ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

GO BLUE- ಗೋ ಬ್ಲೂ

ಅಂಜಲಿ ರಾಮಣ್ಣ ಇವತ್ತು ರಾಷ್ಟ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯು ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ  ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆಗೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ  ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ  ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “  ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’GO BLUE ‘  ಈ ಘೋಷವಾಕ್ಯದಲ್ಲಿ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಡಗಳನ್ನು, ಮಾರುಕಟ್ಟೆಗಳನ್ನು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲು ಕೇಳಿಕೊಳ್ಳಲಾಗಿದೆ. ಸುತ್ತಮುತ್ತಲೂ ತಮ್ಮ ಕಣ್ಣುಗಳಿಂದ ‘ ನೀಲಿನೀಲಿ ‘ ನೋಡುವ ಅಪ್ರಾಯಸ್ಥರು ’ಯಾಕೆ ಹೀಗೆ?’ ಎಂದು ಪ್ರಶ್ನಿಸುವಾಗ ಅವರುಗಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಕೆಲಸವಾಗಲಿ ಎನ್ನುವ ಉದ್ದೇಶವಿದೆ ಈ ನೀಲಿ ಬಣ್ಣದ ಆಯ್ಕೆಗೆ. ಈ ವಾರವಿಡೀ ವಯಸ್ಕರೂ ಮಕ್ಕಳೆಡೆಗೆ ಸಂವೇದನಾಶೀಲರಾಗಲಿ, ಮಕ್ಕಳ ಸಮಾಜದೆಡೆಗೆ ಎಚ್ಚರಗೊಳ್ಳಲಿ ಎನ್ನುವ ನಿರೀಕ್ಷೆಯಿದೆ ಈ ನೀಲಿ ಬಣ್ಣಕ್ಕೆ. ನೀಲಿಯೇ ಯಾಕೆ ಬಣ್ಣಗಳ ಅಧ್ಯಯನದಲ್ಲಿ ನೀಲಿ ಬಣ್ಣ ನಂಬಿಕೆ ಮತ್ತು ವಿಶ್ವಾಸದ ಧ್ಯೋತಕವಾಗಿದೆ. ಧ್ವನಿಯ ಬಣ್ಣ ನೀಲಿ ಎಂದು ಗುರುತಿಸಲಾಗಿದೆ. ನಿಷ್ಠೆ, ಬುದ್ಧಿವಂತಿಕೆ, ಸತ್ಯ ಸಂಧತೆಗೆ ನೀಲಿ ಬಣ್ಣವನ್ನು ಪ್ರತಿನಿಧಿಸಲಾಗಿದೆ. ವೈದ್ಯಕೀಯವಾಗಿ ನೀಲಿ ಬಣ್ಣವು ಮನಸ್ಸು ಹಾಗು ದೇಹವು ಹೊಂದಾಣಿಕೆ ಸಾಧಿಸಲು ಸಾಕಷ್ಟು ಸಹಾಯಕಾರಿ ಎಂದು ಹೇಳಲಾಗಿದೆ. ಆಕಾಶ ನೀಲಿ, ಶರಧಿ ನೀಲಿ. ಅದಕ್ಕೇ ಆಳ ಮತ್ತು ಧೃಢತೆಯ ಸಂಕೀತವಾಗಿದೆ ನೀಲಿ. ಬೈಬಲ್‍ನಲ್ಲಿ ನೀಲಿ ಬಣ್ಣವನ್ನು ದೈವ ವಾಣಿಯ, ಸ್ವರ್ಗದ ಬಣ್ಣ ಎಂದು ಬಣ್ಣಸಲಾಗಿದೆ. ಯಹೂದಿಗಳು ನೀಲಿ ಬಣ್ಣವನ್ನು ದೈವತ್ವದ ಬಣ್ಣವೆಂದು ಭಾವಿಸುತ್ತಾರೆ. ಚಿತ್ತಸ್ಥಿಮಿತಕ್ಕೆ ನೀಲಿಯಾಕಾರ ಎನ್ನುತ್ತಾರೆ ಅವರು. ಹಿಂದು ದೇವರುಗಳಿಗೆ ನೀಲಿ ಬಣ್ಣವನ್ನು ಪರಿಕಲ್ಪಿಸಲಾಗಿದೆ. ಮಕ್ಕಳು ನರಳುತ್ತಿದ್ದಾರೆ. ಅವರ ನೋವಿನ ಕೂಗನ್ನು ಕೇಳಿಸಿಕೊಳ್ಳಲು ಸ್ವಲ್ಪವೇ ಸೂಕ್ಷ್ಮತೆಯೂ ಸಾಕು. UNCRC30 ಎನ್ನುತ್ತಾ ವಿಶ್ವಸಂಸ್ಥೆಯು ಕೊಟ್ಟಿರುವ ನೀಲಿ ಬಣ್ಣದಲ್ಲಿ ನಾವುಗಳೂ ತೊಡಗಿಕೊಳ್ಳೋಣ. ನಾವೂ ಎಲ್ಲೆಡೆಯಲ್ಲಿಯೂ ನೀಲಿಯಾಗೋಣ. ನಾವೇ ನಿರ್ಮಿಸಿದ ಧರ್ಮ, ಆಚರಣೆ, ನಂಬಿಕೆಗಳಿಂದ ನೀಲಿಗಟ್ಟುತ್ತಿರುವ ಮಕ್ಕಳಿಗೆ ಉಸಿರು ತುಂಬೋಣ. ಮನುಷ್ಯರಾಗೋಣ. ಜಗತ್ತಿಗೆಲ್ಲ ’GO BLUE’ ಎನ್ನೋಣ. ಅಂಜಲಿ ರಾಮಣ್ಣಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ

GO BLUE- ಗೋ ಬ್ಲೂ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಈ ಹೊಸ ಅಂಕಣ ಎರಡು ವಾರಕ್ಕೊಮ್ಮೆ ಪ್ರಕಟವಾಗುತ್ತದೆ. ಅವ್ಯಕ್ತ ಓದುವ ಮುನ್ನ ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್ ಎಂಬುದನ್ನು ಬರೀ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವಾರ್ಥ ಜೀವನ ನಡೆಸುವುದು…ಅಥವಾ ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು…ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೂ, ಎರಡನೆಯ ತರದವರು ಬೆರಳೆಣಿಕೆಯಷ್ಟು ಈ ನಿಟ್ಟಿನಲ್ಲಿ ನಾನು ನನ್ನ ಹೆಚ್ಚಿನ್ನ ಸಮಯವನ್ನುಮಕ್ಕಳೊಂದಿಗೆ ಕಳೆದಿದ್ದೇನೆ, ಮಕ್ಕಳ ಮನಸ್ಸನ್ನು ಅರಿಯಲು, ತೊಂದರೆಗಳನ್ನು ಪರಿಶೀಲಿಸುವುದುನನ್ನ ದಿನನಿತ್ಯ ಜೀವನದ ಒಂದು ಭಾಗ. ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ… ಈ ನಿಟ್ಟಿನಲ್ಲಿ ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು ಎಂದಾದರೂಯಾರಾದರೂ ಅನುಭವಗಳನ್ನು ಮುಂದಿಟ್ಟುಕೊಂಡು ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ.. ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿಅದನ್ನು ಪ್ರಕಾಶಿಸಲು ಅವಕಾಶ ನೀಡಿದೆ.ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮ ಜವಾಬ್ದಾರಿಯಾಗಿರುತ್ತದೆ ಒಟ್ಟಾಗಿ ಅದನ್ನು ಚಂದಗೊಳಿಸುವ ಬೆಳೆಸುವ! ಬದಲಾವಣೆ ಇನ್ನೆರಡು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಇದ್ದಿದ್ದರಿಂದ ಓದೋದು ಬಿಟ್ಟು ಕುಸುಕುಸು ಪಿಸಿಪಿಸಿ ಮಾತಾಡ್ಕೊಂಡು ಕೂತಿದ್ರು. ನಾನು ಪೀಠಿಕೆ ಹಾಕಿದೆ “ಎಷ್ಟು ದುಡ್ಡು ಕಲೆಕ್ಟ್ ಮಾಡ್ತಾ ಇದ್ದೀರಾ ಎಲ್ರೂ… ಟೀಚರ್ಸ್ ಡೇಗೆ?” ಮ್ಯಾಮ್1000, 500, 1500…ನನಗೆ ಕೇಳಿ ಆಶ್ಚರ್ಯ, ಕಸಿವಿಸಿಯಾಯಿತು ತೋರಿಸ್ಕೊಳ್ಲಿಲ್ಲ. ಎಲ್ರುನ್ನೂ ಸುಮ್ನೆ ಕೇಳ್ದೆ “ನಿಮ್ಮ ಇಷ್ಟದ  ಶಿಕ್ಷಕರ ಬಗ್ಗೆ ಒಬ್ಬೊಬ್ಬರುಎರಡೆರಡು ಸಾಲಿನಷ್ಟು ಹೇಳಿ”.ಎಲ್ಲರೂ ಪುಸ್ತಕ ಮುಚ್ಚಿಟ್ಟು ತಾಮುಂದು ನಾಮುಂದು ಅಂತ ಹೇಳಕ್ಕೆ ಶುರುಮಾಡಿದ್ರು…  ಒಂದು ನಿಮಿಷ ಬಿಟ್ಟು ಸ್ವಲ್ಪಸ್ವರ ಏರಿಸಿ “ಸಾಕು ಈಗ ನನ್ನ ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಕೊಡಿ”ಅಂದೆ. ಎಲ್ಲರೂ ಅಶಕ್ತವಾಗಿ(ನಿಶ್ಯಬ್ಧವಾಗಿ) ಕೇಳತೊಡಗಿದರು. ನಾನು ಕೇಳಿದೆ “ ನಿಮ್ಮ ಗುರುಗಳು ಯಾವತ್ತಾದ್ರು ಹೀಗ್ ಹೇಳಿದ್ರಾ?“ನೀನು ಹಣವಂತನಾಗಬೇಕು, ನೀನು ನನಗೆ ಬಟ್ಟೆಬರೆ ಇತ್ಯಾದಿ ಕೊಡ್ಸು, ನೀನು ನನ್ನ ಹುಟ್ಟಿದ ಹಬ್ಬ ವಿಜ್ರಂಭಣೆಯಿಂದಆಚರ್ಸು, ನೀನು ನಂಗೆ ತಿಂಡಿ ತಿನಿಸು ಕೊಡ್ಸು, ನೀನು ದೊಡ್ಡ ಮನುಷ್ಯ ಆಗಿ ನನ್ನ ಹೆಸರನ್ನು ಹೊರಗಡೆ ಸಮಾಜಕ್ಕೆ ಹೇಳು, ನನಗೆ ತುಂಬಾ ಕಷ್ಟ ಇದೆ ನನಗೆ ಸಹಾಯ ಮಾಡು…???” ಮಕ್ಕಳು ತಟ್ಟನೆ ಹೇಳಿದ್ರು “ಇಲ್ಲ, ಯಾವತ್ತೂ ಹೇಳಿಲ್ಲ…” ಮನಸಲ್ಲಿನಗಾಡಿಕೊಂಡು “ಹೌದಾsssss! , ಹಾಗಾದ್ರೆ ಹೀಗ್ಹೇಳಿದ್ದಾರಾ?.. ನೀನು ಗುಣವಂತನಾಗು,  ಬೇಕೆಂದವರಿಗೆ ಸಹಾಯ ಮಾಡು, ನಕ್ಕು ನಗಿಸು ಯಾರನ್ನೂನೋಯಿಸ್ಬೇಡ , ಹಿರಿಯರನ್ನು ಪ್ರೀತಿ ಗೌರವದಿಂದ ನೋಡ್ಕೋ, ಕಿರಿಯರ ಮೇಲೆ ಕಾಳಜಿ ಇರ್ಲಿ,  ನಿನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸು, ದೇಶಕ್ಕೆ ಒಳ್ಳೆಯ ಪ್ರಜೆಯಾಗು,ಮನೆಗೆ ಒಳ್ಳೆಯ ಮಗುವಾಗು” ಎಲ್ರೂ “ಹೌದು ಹೌದು!” ಅಂತ ಇನ್ನಷ್ಟು ವಿಚಾರಗಳನ್ನಹಂಚ್ಕೊಂಡ್ರು. ಎರಡು ನಿಮಿಷ ನಿಶ್ಶಬ್ದವಾಗಿ ಇದ್ದು… “ನಿಮ್ಮ ಪ್ರಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಅತ್ಯಂತ ಒಳ್ಳೆ ಉಡುಗೊರೆ ಎಂದರೆ ಅವರು ಹೇಳ್ಕೊಟ್ಟಿರೋ ವಿಚಾರಧಾರೆನನಿಮ್ಮಲ್ಲಿ ಬೆಳೆಸಿಕೊಳ್ಳೋದಲ್ವೇ ಮಕ್ಳೇ?” “ACTIONS SPEAK my children”…ಅಂದೆ.. ಎಲ್ಲರೂ ಎರಡ್ನಿಮಿಷ ನಿಷಬ್ದರಾದ್ರು. ಅದ್ರಲ್ಲಿ ಒಬ್ಬಳು ಕೇಳಿದ್ಲು”ಈಗಇರೋ ಹಣದಲ್ಲಿ ನಾವು ಹೇಗೆ ಸಹಾಯ ಮಾಡದು? ನನ್ಟೀಚರ್ ಯಾವಾಗ್ಲೂಬೇರೆಯವರಿಗೆ ಸಹಾಯ ಮಾಡಿ, ಅಂತಾರೆ!” ನಾನು ಈ ಪ್ರಶ್ನೆಗೆ ಕಾಯುತ್ತಿದ್ದ್ನೇನೋ ಅನ್ನೋಹಾಗೆ ಥಟ್ಟನೆ ಹೇಳಿದೆ “ಯೋಚಿಸ್ನೋಡು! ನಿಮ್ಮ ಶಾಲೆಯಲ್ಲಿ ಬಡಮಕ್ಕಳಿರ್ಬೌದಲ್ವಾ?… ” ಅವಳು ಸಂಭ್ರಮದಿಂದ “ಹೌದು ಮಿಸ್, ಹಾಗಾದರೆ, ಈ ಸರಿ ನಾವು ಕಲೆಕ್ಟ್ ಮಾಡಿರೋ ಹಣಾದಲ್ಲಿನಾಲ್ಕೆದು ಚಾರ್ಜರ್ ಲೈಟ್ಗಳನ್ನತಂದುಅಕ್ಕನ ಮನೆಯಲ್ಲಿಕರೆಂಟ್ಟ್ಲಿಲ್ವಲ್ಲಾ… ಅವಳಿಗೆಕೊಡೋಣ. ಓದಕ್ಕೆ ಸಹಾಯಆಗುತ್ತೆ.!! “ ನಾನು “ಶಹ್ಬಾಶ್ ಮಗ್ಳ!ಇದು ನಿಜವಾದ ಶಿಕ್ಷಕರ ದಿನಾಚರಣೆ!” ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ರು. ಎಲ್ಲಾ ಮಕ್ಕಳಿಗೆ ಕುರಿತು ಹೇಳಿದೆ  “ಬದಲಾವಣೆಗೆ ಎಂದು ಕಾದು ಕುತ್ಕೋ ಬಾರದು ಮನಸ್ಸು ಮಾಡಿ ಬದಲಾವಣೆ ನಮ್ಮಿಂದಲೇ ಪ್ರಾರಂಭ ಮಾಡ್ಬೇಕು.”

ಅವ್ಯಕ್ತಳ ಅಂಗಳದಿಂದ Read Post »

ಇತರೆ

ಮಕ್ಕಳ ದಿನದ ಸಂಭ್ರಮ

ಅನು ಮಹಾಲಿಂಗ ಪುಟ್ಟ ನೀನು ಬಹಳ ಚೆಂದನಿನ್ನ ನಗುವ ಇನ್ನೂ ಅಂದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಬಂದಾಗಇಡುವೆ ನಿನಗೆ ದೃಷ್ಟಿ ಬೊಟ್ಟು ನಾನಗ ಬಿಸ್ಕೇಟ್ ಚಾಕೊಲೇಟ್ ಭಾರಿ ತರುವೆನೀನಿಗ ಬೇಗ ತಿನ್ನು ಊಟವನ್ನುಅ ಆ ಕಲಿಯೊ ಕಂದಾನಮ್ಮಯ ಭಾಷೆಯೆ ಚೆಂದ ಚೆಂದದಿ ನುಡಿಯೋ ಅಂದದಿ ಕುಣಿಯೊಚಂದ್ರವದನನೇ ಚುಕ್ಕಿ ಚಂದ್ರಮತಾರಲೋಕದ ಅಧಿಪತಿ ನೀನುತಾರ ಬಳಗದೀ ಹೋಳೆಯುವೆ ಏನು ನಿನ್ನಯ ಅಂಗಾಲು ಮುಂಗಾಲನೆಲ್ಲಮುದ್ದಿಸಿ ತೊಳೆದು ಮುತ್ತನ್ನು ಇಡುವೆನನ್ನಯ ಕನಸು ನಾಳೆಯ ನನಸುಜಗಕೆಲ್ಲ ಅಧಿಪತಿ ನೀನೆ ಕಂದಯ್ಯಾ —————————–

ಮಕ್ಕಳ ದಿನದ ಸಂಭ್ರಮ Read Post »

ಕಾವ್ಯಯಾನ

ಮಕ್ಕಳದಿನದ ಸಂಭ್ರಮ

ಮಕ್ಕಳ ಕವಿತೆಗಳು ಸಂತೆಬೆನ್ನೂರು ಫೈಜ್ನಾಟ್ರಾಜ್ ನಮ್ಮ ಚಂದ್ರ ನಮ್ಮ ಚಂದ್ರ ಬಾನಿಗೊಬ್ಬ ಚಂದಿರ ದೇಶಕ್ಕೊಬ್ಬ ಚಂದಿರ ಅವನೇ ಸುಭಾಸ್ ಚಂದಿರ//ಬಾ// ಶಕ್ತಿ ಕೊಡಿ ರಕ್ತ ಕೊಡಿ ಸ್ವತಂತ್ರ ಕೊಡುವೆ ಎಂದನು ಸ್ವಾರ್ಥ ಬಿಡಿ ನಿಸ್ವಾರ್ಥ ದುಡಿ ದೇಶಕದುವೆ ಹೆಮ್ಮೆ ಎಂದನು//ಬಾ// ಜೈ ಹಿಂದ್ ಜೈ ಹಿಂದ್ ಜೈಕಾರ ಕೂಗುತ ಎಂದಿಗೂ ಮುನ್ನುಗ್ಗಿ ಏನೇ ಬರಲಿ ಒಗ್ಗಟ್ಟಿರಲಿ ದೇಶಭಕ್ತರು ಒಂದಾದರೆ ಅದೇ ಸುಗ್ಗಿ //ಬಾ// ಒಂದೆ ನಾಡು ಒಂದೆ ತಾಯಿ ನಾವೆಲ್ಲರೂ ಭಾರತಾಂಬೆ ಮಕ್ಕಳು ಹಿಂದು-ಮುಸ್ಲಿಂ ಯಾರೇ ಇರಲಿ ದೇಶದಲ್ಲಿ ನಾವೆಲ್ಲ ಒಂದೆ ಒಕ್ಕಲು! //ಬಾ// ————————- ಸುಭಾಸ್ ಜೀ ನಿಮಗೆ ಸಲಾಂ ಸುಭಾಸ್ ಜೀ ನಿಮಗೆ ಸಲಾಂ ಭಾರತಮಾತೆಯ ಪುತ್ರನೇ ಸಲಾಂ //ಸು// ಆಜಾದ್ ಹಿಂದ್ ಕಟ್ಟಿದ ಸೇನಾನಿ ನೀನು ಜೈ ಹಿಂದ್-ಎಂದು ಅಬ್ಬರಿಸಿದ ಶೂರ ನೀನು ಮರೆಯಲಾರೆವು ನಾವು ನಿನ್ನ ಎಂದಿಗೂ ನಮ್ಮ ಹೃದಯದಲ್ಲಿರುವೆ ನೀನು ಎಂದಿಗೂ //ಸು// ಸ್ವತಂತ್ರಕ್ಕಾಗಿ ದೇಶ-ದೇಶ ತಿರುಗಿದೆ ನೀನು ಬ್ರಿಟಿಶರನ್ನು ಹೊರ ಹಾಕಲು ಹವಣಿಸಿದೆ ನೀನು ದೂರಾದೆ ಗೆಳೆಯ ನೀನು  ತಿಳಿಯದಂತೆ ಸುಮ್ಮನೆ ಅರ್ಪಿಸುವೆವು ನಿನಗೆ ಇದೋ ಇದೋ ನಮ್ಮನೆ! //ಸು// —————————————— ಹೊಸ ಲೆಕ್ಕ ಒಂದು ಎರೆಡು ಮೂರು ಬಾಳಲಿ ಕಷ್ಟ ನೂರಾರು ನಾಕು ಐದು ಆರು ಎಲ್ಲಾ ಮೆಟ್ಟಿಲ ನೀ ಏರು ಏಳು ಎಂಟು ಒಂಭತ್ತು ಗೆಲ್ಲು ಜೀವನದ ಆಪತ್ತು! ಹತ್ತು ಹನ್ನೊಂದು ಹನ್ನೆರೆಡು ಸಾಧನೆಯ ಬೆನ್ನತ್ತಿ ಹೊರಡು ಹದಿಮೂರು ಹದಿನಾಲ್ಕು ಹದಿನೈದು ಶಿಕ್ಷಣ ಕಲಿತರೆ ಅಪಾಯ ಏನೂ ಬರದು!—————————————————— ಬಳ್ಳಿ ಮತ್ತು ಮರದ ಮಾತುಕತೆ ಆಕಾಶಕ್ಕೆ ಮುಖ ಮಾಡಿ ಒಂದು ಮರ ನಿಂತಿತ್ತು ಮರದ ಮೈಗೆ ಫ್ರೆಂಡಾಗಿ ಬಳ್ಳಿ ಹಬ್ಬಿತ್ತು ಬಳ್ಳಿ ಜೊತೆ ಮರಕ್ಕಂತು ಗುಡ್ ಫ್ರಂ ಶಿಪ್ಪು ಇವರಿಬ್ಬರನ್ನು ನೋಡಿ ಉಳಿದವರು ಗಪ್ ಚಿಪ್ಪು! ಹಬ್ತಾ ಹಬ್ತಾ ಬಳ್ಳಿ ಮೇಲೆ ಹೋಗಿತ್ತು ಪಕ್ಕದಲ್ಲೇ ಇದ್ದ ಲೈಟ್ ಕಂಬ ಮುಟ್ಟಿತ್ತು ಅಯ್ಯೋ ಅಯ್ಯೋ ಬಳ್ಳಿ ಅದರಲ್ಲಿದೆ ಕರೆಂಟು ಹುಷಾರು ಹೆಚ್ಚು ಕಮ್ಮಿ ಆದರೆ ನೀನ್ ಜೊತೆ ನಾನು ಢಮಾರು ಇಲ್ಲಪ್ಪ ಮರ-ರಾಯ ಹೆದರಬೇಡ ಅರಾಮಾಗಿರು ಜೀವನ ಅಂದ್ರೆ ಎಲ್ಲಾ ಇರುತ್ತೆ ಖುಷಿಯಾಗಿರು ಆದ್ರೂ ಕರೆಂಟಂದ್ರೆ ಭಯ ಅಲ್ವಾ ನೀ ಯಾಕ್ ಅಪ್ಪಿದೆ? ನೀನು ನನ್ನ ಫ್ರೆಂಡ್ ನಿನ್ ಧೈರ್ಯ ನಾನ್ ಒಪ್ಪಿದೆ ನಾವು ಒಳ್ಳೆಯವರಾದ್ರೆ ಲೋಕನೆ ಒಳ್ಳೆದಂತೆ ಸ್ನೇಹದಿಂದ ಇದ್ದರಂತು ಎಲ್ಲಾನು ಗೆಲ್ಲಬಹುದಂತೆ!——————————————————

ಮಕ್ಕಳದಿನದ ಸಂಭ್ರಮ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ! ಬಿದಲೋಟಿ ರಂಗನಾಥ್ ನಮ್ಮ ನಾಡಿಮಿಡಿತದಲ್ಲಿರುವ ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ. ಅಲ್ಪತಿಳಿದವರ ಕುತಂತ್ರ ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.! ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು ಹೊಲಸು ಮನಸನ್ನು ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ ಭೀಮನು ನಡೆದ ನೆಲ ಬೆವರುತ್ತಿದೆ ಅಪಮಾನ ಅವಮಾನದ ಕರುಳು ಸುಡುತ್ತ ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ ರಕ್ತಪಾತದ ಕನಸು ಬೀಳುತ್ತಿದೆ ಇತಿಹಾಸ ತಿರುಚುವ ನಿಮ್ಮಗಳ ಕೈಯಲ್ಲಿ ಎಲ್ಲೋ ಮುಳ್ಳುಗಳು ನೆಲೆಯೂರಿರಬೇಕು ನಾಲಿಗೆಯು ಹುಣ್ಣಾಗಿರಬೇಕು ಮನಸು ಕೊಳಕಾಗಿ ಗಬ್ಬೆದ್ದು ನಾರುತ್ತಿರಬೇಕು .! ಅವನುಂಡ ನೋವು ನಮ್ಮದು ಕರುಳು ಕಲೆತ ಮನಸುಗಳಿಗೆ ಬೆಂಕಿ ಯಾಕೆ ಸೂಡುತ್ತೀರಿ ನರವಿಲ್ಲದ ನಾಲಿಗೆ ಮೇಲಿರುವ ಸುಳ್ಳಿನ ಬೀಜ ಮೊದಲು ಸುಡಿ ಹಾಲುಗೆನ್ನೆಯ ಮಕ್ಕಳ ಬೆಳಕಿನ ಮನಸಿಗೆ ಕತ್ತಲನ್ನೇಕೆ ಮೆತ್ತುತ್ತೀರಿ ? ಅಂಬೇಡ್ಕರ್ ಸರ್ವಕಾಲಿಕ ನಾಯಕ ಅವನೇ ಬರೆದ ಸಂವಿಧಾನವಿಲ್ಲದೇ ಹೋಗಿದ್ದರೆ ನಿಮ್ಮ ಗರಿ ಗರಿ ಬಟ್ಟೆಗಳು ಮಣ್ಣು ಮೆತ್ತಿ ಗೆದ್ದಲಹುಳು ಮುಕುರುತ್ತಿದ್ದವು. ಭೀಮನು ತುಳಿದ ಮಣ್ಣಹೆಜ್ಜೆ ನೆರಳಿಗೂ ಯೋಗ್ಯತೆಯಿಲ್ಲದ ಕುಬ್ಜ ಮನಸುಗಳೇ ಯಾರೋ ಹಾಕಿದ ಹಾರ ಹಾವಾಗುವ ಮುನ್ನ ಹಿಂಪಡಿಯಿರಿ ನೀವು ಬಿತ್ತಿದ ಸುಳ್ಳಿನ ಕೈಪಿಡಿ ಇಲ್ಲವೋ ಈ ನೆಲದ ಮನಸುಗಳ ನಿಟ್ಟುಸಿರು ವಿಧಾನ ಸೌಧದ ಕಲ್ಲುಗಳ ಮೇಲೆ ಕೂತು ಕುರ್ಚಿ ಕಾಲುಗಳೇ ಮುಗುಚಿ ಊನಾಗಿ ಹುಣ್ಣಾಗಬಹುದು.!

ಕಾವ್ಯಯಾನ Read Post »

You cannot copy content of this page

Scroll to Top