ಬುದ್ಧನ ಮುಗುಳುನಗೆ
ಕಾವ್ಯ ಸಂಗಾತಿ
ಬುದ್ಧನ ಮುಗುಳುನಗೆ
ಪ್ರೊ ರಾಜನಂದಾ ಘಾರ್ಗಿ
ಕಾವ್ಯ ಸಂಗಾತಿ ಗಜಲ್ ಅರುಣಾ ನರೇಂದ್ರ ಏನ ಬರೆಯಲಿ ಜೀಯಾ ನೀನು ಕೊಟ್ಟ ಭಾವಗಳ ಮರಳಿ ಪಡೆದ ಮೇಲೆಎನಿತು ಹಾಡಲಿ ಜೀಯಾ ನಾನು ಮಿಡಿದ ರಾಗಕೆ ಶ್ರುತಿ ಸೇರದ ಮೇಲೆ ಬೆಳಕಿಗಾಗಿ ಬೊಗಸೆ ಒಡ್ಡಿರುವಾಗ ಮಿಂಚಂತೆ ಮಿಂಚಿ ಮಾಯವಾದೆಎಲ್ಲಿ ಹುಡುಕಲಿ ಜೀಯಾ ನನ್ನ ಕಂಗಳಿಗೆ ಕಗ್ಗತ್ತಲೆ ಕವಿದ ಮೇಲೆ ಅಪ್ಪಳಿಸುವ ಅಲೆಯ ಆರ್ಭಟದಲಿ ದಡದ ನಿಟ್ಟುಸಿರು ಕೇಳುವರಾರುಹೇಗೆ ಮೌನ ಮುರಿಯಲಿ ಜೀಯಾ ನೀನು ಮಾತು ತೊರೆದ ಮೇಲೆ ಲೆಕ್ಕಕ್ಕೆ ಸಿಗದ ನೋವುಗಳು ನಿತ್ಯ ಕಾಡುತಿವೆ ತಲೆ ಏರಿ ಕುಳಿತುಯಾವ ಸುಖ ಬಯಸಲಿ ಜೀಯಾ ನೀ ನನ್ನ ಜೊತೆಗೆ ಇರದ ಮೇಲೆ ಅರುಣಾಗೆ ಬಾಳಿನಾಟದ ಪಾತ್ರ ಕೊಟ್ಟು ಸೂತ್ರ ಹಿಡಿದವ ನೀನುಎಂಥ ಪೋಷಾಕು ಧರಿಸಲಿ ಜೀಯಾ ನಾಟಕ ಮುಗಿದ ಮೇಲೆ
ಕಾವ್ಯ ಜುಗಲ್ ಬಂದಿ
ಖಾಲಿತನದ ಗಳಿಗೆಯ ಕವಿತೆಗಳು
ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ
ಖಾಲಿತನದ ಗಳಿಗೆಯ ಕವಿತೆಗಳು
ಕಾವ್ಯ ಸಂಗಾತಿ ಮಳೆ ಬಿಡಿಸಿದ ಚಿತ್ರ ಸೋಮಲಿಂಗ ಬೇಡರ ಆಳೂರ ಮಳೆಗಾಲದ ಮಳೆಹಾಡಿದುಜಲಲಲ ಜಲಧಾರೆಮುಂಗಾರಿನ ಮಳೆ ಮಾರುತಹೊರಟಿವೆ ದಿಬ್ಬಣಕೆ ಹಸುರಿದ್ದೆಡೆ ಹನಿಯುತ್ತಲಿಸಾಗುತ್ತಿವೆ ಮಳೆಮೋಡಗಿರಿಬೆಟ್ಟಕೆ ಮುತ್ತಿಡುತಲಿಕರಗುತ್ತಿವೆ ಬಿಳಿಮೋಡ ಸುರಿಮಳೆಗೆ ಹಿರಿಹೊಳೆಗಳುಹರಿಯುತ್ತಿವೆ ಧುಮ್ಮಿಕ್ಕಿಹಸಿರೊಡಲಲಿ ಮಿನುಗುತ್ತಿವೆಹಲ್ನೊರೆಯ ಬೆಳ್ಳಕ್ಕಿ ಮಳೆಹನಿಯ ಸಿಂಚನವುಬಲು ಹಿತವು ಮೈಮನಕೆಮುತ್ತುವವು ಹನಿಮುತ್ತುಹೊಳೆಹೊಳೆದು ಹೂಬನಕೆ ಕಣ್ಕುಕ್ಕುವ ಸಿರಿನೋಟಮಳೆ ಬಿಡಿಸಿದ ಚಿತ್ರಮಳೆ ನಿಂತ ಘಳಿಗೆಯದುಶೃಂಗಾರದ ಪತ್ರ,!
ಕಾವ್ಯ ಸಂಗಾತಿ
ಆದಿಪ್ರಾಸ ಬಹು ಕಾಫಿಯ ಗಜಲ್
ಮಾಜಾನ್ ಮಸ್ಕಿ
ಆದಿಪ್ರಾಸ ಬಹು ಕಾಫಿಯ ಗಜಲ್ Read Post »
You cannot copy content of this page