ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. ಭಾರತೀಯರ ಪ್ರಾಚೀನ ಬದುಕು ಸುಖದ ಸುಪತ್ತಿಗೆಯಾಗಿತ್ತು. ಅಲ್ಲಿ ಎಲ್ಲ ಬಗೆಯ ಸಮಾನತೆ ಇತ್ತು.ವೈದಿಕಯುಗದಲ್ಲಿ ಶಾಂತಿ,ಸಮೃದ್ದಿಯಿತ್ತು ಎಂಬ ಹೇಳಿಕೆಗಳು ಡಾಂಭಿಕತೆಯನ್ನು ಮೆರೆಯುತ್ತಿವೆ. ಹಸಿ ಸುಳ್ಳನ್ನು ಪ್ರದರ್ಶಿಸುತ್ತಿವೆ. ವಾಸ್ತವವೆಂದರೆ ರಾಜಪ್ರಭುತ್ವದ ಕಾಲದಲ್ಲಿ ಜನಸಾಮಾನ್ಯರ ಬದುಕು ಅತಿ ಹೆಚ್ಚು ಸಂಕಟ ಮತ್ತು ಶೋಷಣೆಗೆ ಒಳಗಾಗಿತ್ತು ಎಂಬುದನ್ನು ಶರೀಫರ ತತ್ವಪದಗಳಲ್ಲಿ ಕಂಡುಬರುತ್ತದೆ ಎಂಬಂತಹ ವಿಚಾರ ಚಂದ್ರಪ್ರಭಾ ರವರ ಈ ಹೊತ್ತಿಗೆಯಲ್ಲಿ ಕಾಣುತ್ತೇವೆ. ಬೌದ್ಧಿಕ ಬದುಕಿನ ದುಃಖ ದುಮ್ಮಾನಗಳನ್ನು ಧಿಕ್ಕರಿಸಿ ಜನನ ಮರಣ ಭವ ಚಕ್ರದಿಂದ ಪಾರಾಗುವ ಮುಕ್ತಿ ಸಾಧನೆಯನ್ನು ಸಾಧಿಸಬಹುದು. ಲೋಕ ಜೀವನವು ಹಲವು ವ್ಯಾಧಿಗಳಿಂದ ಕೂಡಿದೆ.ಹಸಿವು ನಿದ್ದೆ ನೀರಡಿಕೆ ನೆರೆಹಾವಳಿ ಅತಿವೃಷ್ಟಿ ಅನಾವೃಷ್ಟಿ ಬಡತನ ಅಜ್ಞಾನ ಮೌಢ್ಯ ಮೊದಲಾದವುಗಳು ಇಡುಕಿರಿದು ಭವ ಸಾಗರವು ಘೋರವಾಗಿದೆ.ಈ ಭವ ಸಾಗರದಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಆಧ್ಯಾತ್ಮ ಮಾರ್ಗವೇ ಸಾಧನ. ಜೀವ ಜಗತ್ತು, ಈಶ್ವರ ಮಾಯೆ ಮೊದಲಾದ ತತ್ವಗಳ ಹುಡುಕಾಟ, ನಂತವಾದ ಈ ಬದುಕಿನಿಂದ ಅನಂತವಾದದತ್ತ ಚಲಿಸುವುದೇ ಜೀವನದ ಗುರಿಯಾಗಿದೆ. ಹೀಗೆ ಇನ್ನೂ ಹಲವಾರು ವಿಷಯಗಳನ್ನು ಶ್ರೀಮತಿ.ಚಂದ್ರಪ್ರಭಾ ರವರು “ತಗಿ ನಿನ್ನ ತಂಬೂರಿ” ಎಂಬ ಕಿರುಹೊತ್ತಿಗೆಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ.

ಪುಸ್ತಕ ವಿಮರ್ಶೆ Read Post »

ಇತರೆ

ಪರಿಚಯ

ಹನುಮಾಕ್ಷಿ ಗೋಗಿ. ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..! ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು ತೀರಾ ಹತ್ತಿರದ ಶಿಷ್ಯರಾಗಿದ್ದೆವು. ಆ ಸಮಯದಲ್ಲಿ ಸಿಕ್ಕವರು ಅಂದರೆ ನಮಗೆ ತೀರಾ ಪರಿಚಿತವಾದರು ಸಂಶೋಧಕಿ ಹನುಮಾಕ್ಷಿ ಗೋಗಿಯವರು… ಹನುಮಾಕ್ಷಿ ಗೋಗಿಯವರು ಬರೀ ಸರ್ಕಾರಿ ಅಧಿಕಾರಿಗಳು ಮಾತ್ರ ಆಗಿರಲಿಲ್ಲ. ಅವರೊಬ್ಬ ಅನನ್ಯ ಲೇಖಕಿಯಾಗಿದ್ದರು. ಅದರಲ್ಲೂ ಅವರೊಬ್ಬ ಶಾಸನಗಳ ಸಂಶೋಧಕಿಯಾಗಿದ್ದರು. ಅವರ ಸಂಶೋಧನೆ ತೀರಾ ಹಸಿವಿನಿಂದ ಕೂಡಿತ್ತು, ಅಂದರೆ ಅವರು ಶಾಸನ ಅಧ್ಯಯನದಲ್ಲಿ ಅಷ್ಟೊಂದು ತೀರಾ ಚಿಕಿತ್ಸಕರಾಗಿದ್ದರು. ಶಾಸನಗಳ ಹುಡುಕಾಟದಲ್ಲಿ ಭಾರೀ ಹಸಿವು ಉಳ್ಳವರು ಆಗಿದ್ದರು ಹನುಮಾಕ್ಷಿ ಗೋಗಿಯವರು… ಮಹಿಳಾ ಸಾಹಿತ್ಯದಲ್ಲಿ ಹೆಸರು ಮಾಡಿದವರೂ ಆಗಿದ್ದರು. ಹಾಗಾಗಿಯೇ ಹನುಮಾಕ್ಷಿ ಗೋಗಿಯವರು ‘ಮಹಿಳಾ ಸಾಹಿತ್ಯಕಾ’ ಎಂಬ ಪ್ರಕಾಶನವನ್ನೂ ತೆರೆದು ನಾಡಿನ ಪ್ರಮುಖ ಲೇಖಕಿಯರ ಸಾಹಿತ್ಯವನ್ನು ಪ್ರಚುರಪಡಿಸಿದವರು ಮತ್ತು ಈಗಲೂ ಆ ನಿಟ್ಟಿನ ಕೆಲಸದಲ್ಲಿ ತೊಡಗಿಕೊಂಡವರು. ಇವರ ಪ್ರಕಾಶನದಿಂದ ಅಮೂಲ್ಯ ಸಾಹಿತ್ಯ ಒಡಮೂಡಿದೆ. ಹಾಗಾಗಿಯೇ ತಾವೊಬ್ಬ ಸಾಹಿತಿಯಾಗಿಯೂ ಇತರ ಪ್ರಮುಖ ಮಹಿಳಾ ಸಾಹಿತಿಗಳನ್ನೂ ಹೊರತಂದವರು ಹನುಮಾಕ್ಷಿ ಗೋಗಿಯವರು… ಮುಖ್ಯವಾಗಿ ಇವರೊಬ್ಬ ಶಿಲಾ ಶಾಸನಗಳ ಸಂಶೋಧಕಿಯಾಗಿ ಮಾಡಿದ ಕೆಲಸ ಅಮೂಲ್ಯ ಮತ್ತು ಅನನ್ಯವಾದದು. ಇಂತಹ ಹನುಮಾಕ್ಷಿ ಗೋಗಿಯವರ ಬಗೆಗೆ ಒಂದು ಕಿರು ಟಿಪ್ಪಣಿ ಹೀಗಿದೆ… ಹನುಮಾಕ್ಷಿ ಗೋಗಿ ಅವರು ೧೯೫೫ ಜೂನ ೧ ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು… ಇವರು ಮೂಲತಃ ಅವಿಭಜಿತ ಗುಲ್ಬರ್ಗಾ ಅಥವಾ ಕಲಬುರ್ಗಿ ಜಿಲ್ಲೆಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು. ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಈಗ ಧಾರವಾಡದಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿಯವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿಯೂ ಇದ್ದಾರೆ… ಇವರು ‘ಮಹಿಳಾ ಸಾಹಿತ್ಯಿಕಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕಾನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರಗಳ ೪9ಕ್ಕೂಹೆಚ್ಚು ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ… ಶಾಸನಗಳ ಆಕರ ಸಂಶೋಧಕಿಯಾಗಿರುವ ಇವರ ಕೃತಿಗಳು ಹೀಗಿವೆ– ವ್ಯಾಸಂಗ (೧೯೮೩). ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ). ಸುರಪುರ ತಾಲೂಕಿನ ಶಾಸನಗಳು (೧೯೯೪). ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫). ಕರ್ನಾಟಕ ಭಾರತಿ ಸೂಚಿ (೨೦೦೨). ಅನುಶಾಸನ (೨೦೦೨). ಉಪ್ಪಾರ ಹಣತೆ (೨೦೦೨). ಬೀದರ ಜಿಲ್ಲೆಯ ಶಾಸನಗಳು (೨೦೦೫). ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭). ಲಕ್ಕುಂಡಿ ಶಾಸನಗಳು (೨೦೦೮). ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡರ ಜೊತೆಯಲ್ಲಿ). ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯). ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ಚೈತನ್ಯಶೀಲೆ ( ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧). ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩). ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪). ರಾಜಮನೆತನದ ಚರಿತ್ರೆಗಳು (೨೦೧೪). ಲಕ್ಷ್ಮೇಶ್ವರದ ಶಾಸನಗಳು (೨೦೧೫). ದಂಡಿನ ದಾರಿ (೨೦೧೬). ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೬). ಇವರ ಸಂಶೋಧನೆಗೆ ಸಂದ ಸನ್ಮಾನ ಮತ್ತು ಪುರಸ್ಕಾರಗಳು-– ೧೯೯೧ – ಆಡಳಿತಾತ್ಮಕ ಸೇವೆಗೆ ಸನ್ಮಾನ. ೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದದ ಪುರಸ್ಕಾರ. ೧೯೯೫ – ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು. ೧೯೯೬ – ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು. ೨೦೦೪ – ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ. ೨೦೦೫ – ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು. ೨೦೦೫ – ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ. ೨೦೦೫ – ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು. ೨೦೦೬ – ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ. ೨೦೦೬ – ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು. ೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು. ೨೦೦೯ – ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು. ೨೦೧೪ – ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ. ೨೦೧೪ – ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ. ೨೦೧೫ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ. ೨೦೧೫ – ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ. ೨೦೧೫ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ. ೨೦೧೫ – ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ. ೨೦೧೫ – ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ. ೨೦೧೬ – ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ೨೦೧೭ – ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ. ಹೀಗೆಯೇ ವಿವಿಧ ಪುರಸ್ಕಾರ ಮತ್ತು ಪ್ರಶಸ್ತಿಗಳು ಬಂದಿವೆ ಹನುಮಾಕ್ಷಿ ಗೋಗಿಯವರಿಗೆ… ಹೀಗೆಯೇ ಒಬ್ಬ ಸರ್ಕಾರಿ ಅಧಿಕಾರಿಯಾಗಿಯೂ ಶಾಸನ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು ಹನುಮಾಕ್ಷಿ ಗೋಗಿಯವರು..! *********** — ಕೆ.ಶಿವು.ಲಕ್ಕಣ್ಣವರ

ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆ

ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ        ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು.    ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ ಕಾವ್ಯವಾಗಿದ್ದು, ಅವರಿಂದ ಮತ್ತಷ್ಟುಕೃತಿಗಳು ಮೂಡಿಬರಲೆಂದು ಹಾರೈಸಿದರು. ನಂತರ ಮಾತಾಡಿದ ಕವಿ ಮದುಸೂದನ್ ಅವರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂದು ಕರೆ ನೀಡಿದರು. ಕೃತಿ ಬಿಡುಗಡೆಯ ಈ ಕಾರ್ಯಕ್ರಮವನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದರು. ಸಂಕೋಲೆಗಳ ಕಳಚುತ್ತಆನ್ ಲೈನ್ ಮೂಲ ಪುಸ್ತಕ ಕೊಳ್ಳುವ ಮಾಹಿತಿಪುಸ್ತಕದ ಬೆಲೆ-150=00 ರೂಪಾಯಿಗಳುIFSC code:CNRBOOO2698A/c:. 1145101036761Bhadravathi RamachariCanara bank,. Rajajinagar 2nd Block. ಮೇಲಿನ ಖಾತೆಗೆ ಹಣ ಹಾಕಿಕೆಳಗಿನ ವಾಟ್ಸಪ್ ನಂಬರಿಗೆ ವಿಳಾಸ ಕಳುಹಿಸಿನಂಬರ್-8861495610ಇಂದ: ಕಾವ್ಯ ಸ್ಪಂದನ ಪ್ರಕಾಶನ,ಬೆಂಗಳೂರು ***********************************

ಪುಸ್ತಕ ಬಿಡುಗಡೆ Read Post »

You cannot copy content of this page

Scroll to Top