ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅನಿಸಿಕೆ

ನಗರಗಳಲ್ಲಿ ದುಡಿಯುವ ಹುಡುಗರ ಕಷ್ಟ ಐಶ್ವರ್ಯ ಎಲ್ಲೇ ಹೋದ್ರು, ಎಷ್ಟೊತ್ತಿಗೆ ಮನೆಗೆ ಬಂದ್ರು ಯಾಕೆ, ಏನು ಅನ್ನೊ ಪ್ರಶ್ನೆಗಳನ್ನ ಹುಡ್ಗುರಿಗೆ ಮಾತ್ರ ಕೇಳಲ್ಲ ಅನ್ನೋದು ಪ್ರತಿಯೊಂದು ಮನೆಯಲ್ಲಿರೊ ಅಕ್ಕ ತಂಗಿಯರ ವಾದ. ನನ್ನನ್ನೂ ಸೇರ್ಸಿ…..ನಾವು ಅಪ್ಪ ಅಮ್ಮನ ಹತ್ರ ಜಾಸ್ತಿ ಜಗಳ ಮಾಡೋದು ಇದೊಂದೇ ವಿಷಯಕ್ಕೆ ಅನ್ಸತ್ತೆ. ನಮಗೂ ಹುಡ್ಗುರ ತರ ಫ್ರೀಡಂ ಬೇಕು ಅಂತ. ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಗಂಡಿಗೆ ಸರಿ ಸಮನಾಗಿ ನಿಂತಿದ್ದಾಳೆ ಅಂತ ನಾವೆಷ್ಟೇ ಬಾಯ್ ಬಡ್ಕೊಂಡು ಮೊಂಡು ಹಠ ಮಾಡಿದ್ರು ಮನೆಲಿ ಮಾತ್ರ ನಮ್ಮ ಮಾತು ಕೆಳೋದೆ ಇಲ್ಲ. ಇದ್ನೆಲ್ಲ ನೋಡಿದ್ ನಾವು ಅನ್ಕೊಳೋದು‌ ಗಂಡ್ಮಗ ಅಂತ ತುಂಬಾ ಪ್ರೀಯಾಗಿ ಬೆಳೆಸ್ತಿದಾರೆ ಅನ್ಕೊತಿವಿ ಆದ್ರೆ ವಾಸ್ತವಾನೆ ಬೇರೆ ಇರತ್ತೆ. ಹೆಣ್ಣು ಗಂಡಿಗೆಷ್ಟೇ ಸರಿ ಸಮನಾಗಿ ದುಡುದ್ರು ಕೂಡ ಗಂಡಿನಷ್ಟು ಭಾವನೆಗಳ ಹಿಡಿತ, ತುಡಿತ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಿಲ್ಲ. ಮದುವೆಯಾಗಿ ಹೋಗೊ ಹೆಣ್ಣು ತನ್ನವರನ್ನೆಲ್ಲ ಬಿಟ್ಟು ಹೊಗೊವಾಗ ಅಳ್ತಾಳೆ. ಆದ್ರೆ ವಯಸ್ಸಿಗೆ ಬಂದ ಹುಡುಗ್ರು ಹಾಗೆಲ್ಲ ಅಳೋಕಾಗತ್ತಾ?… ಹುಟ್ಟಿ ಬೆಳೆದ ಊರು, ಜೊತೆಗಿದ್ದ ಪ್ರೆಂಡ್ಸ್, ಕ್ರಶ್ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಬೆಂಗಳೂರಿನಂತಹ ಮಹಾನಗರಗಳ ಅರಸಿ ಮನೆ ಜವಾಬ್ದಾರಿ ಹೊತ್ತು ಹೊರಡೊಕೆ ತಯಾರಾದ ಹುಡುಗನಿಗೂ ಭಾವನೆಗಳಿದಾವೆ ಕಣ್ಣು ರೆಪ್ಪೆ ಅಲ್ಲಾಡ್ಸಿದ್ರು ಕಣ್ಣೀರು ಬಿಳೋ ಹಾಗಿದ್ರು ಹೆತ್ತವರ ಮುಖದಲ್ಲಿ ನಗು ನೋಡೊಕೋಸ್ಕರ ಎನೂ ಆಗೇ ಇಲ್ಲ ಅನ್ನೊ ತರ ಎಲ್ಲ ಅದುಮಿಟ್ಟು ಹಿಂತಿರುಗಿ ನೋಡಿದ್ರೆ ಎಲ್ಲಿ ಅಳೋದು ಗೊತ್ತಾಗತ್ತೊ ಅಂತ ಹಿಂತಿರ್ಗಿನೂ ನೋಡದೆ ಹೋಗ್ತಾರೆ…… ಪ್ರತಿಯೊಂದು ಹುಡ್ಗನೂ ಒಂದಲ್ಲ ಒಂದು ಟ್ಯಾಲೆಂಟ್ ಹೊತ್ಕೊಂಡೆ ಹುಟ್ಟಿರ್ತಾನೆ. ಆದ್ರೆ ಅವನು ಎನೇ ಮಾಡಿದ್ರು  ಅಯ್ಯೊ ಅವನು ಬಿಡು ಹುಡ್ಗ ಹೇಗೋ ಬದುಕ್ತಾನೆ ಅನ್ನೊ ಸಮಾಜ ಒಂದು ಸಲ ಅವನೂ ಹೇಗೆ ಬದುಕ್ತಾನೆ ಅನ್ನೊ ಅನ್ವೇಷಣೆ ಮಾಡಿದ್ರೆ ಇವತ್ತು ವಿಶ್ವ ಮಹಿಳಾ ದಿನಾಚರಣೆ ಅಂತ ಇರೊ ಹಾಗೆ ವಿಶ್ವ ಪುರುಷರ ದಿನಾಚರಣೆನೂ ಇರ್ತಿತ್ತು…..ಗಂಡಿನಲ್ಲಿ ಕಾಮ ಅನ್ನೊದೊಂದು ಅವನನ್ನ ಹಾಳು ಮಾಡತ್ತೆ ಅನ್ನೊದೊಂದು ಬಿಟ್ರೆ ಅವನು ಹೆಣ್ಣಿನಷ್ಟು ಜಾಣಾಕ್ಷತನ, ಸಣ್ಣತನ, ಕೊಂಕುತನ ಇದ್ಯಾವುದು ‌ಇಲ್ಲ. ಇನ್ನೊಬ್ಬರ ನೋಡಿ ಉರ್ಕೊಳೊ ಜಾಯಮಾನವೇ ಅಲ್ಲ. ಅವರೂ ಕೂಡ ಚಿಕ್ಕ ವಯಸ್ಸಿಂದಾನೇ ಹತ್ತಾರು ಆಸೆ ಕನಸುಗಳನ್ನ ಕಟ್ಕೊಂಡೆ ಬಂದಿರ್ತಾರೆ. ಆದ್ರೆ ಈ ಫ್ಯಾಮಿಲಿ, ದುಡ್ಡು, ಅಡ್ಜೆಸ್ಟಮೆಂಟ್ ಅನ್ನೊ ಲೈಫಲ್ಲಿ ಅವರ ಕನಸಿನ ಕೂಸು ಕಾಲು ಮುರ್ಕೊಂಡು ಮೂಲೇಲಿ ಕೂತಿರತ್ತೆ. ಅವರಿಗೂ ಕೂಡ ಎಲ್ಲರಂತೆ ಕಲಿಯಬೇಕು ಅನ್ನೊ ಆಸೆ ಇರತ್ತೆ , ಹಸಿದ ಹೊಟ್ಟೆ ಖಾಲಿ ಜೇಬು ಅವರಿಗೆ ಪಾಠ ಕಲಿಸ್ತಿರತ್ತೆ, ಶ್ರೀಮಂತರ ಮನೆ ಮಕ್ಕಳ ತರ ಬೈಕಲ್ಲಿ ಊರೆಲ್ಲ ಸುತ್ಬೇಕು ಅನ್ಕೊಂಡ್ರು ಬಡತನ ಇವರ ಸುತ್ತಾನೇ ಸುತ್ತುತ್ತಿರತ್ತೆ, ಓದಿ ಕೆಲಸ ಗಿಟ್ಟಿಸ್ಕೊಂಡು ಸ್ವಂತ ದುಡಿಮೇಲಿ ಬೆಳಿಬೇಕು ಅಂತಿರತ್ತೆ ಅದ್ರೆ ಅಕ್ಕಂದಿರ ಮದುವೆಗೆ ಮಾಡಿದ ಸಾಲದ ಬಡ್ಡಿನೇ ಬೆಳಿತಿರತ್ತೆ. ಸಂಸಾರದ ಜಂಜಾಟದಲ್ಲಿ ಸಿಕ್ಕು ಒದ್ದಾಡ್ತಿರ್ತಾರೆ. SSLC ನೋ ಪಿಯುಸಿ ನೋ ಓದ್ಕೊಂಡು ಅವರಿವರ ಕೈಕಾಲು ಹಿಡ್ದು ಹೋಟೆಲ್ಲೊ, ಇನ್ನೆಲ್ಲೊ ಒಂದು ಕೆಲಸಕ್ಕೆ ಸೆರ್ಕೊಂಡು ಬರೊ ಚಿಕ್ಕ ಸಂಬಳದಲ್ಲೇ ಸಂಸಾರಾನ ಸಾಗ್ಸೊ ದೊಡ್ಡ ಕನಸು ಕಾಣ್ತಿರ್ತಾರೆ. ಸಿಂಗಲ್ ರೂಮಲ್ಲಿ ಶೇರಿಂಗ್ ಗೆ ಸೇರ್ಕೊಂಡು, ಬರೊ ಸಂಬಳದಲ್ಲಿ ಅಪ್ಪನ ಟ್ರೀಟ್ಮೆಂಟ್, ಅಮ್ಮನ ಮನೆ ಖರ್ಚು, ಅಕ್ಕನ ಮದುವೆ ಸಾಲ, ತಂಗಿ ತಮ್ಮಂದಿರ ಓದು ಅಂತ ಹೊಂದ್ಸಿ ಉಳಿಯೊದ್ರಲ್ಲಿ ತಾನ್ ಪ್ರಿತ್ಸೊ ಹುಡ್ಗಿಗೊಸ್ಕರ ಸೇವ್ ಮಾಡಿ ಅವಳ್ನ ಸುತ್ತಾಡ್ಸಿ ಅವಳ ಮುಖದಲ್ಲಿ ನಗು ನೋಡೋಕೆ ಅವಳಿಷ್ಟ ಪಟ್ಟಿದ್ನಾ ಕೊಡ್ಸಿ ದುಡ್ಡಿಲ್ದೆ ಟೀ ಬನ್ ತಿನ್ಕೊಂಡು ಬದುಕೊ ಜೀವಾನೇ ಗಂಡು. ಅವನ ಪ್ರತಿಯೊಂದು ನಿರ್ಧಾರದ ಹಿಂದೆ ಇನ್ಯಾರದ್ದೊ ಬಗ್ಗೆ ಯೊಚ್ನೆ ಮಾಡಿ ನಿರ್ಧಾರ ಮಾಡ್ತಾನೆ.. ಜಗತ್ತಿನ ಕಣ್ಣಿಗೆ ಅವನ್ಯಾವತ್ತೂ ಒರಟಾಗೇ ಕಾಣ್ತಾನೆ. ಯಾಕಂದ್ರೆ ಅವನ್ನಲ್ಲಿರೊ ನೋವು ಕಣ್ಣೀರು ಅಸಮಧಾನನ ಅವನು ಹೆಣ್ಣಿನ ತರ ಪ್ರಪಂಚದ ಮುಂದಿಡಲ್ಲ. ತನ್ನವರಿಗೋಸ್ಕರ ಅಂತಾನೆ ಒದ್ದಾಡ್ತಿರ್ತಾನೆ. ಇಷ್ಟೆಲ್ಲ ಜವಾಬ್ದಾರಿ, ಪ್ರೀತಿ ನಿಭಾಯಿಸೊ ಹೊತ್ತಲ್ಲಿ ಮತ್ತೊಂದು ನೋವು ಕೂಡ ಇವನ ಕಣ್ಣ ಮುಂದೆನೆ ಓಡಾಡ್ತಿರತ್ತೆ. ಅದೆನಂದ್ರೆ ತಾನು ಪ್ರೀತ್ಸಿದ ಹುಡ್ಗಿ ತನ್ನ ಕಣ್ಣೆದುರೆ ಇನ್ನೊಬ್ಬರ ಕೈ ಹಿಡಿದು ನಡೆಯೊದ್ನ ನೋಡೊಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ ಹುಡ್ಗುರಿಗೆ. ಅಕ್ಕ ತಂಗಿರ ಮದುವೆ ಮಾಡಿ ಹಣ ಕೂಡಿಟ್ಟು ಮನೆ ಮಾಡಿ ಮದುವೆ ಅಗೋ ವರೆಗೆ ಇವನಿಗೆ ಕಾಯೊ option ಇದ್ದ ಹಾಗೆ ಹೆಣ್ಮಕ್ಳಿಗೆ ಇಲ್ಲ. ಅಂತ ಹೊತ್ತಲ್ಲಿ ಪ್ರೀತ್ಸಿದವಳು ಎಲ್ಲೆ ಇದ್ರು ಚೆನಾಗಿರ್ಲಿ ಅಂತ ಮನಸ್ಸಿಂದ ಹಾರೈಸಿ ಕೊರಗೊ ತ್ಯಾಗ ಜೀವಿ…. ಇಷ್ಟನೊ ಕಷ್ಟಾನೊ ಮನೆಲಿ ನೋಡೊ ಹೆಣ್ಣು ಮದುವೆ ಆಗಿ ಇನ್ನಾದ್ರು ನೆಮ್ಮದಿಯಿಂದ ಬದುಕ್ಬೇಕು ಅನ್ನೊ ಹೊತ್ತಲ್ಲಿ ಗಂಡ, ಅಪ್ಪ ಅನ್ನೊ extra ಜವಾಬ್ದಾರಿಗಳು ಹೆಗಲೇರಿ ಕೂತಿರತ್ತೆ. ಅಕ್ಕ ತಂಗಿಯರಿಗಾಗಿ ತನ್ನೆಲ್ಲ ಬಾಲ್ಯವನ್ನ, ಹೆಂಡತಿ ಮಕ್ಕಳಿಗಾಗಿ ತನ್ನೆಲ್ಲ ಯೌವ್ವನನ್ನ ಮುಡಿಪಿಟ್ಟು ದುಡಿಯೊ ಶ್ರಮಜೀವಿ. ಹೆಣ್ಣಿನ ತ್ಯಾಗ, ಸಹನೆ ಕಂಡಂತೆ ಗಂಡಿನ ಕಾಳಜಿ ಪ್ರೀತಿ ಜಗತ್ತಿನ ಕಣ್ಣಿಗೆ ಕಂಡಿದಿದ್ರೆ ಇವತ್ತು ಜಗತ್ತು ಹೆಣ್ಣನ್ನ ಇಟ್ಟು ತೂಗೊ ಜಾಗದಲ್ಲಿ ಗಂಡಿಗೂ ಸ್ವಲ್ಪ ಜಾಗ ಕೊಡ್ತಿತ್ತು. ಅಕ್ಕ ತಂಗಿಯರ ಮಾನ ಮುಚ್ಚೋಕೆ ಮೈ ತುಂಬಾ ಬಟ್ಟೆ ಕೊಡ್ಸೊಕೆ ಅದೆಷ್ಟೋ ಅಣ್ಣ ತಮ್ಮಂದಿರು ಹೋಟೆಲ್ ನಲ್ಲಿ ಉರಿಯೊ ಬೆಂಕಿ ಮುಂದೆ ಬಟ್ಟೆ ಬಿಚ್ಚಿ ನಿಂತು ಕೆಲ್ಸ ಮಾಡ್ತಿರ್ತಾರೆ. ಕೊನೆಗಾಲದಲ್ಲಿ ಅಪ್ಪ ಅಮ್ಮನ ಕೆಲಸ ಬಿಡ್ಸಿ ಕೈ ತುಂಬಾ ಕೂಳು ಸಿಗೊ ಹಾಗೆ ಮಾಡೋಕೆ ಅದೆಷ್ಟೋ ಗಂಡ್ಮಕ್ಕಳು ರೋಡ್ ಸೈಡ್ ಲಿ ಸಿಗೊ ತಳ್ಳೊ ಗಾಡಿಲಿ ಹಾಫ್ ಪ್ಲೇಟ್ ತಿನ್ಕೊಂಡು ಫುಲ್ ಡೇ ತಳ್ತಿದಾರೆ. ದಿನವೆಲ್ಲ ದುಡಿದು ದಣಿದು ಬಂದ ಗಂಡನಿಗೆ ರಾತ್ರಿಯೆಲ್ಲ ತಲೆ ತುಂಬೊ ಹೆಂಡ್ತಿ ಆಸೆಗಳನ್ನ ಈಡೇರಿಸೊದ್ಕೆ ರಾತ್ರಿ ಪಾಳಿಲೂ ಕೆಲಸ ಮಾಡೊ ಅದೆಷ್ಟೊ ಗಂಡಂದಿರು, ಮಕ್ಕಳ ಹೈಫೈ ಲೈಫಿನ ಹೈಹೀಲ್ಸ್ ಕೆಳಗೆ ಸಿಕ್ಕು ಒದ್ದಾಡ್ತಿರೊ ಅದೆಷ್ಟೊ ಅಪ್ಪಂದಿರ ಕಷ್ಟಗಳನ್ನ ಆದಷ್ಟು ಅರ್ಥ ಮಾಡ್ಕೊಳೋ ಪ್ರಯತ್ನ ಮಾಡೋಣ. ಹುಡ್ಗುರಿಗಿರೋ freedom ಅನ್ನೊ ರೆಕ್ಕೆ ಮೇಲಿರೊ ಜವಾಬ್ದಾರಿ ಅನ್ನೊ ಭಾರಾನೂ ನೋಡೋಣ

ಅನಿಸಿಕೆ Read Post »

ಕಾವ್ಯಯಾನ

ಕಾವ್ಯಯಾನ

ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ ರಾಮಾಯಣ ,ಕುರಾನ್,ಬೈಬಲ್ ಭಗವದ್ಗೀತೆಯ ಸಾರ ನಿಜ,ಮಗಳು ಇಲ್ಲದೇ ಹೋದರೆ ಬದುಕು ನಿಸ್ಸಾರ! ಮಗಳು ನಡೆಯುತ್ತಿದ್ದಾಳೆ ಒಂದೊಂದೇ ತಪ್ಪುಹೆಜ್ಜೆಗಳ ಸರಿಪಡಿಸಿಕೊಳ್ಳುತ ನಡೆಯುತ್ತಿದೆ ಸರಿದಾರಿಯಲ್ಲಿ ಹಳಿ ತಪ್ಪಿದ್ದ ಜೀವನಯಾನ ಮಗಳೆಂಬ ತಾಯಿಯ ಆಗಮನದಿಂದ ಜೀವಂತಿಕೆಯ ಸಾನಿಧ್ಯದಿಂದ ಮಗಳು ಓಡುತ್ತಿದ್ದಾಳೆ ಸಮಯವೂ ಈಗ ಅವಳ ಹಿಂದೆ ಹಿಂದೆ ಓಡುವ ಬಾಲಂಗೋಚಿ ಸರಿದದ್ದೇ ಗೊತ್ತಾಗುವುದಿಲ್ಲ ಮಗಳೆಂಬ ಚೈತನ್ಯದ ಸನ್ನಿಧಿಯಲ್ಲಿ ಬದುಕೀಗ ರಸನಿಮಿಷಗಳ ಆಗರ ಮನೋಲ್ಲಾಸದ ಸಾಗರ. ********************* ಪರಿಚಯ: ಲಕ್ಷ್ಮಿಕಾಂತ ಮಿರಜಕರ ..ಊರು ಹಾವೇರಿ ಜಿಲ್ಲೆ ಶಿಗ್ಗಾಂವ.ಸದ್ಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ.ಕವನ ಕತೆ ಓದು ಮತ್ತು ಬರೆಯುವುದರಲ್ಲಿ ಆಸಕ್ತಿ..ಶಾಲೆಯ ಮಕ್ಕಳ ಬರಹಗಳನ್ನು ಸಂಪಾದಿಸಿ “ಚಿಲುಮೆ” ಎನ್ನುವ ಪುಸ್ತಕವನ್ನು ಪ್ರಕಟಿದ್ದೇನೆ.ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ..

ಕಾವ್ಯಯಾನ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಅವ್ಯಕ್ತ ಅವರ ಹೊಸ ಅಂಕಣದ ಮೊದಲ ಕಂತು ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪ್ರಕಟವಾಗಲಿದ್ದು, ತದನಂತರ ಪ್ರತಿ ತಿಂಗಳ ಎರಡನೆ ಮತ್ತು ನಾಲ್ಕನೆ ಬುದವಾರ ಪ್ರಕಟವಾಗಲಿದೆ. ಈಅಂಕಣದ ವಿಶೇಷವೆಂದರೆಬರಹಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಸ್ವತ: ಮಕ್ಕಳೆ ರಚಿಸಲಿರುವುದು. ಈವಾರ ಅಂಕಣಗಾರರೇ ತಮ್ಮ ಆಶಯವನ್ನುತಮ್ಮ ಮುಂದೆ ತೆರೆದಿಡುತ್ತಿದ್ದಾರೆ ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್ ಎಂಬುದನ್ನು, ಬರೀ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವರ‍್ಥ ಜೀವನ ನಡೆಸುವುದು…ಅಥವಾ ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರ ನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತ್ಯಾದಿ. ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೆ, ಎರಡನೆಯ ತರದವರು ಬೆರಳೆಣಿಕೆಯಷ್ಟು. “ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ…” ಈ ನಿಟ್ಟಿನಲ್ಲಿ ನಾನು ಹಲವಾರು ವರ್ಷಗಳಿಂದ ನನ್ನ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದೇನೆ. ಮಕ್ಕಳ ಮನಸ್ಸನ್ನು ಅರಿತು, ಅವರ ತೊಂದರೆಗಳನ್ನು ಪರಿಶೀಲಿಸಿ, ಸರಿ-ತಪ್ಪುಗಳನ್ನು ಬದಿಗೊತ್ತಿ, ಅವರಿಗೆ ಅರಿವಾಗುವ ರೀತಿಯಲ್ಲಿ ತಿಳಿಹೇಳುವುದು, ನನ್ನ ಜೀವನದ ದಿನನಿತ್ಯದ ಒಂದು ಭಾಗ. ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ…. ಎಂದಾದರೂ ಯಾರಾದರೂ ಈ ಅನುಭವಗಳನ್ನು ಬಳಸಿಕೊಂಡು, ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು… ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿ “ಅವ್ಯಕ್ತಳ ಅಂಗಳದಿಂದ” ಎಂಬ ಹೆಸರಿನ ಅಂಕಣದ ಮೂಲಕ ಪ್ರಕಟಿಸುತ್ತಿದೆ ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ನಾವೆಲ್ಲರೂ ಒಟ್ಟಾಗಿ ಅದನ್ನು ಚಂದಗೊಳಿಸುವ… ಬೆಳೆಸುವ…

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಹೊತ್ತಾರೆ.

(ಅಮ್ಮನೂರಿನ ನೆನಪುಗಳು) ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ….. ಅಶ್ವಥ್ ಮೂಗು ಹಿಡಿದುಕೆನ್ನೆಗೆ ಹೊಡಿ! ಕಾನ್ವೆಂಟೆನ್ನುವಶಾಲೆಯನ್ನು ಸೇರಿಯೂ ಆಯ್ತು, ಮೂರ್ನಾಲ್ಕು ತಿಂಗಳು ಉರುಳಿದ್ದೂ ಆಯ್ತು. ಈ ಸಮಯದಲ್ಲಿ ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಒಂದು ವರ್ಷ ಪೂರೈಸಲೇ ಬೇಕು. ಹಾಗಾಗಿ ಕೆಜಿ ಕ್ಲಾಸು ಯಾಂತ್ರಿಕವಾಗಿ ಸಾಗುತ್ತಿತ್ತು. ಹೊಸದೇನೂ ಕಲಿಯಲು ಇಲ್ಲದೇ ಬೋರು ಹೊಡೆಯುತ್ತಿತ್ತು. ಶಾಲೆ ಮುಗಿದ ಮೇಲೆರಾಣಿ ಮೇಡಮ್ ಮನೆಯೂ ಬಂದ್ ಆಗಿದ್ದರಿಂದ ಒಂದು ದಿನ ಮಧ್ಯಾಹ್ನ ಶಾಲೆ ಮುಗಿಸಿ ನಿತ್ಯವೂ ಕರೆತರುತ್ತಿದ್ದ ಅಕ್ಕನ ಶಾಲೆಯ ಬಗ್ಗೆ ಅಲ್ಲೇ ರಸ್ತೆಯಲ್ಲಿ ನಿಂತಿದ್ದವರ ಬಳಿ ಕೇಳುತ್ತಾ ಅವಳ ಶಾಲೆಯ ಕಾಂಪೌಂಡಿನೊಳಗೆ ಬಂದು ಹುಡುಕುತ್ತಿದ್ದೆ. ಸೈಕಲ್ ಮೇಷ್ಟ್ರು ಅವರ ಹೆಸರು, ಪಕ್ಕಾ ನೆನಪಿದೆ. ಅವರ ಹೆಸರು ಶೇಖರ್ ಮೇಷ್ಟ್ರಂತೆ, ಸೈಕಲ್ಲೇರಿ ಬರುತ್ತಿದ್ದರಿಂದ ಸೈಕಲ್ ಮೇಷ್ಟ್ರು ಅಂತಲೇ ಅವರ ಹೆಸರನ್ನು ಬದಲಾಯಿಸಿಬಿಟ್ಟಿದ್ದರಂತೆ. ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟರು ಇನ್ನೂ ಕಿರಿಯ ಪ್ರಾಥಮಿಕವೂ ಆಗಿಲ್ಲದ ನನ್ನನ್ನು ಕಂಡು, ʼಯಾರೋ ನೀನು? ಇಲ್ಲೇನ್ ನೋಡ್ತಿದ್ದೀಯಾ?ʼ ಅನ್ನುತ್ತಾ ಹತ್ತಿರ ಬಂದರು. ನನ್ನ ಅಕ್ಕನನ್ನು ಹುಡುಕುತ್ತಿದ್ದೇನೆಂದಾಗ ಒಳಗೆ ಕರೆದುಕೊಂಡು ಹೋಗಿ ಯಾರು ಅಕ್ಕ? ಅಂದಿದ್ದಕ್ಕೆ ಅಕ್ಕನೇ ಎದ್ದು, ʼನಮ್ ಚಿಕಪ್ಪನ ಮಗ ಸಾʼ ಅನ್ನುತ್ತಾ ನನ್ನ ಮತ್ತು ನನ್ನ ಕೆಜಿಸ್ಕೂಲಿನ ವಿವರ ತಿಳಿಸಿದಳು. ಸರಿ ಅಂದು ಅವಳ ಪಕ್ಕದಲ್ಲಿ ಕೂತ್ಕೊಳ್ಳಲು ನನಗೆ ಅವಕಾಶ ಕೊಟ್ಟ ಸೈಕಲ್ ಮೇಷ್ಟರು, ಮಕ್ಕಳಿಗೆ ಕಾಗುಣಿತ ಹೇಳಿಸುವಾಗ, ನಾನೂ ಹೇಳ್ತೀನಿ ಅಂದೆ. ಹೇಳು ನೋಡನಾ, ಅಂದು ಕಾಗುಣಿತ ಶುರು ಮಾಡಿ ಹಾಗೇ ನನಗೆ ಗೊತ್ತಿದ್ದ ಎಲ್ಲವನ್ನೂ ಕೆದಕುತ್ತಾ ಕೇಳಿ, ಮಗ್ಗಿಯನ್ನೂ ಹೇಳಿಸಿ, ನೋಡಿಲ್ಲಿ ಇವ್ರಿಗೆಲ್ಲಮಗ್ಗಿ ಕಾಗುಣಿತ ಹೇಳೋದಿಕ್ಕೇ ಬರೋದಿಲ್ಲ ಅಂದಿದ್ದೇ, ಮೂಗು ಹಿಡಿದು ಕೆನ್ನೆಗೆರೆಡು ಬಾರಿಸೋ ಮರಿ ಅಂದರು. ಗೊತ್ತಾಗದೇ ಸುಮ್ಮನೇ ನಿಂತಿದ್ದವನಿಗೆ ಮೇಷ್ಟರೇ ಪಕ್ಕದಲ್ಲಿದ್ದ ಅಕ್ಕನನ್ನು ತೋರಿಸಿಕೊಡಲು ಹೇಳಿದರು. ಎಡಗೈಯಲ್ಲಿ ಅವರ ಮೂಗು ಹಿಡಿದು ಬಲಗೈಯಿಂದ ಆಕಡೆ ಕೆನ್ನೆಗೊಂದು ಈ ಕಡೆ ಕೆನ್ನೆಗೊಂದು, ಹಾಂ ಹಂಗೇ!! ಎಲ್ಲರಿಗೂ ಬಾರಿಸು ನೋಡಾಣಾ ಅಂದರು. ಅವತ್ತು ಶಾಲೆಯ ಬೇಸರವೆಲ್ಲ ಹೋಗಿ ಎಲ್ಲರಿಗೂ ಮೂಗು ಹಿಂಡಿ ಒಂದು ಸುತ್ತು ಕೆನ್ನೆ ಸವರಿ ಬಂದಿದ್ದಾಯ್ತು. ನನ್ನ ಎರಡುಪಟ್ಟು ಎತ್ತರವಿದ್ದ ಮಾಧ್ಯಮಿಕ ಶಾಲೆಯ ಎಲ್ಲರೂ ಸ್ವಯಂಪ್ರೇರಣೆಯಿಂದ ತಲೆಬಾಗಿಸಿ ನಾನು ಮೂಗು ಹಿಂಡುವುದಕ್ಕೂ, ಕೆನ್ನೆ ಸವರುವುದಕ್ಕೂ ಸಹಾಯ ಮಾಡಿದ್ದರು. ದೊಡ್ಡಪ್ಪನ ಮಗಳು ಈಗಲೂ ಆ ಸ್ಕೂಲಿನ ಘಟನೆಯನ್ನು ಮರೆತಿಲ್ಲ! ದಿನಾ ಹೊತ್ಕಂಡ್ ಹೋಗದಲ್ಲದೇ ಕೆನ್ನೆಗೆ ಏಟೂ ಕೊಟ್ಟಿದ್ದ ಗುಂಡೂರಾಯ ಅಂತಾಳೆ ಸಿಕ್ಕಾಗಲೆಲ್ಲಾ.   ದಿನವಿಡೀ ನನಗೆ ಶಾಲೆಯಲ್ಲಿ ಉಪ್ಪಿಟ್ಟಿನದೇ ನೆನಪು. ಅದೇ ನೆನಪನ್ನು ಉಳಿಸಿಕೊಂಡು ಸಂಜೆ ಖುಷಿಯಾಗಿ ಮನೆಗೆ ಬಂದೆ. ಎಲ್ಲಿ ಉಪ್ಪಿಟ್ಟು? ಅಕ್ಕನನ್ನು ಕೇಳಿದರೆ ತಕ್ಷಣ ಬಂದು ರಾಗಿ ಮುದ್ದೆಯನ್ನು ಮುಂದೆ ಹಿಡಿದು ತುತ್ತು ತಿನಿಸಲು ಪ್ರಯತ್ನಿಸಿದರು. ʼಅದಿರಲಿ, ಉಪ್ಪಿಟ್ಟು ಎಲ್ಲಿ?ʼ ನನ್ನ ಪ್ರಶ್ನೆ.  ತಿಂದು ನೋಡು ಇದನ್ನ ಅನ್ನುತ್ತಾ ಅಕ್ಕ ಒಂದು ತುತ್ತು ಬಾಯಲ್ಲಿ ಇರಿಸಿಯೇ ಬಿಟ್ಟರು. ರಾಗಿ ಮುದ್ದೆಯೇ ಆದರೂ ಬರೀ ಮುದ್ದೆಯಲ್ಲ. ಅದಕ್ಕೆ ಉಪ್ಪು ಮೆಣಸಿನಕಾಯಿ, ಹುಣಸೆ, ಜೀರಿಗೆ ಬೆಳ್ಳುಳ್ಳಿ ಸೇರಿಸಿ ಅಡುಗೆ ಮನೆಯ ಒರಳುಗಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿ ಅದಕ್ಕೆ ಬೆಳಿಗ್ಗೆಯೇ ಮಾಡಿಟ್ಟು ತಣ್ಣಗಾಗಿದ್ದ ತಂಗುಳು ಮುದ್ದೆಯನ್ನೂ ಸೇರಿಸಿ ರುಬ್ಬಿದ್ದರು. ಹೊಸ ರುಚಿ ಅನಿಸಿದ್ದರಿಂದ ಅದನ್ನೇ ತಿನ್ನುತ್ತಾ ಮುಂದುವರಿದೆ. ʼಮತ್ತೆ ಉಪ್ಪಿಟ್ಟು?ʼ ಅಂದೆ.  ಈಗ ತಿಂದಿದ್ದೇ ಉಪ್ಪಿಟ್ಟು, ಹಿಂದೆಲ್ಲಾ ರಾತ್ರಿ ಅಡುಗೆ ಮಾಡುವಾಗಲೇ ಜಾಸ್ತಿ ಮುದ್ದೆ ಮಾಡಿಟ್ಟು, ಬೆಳಗಿನ ಹೊತ್ತು ಹಿಂಗೇ ಉಪ್ಪಿಟ್ಟು ಮಾಡ್ತಿದ್ದರು, ಅದೇ ಆಗೆಲ್ಲಾ ತಿಂಡಿ, ಗೊತ್ತಾ?  ಹಿಟ್ಟು ತಿಂದವರು ಗಟ್ಟಿಯಾಗ್ತಾರಂತೆ ಅಂದರು ಅಕ್ಕ. ಅದು ಹೇಗೋ ಆ ಒಂದು ಶೈಕ್ಷಣಿಕ ವರ್ಷ ಕಳೆಯಿತು. ಸೋದರ ಮಾವ ಒಬ್ಬರು ಬಂದು ಮತ್ತೆ ಅಮ್ಮನ ಊರಿಗೆ ಕರೆದುಕೊಂಡು ಬಂದರು. ಆಮೇಲೆ ಅಕ್ಕನೂರಿನ ಕೆಜಿ ಕ್ಲಾಸು ಬೇಡವೇ ಬೇಡವೆಂದು ನನ್ನದೇ ಸ್ವಂತದ್ದಾಗಿದ್ದ ಅಮ್ಮನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೇ ಸೇರಿಕೊಂಡೆ. ಅಕ್ಕನ ಊರಿನಲ್ಲಿ ಎಲ್ ಕೆಜಿ ಕ್ಲಾಸಿಗೆಂದು ಇದ್ದ ಒಂದು ವರ್ಷದಲ್ಲಿ ಹೆಚ್ಚು ಹಿತವೆನಿಸಿದ್ದು ರಾಣಿ ಮೇಡಮ್ ಮತ್ತೆ ಅಕ್ಕನ ಈ ಉಪ್ಪಿಟ್ಟು ಎರಡೇ! ಈಗ ಮಗಳಿಗೆ ಇವತ್ತು ಅಡುಗೆ ಏನ್ ಮಾಡೋದಮ್ಮಾ ಅಂತ ಕೇಳಿದರೆ ಸಾಕು. ತಕ್ಷಣ “ಮುದ್ದೆ!” ಅಂತ ಏರುದನಿಯಲ್ಲಿ ಚೀರುತ್ತಾ ಒತ್ತಾಯಿಸ್ತಾಳೆ. ರಾಗಿಹಿಟ್ಟಿನ ಸರಬರಾಜು ಇರದೇ, ಅವಳಿಗೆ ಅಡುಗೆಗೆ ಏನು ಅಂತ ಕೇಳುವುದನ್ನೇ ಕಡಿಮೆ ಮಾಡಿಬಿಟ್ಟಿದ್ದೇವೆ. ಇಲ್ಲಾಂದ್ರೆ  ತಿಂಗಳಿಗೆ ಮೂರು ಟ್ರಿಪ್ಪು ಪಿಟ್ಸ್ ಬರ್ಗಿಗೊ, ನ್ಯೂಯಾರ್ಕಿಗೋ ಇಂಡಿಯನ್ ಸ್ಟೋರ್ ಹುಡುಕಿ ಪ್ರಯಾಣ ಮಾಡಬೇಕಾಗುತ್ತೆ! ****** (ಮುಂದುವರಿಯುವುದು)

ಹೊತ್ತಾರೆ. Read Post »

ಕಾವ್ಯಯಾನ

ಕಾವ್ಯಯಾನ

ಇರಬಹುದೆ? ಪ್ರಮೀಳಾ ಎಸ್.ಪಿ. ನಿತ್ಯ ನಿರಂತರ ನೆರಳು ನೀಡುವ ಎಲೆ ಯುದುರದ ಮರವಾದರೂ ಇರಲಹುದೇ! ಮುಂಗಾರೂ ಮೂರೇ ದಿನ ಮಲ್ಲಿಗೆಯ ಪರಿಮಳವೂ ಸಪ್ತದಿನಗಳೇ! ಚಂದಿರನು ಬೆಳದಿಂಗಳ ತಿಂಗಳಿಡೀ ಹೊಳಪಾಗಿ ಹರವಲಹುದೇ! ತುಂಬೆಯ ರಸ ಸವಿದ ದುಂಬಿಯೊಂದು ಮತ್ತದರತ್ತ ಇರಲುಬಹುದೇ! ಅದರದರ ಕಾಲಕ್ಕೆ ಭಾವ ಬಕುತಿಯ ತಾಳಕ್ಕೆ ಸಿಕ್ಕಷ್ಟು ದಕ್ಕಿಸುವುದು ನೇಮವಲ್ಲವೇ! ಇಷ್ಟಾದರೂ ಹುಡುಕುತ್ತಲೇ ಇರುವೆ ನಿತ್ಯವೂ ಹಸಿರಾದ ಪ್ರೀತಿಯನು ನಾನು ಮೂರ್ಖಳಾದೆನೆ ಗೆಳೆಯ!

ಕಾವ್ಯಯಾನ Read Post »

ನಮ್ಮ ಕವಿ

ನಮ್ಮ ಕವಿ

ಪ್ರತಿ ಎರಡು ವಾರಕ್ಕೊಮ್ಮೆ(ಎರಡನೆ,ನಾಲ್ಕನೇ ಶುಕ್ರವಾರ) ಕನ್ನಡದ ಕವಿಯೊಬ್ಬರು ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ಇಲ್ಲಿ ಪರಿಚಯಿಸಲಾಗುವುದು. ಈಸರಣಿಯ ಮೊದಲ ಕವಿಯ ಬದುಕು-ಬರಹ ನಿಮ್ಮ ಮುಂದಿದೆ: ಸತ್ಯಮಂಗಲ ಮಹಾದೇವ ಸತ್ಯಮಂಗಲ ಮಹಾದೇವ 1983 ಜೂನ್ 12 ರಂದು ತುಮಕೂರು ಜಿಲ್ಲೆಯ ಸತ್ಯಮಂಗಲಗ್ರಾಮದಲ್ಲಿ, ಬುಟ್ಟಿ  ಹೆಣೆಯುವುದು, ಹಚ್ಚೆಹಾಕುವುದು, ವಿವಿಧ ವೃತ್ತಿಗಳಲ್ಲಿ ತೊಡಗಿದ್ದ ಅಲೆಮಾರಿ ಕುಟುಂಬದ ರಾಜಣ್ಣ ಮತ್ತು ಜಯಮ್ಮ ದಂಪತಿಗಳ ಎರಡನೆಯ ಮಗನಾಗಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಸತ್ಯಮಂಗಲದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಶ್ರೀಶಿವಾನಂದಪ್ರೌಢಶಾಲೆಯಲ್ಲಿ ವ್ಯಾಸಂಗ. ಪದವಿ ವಿದ್ಯಾಭ್ಯಾಸ ಯೂನಿಯನ್ ಕ್ರಿಶ್ಚಿಯನ್ ಕಾಲೇಜು.ಶಿರಾಗೇಟ್ ತುಮಕೂರು. ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯಲ್ಲಿ ತುಮಕೂರು ತಾಲ್ಲೂಕು ಅಧ್ಯಕ್ಷರಾಗಿ ಸಕ್ರಿಯವಾಗಿ ಪಾಲ್ಗೊಂಡು ಬಸ್ ಪಾಸ್ ದರ ಹೆಚ್ಚಳದ ವಿರುದ್ಧ ಚಳುವಳಿ, ಜೈಲುವಾಸ.ವಿದ್ಯಾರ್ಥಿ ಸಮಸ್ಯೆಗಳ ಕುರಿತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ. ಪದವಿ ವಿಧ್ಯಾಭ್ಯಾಸದಲ್ಲಿದ್ದಾಗ ಕನ್ನಡ ಪ್ರಾಧ್ಯಾಪಕ ಪ್ರೊ.ಅಜಿತ್ ಕುಮಾರ್ ಗುರುಗಳಲ್ಲಿ ಕಾವ್ಯರಚನೆಯ ಮೊದಲತೊದಲು ಪ್ರಾರಂಭ. ಅನಂತರ ಕಾವ್ಯರಚನೆಯ ಸೂಕ್ಷ್ಮಗಳನ್ನು ಕಲಿತದ್ದು. ಪದವಿಯ ಅಂತಿಮ ವರ್ಷದಲ್ಲಿ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಆಯೋಜಿಸಿದ್ದ ಡಾ.ದ.ರಾ.ಬೇಂದ್ರೆ ಅಂತರಕಾಲೇಜು ಕವನ ಸ್ಪರ್ದೆಯಲ್ಲಿ ರಾಜ್ಯಮಟ್ಟದ ಕಾವ್ಯಬಹುಮಾನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿಎಂ.ಎಸ್ಸಿ.ಮನೋವಿಜ್ಞಾನ.ಸಿದ್ಧಲಿಂಗಯ್ಯ, ಕಿರಂನಾಗರಾಜು, ನಟರಾಜ್ ಹುಳಿಯಾರ್, ಇವರಕಾಳಜಿಯಿಂದ ಭಾವತೀರದ ಹಾದಿಯಲ್ಲಿ ಮೊದ ಕವನಸಂಕನ ಬಿಡುಗಡೆ.ಸುಬ್ಬು ಹೊಲೆಯಾರ್ ಅವರಿಂದ ಜೀವಪರ ಮೌಲ್ಯಗಳ ಸೂಕ್ಷ್ಮಸಂವೇದಿ ನೆಲೆಗಳ ಅರಿವು. ಹೊಸತಲೆಮಾರಿನ ಸೂಕ್ಷ್ಮಸಂವೇದಿ ಕವಿಗಳಲ್ಲಿ ಪ್ರಮುಖ ಸ್ಥಾನ. ಮನೋವಿಜ್ಞಾನ ಆಪ್ತಸಮಾಲೋಚಕನಾಗಿ ಕೆಲಸ. ಸಾಮಾಜಿಕ  ಕಾರ್ಯ ಕರ್ತ ಪ್ರೊ.ಕೆ.ಟಿ.ತಿಪ್ಪೇಸ್ವಾಮಿ ಅವರ ಪ್ರೋತ್ಸಾಹ ಮತ್ತು ಜೀವಪ್ರೀತಿಯ ಕಾಳಜಿಯಿಂದ ಹೆಜ್ಜೆಮೂಡಿದಮೇಲೆ ಎರಡನೆಯ ಕವನಸಂಕಲನ ಪ್ರಕಟ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಿಂದ ಕನ್ನಡಎಂ.ಎ.ಯಲ್ಲಿ ಪ್ರಥಮ ಶ್ರೇಣಿ. 2012 ರಿಂದ 2018 ರವರೆಗೆ ಬಿ.ಎನ್.ಇ.ಎಸ್.ಪದವಿಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ. ರಾಷ್ಟ್ರೀಯ ಸೇವಾಯೋಜನೆಯ ಕಾರ್ಯನಿರ್ವಹಣೆ ಅಧಿಕಾರಿ2016-2018 ರವರೆಗೆ. 2017 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕನ್ನಡ ಪತ್ರಿಕೆಗಳ ಸಂಯೋಜನೆ ಮತ್ತು ಮೌಲ್ಯಮಾಪನ. ಭಾರತ ಚುನಾವಣಾ ಆಯೋಗದ ಕ್ಯಾಂಪಸ್ ರಾಯಭಾರಿ2017 ರಲ್ಲಿ. ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳ ಆಂತರಿಕ ಸ್ಕ್ವಾಡ್ 2015-2016. 2014 ಆಗಸ್ಟ್ 12 ರಿಂದ 2019 ಮೇ 14 ರವರೆಗೆ ಬೇಂದ್ರೆ ಮತ್ತು ಮಧುರಚೆನ್ನರಕಾವ್ಯಗಳಲ್ಲಿ ಅನುಭಾವ: ತೌಲನಿಕ ಅಧ್ಯಯನ? ಎಂಬ ವಿಷಯದಲ್ಲಿ ರೇವಾ ವಿಶ್ವವಿದ್ಯಾಲಯ ಕನ್ನಡವಿಭಾಗಕ್ಕೆ ಪಿಎಚ್.ಡಿ ಪದವಿಗಾಗಿ ಮಹಾಪ್ರಬಂಧ ಸಲ್ಲಕೆ. 2015 ರಲ್ಲ ‘ಯಾರಹಂಗ್ಲಿಬೀಸುವಗಾಳಿಗೆ’ ಮೂರನೆಯ ಕವನ ಸಂಕಲನವು ಪ್ರೊ.ಮಲ್ಲೇಪುರಂಜಿ.ವೆಂಕಟೇಶ ಹಾಗೂ ಸುಬ್ಬುಹೊಲೆಯಾರ್ ಅವರ ಕಾಳಜಿ ಮತ್ತು ಮುತುವರ್ಜಿಯಿಂದ ಪ್ರಕಟ. ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ಒಟ್ಟು ಏಳು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆಭಾಜನವಾಗಿದೆ. ಬೆಂಗಳೂರು ಆಕಾಶವಾಣಿಯ ರಸಗಂಗೆ ಕಾರ್ಯಕ್ರಮದಲ್ಲಿ ಕೃತಿಗಳ ಪರಿಚಯ.ದೂರದರ್ಶನ ಚಂದನದಲ್ಲಿ ಕಾವ್ಯವಾಚನ. ಪ್ರಜಾವಾಣಿ, ವಿಜಯವಾಣಿ,ಮಯೂರ, ಸಮಾಹಿತ,ಸಂವಾದ, ಅನಿಕೇತನ, ಅಗ್ನಿ, ಮುಂತಾದ ಪತ್ರಿಕೆಗಳಲ್ಲಿ ಕಾವ್ಯಗಳ ಪ್ರಕಟಣೆ. ಅವಧಿ, ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಗಳಲ್ಲಿಯೂ ಕವಿತೆಗಳ ಪ್ರಕಟಣೆ. 2016 ನೇ ಸಾಲಿನ ತುಮಕೂರು ಜಿಲ್ಲಾ ಸಾಹಿತ್ಯಸಮ್ಮೇಳನದಲ್ಲಿ ಕವಿಗೋಷ್ಠಿಯ ಆಶಯ ಭಾಷಣ. 1000ಕ್ಕೂ ಹೆಚ್ಚು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರಸಂಕಿರಣಗಳ ಆಯೋಜನೆ, ಭಾಗವಹಿಸುವಿಕೆ ಮತ್ತುಪ್ರಬಂಧಮಂಡನೆ. ಶ್ರೀದರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಸಂತ ಲಯೋಲಾ ಕಾಲೇಜುಬೆಂಗಳೂರು, ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಕಾವ್ಯಕಮ್ಮಟಗಳ ನಿರ್ದೇಶಕಮೈಸೂರು ದಸರಾ ಕವಿಗೊಷ್ಠಿ, ಕೇರಳ-ಕೊಚ್ಚಿ, ಮಹಾರಾಷ್ಟ್ರ-ದಾದರ್, ಅಸ್ಸಾಂ-ಗೌಹಾತಿ,ಪಂಜಾಬ್-ಚಂಡೀಗಡಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಿ ಕವಿತೆ ವಾಚನ. ಆಳ್ವಾಸ್ ನುಡಿಸಿರಿ-2018 ರಲ್ಲಿ ಕವಿನಮನದಲ್ಲಿ ಕಾವ್ಯವಾಚನ. ಕಣ್ಣಕಾಡು-ಗೆ ಬೆಳಕು ಸಂಪಾದಿತ ಕೃತಿ, ಪ್ರೊ.ಕೆ.ಈ.ರಾಧಾಕೃಷ್ಣ ವ್ಯಕ್ತಿಚಿತ್ರಕೃತಿ. ಇವರ ಸಾಹಿತ್ಯ ಸೇವೆ ಗುರುತಿಸಿ ತುಮಕೂರು ಜಿಲ್ಲಾ ಯುವಸಬಲೀಕರಣ ಇಲಾಖೆಯು2015ರ ಯುವಜನೋತ್ಸವದಲ್ಲಿ ಸನ್ಮಾನ. ಇವರ ಕಾವ್ಯಕೃತಿಗಳಿಗೆ ದ.ರಾ.ಬೇಂದ್ರೆ ಸ್ಮೃತಿ ಪ್ರಶಸ್ತಿ,ಸಂಚಯ ಸಾಹಿತ್ಯ ಪ್ರಶಸ್ತಿ, ಡಾ.ಶ್ಯಾಮಸುಂದರ ಕಾವ್ಯಪ್ರಶಸ್ತಿ, ಮುಳ್ಳೂರು ನಾಗರಾಜ ಕಾವ್ಯಪ್ರಶಸ್ತಿ,ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯಪ್ರಶಸ್ತಿ, ಶಾ.ಬಾಲೂರಾವ್ ಯುವಪುರಸ್ಕಾರ, ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕಬಹುಮಾನ, ವರ್ದಮಾನ ಉದಯೋನ್ಮುಖ ಕಾವ್ಯಪ್ರಶಸ್ತಿ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಸೇವೆಯಲ್ಲಿ ನಿರತರಾಗಿದ್ದಾರೆ *********************************************************************** ನಿಮ್ಮ ಓದಿಗಾಗಿ ಅವರದೊಂದು ಕವಿತೆ ಜೀನ್ಸುತೊಟ್ಟ ಚಕ್ರವರ್ತಿ ಜೀನ್ಸುತೊಟ್ಟ ಚಕ್ರವರ್ತಿಯ ನೋಡಿದೆ ಆತ ಸಮುದ್ರದ ದಡದಲ್ಲಿ ಕ್ಯಾಮರಾ ಮುಂದೆ ಅಲ್ಲಿ ಹರಡಿದ್ದ ಪ್ಲಾಸ್ಟಿಕ್ ಆಯುತಿದ್ದ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದ ಉಕ್ಕಿನ ಮನುಷ್ಯನ ನೋಡಿದೆ ಆತ ಕನಸುಗಳ ಮಾರುತ್ತಿದ್ದ ಕೊಳ್ಳಲು ಹಣವಿರಲಿಲ್ಲ ನರೆ ಬಂದ ನೀರಲ್ಲಿ ನಿಂತಿದ್ದೆ ನಾನು ಸುಂಕದವರ ನೋಡಿದೆ ಸುಖ ದುಃಖ ಕೇಳದೆ ಜಡದಂತಾಗಿ ರಾಜನ ಮುಖವಾಡದಲಿ ಬೆವತು ಬೆಂಡಾಗಿ ಬೆನ್ನುಮೂಳೆಯ ಮಾರಿಕೊಂಡು ಊರೂರು ಅಲೆದವರು ಕೈ ಹಿಡಿದವರು ಈಗ ಕಮಲ ಹಿಡಿದು ಓಡುತ್ತಿದ್ದಾರೆ ಸಾರಥಿ ಹೇಳಿದ ಕಡೆಗೆ ಕುದುರೆಗಳಂತೆ. ಸವಿಮಾತುಗಳ ಉಲಿಯುತಿದ್ದ ಕೋಗಿಲೆಗಳು ಈಗ ಕುರ್ಚಿ ಕುರ್ಚಿ ಎನ್ನುತ್ತಿವೆ ಕಿವಿಯೂ ತಾನು ಕೇಳುವ ಚಾನಲ್ಲುಗಳ ಬದಲಾಯಿಸಿಕೊಳ್ಳುತಿದೆ ಈಗೀಗ ಬೊಗಳುವ ಭಾಷೆಗಳ ವರ್ಣಮಾಲೆಗಳನ್ನು ಬದಲಿಸುತ್ತಿವೆ ಗ್ರಾಮಸಿಂಹಗಳು. ಬೆಂಕಿ ಕಪ್ಪು ಹೊಗೆ ಬಿಳಿ ರೂಪಗಳು ವಿರೂಪದ ರೂಪಾಂತರಗಳಾಗಿ ನವಿಲುಗರಿ ಖಡ್ಗದ ರೂಪಾಗಿ ಎಳನೀರು ಮತ್ತು ತರಿಸುವಂತೆ ಎಲ್ಲವೂ ಎಲ್ಲರೋಳಗೂ ಈಗ ಪರ್ವ ಕಾಲ ಎಲ್ಲವೂ ಸರಿ ಎಂದೊಮ್ಮೆ ಎಲ್ಲವೂ ಸರಿಯಿಲ್ಲ ಎಂದೊಮ್ಮೆ ಮಮ್ಮಲ ಮರುಗುವ ಮನಸು ಮಾಯದ ಮಾಂಸ ಮಜ್ಜೆಯ ಮನೆಯೊಳಗೆ ಧ್ಯಾನಕ್ಕೆ ಕೂರಬೇಕಿದೆ ಆತ್ಮ.. ================== ಸತ್ಯಮಂಗಲ ಮಹಾದೇವ

ನಮ್ಮ ಕವಿ Read Post »

ಇತರೆ

ಆರ್ಥಿಕತೆ.

ನೋಟು ರದ್ದತಿಗೆ ಮೂರು ವರ್ಷ ಗಣೇಶ್ ಭಟ್ ಶಿರಸಿ 2016 ರ ನವೆಂಬರ್ 08 ರಂದು ಭಾರತದಲ್ಲಿ ಆಂತರಿಕ ರ‍್ಥಿಕ ರ‍್ಜಿಕಲ್ ಸ್ಟ್ರೈಕ್ ನಡೆಯಿತು. ರೂ. 500 , 1000 ರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯಲಾಯಿತು. ಕಪ್ಪು ಹಣವನ್ನು ಹೊರಗೆಡಹುವದು ಭ್ರಷ್ಟಾಚಾರ ನರ‍್ಮೂಲನೆ ಮಾಡಲು ಈ ಕಠಿಣ ನರ‍್ಣಯ ಕೈಗೊಳ್ಳಲಾಗಿದೆಯೆಂದು ಜನರಿಗೆ ಹೇಳಲಾಯಿತು. ಸ್ವಲ್ಪ ದಿನಗಳ ನಂತರ ನೋಟ ರದ್ದತಿಯ ಉದ್ದೇಶಗಳನ್ನು ಇನ್ನಷ್ಟು ವಿಸ್ತ್ರತಗೊಳಿಸಲಾಯಿತು. ಚಲಾವಣೆಯಲ್ಲಿರುವ ಖೋಟಾ ನೋಟುಗಳನ್ನು ಕಂಡು ಹಿಡಿಯುವುದು , ಭಯೋತ್ಪಾದಕರಿಗೆ ಹಣ ಸಿಗದಂತೆ ಮಾಡುವುದು ಹಾಗೂ ಅವರ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದು ಸೇರಿದಂತೆ ದಿನಕ್ಕೊಂದು ಹೊಸ ಉದ್ದೇಶವನ್ನು ಸರ‍್ಪಡೆ ಮಾಡಲಾಯಿತು. ಇವುಗಳ ಜೊತೆಗೇ ನಗದು ರಹಿತ ಭಾರತದ ಕನಸನ್ನು ಬಿತ್ತಿ, ಚೀನಾದ ನಿಯಂತ್ರಣದ ಪೇಟಿಎಮ್ ಕಂಪನಿಯನ್ನು ಪ್ರೋತ್ಸಾಹಿಸಲು ಪ್ರಧಾನಿಯವರ ಚಿತ್ರಗಳನ್ನೇ ಬಳಸಿ ಜಾಹೀರಾತು ನೀಡಲಾಯಿತು. ಬ್ಯಾಂಕ್ ಖಾತೆಯನ್ನೇ ಹೊಂದಿರದ ಹಲವರನ್ನು ಒಳಗೊಂಡ ಗ್ರಾಮೀಣ ಭಾಗದ ಜನರು, ನಗರದ ಕೊಳಗೇರಿ ನಿವಾಸಿಗಳು, ಬ್ಯಾಂಕ್ ಖಾತೆ ಹೊಂದಿದ್ದರೂ ಕಂಪ್ಯೂಟರ್ , ಮೊಬೈಲ್, ಬಳಕೆಯನ್ನು ಅರಿಯದ ಜನಸಾಮಾನ್ಯರನ್ನೂ ಭಯಭೀತರನ್ನಾಗಿಸಲಾಯಿತು. ಎರಡು ದಿನಗಳ ಬ್ಯಾಂಕ್ ರಜೆಯ ನಂತರ ಉಳಿದೆಲ್ಲಾ ಕೆಲಸಗಳನ್ನು ಬದಿಗಿಟ್ಟು, ರದ್ದಾದ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಎದುರಿಗೆ ಸರತಿ ಸಾಲಿನಲ್ಲಿ ನಿಲ್ಲುವದೇ ಜನಸಾಮಾನ್ಯರ ಕೆಲಸವಾಯಿತು. ನೋಟು ರದ್ದುಪಡಿಸಿದ ನಂತರ ಕೇವಲ 50 ದಿನಗಳು ಮಾತ್ರ ಕಷ್ಟಪಡಿ, ಮುಂದೆ ಎಂದೆಂದಿಗೂ ನೀವು ಸುಖವಾಗಿ ಬದುಕುವ ಸ್ಥಿತಿ ನರ‍್ಮಾಣ ಮಾಡುತ್ತೇನೆಂದು ಪ್ರಧಾನಿಯವರು ದೇಶದ ಜನತೆಗೆ ಭರವಸೆ ನೀಡಿದರು. ಕಪ್ಪು ಹಣದ ಮೇಲಿನ ಯುದ್ಧಕ್ಕಾಗಿ ಅದಕ್ಕೂ ಮೊದಲಿನ 10 ತಿಂಗಳುಗಳ ಕಾಲ ಪರ‍್ವ ತಯಾರಿ ನಡೆದಿದ್ದರಿಂದಾಗಿ ಎಲ್ಲವೂ ಸುಸೂತ್ರವಾಗಿ , ಸುಲಲಿತವಾಗಿ ನಡೆಯಲಿದೆಯೆಂದು ಭರವಸೆ ನೀಡಿದರು. ಆದರೆ , ಆಗ ಆದದ್ದೇ ಬೇರೆ. ಈ ವಿಷಯಕ್ಕೆ ಸಂಬಂಧಿಸಿ ದಿನಕ್ಕೊಂದು ಹೊಸ ನರ‍್ದೇಶನಗಳು ಬರಲಾರಂಭಿಸಿದವು. ಕೇವಲ 50 ದಿನಗಳಲ್ಲಿ, ಆರ್‍ಬಿಐ 63 ಸುತ್ತೋಲೆಗಳನ್ನು ಹೊರಡಿಸಿ ನಗೆಪಾಟಲಿಗೀಡಾಯಿತು. ಇದಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಎರಡು ಮೂರು ಸುತ್ತೋಲೆಗಳನ್ನು ಹೊರತುಪಡಿಸಿ ಉಳಿದವೆಲ್ಲವೂ ಪರ‍್ವಯೋಜಿತವೆಂದು ಹೇಳಿಕೆ ನೀಡಿ ತಮ್ಮ ನಡೆಯನ್ನು ಸರ‍್ಥಿಸಿಕೊಂಡರು. ಐವತ್ತು ದಿನಗಳಲ್ಲ. 500 ಅಲ್ಲ, ಸಾವಿರ ದಿನಗಳು ಕಳೆದರೂ, ನೋಟ ರದ್ದತಿಯಿಂದ ಸಿಗಬಹುದಾದ ಲಾಭದ ಕುರಿತು ಮಾಡಿದ ಘೋಷಣೆಗಳು ಬರೀ ಭಾಷಣದ ತುಣುಕುಗಳಾಗಿ ಉಳಿದಿವೆಯೇ ಹೊರತು, ಯಾವುದೂ ವಾಸ್ತವವಾಗಿಲ್ಲ. ಅಂದಿನ ಪ್ರಧಾನಿಯವರೇ ಇಂದೂ ಇದ್ದಾರೆ, ನೋಟು ರದ್ದತಿಯ ಕುರಿತು ಎದೆಯುಬ್ಬಿಸಿ ಕೊಚ್ಚಿಕೊಳ್ಳುತ್ತಿದ್ದ ಪ್ರಧಾನಿಯವರು, ಇಂದು ಆ ವಿಷಯವನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸುವದಿಲ್ಲ. ನೋಟು ರದ್ದತಿಯಾಗಿ ಮೂರು ರ‍್ಷಗಳ ನಂತರ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದೆ. ನಿರುದ್ಯೋಗ ಸಮಸ್ಯೆಯ ಹೆಚ್ಚಳ, ಸಾಮಾಜಿಕ ಸಂರ‍್ಷ, ಜನಸಾಮಾನ್ಯರ ಅಸಹಾಯಕತೆ ಹೆಚ್ಚುತ್ತಿದೆ. ಭ್ರಷ್ಟಾಚಾರ ಯಾರ ನಿಯಂತ್ರಣಕ್ಕೂ ಸಿಗದೇ ವಿಕಾರ ರೂಪ ತಾಳುತ್ತಿದೆ. ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರ ನಂಬಿಕೆ ನಷ್ಟವಾಗುತ್ತಿದೆ. ಇಡೀ ರ‍್ಥ ವ್ಯವಸ್ಥೆಯಲ್ಲಿ ಅಪನಂಬಿಕೆ ಮೂಡಿ ಜನರನ್ನು ಅಭದ್ರತೆಯ ಭಾವ ಕಾಡುತ್ತಿದೆ. ಅತಿ ಶ್ರೀಮಂತರು ಮತ್ತು ಆಳುವ ಬಿಜೆಪಿಯ ಉನ್ನತ ವಲಯದೊಂದಿಗೆ ನಿಕಟ ಸಂರ‍್ಕ ಹೊಂದಿರುವವರನ್ನು ಹೊರತುಪಡಿಸಿ, ಉಳಿದವರು ರ‍್ಥಿಕ ಭಯೋತ್ಪಾದನೆಗೆ ಗುರಿಯಾದವರ ರೀತಿಯಲ್ಲಿ ಚಡಪಪಡಿಸುವಂತಾಗಿದೆ. ಗಳಿಸಿದ ಹಣವನ್ನು ಸುರಕ್ಷಿತವಾಗಿ ಎಲ್ಲಿ ಇಡಬೇಕು, ಎಲ್ಲಿ ತೊಡಗಿಸಬೇಕು, ಯಾವ ರೂಪದಲ್ಲಿ ಇಟ್ಟುಕೊಳ್ಳಬೇಕು ಎಂಬ ಸಮಸ್ಯೆ ಜನಸಾಮಾನ್ಯರನ್ನು ಕಾಡುತ್ತಿದೆ. ಬ್ಯಾಂಕ್‍ಗಳಲ್ಲಿ ನಡೆಯುತ್ತಿರುವ ಮೋಸ, ವಂಚನೆಯಿಂದಾಗಿ ಠೇವಣಿದಾರರ ಮೇಲೆ ಕತ್ತಿ ಬೀಸಲಾಗುತ್ತಿದೆ. ಮೋಸ ಮಾಡಿದವರು, ಸಾಲ ನೀಡಿದವರು ಆರಾಮಾಗಿ ಓಡಾಡಿಕೊಂಡಿದ್ದರೆ, ಬಡಪಾಯಿ ಠೇವಣಿದಾರರು ತಮ್ಮದೇ ಹಣ ವಾಪಾಸು ಪಡೆಯದಂತೆ ಆರ್‍ಐಬಿ ನರ‍್ಬಂಧ ಹೇರುತ್ತದೆ. ಎಮ್ಮೆಗೆ ಜ್ವರ, ಎತ್ತಿಗೆ ಬರೆ ಎಂಬ ಗಾದೆಯನ್ನು ನೆನಪಿಸುವ ನಡತೆ. ಜನರನ್ನು ಮೋಸಗೊಳಿಸುವ ಬ್ಲೇಡ್ ಕಂಪನಿಗಳು ರಾಜಾರೋಷಾಗಿ ಕರ‍್ಯ ನರ‍್ವಹಿಸುತ್ತಿದೆ. ಯಾವುದೋ ಒಂದು ದಿನ ಬಾಗಿಲು ಮುಚ್ಚಿ ಅವರು ನಾಪತ್ತೆಯಾದ ನಂತರ ಪೋಲೀಸರ, ಅಧಿಕಾರಿಗಳ ಪ್ರವೇಶವಾಗುತ್ತದೆ. ಅಲ್ಲಿಯವರೆಗೆ ಅವುಗಳನ್ನು ತಪಾಸಣೆಗೊಳಪಡಿಸಬೇಕಾದ ಅಧಿಕಾರಿಗಳ ರ‍್ತವ್ಯ ಲೋಪಕ್ಕೆ ಮುಗ್ದ ಜನತೆ ಬಲಿಯಾಗುತ್ತಿದ್ದಾರೆ. ನೋಟ್ ರದ್ದತಿಯಾದ ಕೆಲವೇ ದಿನಗಳ ನಂತರ ಬಂಗಾರದ ಮೇಲೆ ಮಿತಿ ಹೇರಲಾಗುವುದೆಂಬ ಸುದ್ದಿಗೆ ಬಾರೀ ಪ್ರಚಾರ ನೀಡಲಾಯಿತು. ಮಾಧ್ಯಮಗಳು ಪೈಪೋಟಿಗೆ ಬಿದ್ದವರಂತೆ ಜನರಲ್ಲಿ ಭಯ, ಆತಂಕ ಸೃಷ್ಟಿಸಿದರು. ಕಳೆದ ಒಂದು ವಾರದ ಹಿಂದೆ ಇದರ ಪುನರಾರ‍್ತನೆಯಾಯಿತು. ಕಾಳ ಧನಿಕರನ್ನು ಮಟ್ಟ ಹಾಕುವ ಉದ್ದೇಶದಿಂದ ವ್ಯಕ್ತಿಯು ಹೊಂದಬಹುದಾದ ಬಂಗಾರದ ಮೇಲೆ ಕೇಂದ್ರ ರ‍್ಕಾರ ಮಿತಿ ಹೇರುತ್ತದೆ, ತಪಾಸಣೆ ನಡೆಸುತ್ತದೆ. ಮುಂತಾದ ಸುದ್ದಿಗಳನ್ನು ಹರಿಬಿಡಲಾಯಿತು. ಭವಿಷ್ಯದ ಅನುವು , ಆಪತ್ತಿಗಾಗಿ ಚೂರು, ಪಾರು, ಬಂಗಾರ ಖರೀದಿಸಿ ಇಟ್ಟುಕೊಳ್ಳುವ ಜನಸಾಮಾನ್ಯರು ಪುನಃ ಗೊಂದಲಕ್ಕೊಳಗಾದರು. ನಾಳಿನ ಭದ್ರತೆ ಯಾರಿಗೂ ಇಲ್ಲ. ನಮ್ಮ ದೇಶದ ಸಂವಿಧಾನವಾಗಲೀ, ರ‍್ಕಾರಗಳಾಗಲೀ ಭವಿಷ್ಯದ ಬದುಕಿನ ನಿಶ್ಚಿತತೆಯ ಭರವಸೆ ನೀಡುವುದಿಲ್ಲ. ರ‍್ಥಾತ್ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಾಗೂ ಅವಲಂಬಿತರ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ರ‍್ಕಾರವನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ನಾಳಿನ ಅನುವು- ಆಪತ್ತಿಗಾಗಿ, ಔಷದೋಪಚಾರಕ್ಕಾಗಿ ಉಳಿತಾಯ ಮಾಡುವುದು ಅನಿವರ‍್ಯ. ಎಲ್ಲಿಯವರೆಗೆ ಸಮಾಜ ಮತ್ತು ರ‍್ಕಾರ, ವ್ಯಕ್ತಿಯ ಬದುಕಿನ ಭದ್ರತೆಯ ಭರವಸೆ ನೀಡುವುದಿಲ್ಲವೋ ಅಲ್ಲಿಯವರೆಗೂ ಅಭದ್ರತೆಯ ಭಾವದಿಂದ ಸಮಾಜ ಮತ್ತು ವ್ಯಕ್ತಿ ಬಳಲುತ್ತಾರೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣ. ಬ್ಯಾಂಕ್‍ಗಳಲ್ಲಿ ಇಡುವ ಠೇವಣಿಗೆ ಕೇಂದ್ರ ರ‍್ಕಾರ ಜಾರಿಗೆ ತಂದಿರುವ ಡಿಸಾಸಿಟ್ ಇನ್ಶುರೆನ್ಸ್ ಯೋಜನೆ ಇದೆ. ಇದರನ್ವಯ ಠೇವಣಿ ಮತ್ತು ಬಡ್ಡಿ ಸೇರಿ ಒಟ್ಟೂ ಒಂದು ಲಕ್ಷ ರೂಪಾಯಿಯವರೆಗೆ ಮಾತ್ರ ಇನ್ಶುರೆನ್ಸ್ ಅನ್ವಯವಾಗುತ್ತದೆ. ಮೂರು ದಶಕಗಳ ಹಿಂದೆ ನಿಗದಿಪಡಿಸಿದ ಮೊತ್ತ ಈಗಲೂ ಅಷ್ಟೇ ಇದೆ ಎನ್ನುವುದು ಇಂತಹ ಯೋಜನೆಗಳ ಅವಾಸ್ತವಿಕತೆ ಮತ್ತು ಅಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ. ಡಿಪಾಸಿಟ್ ಇನ್ಶುರೆನ್ಸ್ ಯೋಜನೆಯಡಿ ಠೇವಣಿಯ ಮರುಪಾವತಿಗಾಗಿ ಬೇಡಿಕೆ ಸಲ್ಲಿಸಬೇಕೆಂದರೆ ಸಂಬಂಧಿಸಿದ ಬ್ಯಾಂಕ್ ದಿವಾಳಿಯಾಗಿರಬೇಕು! ಆದಾಯಕರ ಇಲಾಖೆಯನ್ನು ಜನಸ್ನೇಹಿ ಯಾಗಿಸುವ ಬದಲಿಗೆ ಜನವಿರೋಧಿಯನ್ನಾಗಿಸಲಾಗಿದೆ. ಮಧ್ಯಮ ರ‍್ಗದವರಲ್ಲಿ ಭಯ ಹುಟ್ಟಿಸುವ ಇಲಾಖೆಯಂತೆ ಇದು ಕರ‍್ಯನರ‍್ವಹಿಸುತ್ತಿದೆ. ಜನಸಾಮಾನ್ಯರಿಗೆ ಸಿಗಬೇಕಾದ ಸಂಪನ್ಮೂಲಗಳ ಮೇಲಿನ ಹಕ್ಕು ಬೆರಳೆಣಿಕೆಯ ಉದ್ಯಮಪತಿಗಳ ಪಾಲಾಗುತ್ತಿದೆ. ಉಳ್ಳವರಿಗೆ ಅನುಕೂಲ ಮಾಡಿಕೊಡುವ ರೀತಿಯ ಕಾನೂನುಗಳ ರಚನೆ, ( ಕಾರ‍್ಪೋರೇಟ್ ವಲಯಕ್ಕೆ ಇತ್ತೀಚೆಗೆ ನೀಡಿರುವ ತೆರಿಗೆ ವಿನಾಯಿತಿ ಒಂದು ಉದಾಹರಣೆ) ಉಳ್ಳವರಿಗೆ ಕೊಳ್ಳೆಹೊಡೆಯುವ ಅವಕಾಶ ಸೃಷ್ಟಿ , ರ‍್ಕಾರದ ಅತಿಯಾದ ಹಸ್ತಕ್ಷೇಪಗಳಿಂದಾಗಿ ರ‍್ಥಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಮಧ್ಯಮ ರ‍್ಗದವರು ಭಯಭೀತರಾಗಿದ್ದಾರೆ. ಮೂರು ರ‍್ಷಗಳ ಹಿಂದೆ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2000 ರೂ ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಾಗಲೇ ಪ್ರಧಾನಿಯವರ ಘೋಷಣೆಯ ಟೊಳ್ಳುತನ ಬಯಲಿಗೆ ಬಂದಿತ್ತು. ಆರ್‍ಬಿಐಗೆ ಜಮಾ ಆಗುತ್ತಿದ್ದ ರದ್ದಾದ ನೋಟುಗಳ ಮೊತ್ತವನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದ ಆರ್‍ಬಿಐ ಅಂತೂ ಅಗಸ್ಟ್ 2017 ರ ಅಂತ್ಯದಲ್ಲಿ ಬಿಡುಗಡೆ ಮಾಡಿದ ಅಂಕಿಅಂಶದಂತೆ 98.96% ನೋಟುಗಳು ವಾಪಾಸು ಬಂದಿದ್ದವು. 29-08-18 ರಂದು ಆರ್‍ಬಿಐ ನೀಡಿದ ಮಾಹಿತಿಯಂತೆ ಚಲಾವಣೆಯಲ್ಲಿದ್ದ 500, 1000 ರೂ. ನೋಟುಗಳ ಪೈಕಿ ರೂ. 15.42 ಲಕ್ಷ ಕೋಟಿ ರೂಪಾಯಿಗಳಲ್ಲಿ 15.31 ಲಕ್ಷ ಕೋಟಿ ರೂ.ಗಳು ( 99.35%) ವಾಪಾಸು ಬಂದಿತ್ತು. 10,720 ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಾಸು ಬರದೇ ಉಳಿದವು. ಹಾಗಾದರೆ ಭಾರತದಲ್ಲಿ ಕಪ್ಪು ಹಣ ಇರಲೇ ಇಲ್ಲವೇ ಅಥವಾ ಈಗ ಇಲ್ಲವೋ? ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ತಪ್ಪೇ? ಎಂಬಂತಹ ಪ್ರಶ್ನೆಗಳು ಉದ್ಭವವಾಗುವುದು ಸಹಜ. ನೋಟುಗಳ ರದ್ದತಿ ಭಾರತಕ್ಕೆ ಹೊಸದಲ್ಲ. 1946 ರಲ್ಲಿಯೇ ರೂ. 1000, 5000 , 10,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಾಳಸಂತೆ ಕೋರರು ಕಪ್ಪು ಹಣ ಸೇರಿಸಿಟ್ಟಿದ್ದಾರೆಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಮುಖಬೆಲೆಯ ನೋಟುಗಳನ್ನು 1954 ರಲ್ಲಿ ಪುನಃ ಚಾಲನೆಗೆ ತರಲಾಯಿತು. 1978 ರಲ್ಲಿ ಇನ್ನೊಮ್ಮೆ ಈ ನೋಟುಗಳನ್ನು ರದ್ದುಪಡಿಸಲಾಯಿತು. ಆಗ ಕೂಡಾ ಕಪ್ಪು ಹಣ ನಿಯಂತ್ರಿಸುವ ಕಾರಣವನ್ನೇ ನೀಡಲಾಗಿತ್ತು. 1978 ರಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತಿದ್ದವು. ದೇಶದ ಹೆಚ್ಚಿನ ನಾಗರಿಕರು ರೂ. ಐದು , ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ನೋಡಿಯೇ ಇರಲಿಲ್ಲ. ಆದರೆ 2016 ರಲ್ಲಿ ಜನಸಾಮಾನ್ಯರ ಕೈಯಲ್ಲಿ ಓಡಾಡುತ್ತಿದ್ದುದೇ 500, 1000 ರೂ. ನೋಟುಗಳು. ತಾವು ನ್ಯಾಯಯುತವಾಗಿ ಗಳಿಸಿದ ರದ್ದಾದ ನೋಟುಗಳನ್ನು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಬದಲಾಯಿಸಲು ಜನಸಾಮಾನ್ಯರು ಪರದಾಡುತ್ತಿರುವಾಗ ಶ್ರೀಮಂತರು ಮತ್ತು ಪ್ರಭಾವಿ ಕುಳಗಳು ಕೋಟಿಗಳ ಲೆಕ್ಕದಲ್ಲಿ ಹೊಸ 2000 ರೂ. ನೋಟುಗಳನ್ನು ಪಡೆಯುತ್ತಿದ್ದರು. ಕೆಲವು ಬ್ಯಾಂಕ್‍ಗಳಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆಪಾದಿಸಿ, ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಆರ್.ಬಿ.ಐನ ಕೆಲ ಅಧಿಕಾರಿಗಳು ಶಾಮೀಲಾಗಿದ್ದು ಬಹಿರಂಗವಾಯಿತು. ಆದರೆ ಅಷ್ಟರೊಳಗೆ ಧನಿಕರ ಕಾಳ ಸಂಪತ್ತು ಬಿಳಿಯಾಗಿ ಬಿಟ್ಟಿತ್ತು. ಬಯಲಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ನೋಟು ರದ್ದತಿಗಾಗಿ 10 ತಿಂಗಳಿನಿಂದಲೂ ಪರ‍್ವ ತಯಾರಿ ನಡೆಸಿದ್ದ ತಜ್ಞರ ತಂಡಕ್ಕೆ ಇಂತಹ ಸರಳ ವಿಚಾರ ಗೊತ್ತಿರಲಿಲ್ಲವೆಂದು ನಂಬುವುದು ಕಷ್ಟ. ಇದರೊಟ್ಟಿಗೇ ಬೆರಳೆಣಿಕೆಯ ದೊಡ್ಡ ಕುಳಗಳು, ಸಾವಿರ ಕೋಟಿಗಳ ಲೆಕ್ಕದಲ್ಲಿ ರದ್ದಾದ ನೋಟುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಡಾಲರ್ ಖರೀದಿಸುವ ಮೂಲಕ ಹಾಗೂ ತಮ್ಮ ಛಾಯಾ ಕಂಪನಿಗಳ ಹೆಸರಿನಲ್ಲಿ ವಿದೇಶೀ ಹೂಡಿಕೆಯ ನಾಟಕವಾಡಿದವು. ಆ 50 ದಿನಗಳಲ್ಲಿ ಡಾಲರ್ ಎದುರು ರೂಪಾಯಿಯ ಏರಳಿತವನ್ನು ಗಮನಿಸಿ, ಡಾಲರ್ ಖರೀದಿಸಿದವರ ಹಾಗೂ ವಿದೇಶೀ ಬಂಡವಾಳದ ಒಳಹರಿವಿನ ಮೂಲವನ್ನು ತಪಾಸಣೆ ಮಾಡಿದರೆ, ಸತ್ಯ ಹೊರಬರುತ್ತದೆ. ಇಂದಿನ ಕೇಂದ್ರ ರ‍್ಕಾರಕ್ಕೆ ಇದನ್ನು ಕೈಗೊಳ್ಳುವ ಧರ‍್ಯವಿಲ್ಲ. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದರಿಂದ ಕಪ್ಪು ಹಣ ಮತ್ತು ಲೆಕ್ಕ ತಪ್ಪಿಸಿದ ಸಂಪತ್ತಿನ ಸೃಷ್ಟಿಯನ್ನು ನಿಯಂತ್ರಿಸಲು ಸಾಧ್ಯವೆಂದು ನಾನು ಇದೇ ಅಂಕಣದಲ್ಲಿ ( 27-10-2016) ಪ್ರತಿಪಾದಿಸಿದ್ದೆ. ದೊಡ್ಡ ನೋಟುಗಳನ್ನು ಭೂಮಿ ಖರೀದಿ, ಬಂಗಾರ ಖರೀದಿಗಳಲ್ಲಿ ಬಳಸಿ ಕಪ್ಪು ಸಂಪತ್ತು ಸೃಷ್ಟಿಯಾಗುವದಕ್ಕೆ ಇನ್ನಷ್ಟು ಸಹಾಯಕವಾಗಲು 2000 ದ ನೋಟು ಬಂತೆಂದು 17-11-16 ರಂದು ವಿವರಿಸಿದ್ದೆ. ನೋಟು ರದ್ದತಿಯನ್ನು ಮಾಡಿದ ರೀತಿ, ನಡೆಸಿದ ವಿಧಾನಗಳನ್ನು ಗಮನಿಸಿದಾಗ ಇದು ರ‍್ಕಾರ ಪೋಷಿತ, ಸಂಘಟಿತ ಲೂಟಿ, ಕಾನೂನಿನ ರಕ್ಷಣೆಯಲ್ಲಿ ಜನಸಾಮಾನ್ಯರ ಸುಲಿಗೆ ಎಂದು ಹಲವರು ಮಾಡಿರುವ ಟೀಕೆಯಲ್ಲಿ ತಪ್ಪಿಲ್ಲವೆನಿಸುತ್ತದೆ. ನೋಟು ರದ್ದತಿಯಾದಾಗಲೇ ಹಲವು ರ‍್ಥಿಕ ತಜ್ಞರು ರ‍್ಥಿಕ ಹಿಂಜರಿತದ ಮುನ್ಸೂಚನೆ ನೀಡಿದ್ದರು. ತಮ್ಮ ಆಪ್ತ ವಲಯದ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡ ಪ್ರಧಾನಿ ಮತ್ತು ಅವರ ತಂಡದವರು ಇಂತಹ ಸಲಹೆ, ಮುನ್ಸೂಚನೆಗಳಿಗೆ ಬೆಲೆ ನೀಡಲೇ ಇಲ್ಲ. ಬದಲಿಗೆ ದೇಶದ ಮಧ್ಯಮ ರ‍್ಗದವರನ್ನೂ ಬೆದರಿಸುವ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಮಧ್ಯಮ ರ‍್ಗದವರ ಬಹುನಿರೀಕ್ಷಿತ ಆದಾಯ ತೆರಿಗೆಯ ಮಿತಿ ಏರಿಸುವುದನ್ನು ಮುಂದೂಡುವ ಸಲುವಾಗಿ ಬಂಗಾರದ ನಿಯಂತ್ರಣದ ನಾಟಕ ನಡೆಸಲಾಗುತ್ತಿದೆಯೆಂಬ ಅಭಿಪ್ರಾಯವನ್ನು ತಳ್ಳಿ ಹಾಕಲಾಗದು. ನೋಟು ರದ್ದತಿಯ ನಂತರದ ಮೂರು ರ‍್ಷಗಳಲ್ಲಿ ಆಗಿರುವ ಉದ್ಯೋಗ ನಷ್ಟ, ರ‍್ಥಿಕ ಹಿಂಜರಿತ, ಅಂದಿನ ನರ‍್ಣಯ ಸರಿ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ಚಲಾವಣೆಗೆ ಬಂದಿರುವ ಹೊಸ

ಆರ್ಥಿಕತೆ. Read Post »

ಪುಸ್ತಕ ಸಂಗಾತಿ

ಫೋಟೋ ಆಲ್ಬಂ

ಪಂಚವರ್ಣದ ಹಂಸ ಸತ್ಯಮಂಗಲ ಮಹಾದೇವ ಕೃತಿ ಬಿಡುಗಡೆಯ ಸಂಭ್ರಮದ ಕ್ಷಣಗಳು ದಿನಾಂಕ: 04-11-2019 ಬಿಡುಗಡೆ: ಶ್ರೀ ಮಲ್ಲೇಪುರಂ.ಜಿ.ವೆಂಕಟೇಶ್ ಕೃತಿ ಕುರಿತು ಮಾತಾಡಿದವರು: ಡಾ.ಸಿ.ಎನ್. ರಾಮಚಂದ್ರನ್

ಫೋಟೋ ಆಲ್ಬಂ Read Post »

You cannot copy content of this page

Scroll to Top