ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ನೀರಾಗುತ್ತೇನೆ!

ಕಗ್ಗತ್ತಲ ಇರುಳೊಳಗೆ

ಬೀದಿ ದೀಪಗಳ ನೆರಳುಗಳಾಟದೊಳಗೆ

ಮುಸುಕೊದ್ದು ಮಲಗಿದ ನಿನ್ನ

ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ

ಹಗಲು ಕಂಡ ಬೀದಿಯ ಹುಡುಕಿ

ಇರುಳು ಅಲೆಯುತ್ತೇನೆ

ಎತ್ತರದ ನಿನ್ನ ಮನೆಯ

ಮಹಡಿಯಮೇಲೆ ಕವಿದ

ಕಪ್ಪು ಮೋಡಗಳಾಚೆ ಇಣುಕುತ್ತಿರುವ

ಚಂದ್ರನ ನಿದ್ದೆಗಣ್ಣಿನ

ನಗುವಿಗೆ ಹೋಲಿಸಿ ನಿನ್ನ

ಮಂದಹಾಸವ ನಾಚುತ್ತೇನೆ!

ಮೂಡಿದ ಸೂರ್ಯನ

ಎಳೆ
ಕಿರಣಗಳು ನಿನ್ನಂಗಳದಲ್ಲಿ

ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ

ಮೈಮುರಿಯುತ್ತ ಹೊರಬಂದ

ನಿನ್ನ ಮುದುಡಿದ ಸೀರೆಯ

ನಿರಿಗೆಗಳಲ್ಲಿ ಅಡಗಿರಬಹದಾದ

ಹಿಂದಿನ ರಾತ್ರಿಯ

ಕನಸುಗಳಲ್ಲಿ

ನನ್ನ  ಹುಡುಕುತ್ತೇನೆ!

ಕಾಣದ ಕನಸುಗಳ ನೆನೆದು

ಕಣ್ನೀರಾಗುತ್ತೇನೆ

************

ಕು.ಸ.ಮಧುಸೂದನ

About The Author

4 thoughts on “ಕವಿತೆ ಕಾರ್ನರ್”

  1. ಇರಳು ಅಳಿಯಲಿ ನಲ್ಲೆಯ ಬೆಳಗಿನ ಹೊಳಪು ಕವಿಗೆ ದಕ್ಕಲಿ…

  2. ಮಧುಸೂದನ ಮದ್ದೂರು

    ಕವಿತೆ ಸೊಗಸಿದೆ.ಇರುಳು ಅಳಿಯಲಿ ನಲ್ಲೆಯ ಬೆಳಗಿನ ಹೊಳಪು ಕವಿಗೆ ದಕ್ಕಲಿ

  3. Sri VEERALINGANA GOWDRA K.B

    ಮುದುಡಿದ ಸೀರೆಯ ನಿರಿಗೆಯಲಿ ಹುಡುಕುವ ಪರಿ ಇಷ್ಟವಾಯಿತು, ಅಭಿನಂದನೆಗಳು.

  4. ಜಯಶ್ರೀ. ಅಬ್ಬಿಗೇರಿ

    ಕವಿತೆಯ ಹೆಣಿಗೆ .
    ತುಂಬಾ ಮಜಬೂತಾಗಿದೆ.
    ಇಷ್ಟವಾಯಿತು.

Leave a Reply

You cannot copy content of this page

Scroll to Top