ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಕಿರಿ ದೇವರಿಗೆ ಮರದ ಜಾಗಟೆ. ಕೆ.ಎನ್.ಮಹಾಬಲ ಹನ್ನೊಂದು  ಗಂಟೆಗೆ ಬಾಸ್ ನ ಕೋಣೆ ಒಳಗೆ ಹೋಗಿ ಬಂದ ಅಟೆಂಡರ್ ಸಿದ್ದಲಿಂಗು “ಬಾಸ್ ಸಿಟ್ಟಾಗಿದ್ದಾರೆ.’ಏನಯ್ಯ ನನಗೆ ಹುಷಾರಿಲ್ಲ .ನೆಗಡಿ,ತಲೆಭಾರ ಸ್ವಲ್ಪ ಜ್ವರನೂ ಬಂದಂತಿದೆ.ನೀನು ನೋಡಿದ್ರೆ ಇಷ್ಟೊಂದು ಫೈಲ್ ತಂದು ಕುಕ್ಕುತ್ತಿದ್ದೀಯಾ’ಎಂದು ರೇಗಿದರು  ಎನ್ನುತ್ತಾ ಹೊರಗೆ ಬಂದ ಸಿದ್ದಲಿಂಗು “ಈ ಸಾಹೇಬರಿಗೆ ಹುಷಾರಿಲ್ಲ  ಅಂತ ಯಾರಿಗಾದ್ರೂ ಕನಸು  ಬಿದ್ದಿರತ್ತಾ?’ ಎಂದು ಗೊಣಗಿಕೊಂಡ. ಆ ಬಾಸ್ ಗೆ ಹುಷಾರಿಲ್ವ? ಏನಂತೆ ?ಯಾವಾಗಿಂದ?ಡಿಪಾರ್ಟಮೆಂಟಿನಲ್ಲಿದ್ದ ಎಲ್ಲ ಉದ್ಯೋಗಿಗಳು ಒಟ್ಟಿಗೇ ಪ್ರತಿಕ್ರಿಯಿಸಿದರು. “ಬೆಳಿಗ್ಗೆ   ನಾನು ಅವರು ಬರೋ ಹೊತ್ತಲ್ಲಿ ಬೇರೆ ಡಿಪಾರ್ಟ್ ಮೆಂಟಿಗೆ ಹೋಗಿದ್ದೆ.ಅವರು  ಬಂದ ಮೇಲೂ ಅವರ ಕ್ಯಾಬಿನ್ಗೆ ಒಂದುಸಾರಿನೂಹೋಗಿಲ್ಲ .ಅದಕ್ಕೇನನಗೆವಿಷಯ  ಗೊತ್ತಾಗಿಲ್ಲ.”ಎಂದು ಹಲುಬಿದ  ಸೀನ.ಕೆಲಸವಿರಲಿ ಬಿಡಲಿ ಬಾಸ್ ನ ಕೋಣೆಗೆ ದಿನಕ್ಕೆ ಕೊನೇಪಕ್ಷ ನಾಲ್ಕೈದು ಸಾರಿ ಲಾಳಿ ಹೊಡೆಯುತ್ತಿದ್ದ ಅವನಿಗಂತೂ ಇದು ಆಘಾತಕಾರಿ ಸುದ್ಧಿ. ತಡಮಾಡಲೇ ಇಲ್ಲ .ದಢಾರನೆ ಬಾಸ್ ಕೋಣೆಗೆ ನುಗ್ಗಿ “ಏನ್ ಸಾರ್ ಹುಷಾರಿಲ್ವಂತೆ” ಎಂದು ಆರೋಗ್ಯ ವಿಚಾರಿಸಿದ. “ಹೌದ್ರೀ,ಬೆಳಗಿನಿಂದ ಸ್ವಲ್ಪ ನೆಗಡಿ,ಕೆಮ್ಮು ಜ್ವರವೂ ಇದೆಯೇನೋ?.ಕೆಲಸಕ್ಕೇನೂ ತೊಂದರೆಯಿಲ್ಲ” ಎಂದರು . “ಸಾರ್,ಡಾಕ್ಟರು ಏನಾದ್ರೂ ಬೇಕಾದ್ರೆ ಹೇಳಿ ಹಾಗೆಲ್ಲ ಅಲಕ್ಷ ಮಾಡಬಾರದು.””ಎನ್ನುತ್ತ ಹೊರಬಂದ. “ಇರಲಿ ನೋಡೋಣ “ ತಣ್ಣಗೆ ನುಡಿದರು ಬಾಸ್. ಬಾಸ್ ತನ್ನ ಮಾತಿಗೆ ಅವನು ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆ ನೀಡದಿದ್ದುದು ಅವನಿಗೆ ನಿರಾಸೆ ತಂದಿತ್ತು. ಸಹೋದ್ಯೋಗಿಗಳಿಗೆ “ಯಾರೂ ಸಧ್ಯಕ್ಕೆ ಒಳಗೆ ಹೋಗಬೇಡಿ ಬಾಸ್ ಸಿಟ್ಟಾಗಿದ್ದಾರೆ”ಎಂದು ಎಚ್ಚರಿಕೆ ನೀಡಿ ಮನಸ್ಸಿನ ದುಗುಡವನ್ನು ಹೊರಹಾಕಿದ. ಉಳಿದವರಿಗೆ ಈಗ ಸಂದಿಗ್ಧ. ಸೀನನ ಮಾತು ಕೇಳಿ ಸುಮ್ಮನಿರೋಣವೇ?ಅಥವಾ ಧೈರ್ಯ ತೊಗೊಂಡು ಒಂದು ಸಾರಿ ಒಳಕ್ಕೆ ಹೋಗೋಣವೇ ?ತಿಳಿಯದಾಯಿತು. ಬಾಸ್ ಎಂಬ ಹುಲಿ ಬೋನಿಗೆ ದಿನಾ ಸಲೀಸಾಗಿ ನುಗ್ಗುತ್ತಿದ್ದ ಸೀನನಿಗೇ ಈ ದುರ್ಗತಿಯಾದರೆ ಇನ್ನು ನಮ್ಮ ಪಾಡೇನು?ಎನ್ನುವುದು ಅವರ ಚಿಂತೆ ಕಛೇರಿಯಲ್ಲಿ ಈಗ ನೀರವ ಮೌನ.ಬಾಸ್ ಹುಷಾರಿಲ್ಲ ಅಂತ ಬೇಗ ಮನೆ ಹೋದರೆ ಹೆಂಡತಿ ಮಕ್ಕಳೊಡನೆ ವಂಡರ್ ಲಾ ಗೆ ಹೋಗಬಹುದೇ? ಸದಾನಂದನ ಚಿಂತೆ.ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಾರ್ಯಕ್ರಮದ ಸ್ಕೆಚ್ .ಅವರು ಹೋದದ್ದನ್ನು ನೋಡಿಕೊಂಡು  ಮನೆಗೆ ಹೋಗಿ ಸರ್ ಪ್ರೈಸ್ ಕೊಡೋಣ ಎಂದುಕೊಂಡವರು ಮತ್ತೆ  ಹಲವರು. ”ಸಿದ್ಲಿಂಗು ಮುಂದಿನ ಸಾರಿ ಒಳಗೆ ಯಾವುದಾದ್ರೂ ಫೈಲೋ ಫೋಲ್ಡರೋ ತೊಗೊಂಡು ಹೋಗೊದಿದ್ರೆ ನನ್ನ ಹತ್ರ ಕೊಡು .ನೀನು ಹೋಗಬೇಡ “ಎಂದು ಒಳಗೆ ಹೋಗುವುದನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ ಮೂರ್ತಿ. “ಬಾಸ್ ಗಳಿಗೆ ಹುಷಾರಿಲ್ಲದಾಗ ಆರೋಗ್ಯ ವಿಚಾರಿಸುವ ಸದವಕಾಶ ತಪ್ಪಿಸಿಕೊಳ್ಳಲು ಯಾರಿಗೂ ಇಷ್ಟವಿರಲ್ಲ “ಅಂತ ಗೊಣಗಿಕೊಂಡ ಸದಾಶಿವ.”ಮೂರ್ತಿ ನೀನು ಹೋದಾಗ ಎಲ್ಲ ನೀನೇ ಮಾತನಾಡಿಬಿಡಬೇಡ.ನನಗೂ ಒಂದೆರಡು ಪಾಯಿಂಟ್ ಉಳಿಸು “ ಎಂದ ಕೋರಿದ. ಹೀಗೇ ಮುಂದುವರೆಯಿತು.”ಎದರುಗಡೆ ಇರುವ ಕ್ಲಿನಿಕ್ ನಿಂದ ಎಲ್ ಎಮ್ ಪಿ ಡಾಕ್ಟರ್ ಕರೆದುಕೊಂಡು  ಬರಲೆ ಎಂದೊಬ್ಬ,ಗೃಹವೈದ್ಯ,ಆಯುರ್ವೇದ,ಯುನಾನಿ,ರೇಖಿ, ಎಲ್ಲ ಪದ್ಧತಿಗಳೂ ಸಲಹೆಯಾದವು . ಜತೆಗೆ ರೋಗದ ಕಾರಣವೂ ಚರ್ಚೆಯಾಯಿತು.”ಸಾರ್ ನೀವು ಮೊನ್ನೆ ಹೆಡ್ ಆಫೀಸ್ ಏ ಸಿ ರೂಮ್ ನಲ್ಲಿ ಬೆಳಗಿನಿಂದ ಸಾಯಂಕಾಲದವರೆಗೆ ನಡೆದ ಮೀಟಿಂಗ್ ನಲ್ಲಿ ಇದ್ದ ಪರಿಣಾಮ ದು ” ಅಂತ ಒಬ್ಬ.”ಆ ಧೂಳಲ್ಲಿ ಅಷ್ಟೊಂದು ಹೊತ್ತು ಹೋಗಬಾರದಿತ್ತು ಇನ್ಸ್ಪೆಕ್ಷನ್  ಸಾರ್ .ಅಲರ್ಜಿಯಾಗಿಬಿಟ್ಟಿದೆ “ಅಂತ ಮತ್ತೊಬ್ಬ.ಅಂತೂ ಕಛೇರಿಯ ಪ್ರತಿಯೊಬ್ಬರೂ ಕಾಳಜಿಯ ಅಕ್ಷಯಪಾತ್ರೆಯನ್ನೇ ಸುರಿಸತೊಡಗಿದರು. ಅತಿಯಾದ ಸಲಹೆಗಳ ಪರಿಣಾಮವೋ ,ಮತ್ತೇನು ಕಾರಣವೋ ಏನೋ ಮಧ್ಯಾಹ್ನದ ಹೊತ್ತಿಗೆ ಬಾಸ್ ಅಸೌಖ್ಯ ಹೆಚ್ಚಾಯಿತು. ಡ್ರೈವರ್ ಶಿವಯ್ಯನನ್ನು ಕರೆತರಲು ಹೊರಟ ಸಿದ್ದಲಿಂಗನಿಂದ ಅವರು ಮನೆಗೆ ಹೋಗುವ ಸೂಚನೆ ಸಿಕ್ಕಿತು. ಲಗುಬಗೆಯಿಂದ ಎಲ್ಲರೂ  ತಂತಮ್ಮ ಯೋಜನೆಗಳ ಬಗ್ಗೆ ಚಿಂತಿಸಿದರು. ಮನೆಗೆ ಹೊರಟ ಬಾಸ್ ಗೆ “ಸಾರ್,ಹುಷಾರು”ಈಗಲೇ ಡಾಕ್ಟರರ ಹತ್ತಿರ ಹೋಗಿ””ರೆಸ್ಟ್ ತೊಗೊಳ್ಳಿ” ಮುಂತಾದ ಮಾತುಗಳ ಪುನರುಕ್ತಿಯಾಯಿತು. “‘ಮನೆ ತನಕ ಬರೋಣವೇ ಸಾರ್ “ ಎಂದು ಸೀನ ಕೇಳಿದಾಗ . “ಬೇಢ ನಿಮ್ಮ ಕೆಲಸ ಗಮನಿಸಿಕೊಳ್ಳಿ,ಸಾಧ್ಯವಾದರೆ ನಾಳೆ ವಾಪಸು ಬರ್ತೇನೇ” ಎನ್ನುತ್ತಾ  ಹೊರಟರು . “ಅರ್ಜೆಂಟ್ ಬೇಡ ಎರಡು  ದಿನ ರೆಸ್ಟ್ ತೊಗೊಂಡೇ ಬನ್ನಿ”ಸೀನ ತೀರ್ಪು ನೀಡುವಂತೆ ಹೇಳಿದ. ಬ್ರಹ್ಮಚಾರಿ ರಾಘವೇಶನಿಗೆ ತಾವೆಲ್ಲ ಹೋದಮೇಲೂ ಸ್ವಲ್ಪ ಹೊತ್ತು ಇರುವಂತೆ ಉಳಿದವರು ಕೇಳಿಕೊಂಡರು.ಪಾಪ!ಮದುವೆಯಾಗದೆ ಇದ್ದವರಿಗೆ ಇದೇ ಹಣೇಬರಹ. ಎಲ್ಲರೂ ತಾವು ಬೇಗ ಮನೆಗೆ ಬರುವ ವಿಷಯವನ್ನು ತಿಳಿಸಲು ಉತ್ಸುಕರಾದರು. —- ಬಾಸ್ ಹೋದದ್ದನ್ನು ನೋಡಿಕೊಂಡು ಪಕ್ಕದ ವಿಭಾಗದ ಅಟೆಂಡರ್  ಕೃಷ್ಣಪ್ಪ ಬಂದು ಸಿದ್ದಲಿಂಗುವಿನೊಡನೆ ಲೋಕಾಭಿರಾಮವಾಗಿ  ಮಾತಿಗೆ ನಿಂತ. “ಇವತ್ತು ನಿನಗೆ ಆರಾಮ ಬಿಡು ಸಿದ್ದಲಿಂಗು ಬೆಲ್ ಹೊಡೆದ್ರೆ ಹೋಗೋ ತೊಂದರೆಯಿಲ್ಲ” ಎಂದ. “ಹೌದು ಬಿಡಪ್ಪ ,ಹೋದ ವಾರ ನನಗೂ ಹುಷಾರಿರಲಿಲ್ಲ.ಜ್ವರ ,ಶೀತ ನಿದ್ದೆಯಿಲ್ದೆ ಕಣ್ಣು ಕೆಂಪಗಾಗಿತ್ತು.ಯಾರೂ ಕನಿಕರ  ತೋರ್ಸೋರು ಇಲ್ಲಿರಲಿಲ್ಲ.ಕಣ್ಣು ನೋಡಿ ಯಾಕೋ ನಿನ್ನೆ ಎಣ್ಣೆ ಪಾರ್ಟಿ ಜೋರಾ ?ಅಂತ ಲೇವಡಿ ಮಾತು ಬೇರೆ”. ಸಿದ್ದಲಿಂಗು ಬೇಸರದ ದನಿಯಲ್ಲಿ ಹೇಳಿದ. ಕೃಷ್ಣಪ್ಪ “ನಿಜ,ನಿಜ ಗಾದೆ ಕೇಳಿಲ್ವಾ ‘ಕಿರಿ ದೇವರಿಗೆ ಮರದ ಜಾಗಟೆ  ಅಂತ ;ಕಂಚಿನ ಜಾಗಟೆ ಬಾರಿಸೋದಕ್ಕೆ ನಾವೇನು ಹಿರೇದೇವ್ರು ಕೆಟ್ಟೋದ್ವಾ ?” ಎನ್ನುತ್ತ ಅಲ್ಲಿಂದ ಹೊರಟ. *********************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮನಸು ಮಂಜುಗಡ್ಡೆಯಲ್ಲ. ಜ್ಯೋತಿ ಗಾಂವಕರ್ “ಈಗೀಗ ಏನೂ ನಿರೀಕ್ಷೆಗಳೇ ಇಲ್ಲ ನೋಡು ಭಾವನಾತ್ಮಕ ಅವಲಂಬನೆಯೂ ಇಲ್ಲ ಆಪ್ತವಾಗಿ  ಏನೋ ಹೇಳ್ಕೊಬೇಕು ಅನ್ಸೋದೇ ಇಲ್ಲ ಎದೆ ಬಂಡೆಯಾಗ್ತಿದೆ ಅನ್ನಿಸ್ತಿದೆ “ ಅಂತ ಗೆಳತಿಯೊಬ್ಬಳು ನಿರ್ಭಾವುಕವಾಗಿ ಹೇಳಿಕೊಳ್ಳುತ್ತಿದ್ದರೆ ….. ” ಹಾಗಾದರೆ ಬಂಡೆಯ ಮೇಲಿಂದ ಇಳಿಯುವ ಜಲಪಾತದಂತಹ ಭೋರ್ಗರೆತವೇನು ? ಭಾವುಕತೆಗೆ ಹುಟ್ಟಿದ ಕಣ್ಣೀರಲ್ಲವಾ” ಅಂತ  ಹೇಳಿ ಅವಳನ್ನು ಆ ನಿರ್ಲಿಪ್ತ ಭಾವದಿಂದ ಹೊರತರುವದಕ್ಕೆ ಪ್ರಯತ್ನಿಸುತ್ತಿದ್ದೆ… “ನಿಜ ಬಿಡು ಎಷ್ಟೇ ಕಲ್ಲಾಗಿದ್ದೇವೆಂದರೂ ಈ ಹೆಣ್ಣುಮಕ್ಕಳಿಗೆ ಕರಗೋದು ಅಭ್ಯಾಸ ….ಅತಿ ಭಾವುಕತೆ ಅನ್ನೋದು ಶಾಪ ನೋಡು” …ಅನ್ನುತ್ತ  ಕಣ್ಣಂಚಲಿ ಜಿನುಗುತ್ತಿರುವ ನೀರನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತಿದ್ದಳು … “ಇತ್ತೀಚೆಗೆ ತುಂಬಾ ಬದಲಾಗಿಬಿಟ್ಟೆ ನೀನು. ಭಾವನೆಗಳೇ ಇಲ್ಲ. ಎಲ್ಲಾ  ಯಾಂತ್ರಿಕ ಅನ್ನಿಸ್ತಿದೆ ನಂಗೆ ಸರಿಯಾಗಿ ಮಾತೇ ಆಡಲ್ಲ ಎಲ್ಲದಕ್ಕೂ ಸಣ್ಣ ಉತ್ತರ ಕೊಡ್ತಿ. ಊಟ ಮಾಡಿದ್ಯಾ ಅಂತನೂ ಕೇಳಲ್ಲ , ಬೇಜಾರಲ್ಲಿದ್ರೆ ಏನಾಯ್ತು ಅಂತನೂ ಕೇಳಲ್ಲ ಹೊಗ್ಲಿ ನೀನೂ ಏನೂ ಹೇಳ್ಕೊಳಲ್ಲ ನನ್ನತ್ರ. ನಾನೇ ಕೇಳ್ಕೊಂಡು ಬಂದಾಗ್ಲೂ ಅವಾಯ್ಡ್ ಮಾಡ್ತಿ ಎಲ್ಲಾ ಹೇಳ್ತಾ ಕೂರೋಕೆ ಟೈಮ್ ಇಲ್ಲ ಅಂತೀಯ  “ ಎನ್ನುತ್ತ ಅಳು ಮೋರೆ ಹಾಕಿಕೊಂಡು ಆಗಾಗ  ತಕರಾರು ತೆಗೆಯುತ್ತಿದ್ದ  ಅವಳಿಗೆ …”ಈ ಹೆಂಗಸರದ್ದು ಇದೇ ಆಯ್ತು ಕಿರಿಕಿರಿ  ..ಮಾಡೋಕೆ ಬೇರೆ ಕೆಲಸ ಇಲ್ವಾ?  ಮೂರೊತ್ತೂ ಇಂತದ್ದೇ ಆಯ್ತು  ಕೆಲಸಕ್ಕೆ ಬಾರದ ಭಾವನೆಗಳಂತೆ, ಅದಂತೆ ಇದಂತೆ ..ಹೇಳ್ಬೇಕಂತೆ ಕೇಳ್ಬೇಕಂತೆ , ಇವಳದ್ದೊಂದೇ ಪ್ರೀತಿ ಅಂತೆ ನಮಗಿಲ್ಲಿ ಸಾವ್ರ ಟೆನ್ಷನ್ನು. ಹುಷಾರಿಲ್ದಿದ್ರೆ ಟ್ಯಾಬ್ಲೆಟ್ ತಗೊಬೇಕು ಹಸಿವೆ ಆದ್ರೆ ಊಟ ಮಾಡ್ಬೇಕು ಏನು ಕಡಿಮೆ ಆಗಿದೆ  ನಿಂಗೆ ?  ಸರಿ ..ನನಗ್ಯಾವ ಭಾವನೆಯೂ ಇಲ್ಲ. ಒಪ್ಕೊತೀನಿ  ನಿನಗಿದೆಯಲ್ಲ ಏನು ಮಾಡ್ದೆ ? ಏನು ಸಾಧಿಸಿದೆ ಇಷ್ಟು ದಿನ ..? ಬೇಜಾರು ಮಾಡ್ಕೊಂಡು ಕೂತೆ , ಗಂಡ ಸತ್ತವರಂಗೆ ಮುಖ ಮಾಡ್ಕೊಂಡೆ. ನನಗೊಂದಿಷ್ಟು ಕಿರಿಕಿರಿ ಮಾಡ್ದೆ ಇಷ್ಟೇ ತಾನೇ …ಇನ್ನೇನಾದ್ರೂ ಆಯ್ತಾ .? ಹೋಗ್ಲಿ ಅಷ್ಟೊಂದು ಭಾವನೆ ಇರೊ ನೀನಾದ್ರೂ ಖುಷಿಯಿಂದ ಇದ್ಯಾ ? “ ಅಂತ ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಅವನನ್ನು ನಿರ್ಭಾವುಕವಾಗಿ ಸಹಿಸದೇ ಅವಳಿಗೆ ಬೇರೆ ದಾರಿಯಿರಲಿಲ್ಲ ಮತ್ತದೇ ವಾಸ್ತವವೂ ಕೂಡಾ  ಆಗಿರುತ್ತದಲ್ಲ …!! “ಅರೇ ಹೌದಲ್ವಾ ..? ಅವನಂದಿದ್ದೇ ಸರಿ ಏನುಪಯೋಗವಿದೆ ಅದರಿಂದ ? ನನಗೇನು ಕಮ್ಮಿ ಆಗಿದೆ? ನಾನೇ ಸರಿ ಇಲ್ಲ ನನ್ ಮನಸ್ಸೇ ಸರಿ ಇಲ್ಲ ಸಣ್ಣಪುಟ್ಟದಕ್ಕೂ ಕೊರಗ್ತೀನಿ. ಅತಿಯಾಗಿ ನಿರೀಕ್ಷೆ ಮಾಡ್ತೀನಿ ನಾಳೆಯಿಂದ ಬದಲಾಗ್ಬೇಕು ನಾನೂ” ಎಂದುಕೊಳ್ಳುತ್ತ ಕಣ್ಣೊರೆಸಿಕೊಂಡು , ಮುಖ ತೊಳೆದು ಮತ್ತೆ ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ ಅವಳು .. ಹೌದು  ಭಾವುಕತೆ ಅನ್ನೋದು ಹೆಣ್ಣಿಗೆ ಶಾಪ..ಭಾವುಕ ಮನಸ್ಸಿಗೆ ತನ್ನ ಸುತ್ತಲಿನ ಸಂಭಂದಗಳಲ್ಲಿ  ವಿನಾಕಾರಣ ನಿರೀಕ್ಷೆಗಳು, ಪುಟ್ಟ ಪುಟ್ಟ ಆಸೆಗಳು .. ಪ್ರೀತಿಸಿದ ಜೀವಗಳ ಅನುನಯಿಸಿ ಅನುಸರಿಸಿ, ಕೇಳಿ, ಹೇಳಿ, ಕಾಳಜಿ ಮಾಡಿ, ಸಮಯ ಕೊಡುತ್ತಾಳೆ. ಎಲ್ಲರ ನೋವಿಗೂ ಮಡಿಲಾಗುತ್ತಾಳೆ, ಹೆಗಲಾಗುತ್ತಾಳೆ, ಸುಮ್ಮನೇ ಕಿವಿಯಾಗುತ್ತಾಳೆ. ಭರವಸೆಯಾಗುತ್ತಾಳೆ .  ಆಮೇಲೆ ತನಗೂ ಒಂದಿಷ್ಟು ಅದೆಲ್ಲವೂ ಅನಾಯಾಸವಾಗಿ ಸಿಕ್ಕಲಿ ಅನ್ನೋ ಸಣ್ಣ ನಿರುಪದ್ರವಿ ಸ್ವಾರ್ಥ ಅವಳದ್ದು ..ನಿಸ್ವಾರ್ಥಿಯಾಗಿರೋಕೆ ಅವಳೇನೂ ದೇವರಲ್ವಲ್ಲ..!ಸಾಮಾನ್ಯ ಮನುಷ್ಯಳೇ ತಾನೆ ..? ಯಾವುದೂ ಪ್ರತಿಯಾಗಿ ಸಿಗುತ್ತಿಲ್ಲ ಕೊಟ್ಟಿದ್ದಷ್ಟೇ ಬಂತು ಅಂದಾಗ ಸಣ್ಣಗೆ ಅಡರಿಕೊಳ್ಳುವ ನಿರಾಸೆ… ಬದುಕು ಇಷ್ಟೇ ಬಿಡು ಅನ್ನೊ ನಿರ್ಲಿಪ್ತತೆ.  “ಸರಿ ನಾಳೆಯಿಂದ ಪಕ್ಕಾ ಪ್ರಾಕ್ಟಿಕಲ್ ಆಗೋಣ. ಇವೆಲ್ಲ ಕೆಲಸಕ್ಕೆ ಬಾರದ ಭಾವಗಳು ನಿರೀಕ್ಷೆಗಳನ್ನು ಮೀರಬೇಕು. ಇಲ್ದಿದ್ರೆ ಖುಷಿಯಿಂದ ಇರೋಕೆ  ಆಗಲ್ಲ ನನ್ನಿಂದ ಎಲ್ರಿಗೂ ಬೇಜಾರು ”  ಅಂದುಕೊಳ್ಳುತ್ತ  ಒಳಗೊಳಗೇ ನಿರ್ಧರಿಸಿ ಮತ್ತೊಂದು ಹೊಸ ಮುಂಜಾವಿಗೆ ತರೆದುಕೊಳ್ಳುವ ಹೊತ್ತಿಗೆ ನಿರೀಕ್ಷಿಸದೇ, ಕೇಳದೇ, ಒಂದು ಪ್ರೀತಿಯ ಭಾವನಾತ್ಮಕ ಸ್ಪಂದನೆ ,ಮಾತು,  ಸಿಕ್ಕಿಬಿಟ್ಟಿರುತ್ತದೆ .. ಆವತ್ತಿನ ಮಟ್ಟಿಗೆ ಅವಳು ಆಕಾಶದಲ್ಲಿನ ಹಕ್ಕಿ ‌…. ಮತ್ತೆ ಕರಗಿಬಿಡುತ್ತಾಳೆ .. ಖುಷಿ ಪಡದೇ ಇರೋಕೆ ಅವಳಿನ್ನೂ ಕಲ್ಲಾಗಿರುವದೇ ಇಲ್ಲವಲ್ಲ …! ಎಲ್ಲವೂ ಅಂದುಕೊಂಡಿರುತ್ತಾಳೆ ಅಷ್ಟೇ ಅವತ್ತೇ ಹೊಸದಾಗಿ ಬದುಕುತ್ತಿದ್ದೇನೆ ಅನ್ನೊ ಭಾವ . ನಿನ್ನೆ ಅಂದುಕೊಂಡಿದ್ದೆಲ್ಲ ಸುಳ್ಳು ಇವತ್ತಿನದೇ ಖುಷಿ ಅವಳ ಪಾಲಿಗೆ .. ನಿಜ..ಅಪ್ಪಟ ಭಾವುಕ ಮನಸ್ಸು ಅದು ಮನಸ್ಸು ಕಲ್ಲಾಗುವದೆಂದರೆ ಕರಗಿದಷ್ಟು ಸಲೀಸಲ್ಲ ನಿರ್ಭಾವವೆನ್ನುವದು ಸುಖಾಸುಮ್ಮನೇ ಮೆತ್ತಿಕೊಳ್ಳುವದಿಲ್ಲ. ಸ್ಮಶಾನದಂತಹ ಮೌನವು ವಿನಾಕಾರಣ ಅಡರಿಕೊಳ್ಳುವದೂ ಇಲ್ಲ ಆದರೂ ಅವಳು ಆಗಾಗ  ಮನಸ್ಸು  ಕಲ್ಲಾಗಿಸಿ ಏನನ್ನೂ ನಿರೀಕ್ಷಿಸದೇ ನಮ್ಮವರಿಗೆ , ಪ್ರೀತಿಪಾತ್ರರಿಗೆ  ನಗುವನ್ನಷ್ಟೇ ಹಂಚುವ ಸಾಹಸಕ್ಕೆ ಇಳಿಯುತ್ತಾಳೆ . ಆದರೆ … ಅವಳ ನಿರ್ಧಾರದ  ಹಿಂದೆ ಎಷ್ಟೊಂದು  ನಿರಾಸೆಗಳ ಪಟ್ಟಿಯಿರುತ್ತದೆ. ಗೊತ್ತಾ? ಪುಟ್ಟ ಪುಟ್ಟ ಭಾವಗಳ ಒರತೆಯೆಲ್ಲ ದಿವ್ಯ ನಿರ್ಲಕ್ಷ್ಯದಲಿ ಇಂಗಿ ಹೋದದ್ದಿರುತ್ತೆ . ಸಣ್ಣ ವಂಚನೆಯಿಂದ ಬೀಸಿ ಬಡಿದದ್ದಿರುತ್ತೆ ಉಡಾಫೆಯ ಉತ್ತರದಲ್ಲಿ ಮಾತೆಲ್ಲ  ಅರ್ಧಕ್ಕೇ ಮುಗಿಸಿದ ಅಸಹನೀಯ ಮೌನವಿರುತ್ತೆ ಅನಾದರವೆಂಬ ಅಗ್ಗಿಷ್ಟಿಕೆಯ ಬಿಸಿ ಇರುತ್ತೆ. ಪ್ರತೀ ಕೊಡುವಿಕೆಯಲ್ಲೂ ..ಬರೀ ಪಡೆದುಕೊಂಡಷ್ಟೇ ಸುಮ್ಮನಾಗಿಬಿಡುವ  ಸುತ್ತಲಿನ ಅದೆಷ್ಟೋ ಮನಸುಗಳ  ನಿರಾಕರಣೆ ಇರುತ್ತೆ. “ಭಾವುಕತೆಗಳೆಲ್ಲ ಬಂಡೆಯಂತಾಗುವದು ಹೀಗೇ ನೋಡು  ಗೆಳತೀ  ಎಲ್ಲ ಭಾವಗಳ ಭೋರ್ಗರೆತವನ್ನೂ   ಮೀರಿ ಅರ್ಥಮಾಡಿಸಿ, ನಾವೂ ಅರ್ಥೈಸಿಕೊಂಡು,  ಬದಲಾಗುವ ಹೊತ್ತಿಗೆ  ನಮಗೇ ಯಾವುದೂ ಬೇಡವನ್ನುವ ಪ್ರಭುದ್ದತೆ ಬಂದುಬಿಡುತ್ತದೆ. ಎಲ್ಲಾ ಮೀರಿ ತುಂಬಾ ಮುಂದೆ ಬಂದಿರ್ತೀವಿ  ನೊಡು” ಎಂದು  ನಿಟ್ಟುಸಿರುಬಿಟ್ಟ ಅವಳಿಗೆ ಉತ್ತರ ಕೊಡಲಾಗದೇ ಸೋತೆ… ಅವಳಿಗೊಂದಿಷ್ಟು ವಿನಾಕಾರಣ ಪ್ರೀತಿ ಬೇಕು, ಸುಮ್ಮನೆ ಕಾಳಜಿ ಬೇಕು,  ಸಣ್ಣಪುಟ್ಟ ಭಾವನಾತ್ಮಕ ಸಂಭಂದಗಳೇ ಅವಳನ್ನು ದಿನನಿತ್ಯ ಜೀವಂತವಾಗಿಡುವುದು. ಯಾವುದೇ ಸಂಭಂದವಿರಲೀ ಹಣ, ಆಸ್ತಿ ಏನನ್ನೂ  ಖರ್ಚು ಮಾಡದೆಯೇ ,  ಎಲ್ಲಿಯೋ  ದೂರ ಹೋಗಿ  ಕರೀದಿಸದೆಯೇ , ಯಾರಲ್ಲಿಯೂ ಕೈ ಚಾಚದೆಯೇ, ತುಂಬಾ ಸಮಯ ವ್ಯರ್ಥ ಮಾಡದೆಯೇ  ನಮ್ಮೊಳಗೇ ಸಿಗುವ ಇಂತಹ ಸಣ್ಣಪುಟ್ಟ ಪ್ರೀತಿಯನ್ನು ಪ್ರೀತಿಸಿದ ಜೀವಗಳಿಗೆ  ನಿರ್ಲಕ್ಷ್ಯ ಮಾಡದೇ  ಪ್ರಾಂಜಲವಾಗಿ ಕೊಟ್ಟುಬಿಟ್ಟರೆ , ಅವಳೂ ಖುಷಿಯಾಗಿ ನಿಮಗೂ ಖುಷಿಯನ್ನೇ ಹಂಚುತ್ತಾಳೆ . “ಏಕೆಂದರೆ  ಒಂದು ಭಾವುಕ ಮನಸ್ಸಿಗೆ ಪಡೆದದ್ದಕ್ಕೆ ದುಪ್ಪಟ್ಟು ಕೊಡುವದು ಕರಗತ” ..

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ಹುಡುಕಾಟದಲ್ಲಿ ನಾಗರಾಜ ಹರಪನಹಳ್ಳಿ ಉರಿ ಉರಿ ಬಿಸಿಲು ಎಲ್ಲಿ ಹುಡುಕಲಿ ಪ್ರೇಮವ ತಕ್ಷಣ ಕಂಡದ್ದು ನಿನ್ನ ಮೊಗದ ಮುಗುಳ್ನೆಗೆ ಆಸೆಯ ಬೆನ್ನು ಹತ್ತಿದೆ ಓಡಿದೆ ಓಡಿದೆ ದಣಿವರಿಯದೆ ಓಡಿದೆ ಕೊನೆಗೆ ಸಿಕ್ಕದ್ದು ದುಃಖ ಇನ್ನೆನು‌ ಮುಗಿಯಿತು ಅನ್ನುವಾಗ ಕಂಡದ್ದು ನಿನ್ನ ಮುಖದ ಮಂದಹಾಸ ಮೋಕ್ಷವನ್ನೇನು ಹುಡುಕಿ ಹೊರಡಲಿಲ್ಲ ನಾನು ಪ್ರೀತಿಯ ಹುಡುಕಿ ಹೊರಟಿದ್ದು ನಿಜ , ಆದರೆ ನೀ ಹೇಳಿದ ಬಯಲಿನಂತಹ ಪ್ರೀತಿ‌ ಈ ಹುಲುಮಾನವರಿಗೆ ಅರ್ಥವಾದೀತು ಹೇಗೆ ಗೌತಮ ಸಾವಿಲ್ಲದ ಮನೆಯ ಸಾಸಿವೆ ತರಲು ಸೋತದ್ದು ನಿಜ ನನ್ನ ತಾಯಿ ಆದರೆ ; ನಿನ್ನ ಒಗಟಿನ ಮಾತು ನಿಶಬ್ದ ಮೌನ ಅರ್ಥವಾದೀತು ಹೇಗೆ ಬುದ್ಧದೇವ ಮುಪ್ಪು , ಯೌವ್ವವ ; ಹಸಿವು ನಿನಗೆ ಅರ್ಥವಾದಂತೆ ಈ ಜಗದ ಕೇವಲ ಮನುಷ್ಯರಿಗೆ ಅರ್ಥವಾಗದವು ಕಾರಣ ಅವರು ಬದುಕಿನ ಅಶ್ವಾಶತೆಯ ಅರಿಯದ ಮರೆವಿನ ಮಹಾಪುರುಷರು ಬುದ್ಧ ನಾನಿನ್ನು ಬರುತ್ತೇನೆ ಸಾಕಾಗಿದೆ ಈ‌ ಜಗದ ಜಂಜಡ ನನಗೆ ಏಕಾಂತದ ಅರ್ಥ ಹುಡುಕಬೇಕಿದೆ ಜನರ ಗೊಂದಲಗಳ ಅರಿಯುತ್ತಲೇ… *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಎಂದೂ ಮರೆಯದಾ ಗುರುತು ರಜಿಯಾ ಕೆ.ಬಾವಿಕಟ್ಟೆ ಕಡಲ ಮೌನದಲಿ ನೆಮ್ಮದಿಯ ಕಾಣುವ ಭರವಸೆಯ ನಿರಾಳದಿ ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು. ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. . ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು. ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು. ಐವರ ಒಕ್ಕೂಟದಲಿ ನಾನೋಬ್ಬಳೇ ಪ್ರೀತಿಯ ಕುಸುಮ ನನ್ನನಗಲಿ ದೂರ ದೂರ ಹೋದರೆಲ್ಲ ಒಂದೇ ಕ್ಷಣ ಕ್ಷಣದಲಿ ನಿಮಗಿದು ಸರಿನಾ? ನನ್ನ ಹೆತ್ತ ಒಡಲಿಗೆ ಯಾರು ಸಾಂತ್ವನ ನೀಡುವರು ಹೇ ದೈವವೇ ? ತಾಯಿಯ ನೋವಿಗೆ ನಾ ಅದೆಷ್ಟೋ ಸಹಕರಿಸಲಿ. ಮಸಣ ಮಾಳಿಗೆಯನ್ನೇ ಸೃಷ್ಟಿಸಿದೆಯಲ್ಲಾ‌ ಈ ಬದುಕಲಿ. ಅಳಿದುಳಿದ ಈ ಬದುಕಿಗೆ ಇನ್ನೂ ಯಾಕೇ ಬದುಕುವ ಹಂಗು ನೀನೇ ಕೊಟ್ಟ ಖುಷಿಗೆ ನೀನೇ ಕೊಳ್ಳಿ ಇಟ್ಟ ಮೇಲೆ ಇನ್ನೂ ಯಾಕೇ ಈ ಉಸಿರು ಹರಸಿ ಕರೆದೊಯ್ದದರು ಸರಿಯೇ ಇನ್ನೂ ಒಲ್ಲದ ಈ ಜೀವನ. ಆ ಕಡಲ ಮೌನದಲಿ ನಾ ನಿತ್ಯವೂ ರೋಧಿಸುವೇ ಕಂಬನಿಯನು ಧಾರೇ ನೀಡುವೆ ಅದು ಎಂದೂ ನನ್ನ ಕತೆಗೆ ಉತ್ತರಿಸಲೇ ಇಲ್ಲ . ನನ್ನಾಧಿ ಒಡಲಿಗೆ ಕಡಲು ಭೊರ್ಗರಿಸಿ ಒಡೆಯುದಷ್ಟೇ | ವಿನಹ ನನ್ನ ಪ್ರಶ್ನೇಗೆ ಎಂದೂ ಮೌನ ಮುರಿಯಲೇ ಇಲ್ಲ . ಇನ್ನೂ ನಾ ಜೀವಂತ ಶಿಲೆ ಅಷ್ಟೇ ಹೊರತು ಭಾವಗಳನು ಸಂಭ್ರಮಿಸೊ ಸಡಗರಿಸೂ ಮನವಾಗಲಾರೆನೂ ಎಂದಿಗೂ ಎಂದೆಂದಿಗೂ …… ಪದ್ಮರಾಗ….. ******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ: ಕು.ಸ.ಮಧುಸೂದನ ಮಲಯಾಳಂ: ಚೇತನಾ ಕುಂಬ್ಳೆ ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ! ಅದೊಂದು ಮನೆಯಿತ್ತು ನನ್ನದೂ ನನ್ನ ಅಪ್ಪಚ್ಚನ ಕಾಲದ್ದು ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ ನನ್ನನ್ನೂ ಅಪರಿಚಿತ ಊರಲ್ಲಿ ಪರದೇಸಿಯಾಗಿಸಿದ ನಂತರವೂ ಮೊಮ್ಮಗ ಬರುತ್ತಾನೆಂದು ಸಾಯುವ ತನಕ ಕಾವಲು ಕಾಯುತ್ತಿದ್ದ ಮುದುಕ ಅಷ್ಟು ವರುಷ ಇಲ್ಲದ್ದು ಮೊನ್ನೆ ಕಾಲುಜಾರಿ ಮನೆಯ ಹಿಂದಿನ ಅದೇ ಹಳೆಯ ಬಾವಿಗೆ ಬಿದ್ದು ಸತ್ತು ಹೋದನಂತೆ! ವಿಷಯ ಕಿವಿಗೆ ಬಿದ್ದು ಬೇಜಾರೆನಿಸಿದರೂ ಕರೆದಾಗವನು ಹೋಗಿಬಿಡಬೇಕಿತ್ತು ನನ್ನದೆನ್ನುವ ಅದೊಂದು ಮನೆಯನ್ನುನನ್ನದಾಗಿಸಿಕೊಳ್ಳಲು. ಅನ್ನುವುದಕಿಂತಲೂ ಕತ್ತರಿಸಿ ಹೋಗಿದ್ದ ಕರುಳು ಬಳ್ಳಿಗಳ ಮತ್ತೆ ಬೆಸೆದುಕೊಳ್ಳುವ ಸಲುವಾಗಿಯೆನ್ನಬಹುದೇನೊ! ಕೊನೆಯ ಗಳಿಗೆಯವರೆಗು ಕೈಲಿ ಹಿಡಿದ ಕೋಲಿಂದ ಮನೆಯಷ್ಟು ಮೂಲೆಗಳನ್ನು ತಟ್ಟುತ್ತ ತನ್ನಿರುವಿಕೆಯನ್ನು ಕಿಟಕಿ ಬಾಗಿಲು ಗೋಡೆಗಳಿಗೆ ತಿಳಿಯ ಪಡಿಸಿ ಬದುಕುತ್ತಿದ್ದವನ ಕೂಗಿಗೆ ಕಿವಿಗೊಟ್ಟು ಒಮ್ಮೆ ಹೋಗಿಬರಬಹುದಿತ್ತೆನಿಸಿದ್ದರೂ ಹುಟ್ಟಿದಾಗಿನಿಂದ ಒಮ್ಮೆ ಮಾತ್ರ ನೋಡಿದ್ದ ಆ ಮನೆ ನನಗೆ ಯಾವತ್ತಿಗೂ ಅಚ್ಚನಂತೆಯೇ ಅಪರಿಚಿತವಾಗುಳಿದಿತ್ತು. ಅಮ್ಮನನ್ನು ಹೊಸಿಲೊಳಗೆ ಬಿಟ್ಟುಕೊಳ್ಳದಾ ಮನೆ ನನಗೂ ಬೇಡವೆನಿಸಿತ್ತು,ನಿಜ! ಆದರೂ ಸೋದರತ್ತೆ ಮೊನ್ನೆ ಕರೆಮಾಡಿ ಮುದುಕ ಬಲು ಘಾಟಿ ಸಾಯುವ ಮೊದಲು ಮನೆಯನ್ನ ಕಾನೂನಿನ ಪ್ರಕಾರ ನಿನ್ನ ಹೆಸರಿಗೇ ಬರೆದಿಟ್ಟಿದ್ದಾನೆ. ಈಗ ಬೇರೆ ದಾರಿಯಿಲ್ಲ ನಿನಗಾದರು ನೀನಿರುವ ಊರಿನಲ್ಲಿ ಏನಿದೆ? ಮನೆಯಾ?ಮಠವಾ? ಹೇಳಿಕೊಳ್ಳಲೊಂದು ನೆಲೆಯ? ಸುಮ್ಮನೆ ಇಲ್ಲಿಗೇ ಬಂದು ಬಿಡು ಖಾಲಿ ಮನೆ ಬಹಳ ಕಾಲ ಹಾಳು ಬಿಡಬಾರದು! ನೀನೊ ನಮ್ಮೆಲ್ಲರ ತೊರೆದುಕೊಂಡಂತೆ ಅಲ್ಲಿನ ಕನ್ನಡದ ಹುಡುಗಿಯನ್ನೇ ಮದುವೆಯಾಗಿದ್ದೀ. ಪಾಪ! ಅವಳಾದರುಹೇಗೆ ಬಂದು ಬದುಕಿಯಾಳು ಬಾಷೆ ಗೊತ್ತಿರದ ಊರಲ್ಲಿ ಇಲ್ಲೇ ಶಾಶ್ವತವಾಗಿ ನೆಲೆಯೂರಲು ನಿನಗಿಷ್ಟವಾಗದಿದ್ದರೆ ಕೊನೆ ಪಕ್ಷ ಮನೆಮಾರಿ ದುಡ್ಡು ತೆಗೆದುಕೊಂಡು ಹೋಗು ಊರಿನಿಂದ ಹೊರಗಿರುವ ಮನೆಯೆಂದು ಬೆಲೆ ಕಡಿಮೆ ಕೇಳಬಹುದು ಜನ ಅಷ್ಟ್ಯಾಕೆ ಮಾತು ನಮ್ಮದನ್ನು ಬೇರೆಯವರ ಕೈಗೊಪ್ಪಿಸಲು ನನಗೂ ಸಂಕಟವಾಗುತ್ತೆ ಎಷ್ಟೆಂದರು ನಿನ್ನಪ್ಪನ ಜೊತೆ ನಾನೂ ಆಡಿಬೆಳೆದ ಮನೆಯದು ನಾನೇ ಅದನ್ನು ಕೊಳ್ಳುತ್ತೇನೆ ಅಮೇರಿಕಾದಲ್ಲಿರುವ ಮೊಮ್ಮಕ್ಕಳಿಗೆ ಸ್ವದೇಶದಲ್ಲಿ ಒಂದು ಅಸ್ತಿಯಂತಾದರು ಆಗುತ್ತದೆ ನೀನೇನು ಹೆದರಬೇಡ ಮಾರುಕಟ್ಟೆಯ ದರವನ್ನೇ ಕೊಡುತ್ತೇನೆ. ನಮ್ಮ ಸುಭದ್ರ ಚೇಚಿ ಗೊತ್ತಲ್ಲ ಅವಳ ಮಗನೀಗ ಈ ಊರಲ್ಲೇ ದೊಡ್ಡ ಬ್ರೋಕರ್ ಇಂತಾ ದಿನ ಬರುತ್ತೇನೆಂದು ಹೇಳು ಸಾಕು ಪತ್ರ ಹಣ ಎರಡನ್ನು ರೆಡಿ ಮಾಡಿಸಿಡುತ್ತೇನೆ ಬೇಕೆಂದಾಗ ನೀನು ಬಂದುಹೊಗುವುದನ್ನೂ ಮಾಡಬಹುದು. ಎಷ್ಟೆಂದರೂ ನೀನು ನನ್ನ ಮಗನ ಹಾಗಲ್ಲವೇ ನಿನ್ನ ಅಚ್ಚ ಬದುಕಿದ್ದಿದ್ದರೆ ಈ ಮಾತುಗಳನ್ನು ನಾನು ಆಡಬೆಕಿರಲಿಲ್ಲ, ನೋಡು. ಸೋದರತ್ತೆಯ ಮಾತುಗಳು ಯಾರೋ ಅಪರಿಚಿತ ವ್ಯಾಪಾರಸ್ಥನೊಬ್ಬನ ಮಾತಿನ ಹಾಗೆ ಕೇಳಿಸಿ ಏನೂ ಮಾತಾಡದೆ ಪೋನಿಟ್ಟೆ ಅಚ್ಚ ಬದುಕಿದ್ದರೆ ಅಂದ ಮಾತು ಮಾತ್ರ ಕಿವಿಯಲ್ಲುಳಿದು ಹೋಯಿತು.! ==== അപ്പച്ഛൻ്റെ ആ ഒരു വീടും എൻ്റെ അമ്മായിയും അപ്പച്ഛൻ്റെ ആ ഒരു വീടും എൻ്റെ അമ്മായിയും*അതൊരു വീട് എൻ്റെയുംഎൻ്റെ അപ്പച്ഛൻ്റെ കാലത്തെ. അവരെ ധിക്കരിച്ച് വീട് വിട്ടിറങ്ങി വന്ന അച്ഛൻപിന്നൊരിക്കലും തിരിച്ചു പോകാതെ മരിച്ചു പോയി.എന്നെയും അന്യ നാട്ടിലേക്കയച്ച ശേഷവും കാവലിരുന്നു വൃദ്ധൻ ആ വീടിന്.മിനിഞ്ഞാന്ന് കാൽ വഴുതി വീടിൻ്റെ പിന്നിലുള്ള പഴയ കിണറിൽ വീണ് മരിച്ചു. വിവരമറിഞ്ഞപ്പോൾ സങ്കടം തോന്നി. വിളിച്ചപ്പോൾ പോകാമായിരുന്നു.എൻ്റേതെന്ന് പറയുന്ന വീട് സ്വന്തമാക്കാനല്ലെങ്കിലുംവേർപെട്ട പൊക്കിൾക്കൊടി ബന്ധത്തെ കൂട്ടിയോജിപ്പിക്കാനെങ്കിലും. അവസാന നിമിഷം വരെ കൈയിൽ പിടിച്ച ഊന്നു വടികൊണ്ട്വീടിൻ്റെ ഓരോ കോണിലുംശബ്ദമുണ്ടാക്കി തൻ്റെ സാന്നിധ്യംജനാലകൾക്കും വാതിലുകൾക്കും ചുമരുകൾക്കും അറിയിച്ചുകൊണ്ട്ജീവിച്ചവൻ്റെ വിളി കേട്ട് ഒന്ന് പോയ് വരാമായിരുന്നു.ജനിച്ചപ്പോൾ ഒരു നോക്ക് കണ്ട വീട്അച്ഛനെപ്പോലെ അപരിചിതമായിരുന്നു. എപ്പോഴുംഅമ്മയെ പടി കയറാൻ അനുവദിക്കാത്ത വീട്എനിക്കും വേണ്ടെന്ന് തോന്നിയത് സത്യം. എന്നിട്ടും അമ്മായി വിളിച്ചറിയിച്ചുവൃദ്ധൻ മരിക്കുന്നതിൻ മുമ്പ് വീട് നിയമപരമായി നിന്റെ പേരിൽ എഴുതി വെച്ചിട്ടുണ്ട്. ഇപ്പോൾ വേറെ വഴിയില്ല. നിനക്ക് ആ നാട്ടിൽ എന്തുണ്ട്വീടോ, പറമ്പോ താമസിക്കാനൊരു തരി മണ്ണോ?നീ ഇങ്ങോട്ട് തിരിച്ച് വാ,അധിക നാൾ വീട് പൂട്ടിയിടരുത്.നീ നമ്മളിൽനിന്നും അകന്നത്പോലെഅവിടുത്തെ കന്നടക്കാരിയെ വിവാഹം കഴിച്ചുപാവം ! അവളാണെങ്കിലും എങ്ങനെ ജീവിക്കും ഭാഷയറിയാത്ത ഈ നാട്ടിൽ. ഇവിടെ സ്ഥിര താമസത്തിന് നിനക്കിഷ്ടമല്ലെങ്കിൽവീട് വിറ്റ് പണം വാങ്ങി പോയ്ക്കോനാട്ടിൻ പുറത്തുള്ള വീട് ആൾക്കാർകുറഞ്ഞ വിലയ്ക്ക് ചോദിക്കും .നമ്മുടെ സ്ഥലം അന്യാധീനപ്പെടുന്നത് എനിക്ക് സങ്കടമാണ്.എന്നിരുന്നാലും നിൻ്റച്ഛനും ഞാനുംകളിച്ചു വളർന്ന വീടാണത്. ഞാൻ തന്നെ ആ വീട് വാങ്ങാം.അമേരിക്കയിലുള്ള പേരക്കുട്ടികൾക്ക് സ്വന്തം നാട്ടിൽ ഒരു വീടും പറമ്പും ഉണ്ടെന്ന് പറയാമല്ലോ.നീയൊന്നുകൊണ്ടും പേടിക്കേണ്ടമാർക്കറ്റ് വില തന്നെ നൽകാം ഞാൻ.നമ്മുടെ സുഭദ്ര ചേച്ചിയുടെ മകൻഇപ്പോൾ ബ്രോക്കരാണ്.ഇന്ന ദിവസം വരുമെന്ന് പറഞ്ഞാൽപേപ്പറുകളും പണവും റെഡിയാക്കി വെക്കാം.നിനക്ക് തോന്നുമ്പോഴൊക്കെ വന്ന് പോകാം.നീയെൻ്റെ മകനെപ്പോലെയാണ്. നിൻ്റെ അച്ഛൻ ജീവിച്ചിരുന്നുവെങ്കിൽഈ വാക്കുകൾ ഞാൻ പറയുമായിരുന്നില്ല. അമ്മായിയുടെ വാക്കുകൾ ഏതോ അപരിചിതൻ്റെ വാക്കുകളെപ്പോലെ തോന്നിയപ്പോൾഒന്നും പറയാതെ ഫോൺ വെച്ചു. അച്ഛൻ ജീവിച്ചിരുന്നുവെങ്കിൽ ഏന്ന വാക്ക് മാത്രം കാതിനുള്ളിൽ തങ്ങിനിന്നു. മുലം : കസു മധുസൂധനതർജ്ജമ: ചേതനാ കുംബള ************

ಅನುವಾದ ಸಂಗಾತಿ Read Post »

ಇತರೆ

ಪ್ರಸ್ತುತ

೧೯೭೫ ರ ತುರ್ತು ಪರಿಸ್ಥಿತಿ ಮತ್ತು ಇಂದಿನ ಲಾಕ್ ಡೌನ್…   ಅಂದಿಗೆ ಹೋಲಿಸಿದರೆ ಇಂದಿನ ಸ್ಥಿತಿ ಭೀಕರ, ಭಯಾನಕ. ಅಂದಿನ ಪ್ರಧಾನಿಯ ಖುರ್ಚಿ ಅಲುಗಾಡ ತೊಡಗಿದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು, ಸರ್ಕಾರದ ವಿರುಧ್ಧ ಯಾರೂ ಮಾತನಾಡುವಹಾಗಿರಲಿಲ್ಲ. ಆದರೆ, ಜನಸಾಮನ್ಯರ ಬದುಕು ಎಂದಿನಂತೆ ಸಾಗಿತ್ತು, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆ ಇರಲಿಲ್ಲ;  ಬದುಕಿನ ಆರ್ಥಿಕ ಅಭದ್ರತೆ ಯಾರನ್ನೂ ಕಾಡಿರಲಿಲ್ಲ.  ಇಂದಿನ ಸ್ಥಿತಿಯ ಹೆಸರು ಲಾಕ್ ಡೌನ್, ಜನರ ಜೀವ ಉಳಿಸಲು ಅನುಸರಿಸುವ ವಿಧಾನವೆಂದು ಹೇಳಿ ನಂಬಿಸಲಾಗುತ್ತಿದೆ.ಜನರ ವೈಯುಕ್ತಿಕ ಬದುಕನ್ನೂ ನಿಯಂತ್ರಿಸುತ್ತಿರುವ ಇದು ಅಂತರಾಷ್ಟ್ರೀಯ ಸಂಚಿನ ಒಂದು ಭಾಗ ಎಂಬುದು ಜನಸಾಮನ್ಯರಿಗೆ ತಿಳಿಯದ ರೀತಿಯಲ್ಲಿ ಭಯ ಸೃಷ್ಟಿಸಲಾಗಿದೆ. ದಿಕ್ಕೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ನುಚ್ಚು ನೂರಾಗಿರುವ ವೈಯುಕ್ತಿಕ ಅರ್ಥಿಕ ಬದುಕು, ಕೋಟ್ಯಾಂತರ ಕಾರ್ಮಿಕರ ವಲಸೆಯ ಮಹಾಪರ್ವ ಮುಂತಾದ ಸಂಕಷ್ಟಗಳಿಗಿಂತ ಬೆರಳೆಣೆಕಿಯ ಶ್ರೀಮಂತರ ಹಿತರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದೆ. ಎರಡು ತಿಂಗಳಿನಿಂದ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳು  ಮಧ್ಯಮ ವರ್ಗದವರನ್ನು ನಾಳಿನ ಬದುಕಿನ ಕುರಿತು ಭಯ ಭೀತರಾಗುವಂತೆ ಮಾಡಿದೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಕಾರ್ಮಿಕರು ಉದ್ಯೋಗವಿಲ್ಲದೇ, ಆದಾಯದ ಮೂಲವೂ ಇಲ್ಲದೇ ಬಳಲುತ್ತಿದ್ದಾರೆ. ಅಂದು ಉತ್ತರ ಭಾರತದ ಕೆಲೆವೆಡೆ ಜನಸಾಮನ್ಯರ ಮೇಲೆ ಸಂತಾನ ನಿಯಂತ್ರಣದ ಬಲತ್ಕಾರದ ಹೇರಿಕೆ ನಡೆದಿತ್ತು, ಇಂದು   ಮಿತಿಮೀರಿರುವ ಅಧಿಕಾರಿಗಳ ದರ್ಪ, ಭ್ರಷ್ಟಾಚಾರಗಳನ್ನು ತಮ್ಮ ಜೀವ ರಕ್ಷಣೆಯ ಕಸರತ್ತು ಎಂದು  ಜನರು ನಂಬುವಂತೆ ಮಾಡಲಾಗಿದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಶುದ್ಧ ವಾಯು ಸೇವನೆಗೂ ಅವಕಾಶ ನೀಡದೇ ವಯಸ್ಕರನ್ನು, ಮಕ್ಕಳನ್ನು ಅಮಾನವಿಯ ರೀತಿಯಲ್ಲಿ ಗೃಹಬಂಧಿಯಾಗಿಸಲಾಯಿತು. ಮನೆಯಿಂದ ಹೊರಬಂದರೆ ಕೊರೊನಾ ಪೀಡಿತರಾಗುತ್ತರೆಂಬ ಅತಾರ್ಕಿಕ, ಅನಗತ್ಯ ಭಯ ಪ್ರಚಾರ ಮಾಡಲು ಮಾಧ್ಯಮಗಳೂ ಕೈ ಜೋಡಿಸಿವೆ.  ಅಂದು ಮಾಧ್ಯಮಗಳನ್ನು ಬೆದರಿಸಿ ನಿಯಂತ್ರಿಸಲಾಗಿತ್ತು; ಇಂದು  ಅವರನ್ನು ಖರೀದಿಸಲಾಗದಿದ್ದರೆ ಬೆದರಿಕೆ ಒಡ್ಡಲಾಗುತ್ತಿದೆ,ಸಾಮಾಜಿಕ ಜಾಲತಾಣಗಳ ಮೂಲಕ ಅಪಹಾಸ್ಯ, ಬೆದರಿಕೆಯ ತಂತ್ರದ ಬಳಕೆ ನಡೆದಿದೆ.  ಅಂದು ಉದ್ಯಮಿಗಳಿಗೆ ಭೂಮಿ ನೀಡುವ ಸಲುವಾಗಿ ಜನರಿಂದ ಒತ್ತಾಯದಿಂದ ಕಸಿದುಕೊಳ್ಳಲಾಯಿತು; ಇಂದು ನೊಂದ ಜನರಿಗೆ ಸಹಾಯ ಮಾಡುವ ಸೋಗಿನಲ್ಲಿ ದೇಶದ ಅರ್ಥ ವ್ಯವಸ್ಥೆಯ ಹಿಡಿತವನ್ನು ಕೆಲವೇ ವ್ಯಕ್ತಿಗಳ ಹತೋಟಿಗೆ ನೀಡಲು ಅಗತ್ಯವಾದ ಕಾನೂನು ತಿದ್ದುಪಡಿಗಳನ್ನು, ಘೋಷಣೆಗಳನ್ನು ಈ ಅವಧಿಯಲ್ಲೇ ಮಾಡಲಾಗುತ್ತಿದೆ.     ಬ್ಯಾಂಕುಗಳಿಂದ ಸಾಲನೀಡಿಕೆಯ ಹೆಚ್ಛಳವೇ ಸರ್ಕಾರದ ಸಹಾಯ, ಸ್ವಾವಲಂಬನೆಯ ಕನಸನ್ನು ಘೋಷಣೆಗೆ ಸೀಮಿತಗೊಳಿಸಿ, ವಿದೇಶಿ ಕಂಪನಿಗಳಿಗೆ ಸ್ವಾಗತ ಕೋರುತ್ತಾ, ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಅವಕಾಶವನ್ನು ಬೆರೆಳೆಣಿಕೆಯ ವ್ಯಕ್ತಿಗಳಿಗೆ ನೀಡುತ್ತಿರುವದನ್ನು ಕಂಡೂ ಜೈಕಾರ ಹಾಕುತ್ತಿರುವವರು ತಮ್ಮ ಬುದ್ಧಿಗೂ ಲಾಕ್ ಡೌನ್ ವಿಧಿಸಿಕೊಡಿದ್ದರೆನೋ?   ಅಂದು ಅಧಿಕಾರಿಗಳ ದರ್ಪ ಮತ್ತು ಕಾಂಗ್ರೆಸ್ ಪುಢಾರಿಗಳ ಹಾರಟದ ಹೊರತಾಗಿ ಹೆಚ್ಚಿನ ಬಿಸಿ ದಕ್ಷಿಣ ಭಾರತದಲ್ಲಿ ತಗಲಲೇ ಇಲ್ಲ. ಇಂದು ದೇಶದ ಪ್ರತಿಯೋರ್ವ ವ್ಯಕ್ತಿಯೂ ಲಾಕ್ ಡೌನ್ ನಿಂದ ಪೀಡಿತನಾಗಿದ್ದಾನೆ.   ಕೊರೊನಾದೊಂದಿಗೆ ಬದುಕಲು ಕಲಿಯಬೇಕೆಂಬ ಉಪದೇಶ ನೀಡಲು ಇಷ್ಟೊಂದು ಅನಾಹುತ ಘಟಿಸಬೇಕಿತ್ತೇ?    ಇದೂ ಕೂಡಾ ಬಂಡವಾಳಶಾಹಿ ಶೋಷಣೆಯ ಒಂದು ವಿಧ;ಯಾಕೆಂದರೆ, ಭಾರತದ ಸರ್ಕಾರವನ್ನು ಇಂದು ನಡೆಸುತ್ತಿರುವವರು ಕೆಲವೇ ಕೆಲವು ಉದ್ಯಮಿಗಳು /ಬಂಡವಾಳಶಾಹಿಗಳು ಹಾಗೂ ಅವರಿಂದ ಖರೀದಸಲ್ಪಟ್ಟ ಅಧಿಕಾರಿಗಳು; ಎದುರಿಗೆ ಕಾಣುವ ರಾಜಕಾರಣಿಗಳು ಸೂತ್ರದ ಗೊಂಬೆಗಳು ಹಾಗೂ ಲೂಟಿಯ ಚಿಕ್ಕ ಪಾಲುದಾರರು. *************** ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-04 Clinicಲ್ಲಿ ಸಿಕ್ಕ ಕಮಲ ಆಂಟಿ ನೋಡಿ ಆಶ್ಚರ್ಯವಾಗಿತ್ತು………. ಆ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಮಳೆ ಬೀಳುತ್ತಿತ್ತು. ನಾನು ಕೆಲಸಕ್ಕೆ ನಡೆದುಕೊಂಡೆ ಹೋಗಬೇಕಾಗಿದ್ದರಿಂದ ಹಲವು ಬಾರಿ ಭಾರಿ ಮಳೆಗೆ ತೋಯಿಸಿಕೊಂಡಿದ್ದರ ಪರಿಣಾಮವಾಗಿ ನನಗೆ ಮೂಗಿನಲ್ಲಿ ಸಿಂಬಳ ಬರಲಿಕ್ಕೆ ಶುರುವಾಗಿತ್ತು. I mean ನೆಗಡಿ ಆಗಿತ್ತು ಅಂತ ನಿಮ್ಮ ಮಾತಿನಲ್ಲಿ ತಿಳಿಯಬಹುದು.       ನೀವು ತಿಳಿದಾಗೆ, ನಾನು ಬರಿ ನೆಗಡಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಮನುಷ್ಯನಲ್ಲ! ಯಾವಾಗಲೂ ಅತ್ಯಂತ ಚುರುಕುತನದಿಂದ ಬೆಂಗಳೂರು ನಗರವನ್ನೇ ಸುತ್ತುತ್ತಿದ್ದ ನನ್ನ ಕಾಲುಗಳು ಯಾಕೋ ಸುಸ್ತಾದಂತೆ ಕಾಣುತ್ತಿದ್ದವು. ಏನಾದರೂಂದು ಗೀಚೂತಿದ್ದ  ನನ್ನ ಕೈಗಳು ಜಡತ್ವವಾಗಿದ್ದವು! ತಲೆಯು ಭೂಮಿ ಸುತ್ತಿದಂತೆ ಸುತ್ತುತ್ತಿತ್ತು, ಕಣ್ಣುಗಳು ಮುಂಜಾನೆಯ ಮಂಜು ನೋಡಿದಂತೆ ಪ್ರತಿ ವಸ್ತುವನ್ನು ತೀಕ್ಷ್ಣವಾಗಿ ನೋಡುತ್ತಿದ್ದವು. ಏಡ್ಸ್ ರೋಗವು ನಾನು ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಹೊಂದಿರುತ್ತವೆ ಎಂದು ಎಲ್ಲೋ ಓದಿದ್ದ ನೆನಪುಗಳೇ ನನ್ನ hospital ಗೆ ದೂಡಿಕೊಂಡು ಹೋಗುವಂತೆ ಮಾಡಿದ್ದವು. ಅದಲ್ಲದೆ ನಾನು ಕೆಲವು ತಿಂಗಳ ಹಿಂದೆ ಸುಜಾತ ಅಂಟಿ ಮನೆಗೆ ಹೋದಾಗ ಅಲ್ಲಿ ಆಕೆಯ ಗಂಡನ ಕಾಯಿಲೆಯ ವೈರಸ್ ನನಗೆ ತಗುಲಿತಾ! ಎಂದು ಭಯಭೀತನಾಗಿದ್ದೆ. ಅದಾದ ನಂತರವೇ ನನಗೆ ಗೊತ್ತಾಗಿದ್ದು. ಏಡ್ಸ್ ಅಂಟು ರೋಗ ಅಲ್ಲ. ಏಡ್ಸ್ ರೋಗಿ ಜೊತೆ ಒಂದೆ ತಟ್ಟೆಯಲ್ಲಿ ಉಂಡರು ಆ ಖಾಯಿಲೆ ನಮಗೆ ಅಂಟಿ ಕೊಳ್ಳುವುದಿಲ್ಲ ಎಂದು ಗೊತ್ತಾಗಿದ್ದು. ಏನೇ ಆಗಲಿ ನಾನು ಖಾಲಿ ನೆಗಡಿಗೆನೆ hospitalಗೆ ಹೋದ್ನಾ…..! ಅಂತ ಇವತ್ತಿಗೂ ನನ್ನ ಮೇಲೆ ನನಗೆನೆ ನಾಚಿಕೆ ಆಗುತ್ತೆ. ಇಂತಹ ಸಿಲ್ಲಿ ವಿಚಾರಗಳನ್ನು ನೆನಪಿಸಿ ಕೊಂಡಾಗ ಯಾರು ಇಲ್ಲದ ಸ್ಥಳದಲ್ಲಿ ಹಾಗಾಗ ಒಬ್ಬನೆ ನಕ್ಕು ಸುಮ್ಮನಾಗಿ ಬಿಡುತ್ತೇನೆ.      Doctor ಹತ್ರ ತೋರಿಸಿಕೊಂಡು ಹೊರಗಡೆ ಬರುತ್ತಿರುವಾಗ ಅಲ್ಲೇ ಒಂದು ಮೂಲೆಯಲ್ಲಿ ಇದ್ದ medical shop ನ ಹತ್ತಿರ ಕಮಲ ಆಂಟಿ ಎದುರಿಗೆ ಸಿಕ್ಕಳು. ನನ್ನ ನೋಡಿದವಳೇ “ಏನು ಗಾಳೇರ ಇಲ್ಲಿ” ಎಂದಾಗ. ನನ್ನ ಆಶ್ಚರ್ಯದಾಯಕ ವಿಚಾರಗಳೆನ್ನೆಲ್ಲಾ ಅನಿವಾರ್ಯವಾಗಿ ಬದಿಗೊತ್ತಿ ಅವಳ ಜೊತೆ ಮಾತಿಗಿಳಿದೆ.”ಆ ಅಂಟಿ ಸ್ವಲ್ಪ ಆರಾಮಿರಲಿಲ್ಲ, doctor ಕಾಣೋಣ ಅಂತ ಬಂದೆ”. ಆಗೆ ಹೇಳುವಾಗ ನಾನು ಅವಳ ಕೈಯಲ್ಲಿ ಇದ್ದ x-ray card ನೋಡಿ ಮತ್ತೆ ಅವಳ ಹಿಂದಿನ ಚರಿತ್ರೆಯ ಬಗ್ಗೆ ಜಾರಿದೆ.      ಕಮಲಾ ಅಂಟಿ ನೋಡಲು ಅಷ್ಟೇನು ಬಣ್ಣ ಇರಲಿಲ್ಲ. ಸರಿಸುಮಾರು ಮೂವತ್ತೈದರ ಆಜುಬಾಜಿನ ಕಪ್ಪು ಸುಂದರಿ ಕಮಲ ಆಂಟಿ,  ಸಾಧಾರಣ ಎತ್ತರ ಹೊಂದಿದ್ದ ಅವಳ ದೇಹ… ಮೈಕಟ್ಟು ಮಾತ್ರ ಎಂತಾ ಬ್ರಹ್ಮಚಾರಿಯನ್ನದಾರು ತನ್ನತ್ತಾ ಸೆಳೆದುಕೊಳ್ಳುವ ಆಕರ್ಷಕ ಮೈಮಾಟ ಹೊಂದಿದ್ದಳು. ಒಂದು ರೀತಿಯಲ್ಲಿ ಪುರಾಣದ ಕತೆಯಲ್ಲಿ ಹೇಳಿದಂತೆ ಹೇಳುವುದಾದರೆ ಗಜನಿಂಬೆ ಎಂದು ಕರೆಯಬಹುದು. ಇಂತ ಕಮಲಾ ಅಂಟಿಗೆ ಸೋತವರೆಷ್ಟೋ ಲೆಕ್ಕವೇ ಇಲ್ಲ. ಪಟ್ಟಿ ಮಾಡಿದರೆ ಪ್ರಕಾಶ, ಮಹೇಶ, ನಂದೀಶ್, ಬಸವ, ಚೆನ್ನ, ಒಬ್ರ… ಇಬ್ರಾ…..!     ಆದ್ರೆ ಈ ಅಂಟಿ ಅವರ್ಯಾರಿಗೂ ಸೆರಗು ಹಾಸಿರಲಿಲ್ಲ ಎನ್ನುವುದು ನನ್ನ ಸ್ನೇಹಿತರು ಆಗಾಗ ಹೇಳುತ್ತಿದ್ದರು. ಗಂಡನಲ್ಲದ ಪರಪುರುಷನ ಜೊತೆ ಇವಳ ಸಂಬಂಧ ಇದೆ ಎಂದು ತಿಳಿದಾಗ, ಕಮಲಾ ಆಂಟಿಯ ಹಿಂದೆ ಸಾಲು ಸಾಲು ಹುಡುಗರು ನಾವು ಒಂದು ಕೈ ನೋಡೋಣ ಅಂತ ಎಷ್ಟು try ಮಾಡಿದರು ಆಂಟಿ ಅವರ್ಯಾರಿಗೂ ಕ್ಯಾರೇ ಅಂದಿರಲಿಲ್ಲ. ಆದರೆ ನಾಗರಾಜನಿಗೆ ಮಾತ್ರ ಎಲ್ಲಿಲ್ಲದ ಸಲುಗೆ ತೋರಿಸಿದ್ದಳಂತೆ. ಅವನ ಜೊತೆ park, film, mall ಅಷ್ಟೇ ಅಲ್ಲದೆ ನಂದಿ ಬೆಟ್ಟಕ್ಕೂ ಕೂಡ ಒಂಟಿಯಾಗಿ ಹೋಗುತ್ತಾಳೆ ಎಂದು ನನ್ನ ಗೆಳೆಯರು ಹೇಳುತ್ತಿದ್ದಾಗ; ನಾನು ಕುತೂಹಲದಿಂದ “ಅಲ್ಲ ಗುರು, ಕಮಲಾ ಆಂಟಿಗೆ ಮದುವೆ ಆಗಿಲ್ವಾ……” ಅಂದೆ. ಅಷ್ಟಂದದ್ದೆ ತಡ ಗೆಳೆಯನೊಬ್ಬ “ಮದುವೆ ಆಗಿದೆ ಗಾಳೇರ, ಆಂಟಿ ಕೊರಳಲ್ಲಿ ತಾಳಿ ಇದೆಪಾ…..” ನಾನು ಮತ್ತೆ ಕೂತುಹಲ ತಡೆಯದೆ “ಅವಳ ಗಂಡ ಯಾರು ಗುರು, ಇಂತಹ ಸುಂದರವಾದ ಚೆಲುವೆಯನ್ನು ಇನ್ನೊಬ್ಬರ ಜೊತೆಗೆ ಬಿಟ್ಟಿದನಲ್ಲ” ಅಂದೇ ಬಿಟ್ಟೆ. ಆಗ ಗೆಳೆಯನೊಬ್ಬ “ಇಲ್ಲ ಗಾಳೇರ ಅವಳು ಗಂಡನ ಜೊತೆನೆ ಇದಾಳೆ, ಅವಳ ಗಂಡನಿಗೂ ಗೊತ್ತು ಅಂಟಿ ನಾಗರಾಜ ಆಗಾಗ ಒಟ್ಟಿಗೆ ಇರೋದು, ಆದ್ರೂ ಅವಯ್ಯ ಅಂಟಿಗೆ ಏನು ಹೇಳಲ್ಲ” ಅಂದಾಗ ನಾನು “ಬಿಡಪ್ಪ ನಮಗ್ಯಾಕೆ ಕಂಡವರ ಸುದ್ದಿ ಅಂತ” ಗೆಳೆಯರ ಆ ವಿಚಾರ ಗೋಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದೆ.        ನಾನು ಹೀಗೆ ಆಂಟಿಯ ಹಿಂದಿನ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳುತ್ತಿರುವಾಗ, ಆಂಟಿ ಒಮ್ಮೆ ಜೋರಾಗಿ “hello ಗಾಳೇರ ಇದಿಯಾ” ಎಂದಾಗ ವಾಸ್ತವ ಲೋಕಕ್ಕೆ ಮರಳಿದೆ. ಅಲ್ಲೇ ಪಕ್ಕದಲ್ಲಿ ಒಂದು ಚಿಕ್ಕ ಹೋಟೆಲ್ ಇತ್ತು. ಅಲ್ಲಿ ಕಾಫಿ ಕುಡಿಯೋಣ ಎಂದು ಆಂಟಿ ನನ್ನ ಕರೆದುಕೊಂಡು ಹೋದಳು. ಆಂಟಿ ನನ್ನ ಪಕ್ಕದಲ್ಲಿಯೇ ನನ್ನ ಮೈಗೆ ಅಂಟಿಕೊಂಡು ಕೂತಾಗ ನನ್ನ ಮನಸ್ಸಿನಲ್ಲಿ ಹರೆಯದ ಹುಡುಗರ ಯೋಚನೆಗಳು ಬರತೊಡಗಿದವು. ಆದರೂ ಅವುಗಳನ್ನೆಲ್ಲ ನಿಯಂತ್ರಿಸಿಕೊಂಡೆ ಕೂತೆ. ನಾನು ನಿರೀಕ್ಷಿಸಿದಂತೆ ಆಂಟಿ ನನ್ನ ಅತ್ತಿರ ಅನುಚಿತವಾಗಿ ವರ್ತಿಸಲಿಲ್ಲ. ಯಾವುದೋ ಗಾಢವಾದ ಚಿಂತೆಯಲ್ಲಿ ಇದ್ದಳು. ನಾನೇ ಮುಂದಾಗಿ “ಆಂಟಿ ನೀವು ಯಾಕೆ hospitalಗೆ ಬಂದಿದ್ದೀರಿ, ಕೈಯಲ್ಲಿರುವುದು x ray report ಏನದು” ಎಂದೆ.ಆಗ ಅವಳು ಹೇಳಿದ ಮಾತು ನನಗೆ ಆಶ್ಚರ್ಯವಾಯಿತು “ಇದು ನನ್ನದಲ್ಲ ಗಾಳೇರ ನಾಗರಾಜನದು, ಪಾಪ ಅವನಿಗೆ brain tumor, ಅದು ಈಗ ಕೊನೆಯ ಅಂತದಲ್ಲಿದೆ” ಎಂದಾಗ ನನಗೆ ಏನು ಮಾತಾಡಬೇಕೆಂದು ತಿಳಿಯದೆ “ಅಂಟಿ ನೀವು ನಾಗರಾಜನ್ನಾ……” ಎಂದು ಮಾತು ಅರ್ಧಕ್ಕೆ ನಿಲ್ಲಿಸಿದಾಗ, ಆಂಟಿಯೇ ಮಾತು ಮುಂದುವರಿಸಿ “ಹೌದು ಗಾಳೇರ ನಾಗರಾಜನೊಂದಿಗೆ ನಾನು ಸಂಬಂಧ ಬೆಳಿಸಿದ್ದೀನಿ” ಎಂದು ನನ್ನ ಕೈ ಹಿಡಿದುಕೊಂಡಳು. ನನಗೆ ಅವಳು ಕೈ ಹಿಡಿದುಕೊಂಡಿದ್ದು ಅಸಹ್ಯವಾದರೂ ತೋರಿಸಿಕೊಳ್ಳದೆ ಅವಳಿಂದ ನನ್ನ ಕೈ ಬಿಡಿಸಿಕೊಂಡು “ಆಂಟಿ ನಿಮಗೆ ಗಂಡ ಇದ್ದಾನಲ್ಲ. ನೀವು ಮಾಡುತ್ತಿರುವುದು ತಪ್ಪಲ್ವಾ” ಎಂದೆ. ಅವಳು ನನ್ನ  ಮಾತಿಗೆ ಮರುಉತ್ತರಿಸದೇ ಕಾಫಿ ಕುಡಿದು ಸೀದಾ ಹೊರಟುಹೋದಳು.     ನಾನು ಇವಳ್ಯಾಕಪ್ಪ ಹೊರಟುಹೋದಳು ನಾನು ಇವಳಿಗೆ ಹೇಳಿದ್ದು ತಪ್ಪಾಯ್ತಾ! ಅಂತ ಅವಳು ಹೋದ ದಿಕ್ಕಿನ ಕಡೆ ಹೋದೆ. ರಸ್ತೆಯ ಬದಿಯಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅವಳನ್ನು ನೋಡಿ ಮತ್ತೆ ಅವಳ ಪಕ್ಕದಲ್ಲಿ ಕೂತು “sorry aunty” ಅಂದೆ. ಆಗ ಅವಳು “ನೋಡು ಗಾಳೇರ ನನ್ನ ಗಂಡ ನನ್ನನ್ನು ತುಂಬಾ ಆತ್ಮೀಯವಾಗಿ ಪ್ರೀತಿಸುತ್ತಾನೆ ನಾನು ಕೂಡ ಅಷ್ಟೇ ನನ್ನ ಗಂಡನನ್ನು ಪ್ರೀತಿಸುತ್ತೇನೆ” ಅಂದಾಗ ನಾನು ಅವಳ ಮುಂದಿನ ಮಾತಿಗೂ ಕಾಯದೆ “ಮತ್ತೆ ಈ ನಾಗರಾಜ ಯಾಕೆ ” ಎಂದು ಬಿಟ್ಟೆ. ಆಗ ಆಂಟಿ “ಗಾಳೇರ ನಾಗರಾಜ ನನಗೆ ಹೀಗೆ ಆರು ತಿಂಗಳ ಕೆಳಗೆ ಸಿಕ್ಕ. ಅವನು ಸಿಕ್ಕ ಪರಿಸ್ಥಿತಿ ನಿಜಕ್ಕೂ ನನಗೆ ಇವಾಗ್ಲೂ ನೆನಪಿದೆ. ಅದೊಂದು ದಿನ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದ ನಾಗರಾಜನನ್ನು hospitalಗೆ ಕರೆದೊಯ್ದಿದ್ದೆ. ಆವಾಗಲೇ ನನಗೆ ಗೊತ್ತಾಗಿದ್ದು ಅವನಿಗೆ brain tumor ಇರುವುದು. ಈ ವಿಷಯ ನನಗೆ ತಿಳಿದ ಮೇಲೆ ಅವನ ಸಂಬಂಧಿಕರನ್ನು ಗೆ ಹುಡುಕಲು ಪ್ರಯತ್ನಿಸಿದಾಗ ಅವನೊಬ್ಬ ಅನಾಥ ಎಂದು ತಿಳಿಯಿತು. ಅವನಿಗೆ treatment ಕೊಟ್ಟ doctor ನಾಗರಾಜ ಬದುಕುವುದು ತುಂಬಾ ವಿರಳ ಅವನು ಬದುಕುವಷ್ಟು ಕಾಲ ಅವನಿಗೆ ಸುಖವಾಗಿ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ನಾನು ಅವನಿಗೆ ಎಲ್ಲಾ ವಿಚಾರದಲ್ಲಿ ಸಹಾಯ ಮಾಡುತ್ತಿದ್ದೆ. ಅವನ ದಿನನಿತ್ಯದ ಚಲನವಲನ ಗಳನ್ನೆಲ್ಲ ಗಮನಿಸಿದಾಗ ಅವನಿಗೂ ಸಹ ಹುಡುಗಿಯರ ಹುಚ್ಚು ಇರುವುದು ಕಂಡು ಬಂತು. ಆದರೆ ಅವನಿಗೆ ಯಾವ ಹುಡುಗಿಯರು ಬೀಳದಿದ್ದಾಗ ನನಗೆ ಅಯ್ಯೋ ಅನಿಸಿ ಅವನಿಗೆ ಸೆರಗಾಸಿ ಅವನ ಆಸೆಗಳನ್ನು ನನ್ನ ಗಂಡನಿಗೂ ಕೂಡ ಗೊತ್ತಾಗದಾಗೆ ಈಡೇರಿಸಿದೆ. ಆದರೆ ಸಮಾಜ ಎಷ್ಟೊಂದು ವಿಶಾಲ ಅಲ್ವಾ! ನಾವು ಎಷ್ಟೇ ಗೌಪ್ಯತೆ ಕಾಪಾಡಿದರು ಅದು ಹೊಗೆಯಾಡಿ ಬಿಡುತ್ತದೆ. ಹೀಗೆ ಹೊಗೆಯಾಡಿದಾಗ ನನ್ನನ್ನು ತಪ್ಪು ತಿಳಿದುಕೊಂಡು ಈಗಲೂ ಸಹ ನನಗೆ ಹುಡುಗರು ಒಂದು ರೀತಿಯಲ್ಲಿ ನೋಡುತ್ತಿರುತ್ತಾರೆ” ಎಂದು ಹೀಗೆ ಹೇಳುತ್ತಾ ನನ್ನ ಕೈಯನ್ನು ಹಿಡಿದುಕೊಂಡು “ಗಾಳೇರ ನಾನು ಮಾಡಿದ್ದು ತಪ್ಪಾ ಅಂತ ಕೇಳಿದಾಗ” ನನಗೆ ಮಾತೆ ಬರದಾಯಿತು.        ಹೀಗೆ ಸ್ವಲ್ಪ ದಿನ ಕಳೆದ ನಂತರ ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡು ನನ್ನ ಹಲವಾರು ಗೆಳೆಯರೊಂದಿಗೆ ನಾಗರಾಜ್ ವಿಳಾಸವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದೆ. ಈ ವಿಷಯ ಅವರ ಮನೆಯವರಿಗೆ ತಿಳಿಸಿದಾಗ ನಾಗರಾಜನೂ ಕೂಡ ನನ್ನಂತೆ ಊರು ಬಿಟ್ಟ ಬಂದವನೆಂದು ತಿಳಿಯಿತು. ಅವರ ಮನೆಯವರು ಬಂದು ಅವನನ್ನು ಕರೆದುಕೊಂಡು ಹೋದರು. ನಾನು ಒಂದೆರಡು ತಿಂಗಳ ನಂತರ ಆ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದೆ. ಅದಾದ ನಂತರ ನನಗೆ ಯಾರ ಸಂಪರ್ಕವೂ ಇರಲಿಲ್ಲ. ಒಂದು ದಿನ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಅಚನಕ್ಕಾಗಿ ಕಮಲ ಆಂಟಿ ಸಿಕ್ಕಾಗ ನಾಗರಾಜ್ ಸತ್ತನೆಂದು ತಿಳಿದಾಗ ನಾಗರಾಜನ ಸಾವು ನನ್ನ ಕಾಡದೆ ಆಂಟಿ ಮಾಡಿದ ಆ ತ್ಯಾಗ ಇವತ್ತಿಗೂ ಕೂಡ ನನ್ನ ಕಾಡುತ್ತಿರುತ್ತದೆ. ಮತ್ತೆ ಆಂಟಿ ಒಳ್ಳೆಯವಳು ಅವಳ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಳ್ಳಬೇಕೆಂದು ಅವಳ ದೂರವಾಣಿಸಂಖ್ಯೆ ಇಸಿದುಕೊಂಡೆ. ಒಂದೆರಡು ತಿಂಗಳು ಸಂಪರ್ಕದಲ್ಲಿದ್ದ ಆಂಟಿ ನಂತರ ಇವತ್ತಿಗೂ ಅವಳು not reachable.ಆದರೆ ಅವಳ ಸಹಾಯ ನನ್ನ ಮನಸ್ಸಿಗೆ ಯಾವಾಗಲೂ reachable. ******** ಮೂಗಪ್ಪ ಗಾಳೇರ್

ಗಾಳೇರ್ ಬಾತ್ Read Post »

ಕಾವ್ಯಯಾನ

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ ಶ್ರೀಮಂತರೆಂದೋ ಬಡವರೆಂದೋ ನೋಡದೆ ಓಡಿ ಬರುವೆ ಎಲ್ಲರ ಬಳಿಗೆ ಕಾಲಕಾಲಕೆ ಕಾರಣ, ಸಮಾನರಲ್ಲವೆ ಎಲ್ಲರೂ ನಿನ್ನ ಕಣ್ಣಿಗೆ ಕಣ್ಣೀರು ಕಂಡರೂ ಕರಗದ ಹೃದಯ ನಿನ್ನದು ನೋವನ್ನರಿತರೂ ಮಿಡಿಯದ ಮನಸ್ಸು ನಿನ್ನದು ಓ ಅತಿಥಿಯೇ‌‌‌… ಯಾಕಿಷ್ಟು ಕ್ರೂರಿಯಾದೆ ನೀನು ********

ಕಾವ್ಯಯಾನ Read Post »

ಇತರೆ

ನಾನೇಕೆ ಬರೆಯುತ್ತೇನೆ?

ಬದುಕಿನ ಉತ್ಸಾಹ ಕಾಪಿಟ್ಟುಕೊಳ್ಳಲು ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ನನಗಿನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.  ಯಾಕೆಂದರೆ ನಾನು ಬರೆಯುವಾಗ ಯಾವುದೇ ಉದ್ದೇಶವನ್ನಿಟ್ಟುಕೊಂಡು ಬರೆಯುವುದಿಲ್ಲ. ನನ್ನಬರವಣಿಗೆಯಿಂದಸಮಾಜದಲ್ಲಿಮಹತ್ತರಬದಲಾವಣೆ ತರಬಹುದೆಂಬ ಭ್ರಮೆ ನನಗಿಲ್ಲ.  ನನ್ನ ಬರವಣಿಗೆಗಳಿಂದ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾನೊಬ್ಬ ಮಹಾನ್ ಲೇಖಕ ನಾಗ ಬೇಕೆಂಬ ಮಹತ್ವಾಕಾಂಕ್ಷೆ ನನಗಿಲ್ಲ.ನನ್ನ ಜ್ಞಾನದ, ಪ್ರತಿಭೆಯ ಪರಿಮಿತಿಯಲ್ಲಿ ಬರೆಯುವ ನಾನು ಯಾವುದೆ ಇಸಂ ಗಳಿಗೆ,ರಾಜಕೀಯಸಿಧ್ಧಾಂತಗಳಿಗೆ, ಜಾತಿ ಮತಗಳಿಗೆ ಬದ್ಧನಾಗಿ ಬರೆಯುವುದಿಲ್ಲ. ವೈಶಾಖದುರಿಬಿಸಿಲಮಧ್ಯಾಹ್ನ ಸುರಿವ ಮಳೆಹನಿಗಳ ಸ್ಪರ್ಷಕ್ಕೆ ಅರಳುವ ಮಣ್ಣಿನ ಕಣಗಳ ಕಂಪು ನನ್ನಲ್ಲಿ ಕಾವ್ಯ ಸ್ಪಂದನೆಯನ್ನುಂಟುಮಾಡುತ್ತದೆ.ನಮ್ಮೂರ ಮಲ್ಲಿಕಾರ್ಜುನ ಬೆಟ್ಟದೆತ್ತರದಲ್ಲಿ ಕಾಡು ಹೂವುಗಳ ಕಂಪನ್ನು ಹೊತ್ತು ಬೀಸುವ ತಂಗಾಳಿ ನನ್ನಲ್ಲಿ ಪುಳಕವೆಬ್ಬಿಸುತ್ತದೆ.  ಮುಂಜಾನೆ ಅಂಗಳದಲ್ಲರಳಿದ ಮಲ್ಲಿಗೆ, ಗುಲಾಬಿ, ದಾಸವಾಳ, ಮಂದಾರ ಹೂವುಗಳ ಮೇಲೆ ಮೃದುವಾಗಿ ಕುಳಿತು ನೇಸರನ ಎಳೆಕಿರಣಗಳನ್ನು ಪ್ರತಿಫಲಿಸುವ ಮಂಜು ನನಗೆ ಆನಂದ ನೀಡುತ್ತದೆ. ನನ್ನ ಸುತ್ತಲಿನ ಪರಿಸರದ, ಹಾಗೂ ವಿಶ್ವದ ಆಗು ಹೋಗುಗಳು ನನ್ನಲ್ಲಿ ಸ್ಪಂದನೆಯುಂಟುಮಾಡುತ್ತವೆ. ನನಗೇ ಅರಿವಾಗದಂತೆ ನನ್ನೊಳಗಿನೊಳಗೆಲ್ಲೋ ಈ ಎಲ್ಲವೂ ತುಂಬಿಕೊಂಡು ಬಿಡುತ್ತವೆ.. ಸುಖ ದುಃಖಗಳ ಬದುಕಿನ ಚಕ್ರ, ಅದನ್ನುರುಳಿಸುವ ಕಾಲ, ಮಾನವೀಯ ಸಂಬಂಧಗಳ ನಿಗೂಢಜಾಲ,ನನ್ನನ್ನು ಸದಾ ಕಾಡುತ್ತವೆ.  ವೃತ್ತಿ ಜೀವನದ ಬೆನ್ನು ಹತ್ತಿ ಹಲವು ಹತ್ತು ಊರುಗಳ ಸುತ್ತಿ ಬರುವಾಗ ದಕ್ಕಿದ ಅನುಭವಗಳ ಸರಕು ನನ್ನೊಳಗಿನ ಗೊಡೋನಿನಲ್ಲಿ ಭದ್ರವಾಗಿವೆ.ಸೂಕ್ಷ್ಮ ಸಂವೇದಿ ಮನಸ್ಸಿನ ಸ್ನೇಹಿತರೊಂದಿಗಿನ ಮಾತು ಕತೆ, ಚರ್ಚೆ, ಜತೆಗೆ ಉತ್ತಮ ಸಾಹಿತ್ಯ ಕೃತಿಗಳ ಓದು ನನ್ನೊಳಗೊಬ್ಬಕವಿಯನ್ನು ಸೇರಿಸಿವೆ.ಕೆಲವೊಮ್ಮೆ ಮನಸ್ಸು ತಳಮಳದಬೀಡಾದಾಗ , ಬದುಕು ದುರ್ಭ್ಹರವೆನಿಸಿದಾಗ ನನ್ನೊಳಗಿನ ಕವಿಯನ್ನು ಕರೆಯುತ್ತೇನೆ.  ಶಿಥಿಲ ಗೊಂಡ ಮನಸ್ಸನ್ನು ಪುನಹ ಕಟ್ಟಿಕೊಳ್ಳಲು , ಕಾಲದ ಉರುಳಿಗೆ ಸಿಕ್ಕು ಸವೆದು ಹೋದ ಬದುಕನ್ನು ಪುನರ್ನಿರ್ಮಿಸಿಕೊಳ್ಳಲು, ಬದುಕಿನಉತ್ಸಾಹವನ್ನು ಸದಾ ಕಾಪಿಟ್ಟುಕೊಳ್ಳಲು, ಮತ್ತು ಕಾವ್ಯ ನಿರ್ಮಿತಿಯಿಂದ ದೊರಕುವ ಆನಂದವನ್ನು ಅನುಭಿಸಲು – ನಾನು ಕವಿತೆಗಳನ್ನು ಬರೆಯುತ್ತೇನೆ. ******* ಮೇಗರವಳ್ಳಿ ರಮೇಶ್   RA

ನಾನೇಕೆ ಬರೆಯುತ್ತೇನೆ? Read Post »

ಕಾವ್ಯಯಾನ

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಕಾವ್ಯಯಾನ Read Post »

You cannot copy content of this page

Scroll to Top