ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Aerial View of White and Grey Metal Bridge Surrounded by Forest Trees

ಕವಿತೆಯ ಘನತೆ

ಬಿ.ಎಸ್.ಶ್ರೀನಿವಾಸ್

ಕವಿತೆಗೊಂದು ಘನತೆಯಿದೆ
ಭಾವಗಳ ತೂಕವಿದೆ
ಬಂಧಗಳ ಭಾರವಿದೆ
ಹೃದಯದ ಪಿಸುದನಿಯಿದೆ

ಕವಿತೆಗೊಂದು ಘನತೆಯಿದೆ
ಕಾಣದ ಕಂಬನಿಯಿದೆ
ಕೇಳಿರದಾ ರಾಗವಿದೆ
ರವಿಕಾಣದ ರಸತುಂಬಿದೆ

ಕವಿತೆಗೊಂದು ಘನತೆಯಿದೆ
ಮೈಮರೆಸುವ ಶ್ರುತಿಲಯವಿದೆ
ನೊಂದ ಮನವ ಸಂತೈಸುವ
ಸಾತ್ವಿಕ ಶಕ್ತಿಯಿದೆ

ಕವಿತೆಗೊಂದು ಘನತೆಯಿದೆ
ಹರಿವ ನದಿಯ ಬಳುಕಿದೆ
ಗರಿಗೆದರಿ ನರ್ತಿಸುವ
ನವಿಲಿನ ಲಾಸ್ಯವಿದೆ

ಕವಿತೆಗೊಂದು ಘನತೆಯಿದೆ
ಭಕ್ತಿಯಿದೆ ವಿರಕ್ತಿಯಿದೆ
ತಿಮಿರವನ್ನು ತೊಲಗಿಸುವ
ಸೃಜನ ಸ್ವಯಂಪ್ರಭೆಯಿದೆ

About The Author

7 thoughts on “ಕಾವ್ಯಯಾನ”

  1. ಶ್ರೀನಿವಾಸ್ ಬಿ.ಎಸ್

    ಹೃತ್ಪೂರ್ವಕ ಧನ್ಯವಾದಗಳು ಮಧುಸೂದನ್ ಅವರೇ

  2. ತುಂಬಾ ಸೊಗಸಾದ ಕವನ. ಹೌದು ಕವಿತೆಗೆ ಈ ಎಲ್ಲಾ ಘನತೆಗಳಿವೆ.
    ಅಭಿನಂದನೆಗಳು

    1. ಶ್ರೀನಿವಾಸ್ ಬಿ.ಎಸ್

      ಹೃತ್ಪೂರ್ವಕ ಧನ್ಯವಾದಗಳು ಹುವಾ ಶ್ರೀ

  3. Narasimha Murthy

    ಬಹಳ ಚೆನ್ನಾಗಿದೆ.
    ಇಂತಹ ಸುಂದರವಾದ ಕವನಗಳು ಇನ್ನಾ ಹೆಚ್ಚಾಗಿ ಮೂಡಿ ಬರಲೆಂದು ಆಶಿಸುವ

    ನರಸಿಂಹ ಮೂರ್ತಿ

    1. ಶ್ರೀನಿವಾಸ್ ಬಿ.ಎಸ್

      ಹೃತ್ಪೂರ್ವಕ ಧನ್ಯವಾದಗಳು ಮೂರ್ತಿ

Leave a Reply

You cannot copy content of this page

Scroll to Top