಲ್ಲಿ ನವೋದಯ ಸಾಹಿತ್ಯದ,  ರಾಷ್ಟ್ರ ಕವಿ     ಜಿ. ಎಸ್. ಶಿವರುದ್ರಪ್ಪನವರು ಬರೆದಿರುವ  ‘ಮುಂಬೈ ಜಾತಕ’ವೂ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ಯೋಚಿಸಿದರೆ ನನಗೆ ಹೊಳೆದದ್ದು, ಇದೊಂದು ವಿಚಿತ್ರ ಶೈಲಿಯ, ಎಲ್ಲಾಾ ಕಾಲಕ್ಕೂ ಸರಿಹೊಂದುವ ಕವನ.   ಏಕೆಂದರೆ ಕವನಗಳ ಪ್ರಮುಖ ಲಕ್ಷಣವಾದ  ಗೇಯತೆ ಮತ್ತು ಪ್ರಾಸಗಳೆರಡನ್ನೂ ಗಾಳಿಗೆ ತೂರಿ ರಚಿಸಲಾದ ಈ ಕವಿತೆ ಸರ್ವಕಾಲಿಕ ಸತ್ಯವನ್ನು ಸಾರುತ್ತದೆ. ಆದ್ದರಿಂದಲೇ  ಅಂದು, ಇಂದು ಮತ್ತು ಎಂದೆಂದಿಗೂ ಜೀವಂತವಾಗಿ ಉಳಿಯಬಲ್ಲ ಶಕ್ತಿ ಈ ಕವನಕ್ಕಿದೆ.  ಏಕೆಂದರೆ ಆಗಿನ ಕಾಲದಲ್ಲಿ ಮುಂಬೈಗಷ್ಟೇ ಸೀಮಿತವಾಗಿದ್ದ   ಬಿಡುವುಲ್ಲದ, ಯಾಂತ್ರಿಕ ಜೀವನ ಶೈಲಿ,  ಈಗ ಭಾರತದ ಎಲ್ಲಾ  ಪ್ರಮುಖ ನಗರ ವಾಸಿಗಳ    ಜೀವನದಲ್ಲಿ ಹಾಸುಹೊಕ್ಕಾಗಿದೆ. ಕವಿ ಜಿ. ಎಸ್. ಎಸ್  ಬಯೋಡ್ಯಾಟದಲ್ಲಿ  ಕವನವನ್ನು ಹೇಳಿದ್ದಾರೋ   ಅಥವಾ ಕವನದಲ್ಲಿ ಬಯೋಡ್ಯಾಟವನ್ನು ಹೇಳಿದ್ದಾರೋ ಎನ್ನುವಷ್ಷರ ಮಟ್ಟಿಗೆ  ತಮ್ಮ  ಕವಿತೆಯಲ್ಲಿ  ನೈಜತೆ ಹಾಗೂ ಸರಳತೆಯನ್ನು ಪ್ರತಿಬಿಂಬಿಸಿದ್ದಾರೆ.  ನಗರ ಪ್ರದೇಶಗಳಲ್ಲಿ ಬೆಳೆಯುವ, ಬದುಕನ್ನು ಕಟ್ಟಿಕೊಳ್ಳುವ ಲಕ್ಷಾಂತರ ಮಧ್ಯಮ ವರ್ಗದ    ಮಕ್ಕಳ ಬದುಕಿನ ಚಿತ್ರಣವನ್ನು  ಕಣ್ಣಮುಂದೆ ಕಟ್ಟಿದ ಹಾಗೆ ಇಲ್ಲಿ ಬಿಚ್ಚಿಡಲಾಗಿದೆ. “ಹುಟ್ಟಿದ್ದು ಬೆಳೆದದ್ದು, ಕುಡಿದದ್ದು, ಕಂಡದ್ದು, ಕಲಿತದ್ದು …………”  ಹೀಗೆ ಕವಿತೆ  ನೀಡುವ ಆಮೂಲಾಗ್ರ  ವಿವರಣೆಗಳ ಹಿಂದಿರುವ ವ್ಯಂಗ್ಯ  ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.   ತಂದೆ, ತಾಯಿಯರ ಬಗೆಗಿರುವ ವಿವರಣೆಯಂತೂ  ನಮ್ಮ  ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಂತದ್ದು..  “ಇರುವ ಒಂದಿಂಚು ಕೋಣೆಯಲ್ಲೇ”  ಹೊರಲೋಕವನ್ನು ಪತಿಚಯಿಸುವ ತಾಯಿಯೊಂದು ಕಡೆಯಾದರೆ,  ಬೆಳಗಿನಿಂದ ರಾತ್ರಿಯವರೆಗೆ ಸಂಸಾರಕ್ಕಾಗಿ ದುಡಿಯುವುದರಲ್ಲೇ ಜೀವ ಸವೆಸುತ್ತಿರುವ  ತಂದೆ, ಮಕ್ಕಳ ಆಟ ಪಾಟಗಳಿಂದ ಸ್ವತಃ ವಂಚಿತ.  “ಜೀವನಕ್ಕಾಗಿ ದುಡಿಮೆಯೇ ಹೊರತು, ದುಡಿಮೆಗಾಗಿ  ಜೀವನವಲ್ಲ!  ಅಲ್ಲವೇ?”.  ದುಡಿಮೆ ನಿಜವಾದ ಅರ್ಥ ಕಳೆದುಕೊಳ್ಳುವುದು ಇಲ್ಲೇ. ಕವಿತೆ ಮುಂದುವರೆದು  ವಿದ್ಯೆಯ ಬಗ್ಗೆ ಹೇಳುತ್ತಾ, “ನೀನಾಗಿ ಕಲಿತದ್ದು ಬಲು ಕಡಿಮೆ….”.   ಎಂಬಲ್ಲಿ “ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದೊಂದನ್ನು ಹೊರತು” ಎಂದು ಹೇಳುವ ಮೂಲಕ  ಕವಿ ತಮ್ಮ ಕವನಕ್ಕೆ ಹಾಸ್ಯ ಲೇಪನವನ್ನೂ ಸಹ ಮಾಡಿದ್ದಾರೆ. ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು  ಕಲಿಸಲು ಯಾವ ಶಾಲೆ, ಕಾಲೇಜುಗಳೂ ಬೇಕಿಲ್ಲವಷ್ಟೆ!    ಇಷ್ಟೆಲ್ಲಾ ಆದ ಮೇಲೆ, ಆ ಮಗುವೂ ಬೆಳೆದು ದೊಡ್ಡವನಾದಂತೆ  ತಾನೂ ಸಹ ತನ್ನ ತಂದೆಯಂತೆಯೇ  “ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು……”‘ ಇಂತಹದ್ದೇ  ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ವಿಪರ್ಯಾಸ.   ಈಗ ತಾನೂ ತನ್ನ ತಂದೆಯಂತೆ  “ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ!”  ಇದಂತೂ  ಜೀವನದ ಕಟು ಸತ್ಯವನ್ನು ಓದುಗರಿಗೆ  ಬಿಚ್ಚಿ ತೋರಿಸುತ್ತದೆ.  ತನಗಾಗಿ ಒಂದಿಷ್ಟೂ ಸಮಯವಿಲ್ಲದೆ ಜೀವನವೆಲ್ಲಾ  ದುಡಿದು ದುಡಿದೂ ಸೊರಗಿ, ಕೊನೆಗೊಮ್ಮೆ ಕಣ್ಮುಚ್ಚುವ  ಪಟ್ಟಣಿಗರ ಬದುಕಿನಲ್ಲಿ  ನಿಜವಾದ ಬದುಕೆಲ್ಲಿದೆ?  ಯಾವ ಪಟ್ಟಣಿಗನು ಈ ಕವನವನ್ನು ಓದಿದರೂ ಇದು ತನ್ನದೇ ಬಯೋಡಾಟಾ ಎಂದು ಭಾವಿಸದಿರನೇ?  ಇಂದಿನ ಜೀವನ ಶೈಲಿಯನ್ನು , ಪಟ್ಟಣಿಗರ ಪಾಡನ್ನು ಸರಳವಾಗಿ, ಸುಂದರವಾಗಿ    ಅನಾವರಣಗೊಳಿಸಿರುವ  ಜಿ ಎಸ್ ಎಸ್ ರವರ ಈ ಕವಿತೆ ನನ್ನ ಫೇವರೇಟ್. **************************** ಅರುಣಾ ರಾವ್

ನನ್ನ ಇಷ್ಟದ ಕವಿತೆ Read Post »

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ

ಕವಿತೆ ದೇವು ಮಾಕೊಂಡ ಮಧುರ ಸ್ಪರ್ಷವಿತ್ತನೆನಪುಗಳು ಮುಳುಗುತ್ತಿವೆಕಣ್ಣುಗಳ ಮುಂದೆ ಹಾದು ಹೋಗುತ್ತಿವೆದಿನ ದಿನ ಕಳೆದ ಘಟನೆಗಳುಭಯವಿದೆ ನನಗೀಗನೂರಾರು ವರುಷಗಳಿಂದ ಪಕ್ಕೆಲುಬುಗಳಲಿಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದುಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆಸ್ವರ್ಗದ ಹಾದೀಲಿದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗಕಳೆದು ಹೋದ ಜೋತಿರ್ವರ್ಷಗಳಮೆಲಕು ಹಾಕುತ್ತ ನಿಂತಿರುವೆಲಿಖಿತ ಡೈರಿಗಳುಶೀರ್ಷಿಕೆ ರಹಿತ ಪದ್ಯಗಳುರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡುಬರಿಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳನಡುವೆ ನಿಂತಿದ್ದೇನೆ ನೋಡಿವರ್ಷಕ್ಕೊಂದೆರಡು ಸಲತ್ರಿವರ್ಣದ ಧ್ವಜದ ಕೆಳಗೆಮಸುಕಾದ ಹೆಜ್ಜೆಗುರುತುಗಳುಉಸಿರು ಕಟ್ಟಿದ ಗಂಟಲಿಂದ ಬರುವಶುಭಾಶಯ ಸಹಾನುಭೂತಿಗಳುಮಿನುಗುತ್ತಿವೆಮರುದಿನ ಮತ್ತೆಅಸಮ ಉಸಿರುಎದೆಬಡಿತ ! ಬನ್ನಿನೋಡಬನ್ನಿನಾವು ಎಷ್ಟೊಂದು ನಿಧಾನವಾಗಿಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆಗಲ್ಲಿಯಲಿ ಕನಸು ಕಂಡ ಆತ್ಮಗಳುಷಹರನಲಿ ಅಳಿಯುತ್ತಿವೆಭಯ ಬೆನ್ನುಮೂಳೆ ಸುತ್ತುವಾಗಖುಷಿಯನ್ನು ರಕ್ತನಾಳ ಸುಡುತ್ತಿದೆಹೀಗೆ…ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವುನೋಡಬನ್ನಿ ನೀವು***************************

ವಿಧಾಯ ಹೇಳುತ್ತಿದ್ದೇವೆ Read Post »

ಕಾವ್ಯಯಾನ

ಅನುವಾದಿತ ಕವಿತೆ

ರಾಹತ್ ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆಇಲ್ಲಿರುವುದು ಕೇವಲ‌ ನನ್ನ ಮನೆ ಮಾತ್ರ ಅಲ್ಲವಲ್ಲ ನಾನು ಹೇಳಿರುವುದೇ ಇಲ್ಲಿ ಅಂತಿಮಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರುನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ ಹನಿಯೂ ಸೇರಿದೆಈ ಹಿಂದೂಸ್ತಾನ್ ಯಾರ ಅಪ್ಪನದೂ ಅಲ್ಲವಲ್ಲ ******************************

ಅನುವಾದಿತ ಕವಿತೆ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ

ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇ ರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ.ಪ್ರತಿ ಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದು ಕೊಳ್ಳುತ್ತಾ ರೆ.ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇ ವೆ.ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು ಬೇರೊಂದು ಕಾರ್ಯದಲ್ಲಿ ಮಗ್ನನಾಗಿದ್ದೇನೆ ಎಂದು ಎದುರಿಗಿನವರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆಂದು ನಾವೇ ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಹೂಂ  ಎಂದು ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಸೌಜನ್ಯತೆಯ ಲಕ್ಷಣ. ಆಂಗ್ಲ ನುಡಿಯಂತೆ ಸೌಜನ್ಯವು ಶತ್ರುವನ್ನು ಗೆಲ್ಲುತ್ತದೆ ಎಂಬುದೇನೋ ನಿಜ.ಮ್ಯಾಂಟಿಗೋ ಹೇಳುವಂತೆ ಸೌಜನ್ಯಕ್ಕೆ ವೆಚ್ಚವೇನೂ ಹಿಡಿಯುವುದಿಲ್ಲ, ಆದರೆ ಸೌಜನ್ಯವು ಎಲ್ಲವನ್ನೂ ಕೊಂಡುಕೊಳ್ಳುತ್ತದೆಂಬ ಮಾತು ಅಷ್ಟೇ ದಿಟ. ಅಪಮಾನಕರ ಸಂಗತಿ ಅಲ್ಲ.ಒಲ್ಲೆ ಬೇಡ ಎಂದು ಹೇಳುವುದು ಅಪಮಾನಕರ ಎಂಬ ಹುರು ಳಿಲ್ಲದ ನಂಬಿಕೆಯಲ್ಲಿ ಬಿದ್ದು ನರಳುವವರನ್ನು ನೋಡುತ್ತೇ ವೆ ಅವರಿಂದ ಪಾಠ ಕಲಿಯದೇ ನಾವೂ ಅದೇ ಬಲೆಯಲ್ಲಿ ಬೀಳಲು ಹವಣಿಸುತ್ತೇವೆ.ದಾಕ್ಷಿಣ್ಯಕ್ಕೆ ಬಿದ್ದು ಬೇಡ ಒಲ್ಲೆ ಎನ್ನದೇ ಒಪ್ಪಿಕೊಂಡ ಸಂಗತಿಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತವೆ.ಎಂಬುದು ಅನುಭವಿಸಿದವರಿಗೆ ಗೊತ್ತು ಬಲವಂತಕ್ಕೆ ಬಲಿಪಶುಗಳಾಗುವುದಕ್ಕಿಂತ ನಿರ್ದಾಕ್ಷಿಣ್ಯದಿಂ ದ ಮಾತನಾಡುವುದು ಒಳಿತು. ದಾಕ್ಷಿಣ್ಯಕ್ಕೆ ಒತ್ತು ಕೊಟ್ಟರೆ ಬಲಿಯಾಗುವಿರಿ. ಆಲಿವರ್ ಗೋಲ್ಡ್ ಸ್ಮಿತ್ ಹೇಳಿದಂತೆ ಸಹೃದಯತೆ ಕರುಣೆ ಹೊಂದಿದ ವ್ಯಕ್ತಿಯನ್ನು ಸಮಾಜ ಸದಾ ಗುರುತಿಸುತ್ತದೆ. ಹೀಗಾಗಿ ಸಹೃದಯತೆಯನ್ನು ಮೆರೆಯಿರಿ ಹೊರತು ದಾಕ್ಷಿ ಣ್ಯದ ಹೊರೆ ಹೊತ್ತು ಬೇಸರಿಸಿಕೊಂಡು,ನಿಮ್ಮ ಮನದ ಪ್ರಶಾಂತತೆಯನ್ನು ಕಳೆದುಕೊಳ್ಳದಿರಿ.ಹೌದಪ್ಪಗಳಾಗಬೇಡಿ  ಪ್ರತಿಯೊಂದಕ್ಕೂ ಹೂಂ ಎನ್ನುವ ಹೌದು ಎಂದು ಗೋಣು ಅಲ್ಲಾಡಿಸಿ ಹೌದಪ್ಪ (ಎಸ್ ಮ್ಯಾನ್)ಗಳಾಗಲು ಕಾರಣಗ ಳು ಅನೇಕ.ಅವುಗಳಲ್ಲಿ ಧೈರ್ಯವಿಲ್ಲದಿರುವುದೂ ಒಂದು ನಮಗ್ಯಾಕೆ ಉಸಾಬರಿ? ಹೂಂ ಎಂದರೆ ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡಂತೆ ಎಂಬ ಜಾಯಮಾನ. ಒಲ್ಲೆ ಇಲ್ಲ ಬೇಡ ಎಂದರೆ ಗುಂಪಿನಿಂದ ಹೊರ ಹೋಗಬೇಕಾಗು ತ್ತೆ. ಎಲ್ಲರೊಂದಿಗೆ ಗೋವಿಂದ ಅಂದರೆ ಮುಗಿದು ಹೋ ಯಿತು. ಅತಿ ಮುಖ್ಯ ಕಾರಣವೆಂದರೆ ಎಲ್ಲರಲ್ಲಿಯೂ ತಾ ನು ವಿಭಿನ್ನ ವಿಶಿಷ್ಟ ಎಂದು ಗುರುತಿಸಿಕೊಳ್ಳಲು ಹೇಳುವ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದು.ಯಾವ ಕೆಲಸವನ್ನು ಪೂರ್ಣಗೊಳಿಸದೇ ಒದ್ದಾಡುವುದು.ಒಂದು ಸಂಗತಿ ನೆನ ಪಿರಲಿ ಎಲ್ಲವನ್ನೂ ಮಾಡಲು ಹೋದರೆ ಯಾವುದನ್ನೂ ಪೂರ್ಣ ಮಾಡಲಾಗುವುದಿಲ್ಲ. ಯಶಸ್ವಿ ವ್ಯಕ್ತಿ ಎಂದು ಕರೆಸಿಕೊಳ್ಳಲು ಪ್ರಯತ್ನಿಸಿ ಅಪ ಮಾನಕ್ಕೀಡಾಗುವ ಪ್ರಸಂಗಗಳೇ ಹೆಚ್ಚಾಗುವವು.ಇಂಥವ ರನ್ನು ಕಂಡೇ “ಯಶಸ್ವಿಯಾಗಲು ಪ್ರಯತ್ನಿಸಬೇಡಿ, ಅದಕ್ಕೆ ಬದಲು ಮೌಲ್ಯವುಳ್ಳ ಘನತೆ ವ್ಯಕ್ತಿಯಾಗಲು ಪ್ರಯತ್ನಿಸಿ.” ಎಂದು ಅಲ್ಬರ್ಟ್  ಐನ್ ಸ್ಟೀನ್ ಹೇಳಿರಬಹುದು.ನಯ ವಾಗಿ ನಿರಾಕರಿಸಿ.ನೀವು ನಿಗದಿತ ಸಮಯದಲ್ಲಿ ಮಾಡ ಲೇಬೇಕಾದ ಕಾರ್ಯದಲ್ಲಿ ಮಗ್ನರಾದಾಗ ಬೇರೆಯವರು ತಮ್ಮ ಯಾವುದೇ ಕೆಲಸ ಹೇಳಿದರೆ ನನ್ನಿಂದ ಈಗ ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ನಯವಾಗಿ ನಿರಾಕರಿಸಿ. ಊಟ ತಿಂಡಿ ವಿಷಯಗಳಲ್ಲೂ ನಿಮಗೆ ಬಲವಂತ ಮಾಡಿ ಬಡಿಸುವಾಗ, ಮತ್ತಷ್ಟು ತಿನ್ನುವಂತೆ ಒತ್ತಾಯಿಸಿದಾಗ, ಹೊಟ್ಟೆ ತುಂಬಿದೆ ಸಾಕು ಎಂದು ನಿರಾಕರಿಸಿ.ಪಾರ್ಟಿಗಳಲ್ಲಿ ನಿಮ್ಮ ಗೆಳೆಯ/ತಿಯರು ನಿಮ್ಮ ಅಭಿರುಚಿಗೆ ಹೊಂದದ ಆಹಾರಗಳನ್ನು ಪೇಯಗಳನ್ನು ತಿನ್ನಲು ಆಗ್ರಹ ಪಡಿಸಿದರೆ ನಿರ್ಭಿಡೆಯಿಂದ ನಾನು ಒಲ್ಲೆ ಎಂದು ಹೇಳಿ.ನಿಮ್ಮತನವ ನ್ನು ಕಾಪಾಡಿಕೊಳ್ಳಿ.ಯಾರದೋ ಇಷ್ಟಕ್ಕೆ ನಿಮ್ಮ ಇಷ್ಟದ ವಿರುದ್ಧ ನಡೆದುಕೊಳ್ಳಬೇಡಿ.ನಿರ್ದಾಕ್ಷಿಣ್ಯವಾಗಿ ವರ್ತಿಸಿ. ನೇರ ಮಾತುಗಾರರಿಗೆ ಗೆಳೆಯರು ಕಡಿಮೆ. ನೇರವಾಗಿ ಮುಚ್ಚು ಮರೆಯಿಲ್ಲದೇ ಮಾತನಾಡುವವರಿಂದ ಬಹಳ ಜನ ದೂರವಿರಲು ಬಯಸುತ್ತಾರೆ.ಅವರೊಂದಿಗೆ ಇರುವು ದರಿಂದ ಯಾವಾಗ ಮಾನ ಹರಾಜು ಹಾಕುತ್ತಾರೋ ಎನ್ನುವ ಭಯ ಕಾಡುತ್ತದೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವವರೊಂದಿಗೆ ಸ್ನೇಹದ ಹಸ್ತ ಚಾಚುವುದು ವಿರಳ.ನಿದಾಕ್ಷಿಣ್ಯವಾಗಿ ಮಾತ ನಾಡಿಯೂ ಸ್ನೇಹಿತರನ್ನು ಉಳಿಸಿಕೊಳ್ಳಬಹುದು ಗಳಿಸಿ ಕೊಳ್ಳಬಹುದು. ಅದು ನೀವು ಉಪಯೋಗಿಸುವ ಪದಗ ಳು ಮಾತನಾಡುವ ದಾಟಿ ಮತ್ತು  ತೋರುವ ಕಾಳಜಿಯ ಮೇಲೆ ಅವಲಂಬಿತವಾಗಿರುತ್ತದೆ.ಇಲ್ಲಿ ಬಹಳ ಮುಖ್ಯವಾ ದ ವ್ಯತ್ಯಾಸವೆಂದರೆ ಭಾವನಾತ್ಮಕ ವ್ಯತ್ಯಾಸ. ವರ್ಚಸ್ಸು ಹೆಚ್ಚಿಸಿಕೊಳ್ಳಿ.ಬಂಧು ಬಾಂಧವರಲ್ಲಿ ಸಮಾಜದಲ್ಲಿ ನನ್ನ ವರ್ಚಸ್ಸು ತುಂಬಾ ಚೆನ್ನಾಗಿದೆ. ಯಾರೂ ಯಾವುದೂ ಸಹಾಯ ಕೇಳಿದರೂ ಇಲ್ಲ, ಆಗದು ಎಂದು ಹೇಳಿದರೆ ನನ್ನ ವರ್ಚಸ್ಸಿಗೆ ದಕ್ಕೆ ಬರುತ್ತದೆ. ಇಲ್ಲ ಎಂದು ಹೇಳಿದರೆ ಅವರಿಗೆಲ್ಲ ಅತೃಪ್ತಿಯಾಗುತ್ತದೆ. ಆಗಲ್ಲ ಎಂದರೆ ಅವರಿಗೆ ಕೋಪ ಬರುತ್ತದೆ ಎಂದೆಲ್ಲ ನೀವೇ ಭಾವಿಸಿ ನನ್ನಿಂದಾಗದು ಇಲ್ಲ ಎಂದು ಮನಸ್ಸು ಕೂಗಿ ಹೇಳಿದರೂ ಅದರ ಮಾತಿಗೆ ಸೊಪ್ಪು ಹಾಕದೇ ಸಂಕೋಚ ಪಟ್ಟು ಕೊಂಡು ಕೋಲೆತ್ತಿನ ತರಹ ಗೋಣು ಹಾಕಿ ಬಿಡುತ್ತೀರಿ. ನಂತರ ನಿನ್ನಿಂದ  ಅವ ರಿಗೆಲ್ಲ ಸಂಪೂರ್ಣ ನೆರವು ಪೂರೈಸಲಾಗದೇ ಗೋಳಾಡು ವ ಪ್ರಸಂಗ ಎದುರಾಗುತ್ತದೆ. ಸಹಾಯ ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ನಿಮ್ಮನ್ನು ಹಾಡಿ ಹರಿಸುತ್ತಾರೆ. ಇದೆಲ್ಲ ಕ್ಕಿಂತ ಇಲ್ಲ- ಆಗದು- ನಾನು ಒಲ್ಲೆ ಎಂದು ನೇರವಾಗಿ ಹೇ ಳಿದರೆ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ನಿಸ್ಸಂಕೋಚವಾಗಿ ತಿಳಿಸಿ ಹತ್ತು ಜನರೊಂದಿಗಿದ್ದಾಗ ಅವ ರ ಹಾಗೆ ನಡೆದುಕೊಳ್ಳದಿದ್ದರೆ ಸಾಮರಸ್ಯತೆ ಇಲ್ಲ ಸಮನ್ವತೆ ಕೊರತೆ ಇದೆ ಎಂದುಕೊಳ್ಳುತ್ತಾರೆ ಎಂದು ಅವರ ಮುಲಾ ಜಿಗೆ ಒಳಗಾಗಿ ಕುಡಿಯುವುದು ತಿನ್ನುವುದು ಸೇದುವುದಕ್ಕೆ ಹೂಂ ಎನ್ನದಿರಿ. ಕೂಡಿ ನಡೆಯುವಾಗ ಬಾಳುವಾಗ ಸಾ ಮರಸ್ಯತೆ ಸಮನ್ವತೆ ಮುಖ್ಯ ನಿಜ. ಹಾಗಂತ ನಿಮ್ಮ ವ್ಯಕ್ತಿ ತ್ವಕ್ಕೆ ದಕ್ಕೆ ತರುವಂಥ ದುಷ್ಕೃತ್ಯಗಳಿಗೆ ಗಟ್ಟಿಯಾಗಿ ಒಲ್ಲೆ ಎಂದು ಹೇಳಿ. ಇಂಥ ಜನರಿಗೆ ತಪ್ಪು ಅಭಿಪ್ರಾಯಗಳಿಗೆ ಎಡೆ ಮಾಡಿಕೊಡದಂತೆ ಸ್ಪಷ್ಟವಾಗಿ ನಿಸ್ಸಂಕೋಚವಾಗಿ ತಿ ಳಿಸಿ ಬಿಡಿ. ಇದರಿಂದ ಬೇರೆಯವರೂ ತಮ್ಮ ತಪ್ಪನ್ನು ತಿದ್ದಿ ಕೊಳ್ಳುವ ಸಾಧ್ಯತೆ ಇದೆ.ಇತರರೊಂದಿಗೆ ಕೆಲಸ ಮಾಡುವಾ ಗ ಸ್ನೇಹ ಸ್ಪೂರ್ತಿ ಸಮನ್ವತೆಗಳಿಂದ ಸೇರಿಕೊಳ್ಳಿ.ನೀವು ಸ್ನೇಹಪರ ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ಎದುರಿಗಿನವರು ಅರ್ಥ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನಿಮ್ಮ ಸಹೋದರ/ರಿಗೆ ಚಿಕ್ಕ ಮಕ್ಕಳಿಗೂ ಖಚಿತವಾಗಿ ನಿರ್ಧಿಷ್ಟವಾಗಿ ನಿರ್ದಾಕ್ಷಿಣ್ಯವಾಗಿ ಬೇಡ ಎಂದು ಹೇಳಲು ಕಲಿಸಿ ಮಾರ್ಗದರ್ಶನ ನೀಡಿ. ಹೀಗೆ ಕಲಿಸಿಕೊಡುವುದರಿಂ ದ ಮುಂದಾಗುವ ನೋವುಗಳು ತಪ್ಪುತ್ತವೆ.  ಇಲ್ಲ ಆಗದು ನಾನು ಒಲ್ಲೆ ಎಂದು ಹೇಳದಿರುವುದು ಸಣ್ಣ ತಪ್ಪು ಎಂದು ನಿರ್ಲಕ್ಷಿಸಬೇಡಿ. ದೊಡ್ಡ ಹಡಗನ್ನು ಸಣ್ಣ ರಂಧ್ರವೇ ಮುಳುಗಿಸುತ್ತದೆ. ಬುದ್ಧಿವಂತಿಕೆಯಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.ಇತರರು ನಿನಗೆ ಇಲ್ಲ-ಆಗದು ಎಂದು ಹೇಳಿದಾಗಲೂ ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಎಲ್ಲದಕ್ಕೂ ಇಲ್ಲ ಆಗದು ಎಂಬುದನ್ನು ಕಲಿಯಬೇಡಿ.ಇಲ್ಲ ಎಂದು ಹೇಳುವುದು ಮತ್ತು ನಕಾರಾತ್ಮಕವಾಗಿ ಸ್ಪಂದಿಸುವುದು ಎರಡೂ ಒಂದೇ ಅಲ್ಲ ಎಂಬುದು ನೆನಪಿನಲ್ಲಿರಲಿ.ಅಗತ್ಯತೆ ಬಿದ್ದಾಗ ಇತರರ ನೆರವಿಗೆ ಧಾವಿಸಿ. ಸಂಕಷ್ಟದಲ್ಲಿರುವವರ ಮೊರೆಗೆ ಕಿವಿಗೊಡುವುದನ್ನು ಮರೆಯದಿರಿ. ******************************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಅಂಕಣ Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ

ಅಂಕಣ ಬರಹ ಮುಖಾಮುಖಿಯಲ್ಲಿ ರೇಖಾಭಟ್ ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು ರೇಖಾ ಗಜಾನನ ಭಟ್ಟ ವಜ್ರಳ್ಳಿ ಹತ್ತಿರದ ಹೊನ್ನಗದ್ದೆಯವರು. ಯಲ್ಲಾಪುರದ ಕುಂದೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ಪತಿ ಹೈಸ್ಕೂಲ್ ಶಿಕ್ಷಕರು. ಗಾಯನ ಮತ್ತು ಬರವಣಿಗೆ ಇವರ ಹವ್ಯಾಸಗಳು. ಗಜಲ್ ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದಾರೆ. ಇವರ ಚೊಚ್ಚಿಲ ಕೃತಿಯನ್ನು ಮಡಿಲ ನಕ್ಷತ್ರವನ್ನು ಅದಿತಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯ ಮಾಡಿದೆ. ಕನ್ನಡದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪರಂಪರೆ ಇದೆ. ಆ ಸಾಲಿನಲ್ಲಿ ಈ ವರ್ಷ ಉತ್ತರ ಕನ್ನಡದಿಂದ ಆಯ್ಕೆಯಾದವರು ರೇಖಾ ಭಟ್ಟ. ವಚನಗಳನ್ನು, ದಾಸ ಸಾಹಿತ್ಯವನ್ನು ಇಷ್ಟಪಟ್ಟು ಓದುವ ರೇಖಾ ಭಟ್ಟ ಕನ್ನಡದ ಬೇಂದ್ರೆ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನು ಇಷ್ಟಪಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು ಎಳಸು ಎಂಬ ವಿನಯ ಸಹ ಅವರಲ್ಲಿದೆ. ವೈಚಾರಿಕ ಸಾಹಿತ್ಯ ಮತ್ತು ಪ್ರಗತಿಪರ ಧೋರಣೆಗಳನ್ನು ಗ್ರಹಿಸುವ ಮನಸ್ಸು ಸಹ ಅವರಲ್ಲಿದೆ. `ನಿನ್ನ ಮಾತುಗಳ ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ, ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದು ಕೊಂಡೆ’ ಎನ್ನುವ ರೇಖಾ ಅವರ ಗಜಲ್ ಗಳಲ್ಲಿ ಹೊಸತನದ ಹುಟುಕಾಟವೂ ಇದೆ. ಬಿಡುಗಡೆಯ ಹಂಬಲವೂ ಇದೆ. `ನಿನ್ನ ನೆನಪುಗಳ ಹೊರತಾಗಿ ಬೇರೇನೂ ಉಳಿದಿಲ್ಲ ಗೆಳೆಯಾ ದಹಿಸುತಿರುವ ವಿರಹದುರಿಯು ಏನನ್ನೂ ಉಳಿಸಿಲ್ಲ ಗೆಳೆಯಾ ‘ ಹೂಬನದಲಿ ಬರೀ ಮುಳ್ಳುಗಳೇ ಕಣ್ಣುಗಳ ಇರಿಯುತಿವೆ ಯಾಕೆ ವಿಷಾದದಲಿ ಬೆಂದ ಮನದಂತೆ ನೆಟ್ಟ ನೋಟವೂ ನೆಟ್ಟಗಿಲ್ಲ ಗೆಳೆಯಾ ಗಜಲ್ ಪ್ರಕಾರ ವಿರಹವನ್ನು ಪ್ರೇಮದ ಉತ್ಕಟತೆಯನ್ನು ಹೇಳಲು ಸಮರ್ಥವಾದ ಅಭಿವ್ಯಕ್ತಿಯ ಒಂದು ಪ್ರಕಾರ. ಈಚೆಗೆ ಗಜಲ್‌ನಲ್ಲಿ ವಿರಹ ಮತ್ತು ಪ್ರೇಮವೈಫಲ್ಯವನ್ನು ಮೀರಿ ಬದುಕಿನ ನಾನಾ ಬವಣೆಗಳನ್ನು, ಖುಷಿಯನ್ನು ಸಹ ಹೇಳಲು ಬಳಕೆಯಾಗುತ್ತಿದೆ. ರೇಖಾ ಅವರ ಮಡಿಲ ನಕ್ಷತ್ರದಲ್ಲಿ ಗಜಲ್ ಪ್ರಕಾರ ಹಳೆಯ ನೆನಪುಗಳ ಜೊತೆಗೆ ಸಮಾಜದ ಅನೇಕ ಸಂಗತಿಗಳ ವಿಮರ್ಶೆಯ ಒಳನೋಟವೂ ಇದೆ. ನನ್ನ ಗೆಳೆಯರಾದ ಕೋಲಾರದ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ , ಶಿರಸಿ ತಾಲೂಕು ಹೊಸ್ಮನೆ ಗ್ರಾಮದ ಗಣೇಶ್ ಹೆಗಡೆ ಹೊಸ್ಮನೆ ಸಹ ಗಜಲ್ ಗಳನ್ನು ಬರೆಯುವಾಗ ಭಿನ್ನ ಧೋರಣೆ ತಾಳಿ ಅದ್ಭುತ ಪ್ರತಿಮೆಗಳನ್ನು ಗಜಲ್ ಪ್ರಕಾರದಲ್ಲಿ ತಂದರು ಎಂಬುದು ಇಲ್ಲಿ ಸ್ಮರಣೀಯ. ಚೊಚ್ಚಲ ಕೃತಿಯಲ್ಲಿ ರೇಖಾ ಅವರು ಒಂದು ಸರಳ ರೇಖೆ ಎಳೆದಿದ್ದಾರೆ. ಅವರ ಬರಹ ಚೆಂದದ ರಂಗೋಲಿಯಾಗಲಿ ಎಂದು ಹಾರೈಸೋಣ. ನ.೧೪ ರಂದು ಅವರ ಮಡಿಲ ನಕ್ಷತ್ರ ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆ ಸಹ ಆಗಿದೆ. ಕನ್ನಡದ ೨೩ ಜನ ಯುವ ಬರಹಗಾರರ ಸಾಲಿನಲ್ಲಿ ನಮ್ಮ ಜಿಲ್ಲೆಯ ರೇಖಾ ಭಟ್ ಸಹ ಸೇರಿರುವುದು ನಮಗೆ ಸಂತೋಷ ತಂದಿದೆ. ………………………………………………………………………………………………………………………….. ಪ್ರಶ್ನೆ : ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ನನ್ನೊಳಗಿನ ನನ್ನ ಹಗುರಾಗಿಸಿಕೊಳ್ಳಲು ನಾ ಕವಿತೆ ಬರೆಯುತ್ತೇನೆ ಪ್ರಶ್ನೆ : ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಆ ಕ್ಷಣವನ್ನು ಕವಿಸಮಯ ಎಂದಿದ್ದಾರೆ ಹಿರಿಯರು ಪ್ರಶ್ನೆ : ನಿಮ್ಮ ಕವಿತೆಗಳ ವಸ್ತು ಯಾವುದು ,ಈ ವರೆಗೆ  ಬರೆದ ಕವಿತೆಗಳ ದೃಷ್ಟಿಯಿಂದ ?  ಉತ್ತರ : ಅದಮ್ಯ ಸ್ಪೂರ್ತಿ, ನವಿರಾದ  ಪ್ರೀತಿ,  ಹೊರ ಭರವಸೆಗಳಿಂದ, ನೋವುಗಳ ಸರಿಸಿ , ನೆಮ್ಮದಿಯ ಅರಸಿ, ಹೊಸ ಆಶಯಗಳನ್ನು ಹೊತ್ತು, ಹೊಸಬೆಳಕಿನತ್ತ ಪಯಣ, ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ಉತ್ತರ : ನಾನು ಬರೆದ ಗಜಲ್ ಗಳಲ್ಲಿ ಬಾಲ್ಯದ ಛಾಯೆ ಅಷ್ಟಾಗಿ ಇಣುಕಿಲ್ಲ. ಮಕ್ಕಳಿಗೆಂದೇ ಬರೆದ ಪದ್ಯಗಳಲ್ಲಿ ನನ್ನ ಬಾಲ್ಯದ ಅನುಭವಗಳನ್ನು ಬಿಂಬಿಸುವ ಯತ್ನ ಮಾಡಿದ್ದೇನೆ ಪ್ರಶ್ನೆ : ಕಾವ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಕಾವ್ಯ ವ್ಯೆಯಕ್ತಿಕವಾಗಿ ಬಿಂಬಿಸಲ್ಪಟ್ಟು ಓದುಗನ ಮನಸ್ಸಿನಲ್ಲಿ ಬೇರೂರಿದರೂ , ಅದು ಸಮಾಜಮುಖಿಯಾಗಬೇಕು. ಕಾವ್ಯ  ಓದುಗನಲ್ಲಿ  ಹೊಸ ಚಿಂತನೆಯ ಬೀಜವನ್ನು ಬಿತ್ತಬೇಕು ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯದಲ್ಲಿ ದಕ್ಷ ನಾಯಕರು ಇರುತ್ತಾರೆ. ಅಸಮರ್ಥ ನಾಯಕರು ಇರುತ್ತಾರೆ .. ಜನನಾಯಕರು ಜನರಿಗಾಗಿ, ರಾಜ್ಯಕ್ಕಾಗಿ,ದೇಶಕ್ಕಾಗಿ ಶ್ರಮಿಸಬೇಕೆ ವಿನಹ ಸ್ವಲಾಭಕ್ಕಾಗಿ ರಾಜಕಾರಣ ಮಾಡಬಾರದು. ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಮಾನವೀಯತೆಯೇ ಧರ್ಮ.. ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು.. ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕವಾಗಿ ಬೆಳೆಯಲು ಬೆರೆಯಲು ಈಗ ಸಾಕಷ್ಟು ವಿಪುಲ ಅವಕಾಶಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಎತ್ತಿ ಹಿಡಿದು ನಮ್ಮ ಮೂಲ ಪರಂಪರೆಗಳನ್ನು ಮುನ್ನೆಡಸಬೇಕು… ಪ್ರಶ್ನೆ :  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? . ಉತ್ತರ : ನಾನಿನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಳಸು ಎಂಬ ಭಾವ ನನ್ನದು. ಬರೆಹ ನನಗೆ ಮತ್ತು ಓದುಗರಿಗೆ ಸಮಾಧಾನ ನೀಡಿದರೆ ಸಾಕಲ್ಲವೇ…  ಹಿರಿಯರ ಬರೆಹಗಳನ್ನು ಆಸಕ್ತಿಯಿಂದ ಓದುತ್ತೇನೆ. ಗೌರವಿಸುತ್ತೇನೆ.  ಇಲ್ಲಿನ ರಾಜಕೀಯದಿಂದ ದೂರವೇ ಉಳಿದಿದ್ದೇನೆ..ಈಗ ತ.ರಾ.ಸು. ಅವರ ದುರ್ಗಾಸ್ತಮಾನ ಓದುತ್ತಿದ್ದೆನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ನನ್ನ ಮುಂದಿನ ಓದು. ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಅಂತೆಯೇ ನಮ್ಮ ದೇಶವು ಪ್ರಗತಿಯತ್ತ ಮುನ್ನೆಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿಗಳಾಗುತ್ತಿವೆ. ಈ ಜಾತ್ಯಾತೀತ ರಾಷ್ಟ್ರದ ಒಳಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುವ ಕೆಲಸಗಳು ಈಗಿನ ಬರೆಹಗಾರದಿಂದಲೂ ಆಗುತ್ತಿದೆ ಹಾಗೂ ಆಗಬೇಕಾಗಿದೆ.  ಪ್ರಶ್ನೆ :  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನಾನೂ ಮೊದಲು ಸಾಕಷ್ಟು ಓದಬೇಕಿದೆ .. ಸಾಹಿತ್ಯವೆಂಬ ಸಾಗರದ ಗುಟುಕು ಕುಡಿದು, ನಂತರ ಹೊಸಹೊಸ ಬೀಜಗಳನ್ನು ಬಿತ್ತನೆ ಮಾಡಿ, ಸಾಹಿತ್ಯ ಕೃಷಿಯನ್ನು ಶ್ರೀಮಂತಗೊಳಿಸುವ ಕನಸು ನನ್ನದು.. ನನ್ನ ಶಾಲೆಯ ಮಕ್ಕಳಲ್ಲೂ ಸಾಹಿತ್ಯ ಪ್ರೀತಿ ಹೆಚ್ಚಿಸಿ, ಕನ್ನಡ ಸಾಹಿತ್ಯದೆಡೆಗೆ ಅವರಲ್ಲಿ ಒಲವು ಮೂಡಿಸುವ ಹಂಬಲವಿದೆ. ಪ್ರಶ್ನೆ : ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು ? ಉತ್ತರ : ದ.ರಾ. ಬೇಂದ್ರೆ. ಹಾಗೂ ಎಚ್ ಎಸ್,ವೆಂಕಟೇಶ ಮೂರ್ತಿಯವರ ಭಾವಗೀತೆಗಳು. ………

ಮುಖಾಮುಖಿ Read Post »

ಕಾವ್ಯಯಾನ

ರಾಧಾ ಕೃಷ್ಣ

ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ ನೋಟಕ್ಕೆ ನೂರು ರಂಗಾಗಿಕೈಗೆ ಸಿಗಲಾರದ ಕನಸುಗಳಿಗೆಲ್ಲ ರೆಕ್ಕೆ ಬರಿಸಿಮುಟ್ಟಾಗದೆ ಉಳಿವ ರಾಧೆಗೆ ಜೀವ ಕಾವ್ಯದ ವೇಷ ತೊಟ್ಟ ರಾಧೆಗೊಂದು ದ್ವಾರಕೆ ಕಟ್ಟಿಪ್ರೀತಿಸುವ ಜೀವಕ್ಕೆ ಅರ್ಪಿತಗೊಂಡರಾಧಾ ಕೃಷ್ಣನಾಗಿ ಲೋಕಾರ್ಪಣಗೊಂಡ ಪ್ರೀತಿ ರೂಪದ ಮಾದರಿ ನೀ ಮುಕುಂದಯುಗಾಂತರಿಸು ಸುರಿಸು ಪ್ರೀತಿ ಸಿಂಚನಯುಗ ಭಾರವನಿಳಿಸಿ ತಣಿಸು ಉದ್ಧರಿಸುಹಂಚು ವಿಶ್ವರೂಪ ಜೀವಕುಲಕೆಲ್ಲ ಸ್ನೇಹಸಿಂಚನಗೋಪಿ ರಾಧೆಯರಿಗೊಂದಿಷ್ಟು ಪ್ರೇಮ ಕಂಪಣ *********************

ರಾಧಾ ಕೃಷ್ಣ Read Post »

ಕಾವ್ಯಯಾನ

ದೇವರು

ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************

ದೇವರು Read Post »

You cannot copy content of this page

Scroll to Top