ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನೊಳಗೂ ಮಳೆ ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆತನುಮನದ ಹೂಗಳುನನ್ನೊಳಗೂ ಮುಂಗಾರು, ಮೌನದ ಪರದೆಯೊಳಗೆಅವಿತ ಮಾತುಗಳುಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳುನನ್ನೊಳಗೂ ಮುಂಗಾರು ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸನನ್ನೊಳಗೂ ಮುಂಗಾರು ಋತುಗಳ ಕನವರಿಕೆಯಲಿಮಿಲನದ ಲವಲವಿಕೆಮತ್ತೆ ಮೌನವೇ ನಾಚಿತುಬಾಚಿ ತಬ್ಬಿತು,ವಸಂತನಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳುನನ್ನೊಳಗೂ ಮುಂಗಾರು ಕನಸುಗಳು ಗೂಡು ಕಟ್ಟಿವೆಮನದ ಕೂಜನದಲಿ ಇನಿದನಿ ಕೇಳಿಸುತಿದೆಎಳೆಬಿಸಿಲ ರಂಗು ಕಾಡಿದೆಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂಮುಂಗಾರು ಸುರಿದಿದೆ ನನ್ನೊಳಗೂ ಕವಿತೆ ಓಡಾಡಿದೆ,ಪ್ರೇಮ ಗೀತೆಗಳೆಲ್ಲ ಹರಯ ಕಂಡಿದೆನನ್ನೊಳಗೂ ಹೊರಗೂ ಮಳೆಯಾಗಿದೆ *********** ವೀಣಾ ರಮೇಶ್

Read Post »

ಕಾವ್ಯಯಾನ

ಮಳೆ ಹುಯ್ಯಲಿ ಜಾರಿದವು ಮುತ್ತಿನ ಹನಿಗಳು ಅಂಜಿಕೆಯಿಲ್ಲದೆನಭದ ಗೇರೆಗಳ ದಾಟಿ ಅನಂತದೆಡೆಗೆಅವಕೊಂದೆ ಚಿಂತೆ ಹನಿದ ಹನಿಗಳೆಲ್ಲಹಸಿರಾಗಲು ಕಾತರಿಸಿದ ಭವದ ಒಡಲ ಸೇರಿಹಿಗ್ಗಿ ನುಲಿಯಲು,ಬೆಸೆಯಲು ಆತುರಯಾವ ಹನಿ ಮುತ್ತಾಗುವುದೋಯಾವ ಹನಿ ನತ್ತಾಗುವುದೋಇಳೆಯ ಮೈಸಿರಿಗೆ ಒನಪಾಗುವುದೋಸಿಡಿಲು ಗುಡುಗಿನ ಆರ್ಭಟಕೆಬೆಚ್ಚಿ ಬಿದ್ದು ಸದ್ದಿಲ್ಲದೆ ಸರಿದೂಗಿಸಲುಉಬ್ಬು ತಗ್ಗುಗಳೆಲ್ಲ ಕೊಂಚ ಸಾವರಿಸಿದಂತೆಮಳೆಯ ತುಂತುರು ಹನಿಗಳಿಗಾಗಿಮೆಲ್ಲುಸಿರಿನ ಪ್ರೇಮಕ್ಕೆ ಹಂಬಲಿಸಿದಂತೆಬೆಂದು ಬಸವಳಿದ ಮನಕಿಂದು ಆನಂದಮೈಮನಕೆಲ್ಲ ಸುಗ್ಗಿಯ ಹಬ್ಬದೂಟದಂತೆಕಾರ್ ಮೋಡಗಳು ಬಿಗಿದಪ್ಪಿ ಬೆವರ ಹರಿಸಿಉನ್ಮದಾದ ಬಿಸಿಗಾಳಿ ಧರೆಯ ನಡುಗಿಸಿದಾಗೆಲ್ಲಎಂಥ..! ಸುಮಧುರ ಮಳೆಗಾಳಿ ಹೊಳಪುಕಾಗದದ ದೋಣಿ ತೇಲಿ ಬಿಟ್ಟ ನೆನಪುಆಣಿ ಕಲ್ಲು ಗಂಟಲಲಿ ಬಿಕ್ಕಿದಂತೆ ಹನಿಗಳುಮಣ್ಣಿನೊಳು ಮೇಳೈಸಿ ಗಂಧ ಪಸರಿಸಿದಂತೆಮಣ್ಣಿನ ಮಗನ ಮೊಗದಲ್ಲಿಂದು ಹೊಂಗನಸುಉತ್ತಿದಾ ಸತ್ವ ಬೀಜಕ್ಕೊಂದು ಚಿಗುರುತುತ್ತು ಕೂಳಿಗಾಗಿ ಹೋರಾಡುವ ಬದುಕಿಗೆಮಳೆಯೊಂದು ಅಮೃತ ಸುರಿಸಿದಂತೆ…ಹೊತ್ತೊಯ್ಯುವ ಮೋಡಗಳ ಚಿತ್ತದಲಿಬಿತ್ತುವ ಮನಕಿಂದು ಅಗಣಿತ ತಾರೆಗಳುಹೊಯ್ಯೋ ಹೊಯ್ಯೋ ಮಳೆರಾಯಇಳೆಯ ತಾಪದಲಿ ಚಿಗುರಲಿ ಹೊಸ ಕಾಯ… *********** ಶಿವಲೀಲಾ ಹುಣಸಗಿ

Read Post »

ಕಾವ್ಯಯಾನ

ಆಮಂತ್ರಣ ಒಣಗಿದೆದೆಯ ಬೆಂಗಾಡಿನಲಿ,ಭ್ರಮೆಯ ದೂಳಡಗಿಸುವಂತೆ,ಬಾ ಮಳೆಯೇ, ದಣಿವಾರದ ಮೂಲೆಯಲಿ,ಜೇಡಭಾವ ಜಾಡಿಸುವಂತೆ,ಬಾ ಮಳೆಯೇ, ಮನದ ಬಯಕೆ ಕತ್ತಲಲಿ,ಕರುಡು ಕಳೆವ ಬೆಳಕಂತೆ,ಬಾ ಮಳೆಯೇ, ಗದ್ದಲಗಳ ಗದ್ದೆಯಲಿ,ಹಸಿರೂಡಲು ನೇಗಿಲಂತೆ,ಬಾ ಮಳೆಯೇ, ನನ್ನ ಮನದ ಮೌನದಲಿ,ಹನಿಯ ಶಬ್ದ ಉಳಿವಂತೆ,ಬಾ ಮಳೆಯೇ, ಬದುಕ ಬಟ್ಟಲ ಬವಣೆಗಳಲಿ,ಉಕ್ಕಿ ಹರಿವ ಕರುಣೆಯಂತೆ,ಬಾ ಮಳೆಯೇ, ಒಂಟಿಯಾದ ಮನದಲಿ,ತಂಪನೀವ ಎಲರಂತೆ,ಬಾ ಮಳೆಯೇ, ಹನಿ ಹನಿಗಳು ಕಾಡುವಂತೆ,ಬಂದಗಳಿಗೆಗಳಿಗೆಲ್ಲ ಬೇಡಿಯಂತೆ,ಬಾ ಮಳೆಯೇ, ಬಾಯಾರಿದ ಪಯಣದಲಿ,ಇನಿಯನ ಜೇನದನಿ ಹನಿಯಂತೆ,ಬಾ ಮಳೆಯೇ, ಬರಿದೆ ಬೊಗಸೆಯಲಿ,ಎದೆ ತುಂಬಿದಾ ಕನಸು ಸುರಿವಂತೆ,ಬಾ ಮಳೆಯೇ, ಸತ್ತ ಕನಸುಗಳ ಮಧ್ಯದಲಿ,ಸೂಚಿ ಮಲ್ಲೆ ಅರಳುವಂತೆ,ಬಾ ಮಳೆಯೇ, ಮನದ ಮರುಭೂಮಿಯಲಿ,ಘನಿಕರಿಸಿದೆಲ್ಲ ಭಾವ ಕರಗುವಂತೆ,ಬಾ ಮಳೆಯೇ, *********** ಶಾಲಿನಿ.ಆರ್

Read Post »

ಇತರೆ

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು ಕೈಗಿತ್ತೆ.ಕೋಮಲವಾದ ನಿನ್ನ ಬೆರಳುಗಳಿಗೆ ಬೆರಳು ಸೋಕಿ ಪುಳಕಗೊಂಡೆ. ಆ ಹೊಸ ಸ್ಪರ್ಷ ಪ್ರೇಮ ಲೋಕವೊಂದನ್ನು ತೆರೆದಂತಿತ್ತು. ಬಾನಂಗಳದಿ ನೇಸರ ಕಂಗೊಳಿಸುತ್ತ ಇಳಿಯುತ್ತಿದ್ದ. ಸದ್ದಿಲ್ಲದೇ ನೀ ನನ್ನೆದೆಗೆ ಇಳಿಯುತ್ತಿದ್ದೆ. ನೋಟದಲ್ಲಿ ನೋಟ ಬೆರೆಸಿ ಸ್ವಲ್ಪ ದೂರ ನನ್ನೊಡನೆ ನಡೆದು ಬಂದೆ ನೀನು, ನನ್ನೊಡನೆ ಒಂದಾಗಿ ಹೋದಂತೆ ಅನಿಸಿತು. ಇಬ್ಬರೂ ಜೊತೆಗೂಡಿ ರಸ್ತೆ ಬದಿಯಲಿರುವ ಜರ್ಝರಿತವಾದ ಬಂಡೆಗಲ್ಲಿನ ಮೇಲೆ ಕೂತು ಸೂರ್ಯಾಸ್ತ ಸವಿದೆವು.ಕ್ರಮೇಣ ಮಳೆ ನಿಂತಿತು. ಕತ್ತಲೆಯಾಯಿತು.ಮರದಡಿ ನಿಂತವರೆಲ್ಲ ಮನೆಗೆ ಮರಳಿದರು. ಯಾರೋ ನೀನು ಯಾರೋ ನಾನು ಆದರೂ ಕಣ್ಣಲ್ಲೇ ಮಾತನಾಡಿ ಮನದಲ್ಲೇ ಒಂದಾಗಿದ್ದೆವು. ನೋಡು ನೋಡುವಷ್ಟರಲ್ಲಿ ನನ್ನ ಹೃದಯ ಇದ್ದ ಜಾಗದಲ್ಲಿರಲಿಲ್ಲ. ಮರುದಿನ ನಿನ್ನ ವಿಳಾಸ ಹುಡುಕುತ ಗಲ್ಲಿ ಗಲ್ಲಿಗಳನು ದಾಟಿ ನೀನಿದ್ದ ಗಲ್ಲಿ ಹುಡುಕಿದ್ದಾಯಿತು. ದಿನೇ ದಿನೇ ನಿನ್ನ ಮನೆ ಹತ್ತಿರ ಬಂದು ನಿನ್ನ ಮನಸ್ಸಿಗೆ ಹತ್ತಿರವಾದದ್ದೂ ಆಯಿತು. ಪದೇ ಪದೇ ಭೇಟಿಯಾದ್ದರಿಂದ ಸ್ನೇಹ ಪ್ರೀತಿಗೆ ತಿರುಗಿದ್ದೂ ಆಯಿತು.ನಿನ್ನೆ ಮೊನ್ನೆಯವರೆಗೂ ಯಾರೂ ಹೀಗೆ ನನ್ನ ಕಾಡಿರಲಿಲ್ಲ. ಕೂತಲ್ಲೂ ನಿಂತಲ್ಲೂ ನಿನ್ನದೇ ಗುಂಗು.ಒಲವಿನ ರಂಗು ಏನೇನೋ ಆಗ್ತಿದೆ.ನನ್ನ ಸ್ಥಿತಿ ಸವಿ ಬೆಲ್ಲ ತಿಂದ ಮೂಗನ ಸ್ಥಿತಿಯಂತಾಗಿತ್ತು. ಹೇಳಲೂ ಆಗ್ತಿಲ್ಲ ಬಿಡಲೂ ಆಗ್ತಿಲ್ಲ. ಹಿಂದೆಂದೂ ಹೀಗೇನೂ ಆಗಿರಲಿಲ್ಲ. ಮನಸಾರೆ ನಿನಗೆ ಮನಸೋಲುವ ಮನಸಾಗಿತ್ತು. ಅಚ್ಚರಿಯೆನಿಸಿದರೂ ನಿಜ ಕಣೆ. ನೀ ಬರೋ ದಾರಿಯ ಕಾಯುತ ಕುಳಿತು ಕೊಳ್ಳುವುದರಲ್ಲಿಯೂ ಅದೇನೋ ಆನಂದವಿತ್ತು. ನಿನ್ನ ನನ್ನ ಹೆಸರನು ಕೂಡಿಸಿ ಕೂಡಿಸಿ ಬರೆಯುವುದರಲ್ಲಿಯೂ, ಮೆಲ್ಲಗೆ ನಿನ್ನ ಹೆಸರು ಕರೆಯುವುದರಲ್ಲಿಯೂ ಹೇಳ ತೀರದ ಸಂತಸವಿತ್ತು.ಕಣ್ಮುಚ್ಚಿದರೂ ನೀನೇ ತೆರೆದರೂ ನೀನೇ. ನೋಡುವ ಎಲ್ಲ ಹುಡುಗಿಯರಲ್ಲೂ ನಿನ್ನನ್ನೇ ಕಾಣತೊಡಗಿದೆ. ರಾತ್ರಿ ಕನಸುಗಳ ಮಳಿಗೆಯಲ್ಲಿ ಭರಾಟೆಯೂ ನಿನ್ನದೇ.ನೀ ಸನಿಹವಿದ್ದರೆ ಸಾಕು ಹಸಿವಿಲ್ಲ. ನೀರು ನಿದಿರೆ ಬೇಕಿಲ್ಲ. ಇದೆಲ್ಲವೂ ನನಗೆ ಹೊಸತು ಹೊಸತು ಅನುಭವ. ಎಂತೆಂಥ ಚೆಲುವು ಕಣ್ಮುಂದೆ ಸುಳಿದರೂ ಒಲವು ಚಿಗುರಿಕೊಂಡಿರಲಿಲ್ಲ. ನಿನ್ನ ಮೊದಲ ಸಲ ಕಂಡಾಗಲೇ ಮನಸ್ಸು,ಕಣ್ಣು ರೆಪ್ಪೆಯಲ್ಲಿ ಭದ್ರವಾಗಿ ಮುಚ್ಚಿಡಲು ತುಸು ನಾಚುತ್ತಲೇ ಹೇಳಿತ್ತು. ಅಂದಿನಿಂದ ಮನದ ಹಾಡಿಗೆಲ್ಲ ನಿನ್ನುಸಿರೇ ರಾಗವಾಗಿತ್ತು.ರಾಣಿಯಾದೆ ನೀ ನನ್ನೆದೆಗೆ. ನನ್ನೆದೆಗೆ ನಿನ್ನೆದೆ ತಾಕುವ ಸಮಯ ಅದಾವಾಗ ಕೂಡಿ ಬರುವುದೋ ಎಂದು ಮನಸ್ಸು ಲೆಕ್ಕ ಹಾಕುವಾಗ ದೇಹವೆಲ್ಲ ಸಣ್ಣಗೆ ಕಂಪಿಸಿದ ಅನುಭವಹರೆಯದ ಎದೆಯ ಇಣುಕಿ ಹೊರೆಯ ಇಳಿಸುವ ಕಲೆ ನೀನು ಅದ್ಯಾವ ಪಾಠಶಾಲೆಯಿಂದ ಕಲಿತಿಯೋ ಗೊತ್ತಿಲ್ಲ. ಕಾರ್ಮೋಡ ಹೊತ್ತ ಮುಗಿಲಿಗಿಂತ ಮಿಗಿಲು ನಿನ್ನ ಅಮಲು. ಒಂದೇ ಒಂದು ನಿಮಿಷ ನೀ ದೂರವಾದರೂ ತಡೆದುಕೊಳ್ಳುತ್ತಿರಲಿಲ್ಲ ಹೃದಯ. ದೂರವಿರುವ ನಿನ್ನ ಹೃದಯಕ್ಕೆ ದೂರವಾಣಿಯಿಂದ ದೂರನ್ನು ಸಲ್ಲಿಸುತ್ತಿತ್ತು.ಆಗ ನೀನು ತಡ ಮಾಡದೇ ಕಣ್ಣೆದುರಲ್ಲಿ ಹಾಜರಿ ಹಾಕುತ್ತಿದ್ದೆ ಕಳ್ಳ ನೋಟದಲ್ಲಿ. ಮನೆಯಂಗಳದಲ್ಲಿ ರಂಗೋಲಿ ಬಿಡಿಸುವಾಗ ನನ್ನತ್ತ ಒಲವ ಮಿಡಿವ ನಿನ್ನ ಬಟ್ಟಲುಗಣ್ಣು ಕಂಡು ಮೈ ಮರೆತು ನಿಂತು ಬಿಡುತ್ತಿದ್ದೆ. ನಿನ್ನ ಬೆನ್ನ ಹಿಂದೆ ನಿಂತು, ತುಂಬಾ ಮುದ್ದು ಉಕ್ಕಿ ಬಂದು ತೋಳಲ್ಲಿ ಬಳಸಿ ಕೆಂಪು ಕೆನ್ನೆ ಹಿಂಡಿ ಮತ್ತುಷ್ಟು ಕೆಂಪು ಮಾಡಲು ಕಾದು ನಿಂತು ಬಿಡುತ್ತಿದ್ದೆ. ಕದ್ದು ನೋಡುವ ಕಣ್ಣಿಗೆ ಜೇನ ಹನಿ ಸವರುವ ಆಸೆ ಹೊತ್ತು ಸುಮಾರು ಹೊತ್ತು ಕಾಯುತ್ತಿದ್ದೆ. ನಿನ್ನಿಂದ ನೀನೇ ನನ್ನ ಕಾಪಾಡ ಬೇಕು ಇಲ್ಲದಿರೆ ನನಗೆ ಉಳಿಗಾಲವಿಲ್ಲ ಎಂದು ಮನಸ್ಸಲ್ಲೇ ನಿನ್ನ ಬೇಡುತ್ತಿದ್ದೆ. ಹಗಲುಗನಸಿನಲ್ಲಿ ನಾ ಮುಳುಗಿರುವಾಗ ಚೆಂದದೊಂದು ಮುಗುಳುನಗೆ ಚೆಲ್ಲಿ ನೀ ಮಾಯವಾಗಿರುತ್ತಿದ್ದೆ. ಇದು ಪ್ರತಿ ಅರುಣೋದಯದ ಪ್ರೀತಿ. ಕತ್ತಲ ರಾತ್ರಿಯ ಮರೆಸುವ ಚಂದಿರನಂತೆ ನನ್ನೆಲ್ಲ ನೋವ ಮರೆಸಿ ಬದುಕು ಚೆಂದಗಾಣಿಸಿದ ಅಧಿದೇವತೆ.ನಿನಗೆ ನನ್ನದೇನು ಕಾಣಿಕೆ? ಎಂದೆಲ್ಲ ಯೋಚಿಸಿದಾಗೆಲ್ಲ ನಿನ್ನ ಮರೆತ ಮರುಕ್ಷಣವೇ ನಾನಿಲ್ಲ ಎಂದು ಉಸುರುತ್ತಿತ್ತು ಮನವೆಲ್ಲ.ಈಗೀಗ ಹೊಸದೊಂದು ಜನುಮ ಪಡೆದಂಥ ಖುಷಿ ಈ ಪ್ರಾಣ ನಿನ್ನ ಹೆಸರಲ್ಲೇ ಇದೆ. ಈ ದೇಹವೂ ನಿನ್ನದೇ ಕೈ ವಶ. ಪ್ರಾಣ ಹೋದರೂನೂ ನಾ ನಿನ್ನವನು ನೀ ನನ್ನವಳು ಎಂಬುವದಂತೂ ನೂರಕ್ಕೆ ನೂರು ನಿಜ. ನೀನೇ ಬೇಕೆನ್ನುವ ಪ್ರಾಯದ ಒಳಗಾಯ ಮಾಯ ಮಾಡುವ ಮುದ್ದಿನ ಮದ್ದು ನಿನ್ನ ಅಧರದ ಅಂಚಿನಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ನಿನ್ನ ಸಹವಾಸದಲ್ಲಿರುವಾಗ ಸಾವು ಬಂದರೂನೂ ನಿಮಿಷ ಕಾಯದೇ ಹರುಷದಿಂದಲೇ ಅಪ್ಪಿಕೊಂಡು ಬಿಡುವೆ. ಆದರೆ ಕೇಳದಿರು ಇಸಿದುಕೊಂಡ ಹೃದಯವನ್ನು. ಒಲವಲಿ ಒಮ್ಮೆ ಕಸಿ ಮಾಡಿದ ಹೃದಯವನು ಮರಳಿಸು ಅಂದರೆ ಜೀವ ಹಿಂಡಿದಂತಾಗುತ್ತೆ. ಜಾತಿಯ ಹೆಸರಲಿ ನಾವಿಬ್ಬರೂ ಬೇರೆಯಾಗಿ ಬಾಳದೇ ದಾರಿಯಿಲ್ಲ ಅಂದ ನಿನ್ನಣ್ಣ. ಬೀಸುವ ಗಾಳಿಗೆ, ದಾಹ ನೀಗುವ ಗಂಗೆಗೆ, ಬೆಳಕನೀವ ನೇಸರನಿಗೆ ಜಾತಿಯ ಹಂಗಿಲ್ಲ. ಒಲವ ಹಂಚಿಕೊಳ್ಳುವ ಒಲವಿನ ಹೂಗಳಿಗೆ ಅಡ್ಡಲಾಗಿ ಜಾತಿಯ ಮುಳ್ಳುಗಳೇಕೆ? ಮೇಲು ಕೀಳಿಲ್ಲ ಒಲವಿಗೆ. ವಿಶ್ವವೇ ಮಂದಿರ ಒಲವಿನೊಲವಿಗೆ.ಜಾತಿಯ ಬಿಸಾಕಿ ಬಂದು ಬಿಡು ನನ್ನೆಡೆಗೆ. ಐದಂಕಿಯ ಸಂಬಳದಲಿ ಅರಗಿಣಿಯಂತೆ ಸಾಕಿ ಸಲುಹುವೆ.ಕೂಡಿ ಬಾಳೋಣ ನನ್ನವ್ವ ಅಪ್ಪನೊಂದಿಗೆ.ಸರ ಸರ ಸರಸಕೆ ಸಲ್ಲಾಪಕೆ ಬರುವೆ ನಿನ್ನ ಹತ್ತಿರವೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುತ ನೀ ದೂರ ತಳ್ಳುವೆ.ತಡ ಮಾಡದೇ ಹ್ಞೂಂ ಅನ್ನು ಜೊತೆಗಾತಿಯಾಗಲು. ಸಂದೇಹ ಬೇಡ ಇನ್ನು ಬದುಕೆಲ್ಲ ರಾಣಿಯಂತೆ ಹಾಯಾಗಿ ಬಾಳುವೆ ಸೊಗಸಾಗಿ.ನನ್ನ ಜೊತೆಯಾಗಿ. ಒಳಗೊಳಗೆ ಮನವು ಕಾಡುತಿದೆ. ಮನ ಬಿಚ್ಚಿ ಹೇಳಿ ಬಿಡು ಒಮ್ಮೆ ಮನದಾಸೆಯ ಮನವು ಕೇಳುತಿದೆ. ನಿನ್ನ ತನುವ ಬೇಡುತಿದೆ.ಗಂಟೆಯ ಲೆಕ್ಕವಿಲ್ಲದೆ ಗಂಟೆಗಟ್ಟಲೇ ನಿನ್ನದೇ ಮಾತು ಕತೆ ಗೆಳೆಯರ ಮುಂದೆ. ಇಳಿ ಬಿಟ್ಟ ನಿನ್ನ ನಾಗರ ಹಾವಿನ ಜಡೆಗೆ ತಣ್ಣನೆ ಬೆಳದಿಂಗಳಲಿ ಹೂ ಮುಡಿಸುವಾಸೆ. ತೋರ ಬೆರಳ ತುದಿ ಸಾಕು ನಂಗೆ ನಿನ್ನೊಲವಿನ ಗುಂಗು ಹಿಡಿಸೋಕೆ. ಚಳಿ ತಡೆಯಲಾಗುತ್ತಿಲ್ಲ ಚೆಲುವೆ. ಹೊದ್ದ ಹೊದಿಕೆ ಸರಿಸಿ ನುಗ್ಗಿ ಬಿಡು ಒಳಗೆ. ಹೊದಿಕೆ ಹೊಂದಿಸಿಕೊಳ್ಳುತ್ತೆ ನಿನ್ನ ನನ್ನೊಳಗೆ. ಸತಾಯಿಸದೇ ಬಂದು ಬಿಡು ಬೇಗ.ಕಾಯುತಿರುವೆ ನಿನಗಾಗಿ ಜರ್ಝರಿತ ಬಂಡೆಗಲ್ಲಿನ ಮೇಲೆ ಕೂತು ಅರಿಷಿಣ ಕೊಂಬಿನ ದಾರ ಹಿಡಿದು. ಹೆದರದಿರು ಗೆಳತಿ ಬಿಡದಂತೆ ನಾ ಹಿಡಿವೆ ನಿನ್ನ ಕೈಯನು! ಚೆಲುವೆ ಚೆಲ್ಲುವೆ ಹಿಡಿ ಒಲವನು!!ಇತಿನಿನ್ನೊಲವಿನ ಚೆಲುವ

ಲಹರಿ Read Post »

ಕಾವ್ಯಯಾನ

ಮತ್ತೆ ಮಳೆಯಾಗಿದೆ ನಿನ್ನೊಲವಿನ ವರ್ಷಧಾರೆಗೆನನ್ನೊಳಗಿನ ನವಿಲುಗರಿದೆದರಿ ನರ್ತಿಸುತಿದೆಖುಷಿಗೆ ಪಾರವೇ ಇಲ್ಲದಂತೆ !ಮತ್ತೆ ಮಳೆಯಾಗಿದೆಕನಸು ಹೊಸದಾಗಿದೆ.. ಫಸಲಿಲ್ಲದ ಬಂಜರುಭೂಮಿಮುಂಗಾರಿನ ಸ್ಪರ್ಶಕೆ ತಾ ಚಿಗುರೊಡೆದಿದೆಒಡಲಕಾವ ತಣಿಸಿ ಹನಿಯ ಸಿಂಚನಕೆಬೀಜ ಮೊಳೆತು ಜೀವ ಅಂಕುರಿಸಿದೆ ಸತ್ತಬೇರುಗಳೆಲ್ಲ ಉಕ್ಕಿ ಮರುಕನಸುಸುಪ್ತ ಚೇತನದಲ್ಲಿ ಜಾಗೃತವಾಗಿದೆನಿಸ್ತೇಜದಿ ಜಡವಾಗಿದ್ದ ಬೇರುವರ್ಷ ಪೋಷಕಕ್ಕಾಗಿ ಹಂಬಲಿಸಿದೆ ಬೆಳೆದು ವೃಕ್ಷವಾಗಲೀಗ ಅದಕೊಂದುದೃಢರಕ್ಷಣೆಯ ಆಸರೆ ದೊರೆತಿದೆಜಾತಿಮತದಾಚೆಗಿನ ಸಹಬಾಳ್ವೆಯಲಿ ತಾನುಬೆಳೆದು ಹೆಮ್ಮರವಾಗ ಹೊರಟಿದೆ. ***** ಹೆಚ್.ಡಿ.ತೇಜಾವತಿ

Read Post »

ಕಾವ್ಯಯಾನ

ಮತ್ತೆ ಮರೆಯಾಗುವ ತವಕವೇತಕೆ ಮೋಡಗಳೆ ಮೋಡಗಳೆ      ಏಕಿಷ್ಟು  ಅವಸರ       ಹೊರಟಿರುವಿರೇತಕೆ       ತಿರುಗಿ ನೋಡದೇ .        ಬಾನಂಗಳದಲಿ         ಚಿತ್ತಾರ ಮೂಡಿಸಿ        ಮತ್ತೆ ಮರೆಯಾಗುವ        ತವಕವೇತಕೆ?         ಒಂದು ಹನಿಯೂ          ಸುರಿಸದೆ.           ಬಾಯಾರಿದ          ಭೂಮಿಯು ಬಾಯ್ತೆರೆದು ನಿಂತಿದೆ ನೀವು ಸುರಿಸುವ ಹನಿಗಳಿಗಾಗಿ. ಕವಲೊಡೆದಿದೆ ಮಣ್ಣು ಜೀವಜಲದ ಆಸೆಯಿಂದ ಅತ್ತಲೊ ಇತ್ತಲೊ ಒಮ್ಮೆ ಜೊರಾಗಿ ಗಾಳಿ ಬಿಸುತಿರಲು ಹೊರಟೆ ಬಿಟ್ಟಿರಾ ಗಾಳಿಯ ಜೊತೆಯಾಗಿ. ಭೂಮಿಯದು ನಳನಳಿಸುತಿದೆ ಹಸಿರು ಸೀರೆ ಯನು ಹೊದ್ದು ಸದಾ ಋಣಿಯಾಗಿಹೆ ನಾವು ಭೂತಾಯಿ ನಿಮಗೆ. ******* ಡಾ.ಪ್ರತಿಭಾ

Read Post »

ಕಾವ್ಯಯಾನ

ಚಿಲುಮೆ ಮಳೆಹನಿಗಡಿಯಾರದ ಮೂರು ಮುಳ್ಳುಗಳಿದ್ದಂತೆಕಾಲಕಾಲಕ್ಕೆ ತಿರುಗುತಿವೆಋತುಗಳು ಭಾಗವಾಗಿ ಬೇಸಿಗೆಯಲ್ಲಿ ಅದುಮಿಟ್ಟಶಿಶ್ನಮಳೆಯಲಿ ಚಿಗುರೊಡೆದುಪುಟಿದೇಳುತ್ತದೆ ಚಳಿಯಲಿಹಿಡಿತ ಮೀರಿ ಮುಪ್ಪಾಗದ ಯೋನಿಸ್ವಾಗತಿಸುತ್ತಿದೆಕಾಲದ ನಾಚಿಕೆ ಬದಿಗಿಟ್ಟುಅಲೆಯುತ್ತಿದೆ ಪಕ್ವಗೊಂಡ ಅಪ್ರಜ್ಞೆಬೆಡ್ ರೂಮ್ ಬಾತ್ ರೂಮ್ ಗಳಪರಿಧಿ ಆಚೆ ಮಿಡುಕಾಡುತ್ತಿದೆ ಮಳೆಹನಿಸರಿಸೃಪಗಳು ತಲೆಯೆತ್ತಿಹೆಡೆಯೆತ್ತಿತಣಿಸಿಕೊಂಡಂತೆ ಮೋಹಚಂದಿರನ ರಾತ್ರಿಯಲಿಪುಟಿವ ನೀರ ಚಿಲುಮೆಯಂತೆ ********* ದೇವು ಮಾಕೊಂಡ

Read Post »

ಕಾವ್ಯಯಾನ

ಮಳೆಗಾಲದ ಕನವರಿಕೆ ಮಳೆಗಾಲದ ರಾತ್ರಿಗಳಿಗೆಮಾರನೇ ದಿನಕ್ಕೆ ತಂಗಳುನಿದ್ದೆಯುಳಿಸುವ ಬಾಬತ್ತುಹೇಗೆ ಮಲಗಿದರೂಮುಂಜಾವಿನ ಕಾಲುಸೆಳೆತತಲೆಬಾಲವಿಲ್ಲದ ಉದ್ದುದ್ದಕನಸುಗಳ ಮುಸುಗುಒಂದೊಳ್ಳೆ ಸವಿಘಟ್ಟಕ್ಕೆಒಯ್ದು ನಿಲ್ಲಿಸಿದ ಕ್ಷಣವೇಫಳಾರನೆ ಗುಡುಗು- ಸಿಡಿಲುಯಾರ ಮನೆಯ ಮಾಳಿಗೆಯಮೇಲೋ ಕುಳಿತು ಗೊಳೋಅಳುವ ಬೆಕ್ಕುಅತ್ತಿತ್ತ ಹೊರಳಿದರೆಮಳೆಯಲ್ಲೇ ನಡುಗುತ್ತಾ ನೆನೆಯುತ್ತಾಸ್ವಿಗ್ಗಿ ಡೆಲಿವರಿ ಕೊಟ್ಟವನಕಣ್ಣೇಕೆ ನೋಡಲಿಲ್ಲ?ಮನೆಯೊಳಗೆ ಕರೆದುಬಿಸಿ ಕಾಫಿ/ ಕಷಾಯ ಕೊಟ್ಟುಕಳಿಸಬಹುದಿತ್ತೇನೋ!ಅಮ್ಮ ಹಸಿದ ಬೀದಿನಾಯಿಗೂಬಿಸಿಬಿಸಿ ಬೋಡುಪ್ಪಿಟ್ಟುಕೆಲವೊಮ್ಮೆ ಚೂರಿಷ್ಟು ಕಾಫಿಮೆಟ್ಟಿಲ ಕೆಳಗೆರಡು ಗೋಣಿತಾಟುಹೊಂಚುತ್ತಿದ್ದು ನೆನಪಾಗಿಮತ್ತೆಲ್ಲೋ ಎಳೆದು ನಿಲ್ಲಿಸುವಕಣ್ಣಮುಚ್ಚಾಲೆ ನೀರು ಕುಡಿ- ಕಾಲ್ತೊಳೆದುಮುದುರಿ ಮಲಗುಮತ್ತೆ ಹೊರಳಾಡಿಗಂಟೆ ಎಂಟಾಯ್ತೆಂದುದಡಬಡಿಸಿ ಓಡುಛೇ ಮಳೆಗಾಲದ ರಾತ್ರಿಗೆಏಕಿಂಥ ಮರುಳು? ಮಳೆಯೊಂದಿನ ಹನಿಯಾಗಿನದಿ, ಕೆರೆ, ಜಲಧಾರೆಯಾಗಿನೆನಪುಗಳ ಹಂಗಿಲ್ಲದೆಸಂಚರಿಸಬಾರದೆ ನಾನುಪುಟ್ಟ ಮಳೆಹನಿಯಾಗಿಚಂದ್ರಬಿಂಬದ ತೊಟ್ಟಿಲಾಗಿ ******** ಎಸ್ ನಾಗಶ್ರೀ

Read Post »

ಕಾವ್ಯಯಾನ

ಎರಡು ಮಳೆ ಕವಿತೆಗಳು ಮಳೆ ಸುರಿದೇ ಇದೆ ಮಳೆ ಬಾನ ಸಂಕಟವೆಲ್ಲ ಕರಗಿಕಣ್ಣೀರಾಗಿ ಇಳಿದಿದೆಯೇ ಹೊಳೆಇಳೆಯ ಅಳಲಿಗೆ ಎದೆ ಕರಗಿಸುರಿಸಿದೆಯೇ ನಭ ತನ್ನೊಲವ ಬಾನು ಬುವಿ ಒಂದಾಗಿಸಿದೂರಗಳ ಇಲ್ಲವಾಗಿಸಿಕಳೆಕೊಳೆ ಗುಡಿಸಿ ತೊಳೆತೊಳೆದು ತೊರೆ ಹರಿಸಿಸುರಿದಿದೆ ಮಳೆ ಬಿಸಿಲಬೇಗೆಗೆ ಬತ್ತಿ ಆಳಆಳ ನೆಲದಲ್ಲಿ ನೀರ ಪಸೆಗೆಚಾಚಿ ಚಾಚಿ ತುಟಿ ಬಸವಳಿದಬೇರಿಗೆ ಈಗ ಜೀವನ ಸೆಲೆಬಾನ ಕರುಣೆಗೆ ತಲೆಯೊಲೆದುತುಟಿಯೊಡ್ಡಿ ಹಿಗ್ಗುವ ಎಲೆ-ಎಲೆ !ಮೊಗ್ಗು ಹೂವು ಕೊಂಬೆಯ ಹಕ್ಕಿಮಣ್ಣಹುಳು ಎಲ್ಲಕ್ಕೂ ಈಗಜೀವ ಚೈತನ್ಯದ ಆವಾಹನೆ- ಅಲೆ ಉಳುವ ಊಡುವ ಮೂಡುವಚಿಗಿತು ಹೊಡೆ ತುಂಬಿಫಲಿಸುವ ಸಂಭ್ರಮವ ನೆಲದಕಣಕಣಕೂ ತುಂಬಿತುಂ ತುಂಬಿ ಹರಿಸಿ ಹರಸಿಉಸಿರಿನ ಮಂತ್ರ ಕಿವಿಯಲೂಡಿ‘ಧೋ ‘ ಶ್ರುತಿಯಲ್ಲಿಉಧೋ ಗತಿಯಲ್ಲಿನಾದವಾಗಿ ಮೋದವಾಗಿಸುರಿದು ಸುರಿಯುತ್ತಿದೆಇದೋ-ಮಳೆ ! ಸಂಜೆಮಳೆ ಪಾತ್ರವೇ ತಾನಾದ ನಟಮೊದಮೊದಲು ಗುಡುಗಿಸಿಡಿಲಾಡಿರೋಷಾವೇಶ ಕಳೆದುಕರುಣರಸವೇ ಮೈತಳೆದು ಕಣ್ಣಕೊನೆಯಲ್ಲಿ ಹಣಕಿದಕಂಬನಿ ಹನಿಹನಿ ಹನಿದುಇದೀಗ ಧಾರಾಕಾರ ಮುಖದ ಬಣ್ಣ ಕರಕರಗಿಕೊನೆಗೆ ಕಲಸಿದಬೂದು ಚಿತ್ರಗಳಾಗಿಇಳಿದಂತೆ ಮುಖದಿಂದಎದೆಗೆ, ನೆಲಕ್ಕೆ. ಸುರಿದಿದೆ ಸಂಜೆಮಳೆ-ಅಮೂರ್ತ ಚಿತ್ರಗಳಬಿಡಿಸುತ್ತಅಳಿಸುತ್ತಬರೆಯುತ್ತ… ********** ಡಾ. ಗೋವಿಂದ ಹೆಗಡೆ

Read Post »

ಕಾವ್ಯಯಾನ

ಮಳೆ ಮಳೆನೆಲ‌ ಮುಗಿಲಿನ ಅನುಸಂಧಾನಪ್ರೀತಿಯಂತೆ ಮಳೆ ಮೋಡ ಕಪ್ಪು ಮೋಡ ಮುಗಿಲ ಚುಂಬಿಸಿ, ಕಡಲ ಮಾತಾಡಿಸಿ, ಗಿರಿಯ ಸವರಿ ,ಕಣಿವೆ ಹೊದ್ದು ಸಾಗಿದವು…ಮಳೆ ; ಎಲ್ಲಲ್ಲೂ ಮಳೆಪ್ರೀತಿಯ ವರ್ಷಧಾರೆ ಆಕೆ ಆತ ದೂರದಲ್ಲಿ ಕುಳಿತುಮಾತಾಡಿದರು ;ಮಳೆಯ ಜೊತೆಹೃದಯಗಳು ಒದ್ದೆಯಾದವುಕಣ್ಣೀರು ಮಳೆಯ ಹನಿಗಳ ಬೆರೆತವು ಮಳೆ ಲೋಕವನ್ನೆಲ್ಲಾ ಸುತ್ತಾಡಿತುಪ್ರೇಮಿಗಳೆಲ್ಲಾ ಮಳೆಯ‌ ಎದುರುಗೊಂಡರು , ಸಂಭ್ರಮಿಸಿದರು; ಹಳೆಯ ಖುಷಿ ನೆನೆದರು, ನೋವು ಸಹ ನೆನಪಿಸಿಕೊಂಡರು;ಕೊನೆಗೆ ಮಳೆ‌ ಸಂತೈಸಿ ಹೊರಟು ಹೋಯಿತು ಮಳೆ ನದಿಯಾಯಿತುಕುಟಿಲಪಥ ಕಾನನವ ದಾಟಿಕಡಲಬಳಿ ಬಂತು…ಅದು‌‌ ಕೊನೆಯ ಅನುಸಂಧಾನಯುಗ ಯುಗಗಳ ದುಃಖಸುಖ ಕನಸು ಕಾತುರ ಪ್ರೇಮವ ದಂಡೆಯಲಿ ಬಿಚ್ಚಿ ಹರಡಿ ಹರಟೆಯೊಡೆದುಪಟ್ಟ ಪಾಡು , ಬಿಟ್ಟ ಹಠ , ಕೊಟ್ಟ ಪ್ರೀತಿಯ ನಿವೇದಿಸಿತುಸಂತೈಸಿದ ಕಡಲ‌ದಂಡೆಮತ್ತೆ ಮಳೆಯಾಗಿ ಎಲ್ಲರ‌ ಮಾತಾಡಿಸಿ ಬರೋಣ ಎಂದಿತು**********‌ ನಾಗರಾಜ್ ಹರಪನಹಳ್ಳಿ

Read Post »

You cannot copy content of this page

Scroll to Top