ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ಬುದ್ಧನಾಗಲಾರೆ…. ನಾಗರಾಜ ಹರಪನಹಳ್ಳಿ  ಗಾಳಿಯ ಮುಗಿಲಲ್ಲಿ ತೇಲಿದ ಮೋಡಗಳು ಒಲವಿನ ಸರಿಗಮ ಹಾಡಿದವು ದೂರದಲ್ಲಿದ್ದು ನೀನಾಡಿದ ಮಾತುಗಳು ಮನದಲ್ಲಿ ಪ್ರೇಮ ಪಲ್ಲವಿಯಾದವು ಸಿದ್ಧಾರ್ಥನಾಗಿಯೇ ಉಳಿಯುವೆ ಬುದ್ಧನಾಗಲಾರೆ…. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷದ ಬೆನ್ನು ಹತ್ತಲಾರೆ ಬುದ್ಧನಾಗಲಾರೆ ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!! ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡುವುದೆಂದರೇನು? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ ಬೆಳೆದಂತೆ ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ? ಮೋಕ್ಷದ ಬೆನ್ನು ಹತ್ತಲಾರೆ ಪ್ರೀತಿಯ ಹುಡುಕುತ್ತ… ******* …..

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವಿಶ್ವವೇ….ಶರಣು.. ಶಿವಲೀಲಾ ಹುಣಸಗಿ ಯಾವ ಅಮೃತ ಗಳಿಗೆಯೋ ನಾ ಕಾಣೇ.. ಅರಿವಿನ ಕ್ಷೀತಿಜದೊಳು…                                                ಶಶಿಯುದಯಿಸಿದಾ ಕ್ಷಣದೊಳು ಹೊಸದೊಂದು ಹುರುಪು,ನವೋಲ್ಲಾಸದ ಸುಖ ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು.. ಬಯಸಿದ್ದೊಂದು…ಆಗುವುದೊಂದು.. ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು     ಮುಳ್ಳಿನ ಸೊಲ್ಲುಗಳಿಗೊಂದಂದು ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು.. ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ.. ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ.. ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ.. ಯ್ಯಾರು ಕರೆದರೋ…? ಯ್ಯಾರು ಬಂದರೋ.?        ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.? ಎದೆಗಂಟಿದ ಬೆವರಹನಿಗಳು. ‌ಮಾಯವಾಯಿತೇ.. ರೋಧಿಸಲಾರಿಲ್ಲದಾ ಗಳಿಗೆ….ಚಿರನಿದ್ರೆ..ಆವರಿಸಿದೆ..! ಮೋಹಬಂಧನವ ಕಳಚಿದಾಗ ಮೌನ ಮಡುಗಟ್ಟಿದೆ. ಜ್ಞಾನ ದಾಹದ ತೀರಕೆ..ಕರೆಬಂದಿದೆಯೆಂಬಂತೆ.. ಹೋರಟಿತೊಂದು ಆತ್ಮದ ಮೆರವಣಿಗೆ…… ಅಷ್ಟಾಂಗಿಮಾರ್ಗದ ನೆರಳಿನೊಳು.. ಕಷ್ಟಕಾರ್ಪಣ್ಯದ ಹೊಂಗಿರಣದೊಳು.. ಬೋಧಿವೃಕ್ಷದ ದಿವ್ಯಾನುಭದೊಳು ಲೋಕವ ಬೆಳಗಿಸುವ ಸಂಕಲ್ಪದೊಳು.. ಪ್ರಜ್ಞೆಯ ವಾಸ್ತವದಲಿ ಮನಸರಳಿ ಶೀಲ ಚಾರಿತ್ರ್ಯದ ಮೇರು ಪರ್ವತವಾಗಿ.. ಸಮಾಧಾನದ ಸಮಾಧಿ ಸ್ಥಿತಿಯೋಳು ಆಸೆಯೇ ದುಃಖಕ್ಕೆ ಮೂಲವೆಂಬಾಮೃತವ ಸಾರಿ… ಹುಣ್ಣಿಮೆಯ ಚಂದಿರನ ನಿರ್ಲಿಪ್ತ ಭಾವದೊಳು ಜ್ಞಾನ ಜ್ಯೋತಿಯಾಗಿ ಮುಕ್ತಿ ಮಾರ್ಗದ ಬೆಳಕಿನೊಳು ಭವ ಸಂಕಟವ ಕರಗಿಸುವ ಸರಳಮಾಂತ್ರಿಕನೊಳು ವಿಶ್ವವೇ …ಶರಣಾಗಿಹುದು ಧ್ಯಾನದೊಳು….. ******

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಬುದ್ಧನಾಗದೇ ನಿನ್ನ ಗ್ರಹಿಸಲಾರೆ ಡಾ.ಗೋವಿಂದ ಹೆಗಡೆ ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ ದೈವಿಕತೆಯನ್ನು ಹುಡುಕುತ್ತಿಲ್ಲ, ದಿವಿಜರೇ ಆಗಿದ್ದು ಮಾನುಷ ಅನುಭವ -ವನ್ನು ಹಾಯುತ್ತಿದ್ದೇವೆ’ ಎಂಬ ಮತವೂ ಇದೆ ನನಗೆ ಎರಡೂ ಅರಿವಿಗೆ ದಕ್ಕದೆ… ನೀನು ದೈವತ್ವದ ಕುರಿತು ಉಸಿರೆತ್ತಲಿಲ್ಲ ಕೇವಲ ಮನುಜನ ಬಿಡುಗಡೆಯ ಮಾತಾಡಿದೆ ಸದ್ವಿಚಾರ, ಸನ್ನಡತೆ, ಸತ್ಕರ್ಮಗಳ ಮೂಲಕ ಯಾತನೆಯಿಂದ ಬಿಡುಗಡೆಯ ಮಾತನಾಡಿದೆ ನಿನ್ನ ಮಾತನ್ನು ಅರಿಯಬಲ್ಲೆ ಮೌನವನ್ನು ಹೇಗೆ ಗ್ರಹಿಸುವೆ ನಿನ್ನನರಿಯಲು ನಾನು-ನೀನೇ ಆಗಬೇಕೇ ? •• ಗೋವಿಂದ ಹೆಗಡೆ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಅರಿವೇ ಅಷ್ಟಾಂಗ ಶೃತಿ ಮೇಲುಸೀಮೆ ಅಜ್ಞಾನದ ಅಂಧಕಾರದಲ್ಲೊಂದು ಅರಿವಿನ ಅಂಕುರ ಅಮ್ಮನ ಕನಸಿನಲ್ಲೇ ಕರಿಯ ಹೂ ಮಾಲೆಯ ಪುರಸ್ಕಾರ ಅಶಿತ ಮುನಿಯ ಕಂಬನಿಯ ಕುಂಚ ಅಪ್ಪನ ಆಂತರಿಕ ತುಮುಲತೆಯ ಶುದ್ಧ ವೈಶಾಖದ ಪೂರ್ಣಮಿಯಲಿ ಅರಳಿದ ಅರಮನೆಯ ಕಮಲ ಯಶೋಧರೆಯ ಮ್ಲಾಮತೆ ರಾಹುಲನ ಪಿತ ಚೆನ್ನನ ಮಾಲೀಕ ಕಂಥಕನ ಕಾಂತಿಮತಿ ಈ ಸಿದ್ದಾರ್ಥ ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು ಸತ್ಯ ಅನ್ವೇಷಣೆಯ ಪರಿತ್ಯಾಗಿ ಜ್ಞಾನಕ್ಕಾಗಿ ಪರಿತಪಿತ ವಿವೇಕಿ ಜಗಕೆ ಶಾಂತಿ ಬೋಧಿಸಿದ ಯೋಗಿ ಶುದ್ಧ ಚಾರಿತ್ರ್ಯದ ಮೂರ್ತಿ ಮಂದಸ್ಮಿತದ ವದನದ ಕ್ರಾಂತಿ ಧ್ಯಾನ, ಮೌನ, ಜೀವನ ಪ್ರೀತಿಯ ಪ್ರತೀಕ ಅಷ್ಟಾಂಗ ಮಾರ್ಗದ ದರ್ಶಕ ಮತ್ತೊಮ್ಮೆ ಕುದರೆಯೇರಿ ಆಸೆ ,ಅಹಂಕಾರ ಮೀರಿ ಹಿಂದಣ ಮುಂದಣ ಭಾವ ಸೀಳಿ ಎಲ್ಲರ ಮನವ ಗೆಲ್ಲಲು ನೀ ಬಾ ನಮ್ಮ ಬುದ್ಧ *****

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ Read Post »

ಕಾವ್ಯಯಾನ

ಬುದ್ಧ ಪೂಣಿಮಾ ವಿಶೇಷ-ಕವಿತೆ

ಯಶೋಧರೆಯ ಸ್ವಗತ ಶೋಭಾ ನಾಯ್ಕ ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ ನಿನ್ನ ಪ್ರೀತಿಗೆ ಎಂದು ಕಂದನ ಕೈಗಿತ್ತವ ನೀನು ಜೊತೆ ಇರುವೆನೆಂದು ಜೊತೆ ಹೆಜ್ಜೆ ಇಟ್ಟು ನಕ್ಷತ್ರಗಳ ಜಾತ್ರೆಯನ್ನೆಲ್ಲ ಸುತ್ತಿಸಿ‌ ಬಂದವ ನೀನು ಬದುಕ ಸಿಹಿ ಕಡಲಿನಲ್ಲಿ ಈಜಾಡಿಸಿ ದಡ ಸೇರುವುದರೊಳಗೆ ಹೊರಟು ಹೋದೆಯಲ್ಲಾ ? ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ ನನ್ನನ್ನೇ ಜರಿದಂತೆ ಭಾಸವಾಗುತ್ತದೆ! ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ ಯಾರ ಬಳಿ ಹೇಳಲಿ ನನ್ನೊಡಲ ನೋವ? ಮಗನೀಗ‌ ಕಲಿತು ಕಥೆ ಕೇಳುತ್ತಿದ್ದಾನೆ! ಯಾರ ಕಥೆ ಹೇಳಲಿ ರಾತ್ರೋರಾತ್ರಿ ಎದ್ದು‌ಹೋದ ನಿನ್ನದೋ? ನಿದ್ದೆಯಿರದ ನನ್ನದೋ?

ಬುದ್ಧ ಪೂಣಿಮಾ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ ಹಿಂದಿನ ಎಲ್ಲ ಅಟ್ಟಗಳೂ ಗಹಗಹಿಸಿ ನಕ್ಕಂತಾಯಿತು.. ಏಳು ವರ್ಷದ ಹಿಂದೆ ಮನೆ ಸೇರಿದಾಗ ಮೇಲೆ ಏರಿಸಿದ ಯಾವ ವಸ್ತುವನ್ನೂ ತಿರುಗಿ ನೋಡಿರಲಿಲ್ಲ… ಒಂದೆರಡು ಸಲ ದಿಢೀರ್ ನೆಂಟರು ಬರುತ್ತಾರೆಂದಾದಾಗ ಕೈಗೆ ಸಿಕ್ಕಿದ್ದನ್ನು ಎತ್ತಿ ಅಲ್ಲಿಯೇ ತುರುಕಿದ್ದು ಬಿಟ್ಟರೆ.. ಮುಚ್ಚಿದ್ದು ತೆರೆದಿರಲೇ ಇಲ್ಲ. ನಿಮಗನ್ನಿಸಬಹುದು.. ಮತ್ಯಾಕೆ ಇವತ್ತು ಇಷ್ಟು ಆಸಕ್ತಿ..!? ಏನಿಲ್ಲ.. ನನ್ನದೊಂದು ಪುಸ್ತಕ ಕಾಣಿಸುತ್ತಿಲ್ಲ.. ಯಾರಿಗೆ ಕೊಟ್ಟು ಮರೆತು ಕುಳಿತಿದ್ದೇನೊ ನೆನಪಾಗುತ್ತಿಲ್ಲ… ಹುಡುಕಿ ಹುಡುಕಿ.. ಇನ್ನು ಉಳಿದಿರುವುದು ನಾಲ್ಕು ಕೋಣೆಗಳ ನಾಲ್ಕು ಅಟ್ಟಗಳು. ನನ್ನ ಪುಸ್ತಕವೆಂದರೆ.. ಅದು ನಮ್ಮ ರೂಮಿನ ಅಟ್ಟದ ಮೇಲೆಯೇ ಇರುವ ಸಂಭವ ಹೆಚ್ಚು.. ಹೋಗಿ ..ಮಡಚುವ ಏಣಿ ತಂದಿಟ್ಟೆ. ಒಂದು ಕಡೆಯ ಬಾಗಿಲು ತೆರೆದಾಕ್ಷಣ ದೊಪ್ಪೆಂದು ತಲೆಯ ಮೇಲೊಂದು ಮೂಟೆ ಬಿತ್ತು.. ಹಾಗೇ… ನೆಲದ ಮೇಲೆ ಬಿದ್ದಿರಲಿ. ಆಮೇಲೆ ನೋಡಿದರಾಯಿತು … ಉಳಿದ ಸಾಮಾನುಗಳ ಮೇಲೆ ದೃಷ್ಟಿ ಹಾಯಿಸಿದರೆ.. ಬರಿಯ ಹಾಸಿಗೆ ದಿಂಬುಗಳು.. ಅದರಲ್ಲೊಂದು ಮದುವೆಯಾದಾಗ ತವರಿನಿಂದ ಕೊಟ್ಟ ಹಾಸಿಗೆ.. ನೆನಪಿಗಿರಲಿ ಎಂದು ಇಟ್ಟು ಮರೆತು ಹೋಗಿ ವರುಷಗಳಾಗಿವೆ ಏಳು. ತವರು ಮನೆಯ ನೆನಪಿನ ಅಕ್ಕರೆಯಿಂದ ಕೈಯಾಡಿಸಿದೆ ಮೆತ್ತಗೆ. ಹಳೆಯ ಬಟ್ಟೆ ಮುಚ್ಚಿಟ್ಟು ಕುಂಬಾಗಿ ಬಂತೊಂದು ಚೂರು ಕೈಗೆ. ಮನಸ್ಸು ಹೋಯ್ತು ಇಪ್ಪತ್ನಾಲ್ಕು ವರ್ಷಗಳ ಹಿಂದೆ.. ಇನ್ನಿವತ್ತು ಇಲ್ಲ ಹುಡುಕುವ ಕೆಲಸ ಆಗುವ ಸೂಚನೆ ಎಂದು ಅಟ್ಟದ ಬಾಗಿಲು ಮುಚ್ಚಿ ಏಣಿಯಿಂದ ಇಳಿದೆ ಮೆಲ್ಲನೆ. ಕೆಳಗೆ ಬಿದ್ದ ಮೂಟೆಯನ್ನು ಬಿಚ್ಚಿ ನೋಡಿದರೆ.. ಯಪ್ಪಾ…….. ನಾಲ್ಕು ವರ್ಷದಿಂದ ಹುಡುಕಿ ಆಸೆ ಬಿಟ್ಟು ಬಿಟ್ಟಿದ್ದ ನನ್ನದೊಂದು ಇನ್ನೂ ಉಡದ ಸೀರೆ… ನಾಡಿದ್ದು ಸತ್ಯನಾರಾಯಣ ಪೂಜೆಗೆ ಹೋಗುವಾಗ ಉಡಲೊಂದು ಹೊಸ ಸೀರೆಯಾಯ್ತು.. ಒಂದು ಚಿಂತೆ ಕಳೆಯಿತು.. ಒಂದೊಂದಾಗಿ ಸಿಕ್ಕಿದವು.. ಒಂದರ ಹಿಂದೆ ಒಂದು ಕಳೆದು ಹೋಗಿತ್ತು ಎಂದುಕೊಂಡಿದ್ದ ಎಷ್ಟೊಂದು ಅಮೂಲ್ಯ ವಸ್ತುಗಳು ಜತೆಗೆ ಅದರ ಜತೆಗಿನ ನೆನಪುಗಳು… ಅಡಿಯಲ್ಲಿತ್ತು ನನ್ನ ಆ ಪುಸ್ತಕ.. ದಿನ ಭವಿಷ್ಯದ ಅನಿರೀಕ್ಷಿತ ಲಾಭ ಅಂದರೆ ಇದೇ ಏನೊ ಅಂದ ಹಾಗಾಯಿತು ನನಗೀಗ. ಮನೆಗಳಲ್ಲಿ ಸರಂಜಾಮುಗಳು ಜಾಸ್ತಿಯಾಗಲು ಕಾರಣ.. ಆಲಸ್ಯವಲ್ಲ… ಅದರ ಜತೆಗೆ ಜೋಡಿಸಲ್ಪಟ್ಟಿರುವ ಅನೇಕ ಸವಿ ನೆನಪುಗಳು, ನವಿರಾದ ಭಾವನೆಗಳು. ನಮ್ಮನ್ನು ಆ ವಸ್ತುವಿನ ಆ ಕಾಲಕ್ಕೆ ಕೊಂಡೊಯ್ಯುವ ಕಾಲ ಯಂತ್ರಗಳು. ಎಸೆಯಲು ಬಿಡದೆ ನಮ್ಮನ್ನು ಕಟ್ಟಿಹಾಕಿ ತುಂಬಿಕೊಳ್ಳುತ್ತವೆ ಮನೆ ತುಂಬ. ಇನ್ನೂ ಇವೆ ಬಾಕಿ.. ಮೂರು ಅಟ್ಟಗಳು .. ಮುಂದಿನ ಜೀವನಕ್ಕಾದೀತು.. ದಿನ ಕಳೆಯುವ ಸಾಧನ. ನೆನಪುಗಳ ದಾಸ್ತಾನು. ನನಗೀಗ ಅಟ್ಟಗಳೆಂದರೆ ಬಲು ಪ್ರೀತಿ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ‌‌‌ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: ಎಲ್ಲೋ ಗರ್ಭದೊಳಗಿನ ನಗೆ ಕಿವಿಯ ಸುತ್ತ ಕಚಕುಳಿ ಇಟ್ಟಿತು ಊರು ಉರುಳೀತು ನಿಲ್ಲಿಸೋ ನಗೆ ಗೋಗೆರೆದೆ ಮುತ್ತಿನ ಸರಪಳಿ ಎಲ್ಲಿಗೆ ತೊಡಿಸಲಿ? ಮತ್ತೆ ಮತ್ತೆ ನಗು.. ಕರುವಿನ ಕಿವಿಗೆ ಗಾಳಿ ಊದಿದರೆ.,. ಪೋಲಿ ನಗು ತಾವರೆಯ ಕೆಂಪಾಗಿಸಿ ಬೊಗಸೆಯಲ್ಲಿ ತುಂಬಿ ಕವಿತೆ ಎಂದರೇನೇ.. ಜುಂ ಎನಿಸುತ್ತಾನೆ ಕವಿತೆಯ ಎಸಳು ಎಸಳು ತೆರೆದು ಘಮ ನೇವರಿಸುತ್ತಾನೆ ತಾವರೆ ದಂಟು ಬೆನ್ನ ಹುರಿಗೆ ಕಸಿ ಮಾಡುತ್ತಾನೆ ಮುತ್ತು ಮತ್ತು,.. ತೆರೆದುಕೋ ಕವಿತೆ ಗುಂಗಿನ ಗುನುಗು ಬೇಡ, ನನ್ನ ಅವನ ಪ್ರಣಯವನ್ನು ಕವಿತೆಯಲ್ಲಿ ಜಾಲಾಡದಿರಿ ನಾನು ಆ ಕವಿತೆ ಹೆಣೆಯಲಾರೆ ****** .

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ ಎಡಬಿಡದೆ ಎರಚಿರುವೆ ‘ಜಂಗಮ’ ನಿನ್ನ ತುಟಿಗಳಲಿ ಅರೆ ಚಣದ ಮೌನವಾಗಿಸು ನನ್ನ *********

ಕಾವ್ಯಯಾನ Read Post »

You cannot copy content of this page

Scroll to Top