ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ವಿಷ ಮನಸ್ಕರು”ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ “ವಿಷ ಮನಸ್ಕರು” ಹಮೀದ್ ಹಸನ್ ಮಾಡೂರು ಕುಟುಕುವವರುಇರುವಷ್ಟು ದಿನವೂಬದುಕಿಗದು ಪಾಠವಯ್ಯ! ಪದಾರ್ಥದಲ್ಲಿ…..ಒಗ್ಗರಣೆಯಿದ್ದರೇ ತಾನೇನಾಲಗೆಗೆ ಅದು ರುಚಿಸುದಯ್ಯ! ಜೊತೆಗಾರರೇ…..ಕೊಕ್ಕೆ ಇಟ್ಟು ಎಳೆದಾಗದುಃಖ ಸಹಜ ಅನುಭವಿಸಯ್ಯ! ದೂರವಿರುವುದೇ ಲೇಸುಸಂಶಯಾಸ್ಪದಕರೆಂದು ನಮ್ಮವರಲ್ಲಸೈತಾನನ ಸಹಚರರು,ತಿಳಿದು ಬಾಳಯ್ಯ!————————————————ಹಮೀದ್ ಹಸನ್ ಮಾಡೂರು.

“ವಿಷ ಮನಸ್ಕರು”ಹಮೀದ್ ಹಸನ್ ಮಾಡೂರು Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇದ್ದದ್ದು ಇದ್ದ ಹಾಗೇ ಹೇಳುವವರೇ ಕಮ್ಮಿಬುದ್ಧಿ ಮಾತುಗಳನು ಕೇಳುವವರೇ ಕಮ್ಮಿ ಬೇವು-ಬೆಲ್ಲದಂತೆಯೇ ನಮ್ಮೆಲ್ಲರ ಬಾಳಿಲ್ಲಿಸಂಕಷ್ಟಗಳೆಲ್ಲ ಸಹಿಸಿ ತಾಳುವವರೇ ಕಮ್ಮಿ ಅನುಕರಣೆಯಂತು ಸುಲಭದ ಸರಕಾಯ್ತುಅನುಸರಿಸಿಕೊಂಡಿಲ್ಲಿ ಬಾಳುವವರೇ ಕಮ್ಮಿ ಅನ್ಯರ ಬಗ್ಗೆ ಎತ್ತಾಡದಿರೇ ತಿಂದನ್ನ ಅರಗದುಈ ಹಾಳು ಹರಟೆ ಬಿಟ್ಟು ಏಳುವವರೇ ಕಮ್ಮಿ ಕುಂಬಾರ ಸೋಲಿನಲ್ಲೂ ಸುಖವ ಕಂಡಿದ್ದಾನೆದಿನ ಸಾಯುವವರಿಗಿಲ್ಲಿ ಅಳುವವರೇ ಕಮ್ಮಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ

ಕಾವ್ಯ ಸಂಗಾತಿ ಲತಾ  ಎ ಆರ್ ಬಾಳೆಹೊನ್ನೂರು ಗೆಳೆಯ ನನ್ನೆದೆಯ ಗೂಡಿನಲಿ ನೀನೇಗೆ ಬಂದೆನನ್ನ ಮನಸಿಗೆ ಕುರುಹು ನೀಡದೆಮೆಲುಧ್ವನಿಯಲಿ ಪ್ರೀತಿಯ ನುಡಿಯುತಿದೆನನಗೆ ಅದೇನೆಂದು ಅರಿವಿಲ್ಲದೆ ಹೋದ ಜನ್ಮದ ಋಣಾನುಭಂದನವೋಜೊತೆ ಸಾಗಿ ಸಂತೈಸಿದ ಹೃದಯವೋಕೈ ಹಿಡಿದು ಹಾರಾಡಿದ ಬಾನಂಗಳವೋನನ್ನೊಳಗೆ ಭರವಸೆ ತುಂಬಿದ ಒಲವೋ ಏನೆಂದು ಬರೆಯಲಿ ಬಿಳಿ ಹಾಳೆಯ ಮೇಲೆಹಾಕಲಾಗುವುದಿಲ್ಲ ಕೊರಳಿಗೆ ಮಾಲೆಹೊಸತನದ ಹರುಷ ತುಂಬಿದ ಸೆಲೆನವ ನವೀನತೆಯ ಪರಿಚಯಿಸುವ ಕಲೆ ಜೀವನ ಪಯಣದಲಿ ಇರು ಗೆಳೆಯನಾಗಿತಪ್ಪು ಒಪ್ಪುಗಳ ತಿಳಿಸುವ ಮನವಾಗಿಹರುಷ ತುಂಬುವ ಸುಮಧುರ ಪಯಣಿಗನಾಗಿನೀನಿರು ನಾ ಬರೆವ ಕವಿತೆಯಲಿ ಮೌನವಾಗಿ ಲತಾ  ಎ ಆರ್ ಬಾಳೆಹೊನ್ನೂರು

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ Read Post »

ಕಾವ್ಯಯಾನ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು

ಕಾವ್ಯಸಂಗಾತಿ ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು ಕವಿತೆ- ಒಂದು ಅವಳು ಕವಿಯೂ ಅಲ್ಲಸಾಹಿತಿಯೂ ಅಲ್ಲನಿಸ್ವಾರ್ಥ ಮನದ ಗೆಳತಿಮನಸ್ಥಿತಿಗೆ ತಕ್ಕಂತೆಕಾವ್ಯದಲ್ಲಿ  ಸಾಹಿತ್ಯದಲ್ಲಿ ಅವನ ಗೋಚರಅವನ ಮನಸ್ಥಿತಿಗಿಲ್ಲಅವಳ  ಭಾವಗಳ ವಿಚಾರಭಾವಗಳೇಸಾರೀ ಸಾರೀ ಹೇಳಿ ಸಾಹಿತಿಗಳಿಗೆಕೂಗಿ ಕೂಗಿ ಹೇಳಿ ಕವಿಗಳಿಗೆಅವಳದು ಪುಟ್ಟ ನೊಂದಭಾವುಕ ಹೃದಯಅದಕಿಲ್ಲ ಸಾಮರ್ಥ್ಯ          ಆ ನೋವ ಭರಿಸುವತಿಳಿಸಿರವರಿಗೆ ಭಾವನೆಗಳ ಸ್ಪಂದನವಅವಳ ಮನದಾಳದ ನೋವ. ***** ಕವಿತೆ-ಎರಡು ತಾಯಿ,ಅಬ್ಬೆ, ಅವ್ವಾ, ಅಮ್ಮಹಲವಾರುನಾಮಧೇಯ ನಿನಗೆನೀನು ಮಮತೆಜವಾಬ್ದಾರಿಯ ಸಾಕಾರನೀ ಹಂಚಿದೆ ಸಮ ಪ್ರೀತಿನಿನ್ನೆಲ್ಲ  ಮಕ್ಕಳಿಗೆನಿನ್ನೊಬ್ಬಳಿಗೆ ನೀಡಲಾರರುಆ ಪ್ರಬುದ್ಧ ಮಕ್ಕಳು  ಹಿಂತಿರುಗಿ ಆ ಪ್ರೀತಿಅವರಿಗಿಲ್ಲನಿನ್ನ ಸಲಹುವ ತವಕಅವರೆಲ್ಲತಮ್ಮ ಹೆಂಡತಿ ಮಕ್ಕಳಿಗೆ ಭಾವುಕನಿನಗೆ ಮಾತ್ರವೃದ್ಧಾಶ್ರಮದ  ಆಸರೆಅವ್ವಾ ಬೇಕಿತ್ತಾನಿನಗೆ ಇದೆಲ್ಲದರ ಹೊರೆಇನ್ನಾದರೂ  ನಿನ್ನಷ್ಟಕ್ಕೆ ನೀನೆ ಇರೆ. ರಾಜೇಶ್ವರಿ ಶೀಲವಂತ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು Read Post »

ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಹೊಕ್ಕಳ ಬಳ್ಳಿ ಹೃದಯದ ಬಡಿತ ನೀನಲ್ಲವೆಜಗಮರೆಸುವ ಕಂದ ನಗುವ ಹಿತ ನೀನಲ್ಲವೆ ಪ್ರಪಂಚದಲಿ ಒಂಟಿಯಲ್ಲ ಜೊತೆ ನೀನಿರಲುಪ್ರೀತಿ ವಾತ್ಸಲ್ಯ ಬಾಂಧವ್ಯದ ತುಡಿತ ನೀನಲ್ಲವೆ ಮರುಭೂಮಿಯಲಿ ಒಯಸಿಸ್ ಸಿಕ್ಕಂತಾದೆಅಕ್ಕರೆ ಆಸರೆ  ಕಾರಂಜಿಯ ಪುಟಿತ ನೀನಲ್ಲವೆ ಪಾಲನೆಯಲಿ ಕಳೆದ ದಿನಗಳು ತಿಳಿಯಲಿಲ್ಲಇಳಿ ವಯಸ್ಸಿನ ಉತ್ಸಾಹದ ಮಿಡಿತ ನೀನಲ್ಲವೆ ತುಂಬಿದ ನವಮಾಸದಲ್ಲಿ ಬಂದ ಜೀವ ನೀನುಮಾಜಾ ಜನುಮಜನುಮದ ಸೆಳೆತ ನೀನಲ್ಲವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಗಜಲ್ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು”

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ “ಹಲವು ಬಲಿದಾನಗಳು” ಸುಧಾರಣೆಯಾಗುತ್ತವೆ..ಹೀಗೆಅಂದುಕೊಳ್ಳುತ್ತೇವೆ. ಕೆಲವು ಆಹುತಿಯಿಂದಕೆಲವು ಬಲಿದಾನದಿಂದಹಾಗೆಯೇ ನನ್ನ ವಾತಾವರಣವೂ.. ಅರೆ..! ಏನಾಗಿಹೋಯ್ತು..ಅಂತ ಚಿಂತಿಸಬಾರದು..ಬಲಿದಾನಕ್ಕೆ ಬೆದರಬಾರದು..ಆಹುತಿಗೆ ಅಂಜಬಾರದು.. ಇಲ್ಲದಿರೆ..;ಭಗತಸಿಂಗ್ ಶಹೀದನಾಗುತ್ತಿರಲಿಲ್ಲ..ಲಕ್ಷೀಬಾಯಿ ಸಂತಾನ ಕಳೆದುಕೊಳ್ಳುತ್ತಿರಲಿಲ್ಲ..! ನಿಜ..!ದೇವರೂ ಸಹ ವರ ದಯಪಾಲಿಸಲುತಪಸ್ಸು ಬೇಡುತ್ತಾನೆಹವಿಸ್ಸಿನ ನಂತರವೇ ಕಣ್ಣು ತೆರೆಯುತ್ತಾನೆ..! ಇದಕ್ಕಲ್ಲವೆ..,ಪಾನಾ ಹೈತೋ ಕುಛ ಖೋನಾ ಹೈ..!ಹಸನಾ ಹೈ ತೋ ಕುಛ ರೋನಾ ಹೈ.. ಇಷ್ಟೇ….,ನಾವು ಬಂದದ್ದು ಏಕೆಂದುಇರುವುದು ಏಕೆಂದುತಿಳಿದರೆ ಸಾಕು… ಒಂದು,ಆಂದೋಲನಒಂದು ಕ್ರಾಂತಿ ಆಗಬೇಕಾದರೆಹಲವು ಬಲಿದಾನವೂ ಬೇಕು..!ಹಲವು ಗಂದಗಿ ತೊಲಗಲುಗಂಧ ಹೊತ್ತ ಮರುತ ಬೇಕುಹಾಗಾದರೆ ಮಾತ್ರಸುಧಾರಣೆಯ ಸುಗಂಧ ಹರಡೀತು..!! ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು” Read Post »

ಕಾವ್ಯಯಾನ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ

ಕಾವ್ಯ ಸಂಗಾತಿ ಡಾ. ಪಿ. ಜಿ. ಕೆಂಪಣ್ಣವರ “ಸಗ್ಗ ಬಂದಿತು ಇಳೆಗೆ” ಎರಳೆಗಂಗಳ ಚೆಲುವೆನಗುವ ಮೋಹಕ ತಾರೆನಿನ್ನ ನೋಡುತ ನಾನು   ಮರುಳನಾದೆ!ಬರಿ ಚಣದ ಬದುಕಿನಲಿಒಲವ ಬಿತ್ತಿದ ನೀನುಬಾಳ ದಾರಿಗೆ ನಿತ್ಯ ದೀಪವಾದೆ ಬಿರಿದ ಮಲ್ಲಿಗೆ ದಂಡೆಮುಡಿದು ನೀ ಬರುತಿರಲುಪಿಕವು ಕೂಗಿತು ಅರಸಿ ಬಂದಳೆಂದು!ಬದುಕ ಬಂಡಿಗೆ ಎರಡುಗಾಲಿ ನಾವಿರುತಿರಲುಹದುಳ ತುಂಬುವುದಿಲ್ಲಿ ಬಳಿಗೆ ಬಂದು! ಬಾಳ ಪಯಣದ ತುಂಬಹಸಿರು ತುಂಬಿತು ನಲ್ಲೆನಿನ್ನ ಒಲುಮೆಯ ತೊರೆಯು ಹರಿಯುತಿರಲು!ಬಂದ ಜಂಜಡವೆಲ್ಲಕರಗಿ ಹೋಯಿತು ಸಖಿಯೇಸಗ್ಗ ಬಂದಿತು ಇಳೆಗೆ ನೀನು ನಗಲು! ಡಾ. ಪಿ. ಜಿ. ಕೆಂಪಣ್ಣವರ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ Read Post »

ಕಾವ್ಯಯಾನ

“ಮಾನವರಾಗಿ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಮಾನವರಾಗಿ” ದೇವನು ಭೂಮಿಯಸೃಷ್ಟಿಸಿ ಜಗತ್ತು ಎಂದಾಗಿಪ್ರಕೃತಿಯಿಂದ ಆಲಂಕರಿಸಿದ,ನಾವು ಜಗತ್ತಾಗಿಸಿ ದೇಶಗಳಾಗಿವಿಂಗಡಿಸಿ ಕೊಂಡು ಬಿಟ್ಟೆವು,! ಮನುಷ್ಯನನ್ನು ಸೃಷ್ಟಿಸಿಭೂಮಿಗೆ ಕಳುಹಿಸಿ ಕೊಟ್ಟನುಆ ಪರಮಾತ್ಮನ ನೆನೆಸಿ ಕೊಳ್ಳದೆನಾವು ಹಿಂದು ಮುಸ್ಲಿಂ ಕ್ರೈಸ್ತರಾಗಿವಿಂಗಡಿಸಿ ಕೊಂಡು ಬಿಟ್ಟೆವು.! ಹಮೀದ್ ಹಸನ್ ಮಾಡೂರು. ʼ

“ಮಾನವರಾಗಿ” ಹಮೀದ್ ಹಸನ್ ಮಾಡೂರು Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ- “ಕವಿತೆ ಹುಟ್ಟಿದ್ದು ಹೇಗೆ?” ನನ್ನೊಳಗಿನ ಕವಿತೆಯನ್ನುಬಡಿದೆಬ್ಬಿಸಿದವರುತಿದ್ದಿ ತೀಡಿದವರು ಯಾರು..?ಅಕ್ಷರದ ,ಹಿಡಿತ, ತುಡಿತ, ಮಿಡಿತಗಳಅರಿವಿಲ್ಲದಿದ್ದರೂ,ಪಡುವಣದ ಶರಧಿಯಜೊತೆಲಲ್ಲೆಗರೆಯುವಚಂದಿರನ ನೋಡಿ  ನನ್ನೊಳಗಿನ ಕವಿತೆಯ ಹುಟ್ಟು ,ಜೀವನದ ಅರ್ದ ಸತ್ಯದ ಬವಣೆಯ ನೆನೆದು,ಪೊಳ್ಳು ಭರವಸೆಯ ನೋಡಿಹುಟ್ಟಿತ್ತು ಕವಿತೆ.ನೀರುಣಿಸದೆ ಬೆಳೆದಹೆಮ್ಮರಗಳ ಕತ್ತರಿಸಿದರೂ,ಹಠ ಬಿಡದ ತ್ರಿವಿಕ್ರಮನಂತೆಮತ್ತೆ ಮತ್ತೆ ಚಿಗುರಿ,ಹಕ್ಕಿಗಳಿಗಾಸರೆಯನೀಡುವುದ ನೋಡಿ ,ಹುಟ್ಟಿತ್ತು ಕವಿತೆ.ಅಂತಸತ್ವವ ಮರೆತಂತೆಜೀವಿಸುವವರ ನೋಡಿ,ಬದುಕೆಲ್ಲ ಸವೆಸಿದರೂತೃಪ್ತಿ ಇಲ್ಲದ ಜನರ ನೋಡಿ,ಹುಟ್ಟಿತ್ತು ಕವಿತೆ.ಬದುಕು ಬಂಧುರವಾಗಲುನಿನ್ನನ್ನು ಅಪ್ಪಿಕೊಂಡೆ,ಒಪ್ಪಿಕೊಂಡೆ ಈಗನೀ ನನ್ನ ಜೀವಾಳವಾದೆ. ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” 12ರ ಶತಮಾನದಲ್ಲಿ ಉದಯಿಸಿಹೆಣ್ಣು ಕುಲಕ್ಕೆ ಮಾದರಿಯಾಗಿಹತ್ತು ಹಲವು ಕಷ್ಟಗಳನ್ನು ಸರಿಸಿದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿ ಅಕ್ಕ// ಯಾರ ಮಾತಿಗೂ ಕಿವಿಗೊಡದೆಯಾರ ಹಂಗಿಗೂ ಒಳಗಾಗದೆಯಾರ ಆಸರೆಯನ್ನು ಬಯಸದೆಚನ್ನಮಲ್ಲಿಕಾರ್ಜುನನ್ನು ಅರಸಿದೆ ಅಕ್ಕ// ಅರಮನೆ ಅರಸನನ್ನು ಬದಿಗಿರಿಸಿಲೌಕಿಕಸುಖ ಸಂಪತ್ತನ್ನು ಧಿಕ್ಕರಿಸಿಜಗದ ಜಂಜಾಟವ ಹಿಂಗಳಿಸಿಅರಸುತ್ತ ನಡೆದೆ ಅಕ್ಕ// ಅಲ್ಲಮನ ಅಧ್ಯಕ್ಷತೆಯಲ್ಲಿಬಸವಣ್ಣನ ಅನುಭವತೆಯಲ್ಲಿನೀ ಅರಸಿ ಶರಣರ ಸಂಗಡದಲ್ಲಿಕಲ್ಯಾಣದ ಕಾಶಿಗೆ ತೆರಳಿದೆ ಅಕ್ಕ// ಆಶೆ ಆಕಾಂಕ್ಷೆಯನ್ನು ಬದಿಗಿಟ್ಟುಸುಖ ಸುಪ್ಪತ್ತಿಗೆಯನ್ನು ಸರಿಸಿಟ್ಟುಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾಕದಳಿವನ ಕಾಲಿಟ್ಟು ಲಿಂಗೈಕ್ಯಾದೆ ಅಕ್ಕ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” Read Post »

You cannot copy content of this page

Scroll to Top