ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಲವಿನ ಪಹರೆ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಅರಳುತ್ತಿದೆ ಹೃದಯದಹೂ ಬನ ನಿನ್ನನೆನೆನಾದಕ್ಷಣ ….. ಎಣಿಸಲಾಗದ ಕನಸುಗಳದಿಬ್ಬಣ ಹೊರಟಿದೆಮನದೂರಿನ ಹೆದ್ದಾರಿಯಲಿನೆನಪಿನ ಬಿಡಿ ಹೂಗಳಸ್ವಾಗತದೊಂದಿಗೆ …. ನಿನ್ನ ಎದೆಯ ಗೂಡಿನಲ್ಲಿಬಚ್ಚಿಟ್ಟ ನನ್ನ ಚಹರೆಯಪಟವ ಮತ್ತೆ ನೋಡುವಾಸೆಈ ಸಂಜೆಯ ತಂಪು ಕಂಪಿನಸುಸಮಯದಲ್ಲಿ ….. ಬಯಕೆಯ ಕುಡಿನೋಟವೊಂದುಸದ್ದಿಲ್ಲದೆ ನಿನ್ನ ಬಳಿಸಾರಿದೆಸ್ವೀಕರಿಸಿ ಒಪ್ಪಿಗೆಯ ಮುದ್ರೆಯಾರವಾನಿಸುವೆಯಾ ನಿನ್ನ ಬೊಗಸೆಕಂಗಳ ಬೆಳಕಿನಲ್ಲಿ…‌‌‌‌.. ***********

ಒಲವಿನ ಪಹರೆ Read Post »

ಇತರೆ, ಜೀವನ

ಆಚರಣೆಗಳಲ್ಲಿನ ತಾರತಮ್ಯ

ವಿಚಾರ ಜ್ಯೋತಿ ಡಿ.ಬೊಮ್ಮಾ ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬ ವಾದವನ್ನು ಒಪ್ಪಬಹುದು.ಆದರೆ ದೈವದ ಹೆಸರಲ್ಲಿ ಆಚರಿಸುವ ಆಚರಣೆಗಳಲ್ಲಿನ ತಾರತಮ್ಯ ಒಪ್ಪಲಾಗದು. ಪೂಜೆಯ ಆಚರಣೆಗಳು ನಮ್ಮ ಮನಸ್ಸಿಗೆ ಸಮಾಧಾನವಾಗಿದ್ದರಷ್ಷೆ ಸಾಲದು ,ಆ ಆಚರಣೆಗಳು ಮತ್ತೊಬ್ಬರ ಮನಸ್ಸಿಗೆ ನೊವನ್ನುಂಟು ಮಾಡಬಾರದು. ನಿರಾಕಾರನನ್ನು ಒಂದೊಂದು ರೂಪ ಕೊಟ್ಟು ಬಟ್ಟೆ ತೊಡಿಸಿ ಅಲಂಕರಿಸಿ ಒಂದೊಂದು ಹೆಸರು ಕೊಟ್ಟು ಪೂಜಿಸುವರಿಗೆ , ದೇವರನ್ನು ತಾವೆ ಸೃಷ್ಟಿಸುತ್ತಿದ್ದೆವೆ ಎಂಬ ಅರಿವಾಗದೆ..! ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕ  ,ಈಗ ಬರುತ್ತಿರುವ ವರಮಹಾಲಕ್ಷಿ ಹಬ್ಬವೂ ಅದಕ್ಕೊಂದು ಉದಾಹರಣೆ.ಲಕ್ಷ್ಮಿ ಎಂದರೆ ಅಡಂಬರದ ಪ್ರತಿಕ , ಭಾರಿ ಸೀರೆ ಉಡಿಸಿ ಒಡವೆ ವಸ್ತ್ರ ಗಳ ಧಾರಣೆ ಮಾಡಿ , ಹೂವಿನ ಮಂಟಪದಲ್ಲಿವಿರಾಜಮಾನಳಾಗಿಸಿ ,ಸುತ್ತಲೂ ದೀಪಗಳ ಅಲಂಕಾರ  ,ತಹರೆವಾರಿ ಅಡುಗೆಗಳ ನೈವೇದ್ಯ ,ವೆರೈಟಿ ತಿಂಡಿಗಳನ್ನು ಮೂರ್ತಿಯ ಮುಂದಿಟ್ಟು ತೃಪ್ತಿ ಪಡಿಸಿ (ಬೇರೆಯವರಿಗೂ ಕರೆದು ತೋರಿಸಿ ) ಅಥವಾ ಪಟ್ಟುಕೊಂಡು ಪೂಜೆಯ ಕಾರ್ಯ ಕೈಗೊಳ್ಳುತ್ತಾರೆ. ಆದರೆ ಅರಸಿನ ಕುಂಕುಮಕ್ಕೆ ಕೇವಲ ಮುತೈದೆಯರನ್ನೂ ಮಾತ್ರ ಕರೆಯಬೇಕು ಎನ್ನುವ ನಿಯಮ ಎಷ್ಟು ಸಮಂಜಸ..,! ಕೇವಲ ಗಂಡನ ಇರುವಿಕೆಯಿಂದಲೆ ಅವಳ ಮೌಲ್ಯ ಅರಿಯುವ ಈ ಸಮಾಜದಲ್ಲಿ  ಹೆಣ್ಣಿಗೆ ತನ್ನದೆಯಾದ ಸ್ವಂತ ಅಸ್ತಿತ್ವ ವೆ ಇಲ್ಲವೆ. ಮದುವೆಯಾದ ಮೇಲೆ ಅವಳು ಗಂಡನಿಂದ ಮುತೈದೆ ಪಟ್ಟ ಪಡೆದುಕೊಳ್ಳುತ್ತಾಳೆ .ಅವನು ಅಳಿದ ಮೇಲೆ ಆ ಪಟ್ಟ ಅವಳಿಂದ ಕಿತ್ತುಕೊಳ್ಳಲ್ಪಡುತ್ತದೆ.ಸಮಾಜವು ಕೂಡ ಅವಳು ಮುತೈದೆಯಾಗಿದ್ದರೆ ಮಾತ್ರ ಅವಳಿಗೆ ಶುಭ ಕಾರ್ಯ ಗಳಲ್ಲಿ ಪ್ರಾಮುಖ್ಯತೆ. ಎಷ್ಟೋ ಮಠಗಳಲ್ಲಿ ಮುತೈದೆಯರ ಕುಂಭಮೇಳ ಮತ್ತು ಮುತೈದೆಯರ ಉಡಿತುಂಬುವ ಕಾರ್ಯ ಕ್ರಮ ಆಯೋಜಿಸುತ್ತವೆ ,ಇಂತಹ ಆಚರಣೆಗಳ ಉದ್ದೇಶ ವೇನು..? ಸಮಾಜದಲ್ಲಿನ ಮೌಡ್ಯಗಳನ್ನು ತೊಲಗಿಸುವ ಪ್ರಯತ್ನ ಮಾಡಬೇಕಾದ ಮಠಗಳೆ ಇಂತಹ ಮೌಡ್ಯಕ್ಕೆ ಒತ್ತು ಕೊಟ್ಟರೆ ,ಬೇಲಿಯೆ ಎದ್ದು ಹೋಲ ಮೈದಂತೆ ಅಲ್ಲವೆ..! ಪೂಜೆಯ ಹೆಸರಿನಲ್ಲಿ ಮುತೈದೆಯರನ್ನು ಮಾತ್ರ ಕರೆದು ಅವರಿಗೆ ಉಡಿ ತುಂಬಿ ಭಾರಿ ಭೋಜನ ಉಣಬಡಿಸಿ (ಮುತೈದೆಯರ ಉಟದ ತಯ್ಯಾರಿ ವಿಧವೆಯರು ಮಾಡಬಹುದು ಆದರೆ  ಅವರು ಬಡಿಸುವದು ಮಾತ್ರ ನಿಷಿದ್ದ ) ತಮ್ಮ ಮುತೈದೆತನ ಧೀರ್ಘ ವಾಗಲೆಂದು ಬೇಡಿಕೊಳ್ಳುತ್ತಾರೆ ,ಇದೊಂದು ಆಶಾದಾಯಕ ಆಚರಣೆ ಆಗಿರಬಹುದು ಅವರವರ ಭಾವದಲ್ಲಿ.ಆದರೆ ಗಂಡನನ್ನು ಕಳೆದುಕೊಂಡ ಸ್ತ್ರೀಯು ತನ್ನನ್ನು ಇಂತಹ ಆಚರಣೆಗಳಿಂದ ದೂರವಿಟ್ಟಿರುವದನ್ನು ಹೇಗೆ ಸಹಿಸಿಯಾಳು. ಒಂದು ಮೂರ್ತಿಗೆ ಅಲಂಕಾರಮಾಡಿ ನೋಡಿ ಸಂತೋಷ ಪಡುವ ನಾವು , ಜೀವಂತವಾಗಿರುವ ಒಂದು ಜೀವ ಈ ಪೂಜೆಯ ಒಂದು ಭಾಗವಾಗಲಾರದೆ ದೂರದಲ್ಲಿ ನಿಂತು ಮೂಕವಾಗಿ ರೋಧಿಸುವ ತಲ್ಲಣದ ಅರಿವು ನಮಗಾಗದೆ..! ಮುತೈದೆಯರಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟು ತನ್ನನ್ನು ಕಡೆಗಾಣಿಸುವದರಿಂದ ಅವಳು ಮಾನಸಿಕವಾಗಿ ಕುಗ್ಗತ್ತಾಳೆ ,ಖಿನ್ನಳಾಗುತ್ತಾಳೆ ,ಅವಳ ಇಂತಹ ಸ್ಥಿತಿಗೆ ಈ ರೀತಿಯ ತಾರತಮ್ಯ ದ ಆಚರಣೆಗಳು ಪರೋಕ್ಷವಾಗಿ ಕಾರಣವಾಗುತ್ತವೆ. ಗಂಡನನ್ನು ಕಳೆದುಕೊಂಡ ಹೆಣ್ಣಿಗೆ ಸ್ಥೈರ್ಯ ತುಂಬಿ ಅವಳಲ್ಲಿ ಜೀವನ್ಮುಖಿ ಹುಮ್ಮಸ್ಸು ತುಂಬುವತ್ತ ನಮ್ಮ ಪ್ರಯತ್ನ ವಾಗಬೇಕು.ಅದು ಬಿಟ್ಟು ವಿಧವೆಯರನ್ನೂ ಕಡೆಗಾಣಿಸಿ ಮುತೈದೆಯರನ್ನೂ ವೈಭವಿಕರಿಸುವದು ಯಾವ ನ್ಯಾಯ..! ಯಾವ ದೇವರು ಈ ತಾರತಮ್ಯ ಸೃಷ್ಟಿಸಿದ್ದು..! ದೇವರೆನಾದರೂ ಮಾತಾಡುವಂತಿದ್ದರೆ ಇಂತಹ ಆಚರಣೆಗಳನ್ನು ಅವನು ಖಂಡಿತ ಖಂಡಿಸುತಿದ್ದನೆನೋ.. ನಡೆಸಿಕೊಂಡು ಬಂದ ಪೂಜೆ ಆಚರಣೆಗಳು ಕೆಲವರ ಬದುಕಿನ ಭಾಗವೆ ಆಗಿರುತ್ತವೆ. ಅವನ್ನು ಅಲ್ಲಗಳೆಯಲು ಅವರ ಮನಸ್ಥಿತಿ ಒಪ್ಪದು.ಆದರೆ ಈಗ ಎಲ್ಲರೂ ವಿದ್ಯಾವಂತರು ,ಹಿಂದಿನಿಂದ ಆಚರಿಸಿಕೊಂಡು ಬಂದ ಸ್ಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕು ಎಂಬ ನಿಯಮವೇನಾದರು ಇದೆಯೆ…! ಆಚರಣೆಗಳಲ್ಲಿನ ಒಳಿತು ಕೆಡಕುಗಳನ್ನರಿತು ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ,ಅಡಂಬರವಿಲ್ಲದೆ ತೋರಿಕೆಯಿಲ್ಲದೆ ,ಪೂಜೆಮಾಡಬಹುದಲ್ಲವೆ. ನಮ್ಮೊಳಗಿನ ನಿರಾಕಾರನು ಅದೆ ಬಯಸುವನು. ***********************************   .

ಆಚರಣೆಗಳಲ್ಲಿನ ತಾರತಮ್ಯ Read Post »

ಕಾವ್ಯಯಾನ

ಮಾನವೀಯತೆ ಮಾತನಾಡಲಿ

ಕವಿತೆ ಪ್ಯಾರಿ ಸುತ ಮುಂದೊಂದು ದಿನ ನಾವಿಬ್ಬರು ಹೀಗೆ ಸತ್ತುಬಿಡೋಣಅಲ್ಲಿಗೆ ಬರುವವರು ಹೂವಿನ ಹಾರ,ಕನಿಕರದ ಮಾತುಗಳು,ಕೆಲವಂದಿಷ್ಟು ಬಿಡಿಬಿಡಿ ಹೊಗಳಿಕೆಗಳು,ಅಲ್ಲೊಂದಿಲ್ಲೊಂದು ತೆಗಳಿಕೆಗಳು,ತಂದು ಅಳುವ ಮುನ್ನಇಲ್ಲವೇ ;ಸಪ್ಪಳ ಮಾಡುವ ಕಣ್ಣೀರು ಅಳುವೆಂಬಪದವಾಗಿ ಸತ್ತ ಕಿವಿಯನ್ನುಸೇರೋ ಮುನ್ನಹಾಗೆ ಮಣ್ಣು ಸೇರಿಬಿಡೋಣಅಲ್ಲಿ ನಾವಿಬ್ಬರು ತಬ್ಬಿಕೊಂಡು ಒಬ್ಬರ ಮುಖವಇನ್ನೊಬ್ಬರುಹೊಂದಿಸಿಕೊಂಡು ಬೆತ್ತಲಾಗಿ ಮಲಗೋಣ ಅಲ್ಲಿ ಉಸಿರಾಡುವ,ಹೆಸರು ಮಾಡುವ ,ಸಮಸ್ಯೆಗಳೇ ಸವಾಲಾಗುವ ಯಾವ ಪ್ರಮೇಯವೇ ಇಲ್ಲವಂತೆಹೆಚ್ಚುಕಡಿಮೆ,ಬಡವ ಧನಿಕ,ಮುಟ್ಟಿಸಿಕೊಳ್ಳದವಎಲ್ಲರೂ ಹೀಗೆ ಸಮಾನವಾಗಿ ಮಲಗಿ ಸುಖಿಸುತ್ತಿದ್ದಾರೆ.ಲಾಭ-ನಷ್ಟ ,ದುಃಖ-ದುಮ್ಮಾನ ಎಲ್ಲವೂ ಕೆಲಸಕ್ಕೆ ಬಾರದವುಗಳಲ್ಲಿತೇವಳುವ,ತೇಲುವ ದುಡಿಯುವ,ಹೊಡೆಯುವಅದೆಷ್ಟು ಜೀವಗಳು ಸುಮ್ಮನೆ ಮಲಗಿಕೊಂಡಿವೆ ಅಂತರ, ಜನ್ಮಾಂತರ ಎಲ್ಲವೂ ಇಲ್ಲಿಗೆ ಸಾಕು ಮಾಡಿಬಿಡೋಣಮಾತುಗಳಿಗೆ ಬಿಗಿಯಾದ ಕೊಂಡೆಯೊಂದನ್ನು ಬಿಗಿದುಅಲ್ಲಿಯೇ ನಿಲ್ಲಿಸಿಬಿಡೋಣಪ್ರೀತಿಯು ಮಾತನಾಡಲಿ,ಅದಕ್ಕೆ ಯಾವ ಸಣ್ಣ ಬಿಂದುಗಳನ್ನು ಕೊಟ್ಟು ನಿಲ್ಲಸದಿರೋಣಬೆನ್ನು ಹಿಂದೆ ಅವಿತು ಕುಳಿತ, ತನ್ನತಾನು ಮರೆತಮಾನವೀಯತೆಯೂ ಮೊದಲು ಬಂದು ನಿಲ್ಲಲಿಅದಕ್ಕೊಂದಿಷ್ಟು ಪದಗಳಾದರೂ ದಕ್ಕಲಿ ಮುಂದೊಂದು ದಿನ ನಾವಿಬ್ಬರು ಹೀಗೆ ಸಾಯುವ ಕಲ್ಪನೆತಟ್ಟನೆ ಕಣ್ಣುಮುಂದೆ ತಂದು ನಿಲ್ಲಿಸಿದೊಡನೆಮತ್ತಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಗಟ್ಟಿಗೊಳ್ಳಬಹುದು ***************

ಮಾನವೀಯತೆ ಮಾತನಾಡಲಿ Read Post »

ಕಾವ್ಯಯಾನ

ಕುರ್ಚಿಗಳು ಅಂಗಿ ತೊಟ್ಟು..

ಕವಿತೆ ನೂತನ ದೋಶೆಟ್ಟಿ ಈ ಅಂಗಿಯ ದರ ಸಾವಿರದ ಐದು ನೂರುಕೇಳಿ ನೀನು ಕಣ್ಣರಳಿಸುತ್ತಿಬೆಲೆಯಿಂದೇನಾಗಬೇಕುತೊಟ್ಟವನು ನೀನಲ್ಲವೇ?ಕುರ್ಚಿಯ ಲೆಕ್ಕಾಚಾರ ಅದಲ್ಲ.ನಿನ್ನ ಓಡಾಟದ ಚುರುಕುಮುಟ್ಟಿರುತ್ತದೆ ಆ ಅಂಗಿಗೆಹಕ್ಕನ್ನು ಕೊಡಲಾರೆನಡೆ ನಿಧಾನವಿರಲಿಕುರ್ಚಿಯ ಡೊಳ್ಳು ಹೊಟ್ಟೆ ಕನಲುತ್ತದೆ.ನಿನ್ನದೋ ಯೋಗನಡೆದೀರ್ಘ ಉಸಿರೆಳೆದುತುಂಬಿಕೊಂಡ ಕಸರನ್ನುಹೊರಹಾಕುತ್ತ ನಿಶ್ವಾಸದಲಿಹಗುರವಾಗುವುದ ಕಲಿತಿದ್ದಿ.ಕುರ್ಚಿಗೆ ಧಗೆ ಹತ್ತಿದೆ.ಕುಂತಲ್ಲಿ ಇರುವ ಕುರ್ಚಿಯಬತ್ತಳಿಕೆಯ ತುಂಬಹಸಿರು ಶರಾದ ಬಾಣಗಳುನಿನ್ನೆಡೆಗೆ ತೂರಿ ಬಿಡಲುಕುರ್ಚಿಯೀಗ ಪಣ ತೊಟ್ಟಿದೆ.ಮತ್ತೀಗ ಉಚ್ಛ್ವಾಸದಲಿಎದೆಯ ಹುರಿ ಮಾಡುತ್ತಿನಾಟುವುದು ಅಲ್ಲಿಗೇ ತಾನೇ?ಜಯದ ಬೆನ್ನು ಹತ್ತಿದರೆಅಪಜಯದ ಭಯಕುರ್ಚಿಗೇನು ಗೊತ್ತು ನಿನಗೆ ಸೋಲಿಲ್ಲ.ತಳವೂರಿ ನಿಂತು ಜಯದ ಅಹಂಕಾರತನ್ನ ಸೋಲಿನ ಭಯಕುರ್ಚಿಯ ಉರುಟು ಮೈ ತುಂಬಹೊಳಪ ಲೇಪನಬಿಂಬ ಕಾಣಿಸುವಷ್ಟು ನೀನು ದೂರವಾಗುತ್ತಿನಿನಗೆ ಹತ್ತಿರವಾಗುತ್ತಿನಿನ್ನ ಸಾಂತ್ವನಕ್ಕೆಕುರ್ಚಿ ಗುಡುಗುತ್ತದೆ. ನೀನು ಬಾಗಬೇಕು, ಬೀಗುವುದಲ್ಲನಿನ್ನ ಜಾಗ ಅಲ್ಲಿನೆಲದ ಹಾಸಿರುವಲ್ಲಿ ನಿನಗೋ ಜಾಗದ ಗರಜಿಲ್ಲನಿನ್ನದು ಬಾನವಿಸ್ತಾರದ ಹಾದಿಪಚ್ಚೆ, ಪೈರುಗಳ ದಾರಿಜಲಪಾತದ ನಡೆಕಾಡತೊರೆಯ ನಿರುಮ್ಮಳತೆ ಕುರ್ಚಿಗಳೇ ಅಂಗಿ ತೊಟ್ಟುಎತ್ತರದ ಪೀಠದಲ್ಲಿರಿನಡೆದಷ್ಟೂ ಇರುವ ದಾರಿ ನನಗಿರಲಿಹಸಿರ ಕೈಯಾಡಿಸುತ್ತಹೂವ ಆಘ್ರಾಣಿಸುತ್ತಬದುಕ ಆಸ್ವಾದಿಸುತ್ತೇನೆನಿಮ್ಮ ಚೌಕಾಸಿನನಗೆ ಒಗ್ಗುವುದಿಲ್ಲ. **********

ಕುರ್ಚಿಗಳು ಅಂಗಿ ತೊಟ್ಟು.. Read Post »

ಕಾವ್ಯಯಾನ

ಆಹ್ಲಾದಕರ ಭಾವನೆಯಲಿ ನಾವು

ಕವಿತೆ ರಾಘವೇಂದ್ರ ದೇಶಪಾಂಡೆ ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರುರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನುಒಳಗೊಂಡಿದೆ ನಮ್ಮೀ ಸಂಬಂಧವುಸೃಷ್ಟಿಕರ್ತನ ಫಲದೊಳಗೆ… ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದುಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕಆಳವಾದ ಪ್ರೀತಿ ಇದೆಯೆನೋ… ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿದಾಂಪತ್ಯ ದೀವಿಗೆಯ ಬೆಳಕಿನಲಿ… ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳುಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿವಿರಹಿಸೋಣ ಭರವಸೆಯ ಭಾವಲೋಕದಲಿಸಾಗೋಣ ಒಲವಿನ ಅಲೆಯಲಿ ನಾಳೆಂಬ ನಿರೀಕ್ಷೆಯಲಿಚುಂಬಿಸೋಣ ಆಗಸವ ಸ್ವಚ್ಛಂದದಿ ಹಾರಾಡುವ ಹಕ್ಕಿಗಳಾಗಿ ಹೆಸರೊಂದು ಕೊರೆದಾಗಿದೆ ಹೃದಯಾಂತರಾಳದಲಿತಳುಕುಹಾಕಿಕೊಂಡಿದೆ ಮೈ ಮನಸುಗಳಲಿ ನನ್ನ ಹೆಸರುಸೃಷ್ಟಿಯಾಗಿದೆ ಸಂಬಂಧವೊಂದು ಅದ್ಭುತ ಪರಿಕಲ್ಪನೆಯಲಿಜೊತೆಯಾಗಿರೋಣ ಜೀವಂತಿಕೆಯ ಕಾಲಚಕ್ರದೊಳಗೆಸಾಧಿಸಿ ತೋರಿಸೋಣ ಹೌದೆನ್ನುವ ಹಾಗೆ… **************

ಆಹ್ಲಾದಕರ ಭಾವನೆಯಲಿ ನಾವು Read Post »

ಕಾವ್ಯಯಾನ

ಕರುಣಾಮಯಿ

ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು ಸೀರೆಯ ಲೆಕ್ಕಿಸದೆನನಗೊಂದು ಹೊಸ ಅಂಗಿಯ ಕೊಡಿಸಿದೊಡ್ಡ ಅಧಿಕಾರಿಯ ಸ್ಥಾನದಲಿತಾ ಕೂಸ ನೋಡಬೇಕೆಂದುಆಸೆಯಿಂದ ಕಾಯುತ್ತ ಕುಳಿತವಳುಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….ಅವಳ ಋಣ ತೀರಿಸಲು ಸಾಧ್ಯವಿಹುದೇನು?…ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?…. ******

ಕರುಣಾಮಯಿ Read Post »

ಕಾವ್ಯಯಾನ

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ

ಕವಿತೆ ವಿದ್ಯಾ ಕುಂದರಗಿ ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯುದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವುಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ ‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ *******************

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ Read Post »

You cannot copy content of this page

Scroll to Top