ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ದುಬಾರಿಯಾಗಲಿರುವ ದಿನಗಳು ಅರುಣ್ ಕೊಪ್ಪ *ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ* ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ  ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ? ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ. ನಾವಿಷ್ಟು ದಿನ ಮಾಡಿದ ವ್ರತ ಕೆಡಲೂಬಹುದು. (ಸಾಮಾಜಿಕ ಅಂತರ ಕಾಪಾಡುವ ಹಾಗೂ ಆರೋಗ್ಯ ಕೋವಿಡ್ ಕ್ರಮಗಳು) ಕ್ಷಣಕ್ಕೂ ಮುಟ್ಟಿದ್ದೆಲ್ಲಾ ವಿಷವೆಂಬಂತೆ ಇಂದು ಬರಬರುತ್ತಾ ಕಾಳಜಿ ಕ್ಷೀಣಿಸುತ್ತಿದೆ. ಇದು ಯಾರ ಕಾಳಜಿ ಅಂತೀರಾ ನಮ್ಮದೇ.. ಮತ್ತೆ ಯಥಾ ಸ್ಥಿತಿಗೆ ಬರುವಾಗ ನಮ್ಮ ಸಾಮಾಜಿಕ ಅಂತರದ ಬದುಕು, ಕೆಲವಷ್ಟು ತ್ಯಾಗಗಳಿಗೆ, ಪಾಲನೆಗೆ ಬದ್ದವಾಗಿಯೇ ಇರಬೇಕು ಎನ್ನೋದನ್ನ ನಾವು ಮರೆಯುವಂತಿಲ್ಲ. ಮುಂದೇನು ಜನಸಾಮಾನ್ಯರ ಸ್ಥಿತಿ ——————————————— ಇದೊಂದು ದೊಡ್ಡ ಸಮೂಹ ಇಲ್ಲಿ ದೊಡ್ದವರಿಂದ ಹಿಡಿದು ಕಾರ್ಮಿಕ ಕುಳಿಗಾರರೊರೆಗೆ ಎಲ್ಲರೂ ಜನ ಸಾಮಾನ್ಯರೇ… ಅಂದ ಮೇಲೆ ಇವರ ಅವಲಂಬನೆಯ ಕ್ಷೇತ್ರಗಳ ,ಕಾರ್ಯಗಳ ಪಾಡಿನ ಮೇಲೆ ಎಲ್ಲವೂ ನಿರ್ಧರಿತ. ಕುಟುಂಭ, ಬೇಡಿಕೆಗಳು, ಸಾಲಗಳು,ಸವಲತ್ತುಗಳಿಗೆ ಹುಟ್ಟಿನಿಂದಲೇ ಒಗ್ಗಿ ಕೊಂಡ ಜನಸಾಮಾನ್ಯರ ಜೀವನ ಶೈಲಿಗೆ ಇನ್ನೂ ಕೂಡ ಯಾವಾಗಲೂ ಈ ರೀತಿಯ ಅನುಭವಗಳು ಆಗಲೇ ಇಲ್ಲ. ಇದೊಂದು ಹೊಸ ದುರ್ ಬೆಳವಣಿಗೆ. ಅನಿರೀಕ್ಷಿತ ವಿಪತ್ತು ಬಂದೊದಗಿದೆ. ಬಹುಪಾಲು ಜನಜೀವನ ದೂರದರ್ಶಿತ್ವದ ವಿಮರ್ಶೆಯೊಂದಿಗೆ ನಡೆಯುತ್ತಿದ್ದ ಈ ಆಧುನಿಕ ಜನ ಜೀವನ ಇಂದು ಸೋತು ಸುಣ್ಣಗಿದೆ. ವನ್ಯಮೃಗಗಳ ಹಾಗೆ ನಡೆದದ್ದೇ ದಾರಿಯಾಗಿ ಗೋಚರಿಸುತ್ತಿದೆ. ——————————————————- ಹೌದು ಅನೇಕ ಅಸಂಘಟಿತ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಎಷ್ಟೋ ದಿನಗಳ ಹಿಂದೆ ಮನೆ, ಮಠ ಬಿಟ್ಟು ಪದವಿ ಹಾಗೂ ಹೆಚ್ಚಿನ ಓದಿಲ್ಲದೆ ಬೇಕಾದದ್ದನ್ನು ಸಾಧಿಸಿ ಸ್ವಾವಲಂಬಿಗಳಾದವರು ಊರತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಮುಂದೇನು…? ಎಸ್, ಎಸ್, ಎಲ್, ಸಿ, ಮೊದಲೇ ಮುಂದೇನು? ನಂತರ ಮುಂದೇನು ಅನ್ನೋ ಲೇಖನಗಳನ್ನು ಈ ಮೊದಲೆಲ ಓದುತ್ತಾ ಇದ್ವಿ… ಈಗದೇ ವಿರುದ್ಧವಾಗಿದೆ. ಭವಿಶ್ಯದ ಕನಸುಗಳು ಕಮರಿಹೋಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಮುಂದೇನು? ——————- ಸರ್ಕಾರದ ಚಿಂತನೆಗಳಾದ ಅಂತರ್ಜಾಲ ಕಲಿಕಾ ವ್ಯವಸ್ಥೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಿ ,ಪರೀಕ್ಷೆಗೆ ಪೂರಕ ಅಭ್ಯಾಸದ ಮರು ಅವಲೋಕನ ಒಂದೆಡೆಯಾದರೆ ಮುಂದಿನ ಶೈಕ್ಷಣಿಕ ವರ್ಷ ಅಂದರೆ ಇದೇ ಜೂನ್ ಒಂದರ ಆರಂಭದ ಪ್ರಾಥಮಿಕ ,ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಹಂತಗಳ ಆರಂಭ ಅಥವಾ ಮುಂದುಡಿಕೆಯ ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆದರೂ ಈ ಎಲ್ಲ ಮೇಲಿನ ಸನಸ್ಯಗಳಿಗೆ, ಅಂತ್ಯ ಹಾಗೂ ಸ್ಪಷ್ಟ ಉತ್ತರ ಸಿಗೋದು ಕಷ್ಟವೇ ಆಗಿದೆ. ತೀರ ಕಳವಳ ಕಕ್ಕಾ -ಬಿಕ್ಕಿಯಲ್ಲಿ ಸಾಗಿತ್ತಿರುವ ಈ ಪ್ರಮುಖ ಸಾಮಾಜಿಕ ಹಂತಗಳಾದ, ವ್ಯಾಪಾರ, ವಹಿವಾಟು, ಶಿಕ್ಷಣ ,ಉದ್ಯೋಗಗಳ ಪುನಶ್ಚೇತನ ಹಾಗೂ ಮರು ಹುಟ್ಟು ಆಗಬೇಕಿದೆ. ದೇಶದಲ್ಲಿ ಜಿ ಡಿ ಪಿ ಯ ಕುಸಿತ ಹಾಗೂ ನಿರುದ್ಯೋಗದ ಮಟ್ಟ ಹಾಕುವ ಪ್ರಕ್ರೀಯೆ ಈಗ ಹೇಗೆ ಕೋವಿಡ್ ವಿರುದ್ಧ ನಡೆಯುವ ಸರ್ಕಾರದ ವೇಗದ ಕ್ರಮಗಳ ಮಾಧರಿಯಲ್ಲೇ ಆಗಬೇಕಿದೆ. ಕೃಷಿ ಚಟುವಟಿಕೆಯೊಂದಿಗೆ ಕರೊನಾ ಕಾಲದ ರೈತನ ಬದುಕು ಹೌದು ದೇಶದ ಬೆನ್ನೆಲುಬು ಅನ್ನ ನೀಡುವ ಅನ್ನದಾತ ರೈತ ಈ ಮುಂಗಾರಲ್ಲಿ ತನ್ನ ಕೆಲಸದ ಕೈ ಚುರುಕುತನ ಪ್ರಾರಂಭಿಸುತ್ತಾನೆ. ಹದ ಮಳೆ, ಸಮರ್ಪಕ ಬೆಳೆಯ ಇಳುವರಿಗಾಗಿ ಗೊಬ್ಬರ ಹತ್ತಲವು ಕೀಟನಾಶಕ, ಬೀಜ ನಾಶಕಗಳನ್ನೊಳಗೊಂಡಂತೆ ತೀರ ಬಂಡವಾಳ ಹಾಕುವ ಸಕಾಲವಿದು. ಸರ್ಕಾರ ಈ  ಬಗ್ಗೆ ಗಮನ ಹರಿಸುವದು ಸೂಕ್ತ. ವಿಶೇಷವಾಗಿ ಬತ್ತದ ಬೆಳೆಯ ತಯಾರಿ ,ಅಂದರೆ ಕೆಲ ಭಾಗದಲ್ಲಿ ಈ ಮೊದಲು ಬಿತ್ತುವ ಕಾರ್ಯ ಹೆಚ್ಚಿನದ್ದಾಗಿತ್ತು ಈಗ ಅದು ವಿರಳವಾಗಿ ಹೆಚ್ಚಿನ ರೈತರು ನಾಟಿಯನ್ನೆ ಅವಲಂಭಿಸಿದ್ದಾರೆ. ಇದಕ್ಕೆ ಪೂರಕ ಮಳೆ ಹಾಗೂ ಕೆಲಸಗಾರರ ಲಭ್ಯತೆ ಕೂಡ ಒಂದು ಮುಖ್ಯ ವಿಚಾರ. ಹೀಗೆ ಹತ್ತು ಹಲವು ಸಾಮಾಜಿಕ ವ್ಯವಸ್ಥೆಯ ಕ್ಷೇತ್ರಗಳು ಅಸಮತೋಲನದ ಹಂತ ತಲುಪಿರುವದು ಕರೋನವೇ ಪ್ರಮುಖ ಕಾರಣವಾಗಿದೆ ಎಂದು ಪ್ರತ್ಯಕ್ಷವಾಗಿ ಕಾಣುವ ವಸ್ತು ಸ್ಥಿತಿ. ಭೂತಕಾಲ, ಭವಿಷ್ಯತಕಾಲ ಹಾಗೂ ವರ್ತಮಾನದ ತುಲನೆಗೆ ಹೋದಾಗ ನೇರವಾಗಿ ದುಬಾರಿ ಕಾಲ ಅನುಭವವಾಗುತ್ತದೆ. ಕಾದು ನೋಡೋಣ ಕರೊನಾ ಬದುಕಿನ ಸಂಕ್ಷಿಪ್ತ ಕಲ್ಪನೆಯೊಂದಿಗೆ ಬರೆದ ಈ ಲೇಖನ ಹೋಲುವ ದಿನಗಳು ಹೌದೋ ಅಲ್ಲವೋ ಎಂದು… *****

ಪ್ರಸ್ತುತ Read Post »

ಆರೋಗ್ಯ, ಇತರೆ

ಆರೋಗ್ಯ

ಧೂಮಪಾನ ದುಷ್ಟಪರಿಣಾಮಗಳು. ಸಂಗಮೇಶ ಎನ್ ಜವಾದಿ  ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 100ಜನರಿಗೆ ಮಾದಕ ವ್ಯಸನಿಗಳಾಗಿದ್ದರೆ, ಇತ್ತೀಚಿನ ದಿನಗಳಲ್ಲಿ 100ರಲ್ಲಿ 40 ಜನರಿಗೆ ಇಂತಹ ಚಟಗಳಿಗೆ ವ್ಯಸನಿಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಯಾವುದೇ ಪ್ರಯೋಜನ ವಿಲ್ಲದುದ್ದರೂ,ಮೋಜು ಮಸ್ತಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ, ಸಂಪ್ರದಾಯದ ಕಂದಾಚಾರ, ಕಾಮೋತ್ತೇಜನ ಪ್ರಚೋದನೆಗಾಗಿ, ಆಕ್ರಮಣ ಶೀಲತೆ ತೋರಿಸಲು, ಪ್ರತಿಭೆ ಪ್ರದರ್ಶನಕ್ಕೆ, ಹಣಕಾಸು ಸಮಸ್ಯೆ, ಖಿನ್ನತೆ ಯಂತಹ ವಿಷಯಗಳಿಂದಾಗಿ,ಧೂಮಪಾನದಂತ ಚಟಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಈಗ ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.ಧೂಮಪಾನ ದುಶ್ಚಟಗಳ  ಬಳಕೆಗೆ ಯಾವುದೇ ನಿರ್ಧಿಷ್ಟ ಕಾರಣಗಳು ಇಲ್ಲದಿದ್ದರೂ, ಹಿರಿಯರ ಜೊತೆಗೆ ಇವತ್ತಿನ ಯುವ ಸಮೂಹ ಕೂಡ, ಕ್ಷುಲಕ ಕಾರಣ, ಕ್ಷಣಿಕ ತೀರ್ಮಾನಗಳಿಂದಾಗಿ ದುಶ್ಚಟಕ್ಕೆ ಬಲಿಯಾಗುತ್ತಿದೆ. ವಿಶ್ವ ಸಂಸ್ಥೆಯ ಸಮೀಕ್ಷೆಯ ಪ್ರಕಾರ 1 6ರ ವಯೋಮಿತಿಯಿಂದ 30ರ ವಯೋಮಿತಿಯ ಒಳಗಿನವರೇ, ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎನ್ನುವ ಅಂಶ ಹೊರಗೆಡುವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಶೇ 10ರಲ್ಲಿ 4 ಜನ ಧೂಮಪಾನವನ್ನು, 3 ಜನ ಮದ್ಯಪಾನವನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಇದರಿಂದ ಹೊರತಾಗಿಲ್ಲ. ಧೂಮಪಾನ ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 40 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ. ಧೂಮಪಾನದಲ್ಲಿ ಏನಿದೇ : ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ. ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಧೂಮಪಾನ ವ್ಯಸನಕ್ಕೆ ಕಾರಣಗಳು : ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ. ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ. ಧೂಮಪಾನದ ದುಷ್ಟಪರಿಣಾಮಗಳು : ಸಿಗರೇಟ್ ನಲ್ಲಿ ಸುಮಾರು 4000 ವಿಷ ಪದಾರ್ಥಗಳಿದ್ದು 400ರಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರಿಗೆ ಕಾರಣವಾಗಿವೆ,ಅತಿಯಾದ ಧೂಮಪಾನ ನರಗಳ ದೌರ್ಬಲ್ಯ,  ಜೀರ್ಣ  ಶಕ್ತಿಯಲ್ಲಿನ  ಇಳಿತಕ್ಕೆ ಕಾರಣವಾಗುತ್ತದೆ. ಸತತವಾದ ದಮ್ಮು , ರಕ್ತದ ಖಾಯಿಲೆ  ಉಂಟುಮಾಡುತ್ತದೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಧಕ್ಕೆಯಾಗುತ್ತದೆ .5 ಸೆ, ಮೀ, ಸಿಗರೇಟ್ ಸೇವನೆಯಿಂದ 5 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ. ಕಳೆದ ದಶಕದಲ್ಲಿ ತಂಬಾಕು ಸಂಬಂಧಿತ ರೋಗಗಳು ತ್ವರಿತವಾಗಿ ಹೆಚ್ಚಾಗಿವೆ. ಸಂತಾನಕ್ಕಾಗಿ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಲ್ಲಿ ಬೇಗನೆ ರಜೋನಿವೃತ್ತಿ ಹೊಂದುವಿಕೆ ಕಂಡು ಬರುತ್ತಿದೆ.ಧೂಮಪಾನ ಮಾಡುವವರು ಶೇ.14 ಬಂಜೆತನಕ್ಕೆ ಒಳಗಾಗುತ್ತಾರೆ. ಶೇ.30ರಷ್ಟು ಬಹುಬೇಗ ರಜೋನಿವೃತ್ತಿ ಹೊಂದುತ್ತಾರೆ. 30ರ ವಯೋಮಾನದ ಮಹಿಳೆಯರಲ್ಲಿ ಫಲವತ್ತತೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು 35ರ ನಂತರ ವೇಗ ಪಡೆದುಕೊಳ್ಳುತ್ತದೆ. ಆದರೆ ತಂಬಾಕು ಬಳಕೆಯು ಅವಧಿಗೆ ಮುಂಚೆಯೇ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ 10ಕ್ಕಿಂತಲೂ ಹೆಚ್ಚು ಸಿಗರೇಟುಗಳ ಸೇವನೆಯು ನಿಮ್ಮ ಗರ್ಭಧರಿಸುವ ಸಾಮರ್ಥ್ಯ‌ದ ಮೇಲೆ ಹಾನಿಯುಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.ಧೂಮಪಾನ ಮಾಡುತ್ತಿರುವ ಮಹಿಳೆಯರು ಶೇ.60ರಷ್ಟು ತಾವು ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುವರು. ಇದು ಅಪಸ್ಥಾನೀಯ ಗರ್ಭಾವಸ್ಥೆ ಮತ್ತು ಇತರೆ ಟ್ಯೂಬಲ್‌ ಫ್ಯಾಕ್ಟರ್‌ ಬಂಜೆತನಕ್ಕೂ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿ ಇರುವ ರಾಸಾಯನಿಕಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಒಳಗೊಂಡಿವೆ.ತಂಬಾಕು ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತದ ಹರಿವಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಅಧ್ಯಯನಗಳು ಧೂಮಪಾನದ ಪರಿಣಾಮಗಳನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ನೆರವೇರಿಕೆಯೊಂದಿಗೆ ಸಂಬಂಧ ಕಲ್ಪಿಸಿವೆ. ಮಾನವನ ವೀರ್ಯ ಕಣಗಳು ಸಮರ್ಪಕವಾಗಿ ಸಂತುಲಿತ ಒಂದರಿಂದ ಒಂದಕ್ಕೆ ಸಂಬಂಧ ಹೊಂದಿರುವ ಪ್ರೊಟಮೈನ್‌ 1 ಮತ್ತು ಪ್ರೊಟಮೈನ್‌ 2 ಎಂದು ಕರೆಯಲಾಗುವ ಎರಡು ಚಿಕ್ಕ, ಅಧಿಕ ಆವೇಶದ ಪ್ರೊಟೀನುಗಳನ್ನು ಕೊಂಡೊಯ್ಯುತ್ತವೆ. ಆದರೂ ಧೂಮಪಾನಿಗಳ ವೀರ್ಯವು ಬಹಳ ಕಡಿಮೆ ಪ್ರೊಟಮೈನ್‌ ಅನ್ನು ಕೊಂಡೊಯ್ಯುತ್ತದೆ. ತಂಬಾಕಿನಿಂದ ಉಂಟಾಗುವ ಹಾನಿಯು ವೀರ್ಯದಲ್ಲಿ ಕ್ರೊಮೊಸೋಮುಗಳ ಹಾನಿ ಮತ್ತು ಡಿಎನ್‌ಎ ವಿಘಟನೆಯನ್ನೂ ಒಳಗೊಳ್ಳುತ್ತದೆ. ಧೂಮಪಾನವು ವೀರ್ಯಕ್ಕೆ ಹಾನಿಯುಂಟುಮಾಡಿ ಸಂತಾನಶಕ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ವೀರ್ಯದಿಂದ ಬೆಳವಣಿಗೆಯಾದ ಭ್ರೂಣವು ಡಿಎನ್‌ಎ ಹಾನಿಯ ಕಾರಣದಿಂದಾಗಿ ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುತ್ತದೆ. ನಿಷ್ಟ್ರೀಯ ಧೂಮಪಾನ ಪುರುಷರ ಸಂತಾನಶಕ್ತಿಯ ಮೇಲೆ ಪ್ರಭಾವ ಬೀರಬಹುದು. ಪುರುಷ ಧೂಮಪಾನಿಗಳು ಕಡಿಮೆ ಚಲನಶೀಲತೆಯೊಂದಿಗೆ ವೀರ್ಯದ ಕಡಿಮೆ ಗುಣಮಟ್ಟದೊಂದಿಗೆ ಬಳಲಬಹುದು ಮತ್ತು ಇದು ಅಸಹಜ ಆಕಾರದ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ನಿರಂತರವಾಗಿ ಧೂಮಪಾನ ಮಾಡುವವನಾಗಿದ್ದರೆ, ಮೊಟ್ಟೆಗಳನ್ನು ಫಲವತ್ತತೆಗೊಳಿಸುವ ವೀರ್ಯದ ಸಾಮರ್ಥ್ಯ‌ವನ್ನೂ ಕಡಿಮೆ ಮಾಡಬಹುದು. ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು ಜೊತೆಗೆ ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಧೂಮಪಾನ ವ್ಯಸನದ ಪರಿಣಾಮಗಳು — ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಧೂಮಪಾನವನ್ನು ತಡೆಗಟ್ಟುವ ವಿಧಾನ: ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು

ಆರೋಗ್ಯ Read Post »

ಇತರೆ

ಪ್ರಸ್ತುತ

ಸಮಯ ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ. ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ ಸಮಯದ ಅಪವ್ಯಯದ ಬಗ್ಗೆ ಹೆಚ್ಚು ಒತ್ತನ್ನು ನೀಡುವುದೇ ಇಲ್ಲ. ಬಹಳ ಸಲ ಮನೋರಂಜನೆಗಳಲ್ಲಿ ಅಮೂಲ್ಯ ಸಮಯ ಹಾಳುಮಾಡುತ್ತೇವೆ. ಇದು ಮನಸ್ಸಿಗೆ ಮುದ ನೀಡುತ್ತದೆಯಾದರೂ ದೀರ್ಘ ಸಮಯದ ನಂತರ ಇದರ ದುಷ್ಪರಿಣಾಮ ಆಗದೇ ಇರದು. ಸಮಯದ ಅಪವ್ಯಯವನ್ನು ತಡೆಯುವ ಮುನ್ನ ನಾವೇಕೆ ವ್ಯರ್ಥ ಸಮಯ ಕಳೆಯುತ್ತಿದ್ದೇವೆಂದು ತಿಳಿಯುವುದು ಮುಖ್ಯ. ಸೋಲಿನ ಭಯ ಪರಿಣಾಮಕಾರಿ ಕೆಲಸಗಳ ಆಧಾರದ ಮೇಲೆ ಸಮಾಜವು ಕೆಲವು ಉನ್ನತ ಸ್ತರಗಳನ್ನು ಗುರುತಿಸಿರುತ್ತದೆ. ಸೋತ ಹೆಸರನ್ನು ಪಡೆದುಕೊಳ್ಳುವ ನೋವು ಯಾರಿಗೂ ಬೇಕಿಲ್ಲ. ಹೀಗಾಗಿ ಏನೂ ಮಾಡದೇ ಇರುವುದು ಒಳಿತು ಎಂದೆನಿಸಿಬಿಡುತ್ತದೆ. ಸೋಲಿನ ಭಯ ಇರುವವರಿಗೂ ವ್ಯರ್ಥ ಸಮಯ ಕಳೆಯುವಿಕೆ ಮತ್ತು ಕೆಲಸ ಮುಂದೂಡುವಿಕೆಯು ಅದರೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಇದು ಬದುಕಿನಲ್ಲಿ ಸಂಪರ‍್ಣ ವೈಫಲ್ಯತೆಯನ್ನು ಮನೆ ಮಾಡಿಸುವಷ್ಟು ಅಪಾಯಕಾರಿ. ಭವಿಷ್ಯವನ್ನು ನಿರೀಕ್ಷಿಸುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಕರ‍್ಯದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ನೀಡಿದರೆ ಸೋಲಿನ ಭಯ ಕಡಿಮೆಯಾಗುವುದು. ಪರಿಪರ‍್ಣತೆಯ ಮುಂದಾಲೋಚನೆಯಲ್ಲಿ ತಡೆ ಹಿಡಿದುಕೊಳ್ಳದಿರಿ.’ಯಶಸ್ವಿ ವ್ಯಕ್ತಿಯು ವಿಫಲರು ಮಾಡಲು ಇಷ್ಟಪಡದದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರೆ.’ಎನ್ನುವ ಇ.ಎಂ.ಗ್ರೇ ಮಾತುಗಳನ್ನು ಅರ್ಥೈಸಿಕೊಳ್ಳಬೇಕು.. ನಿರುತ್ಸಾಹ ಅನಾರೋಗ್ಯ ಜೀವನ ಶೈಲಿಯುಳ್ಳವರಲ್ಲಿ ಕಡಿಮೆ ಶಕ್ತಿ ಹೆಚ್ಚು ನಿರುತ್ಸಾಹ ಕಂಡು ಬರುತ್ತದೆ. ಸಾಧಿಸಲು ಮನಸ್ಸೇ ಆಗುವಂಥ ಮನೋಭಾವದಲ್ಲಿ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಇದು ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿಯು ದಣಿವನ್ನು,ಜಡತ್ವನ್ನು ಹೆಚ್ಚಿಸುವುದಲ್ಲದೇ ನಿಷ್ಕಿçÃಯರನ್ನಾಗಿಸುತ್ತದೆ.ನಿರುತ್ಸಾಹದ ಹಿಂದಿನ ಮೂಲ ಕಾರಣವನ್ನು ಹುಡುಕಲೇಬೇಕು. ಅಂದಾಗ ಮಾತ್ರ ಮುಂದೆ ಹೆಜ್ಜೆ ಇಡಲು ಅನುವಾಗುತ್ತದೆ. ಇದಕ್ಕೆ ಯಶಸ್ವಿ ವ್ಯಕ್ತಿಗಳು ಕಂಡು ಕೊಂಡಿರುವ ದಾರಿಯೆಂದರೆ ಮುಂಜಾನೆ ಹೊತ್ತಿನಲ್ಲಿ ವಾಕಿಂಗ್ ಜಾಗಿಂಗ್ ಮಾಡುವುದು. ಇದು ದಿನವೆಲ್ಲ ಉತ್ಸಾಹ ಭರಿತರನ್ನಾಗಿಸುತ್ತದೆ. ದೈಹಿಕ ಚೈತನ್ಯ ಕಡಿಮೆಯಾದರೆ ನಿರುತ್ಸಾಹ ಜಪ್ಪಯ್ಯ ಅಂದರೂ ಬಿಟ್ಟು ಹೋಗಲ್ಲ. ಆದ್ದರಿಂದ ವ್ಯಾಯಾಮಗಳಲ್ಲಿ ತೊಡಗಿಸುಕೊಳ್ಳುವುದು ಅಗತ್ಯ. ದೃಷ್ಟಿ ಕೋನದ ಅಭಾವ ‘ಆಲಿಸ್ ಇನ್ ವಂಡರ್ ಲ್ಯಾಂಡ್’ ಕೃತಿಯಲ್ಲಿಯ ಘಟನೆಯೊಂದು ನನಗೆ ನೆನಪಾಗುತ್ತಿದೆ. ಆಲಿಸ್ ಕಾಡಿನಲ್ಲಿ ಹೋಗುತ್ತಿರುವಾಗ ಮುಂದಿನ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಬೆಕ್ಕನ್ನು ಕೇಳುತ್ತಾಳೆ. ಅದಕ್ಕೆ ಬೆಕ್ಕು ‘ನಿನಗೆಲ್ಲಿ ಹೋಗುವುದಿದೆ?’ ಎಂದು ಕೇಳುತ್ತದೆ.’ಎಲ್ಲೂ ಹೋದರೂ ನಡೆಯುತ್ತದೆ.’ ಎನ್ನುತ್ತಾಳೆ ಖಚಿತವಾಗಿ ಎಲ್ಲಿಗೆ ಹೋಗಬೇಕೆನ್ನುವುದು ನಿನಗೆ ಗೊತ್ತಿಲ್ಲವೆಂದರೆ ದಾರಿ ಎಲ್ಲೋ ಒಂದು ಕಡೆ ಕರೆದೊಯ್ಯುತ್ತದೆ ಹೋಗು.’ಖಚಿತ ಗುರಿ ಇಲ್ಲದಿದ್ದಾಗ ಹೀಗೆ ಎಲ್ಲಿ ಬೇಕಾದಲ್ಲಿ ಅಲೆದಾಡಿ ಸಮಯ ವ್ಯರ್ಥವಾಗುತ್ತದೆ..ಆದ್ದರಿಂದ ಖಚಿತ ಗುರಿ ಹೊಂದಬೇಕು. ಸಮಯದ ಅಪವ್ಯವ ತಡೆಯಲು ಮೂರು ‘ಸಿ’ಗಳನ್ನು ಅಳವಡಿಸಿಕೊಳ್ಳಿ. ಸೆರೆ ಹಿಡಿಯುವಿಕೆ. ಮಾಡ ಬೇಕಾದ ಕೆಲಸಗಳನ್ನು ಸೆರೆ ಹಿಡಿಯುವುದರಿಂದ ಉತ್ಪಾದಕತೆ, ಕಾರ‍್ಯಕ್ಷಮತೆ, ದಕ್ಷತೆ ಗುಣಿಸಿದಷ್ಟು ಹೆಚ್ಚುತ್ತವೆ. ಮೆದುಳು ನಮ್ಮ ದೇಹದ ಒಂದು ಚುರುಕಾದ ಅವಯವವಾದರೂ ಅದು ಸ್ವಭಾವದಲ್ಲಿ ಸೋಮಾರಿಯಾಗಿದೆ. ಬೇಕಾದದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಾಗೊಂದಿಷ್ಟು ನೆನಪಿಗೆ ಬರುತ್ತದೆ. ನೆನಪಾಗದಿದ್ದರೆ ನಮಗೆ ಒತ್ತಡ ಉಂಟಾಗುತ್ತದೆ.ಇದರಿಂದ ನಮ್ಮ ಮೆದುಳಿಗೆ ನಾವೇ ಘಾಸಿ ಮಾಡಿಕೊಳ್ಳುತ್ತೇವೆ ಎಂದು ಅನೇಕ ಸಂಶೋಧನೆಗಳ ವರದಿಗಳು ಹೇಳಿವೆ. ಅಷ್ಟೇ ಅಲ್ಲ ಕಾರ‍್ಯಕ್ಷಮತೆ ಮತ್ತು ಉತ್ಪಾದಕತೆಯ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅತ್ಯಗತ್ಯವಾಗಿ ಬೇಕಾದ ವಿಚಾರಗಳನ್ನು ಬರೆದಿಡಲು ನೋಟ್ ಪ್ಯಾಡ್ ಒಂದನ್ನು ಬಳಿಸಿ. ಇಲ್ಲದಿದ್ದರೆ ಮೊಬೈಲ್‌ನಲ್ಲಿರುವ ನೋಟ್‌ನ್ನು ಬಳಸಿ.ಮೆದುಳಿನಿಂದ ತೆಗೆದು ಇದರಲ್ಲಿ ದಾಖಲಿಸಬೇಕು. ಯಾವುದು ಯಾವಾಗ ನೆನಪಾದರೂ ಅದರಲ್ಲಿ ಬರೆಯಲು ಸಾಧ್ಯ.ಮಾಡದೇ ಉಳಿದ ಕೆಲಸಗಳ ಪಟ್ಟಿಯೂ ಅದರಲ್ಲಿ ಗೊತ್ತಾಗುತ್ತದೆ. ಜಗತ್ಪçಸಿದ್ಧ ವರ್ಜಿನ್ ಗ್ರೂಪ್‌ನ ಮಾಲಿಕ ರಿಚರ್ಡ್ ಬ್ರಾನ್ಸನ್ ಯಾವಾಗಲೂ ತಮ್ಮ ಹತ್ತಿರ ಒಂದು ನೋಟ್ ಪ್ಯಾಡ್‌ನ್ನು ಇಟ್ಟುಕೊಳ್ಳುತ್ತಾರೆ.ಇದೊಂದು ತರ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ತರಾ. ಡಿಸ್ಕ್ ನಮ್ಮ ಮೆದುಳಿನ ಜಾಗವನ್ನು ಖಾಲಿ ಮಾಡಲು ಅನುಕೂಲವಾಗುತ್ತದೆ. ಮೆದುಳು ಮತ್ತೆ ಹೊಸದಾಗಿ ಆಲೋಚಿಸಲು ಉತ್ತೇಜನ ನೀಡಿದಂತಾಗುತ್ತದೆ. ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇವೆಲ್ಲ ಕರ‍್ಯಕ್ಷಮತೆಯ ಮೇಲೆ ಅತ್ಯಧಿಕವೆನಿಸುವಷ್ಟು ಸುಧಾರಣೆ ತರುತ್ತವೆ. ಕ್ಯಾಲೆಂಡರ್ ಈ ಸಂಜೆ ನನಗೆ ಇಂಥ ಲೇಖನವನ್ನು ಓದುವುದಿದೆ. ನನ್ನ ಗೆಳೆಯ/ತಿಯ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುವುದಿದೆ. ಇದು ಕಾಲೇಜ್ ಫೀ ತುಂಬಲು ಕೊನೆಯ ದಿನಾಂಕ. ಇವೆಲ್ಲವಕ್ಕೆ ನಿಗದಿತ ದಿನಾಂಕವನ್ನು ಗುರುತಿಸುವುದು.ಹೀಗೆ ಮಾಡುವುದರಿಂದ ಮೆದುಳು ರಿಲ್ಯಾಕ್ಸ್ ಆಗಿರುತ್ತದೆ. ಮತ್ತು ಮಾಡಲೇ ಬೇಕಾದ ಕೆಲಸಗಳು ಮಾಡಲಾಗದೇ ಉಳಿಯುವುದಿಲ್ಲ. ಸೆರೆಹಿಡಿಯುವರಿಂದ ಮತ್ತು ಕ್ಯಾಲೆಂಡರ್ ಬಳಿಸಿದ್ದರಿಂದ ಯಾವ ಕೆಲಸ ಯಾವಾಗ ಮಾಡುವುದಿದೆ ಎನ್ನುವುದರ ಬಗೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಿಗ್ಗೆದ್ದು ಕ್ಯಾಲೆಂಡರ್ ನೋಡಿದರೆ ಸಾಕು ಇಂದು ನಾನು ಯಾವ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ರಾತ್ರಿ ಮಲಗುವಾಗ ಅಂದು ನಿಗದಿಪಡಿಸಿದ್ದ ಕೆಲಸಗಳೆಲ್ಲ ಮಾಡಿ ಆಯಿತೇ? ಎಂದು ಚೆಕ್ ಮಾಡಿಕೊಳ್ಳಬೇಕು. ಉಳಿದಿದ್ದರೆ ಮತ್ತೆ ಅದನ್ನು ಎಂದು ಮಾಡಲಾಗುವುದು ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿಕೊಳ್ಳುವುದು. ಇದರಿಂದ ಸಮಯ ನರ‍್ವಹಣೆಯೂ ಆಗುತ್ತದೆ ಮತ್ತು ಮಾಡುವ ಕೆಲಸಗಳಿಗೆ ಸರಿಯಾದ ದಿಕ್ಕು ಸಿಗುತ್ತದೆ. ಏಕಾಗ್ರತೆ ಮೊದಲನೆಯ ‘ಸಿ’ ಕ್ಯಾಪ್ಚರ್ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎರಡನೇ ‘ಸಿ’ ಕ್ಯಾಲೆಂಡರ್ ಯಾವ ಯಾವ ಕೆಲಸ ಯಾವಾಗ ಎನ್ನುವ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಸರಿಯಾದ ಫಲಿತಾಂಶ ಪಡೆಯಲು ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಬೇರೆ ಬೇರೆ ವಿಚಾರಗಳು ಮನಸ್ಸಿನೊಳಗೆ ಸದ್ದು ಮಾಡತೊಡಗಿದರೆ ಅವುಗಳನ್ನು ನೋಟ್ ಪ್ಯಾಡಿನಲ್ಲಿ ಬರೆದರೆ, ಮೆದುಳು ಮತ್ತೆ ಕಾರ‍್ಯದತ್ತ ಕೇಂದ್ರೀಕರಿಸಿ ಅಡೆತಡೆಗಳಿಲ್ಲದ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಏಕಾಗ್ರತೆ ಮುಂಜಾನೆ ಹೆಚ್ಚಿರುತ್ತದೆ. ಮುಖ್ಯವಾದ ಕೆಲಸಗಳನ್ನು ಮುಂಜಾನೆಯೇ ಮಾಡಿ ಮುಗಿಸುವುದು ಸೂಕ್ತ. ಇದರಿಂದ ಮುಖ್ಯವಾದ ಕೆಲಸಗಳನ್ನು ಚೆನ್ನಾಗಿ ಬೇಗ ಮುಗಿಸಲು ಸಾಧ್ಯವಾಗುವುದು. ‘ಸಿಂಹವೂ ಸಹ ಮೊದಲು ಎರಡು ಹೆಜ್ಜೆ ಹಿಂದೆ ಹೋಗಿ ಬೇಟೆ ಆಡುತ್ತದೆ.’ ಹಾಗೆಯೇ ನಾವೂ ಸಹ ಏಕಾಗ್ರತೆ ಆಗುತ್ತಿಲ್ಲವೆಂದರೆ ಸ್ವಲ್ಪ ಹೊತ್ತು ವಿರಾಮ ಪಡೆದು ಕೆಲಸಕ್ಕೆ ಮರಳುವುದು ಒಳ್ಳೆಯದು. ಈ ಎರಡು ಹೆಜ್ಜೆಗಳ ವಿರಾಮ ಪಡೆಯುವುದರಿಂದ ಪುನಃಶ್ಚೇತನ್ಯ ಉಂಟಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನು ಸುಸಂಘಟಿತವಾಗಿ, ಉತ್ಪಾದನಶೀಲ, ಶಿಸ್ತು ಬದ್ಧ ಮಾಡಬೇಕೆಂದರೆ ಈ ಮೂರು ‘ಸಿ’ ಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ. ಈ ರೀತಿಯ ಕರ‍್ಯ ನರ‍್ವಹಣೆಯು ಸಮಯದ ಅಪವ್ಯವನ್ನು ತಡೆಯುವುದಲ್ಲದೇ ಕಾರ‍್ಯಕ್ಷಮತೆ ಮತ್ತು ಫಲಿತಾಂಶವನ್ನು ಅಧಿಕಗೊಳಿಸುತ್ತದೆ. ‘ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಆಶಿಸುವ ಬದಲಾವಣೆ ನೀವಾಗಿ.’ ಎನ್ನುವ ಗಾಂಧೀಜಿಯವರ ಮಾತನ್ನು ಅಳವಡಿಸಿಕೊಂಡರೆ ಸಮಯದ ಸವಿ ಸವಿಯಲು ಸಾಧ್ಯ. ********

ಪ್ರಸ್ತುತ Read Post »

ಇತರೆ

ಅವ್ವನ ನೆನಪಲಿ

ಅವ್ವನ ನೆನಪಲಿ… ಮಲ್ಲಿಕಾರ್ಜುನ ಕಡಕೋಳ ಸಗರನಾಡು – ಮಸಬಿನ  ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ”  ಅವ್ವನ  ತವರೂರು. ಏಳೂರು  ಗೌಡಕಿಯ ವತನದಾರ ಮನೆತನದಾಕೆ.  ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ  ಆಕೆಯನ್ನು ನೋಡಿದ  ಅಪ್ಪನಿಗೆ, ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ  ಮಾಡಿದ. ಅಪ್ಪನಿಗೆ ಆಗ ಉಂಡುಡಲು  ಯಥೇಚ್ಛವಾಗಿದ್ದುದು ಕಡುಬಡತನ ಮಾತ್ರ. ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ  ನೂರಾರು ಎಕರೆ ಜಮೀನು. ಅದೆಲ್ಲ  ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳುಹೇಳಿ ಅವ್ವನನ್ನು ಲಪಟಾಯಿಸಿದನಂತೆ. ೧೯೪೮ ರ ರಜಾಕಾರರ ಸಪಾಟಿಯಷ್ಟೊತ್ತಿಗೆ  ಅವರ ಲಗ್ನವಾಗಿ ಅಜಮಾಸು ಎರಡು  ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು  ವರುಷಗಳು ಕಳೆದಿದ್ದವಂತೆ.  ಒರಟು ಕಗ್ಗಲ್ಲಿನಂತಹ  ಅಪ್ಪನನ್ನು  ತಿದ್ದಿ,ತೀಡಿ  ಮೂರ್ತಿ  ಮಾಡಿದ  ಕೀರ್ತಿ ತನ್ನದೆಂದು  ಅವ್ವ  ಹೇಳುತ್ತಿದ್ದಳು. ಅದಕ್ಕೆ  ಅಪ್ಪ  ಕೊಡುವ  ಉತ್ತರವೆಂದರೆ  ನೀನೇನು  ಕಿತ್ತೂರ  ಚೆನ್ನಮ್ಮ… ನೇರೂ  ಮಗಳು  ಇಂದ್ರಾಗಾಂಧೀನಾ..? ಅಂತಿದ್ದ.  ಆದರೆ  ನಮ್ಮ  ಮನೆತನವೆಂಬ  ವೃಕ್ಷದ  ಬೇರು, ಬೊಡ್ಡೆ, ಒಟ್ಟು  ಮರವೇ  ಅವಳು.  ನನ್ನಪ್ಪ , ಮಡಿವಾಳಪ್ಪನವರ  ತತ್ವಪದಗಳೊಂದಿಗೆ ಊರೂರು  ಶಪಥ  ಭಜನೆಗಳನ್ನು  ಹುಡುಕುತ್ತ  ತಿರುಗುವ  ತಿರುಗಲು ತಿಪ್ಪ.  ಅವನೊಂದಿಗೆ  ತಾನು  ಕಳೆದ ಮುಕ್ಕಾಲು  ಶತಮಾನದ  ಕತೆಗಳನ್ನು  ಅವ್ವ  ಸ್ವಾರಸ್ಯಕರವಾಗಿ  ನಿರೂಪಿಸುತ್ತಿದ್ದಳು.   ನನ್ನವ್ವ  ತೀರಿಕೊಂಡು(29.05.2015) ನಾಲ್ಕು  ವರುಷ  ತೀರಿದವು. ಯಾವುದೇ  ಕಾರಣಕ್ಕು  ತಾನು  ಕಡಕೋಳ ಮಡಿವಾಳಪ್ಪನ  ಸನ್ನಿಧಾನದಲ್ಲೇ  ಪ್ರಾಣ  ಬಿಡಬೇಕೆಂಬುದು  ಅವಳ ಸಂಕಲ್ಪವಾಗಿತ್ತು.  ಅಷ್ಟಕ್ಕು  ಅವ್ವ  ತನ್ನ  ಸಂಕಲ್ಪ  ಈಡೇರಿಸಿಕೊಂಡಳು.  ೧೯೮೯ ರಲ್ಲಿ  ಅಪ್ಪ  ತೀರಿಕೊಂಡ  ಮೇಲೆ  ಅವ್ವ  ನಮ್ಮೊಂದಿಗೆ  ದಾವಣಗೆರೆಯಲ್ಲೇ  ಇರ್ತಿದ್ದಳು.  ಹಾಗಿರಬೇಕಿದ್ರೇ  ನಮ್ಮನೆಗೆ  ಬರುವ ರಂಗಕರ್ಮಿಗಳು, ಸಾಹಿತಿ,  ಪತ್ರಕರ್ತರಿಗೆ  ಅವಳ  ಪರಿಚಯ  ಮಾಡಿ ಕೊಡದಿದ್ದರೆ  ಸಣ್ಣ  ಮಕ್ಕಳಂತೆ  ಮುನಿಸಿಕೊಂಡು  ಬಿಡ್ತಿದ್ದಳು.    ಕಂಚ್ಯಾಣಿ ಶ್ಯಾಣಪ್ಪ ,  ಪಿ.ಬಿ. ಧುತ್ತರಗಿ,  ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ( ಅವ್ವನ  ಮಾತಿನಲ್ಲಿ ) ,  ರವಿ ಬೆಳಗೆರೆ, ಬಸೂ, ಆರ್.ನಾಗೇಶ್, ಮುಖ್ಯಮಂತ್ರಿ ಚಂದ್ರು,  ಆರ್. ನಾಗರತ್ನಮ್ಮ, ಆರ್.ಟಿ. ರಮಾ,  ಮಾಸ್ಟರ್  ಹಿರಣ್ಣಯ್ಯ….ಹೀಗೆ  ಯಾರೇ  ಬರಲಿ  ಅವರೊಂದಿಗೆ  ತಾನು  ಮಾತಾಡುವ  ಅದಮ್ಯ  ಹಂಬಲ  ಆಕೆಗೆ. ಒಮ್ಮೆ ಎಂ.ಪಿ. ಪ್ರಕಾಶ್ ನಮ್ಮನೆಗೆ  ಬಂದು ಅವಳೊಂದಿಗೆ ತಾಸೊಪ್ಪತ್ತು  ಸಂವಾದಕ್ಕಿಳಿದರು. ಅವ್ವ ಜವಾರಿ ಸ್ವರದಲಿ ಮಧುರವಾಗಿ  ಹಾಡುವ  ಮಡಿವಾಳಪ್ಪನ ತತ್ವಪದ ಕೇಳಿ ಅವರು  ಮೈ ಮರೆತರು. ಊಟಮಾಡಿ ಮತ್ತೆ ಮತ್ತೆ  ಹಾಡುಕೇಳಿ…  ಹೋಗುವಾಗ,  ಎಂ.ಪಿ. ಪ್ರಕಾಶ  ಅವ್ವನ  ಕಾಲುಮುಟ್ಚಿ  ನಮಸ್ಕರಿಸಿದರು.   ಪ್ರಕಾಶ  ಹೋದಮೇಲೆ ” ಅವರು  ದೊಡ್ಡವರು.. ಮಂತ್ರಿಗಳು ” ಅಂತ ಹೇಳಿದೆವು. ಅವಳಲ್ಲಿ ಯಾವ  ಪ್ರತಿಕ್ರಿಯೆಯೂ  ಇರಲಿಲ್ಲ. ಆದರೆ ಅವರು ಸ್ವಾಮಿಗೋಳು, ಅಯನೋರು  ಅಂದೆವು… ಆಗನೋಡಿ  ಅವಳ  ಪಾಪಪ್ರಜ್ಞೆಯ  ಕಟ್ಟೆಒಡೆದು  ಭೋರ್ಗರೆಯತೊಡಗಿತು.  ” ಅಯ್ಯೋ ನರಕಕ್ಕೆ ಹೋಗ್ತಿನಪೋ..  ಜಂಗಮರು ನನ್ನ ಪಾದಮುಟ್ಟಿ ನಮಸ್ಕಾರ ಮಾಡಿದರು ” ಅಂತ ಭೋರ್ಯಾಡಿ ಗೊಳೋ ಅಂತ ದುಃಖಿಸ ತೊಡಗಿದಳು. ಅವರು ಮತ್ತೆ  ಯಾವಾಗ ಬಂದಾರು…ಅವರ ಪಾದ  ತೊಳೆದು ಧೂಳುಪಾದಕ  ಕುಡಿದು  ಪಾವನವಾಗಲು ವರುಷಗಟ್ಟಲೇ  ಶಬರಿಯಂತೆ ಕಾಯ್ದಳು. ಕಡೆಗೂ ಪ್ರಕಾಶರು ಬರಲೇಇಲ್ಲ.        ಅವ್ವ ನನಗೆ ಬಾಲ್ಯದಲ್ಲಿ ಮಾಡಿ ಕೊಡುತ್ತಿದ್ದ ಬಿಸಿ ಬಿಸಿ ರೊಟ್ಟಿ ಮುಟ್ಟಿಗೆ ಎಂದರೆ ಮೃಷ್ಟಾನ್ನ ಭೋಜನ ಅಂತಾರಲ್ಲ ಅಷ್ಟೊಂದು ಸಂತೃಪ್ತಿಯ ಊಟ ನನಗದು. ಅವಳೇನೇ ತಿಂಡಿ, ಅಡಿಗೆ ಮಾಡಿರಲಿ ಅದಕ್ಕೆ ಅವ್ವ ಎನ್ನುವ ಕೈಗುಣದ ರುಚಿ ಇರ್ಲೇಬೇಕು. ಅನ್ನಕ್ಕೆ ಸಾರು ಹಾಕೊಂಡು ಉಂಡಂಗೆ ಹೋಳಿಗೆಗೆ ತುಪ್ಪ ಸುರುವಿಕೊಂಡು ಉಂಡಾಗಲೇ ಆಕೆಗೆ ಸಮಾಧಾನ. ಬಾಯಿ ಕಟ್ಟುತ್ತಿರಲಿಲ್ಲ. ಒಂದಲ್ಲ ಎರಡು  ಬಾರಿಬಿದ್ದು  ಕಾಲು ಮುರಕೊಂಡಳು.  ಅಷ್ಟಾದರೂ ಆಕೆ ಬೆತ್ತ ಹಿಡಿಯಲಿಲ್ಲ. ಆದರೆ ಕಡೆ ಕಡೆಗೆ ವಾರಗಟ್ಟಲೇ ಊಟ  ಬಿಟ್ಟಳು. ಪೂರ್ತಿ ಮೆತ್ತಗಾದಳು. ದಾವಣಗೆರೆಯಿಂದ ತನ್ನನ್ನು  ಕಡಕೋಳಕ್ಕೆ ಕರ್ಕೊಂಡು  ಹೋಗಬೇಕೆಂದು ಎದೆಯೊಡೆದು ಹಾಸಿಗೆ  ಹಿಡಿದಳು.  ನೀನು ಇಲ್ಲೇ ತೀರಿಕೊಂಡರೂ ಊರಿಗೆ (ಕಡಕೋಳ) ತಗೊಂಡು  ಹೋಗ್ತೀನೆಂದರೂ  ಕೇಳುತ್ತಿರಲಿಲ್ಲ. ” ಮಲ್ಲಣ್ಣ… ನೀನು ತಗೊಂಡು  ಹೋಗ್ತಿ  ಖರೇ.. ನನಗ ಹ್ಯಂಗೊತ್ತಾಗ್ತದಪ.. ಸತ್ತು  ಹೋಗಿರ್ತಿನಲ್ಲ…ಊರಲ್ಲಿ ಮಡಿವಾಳಪ್ಪನ ನೆಲಕ್ಕ ತಲಿ ಕೊಟ್ಟು  ಪ್ರಾಣ ಬಿಡಬೇಕು ” ಅಂತಿದ್ಳು..ಹಂಗೇ  ಆಯ್ತು.  ೨೦೧೫ ರ ಮೇ ೨೮ ರಂದು  ಮುಂಜಾನೆ ಡಾವಣಗೇರಿಯಿಂದ  ಹೊರಟು ರಾತ್ರಿ ಹತ್ತುಗಂಟೆಗೆ  ಕಡಕೋಳ ತಲುಪಿದಾಗ ಅವಳಿಗೆ ಸ್ವರ್ಗ ತಲುಪಿದ  ಖಂಡುಗ ಖುಷಿ. ಮಡಿವಾಳಪ್ಪನ ಕಾಯಕ ಭೂಮಿಯ ಮಣ್ಣಲ್ಲಿ ಮಣ್ಣಾಗಲು  ಸಂತಸ  ಪಟ್ಟಳು.  ರಾತ್ರಿಯೆಲ್ಲ, ಮತ್ತು ಮಳ್ಳೇ  ಮರುದಿನ  ಊರಿಗೂರೇ ಬಂದು  ಅವ್ವನೊಂದಿಗೆ ಮಾತಾಡಿತು.  ಮೇ ೨೯ರ ಸಂಜೆ ನಾಲ್ಕುಗಂಟೆಗೆ  ಮಡಿವಾಳಪ್ಪನ  ಧ್ಯಾನದೊಳಗೆ ಅವ್ವ ಲೀನವಾದಳು. ***********

ಅವ್ವನ ನೆನಪಲಿ Read Post »

ಇತರೆ

ಲಾಕ್ ಡೌನ್ ದುರಿತಗಳು..

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು ನಂದಿನಿ ಹೆದ್ದುರ್ಗ ದಾಖಲಿಸಿದ್ದ ಲಾಕ್ ಡೌನ್ ದುರಿತಗಳು.. ಕಳೆದ ವಾರ ನನ್ನ ಮೊಬೈಲ್ಲು ಬೆಂಗಳೂರಿಗರು ಕಳಿಸುತ್ತಿದ್ದ ಹೂ ಉದುರಿದ ಖಾಲಿ ರಸ್ತೆಗಳಿಂದಲೇ ತುಂಬಿಹೋಯ್ತು. ಒಂದು ರಸ್ತೆ ಹಳದಿ,ಮತ್ತೊಂದು ನೀಲಿ,ಮಗದೊಂದು ಕಡುಗೆಂಪು…ಇನ್ನೊಂದು ತಿಳಿಗುಲಾಬಿ.. ಆಹಾ… ಊರಿಗೆ ಊರೇ ಯಾರದೋ ಸ್ವಾಗತಕ್ಕೆ  ಕಾದವರಂತೆ ತೋರಣ ಕಟ್ಟಿಕೊಂಡಿದೆ… ಯಾವ ರಸ್ತೆಯಲ್ಲಿ ಯಾರು ನಡೆದರೂ ಎಲ್ಲಿ ನಲುಗುತ್ತದೊ ಎಂಬಂಥ ಪಕಳೆಗಳ ಹಾಸು. ಬೆಂಗಳೂರು ಎನ್ನುವ ಹೆಸರು ಬದಲಿಸಿ ಹೂವೂರು ಎನುವಷ್ಟು  ಹೂಮರಗಳು.. ಯಾರೊ ಇನ್ನೊಂದು ಜೋಕು ಕಳಿಸಿದ್ರು…ಮಹಾನಗರದ ನಾಯಿಗಳೆಲ್ಲಾ ಮೀಟಿಂಗ್ ಸೇರಿ  ಅಲ್ಲಿ ಚರ್ಚೆ ಆಗ್ತಿದೆಯಂತೆ…  ‘ಮನುಷ್ಯರೆಲ್ರನ್ನೂ ಪಾಲಿಕೆಯವರು ಬಂದು ಎತ್ತಾಕೊಂಡು ಹೋಗಿರಬಹುದೇ…!?’ ಒಂಥರ ಸೊಗಸೇ ಇದೆಲ್ಲಾ ಓದಲಿಕ್ಕೆ.. ಅಳಿಲಿನ ಯೋಗಕ್ಷೇಮ ವಿಚಾರಿಸುವ ನೀಳಕತ್ತಿನ ನವಿಲೂ. ಜಯನಗರ,ಫೋರಮ್, ಕಮರ್ಷಿಯಲ್ಲು ಅಂತ ಶಾಪಿಂಗ್ ಬಂದು ಹೋದ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು.. ಒಂದುಕಾಲದಲ್ಲಿ ಅತಿ ನಿಬಿಡವಾಗಿದ್ದ ದಾರಿ ಮಧ್ಯದಲ್ಲಿ ಹಾಯಾಗಿ ಮಲಗಿ ಮೆಲುಕುತ್ತಿರುವ ದೊಡ್ಡ ಹೊಟ್ಟೆಯ ಹಸುಗಳು..!! ಮಹಾನಗರದ ಹೃದಯ ಭಾಗದಲ್ಲಿರುವ ಸ್ನೆಹಿತರೊಬ್ಬರು “ನೋಡಿಲ್ಲಿ…‌ಎಂತೆಂತಾ ಹಕ್ಕಿಗಳು ‌ಬಂದಿದಾವೆ ನಮ್ಮೂರಿಗೆ “ ಎನ್ನುತ್ತಾ ಪಕ್ಕದ ಖಾಲಿಸೈಟಿನ ಪೊದೆಯಲ್ಲಿ  ಚಿಲಿಪಿಲಿಗುಡುವ ಹೊಸ ಹಕ್ಕಿಗಳ ಫೋಟೋ ಕಳಿಸಿದ್ದೇ ಕಳಿಸಿದ್ದು… ಆಹಾ ಓಹೋ ಹೇಳಿ‌ ನಂಗೆ ಆಯಾಸವಾದರೂ ಅವರ ಆಸಕ್ತಿ ಮಾತ್ರ ಕುಂದಲೇ ‌ಇಲ್ಲ.. ಮನುಷ್ಯನೇ ಹಾಗಲ್ಲವೇ…? ತಾನೇ ವಿರೂಪ ‌ಮಾಡಿದ  ಪ್ರಕೃತಿ ಮತ್ತೆ  ಸ್ವರೂಪ ಪಡೆಯುತ್ತಿದೆ ಎನುವಾಗ ಅವನ ಸಂತೋಷ ಉಕ್ಕಿ ಹರಿಯುತ್ತದೆ. ನಿಮಿತ್ತವಾಗಿ ಮಹಾನಗರದಲ್ಲಿದ್ದರೂ ಮನಸ್ಸು‌ ತನ್ನ ನಾಲ್ಕು ಮನೆಯ ಬಾಲ್ಯದ ಹಳ್ಳಿಯ ಚಿತ್ರಣವನ್ನೇ ಸದಾ ತುಂಬಿಕೊಂಡಿರ್ತದೆ. ಹಾಗಾಗಿಯೇ ಸಣ್ಣ ಪಲ್ಲಟ,ಪರಿವರ್ತನೆಯಲ್ಲೂ ಮೂಲ ಕಾಣಬಹುದೇ ಎನ್ನುವ ಹುಡುಕಾಟದಲ್ಲೇ ಇರ್ತನೆ. ಮೂಲದಲ್ಲಿ ಬಹುತ್ವ ಎನುವುದೇ ಮನುಷ್ಯನ ಗುಣ. ಆದರೆ…ಆಧುನಿಕತೆ,ಜಾಗತೀಕರಣ ಮುಂತಾದ ಅತಿಮಾನುಷ ಪದಗಳು  ಮನುಷ್ಯನ ಮೂಲ ಗುಣವನ್ನು ತಿರುಚಿ  ಏಕಾಂಗಿಯಾಗುವುದೇ ಚಂದ ಎನುವ ಭಾವ ಸೃಷ್ಟಿಸುತ್ತಿವೆ. ಇರಲಿ..  ಅತಿಯೆಲ್ಲಾ ಅವನತಿಗೇ… ತುಂಬಿಕೊಳುವುದು ಖಾಲಿಯಾಗುವುದಕ್ಕೆ… ಆರಂಭವೆಲ್ಲಾ ಮುಗಿಯಲಿಕ್ಕೆ.. ಅಟ್ಯಾಚುಗಳೆಲ್ಲಾ ಡೀಟ್ಯಾಚ್ ಆಗುವುದಿಕ್ಕೇ ಎನ್ನುತ್ತದೆ ಕಾಲ ಧರ್ಮ. ‘ಈ ದಾರಿಯಲ್ಲಿ ಒಮ್ಮೆ ನಿನ್ನ ಕಿರುಬೆರಳು ಹಿಡಿದು ನಡೆಯುವಾಸೆ !” ಹೂದಾರಿ ಕ್ಲಿಕ್ಕಿಸಿ ಹೀಗೆ ಮೆಸೇಜಿಸದ ಅವನು…! ಹಳ್ಳಿಯಲ್ಲಿ ‌ಕುಳಿತು ಲಾಕಿನ ಹೆಚ್ಚಿಗೇನೂ ಎಫೆಕ್ಟಿಲ್ಲದೆ ,ಪ್ರೀತಿಯ ಓದೂ ಸಾಗದೆ /ಆಗದೆ ಒದ್ದಾಡುತ್ತಿದ್ದವಳ‌ ಮುಖಕ್ಕೆ ಒಂದು ಮಂದಸ್ಮಿತ ಮೂಡಲು ಇಷ್ಟು ಸಾಕಾಗದೇ..? “ಮಾತು ತಪ್ಪಬಾರದು” ಎನ್ನುವ ಮರು ಸಂದೇಶದೊಂದಿಗೆ ಕಡುಗೆಂಪಿನ ಗುಲಾಬಿ ಕಳಿಸಿ ಮತ್ತೆ ಮೌನಕ್ಕೆ ಜಾರಿದೆ.. _ ಬದುಕು ಕೊರೊನಾಮಯವಾಗಿದೆ. ಲಾಕಡೌನೆಂಬ ಪದ‌ ಮೊದಲು ಕೇಳಿದಾಗ ಅಷ್ಟೇನೂ ದಿಗಿಲು‌ ಬೀಳದೆ ‘ಮಾಮೂಲು ಬದುಕು ನಮ್ಮದು.ನಾವು ಭೂಮಿ ನಂಬಿರುವವರು.ಉಳುವ ಯೋಗಿಯ ನೋಡಲ್ಲಿ ಅಂತ ರಾಷ್ಟ್ರಕವಿ ಸುಮ್ಮನೇ ಬರೆದದ್ದಲ್ಲ’ ಅಂದುಕೊಂಡಿದ್ದೆ.. ಆದರೆ ಮೂರೇ ದಿನಕ್ಕೆ ನನ್ನ ನೂರು ಮನೆಯ ಊರಿನಲ್ಲೂ ಆರು ಮಂದಿ ಒಟ್ಟಿಗೆ ನಿಂತು ಕೊರೊನಾ ಹಾಡು ಪಾಡು ಮಾತಾಡ್ತಿದ್ದರೆ ಅದೆಲ್ಲಿಂದಲೋ ಪೋಲಿಸರು ಬಂದು ಅವರ ಕೈ ಸೋಲುವವರೆಗೂ ಬಿಗಿದು ಹೋಗುತ್ತಿದ್ದರು… ನಾಕು ದಿನ ಬಾಯಾಡಲಿಕ್ಕೆ ಆ ಮಾತಾದರೂ ‌ನಡೆದೀತು  ಅಂದುಕೊಂಡರೂ  ಕೇಳಲಿಕ್ಕೆ ಜೋಡಿ ಕಿವಿಯಿಲ್ಲದೆ ಅಕ್ಷರಶಃ ಈ ಲಾಕು ಸಾಕು ಎನಿಸತೊಡಗಿತು. ನಿಕ್ಕಿಯಾಗಿದ್ದ ಮದುವೆಯೊಂದು ಕೊರೊನಾ ಕಾರಣಕ್ಕೆ  ಅತ್ಯಾಪ್ತರು‌ ಮಾತ್ರ ನಿಂತು‌ ನೆರವೇರಿಸುವ ಹಾಗಾಯ್ತು.. ಯಾಕೋ ಗೊತ್ತಿಲ್ಲ.ಅದರಿಂದ ಒಳಗೊಳಗೆ ಖುಷಿ ಪಟ್ಟವರಲ್ಲಿ ನಾನೂ ಒಬ್ಬಳು. ನಮ್ಮ ಭಾರತೀಯರಲ್ಲಿ ಮಾತ್ರ ಕಾಣುವ ಈ ಬಿಗ್ ಫ್ಯಾಟ್ ಮದುವೆಗಳು  ಮಗದೊಂದು ಕಾರಣದಲ್ಲಿ ನೇಚರನ್ನು ನುಂಗಿ ನೊಣೆಯುತ್ತಿವೆಯೇನೊ ಅನಿಸ್ತದೆ.. ಒಂದು ಸಾಧಾರಣ ಕುಟುಂಬದ ಮದುವೆಗೂ ಒಂದು ಸಣ್ಣ ಬೆಟ್ಟದಷ್ಟು ಕಸದ ಉತ್ಪಾದನೆ ಆಗ್ತದೆ. ಅದರಲ್ಲೂ ಹೆಚ್ಚಿನದು ವಿಘಟನೆಯಾಗದ ಕಸ. ತಮ್ಮ ಸ್ಟೇಟಸ್ಸು ತೋರಿಸಿಕೊಳ್ಳುವ ಸಲುವಾಗಿ ಪ್ರತಿ ಊಟ ತಿಂಡಿಗೂ  ಪ್ಲಾಸ್ಟಿಕ್ ಬಾಟಲಿಯಲ್ಲೇ‌ ನೀರು ಪೂರೈಕೆ.. ಇಟ್ಟ ಬಾಳೆಲೆ ಒರೆಸಿಕೊಳ್ಳಲು ಪುಟ್ಟದೊಂದು ಪ್ಲಾಸ್ಟಿಕ್ ಕುಡಿಕೆ .ಅದರೊಳಗೆ ನೀರು ಹಾಕಿದರೆ ಊದಿಕೊಳ್ಳುವ ಟಿಷ್ಯೂ. ಮುಕ್ಕಾಲು ಮೂರು ಪಾಲು ಸಕ್ಕರೆ ರೋಗಿಗಳಿರುವ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ನಾಲ್ಕು ನಾಲ್ಕು ಬಗೆಯ ಸಿಹಿ. ಉಂಡದ್ದಕ್ಕಿಂತ ಒಗೆದದ್ದೇ ಹೆಚ್ಚು.. ಸಾಯಲಿ ,ನಾಯಿ ನರಿಯಾದರೂ ತಿಂದುಕೊಳ್ತವೆ ಅಂದುಕೊಂಡರೆ ಪ್ರತಿ ಸಿಹಿಗೂ ಪ್ರತ್ಯೇಕ ಪ್ಲಾಸ್ಟಿಕ್ ಬಟ್ಟಲು.ಜೊತೆಗೆ ಚಮಚ. ಬರೆಯುತ್ತಾ ಹೋದರೆ ಸಂ ವಿಧಾನವೇ ಆಗಬಹುದು… ಕೊರೊನಾದ ಪಾಸಿಟಿವ್ ಪರಿಣಾಮವಾಗಿ ಪ್ರಮುಖವಾಗಿ ಊರಲ್ಲಿ ನಡೆದ ಸರಳ ಮದುವೆ ಹೆಸರಿಸಬಹುದು. ನೆಲ ,ಮುಗಿಲು ನೀರು,ನಿಡಿ  ತಿಳಿಯಾಗಿದ್ದು, ಮನಸ್ಸುಗಳು ತಿಳಿದದ್ದು, ವೃದ್ದಾಶ್ರಮಗಳಾಗಿದ್ದ ಹಳ್ಳಿಗಳೆಲ್ಲಾ ಸಂಜೆ ಮುಂಜಾನೆ ಲಕಲಕಿಸಿದ್ದು. ಕ್ರಿಕೆಟ್ಟು ,ಶಟಲ್ಲುಗಳು ನಮ್ಮ ಸಗಣಿಸಾರಿಸಿದ ಅಂಗಳಕ್ಕೂ ಬಂದು  ನಮ್ಮ ಹೊಲ ತೋಟಗಳು ದಿಗಿಲಾಗಿದ್ದು.. ಓದು ವೃತ್ತಿಯ ಕಾರಣಕ್ಕಾಗಿ ವರ್ಷಾನುಗಟ್ಟಲೆ ಮನೆಯಿಂದ ಹೊರಗಿದ್ದು,ಬಂದರೂ ನೆಂಟರ ಹಾಗೆ ಬಂದು ಹೋಗುತ್ತಿದ್ದ ಮಕ್ಕಳೇ ಅಪ್ಪ ಅಮ್ಮನಿಗೆ ಹೊಸದಾಗಿ ಕಂಡದ್ದು.. ಊರಿನಲ್ಲಿ ಜೊತೆಗಿರುವ ಸೊಸೆಗಿಂತ  ನಗರ ಸೇರಿ ವಾರಕ್ಕೊಮ್ಮೆ ವಿಡಿಯೊ ಕಾಲು ಮಾಡಿ  ‘ಆರೋಗ್ಯ ನೋಡಿಕೊಳ್ಳಿ,ನಾವಿದ್ದೆವೆ ಜೊತೆಗೆ ‘ ಎನ್ನುವ  ಸೊಸೆಯೇ ಬಲು ಪ್ರೀತಿಸುವುದು ತಮ್ಮನ್ನು ಎಂದುಕೊಂಡಿದ್ದ ಅತ್ತೆಮಾವನಿಗೆ‌ ಸತ್ಯ ದರ್ಶನವಾಗಿ ಬೆಸ್ತು‌ಬಿದ್ದಿದ್ದು. ಊರ ಕಾಲುಹಾದಿಗಳಲ್ಲೂ ವಾಕಿಂಗ ಹೋಗುವವರು ಹೆಚ್ಚಾಗಿದ್ದು… ಇನ್ನೂ ಮುಂತಾದವು ಕೊರೊನಾ ಕಾಲದ ಕೊಡುಗೆ ಎನಬಹುದು. ನಿಜ.. ಸಾಮಾಜಿಕವಾಗಿ,ರಾಜಕೀಯವಾಗಿ,ಸಾಂಸ್ಕ್ರತಿಕವಾಗಿ ಇದು ಇತಿಹಾಸದ ಪುಟ ಸೇರಿದ ವರ್ಷ.ನಾವಿದಕ್ಕೆ ಸಾಕ್ಷಿಯಾಗಿದ್ದೇವೆ. ಲಘುವಾಗಿ ತೆಗೆದುಕೊಳ್ಳುವ ವಿಚಾರ ಅಲ್ಲವೇ ಅಲ್ಲ. ಕೊರೊನಾ ಕಾಲವನ್ನು ಹಿಂದೂಡಿದೆ. ನಷ್ಟ ವಾಗಿರುವ ಆರ್ಥಿಕತೆಯ ರಿಪೇರಿಗೆ ಯಾವ ಸೂತ್ರವೂ ಏನು ಮಾಡಲಾರದಂತಾಗಿದೆ.  ಕಲಿತ ಮಕ್ಕಳನ್ನು ಕನಲುವಂತೆ ಮಾಡಿದೆ. ಬೆಳೆದ ಬೆಳೆಗೆ ತಗುಲಿದಷ್ಟೂ ಬೆಲೆ ಸಿಗದೆ ರೈತ ಹೈರಾಣಾಗಿದ್ದಾನೆ.. ಒಮ್ಮೆ ಕೆಮ್ಮಿದರೂ  ಸಾಕು.ಮನೆಯವರೇ ಮುಖ ಸಿಂಡರಿಸುತ್ತಾರೆ. ಇನ್ನೇನು ಮರೆಯಾಗುತ್ತಿದೆ ಎಂದುಕೊಂಡಿದ್ದ ಅಸ್ಪರ್ಶ್ಯತೆ ಹೊಸ ಫ್ಯಾಷನ್ ಆಗಿ  ಜಗವನ್ನಾಳತೊಡಗಿದೆ. ನಮ್ಮ ಸಂಸ್ಕೃತಿಯ ಮೇರುವೆನಿಸಿದ್ದ ಅತಿಥಿ ದೇವೋಭವ ಇನ್ನೂ ಅರ್ಥ‌ಕಳೆದುಕೊಳ್ಳಬಹುದೆನಿಸುತ್ತಿದೆ.. ಮೊದಲೆ ಮುಖ ತಪ್ಪಿಸಿ ಓಡಾಡುತ್ತಿದ್ದ ‌ಮಂದಿಗೆ ಕೇವಲ ಕಣ್ಣು‌ಮಾತ್ರ ಕಾಣುವಂತೆ ಬಂದ ಮಾಸ್ಕಿನ ಯುಗ ವರದಾನವಾಗಿದೆ. ಮಾದ್ಯಮಗಳ ಬೇಳೆಬೇಯಿಸಿಕೊಳ್ಳುವ ಗುಣದಿಂದ ಧರ್ಮ ಧರ್ಮಗಳ ನಡುವೆ ಶೀತಲ ಸಮರ ನಡೆಯುತಿದೆ. ಯಾರೋ ಹತ್ತು ‌ಕಿಡಿಗೇಡಿಗಳ ಕೊಳಕು ಮನ ಸ್ಥಿತಿಯಿಂದಾಗಿ ಒಂದು ವರ್ಗದ ಮನುಷ್ಯರನ್ನೇ ಜಗತ್ತು ಸಂದೇಹದ ಕನ್ನಡಕ ದಿಂದ ನೋಡುವ ವಾತವರಣ ಸೃಷಿಯಾಗಿದೆ. ದುಡಿದು ನಿತ್ಯದ ಅನ್ನ ಉಣ್ಣುತ್ತಿದ್ದ ಶ್ರಮಜೀವಿ ನಿತ್ಯದ ಕೂಳಿಗೆ ಸ್ವಾಭಿಮಾನ ಬದಿಗಿಟ್ಟು ದಾನಿಗಳ ಕೈ ನೋಡುತ್ತಿದ್ದಾನೆ. ಮೂರು ಟೊಮ್ಯಾಟೊ ,ಎರಡು ಆಲೂಗೆಡ್ಡೆ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಒಳಗಿನ ಮನ್ನಣೆಯ ದಾಹಕ್ಕೆ ನೀರೆರುಯುವವರ ಸಂಖ್ಯೆ ಅತಿಯಾಗುತ್ತಿದೆ. ಆದರೆ.. ಇವೆಲ್ಲದರ ನಡುವೆ ನಮ್ಮ ನೇಗಿಲಯೋಗಿ,ಭಾರತದ ಬೆನ್ನೆಲುಬು ಮಾತ್ರ ಎಂದಿನಂತೆ  ಉತ್ತಿಬಿತ್ತುತ್ತಿದ್ದಾನೆ.. ಒಂದು ಸಮೀಕ್ಷೆಯ ಪ್ರಕಾರ ಕೊರೊನಾ ಕಾಲಕ್ಕೆ ಭಾರತದಲ್ಲಿ ತರಕಾರಿ ಸೊಪ್ಪು ಗಳ ಅವಕ ಮಾರುಕಟ್ಟೆಯಲ್ಲಿ ಅತಿಯೆನಿಸುವಷ್ಟೇ ಆಗಿದೆ. ಆದರೆ ವ್ಯವಸ್ಥೆ ಇಲ್ಲೂ ಒಂದು ತಪ್ಪೆಸಗಿದೆ..ರೈತನ ಸರಕನ್ನು ಎಪಿಎಮ್ ಸಿಯ ಒಳ ತರಿಸಿಕೊಂಡ ಅಧಿಕಾರಿಗಳು ಕೇವಲ ವ್ಯಾಪಾರಿ ವರ್ಗವನ್ನು ಮಾತ್ರ ಒಳಬಿಟ್ಟುಕೊಂಡಿದೆ. ರೈತರಿಂದ ನೇರ ಗ್ರಾಹಕ ವ್ಯವಸ್ಥೆ ಮಾತ್ರ ಇಂದಿನ ಕಂಗೆಟ್ಟ ಕೃಷಿಕನ ಬದುಕನ್ನು ನೇರೂಪು‌ ಮಾಡಬಲ್ಲದು ಎನುವುದು ಗೊತ್ತಿದ್ದರೂ ಜಾಣಗುರುಡು ತೋರಿದೆ. ಯಾರೊ ಹುಸಿದೈರ್ಯ ಇರುವ ರೈತಾಪಿ ಮಂದಿ ಇದನ್ನು ಪ್ರಶ್ನಿಸಿದ್ದಾರೆ. ಎಲ್ಲೊ ನಾಲ್ಕು ಮಂದಿಗೆ ನ್ಯಾಯ ಸಿಕ್ಕಿದೆ.. ಉಳಿದವರು ಮತ್ತದೆ‌ ಮಹಾನಗರದ  ತಮ್ಮ ಬಾಂಧವರು ಅಪ್ಲೋಡಿಸಿದ ತಮ್ಮದೆ ಹೊಲಗದ್ದೆಗಳಿಂದ ಹೋದ ತರಕಾರಿ ಹಣ್ಣುಗಳ ಬಗೆಬಗೆಯ ಅಡುಗೆಗಳನ್ನು ನೋಡಿ ಉಗುಳು ನುಂಗಿಕೊಳ್ಳುತ್ತಿದ್ದಾರೆ.‌ ಯಾಕೋ  ಇದೆಲ್ಲವನ್ನೂ ನೋಡುವಾಗ ಇನ್ನು ಕೃಷಿ ಕ್ಷೇತ್ರಕ್ಕೆ ಯಾವುದೇ ಭವಿಷ್ಯ ವಿಲ್ಲ ಎನುವುದು ಖಚಿತವಾಗುತ್ತದೆ. ಆದರೆ.. ಈ ಸಮಾಜದ ಅಥವಾ ಈ ವ್ಯವಸ್ಥೆಯ ಒಂದು ವೃತ್ತದಲ್ಲಿ ಮೂಲದಲ್ಲಿ ರೈತನಿದ್ದರೆ ಕೊನೆಯಲ್ಲಿ ಟೆಕ್ನಾಲಜಿ ಇದೆ ಎನುವುದು ಎಲ್ಲರಿಗೂ ತಿಳಿದ ವಿಚಾರವೇ. ಮೂಲದ ಬೇರನ್ನೇ ಗೆದ್ದಲು ಹಿಡಿಸಿದರೆ ವೃತ್ತ ಪೂರ್ತಿಯಾಗುವುದಾದರೂ ಹೇಗೆ.? ತೆರಿಗೆ ಕೇಂದ್ರೀಕೃತ ದೃಷ್ಟಿಯಿಂದ ನೋಡುವ  ಎಲ್ಲಾ ಸರ್ಕಾರಗಳು ರೈತನ ಬಾಯಿಗೆ ಬೆಣ್ಣೆ ಹಚ್ಚುವಂತೆ ಆಡುವ ನಾಟಕಗಳನ್ನು ಇನ್ನಾದರೂ ನಿಲ್ಲಿಸಬೇಕು.  ಸಾವಿರ ರೈತರ ಬದುಕು ಹಸನಾಗುವುದಕ್ಕೆ ಕೊಡಬಲ್ಲ  ಒಂದು ಬೆಂಬಲ ಬೆಲೆಯ ಮೊತ್ತವನ್ನು  ಹೊಟ್ಟೆ ತುಂಬಿದ ಉದ್ಯಮಿಯೊಬ್ಬನ ಬ್ಯಾಂಕ್ ಸಾಲ ಮನ್ನಾ ಮಾಡುವುದಕ್ಕೆ ಬಳಸುವುದನ್ನು ಸರ್ಕಾರಗಳು ನಿಲ್ಲಿಸಬೇಕು. ಕಾಲಕಾಲಕ್ಕೆ ರೈತೋಪಯೋಗಿ ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಗ್ರಾಮೀಣ ಬದುಕಿನ ಹಿತಕಾಯಬೇಕು. ವೈಯಕ್ತಿಕ ಆದಾಯವನ್ನು ಇಲ್ಲೂ ಹೆಚ್ಚಿಸುವ,ವೃತ್ತಿ ಘನತೆ ಎತ್ತಿಹಿಡಿಯುವ ಮನಸ್ಥಿತಿ ಅಧಿಕಾರಿಗಳಲ್ಲೂ ಬರಬೇಕು.  ಬೀಜ ಗೊಬ್ಬರ ನೀರಾವರಿಗೆ ಪ್ರಾದೇಶಿಕವಾಗಿ ಭಿನ್ನ ರೂಪುರೇಷೆಗಳನ್ನು ಕೈಗೊಂಡು  ರೈತರ ಗೌರವದ ಬದುಕಿಗೆ ಅನುವು ಮಾಡಬೇಕು. ಬ್ಯಾಂಕುಗಳು,ಅಧಿಕಾರಿಗಳು ರೈತನನ್ನು ಕೇವಲ ನೆಪಮಾತ್ರಕ್ಕೆ ಎತ್ತರದಲ್ಲಿರಿಸದೆ ವಾಸ್ತವದಲ್ಲೂ ಹಾಗೇ ನಡೆದುಕೊಳ್ಳಬೇಕು ಕೊರೊನಾ ಕಾಲದಲ್ಲಿ ಜಗತ್ತಿಗೊಂದು ಹೊಸ ಪಾಠ ದೊರಕಿದೆ. ಮಹಾನಗರದ ಮೋಹ ತುಸುವಾದರೂ ಕಡಿಮೆಯಾಗಿದೆ. ಹಳ್ಳಿಗಳೂ ಬದುಕಲು ಅರ್ಹ ಎನುವುದನ್ನು ಮಂದಿ ತಿಳಿದುಕೊಳ್ತಿದ್ದಾರೆ. ಅಯ್ಯೋ..ಊರಲ್ಲೊಂದು‌ ಮನೆಯಿದ್ದಿದ್ದರೆ,ತುಂಡು ನೆಲವಿದ್ದಿದ್ದರೆ ಎನ್ನುವ ಜನ ಹೆಚ್ಚಾಗ್ತಿದ್ದಾರೆ.. ಸರ್ಕಾರ ಇಂತಹ ಸನ್ನಿವೇಶಗಳ ಉಪಯೋಗ ಪಡೆಯಬೇಕು.. “ಕೆಟ್ಟಡುಗೆ ಅಟ್ಟವಳೇ ಜಾಣೆ’ ಎನ್ನುವ ಮಾತಿದೆ. ಗುಣಮಟ್ಟದ ಬದುಕನ್ನು ರೂಪಿಸುವಲ್ಲಿ , ಹಳ್ಳಿಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವ್ಯವಸ್ಥೆ ಗಮನ ಹರಿಸಲೇಬೇಕಾದ ದುರಿತ ಕಾಲ ಇದಾಗಿದೆಯಲ್ಲವೇ.? ************

ಲಾಕ್ ಡೌನ್ ದುರಿತಗಳು.. Read Post »

ಇತರೆ

ಪ್ರಸ್ತುತ

ವಿಶ್ವಾಸದ್ರೋಹಿ ನೇಪಾಳ ಸಂಗಮೇಶ ಎನ್ ಜವಾದಿ ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ ಯಾವತ್ತೂ – ಯಾವಾಗಲೂ ಅವಶ್ಯಕತೆ ಇದ್ದೆ ಇರುತ್ತದೆ ಎನ್ನುವುದು ಅಲ್ಲಿನವರಿಗೆ ಗೊತ್ತು ಆದರೆ ಇದಕ್ಕಿದಂತೆ ನಮ್ಮ ಸಹಾಯವನೆಲ್ಲಾ ನೇಪಾಳದವರು ಮರೆತು ಕೆಲವು ದಿನಗಳಿಂದ ಭಾರತದ ವಿರುದ್ಧವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪರಿಗಣಿಸುವುದು ಅತಿ ಅವಶ್ಯಕತೆ ಇದೆ. ಹಾಗೆ ನೇಪಾಳದವರ ಚೈನೀಸ್ ಫಾಸ್ಟ್ ಫುಡ್ ವೆಂಬ ಹೆಸರಿನ ಗೂಡಂಗಡಿ ಭಾರತದ ಯಾವ ರಾಜ್ಯ ಯಾವ ಜಿಲ್ಲೆ ಯಾವ ನಗರದಲ್ಲಿ ಇಲ್ಲ ಹೇಳಿ? ಬ್ಯುಟಿ ಪಾರ್ಲರ್ ಮಾಸಾಜ್ ಪಾರ್ಲರ್ ಗಳಲ್ಲಿ ಇವರ ಯುವತಿಯರದ್ದೇ ಕಾರುಬಾರು.ಇವರ ಯುವಕ ಯುವತಿಯರು ಭಾರತಕ್ಕೆ ಬಂದು ಇಲ್ಲಿ ದುಡಿದು ಇಲ್ಲೇ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ, ಅಂದು ನೇಪಾಳದಲ್ಲಿ ಭೂಕಂಪ ಆದಾಗ ಸಹಾಯಕ್ಕೆ ಮೊದಲು ಧಾವಿಸಿದು ಭಾರತ ದೇಶವೇ ಎನ್ನುವುದು ನೇಪಾಳದ ಇಂದಿನ ಕುತಂತ್ರಿ ಸ್ವಾರ್ಥ ರಾಜಕೀಯ ಮುಖಂಡರಿಗೆ ಮರೆತು ಹೋಗಿದೆ ಎನ್ನಬಹುದು,ಮರೆತು ಭವ್ಯ ಭಾರತದ ಬಗ್ಗೆ ಹಗುರವಾಗಿ ಅಲ್ಲಿನ ನೀಚ ರಾಜಕೀಯ ಪುಂಡರು ಮಾತನಾಡುತ್ತಿದ್ದಾರೆ. ಸಧ್ಯ ಈಗ ಸುನಾಮಿಯಂತೆ ಅಪ್ಪಳಿಸುತ್ತಿರುವ ಕೊರೋನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಭಾರತದಿಂದ ಸುಮಾರು 571 ಟನ್ ಗಳಷ್ಟೂ ವೈದ್ಯಕೀಯ ಉಪಕರಣ,ವೈದ್ಯಕೀಯ ಸವಲತ್ತು,ಆಹಾರ ಸಾಮಗ್ರಿ,ನೀರು, ಹಾಗೂ ಸಿಬ್ಬಂದಿಗಳನ್ನ ಕಳುಹಿಸಿ ಕೊಟ್ಟು ನೇಪಾಳಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಸ್ತ ಚಾಚಿದೆ. ಇಷ್ಟೆಲ್ಲಾ ನಿಸ್ವಾರ್ಥದಿಂದ ಸೇವೆ ಮಾಡಿರುವ ಮತ್ತು ನಿರಂತರವಾಗಿ ಸಹಾಯ ಮಾಡುತ್ತಿರುವಸಹಾಯವನ್ನು ಉಪಯೋಗಿಸಿಕೊಂಡು – ಉಪಯೋಗಿಸಿಕೊಳ್ಳುತ್ತಿರುವ ಇವರು ಇದೀಗ ಭಾರತದ ವಿರುದ್ಧವೇ ಹೀನ ಬುದ್ಧಿ ನೇಪಾಳ ಪ್ರದರ್ಶನ ಮಾಡುತ್ತಿದೆ. ಭಾರತದಿಂದ ನೀಡಿರುವ ಸಕಲ ಸೌಲಭ್ಯಗಳನ್ನು ಉಪಯೋಗಿಸಿ ಮೈಮರೆತು ಈಗ ನೇಪಾಳ ಇಂದು ಪ್ರಜಾಪ್ರಭುತ್ವ ವಿರೋಧಿ ದೇಶ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.ಚೀನಾ ಯಾವ ರೀತಿಯಲ್ಲಿ ನೇಪಾಳಕ್ಕೆ ಹೇಳುತ್ತದೇಯೂ ಹಾಗೆ ಅದೇ ತರಹ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದೆ.ಯಾವುದೇ ರೀತಿಯಲ್ಲಿಯೂ ಚೀನಾ,ನೇಪಾಳಕ್ಕೆ ಸಹಾಯ ಹಾಗೂ ಸಹಕಾರವಂತೂ ಖಂಡಿತಾ ಮಾಡಲ್ಲಾ ಆದರೆ ಚೀನಾದ ಕಪಟದಿಂದ  ಭಾರತದ ಮೇಲೆ ವೈಷಮ್ಯ ಕಾರುತ್ತಿದೆ ನೇಪಾಳ.ಇದಲ್ಲದೆತನ್ನ ದೇಶದ ಹೊಸ ಭೂಪಟವನ್ನ ಪ್ರಕಟಿಸಿ ಭಾರತದ ಸೀಮೆಯ ಕಾಲಪಾನಿ,ಹಾಗೂ ಲೆಪುಲೆಕ್ ತನ್ನದು ಭಾರತ ಇದನ್ನ ಅಕ್ರಮವಾಗಿ ಆಕ್ರಮಿಸಿ ಕೊಂಡಿದೆ ಹಾಗೂ ತಾನು ಇದನ್ನ ಭಾರತದಿಂದ ವಶಪಡಿಸಿಕೊಳ್ಳುತ್ತೇನೆ ಎಂದು ಹೇಳಿದೆ ಎಷ್ಟೇಲ್ಲಾ ಸಹಾಯ ಮಾಡಿದರು ನೇಪಾಳಕ್ಕೆ ಮಾನವೀಯತೆ ಗೊತ್ತಿಲ್ಲ ಅಂತಾ ಕಾಣುತ್ತದೆ. ಜೊತೆಗೆ ಸಹಕಾರತತ್ವದ,ಮಾನವೀಯ ಮೌಲ್ಯಗಳ, ಮೌಲ್ಯಾಧಾರಿತ ಸಿದ್ದಾಂತಗಳ ಕುರಿತು ಎಳಷ್ಟು ಕಾಳಜಿ ಇಲ್ಲವೆಂದು ನಮಗೆ ತೋರುತ್ತದೆ. ಇಂದಿನ ನೇಪಾಳದ ಪ್ರಧಾನಿ ಕೋರೋನಾ ವೈರಸ್ ಹರಡಿದ್ದು ಚೀನಾದ ವುಹಾನ್ ಅಲ್ಲ ಬದಲಾಗಿ ಭಾರತ ಹಾಗೂ ಇದು ಆತಿ ವೇಗವಾಗಿ ಸಮಾಜಕ್ಕೆ ಹರಡಿಸುತ್ತಿದೆ ಎಂದು ನೇಪಾಳದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ನೋಡಿ ಇದು ಎಂತಹ ಅವಿವೇಕದ ಮಾತು, ವಿಶ್ವ ವಿಶ್ವವೇ ಇಂದು ಚೀನಾದ ಮೇಲೆ ಕಿಡಿಕಾರುತ್ತಿದ್ದಾಗ (ಕಿಡಿಕಾರುತ್ತಿರುವಾಗ)ಈ ವಿಶ್ವಾಸದ್ರೋಹಿ ನೇಪಾಳ ಮಾತ್ರ ಭಾರತದ ವೈರಸ್ ಎಂದು ಬೊಬ್ಬೆ ಹಾಕುತ್ತಿದೆ. ಇದು ಹೀಗೆ ಹೇಳಿದರೆ ಭಾರತಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿಯಾಗಲ್ಲ,ಯಾಕೆಂದರೆ ಕೊರೋನಾ ವೈರಸ್ ಚೀನಾದ ಕುತಂತ್ರದಿಂದ ಜನ್ಮಪಡೆದ ವೈರಸ್ ಎಂಬುದು ಜಗತ್ತಿಗೆ ಗೊತ್ತಿದೆ. ಆದಕಾರಣ ನೇಪಾಳ ಏಷ್ಟೇ ನೀಚ ಬುದ್ಧಿ ತೋರಿಸಿದರು ಫಲಪ್ರದ ಖಂಡಿತಾವಾಗುದಿಲ್ಲ.ಇದರ ಹಿಂದೆ ಯಾರು ಇದ್ದಾರೆ ಅನ್ನುವುದು  ಜಗತ್ತಿಗೆ ಹಾಗೂ ನಮ್ಮಗೆಲ್ಲರಿಗೂ ಗೊತ್ತು ಅದೇ ಕುತಂತ್ರೀ ಚೀನಾ ಎಂಬುದು.ಆದರೆ ಚೀನಾದ ಬಗೆ ಒಂದೇ ಒಂದು ಮಾತನಾಡುತ್ತಿಲ್ಲ, ಯಾಕೇ ! ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆ ? ಚೀನಾವು ಯಾವ ಕುತಂತ್ರಿ ಬುದ್ಧಿ ಉಪಯೋಗಿಸಿ ನೇಪಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎನ್ನುವುದೇ ತಿಳಿಯದ ವಿಚಾರವಾಗಿದೆ ಮತ್ತು ಯಾವುದೇ ರೀತಿಯಲ್ಲಿಯೂ (ನೇಪಾಳಕ್ಕೆ) ಸಹಾಯ ಮಾಡದ ಜನವಿರೋಧಿ ದೇಶವಾದ ಚೀನಾದ ಬಗೆ ಮಾತನಾಡದೇ ಭಾರತ ದೇಶದ ಬಗ್ಗೆ ಮಾತನಾಡುತ್ತಿರುವ ನೇಪಾಳಕ್ಕೆ ಸಧ್ಯ ಬುದ್ಧಿ ಭ್ರಮೆ ಯಾಗಿದೆ ಎನ್ನಬಹುದು. ಭಾರತದಂತಹ ಬಲಿಷ್ಠ ದೇಶ ಮುಂದೆ ನೇಪಾಳ ಯಾವ ಲೆಕ್ಕ,ಯಾವುದೇ ರೀತಿಯಲ್ಲಿಯೂ ಭಾರತದ ಎದುರಿಗೆ ನಿಲ್ಲುವ ತಾಕತ್ತು ನೇಪಾಳಕ್ಕೆ ಖಂಡಿತಾ ಇಲ್ಲ,ಚೀನಾದ ಬೆಂಬಲದಿಂದ ಇಷ್ಟೊಂದು ಹಾರಡುತ್ತಿರುವ ನೇಪಾಳಕ್ಕೆ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎನ್ನುವುದು ಅಲ್ಲಿನ ಹೀನ ರಾಜಕೀಯ ಮುಖಂಡರು ಅರಿತು ನಡೆದರೆ ಉತ್ತಮ ಇಲ್ಲವಾದಲ್ಲಿ ನೀವು ಮಾಕಾಡೆ ಮಲಗುವ ದಿನ ದೂರವಿಲ್ಲ ಎನ್ನುವುದು ಮರೆಯಬೇಡಿ.———

ಪ್ರಸ್ತುತ Read Post »

ಇತರೆ

ಲಹರಿ

ಆತ್ಮಸಾಕ್ಷಿಯಾಗಿ… ಸುರೇಶ ಎನ್ ಶಿಕಾರಿಪುರ. ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ ಜನರ ನಾಲಗೆಯ ಮೇಲೆ ನಿಂದೆಯಾಗಿಯೂ ತಲೆಮಾರುಗಳು ಕಳೆದರೂ ಹಾಗೆಯೇ ಉಳಿಯುತ್ತದೆ‌. “ಉಂಡರೆ ಉಟ್ಟರೆ ಸೇರ ಮಂಡೆ ಬಾಚಿದರೆ ಸೇರ | ಕುಂತಲ್ಲಿ ಸೇರ ದುಸ್ಮಾನ | ಸತ್ತಾರೆ | ಉಂಡ್ಹೋಗಿ ಹೆಣವ ತಗುದೇವೊ||“ ಇದು ದುಷ್ಟರ ಸಾವಿಗೆ ಜನಪದ ಪ್ರತಿಕ್ರಿಯಿಸಿದ ರೀತಿ. ಬೂತಯ್ಯ ಸತ್ತಾಗ ಊರು ಪ್ರತಿಕ್ರಿಯಿಸಿದ ರೀತಿಯೂ ಹಾಗೇ. ಆದರೆ ಒಳ್ಳೆಯವರ ಸಾವನ್ನೂ ಪಟಾಕಿ ಹೊಡೆದು ಸಂಭ್ರಮಿಸುವ, ಕೇಕೆ ಹಾಕಿ ಕುಣಿಯುವ, ನಿಂದೆಗಳ ಮಳೆಗರೆದು ವಿಕೃತ ಆನಂದ ಅನುಭವಿಸುವ ವಿಕಾರಿಗಳೇ ತುಂಬಿರುವ ಅಸಹನೀಯ ವಾತಾವರಣದಲ್ಲಿ ನಾವೀಗ ಬದುಕುತ್ತಿದ್ದೇವೆ. ದುಷ್ಟರ ಸಾವು ನೋವು ಸಮಾಜದ ದೃಷ್ಟಿಯಲ್ಲಿ ಯಾವ ಸಹಾನುಭೂತಿಯನ್ನೂ ಗೌರವವನ್ನೂ ಪಡೆದುಕೊಳ್ಳುವುದಿಲ್ಲ. ಸಾವು ಸಾರ್ಥಕವಾಗಬೇಕಾದರೆ ಬದುಕು ಸಾರ್ಥಕವಾಗಿರಬೇಕು. ಆ ಸಾರ್ಥಕತೆ ನಮ್ಮಷ್ಟಕ್ಕೆ ನಮ್ಮದೇ ಆಗಿರದೆ ಅದು ನಾಲ್ಕು ಜನರೂ “ಸಾರ್ಥಕವಾಗಿ ಬದುಕಿದ್ನಪ್ಪ ಆ ಮನುಷ್ಯ ಪುಣ್ಯಾತ್ಮ” ಎನಿಸಿಕೊಳ್ಳುವಂತಿರಬೇಕು. ಅದಕ್ಕೇ ಯಾರೋ ಒಬ್ಬ ಕವಿ ಬರೆದುಬಿಟ್ಟ, “ಒಳಿತು ಮಾಡು ಮನುಸಾ… ನೀ ಇರೋದು ಮೂರು ದಿವಸ…” ಎಂದು. ನಾವು ಸರಳವಾಗಿ ಬದುಕಬೇಕು. ಕಪಟವಿಲ್ಲದ ನೆಡೆ ನುಡಿ ನೋಟ ಹೊಂದಿರಬೇಕು. ನನಗೆ ಸಾಲದೆಂದು ನನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಮರಿಮಕ್ಕಳಿಗೂ ಅವರ ಮರಿ ಮಕ್ಕಳಿಗೂ ಆಗುವಷ್ಟು ಕೂಡಿಡುವ ದುರಾಸೆ ಸಲ್ಲದು. ಸಂಪತ್ತು ಹೆಚ್ಚಿದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಾ ಹೋಗುತ್ತಾನೆ ಮಾತ್ರವಲ್ಲ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾನೆ. ದರ್ಪ, ಅಹಂ, ಮದ, ಉದಾಸೀನತೆ, ಕ್ರೌರ್ಯ ಅವನಲ್ಲಿ ಮನೆ ಮಾಡುತ್ತಾ ಹೋಗುತ್ತದೆ‌. ಅವನೊಬ್ಬ ಶೋಷಕನೂ ನಾಶಕನೂ ಆಗಿ ಮಾರ್ಪಾಡಾಗುತ್ತಾನೆ‌. ಮಾನವ ದಾನವನಾಗುವ ಪರಿ ಇದು. ಇಂಥವರ ಸಾವು ನೊಂದವರ ಸಂಭ್ರಮವಾಗುತ್ತದೆ. ಸಾವು ಅರ್ಥಪೂರ್ಣವಾಗಬೇಕು ಸತ್ತ ಮೇಲೂ ಬದುಕಬೇಕು ಎಂದರೆ ನಾವು ಹಣವನ್ನು ಸಿರಿಯನ್ನು ಕೀರ್ತಿಯನ್ನು ಅಧಿಕಾರವನ್ನು ಮೋಹಿಸುವುದನ್ನು ಸ್ವಾರ್ಥವನ್ನು ಸ್ವಪ್ರತಿಷ್ಟೆಯನ್ನು ಬಿಡಬೇಕು. ಮನದ ಮುಂದಣ ಆಸೆಯೆಂಬ ಮಾಯೆ ನಮ್ಮನ್ನು ಎಂದೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಿಡದು. ಮನುಷ್ಯನಿಗೆ ಹಂಚಿ ತಿನ್ನುವ ಗುಣ ಇರಬೇಕೋ ಹೊರತು ಹೊಂಚಿ ಹೊಡೆದು ತಿನ್ನುವ ಗುಣ ಅಲ್ಲ. ಯಾವನು ಅಂತರಂಗವೂ ಬಹಿರಂಗವೂ ಶುದ್ಧನಾಗಿರುತ್ತಾನೋ ಅವನು ಜಗತ್ತಿನ ಯಾವ ಶ್ರೀಮಂತನಿಗೂ ಕೆಳಗಿನವನಲ್ಲ. ಗುಣಶ್ರೀಯೇ ಮನುಷ್ಯನ ಶ್ರೀಮಂತಿಕೆ. ಗುಣವನ್ನು ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಹುಟ್ಟಿ ಹರಿಯುವ ಅಮೃತವಾಹಿನಿ ಅದನ್ನು ಮನುಷ್ಯನಿಂದ ಮನುಷ್ಯನಿಗೆ ಹರಿಸಬೇಕು.. ಮಾನವತೆಯ ಬೀಜವನ್ನು ಬಿತ್ತಿ ಬೆಳೆಯಬೇಕು. ನಮ್ಮ ದೇಹ ಹೊರಟುಹೋಗುವ ಹಕ್ಕಿಯನ್ನು ಕೂಡಿಹಾಕಿಕೊಂಡಿರುವ ತೊಗಲು ಮಾಂಸ ಮೂಳೆಯ ಪಂಜರ. ಹಕ್ಕಿಯು ಒಂದಲ್ಲಾ ಒಂದು ದಿನ ಬಂಧನದಿಂದ ಮುಕ್ತವಾಗಿ ಹಾರಿ ಹೋಗುತ್ತದೆ. ಅಸ್ತಿತ್ವ ಕಳೆದುಕೊಂಡ ದೇಹವೆಂಬ ಪಂಜರ ಕೊಳೆಯಲು ಆರಂಭಿಸುತ್ತದೆ. ಇದು ಸಕಲ ಪ್ರಾಣಿ ಜಗತ್ತಿನ ಬಾಳಿನ ಅಂತಿಮ ಸತ್ಯ. ಆದರೆ ಮನುಷ್ಯನನ್ನು ಹೊರತು ಪಡಿಸಿ ಬೇರಾವ ಪ್ರಾಣಿಗಳೂ ಅಪ್ರಾಕೃತಿಕವಾಗಿ ಬದುಕಲಾರವು ಅವುಗಳ ವರ್ತನೆಯಲ್ಲಿ ನಮ್ಮ ಸಣ್ಣತನಗಳಿಲ್ಲ. ನಮ್ಮ ದುರಾಸೆಗಳಿಲ್ಲ, ನಮ್ಮ ಧರ್ಮ ಜಾತಿಯ ಕಿತ್ತಾಟಗಳಿಲ್ಲ‌. ನಾಳೆಗೆ ಕೂಡಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥ ದಾಹವಿಲ್ಲ. ಗುಣದಲ್ಲಿ ಅವೇ ಮೇಲು ನಾವೇ ಕೀಳು. ಸದಾ ಅತೃಪ್ತಿಯಲ್ಲೇ ಬದುಕುವಾತ ಎಂದೂ ಸುಖವಾಗಿರಲಾರ ಮತ್ತು ಆತ ಇತರರನ್ನೂ ಸುಖವಾಗಿರಲು ಬಿಡಲಾರ. ಯಯಾತಿಯ ದಾಹ ಯಯಾತಿಯನ್ನೇ ಬಲಿ ಪಡೆಯಿತು. ಕಂಡಕಂಡ ಹೆಣ್ಣುಗಳನ್ನೆಲ್ಲಾ ಭೋಗಿಸಿದ, ಚಿರ ಯೌವ್ವನಕ್ಕಾಗಿ ಹಪಹಪಿಸಿದ, ಅವನ ದುರಾಸೆ ಅವನ ಅತೃಪ್ತಿ ಅವನ ದಾಹಕ್ಕೆ ತೃಷೆಗೆ ಎಲ್ಲೆಯೇ ಇರಲಿಲ್ಲ. ಮನುಷ್ಯತ್ವ ಕಳೆದುಕೊಂಡ ಕಾಮದ ಪುತ್ಥಳಿಯಾಗಿದ್ದ. ತನ್ನ ತೆವಲು ತನ್ನ ಸುಖಕ್ಕಾಗಿ ನಿಸರ್ಗದ ಧರ್ಮದ ವಿರುದ್ಧವಾದ ಹಾದಿಯಲ್ಲಿ ಗೂಳಿ ದನದಂತೆ ನುಗ್ಗುತ್ತಿದ್ದ ಆತ; ಅಕಾಲಿಕ ಮುಪ್ಪಿನ ಶಾಪಕ್ಕೆ ಗುರಿಯಾದ. ಕಡೆಗೆ ಮಗನ ಯೌವ್ವನಕ್ಕೂ ಕನ್ನ ಹಾಕಿದ. ಎಲ್ಲವೂ ಆದಮೇಲೆ ಅವನಿಗೆ ಬದುಕಿನ ಅಂತಿಮ ಸತ್ಯದ ಅರಿವಾಯಿತು ದರ್ಶನವಾಯಿತು. ತಪ್ಪಿಗಾಗಿ ಪರಿತಪಿಸಿದ ಪಶ್ಚಾತ್ತಾಪಬಟ್ಟ. ಆದರೆ ಶಿಕ್ಷೆಯಿಂದ ಆತನಿಗೆ ಮುಕ್ತಿಯಿಲ್ಲ. ಬಂದ ಮುಪ್ಪನ್ನು ನಿರಾಕರಿಸಲು ತಪ್ಪಿಸಿಕೊಳ್ಳಲು ದಾರಿಗಳಿಲ್ಲವೆಂಬ ಜೀವನ ಸತ್ಯದ ಅರಿವಾದಾಗ ಎಲ್ಲವನ್ನೂ ಬಿಟ್ಟುಕೊಟ್ಟು ನಿರಾಳನಾದ ಆತ “ಮಹಾತ್ಮ” ಎನಿಸಿಕೊಂಡ. ‌ನಾವು ನಮ್ಮೊಳಗಿನ ಯಯಾತಿಯ ದಾಹವನ್ನು ಕೊಂದುಕೊಳ್ಳಬೇಕು. ಸನ್ಮಾರ್ಗದ ಆಯ್ಕೆಯೇ ನಮ್ಮನ್ನು ಸುಖವಾಗಿ ಸುಂದರವಾಗಿ ಇಡುವುದು. ಬಾಳು ಇರುವುದು ಸ್ವೀಕರಣೆಗೋ ಹೊರತು ನಿರಾಕರಣೆಗಲ್ಲ. ಎಲ್ಲರಿಂದಲೂ ಕಲ್ಲು ಹೊಡೆಸಿಕೊಳ್ಳುವ ಕಾಬಾದ ಶಿಲೆಯಾಗಿ ಬಾಳುವುದಕ್ಕಿಂತ ಎಲ್ಲರೂ ಮೆಚ್ಚವ ಮನುಷ್ಯನಾಗಿ ನಾಲ್ಕು ಕಾಲ ಬಾಳಿದರೆ ಸಾಕು.. **************************

ಲಹರಿ Read Post »

ಇತರೆ

ಪ್ರಸ್ತುತ

ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು.         ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು.           ಆದರೆ ವೈಯಕ್ತಿಕವಾಗಿ ಕೂತು ಮೌನವಾಗಿ ಯೋಚಿಸಿದರೆ  ಮನುಷ್ಯನ ಅಲ್ಪತನದ ಅನಾವರಣವಾಗಿತ್ತ ಹೋಗುತ್ತದೆ. ದೊಡ್ಡ ದೊಡ್ಡ ವಿಚಾರಗಳ ಮಾತೇ ಬೇಡ;ನಮ್ಮ ನಿತ್ಯದ ಜೀವನದ ಮಗ್ಗಲುಗಳನ್ನು ವಿಮರ್ಶಿಸಿದಾಗಲೇ ನಮಗೆ ಅರಿವಾಗುತ್ತದೆ, “ನಮ್ಮ ನಿಜವಾದ ಅಗತ್ಯವೇನು??ಮತ್ತು ನಾವು ನಮಗೆ ಏನೆಲ್ಲಾ ಅಗತ್ಯ ಎಂದುಕೊಂಡಿದ್ದೇವೆ??”ಎಂದು.           ಈ ಕ್ವಾರಂಟೈನ್ ರಜೆಗಳಲ್ಲಿ ನಾನು ಅನೇಕ ಹಳೆ ಕಾಲದ  ತಿಂಡಿ ತಿನಿಸು ಗಳನ್ನು ಮಾಡಲು ಪ್ರಯತ್ನಿಸಿದೆ. ಚೆನ್ನಾಗಿ ಬಂತು ಕೂಡ. ಆದರೆ ದುರದೃಷ್ಟವಶಾತ್ ನಮ್ಮ ಮಕ್ಕಳಿಗೆಅವುಗಳ ಹೆಸರುಗಳೇ ಗೊತ್ತಿಲ್ಲ. ಆದರೆ  ಅದು  ಅವರ ತಪ್ಪಲ್ಲವೆಂದು ಸ್ಪಷ್ಟವಾಗಿ ನನಗೆ ಗೊತ್ತು.ಬಗೆ ಬಗೆಯ, ರುಚಿ ರುಚಿಯಾದ ತಿಂಡಿ ತಿನಿಸು ಗಳು ಮಾರ್ಕೆಟ್ ನಲ್ಲಿ ಹೋಗುವಾಗ,ಮಕ್ಕಳಿಗೂ ಮೋಹ ಆಚೆ ಕಡೆಗೆಯೇ ..ಜಾಸ್ತಿ. ನಮ್ಮಂತಹ ದೊಡ್ಡವರಿಗೂ ಸುಲಭವಾಗಿ ಕೆಲಸ ಆಗುತ್ತದಲ್ಲ ಎನ್ನುವ ಭಾವ. ಅದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಗೊತ್ತಿದ್ದರೂ ದಿವ್ಯ ನಿರ್ಲಕ್ಷ್ಯವನ್ನು ತಳೆದುಬಿಡುತ್ತೇವಲ್ಲ. ಈ ರಜೆ ಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ ತಾನೇ….??        ಎಷ್ಟೋ ಜನ ನನ್ನ ಗೆಳೆಯ, ಗೆಳತಿಯರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ನಾನು ಅವರವರ ಮಕ್ಕಳು ಮಾಡಿದ ಅಡಿಗೆಯದ್ದಿರಬಹುದು,ರಂಗೋಲಿ-ಪೇಂಟಿಂಗ್ ಗಳದ್ದಿರಬಹುದು,ಅವರು ಆಡುವ ಆಟಗಳದ್ದಿರಬಹುದು,…ಫೋಟೋ-ವಿಡಿಯೋ ಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಇದನ್ನು ನೋಡಿದ ನಿಮಗೆ ಏನನ್ನಿಸುತ್ತದೆ?ಮಕ್ಕಳು ಮೊದಲು ಪೇಂಟಿಂಗ್..ರಂಗೋಲಿ ಗಳನ್ನು ಮಾಡದೆ, ಈಗ ಮಾತ್ರ ಮಾಡುತ್ತಿದ್ದಾರೆ ಎಂದೇ..?? ಮೊದಲು ಮಾಡುತ್ತಿದ್ದರೂ ಈಗ ಮಾಡುತ್ತಿರುವುದು ಮಾತ್ರ ರಜೆಯಲ್ಲಿ ಕೆಲಸವಿಲ್ಲದೆ ಖಾಲಿ ಕೂತ ಅಪ್ಪ-ಅಮ್ಮಂದಿರಿಗೆ ಕಾಣಿಸುತ್ತಿದೆ ಎಂದೇ..??ಅಲ್ಲ..ಎಲ್ಲರ ಹಾಗೆ ತಾನೂ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂದು ಮಗು ಬಯಸುತ್ತಿದೆ ಎಂದೇ..?? ಯಾವ ರೀತಿಯಲ್ಲಿ ಅಳೆದು ತೂಗಿ ನೋಡಿದರೂ ಇದರಲ್ಲಿ ಎಳ್ಳಷ್ಟೂ ತಪ್ಪು ಕಾಣಿಸುತ್ತಿಲ್ಲವಲ್ಲ. ಈಗ …ಈ ರಜೆ ಗಳಲ್ಲಿ ಮಾತ್ರ ಮಕ್ಕಳು, ಈ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದರೆ…ಅವರು ಇಷ್ಟು ಸಮಯದ ತಮ್ಮ ಶೈಕ್ಷಣಿಕ “ಜೀತದಿಂದ”ಬಿಡುಗಡೆಹೊಂದಿ,ತಮ್ಮ ತನವನ್ನು ಅರಸುತ್ತಿದ್ದಾರೆಂದು ಅರ್ಥವಲ್ಲವೇ??? ಈ ಹಿಂದೆ ಶಾಲಾಸಮಯಗಳಲ್ಲಿ ಶಿಕ್ಷಕರ,ಪೋಷಕರ ಕಣ್ಣು ತಪ್ಪಿಸಿ ತಮ್ಮ ಇಷ್ಟ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು,ಈಗ ಈ ರಜೆ ಗಳಲ್ಲಿ ತಮ್ಮ ತಮ್ಮ ಪೋಷಕರ ಪ್ರೋತ್ಸಾಹದಿಂದ ಆ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದಾರಾದರೆ, ಆ ಮಕ್ಕಳ ಆತ್ಮಸ್ತೈರ್ಯ ಅದೆಷ್ಟು ಪಟ್ಟು ಹೆಚ್ಚಾಗಿರಬೇಡ??ಯೋಚಿಸಿ ನೋಡಿ.            ನಮ್ಮ ಕಾಲದ ಕುಂಟೆಬಿಲ್ಲೆ,ಲಗೋರಿ ಇತ್ಯಾದಿ ಆಟಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಟ್ಟ,ಅವರು ಖುಷಿಯಿಂದ ಅವುಗಳನ್ನು ಆಡುವಾಗ ಅದೆಷ್ಟು ಪುಳಕಿತಳಾಗಿದ್ದೇನೆ. ಮುಸ್ಸಂಜೆಯ ವೇಳೆಯಲ್ಲಿ ಅವರನ್ನು ಕೈ-ಕಾಲು ತೊಳೆದು,ದೇವರ ಮುಂದೆ ಕೂರಿಸಿ,ಭಜನೆ-ಶ್ಲೋಕ ಗಳನ್ನು ಹೇಳಿಸುವಾಗ ಅದೆಷ್ಟು ಧನ್ಯತಾಭಾವ ಆವರಿಸುತ್ತದೆ. ಮಕ್ಕಳಿಗೆ ರಜಯಲ್ಲಿ ಪೇಟೆ ಸುತ್ತುವುದು,ಪ್ರವಾಸ ಕರೆದುಕೊಂಡು ಹೋಗುವುದು ಇತ್ಯಾದಿ ಯಾವುದೂ ಇಲ್ಲದೆ ತೋಟದಲ್ಲಿ ವಾಕಿಂಗ್ ಹೋಗಿ ಬರುವುದು , ಅಡಿಕೆ-ತೆಂಗಿನಕಾಯಿ ಹೆಕ್ಕಿ ತರುವುದು , ಗುಡ್ಡೆಗೆ ಹೋಗಿ ಗೇರುಹಣ್ಣು ಕೊಯ್ಯುವುದು ಇತ್ಯಾದಿ ಸಣ್ಣ ಸಣ್ಣ ಚಟುವಟಿಕೆಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮ ದೊಂದಿಗೆ ಹಳ್ಳಿ ಜೀವನದ ಕಿರುಪರಿಚಯ ಮಾಡಿ ಕೊಟ್ಟಂತೆ ಆಗುವುದಿಲ್ಲವೇ? ಈ ತರಹದ ಬೇಸತ್ತು ಹೋಗುವ ದೀರ್ಘ ರಜೆಗಳಿಲ್ಲದೇ ಹೋಗಿದ್ದರೆ ಮಕ್ಕಳಿಂದ ಇದನ್ನೆಲ್ಲ ಮಾಡಿಸಲು ಸಾಧ್ಯವಿತ್ತೇ..            ಅಂದಾಜು ಮೂವತ್ತರಿಂದ ಮೂವತ್ತೈದು ವರ್ಷಗಳನ್ನು ಹಳೆಯ ರಾಮಾಯಣ, ಮಹಾಭಾರತದ ಬಗೆಗಿನ ಟಿವಿ ಧಾರಾವಾಹಿ ಗಳ ಮರುಪ್ರಸಾರದ ಒಂದು ಎಪಿಸೋಡು ಗಳನ್ನೂ ತಪ್ಪಿಸದೇ ಅತ್ಯಂತ ಆಸಕ್ತಿಯಿಂದ ನಮ್ಮ ಮಕ್ಕಳು ನೋಡುವ ಹಾಗೆ ಮಾಡಿದ ಈ ಕ್ವಾರಂಟೈನ್ ರಜೆಗೆ ಅದ್ಹೇಗೆ ಧನ್ಯವಾದ ಹೇಳಲಿ. ಟಿವಿ ಯಲ್ಲಿ ಬರುವ ಹಾಳು ಮೂಳು ಧಾರಾವಾಹಿ, ರಿಯಾಲಿಟಿ ಷೋ ಗಳನ್ನು ಕಣ್ಣು ಎವೆಯಿಕ್ಕದೆ ನೋಡುವ ನಮ್ಮ ಮಕ್ಕಳು, ಅಷ್ಟೇ ಶ್ರದ್ಧೆಯಿಂದ ರಾಮಾಯಣ, ಮಹಾಭಾರತವನ್ನೂ ನೋಡುತ್ತಾರೆಂದರೆ ಇದರ ಅರ್ಥ ಏನು?? ನಾವು ಆದರ್ಶವಂದು ಬೋಧಿಸುವ ವಿಚಾರಗಳಲ್ಲೇ ದೋಷವಿದೆ ಎಂದಲ್ಲ?? ಒಳ್ಳೆಯ ವಿಚಾರಗಳು ನಮಗ್ಯಾರಿಗೂ ಬೇಡವಾಗಿದೆ ಎಂದಲ್ಲವೇ ?? ನೈತಿಕತೆಯ ವ್ಯಾಖ್ಯಾನ ವೇ ಬದಲಾಗಿದೆ ಎಂದಲ್ಲವೇ?? ಸುಮ್ಮನೆ ನಮ್ಮ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ದುಡ್ಡು ಮಾಡುವ ದಂಧೆಕೋರರ ನಡುವೆ ಅವರ ಬಾಲ್ಯ ಮಾರಾಟವಾಗುತ್ತಿದೆ ,ಅಷ್ಟೇ .. ಇದನ್ನೆಲ್ಲ ಅರಿತುಕೊಳ್ಳಲು ಇದಕ್ಕಿಂತ ಒಳ್ಳೆಯ ಸುವರ್ಣ ಅವಕಾಶ ಬೇರೆ ಸಿಕ್ಕೀತೇ??        ನಮ್ಮ ಬಾಲ್ಯದಲ್ಲಿ ಮತ್ತು ತೀರ ಇತ್ತೀಚಿನ ವರೆಗೂ ಊರು ಬಿಟ್ಟು ಪೇಟೆ-ಪಟ್ಟಣ ಗಳಲ್ಲಿ ವಾಸಿಸುವ,ದೇಶ ಬಿಟ್ಟು  ವಿದೇಶದಲ್ಲಿರುವವರು, ಉದ್ಯೋಗ ನಿಮಿತ್ತವೇ ಹೋಗಿದ್ದರೂ ಅಪರೂಪಕ್ಕೊಮ್ಮೆ ಊರಿಗೆ ಮರಳುವಾಗ ಅವರಿಗೆ ಸಿಗುವ ಮರ್ಯಾದೆ ನೋಡಿದರೆ, ಊರಿನ ದೇವರ  ಜಾತ್ರೆ ಸುರುವಾಗಿದೆಯೇನೋ ಎಂದೆನಿಸುತ್ತದೆ.ಅಂತಹವರಲ್ಲಿ ಅನೇಕರು ಇಂದು ಪೇಟೆ-ಪಟ್ಟಣಗಳೆಂಬ ಕಾಂಕ್ರೀಟ್ ಕಾಡಿನಲ್ಲಿ,ಒಂಟೊಂಟಿ ಮನೆಗಳಲ್ಲಿ, ಬಾಗಿಲು ಜಡಿದು ಅಕ್ಷರಷಃ ಬಂಧಿಗಳಂತಾಗಿರುವ ಈ ಸಮಯದಲ್ಲಿ ತೋಟ,ಗುಡ್ಡ, ಹಸು,ಕರು ಇತ್ಯಾದಿ ವಿಶಾಲ ವ್ಯಾಪ್ತಿ ಯಲ್ಲಿರುವ ನಮ್ಮ ಹಳ್ಳಿಗರು ಅದೆಷ್ಟು ಧನ್ಯರು ಎಂದೆನಿಸದೇ ಇದ್ದರೆ ಖಂಡಿತ ಆತವಂಚನೆಯಾಗುತ್ತದೆ          ಆದರೂ ಕೂಳ್ಳುಬಾಕತನದಿಂದ ಹಳ್ಳಿಗರೂ ಹೊರಗುಳಿದಿಲ್ಲ. ಯಾವುದು ಬೇಕು, ಯಾವುದು ಬೇಡ ಎಂದು ಕಿಂಚಿತ್ತೂ ಯೋಚಿಸದೆ ಸ್ಪರ್ಧೆಗೆ ಬಿದ್ದಂತೆ ಕೊಂಡು ತಂದು ಮನೆಯಲ್ಲಿ ರಾಶಿ ಹಾಕಿದ ಯಾವುದೇ  ನಿರ್ಜೀವ ವಸ್ತುಗಳಿಗೂ ಬೆಲೆಯೇ ಇಲ್ಲ ಎಂದು ಕೊರೊನ ಹೇಳಿ ಕೊಟ್ಟಿದೆ. ತೋಟಕ್ಕೆ,ಹಟ್ಟಿಗೆ ಹೋಗುವಾಗ ಬಳಸುವ ಸ್ಲಿಪ್ಪರ್ ಒಂದನ್ನು ಬಿಟ್ಟು, ಆಸೆಬುರುಕುತನದಿಂದ ಕೊಂಡು ರಾಶಿ ಹಾಕಿದ ಎಂಟ್ಹತ್ತು ಜತೆ ಚಪ್ಪಲಿ ಗಳು ಉಪಯೋಗಕ್ಕೇ ಬರುತ್ತಿಲ್ಲ. ಮನೆಯಲ್ಲಿ ದಿನವೂ ಧರಿಸುವ ಉಡುಪುಗಳನ್ನು ಬಿಟ್ಟು ಕಪಾಟುಗಳಲ್ಲಿ ಪೇರಿಸಿಟ್ಟ ಬಣ್ಣ ಬಣ್ಣದ, ಬಗೆ ಬಗೆಯ ರಾಶಿ ರಾಶಿ ಉಡುಪುಗಳಿಗೆ ಕೆಲಸವೇ ಇಲ್ಲವಾಗಿದೆ.          ಕಾಂಕ್ರೀಟು ಹಾಕಿ ಹಾಕಿ ಕಟ್ಟಿದ ಬಿಲ್ಡಿಂಗ್ ಗಳಾಗಲೀ…ಅಪಾರ ಸಂಖ್ಯೆಯಲ್ಲಿ ಮರಗಳ ಮಾರಣಹೋಮ ಮಾಡಿ ರಚಿಸಿದ ರಸ್ತೆಗಳಾಗಲೀ…ಇವತ್ತು ನಮ್ಮ ಉಪಯೋಗಕ್ಕೆ ಬರುತ್ತಿಲ್ಲ. ಉಪಯೋಗಕ್ಕೆ ಬರುತ್ತಿರುವುದೇನಿದ್ದರೂ, ಮಣ್ಣಿನಲ್ಲಿ ಬೆಳೆದ ಹಣ್ಣು, ತರಕಾರಿ, ದವಸ,ಧಾನ್ಯ ಮಾತ್ರ.ಹಾಗಾದರೆ ನಮಗೆ ನಿಜವಾಗಿಯೂ ಏನು ಬೇಕು, ಏನು ಬೇಡ ಎಂದು ಯೋಚಿಸುವುದರಲ್ಲಿ ನಾವು ಸೋತಿದ್ದೇವೆ ಎಂದರ್ಥವಲ್ಲವೇ??          ಈ ಕೊರೊನ ರಜೆ ಯೋಚಿಸಲು ನಮಗೊಂದು ಉತ್ತಮ ಸಮಯಾವಕಾಶ ವನ್ನು ಕೊಟ್ಟಿದೆ. ಹಿಂದಿನ ತಪ್ಪುಗಳನ್ನು  ಸರಿಪಡಿಸಿ, ಬಲಹೀನರನ್ನು ಎತ್ತಿ ಎಬ್ಬಿಸಿ ಹೆಗಲು ಕೊಡುವುದಕ್ಕಾಗಿ ಒಳ್ಳೆಯ ಅವಕಾಶ ವನ್ನು ಒದಗಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಿಜಕ್ಕೂ ನಾವು ಮಾಡಬೇಕಾದ ದ್ದೇನು ಎಂದು ಯೋಚಿಸಿ ಕಾರ್ಯಗತಗೊಳಿಸುವ ಮೈದಾನ ವನ್ನು  ಒದಗಿಸಿದೆ. ನಾಡು,ಅಥವಾ ದೇಶ ಕಾಯಲು ಸೈನಿಕನಾಗಿ ಗಡಿಗೇ ಹೋಗಬೇಕಿಲ್ಲ, ನಮ್ಮ ನಮ್ಮ ಮಿತಿಯನ್ನರಿತು ವ್ಯಾಪ್ತಿಯನ್ನು ಬಳಸಿ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಬದುಕಿ “ಅನನ್ಯ”ರಾಗಬಹುದೆಂಬ ಬಹುದೊಡ್ಡ ಪಾಠವನ್ನೇ ಕಲಿಸಿದೆ.

ಪ್ರಸ್ತುತ Read Post »

ಇತರೆ

ಪ್ರಸ್ತುತ

ಮರುವಲಸೆಯ ಮಹಾಪರ್ವಕ್ಕೆ ಪರಿಹಾರ ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು. ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ ಸಿಕ್ಕೊಡನೆ ತಮ್ಮ ಊರುಗಳಿಗೆ ಧಾವಿಸುತ್ತಿದ್ದಾರೆ. ಈ ಮರುವಲಸೆ ಕೇವಲ ದೈಹಿಕ ಶ್ರಮಿಕರಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ದೇಶದ ನಗರಗಳಿಂದ ಮಾತ್ರ ನಡೆದಿಲ್ಲ. ಪ್ರತಿಯೊಂದು ರಾಜ್ಯದಿಂದಲೂ ಜನರು ಇತರೆಡೆಗೆ ವಲಸೆ ಹೋಗಿದ್ದಾರಾದರೂ ಉತ್ತರ ಭಾರತದಿಂದ ದೈಹಿಕ ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿರುವದು ನಿಚ್ಚಳವಾಗಿ ಕಾಣುತ್ತಿದೆ. ದೇಶದೊಳಗಡೆ ಮಾತ್ರವಲ್ಲ, ಇತರ ದೇಶಗಳಿಗೂ ದೈಹಿಕ ಶ್ರಮಿಕರು ವಲಸೆ ಹೋಗಿದ್ದು, ಅವರಲ್ಲಿ ಹೆಚ್ಚಿನವರು ವಾಪಸು ಬರುವುದು ನಿಶ್ಚಿತ. ಆರ್ಥಿಕ ಹಿಂಜರಿತ ಇಡೀ ಜಗತ್ತನ್ನು ಕಾಡುತ್ತಿದೆ. ಎಲ್ಲೆಡೆ ಉದ್ಯೋಗ ಕಡಿತ ಪ್ರಾರಂಭವಾಗಿದೆ. ಪ್ರತಿಯೊಂದು ದೇಶವೂ ತನ್ನ ನಾಗರಿಕರ ಉದ್ಯೋಗಾವಕಾಶ ರಕ್ಷಣೆಗೆ ಮುಂದಾಗುತ್ತಿದೆ. ಇದರ ಪರಿಣಾಮದಿಂದಾಗಿ ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋಗಿರುವವರಲ್ಲಿ ಹಲವರು ಉದ್ಯೋಗ ಕಳೆದುಕೊಂಡು ತಮ್ಮ ದೇಶಗಳಿಗೆ ಹಿಂದಿರುಗಬೇಕಾಗಿದೆ. ಇವರಲ್ಲಿ ದೈಹಿಕ ಶ್ರಮಿಕರು ಹಾಗೂ ಬೌದ್ಧಿಕ ಶ್ರಮಿಕರು ( ತಂತ್ರಜ್ಞರು, ಇಂಜಿನಿಯರ್, ವೈದ್ಯರು ಇತ್ಯಾದಿ) ಸೇರಿದ್ದಾರೆ. ಮರುವಲಸೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ನಡೆಯಲಿದೆ. ಆದರೆ ಮರುವಲಸಿಗರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾಕೆಂದರೆ ಜಗತ್ತಿನ ಬಹುತೇಕ ಎಲ್ಲಾ ದೇಶಗಳಿಗೂ ಉದ್ಯೋಗ ಹುಡುಕಿಕೊಂಡು ಭಾರತೀಯರು ಹೋಗಿದ್ದಾರೆ. ತಾವು ವಾಸಿಸುವ ಪ್ರದೇಶದಲ್ಲಿ ದುಡಿಮೆಯ ಅವಕಾಶ ಇಲ್ಲದ ಕಾರಣಕ್ಕೆ ಬೇರೆಡೆ ವಲಸೆ ಹೋದವರು, ತಮ್ಮ ದೇಶ ಅಥವಾ ಊರಿಗೆ ವಾಪಸು ಬಂದೊಡನೆ ಅವರಿಗೆ ಉದ್ಯೋಗವಕಾಶ ಸಿಗಲು ಸಾಧ್ಯವೇ? ಕೃಷಿ ಭೂಮಿ ಉಳ್ಳವರು ಬೇಸಾಯ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಬಹುದು. ಕೆಲವರು ಚಿಕ್ಕ ಪುಟ್ಟ ವ್ಯವಹಾರ , ಚಿಲ್ಲರೆ ಮಾರಾಟ ಮಳಿಗೆ ತೆಗೆಯಬಹುದು. ಆದರೆ ಹೆಚ್ಚಿನವರಿಗೆ ಯಾವುದೇ ದುಡಿಮೆಯ ಅವಕಾಶ ಸಿಗಲಾರದು. ಆಧಾರ ರಹಿತ, ಅವೈಚಾರಿಕ,ಅತಾರ್ಕಿಕ ಮಾಹಿತಿ ಸೃಷ್ಟಿಸಿ, ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವ ಕೊರೊನಾ ಜೀವ ಭಯದಿಂದ ಬೆದರಿರುವ ಜನರು ಪೋಲೀಸರ ಲಾಠಿ ಏಟಿಗೆ ಹೆದರಿ ಲಾಕ್-ಡೌನ್ ಪಾಲಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯ ನಂತರ ಆರ್ಥಿಕ ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಬರಲು ವರ್ಷಗಳೇ ತಗಲಬಹುದು. ನಗರಗಳಲ್ಲಿರುವ ಉದ್ಯೋಗದಾತರು ಕರೆದರೂ, ಅಲ್ಲಿಂದ ವಾಪಸ್ಸು ಬಂದವರು ಪುನಃ ಹೋಗುವ ಧೈರ್ಯ ಮಾಡಲಾರರು. ಯಾಕೆಂದರೆ ಮತ್ತೆ ಪುನಃ ಏಕಾಏಕಿಯಾಗಿ ಲಾಕ್ಡೌನ್ ಹೇರಿಯಾರೆಂಬ ಭಯ ಅವರನ್ನು ಕಾಡುತ್ತಿದೆ. ತಮ್ಮನ್ನು ಯಾವ ರೀತಿಯಲ್ಲಿ ಉದ್ಯಮಿಗಳು ಬಳಸಿ ಬಿಸಾಡುತ್ತಾರೆಂಬುದನ್ನು ಲಾಕ್ಡೌನ್ ಅವಧಿಯ ನರಕಯಾತನೆಯಿಂದ ಕಾರ್ಮಿಕರು ಅರಿತಿದ್ದಾರೆ. ಇನ್ನೊಂದೆಡೆ ಆದಾಯದ ಕೊರತೆ ಅನುಭವಿಸುತ್ತಿರುವ ಮಧ್ಯಮ ವರ್ಗ, ಖರೀದಿ ಶಕ್ತಿಯಿಲ್ಲದ ಬಡವರಿಂದಾಗಿ ಉದ್ಯಮಗಳ ಉತ್ಪನ್ನಗಳು ಮಾರಾಟವಾಗದೇ ಅವು ಹಿನ್ನೆಡೆ ಅನುಭವಿಸುತ್ತಿವೆ. ಇದರಿಂದಾಗಿ ಮೊದಲಿನಂತೆ ಪೂರ್ತಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಅಗತ್ಯವೂ ಅವರಿಗಿಲ್ಲ. ಒಂದೆಡೆ ನಗರ ಕೇಂದ್ರಿತ ಉದ್ದಿಮೆಗಳು, ಕಾರ್ಮಿಕರ ಅಭಾವ ಎದುರಿಸುವ, ಮರುವಲಸೆ ಹೋಗಿರುವ ಕಾರ್ಮಿಕರು ತಮ್ಮ ಊರುಗಳಲ್ಲಿ ನಿರುದ್ಯೋಗ ಪೀಡಿತರಾಗಿರುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಭಾಯಿಸುವ ಯಾವ ಯೋಚನೆ ಅಥವಾ ಯೋಜನೆ ಯಾವ ರಾಜಕೀಯ ಪಕ್ಷದ ಬಳಿಯೂ ಇಲ್ಲ. ಈ ಸಮಸ್ಯೆಯ ಸರಳ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಜನರ ಸಹಭಾಗಿತ್ವದಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳು ಅರ್ಥಾತ್ ಜನಾಧಿಕಾರ ವ್ಯವಸ್ಥೆಯ ಅನುಷ್ಠಾನ. ಉದ್ದಿಮೆಗಳು ಕೇಂದ್ರೀಕೃತವಾಗಿ ಸ್ಥಾಪಿತವಾಗಲು ಮೂಲ ಕಾರಣ ಬಂಡವಾಳವಾದಿ ಚಿಂತನೆಗಳು. ಲಾಭಗಳಿಕೆಯ ಹೆಚ್ಚಳದ ತವಕದಲ್ಲಿ ಸ್ಥಳೀಯ ಸಂಪನ್ಮೂಲಗಳ ಕುರಿತಾದ ನಿರ್ಲಕ್ಷ್ಯ , ಸಂಪನ್ಮೂಲಗಳ ದುರ್ಬಳಕೆ, ಕೇಂದ್ರಿಕೃತ ಉತ್ಪಾದನೆಯಿಂದ ವೆಚ್ಚ ತಗ್ಗಿಸುವ ದಿಸೆಯಲ್ಲಿ ನಡೆಯುತ್ತಿರುವ ಉದ್ಯಮಿಗಳ ನಡೆಯನ್ನೂ ಬೆಂಬಲಿಸುವ ಸರ್ಕಾರದ ಆರ್ಥಿಕ ನೀತಿಗಳೇ ನಗರಾಭಿಮುಖಿ ವಲಸೆಗೆ ಕಾರಣ. ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳು ಇಲ್ಲವೆಂಬ ಬಂಡವಾಳವಾದಿ ಚಿಂತನೆಗೆ, ಸಂಪನ್ಮೂಲಗಳ ಕುರಿತಾದ ಸೀಮಿತ ಚಿಂತನೆಯೇ ಕಾರಣ. ಪೃಥ್ವಿಯ ಎಲ್ಲಾ ಭಾಗಗಳಲ್ಲಿಯೂ ಪ್ರಕೃತಿ ಒಂದಿಲ್ಲೊಂದು ವಿಧದ ಸಂಪನ್ಮೂಲಗಳನ್ನು ನೀಡಿದೆ. ಹಾಗೆ ಅದನ್ನು ಗುರ್ತಿಸಿ, ಬಳಸುವ ಬುದ್ಧಿಶಕ್ತಿಯನ್ನು ಮಾನವನಿಗೂ ನೀಡಿದೆ. ತಾಯಿಯಲ್ಲಿ ಎದೆ ಹಾಲು ಸೃಷ್ಟಿ ಮಾಡಿ, ಭೂಮಿಗೆ ಬರುವ ಮುನ್ನವೇ ಮಗುವಿನ ಕುರಿತಾಗಿ ಪ್ರಕೃತಿ ಕಾಳಜಿ ತೋರುತ್ತದೆ. ಅಂದರೆ ಯಾವುದೇ ಪ್ರದೇಶದಲ್ಲಿ ಜನವಸತಿ ಇದೆಯೆಂದಾದರೆ ಅವರ ಬದುಕಿಗೆ ಬೇಕಾಗುವಷ್ಟು ಸಂಪನ್ಮೂಲಗಳು ಆ ಪ್ರದೇಶದಲ್ಲಿ ಇದೆಯೆಂದೇ ಅರ್ಥ. ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ಜನರಸಹಭಾಗಿತ್ವದೊಂದಿಗೆ ,ಆ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ದುಡಿಮೆಯ ಅವಕಾಶ ಸೃಷ್ಟಿಸುವ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ( ಕೃಷಿ, ಉದ್ದಿಮೆ, ವ್ಯಾಪಾರ, ಸೇವೆ ಇತ್ಯಾದಿ) ನಡೆಸುವ ಯೋಜನೆಗಳು ರೂಪುಗೊಳ್ಳಬೇಕು. ಬ್ಲಾಕ್ ಮಟ್ಟದಲ್ಲಿ ಅಂದರೆ ತಳಮಟ್ಟದಲ್ಲಿ ಯೋಜನೆಗಳು ರೂಪಿತವಾಗಿ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಮೇಲಿನಿಂದ ಕೆಳಗೆ ಹರಿದು ಬರುವ ಯೋಜನೆಗಳು ನಿಷ್ಪ್ರಯೋಜಕ. ಇಂದು ಅನುಸರಿಸುತ್ತಿರುವ ಕೇಂದ್ರೀಕೃತ ಅರ್ಥವ್ಯವಸ್ಥೆಯ ಬದಲಿಗೆ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯನ್ನು ಅನುಷ್ಟಾನಗೊಲಿಸಬೇಕು ಅಂದರೆ ಜನಾಧಿಕಾರದ ವ್ಯವಸ್ಥೆಯಿಂದ ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸುಲಭ ಸಾಧ್ಯ. ಹೊರ ದೇಶಗಳ ಹೂಡಿಕೆದಾರರಿಂದ ಅಥವಾ ಬೇರೆ ದೇಶಗಳನ್ನ ಬಿಟ್ಟು ಬರುತ್ತಿರುವ ಕಂಪನಿಗಳಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಂಬ ಭ್ರಮೆಯಲ್ಲೇ ಇದ್ದರೆ, ಮರು ವಲಸೆಯ ಪರಿಣಾಮದಿಂದಾಗಿ ಉಂಟಾಗುವ ನಿರುದ್ಯೋಗ, ಕಳ್ಳತನ, ದರೋಡೆ, ಹಿಂಸಾಚಾರ, ಸಾಮಾಜಿಕ ಸಂಘರ್ಷಗಳನ್ನು ಎದುರಿಸುವುದು ಅನಿವಾರ್ಯ. ********* ಗಣೇಶ ಭಟ್ಟ ಶಿರಸಿ

ಪ್ರಸ್ತುತ Read Post »

ಇತರೆ

ಟಂಕಾ

ಟಂಕಾ ತೇಜಾವತಿ.ಹೆಚ್.ಡಿ.   ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಛ ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ ಟಂಕಾ-01 ನಿನ್ನ ಹೃದಯ ನನ್ನರಮನೆಯಾಗಿ ಅಧಿಪತ್ಯವ ಕೈಸೆರೆ ಹಿಡಿದಿದೆ ಕೈಜಾರಿ ಬೀಳದಂತೆ!! ಟಂಕಾ-02 ಹಸಿರಾಗಿದೆ ತ್ರಾಣ ಹೃದಯದಲ್ಲಿ ನಿನ್ನೊಲುಮೆಯ ಧಾರೆಯಲ್ಲಿ ಮಿಂದಿದೆ ಹಸಿರಿನ ಉಸಿರು ! ಟಂಕಾ-03 ಟಂಕಾ ಕಲಿಕೆ ಹೊಸತನದ ಅಲೆ ಕವಿಯ ಭಾವ ಬರಹಗಳೆಲ್ಲವೂ ನಿನ್ನ ಅಲಂಕಾರವೇ!! ಟಂಕಾ -04 ವರ್ಷಸಿಂಚನ ಧರೆಯಾಗಸ ಮಿಂದು ಹೃದಯ ರಾಗ ಒಲವ ಕಾತುರತೆ ಹನಿಗಳಲ್ಲಿ ಲೀನ !!

ಟಂಕಾ Read Post »

You cannot copy content of this page

Scroll to Top