ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪರಿಸರ

“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ

“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ

ಮಕರಂದ ಹೀರುವ ಪಕ್ಷಿಗಳೆಂದೇ ಗುರುತಿಸಲಾಗುವ ಸೂರಕ್ಕಿಗಳ ವಿಶಿಷ್ಟತೆಯೆಂದರೆ ಅದರ ಉದದ್ದ ಬಾಗಿದ ಕೊಕ್ಕುಗಳು. ತಮ್ಮ ಚೂಪಾದ ಉದ್ದದ ಕೊಕ್ಕಿನ ಸಹಾಯದಿಂದ ಹೂವಿನ ಆಳದಲ್ಲಿರುವ ಮಕರಂದವನ್ನು ಹೀರುವ ಈ ಪುಟ್ಟ ಸೂರಕ್ಕಿಗಳು ಮಕರಂದವನಷ್ಟೇ ಹೀರದೆ ಹೂವಗಳ ಪರಾಗ ಸ್ಪರ್ಶವನ್ನು ಸಹ ಮಾಡಿ ನಿಸರ್ಗದಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತವೆ.

“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ Read Post »

ಇತರೆ, ಪರಿಸರ

ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ -ಗಂಗಾಧರ ಬಿ ಎಲ್ ನಿಟ್ಟೂರ್

ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ -ಗಂಗಾಧರ ಬಿ ಎಲ್ ನಿಟ್ಟೂರ್

ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ -ಗಂಗಾಧರ ಬಿ ಎಲ್ ನಿಟ್ಟೂರ್ Read Post »

ಇತರೆ, ಪರಿಸರ

ಮಣ್ಣು ದಿನಕ್ಕೆ ಒಂದು ಲೇಖನ ನಂದಿನಿ ಹೆದ್ದುರ್ಗ ಅವರ ಲೇಖನ-ಸಣ್ಣ ಸಂಗತಿ

ಮಣ್ಣು ದಿನಕ್ಕೆ ಒಂದು ಲೇಖನ ನಂದಿನಿ ಹೆದ್ದುರ್ಗ ಅವರ ಲೇಖನ-ಸಣ್ಣ ಸಂಗತಿ

ಮಣ್ಣು ದಿನಕ್ಕೆ ಒಂದು ಲೇಖನ ನಂದಿನಿ ಹೆದ್ದುರ್ಗ ಅವರ ಲೇಖನ-ಸಣ್ಣ ಸಂಗತಿ Read Post »

ಇತರೆ, ಪರಿಸರ

ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳು..!-ಸುಮನತನಯ ದೇಸಾಯಿಯವರ ಲೇಖನ

ಪರಿಸರ ಸಂಗಾತಿ

ಸುಮನತನಯ ದೇಸಾಯಿ

ಪರಿಸರ ಸಂರಕ್ಷಣೆಯ ಮಹತ್ವ

ಹಾಗೂ

ಮುನ್ನೆಚ್ಚರಿಕೆಯ ಕ್ರಮಗಳು..!!!

ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳು..!-ಸುಮನತನಯ ದೇಸಾಯಿಯವರ ಲೇಖನ Read Post »

ಇತರೆ, ಪರಿಸರ

ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಭಾವವೇ ಬರಲಾರದು ಹಾಗೆಯೇ ಪ್ರತಿಯೊಬ್ಬ ಮನುಷ್ಯ ತನ್ನ ಇತಿಮಿತಿಯೊಳಗೆ ವಿಶಾಲ ದೃಷ್ಟಿಕೋನದಿಂದ ಜೀವನ  ಸಾಗಿದರೆ ಬದುಕು ಕಷ್ಟವೆನಿಸದು ಎಲ್ಲವೂ ಸರಳವಾಗಿ ಸುಲಲಿತವಾಗಿ ಇರುತ್ತದೆ.       “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ  ಕುದುರೆ ನೀನ್ ಅವನು  ಪೆಳದಂತೆ ಪಯಣಿಗರು ಮದುವೆಗೂ ಮಸಣಕೊ ಹೋಗೆಂದ ಕಡೆ ಹೋಗು ಪದ ಕುಸಿಯೆ ನೆಲವಿಹುದು” ಮಂಕುತಿಮ್ಮ॥ ಎನ್ನುವ ಹಾಗೆ ಈ ಬದುಕಿನ ಪಯಣದಲ್ಲಿ ಎಲ್ಲವೂ ನಾವಂದುಕೊಂಡಂತೆ ಇರಲಾರದು ಕೆಲವೊಮ್ಮೆ ಸನ್ನಿವೇಶಗಳಿಗೆ ನಾವೇ ಹೊಂದಿಕೊಳ್ಳಬೇಕಾಗುತ್ತದೆ ಇದು ಅವಶ್ಯ ಹಾಗೂ ಅನಿವಾರ್ಯವೂ ಕೂಡಾ,ಬರೀ ಮುಂದೇನಾಗುವುದೋ ಎಂಬ ಆತಂಕ ಭಯದಲ್ಲಿ ಜೀವನ ಸಾಗಿಸು ವುದಲ್ಲ ,ಒಳ್ಳೆಯದೇ ಆಗುತ್ತದೆ ಎನ್ನುವ ಸಕಾರಾತ್ಮಕ ಮನೋಭಾವನೆಯಿಂದ ನಮ್ಮ ಕಾರ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. “ಭಾವನೆ ಒಳ್ಳೆಯದಾದರೆ ಭಾಗ್ಯಕ್ಕೆನು ಕಡಿಮೆ” ಎನ್ನುವಂತೆ ನಮ್ಮ ಭಾವನೆಗಳು ಉತ್ತಮವಾಗಿದ್ದಾಗ ಒಳ್ಳೆಯ ದೃಷ್ಟಿಕೋನದಿಂದ ಕೂಡಿದ್ದಾಗ ನಮಗೆ ಸಿಗುವ ಪ್ರತಿಫಲವೂ ಸಹ ಉತ್ತಮವಾಗಿಯೇ ಇರುತ್ತದೆ.ಅನವಶ್ಯಕವಾಗಿ ಇಲ್ಲಸಲ್ಲದ ವಿಚಾರದಲ್ಲಿ ತೊಡಗದೆ ಆದಷ್ಟು ಸಕಾರಾತ್ಮಕವಾಗಿ ವಿಶಾಲ ಮನೋಭಾವನೆಯನ್ನು ಹೊಂದುತ್ತಾ ಪ್ರತಿಯೊಂದು ಸನ್ನಿವೇಶ ವಸ್ತು ವಿಷಯ ವ್ಯಕ್ತಿ ಎಲ್ಲದರಲ್ಲೂ ಒಳ್ಳೆಯದನ್ನು ಮಾತ್ರ ನಾವು ಕಾಣುತ್ತಾ ಸಾಗಿದರೆ ಬಹುಶಃ ನಮ್ಮ ಬದುಕೇ ಒಂದು ಸುಂದರವಾದ ತಾಣವಾಗುತ್ತದೆ.             ಒಂದು ಗುಲಾಬಿ ಹೂವನ್ನು ನೋಡಿದಾಗ ಒಬ್ಬ ವ್ಯಕ್ತಿ ಅದರ ಸೌಂದರ್ಯವನ್ನು ಆಸ್ವಾದಿಸುತ್ತಾನೆ ಇದು ವಿಶಾಲ ದೃಷ್ಟಿಕೋನ, ಬದಲಾಗಿ ಅದೇ ಹೂವನ್ನು ನೋಡಿದ ಮತ್ತೊಬ್ಬ ವ್ಯಕ್ತಿ ಆ ಗುಲಾಬಿ ಹೂವಿನ ಕೆಳಗಿರುವ ಮುಳ್ಳುಗಳನ್ನು ಮಾತ್ರ ಗಮನಿಸುತ್ತಾನೆ ಇದು ಸಂಕುಚಿತ ದೃಷ್ಟಿಕೋನ, ಬರೀ ಮುಳ್ಳಿನ ತಕರಾರುಗಳನ್ನು ಹೇಳುವ ವ್ಯಕ್ತಿಗೆ ಗುಲಾಬಿ ಹೂವಿನ ಸೌಂದರ್ಯದ ಅರಿವಾಗದು ಇಂತಹ ವ್ಯಕ್ತಿ ಗುಲಾಬಿ ಹೂವೇ ಮುಳ್ಳಿನಿಂದ ಕೂಡಿದೆ ಎನ್ನುತ್ತಾನೆ ಆದರೆ ಹೂವಿನ ಸೌಂದರ್ಯವನ್ನು ಮಾತ್ರ ಗಮನಿಸಿದ ವ್ಯಕ್ತಿ ಅದರ ಸುಂದರತೆಯನ್ನು ಸವಿಯುತ್ತಾನೆ.ಹೀಗೆಯೇ ನಮ್ಮ ಬದುಕು ಎಷ್ಟೋ ಸಾರಿ ಒಳ್ಳೆಯದನ್ನು ಬಿಟ್ಟು ಬರೀ ಕೆಟ್ಟದ್ದರ ಕಡೆಗೆ ಮಾತ್ರ ದೃಷ್ಟಿಕೋನ ವಾಲುತ್ತದೆ ಆಗ ಪ್ರಪಂಚದಲ್ಲಿ ಯಾವುದೂ ನಮಗೆ ಸರಿಯಾಗಿ ಕಾಣುವುದಿಲ್ಲ ಬದಲಾಗಿ ಎಷ್ಟೋ ನಕಾರಾತ್ಮಕ ಅಂಶಗಳಿದ್ದರೂ ಕೂಡ ಸಕಾರಾತ್ಮಕವಾಗಿ ರುವುದನ್ನು ಮಾತ್ರ ನಾವು ಗಮನಿಸುತ್ತಾ ಸಾಗಿದರೆ ನಮ್ಮಲ್ಲಿರುವ ದೃಷ್ಟಿಕೋನಗಳು ವಿಶಾಲಗೊಳುತಾ ಸಾಗುತ್ತವೆ ಆಗ ಈ ಬದುಕೇ ಒಂದು ಅದ್ಭುತ ಹಾಗೂ ವಿಶಿಷ್ಟ ಎನಿಸುತ್ತದೆ. ನಮ್ಮ ವಿಶಾಲ ದೃಷ್ಟಿಕೋನಗಳು  ಮಾತ್ರ ನಮ್ಮ ಮನೋಭಾವನೆಗಳನ್ನು ಬಲಗೊಳಿಸ ಬಲ್ಲವು.        “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು

ಜೀವನ Read Post »

ಇತರೆ, ಪರಿಸರ

ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ                                                    ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ ವಿಧ ವಿಧ ಗಿಡಗಳಿಗೂ ಜಾಗ ಕಡ್ಡಾಯವಾಗಿರುತ್ತಿತ್ತು. ಕೆಲವರಂತೂ ಊರಾಚೆಗೆ ತೋಟದಲ್ಲಿ ಮನೆ ಕಟ್ಟಿಕೊಂಡು ಪ್ರಕೃತಿ ಮಾತೆಯ ಮಡಿಲಲ್ಲಿ ಆನಂದಿಸುವ ಪರಿಯೂ ಕಂಡು ಬರುತ್ತಿತ್ತು. ಇತ್ತೀಚಿಗೆ  ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ನಾವು ಉನ್ಮಾದಿತರಾಗಿದ್ದೇವೆ ಎಂದರೆ ನಮ್ಮ ಕಾಲ ಮೇಲೆ ನಾವು ಕಲ್ಲು ಹಾಕಿಕೊಳ್ಳುತ್ತಿರುವುದು ನಮಗೆ ತಿಳಿಯುತ್ತಿಲ್ಲ. ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ನಮ್ಮ ಬುಡಕ್ಕೇ ಪೆಟ್ಟು ಎನ್ನುವುದು ಬುದ್ಧಿಗೆ ತಿಳಿದಿದ್ದರೂ ಶೋಕಿ ಹಿಂದೆ ಬೆನ್ನು ಹತ್ತಿ ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿಕೊಂಡು ಮರಗಳ ರಕ್ಷಣೆಯನ್ನು ಕೇವಲ ಉದ್ದುದ್ದ ಭಾಷಣಗಳನ್ನು ಮಾಡಿ ಸಾಲು ಮರದ ತಿಮ್ಮಕ್ಕನಂಥ ಮರಗಳ ಪ್ರೇಮಿ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆವೆ. ಮರಗಳ ರಕ್ಷಿಸುವ ಯೋಜನೆಗಳೆಲ್ಲ ಕಾಗದದ ಕುದುರೆಗಳಾಗಿವೆ. . ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಣ ಹೊಂದಿದ ಮರಗಳ ಸಂಖೈಯಂತೂ ಲೆಕ್ಕಕ್ಕಿಲ್ಲ. ದಿನವೂ ಯಾವುದೋ ಒಂದು ಹೆಸರಿಗೆ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ನಮ್ಮ ದುರಾಸೆಗೆ ಬಲಿಯಾಗುತ್ತಿರುವ ಮರಗಳು ನಮ್ಮ ಅವಿವೇಕತನಕ್ಕೆ ಮರ ಮರ ಮರಗುತ್ತಿವೆ    ಧರ್ಮೋ ರಕ್ಷತಿ ರಕ್ಷತಃ ಎನ್ನುವ ಮಾತಿನಂತೆ ವೃಕ್ಷೊ ರಕ್ಷತಿ ರಕ್ಷತಃ ಮಾತು ದಿಟವೇ ಎನ್ನುವುದು ಅರಿತಿದ್ದರೂ ನಮ್ಮ ನಡೆ ಮಾತ್ರ ಪೈಶಾಚಿಕದಂತೆನೆಸುತ್ತಿದೆ. ಮರಗಳನ್ನೆಲ್ಲ ನೆಲಕ್ಕುರುಳಿಸಿ ಆಕಾಶ ಮುಟ್ಟುವ ಮಹಲು ಮಾಲ್ಗಳನ್ನು ಕಟ್ಟಲೇಬೇಕೆಂಬ ಪಣ ತೊಟ್ಟವರಂತೆ ಹಳ್ಳಿ ಪಟ್ಟಣ ನಗರಗಳೆಂಬ ಭೇದ  ಭಾವ ತೋರದೆ ತಾತ ಮುತ್ತಾತಂದಿರು ವಷರ್ಾನುಗಟ್ಟಲೇ ನೀರುಣಿಸಿ ಬೆಳೆಸಿದ ಮರಗಳನ್ನು ಕ್ಷಣಾರ್ಧದಲ್ಲಿ ಕೊಡಲಿ ಹಿಡಿದು ನೆಲಸಮಗೊಳಿಸುತ್ತಿದ್ದೇವೆ. ಇದು ಊರುಗಳಲ್ಲಿಯ ಕತೆಯಾದರೆ, ಕಾಡಿನತ್ತ ಧಾವಿಸಿ  ಕಾಂಚಾಣ ಎಣಿಸಲು ಹವಣಿಸಿ, ಕಾಡಿನ ಪ್ರಾಣಿಗಳನ್ನು ನಾಡಿಗೆ ಕರೆತರುತ್ತಿದ್ದೇವೆ.  ಇದೇ ಸ್ಥಿತಿ ಮುಂದುವರೆದರೆ ಭವಿಷ್ಯ ಘನಘೋರ. ನಮ್ಮ ಜೀವಕ್ಕೆ  ಕುತ್ತು ಖಚಿತ.ಎಂಬುದು ಪರಿಸರ ವಾದಿಗಳಿಗೆ  ಪ್ರಕೃತಿ ಪ್ರೀಯರಿಗೆ ಬಿಡದೇ ಕಾಡುತ್ತಿರುವ ಭಯ.  ಸೃಷ್ಟಿ ಹುಟ್ಟಿದ ಆರಂಭದಲ್ಲಿ ಮೂರು ಭಾಗದಷ್ಟು ನೀರು ಒಂದು ಭಾಗದಷ್ಟೇ ಭೂಮಿ ಇತ್ತು. ಭೂಮಿಯ ಮೇಲೆಲ್ಲ ಹಸಿರು ಕಂಗೊಳಿಸುತ್ತಿತ್ತು. ಆಹಾರ ಧಾನ್ಯಗಳ ಉತ್ಪಾದನೆಗಾಗಿ ಜಮೀನಿನ ಅವಶ್ಯಕತೆಯಿದೆ ಎಂದು   ಮಾನವ ಕಾಡನ್ನು ನಾಶ ಪಡಿಸಿದ. ದೈವತ್ವದ ಸ್ಥಾನ ನೀಡಿ ಪೂಜಿಸುತ್ತಿದ್ದ ಮರಗಳನ್ನು ಬರುಬರುತ್ತ ಸಂಚಾರಿ ಹೆಸರಿನಲ್ಲಿ ಸಾವಿರಾರು ಮರಗಳ ತಲೆಗಳನ್ನು ತುಂಡರಿಸಿದ. ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಪಡೆದ ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ಸುಮಾರು 500ಕ್ಕೂ ಹೆಚ್ಚು ಪಕ್ಷಿ ಸಂಕುಲಗಳ ಕ್ರಿಮಿ ಕೀಟಗಳ ನಾಶಕ್ಕೂ  ಮುನ್ನುಡಿ ಬರೆಯತೊಡಗಿದ. ಈ ವಿನಾಶವನ್ನು ಕಂಡ ಪ್ರಾಜ್ಞರು, ಆಯುವರ್ೇದದ ಚಿಕಿತ್ಸೆ ತಜ್ಞರು ಸಸಿಗಳ ನೆಡುವಿಕೆಗೆ ಪ್ರೇರೇಪಿಸಿದರು.. ಬೇವು ಆಲದ ಮರದಂಥ ಅತ್ಯುಪಯುಕ್ತ  ಮರಗಳ ಮಹತ್ವವನ್ನು ಸಾರಿದರು.ಅವುಗಳ ಗಾಳಿಯನ್ನು ಶ್ವಾಸಿಸಿದರೆ ಶ್ವಾಸಕೋಶಗಳಿಗೆ ಅತ್ಯುತ್ತಮವೆಂದು  ಜನಮಾನಸದಲ್ಲಿ ಬಿತ್ತಿದರು. ಒತ್ತಡದ  ಬದುಕಿನ ಫಲಶೃತಿಯಾಗಿ ರಕ್ತದೊತ್ತಡ ಮಧುಮೇಹದಂಥ ಜೀವನ ಪೂತರ್ಿ ಜೀವ ತಿನ್ನುವ ಕಾಯಿಲೆಗಳು ವಯೋ ಭೇದವಿಲ್ಲದೇ ಬೆನ್ನು ಬಿದ್ದಿವೆ. ದಿನವಿಡಿ ಕಂಪ್ಯೂಟರ್ ಇಂಟರ್ಪಪಪಪಪಪನೆಟ್ನಲ್ಲಿ ಮುಳುಗಿದ ಕಣ್ಣುಗಳಿಗೆ ದಿನದ ಕೆಲ ಹೊತ್ತು ಹಸಿರು ಗಿಡಗಳೆಡೆಗೆ  ದೃಷ್ಟಿಯಿಡುವಂತೆ, ಹಸಿರನ ಮಧ್ಯದಲ್ಲಿ ವಾಯುವಿಹಾರ ನಡೆಸುವಂತೆ ವೈದ್ಯರು ಗ್ರೀನ್ ಥೆರಪಿ ಸಲಹೆ ನೀಡುತ್ತಿದ್ದಾರೆ. ಆದರೆ ಹಸಿರು ಗಿಡ ಮರಗಳೆಲ್ಲಿ ಸಿಗುತ್ತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಾಡುಗಳು ಸಣ್ನ ಪುಟ್ಟ ಪಾಕರ್್ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಸಮೀಕ್ಷೆಯ ಅಧ್ಯಯನದ ಪ್ರಕಾರ ಹಸಿರು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಇತ್ತೀಚಿಗೆ ಹೆಚ್ಚುತ್ತಿರುವ ಹೃದ್ರೋಗದ ಸಾವುಗಳನ್ನು ಕಡಿಮೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ವರದಿ ಹೊರ ಬಿದ್ದಿದೆ. ಮನೆಯ ಮುಂದೆ ಹಿಂದೆ ಹಸಿರಿಗೆಂದೇ ಮೀಸಿಲಿಟ್ಟಿದ್ದ ಜಾಗ ಈಗೀಗ ಫೋರ್ ವ್ಹೀಲರ್ಸ್ ಬೈಕ್ ಪಾಕರ್ಿಂಗ್ನ ಪಾಲಾಗುತ್ತಿದೆ. ಮರಗಳಿಗಾಗಿ ಹುಡುಕಿಕೊಂಡು ಮೈಲುಗಟ್ಟಲೇ ನಡೆಯುವ ಪ್ರಸಂಗ ತಲೆದೋರಿದೆ.  ಮರ ಗಿಡಗಳು ಮನೆ ಮುಂದೆ ಇದ್ದರೆ ಕೋಟಿ ಕೋಟಿ ಅದಾಯ ಅದ್ಹೇಗೆ ಎಂದು ಹುಬ್ಬೇರಿಸುತ್ತೀರೇನು! ಮರವೊಂದು ತನ್ನ ಜೀವಿತಾವಧಿಯಲ್ಲಿ ಹೂವು ಕಾಯಿ ಹಣ್ಣು ಉರುವಲು ರೂಪದಲ್ಲಿ ಆದಾಯ ತರುವುದಲ್ಲದೇ ತಜ್ಞರ ಪ್ರಕಾರ ಶ್ವಾಸ ಸಂಬಂಧಿತ ಕ್ಯಾನ್ಸರ್ನಿಂದ ಬಳಲುವ 10 ಲಕ್ಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಜೀವ ದಾನ ನೀಡುತ್ತವೆ. ಅವು ನೀಡುವ  ಪ್ರಾಣ ವಾಯುವಿಗೆ ಬೆಲೆ ಕಟ್ಟಲಾದೀತೆ? ವೈಭವೀಕರಣದ ಜೀವನದ ಭ್ರಾಂತಿಯಲ್ಲಿ  ಸ್ವಚ್ಛ ಗಾಳಿಗೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ ಎಲ್ಲೆಲ್ಲೂ ಕಾಖರ್ಾನೆಯ ವಿಷಾನೀಲ ವಾಹನದ ದಟ್ಟನೆಯ ಧೂಳು ನಮ್ಮ ಶ್ವಾಸದ ಗೂಡಿಗೆ ಕೈ ಹಾಕುತ್ತಿದೆ. ಮಳೆಯ ಆರ್ಭಟವನ್ನು ಸಹಿಸಿಕೊಂಡು ಮಣ್ಣಿನ ಸವಕಳೀಯನ್ನು ತಡೆಯುತ್ತಿದ್ದ ಮರಗಳು ಇದೀಗ  ನಮ್ಮ ಆರ್ಭಟಕ್ಕೆ  ತಾವೇ  ಕೊನೆಯುಸಿರೆಳೆಯುತ್ತಿವೆ. “       ಅತಿಯಾದ ಕಾಡಿನ ನಾಶ ಅತಿವೃಷ್ಟಿ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ  ತುತ್ತಿನ ಚೀಲ ತುಂಬಿಸುವ ಅನ್ನದಾತನ ತುತ್ತಿಗೆ ತತ್ವಾರ ತಂದೊಡ್ಡಿ ಆತನನ್ನು ಆತನ ಕುಟುಂಬವನ್ನೂ ಬಲಿತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ.   ನಮ್ಮ ಸ್ವಾರ್ಥಕ್ಕೆ ಭೂ ಮಂಡಲವೆಲ್ಲ ಧಗ ಧಗ ಉರಿಯುವ ಕೆಂಡದುಂಡೆಯಂತೆ ಭಾಸವಾಗುತ್ತಿದೆ. ಕಾಡುಗಳ ಕಣ್ಮರೆಯಿಂದ. ಜೀವ ವೈವಿಧ್ಯತೆಯ ಅಮಾಯಕ ಮೂಕ ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಅವಸಾನವಷ್ಟೇ ಅಲ್ಲ ಪ್ರಕೃತಿಯ ಸಮತೋಲನವನ್ನೇ ಅಲ್ಲಾಡಿಸುತ್ತಿದೆ. ಅದಲ್ಲದೇ ಮಳೆಯ ಪ್ರಮಾಣವೂ ತುಂಬಾ ಕುಸಿಯುತ್ತಿದೆ. ರೆಫ್ರಿಜರೇಟರ್ನಂತಹ ವಸ್ತುಗಳ ಬಳಕೆಯಿಂದ ಭೂಮಿಗೆ ರಕ್ಷಣಾ ಕವಚದಂತಿರುವ ಓಜೋನ್ ಪರದೆಗೂ ಅಲ್ಲಲ್ಲಿ ರಂಧ್ರಗಳು ಬಿದ್ದು ಅದಕ್ಕೂ ಜೀವ ಭಯ ಕಾಡುತ್ತಿದೆ. ಇದರ ಪರಿಣಾಮ ಜಾಗತಿಕ ತಾಪಮಾನ ಏರಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪಕ್ಕೆ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಪ್ರವಾಹಗಳ ಭೀತಿಯೂ ಹೆಚ್ಚುತ್ತಿದೆ. ಜೀವ ರಕ್ಷಕ ಆಮ್ಲಜನಕ ನೀಡುವ ಗಿಡ ಮರಗಳ ರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಮರಗಳ ಧರೆಗುರುಳಿಸುವುದು ಅತಿ ಸುಲಭ. ಮರಗಳನು ಧರೆಯ ಮೇಲೆ ಬೆಳೆಸುವುದು ಕಷ್ಟದ ಕೆಲಸ. ಅಶ್ವತ್ಥಮೇಕಂ ಪಿಚುಮಂದುಮೇಕಮ್ ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್ ಧಮರ್ಾರ್ಥಮಾರೋಪ್ಯ ಸ ಯಾತಿ ನಾಕಂ ಒಂದು ಅರಳಿ ಮರ ಒಂದು ಬೇವಿನ ಮರ ಒಂದು ಆಲದ ಮರ ಹತ್ತು ಹುಣಸಿ ಮರ ಸಾಕಷ್ಟು ಬೇಲ ಬಿಲ್ವ ನೆಲ್ಲಿ ಮತ್ತು ಮಾವಿನ ಮರಗಳನ್ನು ಧಮರ್ಾರ್ಥಕ್ಕಾಗಿ ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುವ ಸಂಸ್ಕೃತ ಶ್ಲೋಕ ಧರೆಯನ್ನೇ ಸ್ವರ್ಗವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮರಗಳು ಆಮ್ಲಜನಕ ತಯಾರಿಸುವ ಕಾಖರ್ಾನೆಗಳು ಒಂದು ಬಲಿತ ಮರವು ಪ್ರತಿ ವರ್ಷ 25-30 ಕಿಲೊ ಇಂಗಾಲದ ಡೈ ಆಕ್ಸೈಡ್ ತೆಗೆದು ಹಾಕಬಲ್ಲದು. ಜೀವ ರಕ್ಷಕ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ  ಕಡಿದರೆ ಖಚಿತ ನಮ್ಮದೇ ಮಾರಣ ಹೋಮ.  ಇನ್ನಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಹೊಸ ಹೆಜ್ಜೆ ಇಡೋಣ.                                                   *********

ಪರಿಸರ Read Post »

ಇತರೆ, ಪರಿಸರ

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು. ಗೃಹಿಣಿ ಎಂದೆ.. ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು… ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ? ಅವರ ಪ್ರಶ್ನೆಗಳು ವಿಚಿತ್ರವೆನಿಸಿತು. “ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…” ಅವತ್ತು ಮನೆಯಲ್ಲಿ ಜೋರು ಜಗಳ. ಅವಳ ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ. ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ.. ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ. ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು.. ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ… ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ‌ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವ‌ನಿಗೆ ಅಚ್ಚರಿ.! ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ. ಅಗತ್ಯವಿದೆಯೇ ಅದೆಲ್ಲಾ? ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್. ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ.. ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ.. ಒಂದು ಕೊಂಡರೆ ಮತ್ತೊಂದೇನೋ ಉಚಿತ… ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ.. ಚೈನಾ ಮೇಡ್ ಬಹಳ ಚೀಪು. ಇದೊಂದು ಇರಲಿ ಅಂತ ಅನಿಸುವುದೂ ಸಹಜ. ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು. ಮತ್ತೆ ಕಸ.. ಮನೆಯಿಂದ ಹೊರಗೆ ಕಾಲಿಟ್ಟರೆ ಕಸ.. ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ.. ಕಸ ಕಸ ಕಸ.. ಬದುಕೇ ಕಸಮಯವಾದ ಕಾಲ ಇದು. …. ಈ‌ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು.. ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು.. ಆದರೆ.. ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ. ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ.. ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ. ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ. ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು.. ಹರಿವ ನೀರಿಗೆ ಬಿಡವುದು ಥರವಲ್ಲ. ಮತ್ತೇನು ಮಾಡಬಹುದು..? … ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ  ಪರ್ವಕಾಲ ಇದು ಎನಿಸುತ್ತದೆ. ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ. ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು.. “ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ” ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ. … ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.? ದೂರದ ವೂಹಾನ್ ನಲ್ಲಿ‌ ಬಂದ ‌ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ .. ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ. ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ  ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ‌ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ.. ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ.. ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ.. ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ.. ನಾಲ್ಕು ಮಾತಾಡಿ, ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..? ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..? ಒಮ್ಮೆ ಹಿಂದಿರುಗಿ ನೋಡಿದರೆ ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು. ಇವೆಲ್ಲವೂ ‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’  ಎನ್ನುವ ನಾಗರಿಕರ ಲೋಕ ಈಗ ನಮ್ಮದು. … ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ  ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು  ಹೇಳುತ್ತಲೇ ಇರುತ್ತವೆ.. ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ‌ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ. ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…? ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..? ಒಂದು ನದಿ ಅಥವಾ ಹೊಳೆಯ  ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ‌ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ  ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..? … ಪರಿಸರದಷ್ಟು ನಿಗೂಢ, ನಿಷ್ಠುರ  ವಿಷಯ ಬೇರೊಂದಿಲ್ಲ. ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ.. ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು ಕಮ್ಮಿಯಾಗುವುದಿಲ್ಲ.. ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ  ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ ತಪ್ಪಿನಿಂದ ನಾವು ಕಲಿಯುವುದಿಲ್ಲ… ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು… ಅಗಾಧ‌ನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು.. ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!! ಹಣವೇ..?ಹಸಿವೇ…?ಗೆಲ್ಲುವ ಬಗೆಯೇ? ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ. ಹಾವು ಇಲಿಯನ್ನು,ಇಲಿ ಕಪ್ಪೆಯನ್ನು ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ ‌. its not by default.. It is by design.. .. ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.? ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ‌ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು… ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.? _ ನಂದಿನಿ ಹೆದ್ದುರ್ಗ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. Read Post »

You cannot copy content of this page

Scroll to Top