ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಿರುಗಾಟ

ಭಾಗ್ಯ ಸಿ

ಏಕೆ ತಿರುಗುವೆ ಅತ್ತಿಂದಿತ್ತ
ಅತ್ತ ಪ್ರಳಯ ಇತ್ತ ಕೋಲಾಹಲ
ತಿನ್ನುವ ಕೂಳಿಗೂ ಪರದಾಟ ಅಲ್ಲಿ
ತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ

ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆ
ಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆ
ಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆ
ಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ

ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣ
ಹೋದರೆ ಹೋಯಿತು ಬೆಲೆ ಇಲ್ಲ
ಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿ
ಲೆಕ್ಕ ತೀರಿಸಲೇ ಬೇಕು ಮರೆಯಬೇಡಿ

ಏಕೆ ತಿರುಗುವೆ ಅತ್ತಿಂದಿತ್ತ
ತಿರುಗಾಟ ಪರಿಹಾರವಲ್ಲ
ಎಣೆ ಬಲೆಯನು ಬಿಗಿಯಾಗಿ
ಬೀಳಲಿ ಮಿಕ ತಲೆಕೆಳಗಾಗಿ

*****************************************

About The Author

4 thoughts on “ಕಾವ್ಯಯಾನ”

  1. ನಾವು lekka chuktha ಮಾಡುವ ಕಾಲ ಬಂದಿದೆ. ನಾವು ಇನ್ನೂ jagrutharagilladiruvudarinda ಪ್ರಕೃತಿ ತನಗೆ ತಾನೇ ಜಾಗೃತಿ ಮೂಡಿಸುತ್ತಿದೆ. Nice poem for present situation.

Leave a Reply

You cannot copy content of this page

Scroll to Top