ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಹರಿ

ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು “ಆ ಹುಚ್ಚಿ ನನ್ನ ಬಗ್ಗೆ ಏನು ಬರೀತಾಳಾ..” ಎಂದು . ನಾವು ಚಿಕ್ಕವರಿರುವಾಗ ನಮಗೆ ರಜೆ ಬಂದ ಕೂಡಲೇ ನಾವು ಪೆಠಾರಿ ಕಟ್ಟುವುದು ಒಂದೇ ತೀರ್ಥಹಳ್ಳಿಯ ಚಿಕ್ಕಪ್ಪನ ಮನೆಗೆ ..ಇಲ್ಲವೇ ಉಡುಪಿಯ ನಮ್ಮ ಸೋದರತ್ತೆ ತಾರಮಕ್ಕನ ಮನೆಗೆ .ಎರಡೂ ಕಡೆ ನಮ್ಮ ಸಮವಯಸ್ಕರು ಇದ್ದರು ಮಾತ್ರವಲ್ಲ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಅಮ್ಮಂದಿರು ಇದ್ದರು .ಚಿಕ್ಕಮ್ಮನ ವಿಷಯ ಇನ್ನೊಮ್ಮೆ ಬರೆಯುತ್ತೇನೆ . ನಾನು ಬಹಳ ಚಿಕ್ಕವಳಿರುವಾಗ ಅಮ್ಮನೊಡನೆ ಉಡುಪಿಗೆ ಹೋಗುತ್ತಿದ್ದೆ. ಆಗ ಬ್ರೆಡ್ ಗೆ ಮನೆಯಲ್ಲಿ ಕಡೆದ ಬೆಣ್ಣೆಯನ್ನು ದಪ್ಪಗೆ ಹಚ್ಚಿ ಅದರ ಮೇಲೆ ಸಕ್ಕರೆ ಹಾಕಿ ತಿಂದಿದ್ದು ಅದೇ ಅಲ್ಲಿಯೇ ಮೊದಲು .ನನಗಂತೂ ಆ ದಿನದ ಆ ಬ್ರೆಡ್ ಮತ್ತು ಬೆಣ್ಣೆ ಸಕ್ಕರೆಯ ರುಚಿ ಇಂದಿಗೂ ನಾಲಿಗೆ ತುದಿಯಲ್ಲಿಯೇ ಇದೆ. ಅಷ್ಟೊಂದು ರುಚಿಕರವಾಗಿ ಇದ್ದಂತಹ ಆ ಬ್ರೆಡ್ ಮತ್ತು ಬೆಣ್ಣೆಯ ಖುಷಿಯನ್ನು ತೋರಿಸಿದವರು ನಮಗೆ ತಾರಮಕ್ಕ. ಆ ಮನೆಯ ಕಾಂಪೌಂಡಿನಲ್ಲಿರುವ ಮಂದಾರ.. ಕರವೀರ.. ಕರಿಬೇವಿನ ಮರ ಇವುಗಳ ನಡುವೆ ಆಡಿದ್ದು ನನಗಿನ್ನೂ ನೆನಪಿದೆ .ಅಕ್ಕಪಕ್ಕದ ಮನೆಯವರೂ ನೆನಪಿದ್ದಾರೆ. ಹಾಗೆ ಸ್ವಲ್ಪ ಸಮಯದಲ್ಲಿ ಅವರು ವಳಕಾಡಿನ ಮನೆಗೆ ಶಿಫ್ಟ್ ಮಾಡಿದರು. ಮನೆ ತುಂಬಾ ದೊಡ್ಡದಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಬಹಳ ಅಭಾವವಿತ್ತು. ನಮಗೆ ಮಕ್ಕಳಿಗೆ ಎಲ್ಲಿ ತಿಳಿಯುತ್ತದೆ ಅವರ ಕಷ್ಟ .ರಜೆ ಅಂದ ಕೂಡಲೇ ಅವರ ಮನೆಗೆ ಹೊರಡುತ್ತಿದ್ದೆ. ಉಡುಪಿಗೆ ಬಸ್ಸಿನಲ್ಲಿ ಬರುವಾಗ ಮಣಿಪಾಲದಲ್ಲಿ ಬಸ್ಸು ನಿಂತಿದ್ದಾಗ ಅಲ್ಲೇ ಇರುವ ಸಿನಿಮಾ ಬೋರ್ಡನ್ನು ನೋಡುತ್ತಿದ್ದೆ .ಯಾಕೆಂದರೆ ನನಗೆ ನೂರಕ್ಕೆ ನೂರು ಪರ್ಸೆಂಟ್ ಗೊತ್ತಿತ್ತು ತಾರಮಕ್ಕ ನನಗೆ ಒಂದಾದರೂ ಸಿನಿಮಾ ನೋಡಲು ಕಳಿಸಿಯೇ ಕಳಿಸುತ್ತಾರೆ ಎಂದು. ಹಾಗಾಗಿ ಈಗ ಯಾವ ಸಿನಿಮಾ ನಡೀತಾ ಇದೆ .ನಾನು ಯಾವುದು ನೋಡಬಹುದು ಎಂದು ಮಣಿಪಾಲದಿಂದ ಉಡುಪಿಯ ತನಕ ಲೆಕ್ಕಾಚಾರ ಹಾಕುತ್ತಲೇ ಬರುತ್ತಿದ್ದೆ. ಬಂದವಳು ಸಣ್ಣ ಹುಡುಗಿಯಾದರೂ ಯಾರೋ ವಿಐಪಿ ಬಂದಂತೆ ಪ್ರೀತಿಯಿಂದಲೇ ಸ್ವಾಗತಿಸುತ್ತಿದ್ದಳು. ಸರಿ ಮರುದಿನದಿಂದಲೇ ನಾನು ಮನೋಹರ ನಿತಿನ ಸೇರಿ ಅಜರ್ಕಾಡಿಗೆ ಹೋಗುವುದೇನು.. ದೇವಸ್ಥಾನದ ಕೆರೆಯಲ್ಲಿ ಮಕ್ಕಳು ಈಜುವುದನ್ನು ನೋಡಲು ಹೋಗುವುದೇನು.. ದೊಡ್ಡಮ್ಮನ ಮನೆಗೆ ಹೋಗುವುದೇನು ..ಆ ಬೇಸಿಗೆರಜೆ ಸಮಯದಲ್ಲಿ ಹೆಚ್ಚಾಗಿ ಸರ್ಕಸ್ ಕೂಡ ಇರುತ್ತಿತ್ತು. ಆ ಸರ್ಕಸ್ ನೋಡಲು ನಮ್ಮ ಕೇಶವಮಾಮ ನೊಟ್ಟಿಗೆ ಹೋಗುವುದೇನು ..ಒಟ್ಟಾರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ .ನಾನು ಮೊದಲೇ ಹೇಳಿದಂತೆ ಯಾವುದಾದರೂ ಒಂದು ಕೆಲವೊಮ್ಮೆ ಎರಡೂ ಸಿನಿಮಾ ನಮಗೆ ನೋಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿತ್ತು. ಸಿನಿಮಾ ನೋಡಿದ ಮೇಲೆ ಅಲ್ಲೇ ಪಕ್ಕದಲ್ಲಿರುವ ಡಯಾನ ಹೊಟೇಲಿನಲ್ಲಿ ನಮಗೆ ಐಸ್ಕ್ರೀಂ ತಿನ್ನಿಸುವ ಪರಿಪಾಠವಿತ್ತು. ಮನೋಹರ ಮತ್ತೆ ನಿತಿನ ಅದ್ಯಾಕೋ ಫ್ರೂಟ್ ಸಲಾಡ್ ತಿನ್ನುತ್ತಿದ್ದರು. ನನಗೆ ಫ್ರೂಟ್ ಸಲಾಡ್ ತಗೊಂಡರೆ ಐಸ್ ಕ್ರೀಂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬರಬಹುದು ಎಂದು ಐಸ್ಕ್ರೀಮೇ ಬೇಕೆಂದು ಹೇಳುತ್ತಿದ್ದೆ .ಆ ಗಾಜಿನ ಬೌಲ್ನಲ್ಲಿ ಇದ್ದಂತಹ ಐಸ್ಕ್ರೀಂ ಮತ್ತು ಅದಕ್ಕಾಗಿಯೇ ಇರುವ ಚಮಚದಿಂದ ಚೂರು ಚೂರೇ ತೆಗೆದು ಬಾಯಿಯಲ್ಲಿ ಹಾಕಿ ತಿನ್ನುತ್ತಾ ಅನುಭವಿಸುವ ಸ್ವರ್ಗ ಸುಖ ಬಹುಶಃ ಈಗ ಯಾವ ಐಸ್ಕ್ರೀಂ ತಿಂದರೂ ಸಿಗಲಿಕ್ಕಿಲ್ಲ . ನಾನಾಗಲೇ ಹೇಳಿದಂತೆ ಮನೆಯ ಪಕ್ಕದ ಬಾವಿಯಲ್ಲಿ ನೀರು ಖಾಲಿಯಾಗಿ ಸ್ವಲ್ಪ ದೂರದ ಬಾವಿಯಿಂದಲೇ ನೀರು ತರಬೇಕಿತ್ತು ಆದರೆ ಈ ನಮ್ಮ ತಾರಮಕ್ಕ ಒಂದೇ ಒಂದು ದಿನವೂ ನಮ್ಮ ಬಳಿ ತಮ್ಮ ನೀರಿನ ಕಷ್ಟವಾಗಲಿ ಅಥವಾ ನಾವು ಬಂದು ಅವರಿಗೆ ಕಷ್ಟವಾಗಿದೆ ಎಂದಾಗಲಿ ಹೇಳಿದ್ದು ಇಲ್ಲವೇ ಇಲ್ಲ..ಈಗಲೂ ಉಡುಪಿಯಲ್ಲಿ ಮೇ ತಿಂಗಳಲ್ಲಿ ಬಹಳ ನೀರಿನ ಅಭಾವವಿರುತ್ತದೆ ಹಾಗಾಗಿ ನನ್ನ ಪರಿಚಿತರು ಯಾರಾದರೂ ಉಡುಪಿಗೆ ಬರುವುದಿದ್ದರೆ ನಾನು ಮೊದಲೇ ಹೇಳುತ್ತೇನೆ “ನೀವು ಉಡುಪಿಗೆ ಬರುವ ಪ್ಲಾನನ್ನು ಏಪ್ರಿಲ್ ಮೇ ತಿಂಗಳಲ್ಲಿ ಹಾಕಲೇಬೇಡಿ. ಯಾಕೆಂದರೆ ಇಲ್ಲಿ ಒಂದು ತುಂಬಾ ಸೆಕೆ ..ಎರಡನೆಯದು ನೀರಿನ ಅಭಾವ.. ಹಾಗಾಗಿ ಏನು ಬರುವುದಿದ್ದರೂ ಆಗಸ್ಟ್ ನಂತರ ಫೆಬ್ರವರಿ ತಿಂಗಳೊಳಗೆ ಬಂದುಬಿಡಿ” ಎಂದೇ ಹೇಳುತ್ತೇನೆ. ಯಾರಿಗೋ ಯಾಕೆ ನನ್ನ ಸ್ವಂತ ಮಗಳಿಗೆ ಕೂಡ “ನೀನು ಬರುವುದಾದರೆ ಏಪ್ರಿಲ್ ನಲ್ಲೇ ಬಾ ಮಾರಾಯತಿ.. ಮೇ ತಿಂಗಳಲ್ಲಿ ಬೇಡ ..ಮೇ ತಿಂಗಳಲ್ಲಿ ನೀನು ನಿನ್ನ ಗಂಡನ ಮನೆಯಲ್ಲೇ ಇರು” ಎನ್ನುತ್ತೇನೆ. ಆಗೆಲ್ಲ ಒಂದೆ ಫ್ಯಾನ್ ಇದ್ದುದರಿಂದ ಎಲ್ಲರೂ ಒತ್ತೊತ್ತಾಗಿ ಅದೇ ಫ್ಯಾನ್ ನಡಿಯಲ್ಲಿ ಮಲಗುತ್ತಿದ್ದದ್ದು ನೆನಪಾದರೆ ಬಹಳ ಖುಷಿ ಅನ್ನಿಸ್ತಾ ಇದೆ .ಹಾಗೆ ಮನೆಯಲ್ಲಿ ಗ್ಯಾಸ್ ಇಲ್ಲದಿದ್ದರೂ ಈಗಿನಂತೆ ಮಿಕ್ಸಿ ಗ್ರ್ಯಾಂಡರ್ ಏನೂ ಇಲ್ಲದಿದ್ದರೂ ಕಟ್ಟಿಗೆ ಒಲೆ ..ಹಾಗೆ ಮರದ ಹುಡಿಯನ್ನು ಪ್ರತಿದಿನವೂ ತುಂಬಿಸಿ ತುಂಬಿಸಿ ಅವರೇ ಮಾಡುತ್ತಿದ್ದಂತಹ ಒಂದು ಡಬ್ಬಿ ಅಂತಹ ಒಲೆ ಯಲ್ಲಿಯೇ ಬಹಳ ರುಚಿಯಾದ ಅಡುಗೆಯನ್ನು ಮಾಡಿ ಬಹಳ ಪ್ರೀತಿಯಿಂದ ಬಡಿಸುತ್ತಿದ್ದರು . ಅಡುಗೆ ಮನೆಯನ್ನು ಕನ್ನಡಿಯಂತೆ ಶುಭ್ರಗೊಳಿಸಿ ತಾವು ಕೂಡ ಅತ್ಯಂತ ಶುಭ್ರವಾಗಿ ಯಾವಾಗಲೂ ಸ್ವಚ್ಛವಾದ ಕಾಟನ್ ಸೀರೆಯನ್ನು ಉಟ್ಟು ಶಿಸ್ತಿನಿಂದ ಇರುತ್ತಿದ್ದ ತಾರಮಕ್ಕಳನ್ನು ನೆನೆಸಿದರೆ.. ಈಗ ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೊಳಕು ಕೊಳಕಾಗಿ ಇರುವ ಹೆಂಗಸರನ್ನು ನೋಡಿದರೆ ತಲೆ ಬಿಸಿಯಾಗುತ್ತದೆ .. ನಾನು ಮುಂಬೈ ಶಹರವನ್ನು ಬಿಟ್ಟು ಉಡುಪಿಯಲ್ಲಿ ನನ್ನ ಗಂಡನ ಮನೆಗೆ ಬಂದು ಇದ್ದಾಗ ನನ್ನ ಯಜಮಾನರು ಸೌದಿ ಅರೇಬಿಯಾದಲ್ಲಿದ್ದು ಆಗ ಚಿಕ್ಕ ಮಗುವನ್ನು ಕರೆದುಕೊಂಡು ನಾನು ಆಗಾಗ ತಾರಮಕ್ಕಳ ಮನೆಗೆ ಒಳಕಾಡಿಗೆ ಹೋಗುತ್ತಿದ್ದೆ.. ಒಂದು ದಿನ ನಾನು ಹೋಗುವಾಗ ಗುರುವಾರ .ನಾನು ಹೋದವಳು ಹೇಳಿದೆ “ತಾರಮಕ್ಕ ..ಗುರುವಾರ ನಾನು ರಾತ್ರಿ ಊಟ ಮಾಡುವುದಿಲ್ಲ ಹಾಗಾಗಿ ಒಂದಿಷ್ಟು ಅವಲಕ್ಕಿ ಮಾಡಿ ಕೊಡ್ತೀರಾ” ಎಂದೆ.. “ಆಯ್ತಾಯ್ತು “ಎಂದು ಹೇಳಿದರು ಆಮೇಲೆ ರಾತ್ರಿ ಊಟಕ್ಕೆ ಕೂತಾಗ ನನಗೆ ಬಿಸ್ಕೂಟ್೦ಬಡೇ ಕೊಡ್ತಾ ಇದ್ದಾರೆ .ನಾನು ಹೇಳಿದೆ . “ತಾರಮಕ್ಕ ನಿನ್ನದೊಂದು ಯಾಕೆ ಬಿಸ್ಕಿಟ್೦ಬಡೇ ಮಾಡಿದ್ದು” ಎಂದಾಗ “ಇರಲಿಯಾ ..ನಾವೂ ತಿನ್ನದೇ ಬಹಳ ದಿನವಾಯಿತು “ಎಂದು ಹೇಳಿ ನಾಳೆಗೆಂದು ಮಾಡಿ ಇಟ್ಟ ಉದ್ದಿನ ಹಿಟ್ಟಿನಲ್ಲಿಯೇ ಸ್ವಲ್ಪ ಹಿಟ್ಟು ತೆಗೆದು ಬಿಸ್ಕೂಟ್೦ಬಡೆ ಮಾಡಿಕೊಟ್ಟಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅಷ್ಟು ಪ್ರೀತಿ ಅವರಿಗೆ . ನನ್ನನ್ನು ಐದಾರು ತಿಂಗಳ ಮಗುವಿನೊಂದಿಗೆ ಒತ್ತಾಯಪೂರ್ವಕ ಅವರ ಮನೆಯಲ್ಲಿ ಆ ರಾತ್ರಿ ಉಳಿಸಿಕೊಂಡು ಮರುದಿನ ಹೊಸ ಸಾಬೂನು ತೆಗೆದು ಆ ಮಗುವಿಗೆ ಸ್ನಾನ ಮಾಡಿಸಿ ಅದಕ್ಕೆ ಕಿಟಿಕಿಯ ಹತ್ತಿರವೇ ಹಾಸಿಗೆಯನ್ನು ಹಾಕಿ ..ತಮ್ಮ ಮೆದು ಮೆದುವಾದ ಸೀರೆಯನ್ನು ಹಾಸಿಗೆ ಮೇಲೆ ಹರಡಿ ..ಮಲಗಿಸಿದ್ದು ನನಗಿನ್ನೂ ಕಣ್ಣೆದುರು ಕಾಣಿಸ್ತಾ ಇದೆ .ತಮ್ಮ ಹಳೆಯ ವಾಯಿಲ್ ಸೀರೆಗಳನ್ನೇ ಅವರು ಹಾಸಿಗೆಗೆ ಬೆಡ್ಶೀಟ್ಟನಂತೆ ಹಾಕುತ್ತಿದ್ದರಿಂದ ಆ ಮೃದುವಾದ ಸೀರೆಯ ಮೇಲೆ ಮಲಗುವ ಸುಖ ಇವತ್ತು ಯಾವುದೇ ಬಾಂಬೆ ಡೈಯಿಂಗ್ ಬೆಡ್ಶೀಟಿನಲ್ಲಿ ಸಿಗಲಿಕ್ಕಿಲ್ಲ .ಇವತ್ತು ನಾನು ಹೊದ್ದುಕೊಳ್ಳುವುದೂ ಅವರದೇ ಎರಡು ಮೂರು ಸೀರೆಗಳನ್ನು ಸೇರಿಸಿ ಮಾಡಿದ ಒಂದು ಗೊದ್ದೋಡಿಯನ್ನು. ದೊಡ್ಡಮ್ಮನ ಮನೆಯಲ್ಲಿ ಯಾವುದೇ ಶ್ರಾದ್ಧ ..ಏನಾದರೂ ವಿಶೇಷ ಆದರೆ ಮುಂಚಿನ ದಿನ ಹೋಗಿ ಕಡೆಯುವ ಕಲ್ಲಿನಲ್ಲಿ ಏನೆಲ್ಲಾ ರುಬ್ಬಬೇಕು ಅದನ್ನೆಲ್ಲ ರುಬ್ಬಿಟ್ಟು. ನಾನು ಕೆಲವೊಮ್ಮೆ ಸಂಜೆ ದೊಡ್ಡಮ್ಮನ ಮನೆಗೆ ಹೋದಾಗ ಈ ತಾರಮಕ್ಕ ಎಂದಿನಂತೆ ತಮ್ಮ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ನಗುತ್ತಾ ಕುಳಿತಿರುವುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೇ ಕೆಲಸವಿರಲಿ ತಮ್ಮ ಆ ಕಾಟನ್ ಸೀರೆಗಳಿಗೆ ಹದವಾಗಿ ಗಂಜಿ ಹಾಕಿ …ಕೈಯಿಂದ ತಿಕ್ಕಿ ತಿಕ್ಕಿ ನೀಟಾಗಿ ಮಡಚಿ ಅದನ್ನು ಹಾಸಿಗೆಯ ಅಡಿಯಲ್ಲಿಟ್ಟು ಇಸ್ತ್ರಿಪೆಟಿಗೆ ಇಲ್ಲದಿದ್ದರೂ ಈ ಇಸ್ತ್ರೀಯನ್ನು ಮಾಡಿ ಅದನ್ನು ಉಟ್ಟುಕೊಂಡು ಬರುತ್ತಿದ್ದರೆ ಎಂಥವರಿಗಾದರೂ ಗೌರವ ಉಕ್ಕಿ ಬರಬೇಕು. ಹಾಗಾಗಿ ನನ್ನ ಅಣ್ಣ ಅವರನ್ನು ಕಾಟನ್ ಕುಂತಿ ಎಂದೇ ಕರೆಯುತ್ತಾರೆ. ಯಾಕೆಂದರೆ ಯಾವಾಗಲೂ ಕಾಟನ್ ಸೀರೆಯನ್ನು ಉಡುವ ಇವರಿಗೂ ಕುಂತಿಯಂತೆ ಐವರು ಗಂಡು ಮಕ್ಕಳು. ನನ್ನ ದೊಡ್ಡ ಅಕ್ಕನ ಹೆರಿಗೆ ಸಮಯದಲ್ಲಿ ಅಜ್ಜಿ ಏನನ್ನೋ ತರಲು ಮಾಳಿಗೆಗೆ ಹತ್ತಿದವರು ಇಳಿಯುವಾಗ ಬಿದ್ದು ಕಾಲು ಮುರಿದು ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಾನುಗಟ್ಟಲೆ ಇದ್ದರು .ಆ ಸಮಯದಲ್ಲಿ ಮಧ್ಯಾಹ್ನದ ಊಟ ..ಹಾಗೂ ರಾತ್ರಿ ಊಟ ಸೋಮೇಶ್ವರದಿಂದ ಬಸ್ಸಿನಲ್ಲಿ ಬರುತ್ತಿತ್ತು .ಆದರೆ ಬೆಳಗ್ಗಿನ ಉಪಾಹಾರ ಕೇಶವ್ ಮಾಮ ಮಣಿಪಾಲಕ್ಕೆ ಆಫೀಸಿಗೆ ಬರುವಾಗ ತಂದು ಆಸ್ಪತ್ರೆಗೆ ಕೊಟ್ಟು ಹೋಗುತ್ತಿದ್ದರು .ಹಾಗೇ ಸಂಜೆ ತಿಂಡಿಯನ್ನು ತಾರಮಕ್ಕ ತಮ್ಮ ಮನೆಯಿಂದಲೇ ತರುತ್ತಿದ್ದರು. ತಮ್ಮ ಮನೆ ಕೆಲಸಗಳನ್ನೆಲ್ಲ ಬೇಗನೆ ಮುಗಿಸಿ ನಾಳೆ ಬೆಳಗ್ಗಿನ ತಿಂಡಿಯ ತಯಾರಿಯನ್ನು ಮಾಡಿಟ್ಟು ರಾತ್ರಿಯ ತಯಾರಿಯನ್ನೂ ಮುಗಿಸಿ.. ಮಧ್ಯಾಹ್ನ ಊಟವಾದ ಮೇಲೆ ಬಿಸಿಲಿನಲ್ಲಿ ಸಾಧಾರಣ ತಮ್ಮ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಸಿಟಿ ಬಸ್ ಸ್ಟ್ಯಾಂಡಿನ ವರೆಗೆ ನಡೆದುಕೊಂಡು ಬಂದು .ಅಲ್ಲಿ ಈಗಿನಂತೆ ಗಳಿಗೆಗೊಂದು ಬಸ್ಸಿನಂತೆ ಇರದೆ ವಿರಳವಾಗಿರುತ್ತಿದ್ದ ಬಸ್ಸಿಗೆ ಕಾದು ..ಮಣಿಪಾಲಕ್ಕೆ ಬಂದು.. ಅಲ್ಲಿಂದ ಬಾಳಿಗಾ ವಾರ್ಡಿನ ತನಕ ನಡೆದುಕೊಂಡು ಬಂದು ನಮಗೆ ತಿಂಡಿಯನ್ನು ಕೊಟ್ಟು.. ವಾಪಸು ಪುನಃ ಬಸ್ಸಿನಲ್ಲಿ ಸಿಟಿ ಬಸ್ ಸ್ಟ್ಯಾಂಡಿಗೆ ಹೋಗಿ ಮನೆ ತನಕ ನಡೆದುಕೊಂಡು ಹೋಗಿ ಪುನಃ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಇದು ಒಂದು ದಿನವಲ್ಲ ಪೂರ್ತಿ ಅಜ್ಜಿ ಇರುವಷ್ಟು ದಿನ.ಆಗೆಲ್ಲಾ ಯಾಕೋ ಹೊರಗಿನಿಂದ ತಿಂಡಿ ತಂದು ತಿನ್ನುವ ಕ್ರಮವೇ ಇರಲಿಲ್ಲ ಹಾಗಾಗಿ ಈ ಒಂದು ಕೆಲಸವನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದರು. ಇಷ್ಟು ಮಾತ್ರವೇ ಮಿಷನ್ ಹಾಸ್ಪಿಟಲ್ ನಲ್ಲಿ ಯಾರಾದರೂ ಎಡ್ಮಿಟ್ ಆದರು ಅವರ ಮನೆಯಿಂದಲೇ ಊಟ ತಿಂಡಿ ಸರಬರಾಜು .. ಹಾಗೆ ಅವರ ಮಕ್ಕಳೆಲ್ಲರೂ ಮುಂಬಯಿಗೆ ಹೋದ ಮೇಲೆ ಕೇಶವಮಾಮನಿಗೆ ಆರೋಗ್ಯ ತಪ್ಪಿದಾಗ ಅನಿವಾರ್ಯವಾಗಿ ಅವರಿಗೆ ಉಡುಪಿಯ ಮನೆಯನ್ನು ಬಿಟ್ಟು ಮಕ್ಕಳಿರುವ ಕಡೆ ಮುಂಬಯಿಗೆ ಹೋಗಲೇಬೇಕಾಯಿತು. ತಮ್ಮಉಡುಪಿಯ ಮನೆಯ ಅಕ್ಕಪಕ್ಕದಲ್ಲಿರುವ ಮನೆಯವರನ್ನು ಪ್ರೀತಿಸುತ್ತಾ.. ಅವರ ಪ್ರೀತಿಯನ್ನು ಪಡೆಯುತ್ತಾ .. ತನ್ನಿಚ್ಛೆಯಂತೆ ಬದುಕುತ್ತಾ ಒಂದೇ ಜಾಗದಲ್ಲಿ ಬಹಳ ವರ್ಷದಿಂದ ಇದ್ದು ಅಭ್ಯಾಸವಿದ್ದವರು.. ಬೊಂಬಾಯಿ ಜೀವನಕೆ ಅಷ್ಟೇನೂ ಖುಷಿಯಿಂದ ಹೋದದ್ದಲ್ಲ .. ಆದರೂ ಮನೋಹರ ಅವರಿಗಾಗಿಯೇ ಒಂದು ಸಣ್ಣ ಮನೆಯನ್ನು ಅಂಬಾಡಿ ರೋಡಿನಲ್ಲಿ ಮಾಡಿದ್ದರಿಂದ ಅಲ್ಲಿ ಒಂದು ರೀತಿಯ ಸಂತೋಷದಲ್ಲೇ ಇದ್ದರು .ಆದರೂ ಇಷ್ಟು ವರ್ಷಗಳಿಂದ ಇದ್ದ ಒಂದು ಜಾಗವನ್ನು ಬಿಟ್ಟು ಇನ್ನೊಂದು ಜಾಗಕ್ಕೆ ಹೋಗಿ ಹೊಸತಾಗಿ ಜೀವನ ಮಾಡುವುದು ಅಷ್ಟೊಂದು ಸುಲಭದ ವಿಚಾರವೇನೂ ಅಲ್ಲವಲ್ಲ. ನಾನ೦ತೂ ಮುಂಬಯಿಗೆ ಹೋದಾಗ ಅವರ ಮನೆಗೂ ಒಂದು ಭೇಟಿ ಇದ್ದೇ ಇತ್ತು. ಅದಾಗಿ ಸ್ವಲ್ಪ ಸಮಯದ ನಂತರ ಮನೋಹರ ಅವನ ಮದುವೆಯಾಗುವ ಸಮಯದಲ್ಲಿ ಅವರ ಹಿರಿಮಗ ಅಂದರೆ ನನ್ನ ದೊಡ್ಡ ಭಾವನ ಮನೆಯ ಹತ್ತಿರದಲ್ಲೇ ಒಂದು ಸ್ವಲ್ಪ ದೊಡ್ಡ ಮನೆಯನ್ನೇ ಖರೀದಿಸಿದ್ದ.

ಲಹರಿ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಪ್ರಿಯ ಬರಹಗಾರರೆ- ಪ್ರಿಯ ಬರಹಗಾರರೆ,ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ. ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು. ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ. ಮೊದಲನೆಯದಾಗಿ ನಮ್ಮ  ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಮೂರನೆಯದಾಗಿ ಬ್ಲಾಗಿನ ಗುಣ ಮಟ್ಟ ಕಾಯ್ದುಕೊಳ್ಳಲು ಆಯ್ದ ಬರಹಗಳನ್ನುಮಾತ್ರ ಪ್ರಕಟಿಸಲಾಗುವುದು. ನಾಲ್ಕನೆಯದಾಗಿ ಹಿಂದೆಯೇಹೇಳಿದಂತೆ ರಾಜಕೀಯಮತ್ತು ದಾರ್ಮಿಕ ವಿಚಾರಗಳಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಕಳಿಸಿದ  ಎರಡು ದಿನದ ಒಳಗೆ ನಿಮ್ಮ ಬರಹ ಪ್ರಕಟವಾಗದಿದ್ದರೆ ಬರಹ ಸ್ವೀಕೃತವಾಗಿಲ್ಲವೆಂದು ತಾವು ತಿಳಿಯಬೇಕು. ಈಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ. ಸಾಹಿತ್ಯಕ್ಕೆ ಮೀಸಲಾದ ಒಂದು ಬ್ಲಾಗಿಗು-ಬೇರೆ ಜಾಲತಾಣಗಳಿಗು ಗುಣಾತ್ಮಕ ವ್ಯತ್ಯಾಸವಿರಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಈ ನಿಯಮಗಳನ್ನು ರೂಪಿಸಿದ್ದೇವೆ ಮತ್ತು ನಿಮ್ಮ ಸಲಹೆ ಸಹಕಾರಗಳನ್ನು ಕೋರುತ್ತಿದ್ದೇವೆ ಕನ್ನಡ ಸಾಹಿತ್ಯಲೋಕದಲ್ಲಿ ನಮ್ಮ ಬ್ಲಾಗಿಗೊಂದು ಉತ್ತಮ ಹೆಸರು ತಂದು ಕೊಡುವ ನಿಟ್ಟಿನಲ್ಲಿ ನಿಮ್ಮ ಬರಹಗಳು ಇರಲಿ ಎಂದಿನಂತೆ ನಿಮ್ಮ ಉತ್ತಮ ಬರಹಗಳನ್ನು ನಾವು ನಿರೀಕ್ಷಿಸುತ್ತೇವೆ.  ಸಂಪಾದಕರು,ಸಂಗಾತಿ ಸಾಹಿತ್ಯ ಪತ್ರಿಕೆ

ನಿಮ್ಮೊಂದಿಗೆ Read Post »

ಕಥಾಗುಚ್ಛ

ಕಥಾಯಾನ

ಅಂಜಲಿ ಜ್ಯೋತಿ ಬಾಳಿಗ  ಇಂಜಿನಿಯರಿಂಗ್ ಕೆಲಸದ ನಿಮಿತ್ತ  ಅಮೇರಿಕಾಕ್ಕೆ ಹೋದ ಅಂಜಲಿ ‘ವೀಸಾ’ ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ‘ಪಂಚತಾರಾ’ ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ‌ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ  ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಅಂಜಲಿಯ ಮೈ ಮನವನ್ನು ಆವರಿಸತೊಡಗಿತ್ತು‌. ಗೆಳತಿಯ ನೋಡಲೆಂದು ಹೊರಗೆ ಹೊರಟವಳು‌ ಮನಕ್ಷೋಭೆಯಿಂದ ಹಾಗೆಯೇ ಹಿಂತಿರುಗಿ ಹೂದೋಟದಲ್ಲಿ ಹಾಕಿದ್ದ ಆರಾಮ ಆಸನದ ಮೇಲೆ ಕೂತು ಕಣ್ಣು ಮುಚ್ಚಿ ಮಲಗಿದಳು. ತಣ್ಣನೆಯ ಗಾಳಿಯ ಜೊತೆಗೆ ಪಟ ಪಟ ಎಂದು ಮಳೆಯ ಹನಿಗಳು ಮುಖಕ್ಕೆ ಬಡಿದರೂ ಅವಳು ಏಳದೇ  ಕೂತಿರುವುದನ್ನು ನೋಡಿದ ಮ್ಯಾನೇಜರ್  ಒಳಗಿನಿಂದ ಕೊಡೆಯನ್ನು ತಂದು ಅಂಜಲಿ ಒದ್ದೆಯಾಗದಿರಲೆಂದು ತಲೆಯ ಮೇಲೆ ಹಿಡಿದ. ತನ್ನಿಂದ ಅವನಿಗೇಕೆ ತೊಂದರೆ ಎಂದು ಅಂಜಲಿ ಅವನ‌ ಜೊತೆಯಲ್ಲಿ ಹೆಜ್ಜೆಗೆ ಹೆಜ್ಜೆ ಹಾಕಿದಳು. ಪನ್ನೀರಿನಂತೆ ಬೀಳುತ್ತಿದ್ದ ಮಳೆಯ ಹನಿಯ ಬಿಂದುಗಳು ತನ್ನ ಆಕಾರವನ್ನು ಹೆಚ್ಚಿಸುತ್ತಿದ್ದಂತೆ ಅಂಜಲಿ ಸಂಪೂರ್ಣವಾಗಿ ಒದ್ದೆಯಾಗುವುದನ್ನು ನೋಡಿದ ಮ್ಯಾನೇಜರ್ ರಾಜೀವ್ ಪಾಂಡೆ ವೆರಾಂಡದ ಕಡೆ ಓಡಿದ. ಅವನು ವೆರಾಂಡಕ್ಕೆ ತಲುಪಿದರೂ ಅವಳ ನಡಿಗೆಯ ವೇಗ ಹೆಚ್ಚಾಗಲಿಲ್ಲ. ಅವಳಿನ್ನೂ ವೆರಾಂಡ ತಲುಪಲು ತುಂಬಾ  ದೂರದಲ್ಲೇ ಇದ್ದಳು.ಗಾಳಿ ಮಳೆಯ ಜೊತೆಗೆ ಸಿಡಿಲಿನ ಬೆಳಕಿಗೆ ಅಂಜಲಿಯ ಮನದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ದುಃಖ ಉಮ್ಮಳಿಸಿ ಬಂದ‌ ಕಣ್ಣೀರು ಮಳೆ ಹನಿಯ ಜೊತೆಗೆ ಮಿಲನವಾದದ್ದು ರಾಜೀವನ ಕಣ್ಣಿಗೆ ‌ಕಾಣಿಸಿತು. ಅಂಜಲಿ ಕೋಣೆಯೊಳಗೆ ಬಂದವಳೇ ಒದ್ದೆಯಾಗಿದ್ದರೂ ಹಾಗೆಯೇ ಹಾಸಿಗೆಯ ಮೇಲೆ ಬಿದ್ದಳು. ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುವಾಗ ಅವಳ ಜೀವನದಲ್ಲಿ ನಡೆದ ಘಟನೆಗಳು ಒಂದೊಂದರಂತೆ ಕಾಡಲು ಶುರುವಾಯಿತು. ****************************************************ವೇಣುಗೋಪಾಲರಾಯರು ಹಾಗೂ ಸುನಂದಿ ದಂಪತಿಯ ಏಕಮಾತ್ರ ಪುತ್ರಿಯೇ ಅಂಜಲಿ.ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗು ಮುಖದಿಂದ ಸ್ವೀಕರಿಸುವ ಅಪ್ಪನೇ ಅವಳಿಗೆ ಸ್ಪೂರ್ತಿ. ಅಪ್ಪ ತಂದ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸುವ ಅಮ್ಮನೆಂದರೆ ಅಂಜಲಿಗೆ ಅಪಾರ ಪ್ರೀತಿ. ತನ್ನ ಓದಿಗಾಗಿ ಹಗಲು ರಾತ್ರಿ ಕಷ್ಟಪಡುತಿರುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನ್ನ ಮನಸ್ಸನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿದ್ದಳು.ತಂದೆಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುವ ಶಕ್ತಿ ಇಲ್ಲವೆಂದು ತಿಳಿದ ಅಂಜಲಿ ಮೆರಿಟ್ ಸೀಟ್ ಪಡೆದರೆ ಉಚಿತವಾಗಿ ಕಾಲೇಜಿನಲ್ಲಿ ಅಡ್ಮಿಷನ್ ಸಿಗುತ್ತದೆ ಜೊತೆ ಜೊತೆಗೆ ಸ್ಕಾಲರ್ಶಿಪ್ ನಿಂದ ಬರುವ ಹಣವನ್ನು ಹಾಸ್ಟೆಲ್ ವಾಸಕ್ಕೆ ಉಪಯೋಗಿಸುವ ಯೋಚನೆಯನ್ನು ಮಾಡಿ ಕಷ್ಟಪಟ್ಟು ಓದಿ ಸಿಯಿಟಿ ಯಲ್ಲಿ ರ‌್ಯಾಂಕ್ ಪಡೆದು ತನ್ನ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಳು. ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆಂದು  ತಿಳಿದ ಅಂಜಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೂ ಅಳೆದು ತೂಗಿ ತನ್ನ ಹಣವನ್ನು ಖರ್ಚು ಮಾಡುತ್ತಿದ್ದಳು. ಅಂಜಲಿಯ ಕಷ್ಟ ಅರಿತ ಗೆಳತಿಯರು ಅವಳ ಮನಸ್ಸಿಗೆ ನೋವಾಗದಂತೆ  ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.ಹಾಸ್ಟೆಲ್, ಲೈಬ್ರರಿ ಬಿಟ್ಟರೆ ಬೇರೆ ಯಾವುದೇ ವಿಷಯದ ಕಡೆ ಗಮನ ಕೊಡದ ಅಂಜಲಿ ಮೊದಲ ವರ್ಷ ಇಂಜಿನಿಯರಿಂಗ್ ನಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದಳು. ರಜೆಯಲ್ಲಿ ಮನೆಗೆ ಹೋಗಿ ಅಮ್ಮ ತಯಾರಿಸಿದ ರುಚಿಯಾದ ಊಟ ಮಾಡಿ ಅಪ್ಪನ ಹಿತವಾದ ಪ್ರೀತಿಯನ್ನು ಸವಿಯುತ್ತಿದ್ದ ಅಂಜಲಿಗೆ ದಿನಗಳು ಓಡುತ್ತಿದ್ದದ್ದೆ ತಿಳಿಯಲಿಲ್ಲ. ಇನ್ನೇನೂ ಒಂದು ವರ್ಷದ ಇಂಜಿನಿಯರಿಂಗ್ ಕೋರ್ಸ್ ಬಾಕಿ ಇರುವ ಹೊತ್ತಿಗೆ ಅಂಜಲಿಯ ಸಹಪಾಠಿಯಾದ ಪ್ರಮೋದ ಅವಳ ಬಳಿ ಬಂದು ಪ್ರೇಮಭಿಕ್ಷೆ ಕೇಳಿದ.“ನನಗೆ ಈ ಪ್ರೀತಿ ಪ್ರೇಮದಲ್ಲಿ ವಿಶ್ವಾಸವಿಲ್ಲ ಪ್ರಮೋದ್. ಓದು ಮುಗಿದ ಮೇಲೆ ನನಗೆ ನನ್ನದೇ ಕೆಲವು ಗುರಿಗಳು ಇವೆ. ಕೆಲಸಕ್ಕೆ ಸೇರಬೇಕು, ಇಷ್ಟು ವರ್ಷ ಬಾಡಿಗೆ ಮನೆಯ ಸಹವಾಸ ಸಾಕಾಗಿದೆ. ಅಪ್ಪ ಅಮ್ಮನಿಗಾಗಿ ಪುಟ್ಟ ಮನೆಯನ್ನು ಖರೀದಿಸಬೇಕು. ಸ್ವಲ್ಪ ಸಮಯ ಅವರ ಜೊತೆಯಲ್ಲಿ ಕಳೆಯಬೇಕು.ಅಪ್ಪ ಅಮ್ಮ  ಇಷ್ಟಪಟ್ಟ ಹುಡುಗನ ಗುಣ ಸ್ವಭಾವ  ಇಷ್ಟವಾದರೆ ‌ಅವನ ಜೊತೆಯಲ್ಲಿ ಮದುವೆಯಾಗುವುದು..” ಎಂದು ಹೇಳಿ ಅವನಿಗೆ ಸಮಾಧಾನ ಮಾಡಿ ಕಳುಹಿಸಿದಳು. ಅಂಜಲಿಯ ತಿರಸ್ಕಾರ ಪ್ರಮೋದ್ ಗೆ ಬೇಸರವಾದರೂ ಅವಳ ಬೆನ್ನು ಬಿಡದ ಬೇತಾಳದಂತೆ ಹಿಂದೆ ಸುತ್ತಲೂ ಶುರುಮಾಡಿದ. ಅವನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದೆಂದು ಅರಿತ ಅಂಜಲಿ ಪ್ರಾಂಶುಪಾಲರಿಗೆ ದೂರು ಕೊಡುವೆ ಎಂದು ಪ್ರಮೋದನಿಗೆ ಹೆದರಿಸಿದಳು. ಓದು ಬಿಟ್ಟು ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕದೇ ಇರುತ್ತಿದ್ದ ಅಂಜಲಿಯ ಹಠದ ಸ್ವಭಾವವನ್ನು ಇಷ್ಟು ವರ್ಷದಿಂದ ನೋಡಿದ್ದ ಪ್ರಮೋದ್ ಗೆ ಅವಳು ನಿಜವಾಗಿಯೂ ಪ್ರಾಂಶುಪಾಲರಿಗೆ ದೂರು ಕೊಟ್ಟರೆ ತನ್ನ ವಿದ್ಯಾರ್ಥಿ ಜೀವನಕ್ಕೆ  ಕಪ್ಪು ಚುಕ್ಕೆ ಬೀಳುವುದು ಖಚಿತವೆಂದು ತಿಳಿದು ಅಂಜಲಿಯ ವಿಷಯಕ್ಕೆ ಹೋಗುವುದನ್ನು ಕಡಿಮೆ ಮಾಡಿ ಸುಮ್ಮನಾಗುತ್ತಾನೆ. ಸಮಯ ಯಾರಿಗೂ ಕಾಯದೇ ಓಡುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಇನ್ನೇನೂ ತಾವು ‘ಇಂಜಿನಿಯರ್’ ಆದೆವು ಎಂಬ ಖುಷಿಯಿಂದ ಅಂತಿಮ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಯನ್ನು ಬರೆದಿದ್ದರು.ವಿದ್ಯಾರ್ಥಿ ಜೀವನದ ಕೊನೆಯ ದಿನವನ್ನು ಮರೆಯದಂತೆ ಕಳೆಯಬೇಕೆಂದು ಯೋಚಿಸಿದ ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ.ಔತಣ ಕೂಟ ಮುಗಿಸಿದ ವಿದ್ಯಾರ್ಥಿಗಳು ಸಂಜೆಯ ಹೊತ್ತಿಗೆ ಊರಿಗೆ ಹೋಗಲಿರುವುದೆಂದು ಹಾಸ್ಟೆಲ್ ನಿಂದ ಲಗೇಜು‌ ಹಿಡಿದು ತಮ್ಮ ತಮ್ಮ ಮನೆಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬರುತ್ತಾರೆ. ಒಬ್ಬೊಬ್ಬರೇ  ಅವರ ಊರಿನ‌ ಬಸ್ಸು ಬಂದಾಗ ಉಳಿದವರಿಗೆ ‘ಬಾಯ್’ ಎಂದು  ಹೇಳಿ ಬಸ್ಸು ಹತ್ತಿ ಹೋದರು. ಸುಮಾರು ಎಂಟು ಗಂಟೆ ಕಳೆದರೂ ತನ್ನ ಊರಿಗೆ ಹೋಗುವ ಬಸ್ಸು ಬಾರದೇ ಮುಂದೇನೂ ಮಾಡುವುದೆಂದು ತೋಚದೇ ನಿಂತಿದ್ದ ಅಂಜಲಿ ಪರಿಚಿತ ಧ್ವನಿಯೊಂದು‌‌ ಕೇಳಿ‌ ಗೆಲುವಾಗುತ್ತಾಳೆ. ತನ್ನ ಗೆಳೆಯರನ್ನು ಬಸ್ಸು ಹತ್ತಿಸಲು ಬಂದಿದ್ದ ಪ್ರಮೋದ್ , ಅಂಜಲಿಯನ್ನು ಕಂಡು ಒಬ್ಬಳೇ ನಿಂತಿರುವ ಬಗ್ಗೆ ಕೇಳುತ್ತಾನೆ. ಬಸ್ಸು ಬಾರದಿರುವ ಕಾರಣದಿಂದ ಇಲ್ಲಿ ನಿಂತಿರುವುದು ಎಂದು ಅಂಜಲಿ ಹೇಳಿದಾಗ “ಈ ಹೊತ್ತಿನಲ್ಲಿ ನೀನು‌ ಒಬ್ಬಳೇ ಇಲ್ಲಿ ನಿಲ್ಲುವುದು ಬೇಡಾ, ನಾನು ನಿನ್ನನ್ನು ಮನೆಗೆ ತಲುಪಿಸುತ್ತೇನೆ..” ಎಂದು ಪ್ರಮೋದ್ ಹೇಳುತ್ತಾನೆ. ಅಂಜಲಿ ಬೇಡವೆಂದು ಹೇಳಿದರೂ ಕೇಳದೆ ಅವಳ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿ ಕಾರಿನ ಡೋರ್ ತೆಗೆದು‌ ನಿಲ್ಲುತ್ತಾನೆ. ಪರಿಚಯವಿರದವರ ಜೊತೆಗೆ ನಿಲ್ಲುವ ಬದಲು ಪರಿಚಯದವನ ಜೊತೆಯಲ್ಲಿ ಮನೆಗೆ ತಲುಪುದು ಕ್ಷೇಮವೆಂದು ಅಂಜಲಿ ಕಾರಿನೊಳಗೆ ಕೂತುಕೊಳ್ಳುತ್ತಾಳೆ. ಅಂಜಲಿಯ ಊರು ತಲುಪಲು ಏಳು ಗಂಟೆಯ ಪ್ರಯಾಣವಿರುವುದರಿಂದ ಪ್ರಮೋದ್ ಅರ್ಧದಾರಿಯಲ್ಲಿ ಊಟ ಮಾಡಲು ಕಾರು ನಿಲ್ಲಿಸುತ್ತಾನೆ. ಹಳೆಯ ಕಹಿನೆನಪುಗಳನ್ನು ಮರೆತ ಇಬ್ಬರೂ ನಗು ನಗುತ್ತಾ ಊಟ ಮುಗಿಸಿ ಕಾರನ್ನು ಏರುತ್ತಾರೆ. ಪಾರ್ಟಿಯಲ್ಲಿ ಕುಣಿದು ಸುಸ್ತಾಗಿದ್ದ ಅಂಜಲಿ‌ ಚಳಿಗೆ ಮುದುಡಿ ಕಾರಿನಲ್ಲೇ ಮಲಗಿರುವಾಗ ಪ್ರಮೋದ್ ಗೆ ಕೆಟ್ಟ ವಿಚಾರ ಮನದಲ್ಲಿ ‌ಸುಳಿಯುತ್ತದೆ.‌ ಪ್ರಮೋದ್ ಗೆ ತಾನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ವಯಸ್ಸಿನ ಕಾಮನೆಯನ್ನು ತಡೆದುಕೊಳ್ಳಲಾಗದೇ  ಜನಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಾನೆ.‌ ನಿದ್ದೆಯ ಮಂಪರಿನಲ್ಲಿದ್ದ ಅಂಜಲಿ ಊರು ಬಂತಾ?  ಎಂದು ಕೇಳುವಾಗ ಬರ್ಹಿದೆಸೆಗಾಗಿ ಎಂದು ಸುಳ್ಳು ಹೇಳುತ್ತಾನೆ.‌ ತನ್ನ ಪ್ರೀತಿಯನ್ನು ತಿರಸ್ಕರಿಸಿದ ಅಂಜಲಿಯ ಜೀವನ ಹಾಳು ಮಾಡಲು ಇದೇ ಸರಿಯಾದ ಸಮಯವೆಂದು ಯೋಚಿಸಿದ ಪ್ರಮೋದ್ ಹಸಿದ ವ್ಯಾಘ್ರದಂತೆ ಅವಳ ದೇಹವನ್ನು ‌ಆಕ್ರಮಿಸುತ್ತಾನೆ. ಎದೆಯ ಮೇಲೆಲ್ಲಾ ಕಚ್ಚಿ ರಕ್ತ ಸೋರುತ್ತಿದ್ದರೂ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸುತ್ತಾನೆ. ಎಷ್ಟು ಚೀರಾಡಿದರೂ ತನ್ನನ್ನು ರಕ್ಷಿಸಲು ಯಾರು ಬರಲಾರರು ಎಂದು ಅಂಜಲಿಗೆ ಅರಿವಾದಾಗ ಸೋತು ಕಣ್ಣೀರು ಹಾಕುತ್ತಾಳೆ. ತನ್ನ ಕೆಲಸ ಮುಗಿಸಿದ ಪ್ರಮೋದ್ ಅವಳ ಕುತ್ತಿಗೆಯನ್ನು ಹಿಸುಕಿ ಸತ್ತು ಹೋದಳೆಂದು ತಿಳಿದು ಅಲ್ಲೇ ಬಿಟ್ಟು ಹೋಗುತ್ತಾನೆ. ಅಂಜಲಿಯ ದೈವಬಲ ಚೆನ್ನಾಗಿತ್ತೋ, ಅಥವಾ ಪ್ರಮೋದ್ ‌ಗ್ರಹಚಾರ ಕೆಟ್ಟಿತ್ತೋ, ಅಂಜಲಿ ಸಾಯದೇ ಬದುಕಿರುತ್ತಾಳೆ. ಮುಂಜಾನೆಯ ಹೊತ್ತು ಪ್ರಜ್ಞೆ ಬಂದ ಅಂಜಲಿ ತನ್ನ ಇರುವಿಕೆಯನ್ನು ತಿಳಿಸಲು ಕಿರುಚಾಡುತ್ತಾಳೆ. ಆ ದಾರಿಯಲ್ಲಿ ಬರುತ್ತಿದ್ದ ಲಾರಿಯವರು ಕಿರುಚಾಟ ಕೇಳಿ ಗಾಡಿ ನಿಲ್ಲಿಸಿ ನೋವಿನಿಂದ  ಒದ್ದಾಡುತಿರುವ ಅಂಜಲಿಯನ್ನು ಲಾರಿಯಲ್ಲಿ ಹಾಕಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಅವಳ ಮನೆಗೆ ವಿಷಯ ತಿಳಿಸಿದಾಗ ಅಳುತ್ತಾ ರಾಯರು ಹಾಗೂ ಅವರ ಪತ್ನಿ ಬರುತ್ತಾರೆ. ಹದಿನೈದು ದಿನ ಸಾವು ಬದುಕಿನೊಂದಿಗೆ  ಹೋರಾಡಿದ ಅಂಜಲಿ ಕೊನೆಗೂ ಬದುಕಿ ಉಳಿಯುತ್ತಾಳೆ. ವೇಣುಗೋಪಾಲರಾಯರು ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅತ್ಯಾಚಾರದ ಕೇಸು ಆಗಿರುವುದರಿಂದ ಅಂಜಲಿ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಗುತ್ತದೆ. ವಿಚಾರಣೆಗಾಗಿ ಅವಳು ಠಾಣೆಗೆ ಹೋಗಿ ಬರುವುದರಿಂದ ಅವಳಿಗೆ ಅತ್ಯಾಚಾರವಾದ  ವಿಷಯದ ಹೊರಬೀಳುತ್ತದೆ.ಈ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಮಾಧ್ಯಮದವರು ಇವಳ ಬಗ್ಗೆ ಮಾಹಿತಿಯನ್ನು ಕೇಳಲು ಒಬ್ಬೊಬ್ಬರಾಗಿ ಸೇರುತ್ತಾರೆ. ತಮ್ಮ ಮಗಳಂತೆ ಅಂಜಲಿ ಎಂಬ ಅಕ್ಕರೆಯು ತೊರದೇ, ಅವಳ ಸಾಧನೆಯ ಬಗ್ಗೆ ಅಸಮಾಧಾನವನ್ನು ಹೊಂದಿದವರು  ಕೆಟ್ಟಕೆಟ್ಟದಾಗಿ ಮಾಧ್ಯಮದವರ ಬಳಿ ಹೇಳಿದಾಗ ಇದನ್ನೇ ದಾಳವಾಗಿ ಉಪಯೋಗಿಸಿದ ಪ್ರಮೋದ್ ಕೇಸ್ ಗೆಲ್ಲುತ್ತಾನೆ. ನ್ಯಾಯ ದೊರಕದೇ ಅಂಜಲಿಯ ಜೊತೆಗೆ ಹೆತ್ತವರು ಕುಸಿಯುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಹಾಳಾಯಿತು, ಇನ್ನೂ ಬದುಕಲು ಸಾಧ್ಯವಿಲ್ಲವೆಂದು ‌ಮೂವರು ಸೇರಿ ಕೀಟನಾಶಕ‌ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಧಿನಿಯಮವೋ, ದೇವರ ಇಚ್ಛೆಯೋ ಹೆತ್ತವರ ಕಳೆದುಕೊಂಡ ಅಂಜಲಿ ಮತ್ತೊಮ್ಮೆ ಸಾವು ಬದುಕಿನೊಡನೆ ಹೋರಾಡಿ ‌ಬದುಕುತ್ತಾಳೆ. ಇಂಜಿನಿಯರಿಂಗ್ ನಲ್ಲಿ ಅಂಜಲಿ ರಾಜ್ಯಕ್ಕೆ ‌ಪ್ರಥಮ ಸ್ಥಾನ ಪಡೆದ ವಿಷಯ ತಿಳಿದು ಶುಭಕೋರಲು ‘ರೀನಾ’ ಪೋನ್ ಕರೆ ಮಾಡಿದಾಗ ತಾನು ಅನುಭವಿಸಿದ ನೋವು, ಹೆತ್ತವರ ಸಾವು ಎಲ್ಲವನ್ನೂ ಅಂಜಲಿ  ರೀನಾಳಿಗೆ ತಿಳಿಸುತ್ತಾಳೆ. ಅಂಜಲಿಯ ಪರಿಸ್ಥಿತಿಗೆ ನೊಂದ ರೀನಾ ಆಸ್ಪತ್ರೆಗೆ ಬಂದು ಅವಳನ್ನು ಕರೆದುಕೊಂಡು ತನ್ನ ಊರಿಗೆ ಹೋಗುತ್ತಾಳೆ.“ಇನ್ನೂ ಚಿಕ್ಕ ವಯಸ್ಸು ನಿನ್ನದು, ಕಹಿ ಘಟನೆಯನ್ನು ಮರೆತು ಬದುಕುವುದನ್ನು ಕಲಿ ” ಎಂದು ಅವಳಿಗೆ ಬುದ್ದಿ ಹೇಳಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಾಳೆ. ಎಲ್ಲವನ್ನೂ ಮರೆತು ದೂರದ ದಿಲ್ಲಿಯಲ್ಲಿ ನೆಲೆನಿಂತ ಅಂಜಲಿ ತಾನು ಕಲಿತ ವಿದ್ಯೆಗೆ ಸರಿಹೊಂದುವಂತ‌ ಕೆಲಸವನ್ನು ಹುಡುಕಿ ಜೀವನ ನಡೆಸುತ್ತಾಳೆ. ****************************************************ಹಳೆಯ ನೆನಪಿನಿಂದ ಎಚ್ಚೆತ್ತು  ಬೆವರಿನಿಂದ ಮುದ್ದೆಯಾದ ಅಂಜಲಿ ಗಟಗಟನೆ ಬಾಟಲ್ ನಿಂದ ನೀರು ಕುಡಿದಳು. ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಪ್ರಮೋದ್ ಗೊಂದು ಗತಿ ಕಾಣಿಸಬೇಕೆಂದು ಅವನ ಚಲನವಲನ ಗಮನಿಸಿದಳು. ತನ್ನ ಮುಖ ಪರಿಚಯ ತಿಳಿಯಬಾರದೆಂದು‌ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಂಡು  ಹೋಟೆಲ್ ನ ಒಬ್ಬ ಸರ್ವೆಂಟ್ ‘ಗೆ ಹಣದ ರುಚಿ ತೋರಿಸಿ ಪ್ರಮೋದ್ ನ ಬಗ್ಗೆ ಸಂಪೂರ್ಣ ವಿಷಯ ಕಲೆ ಹಾಕಿದಳು. ಅವನು, “ಪ್ರಮೋದ್ ಇಲ್ಲಿಯ ಖಾಯಂ ಕಸ್ಟಮರ್ .ತಾನು ಮದುವೆಯಾಗುವ  ಹುಡುಗಿಯ ಪರಿಚಯಮಾಡಿಕೊಳ್ಳಲು ಬಂದಿದ್ದಾನೆ” ಎಂದು ಹೇಳಿದಾಗ ಅಂಜಲಿಗೆ ಕೋಪದ ಜೊತೆಗೆ ಆ ಹುಡುಗಿಯ ಬಗ್ಗೆ ಮರುಕವಾಗುತ್ತದೆ. ನನ್ನಂತೆ ಮತ್ತೊಂದು ಹೆಣ್ಣಿನ ಬಾಳು ಹಾಳಾಗುವುದು ಬೇಡವೆಂದು ಯೋಚಿಸಿ ಪ್ರಮೋದ್ ನಂತಹ ಕ್ರಿಮಿಗಳನ್ನು ಹೊಸಕಿ ಹಾಕಲು ನಿರ್ಧಾರ ಮಾಡುತ್ತಾಳೆ. ಸರ್ವೆಂಟ್ ಸಹಾಯದಿಂದ  ಬಾಡಿಗೆ ಹಂತಕರ ಪರಿಚಯ ಮಾಡಿಕೊಂಡ ಅಂಜಲಿ, ಪ್ರಮೋದ್ ನ ಕೈಕಾಲು ಮುರಿಸುವುದಷ್ಟೇ ಅಲ್ಲದೇ ಅವನ ಪುರುಷತ್ವವನ್ನು ನಾಶ ಪಡಿಸಲು ಹಂತಕರಿಗೆ ಹೇಳುತ್ತಾಳೆ. ವಿಷಯ ಹೊರಬಾರದಂತೆ ಇಬ್ಬರಿಗೂ ಕೈ ತುಂಬಾ ಹಣಕೊಡುತ್ತಾಳೆ. ಪ್ರಮೋದ್ ಗೆ  ಗತಿ ಕಾಣಿಸಿದ ಮಾಹಿತಿಯನ್ನು ಪಡೆದ

ಕಥಾಯಾನ Read Post »

ಅನುವಾದ

ಅನುವಾದ ಸಂಗಾತಿ

ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ಹಿಂದಿ: ರಾಮದರಶ್ ಮಿಶ್ರಾ ಕನ್ನಡ: ಕಮಲಾಕರ ಕಡವೆ ಕಮಲಾಕರ ಕಡವೆ ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ತೆರೆಯುತ್ತ ನನ್ನ ಕನಸುಗಳ ಪುಕ್ಕ ನಿಧನಿಧಾನ ಯಾರ ಬೀಳಿಸಲಿಲ್ಲ, ನನ್ನ ನಾ ಹೆಚ್ಚುಗಾಣಿಸಲಿಲ್ಲ ಸಾಗಿತು ಬಾಳ ಪಯಣ, ನಿಧನಿಧಾನ ನೀವೆಲ್ಲಿ ಎದ್ದು ಬಿದ್ದು ತಲುಪಿರುವಿರೋ ಅಲ್ಲಿ ನಾನೂ ಮುಟ್ಟಿಹೆನು, ನಿಧನಿಧಾನ ಬೆಟ್ಟಗಳಿಂದ ಅದಾವ ಪೈಪೋಟಿಯಿರಲಿಲ್ಲ ನಡೆಯುತ್ತಲುಳಿದೆ ತಲೆ ಎತ್ತಿ, ನಿಧನಿಧಾನ ಬಿದ್ದೆನಾದರೆ ನಾನು ಅತ್ತೆ ಒಂಟಿಯಾಗಿ ಮಾಸಿ ಗಾಯ ನೋವು ಮರೆಯಾಯ್ತು, ನಿಧನಿಧಾನ ಅಳುವೋ, ನಗುವೋ, ಇತರರಿಗೆ ಉಣಿಸಲಿಲ್ಲ ನನ್ನ ಪಾಲಿನ ವಿಷವ ನಾನೇ ಕುಡಿದೆ, ನಿಧನಿಧಾನ ನೆಲ, ಮಣ್ಣುಗಳ ಜೊತೆಜೊತೆಯಲ್ಲಿ ಸಾಗಿದವ ಕಟ್ಟಿದೆ ಅದರಲ್ಲಿಯೇ ಪಟ್ಟಣವ, ನಿಧನಿಧಾನ ದಕ್ಕಿತೇನು ನನಗೆ ಈ ನಿನ್ನ ಜಗತ್ತು ಪಡೆದೆ ನಾ ಪ್ರೀತಿ, ಮಾತ್ರ ನಿಧನಿಧಾನ *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ Two faces —————- An absolute truth that a coin poses two faces. It is to be used in the game of King and Queen, to get solution for the choice confusion. Both sides of a coin stuck together with their backs like siamese to be Inseparable one survives only when another exists. But now the coin jumped off the pocket. stood outside in a street like a flagpole posed its faces with a stare at north and south horizons middle stood a metal wall Just like never to be united. to be a fixed frame of harsh reality that never encounter with each other. Translated by — NagarekhaGaonkar ——————————————————————– ಎರಡುಮುಖ ಆನಾಣ್ಯಕ್ಕೆಎರಡುಮುಖಗಳು ಇರುವುದಂತೂ ಸತ್ಯ. ರಾಜ-ರಾಣಿ ಆಟಕ್ಕೆ ಆಯ್ಕೆಯ ಗೊಂದಲ ನಿವಾರಣೆಗೆ ಒದಗಿ ಬರುತ್ತಿದ್ದ ಆನಾಣ್ಯದ ಎರಡು ಮುಖಗಳು ಬೆನ್ನಿಗೆ ಬೆನ್ನಾಗಿ ಅಂಟಿಕೊಂಡಿದ್ದವು- ಸಯಾಮಿ ಅವಳಿಗಳಂತೆ- ಬೇರ್ಪಡಿಸಲಾಗದ ರೀತಿಯಲ್ಲಿ ಒಂದರ ಅಸ್ತಿತ್ವ ಇರುವುದೇ ಇನ್ನೊಂದರ ಇರುವಿಕೆಯಲ್ಲಿ ಆದರೆ ಈಗ ಜೇಬಿಂದ ಠಣ್ಣೆಂದೆಗರಿದ ನಾಣ್ಯ ಹೊರಗುರುಳಿ ನಿಂತಿದೆ ಬೀದಿಯಲ್ಲಿ ಗರುಡಗಂಭದಂತೆ ಒಂದು ಮುಖ ಉತ್ತರಕೆ ಇನ್ನೊಂದು ಮುಖ ದಕ್ಷಿಣಕ್ಕೆ- ಕ್ಷಿತಿಜದ ಕಡೆಗೆ ಕಣ್ಣಿಟ್ಟು ನಡುವೆ ನಿಂತಿದೆ ಲೋಹದ ಗೋಡೆ ಎಂದೆಂದೂ ಒಂದಾಗದ ರೀತಿಯಲ್ಲಿ. ಮುಖಗಳೆರಡೂ ಮುಖಾಮುಖಿಯಾಗದೆ ಎರಡಾಗಿಯೇ ಉಳಿಯುವ ಕಠೋರ ವಾಸ್ತವದ ಸ್ಥಿರ ಚಿತ್ರವಾಗಿ. ====== —– ಸುಬ್ರಾಯಚೊಕ್ಕಾಡಿ.

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮಳೆ ವಸುಂಧರಾ ಕದಲೂರು ಕಿಟಕಿ ಸರಳಾಚೆಸುರಿವ ಮಳೆ ಕಂಡುಮೂಗೇರಿಸುತ್ತೇನೆಮಣ್ಣ ಘಮಲಿಗೆ.. ಬಿದ್ದ ಹನಿಯೆಲ್ಲಾಸಿಮೆಂಟು ರೋಡಿನಲಿಉರುಳಾಡಿ ಕೊಚ್ಚೆಮೋರಿ ಸೇರುವಾಗಎಲ್ಲಿಂದ ಬರಬೇಕುಮಣ್ಣ ವಾಸನೆ.. ಊರ ಮನೆಯಲ್ಲಿಪುಟ್ಟ ತೊರೆಯಾಗಿಮಳೆ ನೀರು ತುಂಬಿಹರಿಯುತ್ತಿದ್ದ ಮೋರಿಗಳುಘಮ್ಮೆನುತ್ತಿದ್ದವು… ಪುಟ್ಟ ಫ್ರಾಕಿನ ಹುಡುಗಿಬಿಟ್ಟ ಕಾಗದದ ದೋಣಿಹೊತ್ತೋಯ್ದು ಮರೆಯಾದನೆನಪೂ ಘಮ್ಮೆಂದಿತು.. ಊರ ಮಳೆ ಕೇರಿ ಮಳೆನೆಲದ ಮಳೆಯಾಗಿತ್ತು.ಹರಿದು ಕಡಲ ಸೇರಿದಟ್ಟ ಮುಗಿಲಾಗಿ ಘಮ್ಮೆಂದಿತು… ಈ ನಗರ ಮಳೆ ಮಾತ್ರಒಂದು ನೆನಪೂ ತುಂಬುವುದಿಲ್ಲ.ಭೋರೆಂದು ಸುರಿದ ಮಳೆಗೆಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಮ್ಮ ಶಿವಲೀಲಾ ಹುಣಸಗಿ ಭುವಿಗೆ ಬಿದ್ದ ದೇಹಕೆ ಸೊಕಿಲ್ಲ ಹನಿ ಕೆಸರು ಅಂಗೈಯಗಲ ಬೆಳೆದ ಮಾಂಸದ ಮುದ್ದೆಗೆ. ನವಮಾಸಗಳ ಜೀವದುಸಿರ ಬಸಿರ ಹೊತ್ತವಳು ತಾಯತನದ ಸುಖವ ಹಂಬಲಿಸಿದವಳು.. ಸಾವುನೋವಿನಲಿ ಮರುಜನ್ಮ ಪಡೆದವಳು.. ತನುವಿನೊಳು ಅಡಗಿದ ತನ್ನಾತ್ಮ ಕಂಡು ನಕ್ಕವಳು. ಎದಗಪ್ಪಿಕೊಂಡು ಅಮೃತವ ಉಣಸಿದವಳು. ಕರುಳ ಬಳ್ಳಿಯ ಕಡಿದು ಮಡಿಲೊಳೆರಗಿದವರೂ ನಸು ನಕ್ಕು ಸೆರಗ ಗಂಟಲಿ ಬಿಗಿದು ಅಂಬೆಗಾಲಿಡಲು ಹೆಜ್ಜೆಯ ಮೂಡಿಸಿದವಳು ಬೇಕು ಬೇಡಗಳ ಕಾಡಿಬೇಡಿ ಪಡೆದವರು ತುತ್ತನುಂಡು ತೊಳತೆಕ್ಕೆಯಲಿ ಮಲಗಿದವರು ತೊದಲು ನುಡಿಯ ತುಂಬ ಆವರಿಸಿದವಳು ‘ಅಮ್ಮಾ’ ಯೆಂದು ಕೂಗಿ ಕರೆದಾಗ ಓಗೊಟ್ಟವಳು ಕರುಳು ಹರಿದರೂ,ಕರುಳ ಕೂಗಿಗೆ ಧ್ವನಿಯಾಗಿ.. ಕಷ್ಟಗಳ ಸರಮಾಲೆಯಲಿ ಸಲುಹಿದವಳು… ಹಸಿದು ಬಂದೊರ ಹಸಿದೊಡಲಿಗೆ ತುತ್ತನಿಟ್ಟವಳು ಮನೆಯ ಅನ್ನಪೂರ್ಣೇಶ್ವರಿಯಾದವಳು. ಅಮ್ಮಾ ನಿನಗೆ ಸರಿಸಾಟಿಯಾರಿಹರು ಜಗದೊಳಗೆ?? ನಿನ್ನೊರತು ಏನೂಂಟು ಈ ಭುವಿಯೊಳಗೆ.? ಏನ್ನ ತಪ್ಪು ಗಳೆಲ್ಲ ನಿನ್ನ ಎದಯೊಳಗೆ ಅಪ್ಪಿರುವೆ. ನಿನ್ನಪ್ಪಿ ಕಾಯ್ವ ಪ್ರೇಮವ ನನ್ನಲ್ಲಿ ಬಿತ್ತಿರುವೆ.. ನಿನ್ನ ದೇಹವಿದು ನಿನಗರ್ಪಿತ ಅನುದಿನವು ಭವದೆಲ್ಲ ಸುಖವು ನಿನ್ನಡಿಗೆ ಸಮರ್ಪಿತವು… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ ಗುಟುಕ ಅಂಬಲಿ ಕುಡಿದಾಂಗ ಸವಿಸವಿ ಮಾತಾಡಾಕಿ ಅವ್ವ ನೀನಂದ್ರ ನನ್ಜೀವ ಅಡುಗಿ ಮಾಡಾಗ ಕತಿ ಹೇಳಿ ಒಳಮನಸ್ಸಿಗ ಕೈಹಾಕಿ ಮೊದಲ ಮೇಷ್ಟಾದಾಕಿ ಅವ್ವ ನೀನಂದ್ರ ನನ್ಜೀವ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು ಬಿಡಿಸಿಟ್ಟ ಬಿಳಿ ಹೂಗಳು! ಕೊರೆದಿಟ್ಟ ಪುಟ್ಟಪುಟ್ಟ ಹೃದಯಗಳೊಂದಿಗೆ ಗುಲಾಬಿ ನಕ್ಷತ್ರಗಳು! ಜೊತೆಯಾದವು ಹೆಜ್ಜೆಗಳ ನೋವು ನಲಿವಿಗೆ; ನೇಲ್ ಪಾಲಿಷ್ ಗಳ ಕೂಡಿಟ್ಟ ಕನಸಿಗೆ! ನನ್ನ ನಿದ್ದೆಗೆ ಆಕಳಿಸಿ ಎದ್ದಾಗಲೊಮ್ಮೆ ಮೈಮುರಿದು ಕೂಡಿಕೊಂಡವು ಹಗಲು ರಾತ್ರಿಗಳಿಗೆ ಬಾತ್ ರೂಮು ಬಾಲ್ಕನಿ ಟೆರೆಸು ನಿರ್ಭಯವಾಗಿ ಅಲೆದೆವು “ದೇವರಮನೆಗೆ ಪ್ರವೇಶವಿಲ್ಲ” ಎಂದೆ ಮುನಿಸಿಕೊಂಡವು “ಪ್ಲೀಸ್” ಎಂದು ಪಟಾಯಿಸಿದೆ ಎಲ್ಲ ಸಲೀಸು ಪ್ರೈಸ್ ಟ್ಯಾಗ್ ಇಲ್ಲದ ಪ್ರೀತಿ ಮಾರಿದೆವು; ಖರೀದಿಸಿದೆವು ಮನಸ್ಸೊಂದು ಫ್ಲೀ ಮಾರ್ಕೆಟ್ಟು ಈಗ ಶಾಪಿಂಗ್ ಹೋದಾಗ ಬಟ್ಟೆ ಬ್ಯಾಗು ತರಕಾರಿ ಎಲ್ಲ ತರುತ್ತೇನೆ ಚಪ್ಪಲಿ ಅಂಗಡಿಯವ ಇನ್ಯಾರಿಗೋ ಹೊಸ ಜೊತೆಯ ಪಿಂಕ್ ಚಪ್ಪಲಿಯೊಂದನ್ನು ಮಾರುತ್ತಿರಬಹುದು! ಅದರ ಮೇಲೂ ಇರಬಹುದು ಹೂವು ಹೃದಯ ನಕ್ಷತ್ರಗಳು ******

ಕಾವ್ಯಯಾನ Read Post »

ಇತರೆ

ಮಮತೆಯ ಮಡಿಲು

ಬಣ್ಣಿಸಲು ಪದಗಳು ಬೇಕೇ? ಚಂದ್ರು ಪಿ.ಹಾಸನ ಮಮತೆಯ ಮಡಿಲಲ್ಲಿ ಮಿಡಿದ ಭಾವಗಳು ನೂರಾರು ಅಲ್ಲಿ ಕಳೆದ ಪ್ರತಿಕ್ಷಣಗಳು ಮಧುರ ಚಿರನೂತನ.ಮಾಂಸ ಮುದ್ದೆಯನ್ನು ನವಮಾಸ ತನ್ನ ಗರ್ಭದಲ್ಲಿ ಪೋಷಿಸಿ , ಈ ಜಗತ್ತನ್ನು ಪರಿಚಯಿಸಿ ಮಗುವಿನ ಬಾಳಿಗೆ ಆಸರೆಯಾಗುವವಳೇ ಅಮ್ಮ. ದೇವರಿಗೆ ದೇವರು ಅಮ್ಮ ಆಗಿರುವಾಗ ಮೂಲಕಥೆಗೆ ಪದವಿಲ್ಲ ಕೇವಲ ವಾತ್ಸಲ್ಯದ ಗುರುತುಗಳನ್ನು ಅಕ್ಷರವಾಗಿ ಸಿ ಮಮತೆಯ ಕ್ಷಣಗಳನ್ನು ಅವಳ ನೆನಪನ್ನು ಅವಳ ಮಡಿಲಲ್ಲಿ ಕಳೆದ ಕ್ಷಣಗಳನ್ನು ಪದವಾಗಿಸಿ ಒಂದೊಂದೇ ಈ ಲೇಖನದಲ್ಲಿ ತುಂಬಬಹುದಷ್ಟೇ. ಇತಿಹಾಸ ಅನ್ನಾ ಜಾರ್ವಿಸ್ ಅಮೆರಿಕದ ಶಾಲಾ ಶಿಕ್ಷಕಿ. ಅಪ್ಪನ ಸಾವಿನ ನಂತರ ಅವರು ಅಮ್ಮನ ನೆರಳಲ್ಲೇ ಬೆಳೆದರು. 1905 ಮೇ 9ರಂದು ಅಮ್ಮ ಕೂಡ ತೀರಿಕೊಂಡಾಗ ಅನ್ನಾ ಖಿನ್ನರಾದರು. ಬದುಕಿದ್ದಾಗ ಅಮ್ಮನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎಂದು ಅವರ ಮನಸ್ಸು ಚುಚ್ಚತೊಡಗಿತು. ಹಾಗೆ ನೋಡಿದರೆ ಅವರು ಅಮ್ಮನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ತಾಯಿಯ ಸಾವಿನ ನಂತರ ಅನ್ನಾ ಯಾರಿಗೇ ಮಾತೃವಿಯೋಗವಾದರೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.        ಭೋಗದ ಬದುಕಿನಲ್ಲಿ ಪ್ರೀತಿಯನ್ನೇ ಮರೆಯುವ ಎಷ್ಟೋ ಮಕ್ಕಳು ಅವರ ಕಣ್ಣಿಗೆ ಬಿದ್ದರು. ಎಲ್ಲರೂ ಅಮ್ಮನನ್ನು ಕನಿಷ್ಠ ವರ್ಷಕ್ಕೊಂದು ದಿನವಾದರೂ ಪ್ರೀತಿಯಿಂದ ಕಾಣಲಿ ಎಂಬ ಬಯಕೆ ಅನ್ನಾ ಮನಸ್ಸಿನಲ್ಲಿ ಚಿಗುರೊಡೆಯಿತು.ತಮ್ಮ ಯೋಚನೆಯನ್ನು ಪ್ರಚಾರಗೊಳಿಸಲು ಅವರು ಪತ್ರ ಬರೆಯುವ ಆಂದೋಲನ ಪ್ರಾರಂಭಿಸಿದರು. ಪತ್ರಿಕೆಗಳ ಸಂಪಾದಕರು, ಬರಹಗಾರರು, ಸೆನೆಟರ್‌ಗಳು, ಮೇಯರ್‌ಗಳು, ಗವರ್ನರ್‌ಗಳು ಹಾಗೂ ಅಸಂಖ್ಯಾತ ಚಿಂತಕರಿಗೆ ಅವರು ತಮ್ಮ ಯೋಚನೆಯನ್ನು ತಿಳಿಸಿ ಪತ್ರಗಳನ್ನು ಬರೆದರು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ನಗರಗಳಿಂದ, ಹಳ್ಳಿಗಳಿಂದ ಅಸಂಖ್ಯ ಪತ್ರಗಳು ಬಂದವು. ಪ್ರತಿಕ್ರಿಯಿಸಿದವರಲ್ಲಿ ಸಿಂಹಪಾಲು ಜನ ಅಮ್ಮನ ನೆನೆಯಲು ಒಂದು ದಿನ ಬೇಕು ಎಂಬ ಅನ್ನಾ ಯೋಚನೆಯನ್ನು ಬೆಂಬಲಿಸಿದ್ದರು. 1914, ಮೇ 8ರಂದು ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅನ್ನಾ ಯೋಚನೆಗೆ ಅಧಿಕೃತತೆಯ ಮುದ್ರೆ ಒತ್ತಿದರು. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಅಮ್ಮನ ದಿನಾಚರಣೆ ಆಚರಿಸುವುದೆಂದು ತೀರ್ಮಾನವಾಯಿತು. ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅಮೆರಿಕನ್ನರು ಅಮ್ಮನ ದಿನಾಚರಣೆಯ ದಿನ ತಮ್ಮ ತಾಯಂದಿರಿಗೆ ಹೂಗುಚ್ಛ ಕಳುಹಿಸಿ ಶುಭಾಶಯ ಕೋರತೊಡಗಿದರು. ಕೆಲವರು ಅಮ್ಮನ ಜೊತೆ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಊಟ ಮಾಡಿ ಸಂಭ್ರಮ ಆಚರಿಸಲಾರಂಭಿಸಿದರು. ಪ್ರತಿವರ್ಷ ಅಮೆರಿಕದಲ್ಲಿ ಈಗ 15 ಕೋಟಿ ಗ್ರೀಟಿಂಗ್ ಕಾರ್ಡ್‌ಗಳು ಅಮ್ಮನ ದಿನಾಚರಣೆಯ ದಿನ ವಿನಿಮಯವಾಗುತ್ತವೆ.  ಅಮ್ಮನ ದಿನಾಚರಣೆ ಶುರುವಾದ ಎರಡು ವರ್ಷದ ನಂತರ ಸೊನೋರಾ ಡಾಡ್ ಎಂಬ ಇನ್ನೊಬ್ಬ ಮಹಿಳೆ ಅಪ್ಪಂದಿನ ದಿನವೂ ಬೇಕೆಂದು ಪ್ರಚಾರ ಆಂದೋಲನ ಪ್ರಾರಂಭಿಸಿದರು. ಈ ಯೋಚನೆಯನ್ನು ವಿರೋಧಿಸಿದವರೇ ಹೆಚ್ಚು. ಹಾಗಾಗಿ 1972ರಲ್ಲಿ ಅಪ್ಪನ ದಿನಾಚರಣೆಗೆ ಅಧಿಕೃತತೆ ಪ್ರಾಪ್ತಿಯಾಯಿತು.  ಯಾವ ಶ್ರೇಷ್ಠತೆಯು ತಾಯಿಯ ಶ್ರೇಷ್ಠತೆಗೆ ಸಮನಾಗಿಲ್ಲ. ಕಾರಣ ಮೊದಲೇ ತಿಳಿಸಿದಂತೆ ನವಮಾಸಗಳು ಗರ್ಭದಲ್ಲಿ ಇರಿಸಿ ಪೋಷಿಸಿ ಜಗಕ್ಕೆ ಪರಿಚಯಿಸಿದ ಆಕೆ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಗುವಿನ ಆಸೆ-ಆಕಾಂಕ್ಷೆಗಳತ್ತ ಗಮನಹರಿಸಿ ಅದನ್ನು ಪೂರೈಸಲು ಮಾಡುವ ತ್ಯಾಗಗಳು ಅಜರಾಮರ. ಅಮ್ಮ ಎಂದರೆ ಅದು ಬರಿ ಪದವಲ್ಲ ಅದೊಂದು ಶಕ್ತಿ ಮಂತ್ರ ಕೇವಲ ಪ್ರೀತಿಯಿಂದ ಜಪಿಸಿದರೆ ಸಾಕು ಪ್ರತ್ಯಕ್ಷಳಾಗಿ ಪೂರೈಸಲು ಸಿದ್ಧರಿರುವಳು ಒಪ್ಪತ್ತು ಊಟ ತಿಂದು ಹೊಟ್ಟೆ ಕಟ್ಟಿ ಮಗುವನ್ನು ಒಪ್ಪಾಗಿ ಬೆಳೆಸುವಳು. ಮಗುವಿಗಾಗಿ ಎಂತಹ ತ್ಯಾಗ ಮಾಡಲು ಸಿದ್ಧರಿರುವಳು. ಅವಳು ಮಗುವಿಗಾಗಿ ಧರಿಸಿದ ವೇಷಗಳು ಎಷ್ಟೊ? ಕುಣಿದ ಕ್ಷಣ ಗಳು ಎಷ್ಟೊ. ಇಡೀ ಬದುಕನ್ನೇ ಮೀಸಲಿಡಲು ಬೇಕಾದರೂ ಚಿಂತಿಸುವುದಿಲ್ಲ. ಕಣ್ಣೀರಿಟ್ಟಾಗ ಮಗುವಿಗಾಗಿ ಕಣ್ಣಿರರಿಸಿ ಸಮಾಧಾನ ಪಡಿಸಿವಳು. ತಾನೊಂದರೂ ಅದರ ಅರಿವು ಮಗುವಿಗೆ ತಾಗದಂತೆ ನೋಡಿಕೊಳ್ಳುವಳು. ಹೆಜ್ಜೆ ಹೆಜ್ಜೆಗೂ ಬೆಂಗಾವಲಾಗಿ ನಿಂತು ದೈವದಂತೆ ಕಾಯುವಳು. ತಪ್ಪು ಮಾಡಿದರೆ ಕ್ಷಮೆ ನೀಡುವ ಏಕೈಕ ಜೀವ ಮಗುವಿನ ಪ್ರತಿ ಮಾತನ್ನು ಆಲಿಸುವ ಜೀವ ಇದು ಮಾತ್ರ ನೋವನ್ನು ನೋಯುತ್ತ ಕೇಳುವಳು ಕಣ್ಣೀರು ಇಡುವಳು ಗೆದ್ದಾಗ ಸಂತಸದಿ ಕುಪ್ಪಳಿಸಿ ಸಂತೋಷದ ಧಾರೆಯ ಹರಿಸುವಳು. ಇಂತಹ ಒಂದು ದಿವ್ಯ ಶಕ್ತಿಗೆ ಕೊನೆಯವರೆಗೂ ನೋವು ಬಾರದಂತೆ ನೋಡಿಕೊಂಡು ಅವಳ ಸಂತೋಷವನ್ನು ಕಾಯ್ದು ಪ್ರತಿದಿನ ನೋಡಿಕೊಂಡರೆ ಪ್ರತಿದಿನವೂ ಅಮ್ಮನ ದಿನಾಚರಣೆಯಾಗಿ ಕಾಣುವುದು.*********

ಮಮತೆಯ ಮಡಿಲು Read Post »

You cannot copy content of this page

Scroll to Top