ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

10 Important facts about the Indian constitution

ಹೇಮಗಂಗಾ

ಸಮ ಸಮಾಜದ ಭವ್ಯ ಮಂಟಪಕೆ ಬುನಾದಿಯಾದವರು ನೀವು
ತಮ ತೊಡೆದು ಅಜ್ಞಾನಿಗಳ ಮನ ಬೆಳಗಿಸಿದವರು ನೀವು

ಸೃಷ್ಟಿಯಲ್ಲಿರದ ಮೇಲು ಕೀಳೆಂಬ ದೃಷ್ಟಿ ಬೇಕೇಕೆ ಈ ಜಗದಿ?
ಅಸ್ಪೃಶ್ಯತೆಯ ಪಿಡುಗ ಹೊಸಕಲು ದಾರಿ ತೋರಿದವರು ನೀವು

ಸಮಾನತೆ ಎಂಬುದು ಉಳಿಯಬಾರದು ಬರಿಯ ನಿಘಂಟಿನಲ್ಲಿ
ಶೋಷಿತರ ಅಡಗಿಹೋದ ದನಿಗೆ ಕೊರಳಾದವರು ನೀವು

ನೆನೆವೆವು ನಿಮ್ಮ ನವರೂಪ ತಳೆದ ಸಂವಿಧಾನದ ಶಿಲ್ಪಿಯೆಂದು
ಭವಿಷ್ಯದ ಪುಟಪುಟದಿ ಹೊಸ ಭಾಷ್ಯ ಬರೆದವರು ನೀವು

ಭೇದಭಾವವಿಲ್ಲ ಸಾವಿಗೆ ಎಲ್ಲರೊಂದೇ ಮರಳಿ ಮಣ್ಣ ಸೇರಿರೆ
ಅರಿವು ಮೂಡಿಸಿ ಅಜರಾಮರರಾಗಿ ಉಳಿದವರು ನೀವು

***********************

About The Author

3 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top