ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರತ್ನರಾಯಮಲ್ಲ ಅವರ‌ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಸರಳವೆಂತಾರೆ ಬದುಕು ಸರಳವಲ್ಲ ನೋಡಬೇಕು ಸರಳವಾಗಿಯೋಚನೆಗಳಿಗೆ ಕೊನೆಯಿಲ್ಲ ವಿರಾಮ ನೀಡಬೇಕು ಸರಳವಾಗಿ ಸುಗಮವಾಗದು ಬುದ್ಧಿವಂತಿಕೆ ಹೃದಯವಂತಿಕೆಗಳ ಸಂಗಮವಾಸ್ತವದಲಿ ಕನಸುಗಳಿಗೆ ರಾಗ ಕಟ್ಟಿ ಹಾಡಬೇಕು ಸರಳವಾಗಿ ಅವರವರ ವಿಷಯದಲಿ ಸಾಕಷ್ಟಿದೆ ನೋಡಲು ನಮ್ಮ ವಿಷಯದಲಿಇತರರಿಗಿಂತ ಮೊದಲು ನಮ್ಮನ್ನು ನಾವು ಕಾಡಬೇಕು ಸರಳವಾಗಿ ಜೀವನ ಸಾಕೆನಿಸುವುದಕಿಂತ ಮುಂಚೆ ಬೇಕಾದಂತೆ ಬಾಳಬೇಕುಆಸೆಗಳು ಸಾಯಿಸುವ ಮುಂಚೆ ಗೋರಿ ತೋಡಬೇಕು ಸರಳವಾಗಿ ಗೊಂದಲಗಳಿರುವುದು ದುನಿಯಾದಲಿ ಅಲ್ಲ ನಮ್ಮ ಚಿಂತನೆಗಳಲಿಮಲ್ಲಿಗೆಯ ಸುಮದಂತೆ ವಿಚಾರಗಳನು ಹೂಡಬೇಕು ಸರಳವಾಗಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ‌ ಗಜಲ್ Read Post »

ಕಾವ್ಯಯಾನ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ”

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಬಚ್ಚಿಟ್ಟುಕೋ” ಎದೆಯೊಳಗೆ ನನ್ನ ಬಚ್ಚಿಟ್ಟುಕೊ,ಉಸಿರ ಪಿಸುಮಾತ ಹಾಗೆ,ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ ​ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ ​ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರುಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ ​ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ ​ ಬರೆಯುವೆ ನಿನ್ನ  ಪ್ರೀತಿಯ ಹೆಸರ  ಪುಟ ಪುಟದ ಸಾಲಿನಲಿಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ … ಡಾ ವಿಜಯಲಕ್ಷ್ಮಿ ಪುಟ್ಟಿ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ” Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ”

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ “ಹೂಬೆ ಹೂಬೆ” ಸೂರು ಕಾಣುವ ಬೆಳಗುಎದ್ದು ಕುಳಿತುಮುಗಿಲು ಮುಟ್ಟುವ ಹಾಡುಮನಸು ಮುಟ್ಟಿಹಂಚಿನ ಮನೆ ಮೇಲೆಚೆಂದ ಬಿಳಿ ಹೊಗೆಯಚಿತ್ತಾರ ಬಿಡಿಸುತ್ತಿತ್ತುಊರ ತುದಿ ದಂಡೆಯಲ್ಲಿದೋಣಿ ಸಾಗಿಮಡಿಕೆಯಲ್ಲಿದ್ದ ಸಾರಿನ ವಾಸನೆ ಊರು ಸುತ್ತುತ್ತಿತ್ತು ಹಳ್ಳಿಯಲ್ಲಿ ಎಲ್ಲವೂಹೂಬೆ ಹೂಬೆಯಾಗಿ ಕಂಡಂತೆಅರಳಿದ ಹೂ ಮಲ್ಲಿಗೆನೆಟ್ಟ ಕೈಗಳಿಗೆ ನಗು ಚೆಲ್ಲಿನಿಂತಿರಲು ಗಾಳಿತಂಗಾಳಿಯಾಗಿ ತಿರುಗಿಮಿಡಿ ಬಿಟ್ಟ ಮಾವುಹೂ ಸೊಬಗು ಚೆಲ್ಲಿಮರದ ಹಕ್ಕಿಗೆ ಹಾಡುಸುಮ್ಮನೇ ಹೇಳಿಸಿತ್ತುಹೊರೆ ಹೊತ್ತ ಬೆವರುಮೊಗ ತುಂಬಿದ ಕನಸುಹಸಿ ಭತ್ತದ ಸಸಿತೆನೆ ಹೊತ್ತ ಮೌನ ಸಾಲುಎಲ್ಲವೂ ಹೂಬೆ ಹೂಬೆಕಂಡಂತೆ ಈಗಲೂ ಹಳ್ಳಿದಣಪೆಯ ಆಚೆಗಿದ್ದದಾಸಾಳ ಗಿಡಕ್ಕೆಹತ್ತಾರು ಹೂಗಳುಬಂದ ಹಕ್ಕಿಗೆಹೂ ನೆರಳ ಕೊಡುವುದಂತೆಅಟ್ಟಲದ ಮರ ಹೂಬಿಟ್ಟಿದೆಯಂತೆಜೇನಿಗೆ ತುಂಬಾಕೆಲಸವಿದೆಯಂತೆಹೂಬೆ ಹೂಬೆಕಾಣುವುದು ಬಳ್ಳಿಯಂತೆಒಂದೆರಡಲ್ಲ ಹಳ್ಳಿಯ ಬಳ್ಳಿಎಲ್ಲೆಡೆ ಹಬ್ಬಿದಂತೆಊರಿಗೆ ಊರೇಗೆಳೆಯರಾದಂತೆ……. ನಾಗರಾಜ ಬಿ.ನಾಯ್ಕ.

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ” Read Post »

ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಬೆಳದಿಂಗಳ ನಗು ನೀನಾಗಿರುವೆಬದುಕಿನ ಬೆಳಗು ನೀನಾಗಿರುವೆ ಸಾವಿರಾರು ವೇದನೆ  ತುಂಬಿವೆನಲಿವಿನ ಗುನುಗು ನೀನಾಗಿರುವೆ ಸುಂದರ ಕನಸಿನ ಹೂದೊಟದಲ್ಲಿಸುಗಂಧದ ಸೊಬಗು ನೀನಾಗಿರುವೆ ಹಚ್ಚ ಹಸಿರಿನ ಬದುಕು ಇದಲ್ಲವೇಪ್ರಕೃತಿಯ ಬೆರಗು ನೀನಾಗಿರುವೆ ಮಾಜಾಳ ಹೃದಯ ನೀಲಾಕಾಶದಂತೆನಕ್ಷತ್ರಗಳ ಮಿನುಗು  ನೀನಾಗಿರುವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಚಿಕ್ಕದೊಂದು ರಂಧ್ರವೂಬಲಶಾಲಿಯೇ ಹೌದುತೇಲುವ ಹಡಗನ್ನುಮುಳುಗಿಸುವುದದು ಸಾಗರದ ಮೇಲಿದೆಪುಟ್ಟ ಹಿಮ ಪರ್ವತಆಳದಲ್ಲಿದೆ ಇನ್ನೂಕಾಣಲಾಗದು ಕಣ್ಣು ಭೂಮಂಡಲ ಅಗಾಧನಶ್ವರ ಜೀವಿ ನಾನುಒಯ್ಯಲಾರೆ ಏನನ್ನೂಸಾವಪ್ಪಲು ನನ್ನನ್ನು ಪ್ರಾರ್ಥಿಸು ದೇವರಲಿಆಸೆ ಫಲಿಸಲೆಂದುಶ್ರಮದಿ ಸಾಧಿಸಲುಆತ್ಮ ಶಕ್ತಿ ನೀಡೆಂದು ಮನುಜ ಬುದ್ಧಿಜೀವಿಕಟ್ಟುತ್ತಾನೆ ಈಗಲೂಹಿಮದ ದಿಮ್ಮಿ ಮನೆಹೆಸರಾಗಿದೆ ‘ ಇಗ್ಲೂ ‘ ಹಕ್ಕಿಯಂತೆ ಹಾರಿವೆಪುಕಾರುಗಳು ಇಂದುರೆಕ್ಕೆ ಪುಕ್ಕ ಪಡೆದುಬಾಯಿಯಿಂದ ಬಾಯಿಗೆ ಚುಮು ಚುಮು ಚಳಿಗೆಕಂಬಳಿ ಹೊದ್ದ ಮಂದಿಆಗಿದ್ದಾರೆ ಮುಂಜಾನೆಮನೆಯೊಳಗೇ ಬಂದಿ ಚಳಿಗಾಲದ ಚಳಿಬೇಸಿಗೆಯಲ್ಲಿ ಬಿಸಿಎರಡು ಹೆಚ್ಚಾದರೂಜನಕ್ಕೆ ತಲೆ ಬಿಸಿ ಬೆಳೆಯಬೇಕು ನೀನುಯಾರೆಷ್ಟೇ ತುಳಿದರೂಗರಿಕೆ ಹುಲ್ಲಿನಂತೆಛಲವ ಬಿಡದಂತೆ ದಣಿವನ್ನು ತೋರದೇದುಡಿಯುವಳು ತಾಯಿನಗುತ್ತಲೇ ಹೊಣೆಯಪೂರೈಸುವಳು ಮಾಯಿ ಸಾವ ತೆಕ್ಕೆಯೊಳಗೆಜೀವಗಳು ನಿರ್ಜೀವಅನಲ ಅನಾಹುತಸೂತ್ರಧಾರಿ ವಿಧಾತ ಬೆಂಕಿಯು ವ್ಯಾಪಿಸಿತುಎಲ್ಲೆಡೆ ಸರಸರಕೊನೆಗೆ ಉಳಿಯಿತುಬಸ್ಸಿನ ಕಳೇಬರ ಎ. ಹೇಮಗಂಗಾ     

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ನಂಬಿದೆದೆಯಲಿ ಇಂಬಿರದೆ ಬಿಕ್ಕುತಿದೆ ಹಕ್ಕಿಜೊತೆ ನಡೆದ ಗುರುತಿರದೆ ಅಳುತಿದೆ ಹಕ್ಕಿ ಮುರಿದು ಹೋಯಿತು ತಾ ಕುಳಿತ ಕೊಂಬೆಹಾರಲು ಬಲವಿರದೆ ನೋಯುತಿದೆ ಹಕ್ಕಿ ಸುರಿಯುತಿದೆ ಮಳೆ ಬೀಸುತಿದೆ ಬಿರುಗಾಳಿಸುತ್ತ ಕತ್ತಲಲಿ ದಿಕ್ಕಿರದೆ ತೋಯುತಿದೆ ಹಕ್ಕಿ ರೆಕ್ಕೆಯ ಬಣ್ಣ ಮಾಸಿದೆ ಕೊರಳು ಬಿಗಿದಿದೆದುಃಖದಿ ಜೊತೆಯಿರದೆ ಕಾಯುತಿದೆ ಹಕ್ಕಿ ಮೂಕವಾಗಿವೆ ಗಿಡ ಮರ ಹೂ ಬಳ್ಳಿಗಳುಕಾನು ಕಣಿವೆ ಹಿತವಿರದೆ ಕೊರಗುತಿದೆ ಹಕ್ಕಿ ದೂರವಾಗಿದೆ ಬಲು ಬಿತ್ತರದ ನೀಲಿ ಬಾನುಅವನ ಪ್ರೀತಿಯಿರದೆ ಸೋಲುತಿದೆ ಹಕ್ಕಿ ಬದುಕಿಗಾಗಿ ಗಟ್ಟಿಗೊಳ್ಳಬೇಕು ಅರುಣಾನಲಿವಿನಲಿ ನೋವಿರದೆ ಬಾಳುತಿದೆ ಹಕ್ಕಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ಅಜೀಬ್ ದಾಸ್ತಾಂ ಹೈ ಏ ಸಂಪಾದಕರ ಸುಗ್ರೀವಾಜ್ಞೆ !“ಏನೇ ಇರಲಿ ಹೊಸತು ಬರಲಿಏನಾದ್ರೂ ವಿಭಿನ್ನ ಬರೀರ್ರೀಪ್ರಾಸ ಗೀಸದ ಬೆನ್ನಟ್ಟದಿರಿ!”“ಆದ್ರೆ ಸರ್, ಕಲ್ಪನಾ ವಿಲಾಸಪ್ರಾಸದ್ದೇ ಬೆನ್ನೇರಿ ಬಂದ್ರೆ ?”“ಏನಾದ್ರೂ ಮಾಡ್ರೀ ಹೋಗ್ರೀ !ಆದ್ರೆ ಹಳೇ ದಾಸ್ತಾನಿಂದಮಾತ್ರ ತೆಗೀಬೇಡ್ರೀ !” ಪೆನ್ನು ಪೇಪರು ಹಿಡಿದು ಹೊರಟೆಚಿನ್ನದ ಗಣಿಯೆಲ್ಲಾದರೂಇದೆಯೇನು ಪಕ್ಕ್ದಲ್ಲೇ ?ಅಗ್ದು ಅಗ್ದು“ಪುಟ”ಕ್ಕಿಟ್ಟು ಕೊಡ್ಲಿಕ್ಕೆ ?ಹೋಗ್ಲಿ, ಅಮ್ಮನಅವಳಮ್ಮನ ಒಡವೆ ಮುರಿದುಹೊಸ ಡಿಸೈನು ಮಾ‌ಡಿಸ್ಲೆ ?ಯಾಕೋ ಮನಸ್ಸಾಗ್ಲಿಲ್ಲಬರೇ ಆಂಟಿಕ್ ವಾಲ್ಯೂಎಂದಾರು ಸಂ.ಸಾಹೇಬ್ರು ! ಅಥವಾ,ಪಳ ಪಳ ಹೊಳೆಯುವಹೊಸ ಹೊಸ ಪದಗಳಟಂಕಿಸಿ ಅಂಟಿಸಿ ಪೇಜಿನ ಮೇಲೆಅಂಚೆಗೆ ಹಾಕ್ಲೆ ಈಗ್ಲೆ ?ಹೊಸ ನಾಣ್ಯ ನಡೆಯೋದಲ್ಲಓಡ್ತಾವೆ ನೋಡಿ, ಮಿಂಟ್ ಫ್ರೆಶ್ !ಎಂದನಲ್ಲವೇ ಸಂ ಮಹಾಶಯ !ಆದರೆ…ಹತ್ರ ಎಲ್ಲೂ ಟಂಕಸಾಲೆನೇಕಾಣಿಸ್ತಿಲ್ವಲ್ರೀ !ಈಗ ಅದೇನೋ ಬಂದಿದ್ಯಂತಲ್ಲಾಕೃತ್ರಿಮ ಬುದ್ಧಿ ಮತ್ತೆ ಅಂತ ?ಅದಕ್ಕೇ ಮೊರೆ ಹೋಗ್ಲೇನು ?“ಅದ್ ಬಂದ್ ಮೇಲೆನಿಮ್ಗ್ ಯಾರ್ರೀ ಹಾಕ್ತಾರ್ರ್ ಸೊಪ್ಪು ?”ಎಂದಾನು ಮಹಾನುಭಾವ ! ಸರಿ, ನಡಿ ಮತ್ತೆಹಳೆ ಉಗ್ರಾಣಕ್ಕೆ…ಏನೇನೋ ದಾಸ್ತಾಂ…ಅಳಿದಿದ್ದು ಉಳಿದಿದ್ದುಮುರಿದಿದ್ದು ಮಬ್ಬಾದದ್ದುಎದ್ದಿದ್ದು ಅರ್ಧನಿದ್ರೆಲಿದ್ದಿದ್ದುಏನೇ ಆಗ್ಲಿ ನಂದೇ ಎಲ್ಲಾಬೇರೆಯವ್ರ್ ದಾಸ್ತಾನಂತೂ ಅಲ್ಲಯಾವ್ದೋ ಒಂದನ್ನೆಬ್ಸಿಉಜ್ಜಿ ತೊಳ್ದು ಒಪ್ಪ ಮಾಡಿಹೊಸ ಇಸ್ತ್ರಿ ಅಂಗಿ ಹಾಕಿಕಳಸ್ತೀನಿ ಮಾರಾಯಂಗೆನಡೀಯತ್ತೋ ಓಡತ್ತೋಎಡವಿ ಬೀಳತ್ತೋನೋಡೇ ಬಿಡಾಣ ! ಸುಮತಿ ನಿರಂಜನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ Read Post »

ಕಾವ್ಯಯಾನ

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು”

ಕಾವ್ಯ ಸಂಗಾತಿ ರಾಶೇ ಬೆಂಗಳೂರು “ನೆನಪುಗಳು” ಸೊಗಸು ಸೊಗಸಾದಸಿಹಿ ಸಿಹಿಯಾದಆ ನೆನಪುಗಳುಮಧುರವಾಗಿರಲಿ.. ಜೀವ ಭಾವದಪ್ರೀತಿ ಮರೆಯದಹೊಂಗನಸುಗಳುಸದಾ ನನಗಿರಲಿ.. ಮತ್ತೆ ಬಾರದನೋವು ಗಾಯದಕಹಿ ಘಟನೆಗಳುಮರುಕಳಿಸದಿರಲಿ.. ಕಳೆದುಹೋದಕೆಣಕಿ ದೂರಾದಉರಿ, ದಳ್ಳುರಿಗಳುಬೆಂದು ಬೂದಿಯಾಗಲಿ.. ರಾಶೇ ಬೆಂಗಳೂರು

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು” Read Post »

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಒಲುಮೆಯ ಕಾಣಿಕೆಯಂತೆಬಂದೆ ಅಪ್ಪ ನೀ ನನ್ನ ಬಾಳಿಗೆ!ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..ತುಂಬಿ ನನ್ನ ಸಂತಸದ ಜೋಳಿಗೆ!! ನಿನ್ನ ನೆನೆಯದೇ ಇನಿತೂಕಳೆಯದು ಈ ಬದುಕು!ನಿನ್ನ ಸವಿನೆನಪಿನ ಕ್ಷಣಗಳೆ..ಈ ಮಗಳಿಗೆ ಹಸಿರ ಬೆಳಕು!! ಮನದಂತರಾಳದ ಬೆಚ್ಚನೆಯ ಕಾವಲಲಿನಿನ್ನದೇ ಒಲವದು ಅಡಗಿದೆ!ಸಂತಸದಿ ಮಿಡಿದ ಕಂಬನಿಯಲೂ..ಅಳಿಯದ ನಿನ್ನ ಭಾವವಿದೆ!! ಪಡೆದ ಸಂತಸದ ಎಣಿಕೆಯಿರದುನಿನ್ನ ಪ್ರೀತಿಯ ಸಿಂಚನದಲಿ!ಹನಿಯೊಂದು ತಾ ಜಿಗಿಯಲುತವಕಿಸಿದಂತೆಮೋಡದಂಚಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” Read Post »

ಕಾವ್ಯಯಾನ

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…”

ಕಾವ್ಯ ಸಂಗಾತಿ ಅಕ್ಷತಾ ಜಗದೀಶ “ಮೌನ ಮಾತಾದಾಗ…” ಅಟ್ಟದ ಮೇಲೆ ಕೂಡಿಟ್ಟಕನಸುಗಳು ಅದೆಷ್ಟೋ,ನನಸಾಗದೆ ನೆನಪುಗಳಾಗಿಕಿಡಕಿಯ ಕಂಬದಬಣ್ಣಗಳಾಗಿ ಉಳಿದಮಾತುಗಳು ಅದೆಷ್ಟೋ….. ಇಂದೇಕೋ ಮನೆ ಮಾತಾಡಿದೆ,ಮನಗಳು ಮೌನವಾದಾಗ…ಗಾಜಿನ ಹಂಚಿನಿಂದಬೆಳಕೊಂದು ಇಣುಕಿ ನೋಡಿದೆ,ಮನೆಯೊಳಗೆ ಮಂದಿಎಷ್ಟೂ ಇಹರೆಂದು…. ಅದೆಷ್ಟೋ ನಗುವಿನ ಸದ್ದುಕೇಳಿರುವ ಕಂಬಗಳುಮತ್ತೆ ಮತ್ತೆ ಎದುರು ನೋಡುತಲಿದೆ,ಅಳುವಿನಲ್ಲೊಂದು ನಗುವುಸಿಗಬಹುದೆಂದು… ಅಜ್ಜನ ಕವಳದ ಚಂಚಿಯೊಂದುಮತ್ತೆ ಹಂಬಲಿಸುತಲಿದೆಜಗುಲಿಯ ಹಾಳು ಹರಟೆಯ ಸದ್ದು…ಅಂಗಳದ ರಂಗವಲ್ಲಿಮತ್ತೆ ಎದುರು ನೋಡುತ್ತಿದೆ,ಪಟ್ಟಣ ನುಂಗಿದ ಕನಸುಗಳುನನಸಾಗಿ ಮತ್ತೆ ಚಿತ್ತಾರ ಮೂಡಿಸುವುದೆಂದು……………….. ಅಕ್ಷತಾ ಜಗದೀಶ.

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…” Read Post »

You cannot copy content of this page

Scroll to Top