ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ

ಕಾವ್ಯ ಸಂಗಾತಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಕಮಲಾ ರಾಜೇಶ್ ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆಪೌರುಷದ ಗಂಡು ಸಹಕರಿಸಿ ನಲಿಯೆನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆಕ್ರೂರಮೃಗ ನೀನಾಗ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭರಾತ್ರಿ ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆನಾನೆದ್ದು ಕುಳಿತು ನೋಡಿದೆನು ಸುತ್ತಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆನಾನಿನಗೆ ಸಖಿಯಾದೆ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭೋದಯ ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲಬೇಲೂರು ಇಲ್ಲ ಬನವಾಸಿ ಇಲ್ಲಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲಕಾಲ ನೂಕಿದಿರಲ್ಲ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ ಸುತನ ಭಂಡಾರವನು ಬರಿದು ಮಾಡುವ ತಂದೆಸುತನ ಏಳ್ಗೆಯನು ಸಹಿಸದ ತಾಯಿಯುಜತನದಲಿ ಸೋದರನ ಹಾರೈಸದಿಹ ತಂಗಿಕ್ಷಿತಿಯೊಳಗೆ ಸತ್ತಂತೆ ಕಮಲಾತ್ಮವೆ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ Read Post »

ಕಾವ್ಯಯಾನ

ನಾನೂ ಹುಲಿಯಾದೆ!-ವಿಜಯಶ್ರೀ ಹಾಲಾಡಿಯವರ ಹುಲಿ ದಿನದ ಕವಿತೆ

ಕಾವ್ಯ ಸಂಗಾತಿ

ಹುಲಿದಿನಕ್ಕೊಂದು ಕವಿತೆ

ವಿಜಯಶ್ರೀ ಹಾಲಾಡಿ

ನಾನೂ ಹುಲಿಯಾದೆ!-ವಿಜಯಶ್ರೀ ಹಾಲಾಡಿಯವರ ಹುಲಿ ದಿನದ ಕವಿತೆ Read Post »

ಕಾವ್ಯಯಾನ, ಗಝಲ್

ವಿನೋದಿ ಗಜಲ್-ಬಾಗೇಪಲ್ಲಿ

ಕಾವ್ಯ ಸಂಗಾತಿ ವಿನೋದಿ ಗಜಲ್ ಬಾಗೇಪಲ್ಲಿ ಭೀಮನ ಅಮವಾಸ್ಯೆ ಇಂದು ಬಯವಾಗುತಿದೆ.ಪತ್ನಿ ವರಲಕ್ಷ್ಮಿ warಲಕ್ಷ್ಮಿ ಆಗವ ಸಂಭವವಿದೆ. ನಿನ್ನೆ ಹುಡುಕಾಡಿದರೆ ಸಿಗದೆ ಹೋಯಿತು ಹೇಗೋಇಂದು ಬೆಳಗಿನಿಂದಲೇ ಏಕೋ ಲಟ್ಟಣಿಗೆ ಉರುಳಾಡುತಿದೆ ನಮ್ಮೂರ ರೈತ ಬರಲಿರುವನಂತೆ ಆಕಸ್ಮಿಕವಾಗಿ ಮನೆಗೆಅದೇಕೋ ಮೈ ಕೊಡವಿ ಹಿಟ್ಟುದೊಣ್ಣೆ ಕುಣಿಯುತಿದೆ. ಚಂದವಿಹುದೆನುತ ಕೊಂಡೆ ಕಟ್ಟಿಗೆಯ ಮೊಗಚೊ ಕೈ ಅಂದುವಿಶ್ವಾಸ ಘಾತಕನಂತೆ ಆಕ್ರಮಣಕೆ ಇಂದು ಸಜ್ಜಾಗುತಿದೆ ಕೃಷ್ಣಾ!ದ್ರೌಪದಿ ಹೆಸರು ರಾಜ್ಯದಿ ವಿಜೃಂಭಿಸಿದೆಹೆಂಡತೀ ನನ್ನ ಪ್ರಾಣ ಹಿಂಡತೀ ನಿಜವಾಗಿಸುತಿದೆ.

ವಿನೋದಿ ಗಜಲ್-ಬಾಗೇಪಲ್ಲಿ Read Post »

ಕಾವ್ಯಯಾನ

ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಆಡದೇ ಉಳಿದ ಮಾತುಗಳು ನಿನ್ನ ನೆನಪಲ್ಲೇಕಳೆದು ಹೋಗುತ್ತೇನೆಸಾಗರವ ಸೇರಿದಹನಿಯಂತೆನಿನ್ನೊಳಗೆಒಂದಾಗಿ ಬಿಡುತ್ತೇನೆ ನನ್ನ ಕಾವ್ಯದಲ್ಲಿಓದುಗರ ಮನಸೂರೆಗೊಂಡುವಿಜೃಂಭಿಸುವಪದಗಳುಅದೇಕೊ ಕಾಣೆಅವನ ಹಿಂದೆ ಹಿಂದೆಅಲೆಯುತ್ತಿವೆನೆಲೆ ಇಲ್ಲವೆಂಬಂತೆ ದಿನ ರಾತ್ರಿ ನಾನುನಿದ್ರಿಸುವುದಿಲ್ಲನಿನ್ನ ಕುರಿತಾಗಿಭಗವಂತನೊಡನೆಮಾತಾಡುತ್ತಿರುತ್ತೇನೆಧ್ಯಾನಸ್ಥ ಸ್ಥಿತಿಯಲ್ಲಿ ಆಡದೆ ಉಳಿದಒಡಲ ಮಾತುಬೋರಾಡಿ ಅಳುತ್ತಿದೆಕಣ್ಣೀರಲ್ಲೇ ಮುಳುಗಿ ಮಿಂದುಹಸಿಯಾಗುವುದರಲ್ಲೇನಾಲಿಗೆ ಖುಷಿ ಕಾಣುತ್ತಿದೆ ಅರುಣಾ ನರೇಂದ್ರ

Read Post »

ಕಾವ್ಯಯಾನ

ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ

ಕಾವ್ಯ ಸಂಗಾತಿ ನಡೀ….!!- ದೇವರಾಜ್ ಹುಣಸಿಕಟ್ಟಿ ಕವಿತೆ ನಡೀ ಇಡೀ ಜೀವನವನ್ನೇಅನಾಮತ್ತ ಎತ್ತಿಪ್ರೀತಿಯಾಗಿಸಿ ಬಿಡುವ…!ಬದುಕಿನ ಪ್ರತಿ ತಿರುವಿಗೆಸಿಗುವ ದುಃಖವನ್ನೇಸಿಂಗರಿಸಿ ಬಿಡುವ….!ದಾರಿಯ ಮುಳ್ಳನ್ನೇ ಎತ್ತಿಹೂವಾಗಿಸಿ ಬಿಡುವ….!! ನಡೀ ಶಿಕ್ಷೆಯೋ ವರವೋಅವನ ಭಿಕ್ಷೆಯೆಂದುನಂಬಿ ನಡೆದು ಬಿಡುವ..! ಭೂಮಿ ಮ್ಯಾಲ ಬಿದ್ದಮಳಿ ಹನಿ ಎಲ್ಲಮುತ್ತಾಗಬೇಕಿಲ್ಲ ಗೆಳತಿನಡೀ ಮೊಳೆಯೋ ಬೀಜಕ್ಕಜೀವ ಜಲವಾಗಿ ಬಿಡುವ…!! ನೆರೆತ ಗಡ್ಡ ಮುಪ್ಪಿನಕುರುಹಲ್ಲ ಈಗೀಗ ಫ್ಯಾಷನ್ಅಂತ ಗೊತ್ತಿಲ್ಲ ಮರಳ…..!!ನಡೀ ಬಿಳಿಯ ಕೂದಲಿಗೆ ಡೈಹಾಕಬೇಕಿಲ್ಲ ಹೃದಯದಿಂದಹರೆಯಕ್ಕೆ ಮರಳಿ ಬಿಡುವ…!! ಕರ್ತಾರನ ಕಮ್ಮಟವಂತೆಬದುಕು…!ಏನಾದರೂ ಒಂದುಮಾಡಲಿ ಬಿಡುನಡೀ ಅವ್ಹಾ ಬಯಸಿದಂತೆಇದ್ದು ಬಿಡುವ….!! ನನ್ನನ್ನೇ ನಾನು ಮರೆತರೆಏನೂ ಮರೆತಿಲ್ಲಎಂದು ಅರಿತು ಬಿಡುವ…!ನಿನ್ನ ಪ್ರೀತಿಯಲ್ಲಿ ದೇವರನ್ನೂಮರೆತರೇ ಮಾತ್ರ ನಡೀ ಅದನ್ನೇಪ್ರೀತಿಯೆಂದು ತಿಳಿದು ಬಿಡುವ…..!

ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ Read Post »

You cannot copy content of this page

Scroll to Top