ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಸಂಕ್ರಾಂತಿ

ಹಳ್ಳಿಯ ಸಂಕ್ರಾಂತಿ ಸಂಭ್ರಮ ಸುಜಾತ ರವೀಶ್ ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು . ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು . ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ ತಲೆದೂಗಿ ಆಡ್ತ್ಯಾವೆ ತೆಂಗು ಕಂಗು ಬಾಳೆ ತನ್ನಿ ಕಲಸ ಕಟ್ಟೋಕೆ ಬಿರ್ನೆ ಒಂದು ಹೊಂಬಾಳೆ. ಕೇರಿ ಕೇರೀನಾಗೆ ಅರಳಿ ನಿಂತ್ಯಾವೆ ರಂಗೋಲಿ ಹೆಂಗೇಳೇರು ಹಾಕವ್ರೆ ಒಬ್ರಿಗೊಬ್ರು ಪೈಪೋಟೀಲಿ ಚುಕ್ಕಿ ಎಳೆ ಹೂಗೋಳು ಸೇರಿ ಆಗವೆ ಚಿತ್ತಾರ ಒಡ್ಲಾಗೆ ರಂಗು ತುಂಬಿಸ್ಕೊಂಡೂ ಮಾಡ್ತಿವೆ ವಯ್ಯಾರ. ಹಾದಿಬೀದೀ ಪೂರಾ ಹೂರ್ಣದ ಹೋಳ್ಗೆ ಘಮಲೂ ಮೈಮನ ಆವರಿಸೈತೆ ಹಿಗ್ಗಿನಾ ಅಮಲೂ ಬೀಗರು ಬಿಜ್ಜರು ಭಾವ್ನೆಂಟ್ರು ಮನೇಕ್ ಬಂದಿರಲು ನಗೆಸಾರಕ್ಕೇನ್ ಕಮ್ಮಿ ಇಲ್ಲˌ ಮಾಡ್ತೌವ್ರೆ ಕುಸಾಲು. ಒಸ್ಬಟ್ಟೆ ಅಲಂಕಾರ ಹುಡ್ಗೀರ್ ಓಡಾಟ ಸರಭರ ಗಂಡೈಕ್ಳ ಎದೇಲಿ ಏನೋ ಮಿಂಚು ಸಂಚಾರ ಎಳ್ಳು ಬೀರೋಕ್ ಹೋಗೋರ್ನ ನೋಡೋದೇ ಹಬ್ಬ ದಿನಾ ದಿನಾ ಸಿಕ್ತಾದಾ ಕಣ್ಗೋಳ್ಗಿಂತಾ ಹಬ್ಬಾ. ಎತ್ತು ಗಿತ್ತು ರಾಸ್ಗೋಳಿಗೆ ಮಾಡಿಸ್ಬಿಟ್ಟು ಮಜ್ಜನ ಟೇಪು ರಿಬ್ಬನ್ ಸುತ್ತಿ ಮಾಡ್ತಾರಲಂಕಾರಾವಾ ಕೊಂಡ ಹಾಕಿ ಕಿಚ್ಚು ಹಾಯ್ಸಿ ಓಡ್ಸೋದ ನೋಡಿ ಬಿಟ್ಟೋಗ್ತೈತೆ ಕೆಟ್ ದೃಸ್ಟಿ ಇನ್ನೂ ಏನೇನೋ ಹಾವ್ಳಿ. ವರ್ಸಪೂರಾ ಜಂಜಡದಿಂದ ಖುಸಿ ಕೋಡೋದಿದು ರೈತಾಪಿ ಜನಗೋಳ ಅಚ್ಮೆಚ್ಚಿನ್ ಅಬ್ಬಾ ಇದು ಬನ್ನಿ ಎಲ್ಲಾ ಮಾಡೋಣ್ಕಂತೆ ಸಡ್ಗರದಾ ಸಂಕ್ರಾಂತಿ ಕೊಚ್ಚಿ ಓಗ್ಲಿ ರೋಸ ದ್ವೇಸ ಸಾಸ್ವತ್ವಾಗ್ಲಿ ಪ್ರೀತಿ. ****************************

ಕಾವ್ಯಸಂಕ್ರಾಂತಿ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಗಝಲ್ ಸಂಕ್ರಾಂತಿ ವಿಶೇಷ ಎ.ಹೇಮಗಂಗಾ ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ? ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ? ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ? ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ? ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ? ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ? ಮಂದಿರ, ಮಸೀದಿ, ಚರ್ಚುಗಳ ದೇವನೊಬ್ಬನೇ ನಾಮಗಳು ಹಲವು ಜಾತಿ, ಮತದ ಭೇದ ಭಾವವಿನ್ನೂ ಅಳಿಯಲಿಲ್ಲ ಬಂದರೇನು ಸಂಕ್ರಾಂತಿ? ಕಾಮಪಿಪಾಸುಗಳ ಕಿಚ್ಚಿಗೆ ಬಲಿಯಾದ ಮುಗ್ಧ ಹೆಣ್ಣು ಜೀವಗಳೆಷ್ಟೋ ! ರಣಹದ್ದುಗಳ ಕೊರಳನ್ನಿನ್ನೂ ಮುರಿಯಲಿಲ್ಲ ಬಂದರೇನು ಸಂಕ್ರಾಂತಿ ? ಪರರ ಸಮಾಧಿಯ ಮೇಲೆ ಬದುಕು ಕಟ್ಟಿಕೊಳ್ಳುವ ಹುನ್ನಾರವೇಕೆ ? ಮಾನವತೆ ಸತ್ತ ಸೂತಕವಿನ್ನೂ ಮುಗಿಯಲಿಲ್ಲ ಬಂದರೇನು ಸಂಕ್ರಾಂತಿ ? ಹುಟ್ಟು ಸಾವಿನ ನಡುವಿನ ಪಯಣಕೆ ಕೊನೆ ಇಹುದು ಕಾಲನ ಕರೆಯಲ್ಲಿ ನಿತ್ಯಸತ್ಯವಿದು ದುರುಳರಿಗಿನ್ನೂ ಅರಿವಾಗಲಿಲ್ಲ ಬಂದರೇನು ಸಂಕ್ರಾಂತಿ ? ******

ಕಾವ್ಯಸಂಕ್ರಾಂತಿ Read Post »

ಕಾವ್ಯಯಾನ

ಕಾವ್ಯಯಾನ

ಹೆದರುವುದಿಲ್ಲ ವಿಜಯಶ್ರೀ ಹಾಲಾಡಿ ಹೆದರುವುದಿಲ್ಲನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ ಯಾವ ಕ್ಯಾಂಪು-ಗಳಿಗೂ ನಾವು ಬರುವುದಿಲ್ಲಕೋಲೂರಿಕೊಂಡು ನಡೆವಾಗಲೂಭುಜಕ್ಕೆ ಆತುಕೊಳ್ಳದಅಜ್ಜ ಅಜ್ಜಿಯರಮೊಮ್ಮಕ್ಕಳು ಮರಿಮಕ್ಕಳು ನಾವುದಂಡಿಗೆ ದಾಳಿಗೆ ಹೆದರುವುದಿಲ್ಲಕೇಳಿಕೊಳ್ಳಿ !

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಹಂ ಜ್ಞಾನಿಗಳು ಹರೀಶ್ ಗೌಡ ಗುಬ್ಬಿ ಅಹಂ ಜ್ಞಾನಿಗಳು ತನ್ನವರ ಏಳ್ಗೆಯಂ ಸಹಿಸದವರು ನೀವು ಬಿದ್ದವರ ಕಂಡೊಡನೆ ನಕ್ಕವರು ನೀವು ಅವರಿವರ ಕಾಲ್ಗೆಳಗೆ ಕಾಲೆಳೆದವರು ನೀವು ಉದ್ದುದ್ದ ಬೀಗುತ್ತ ಉದ್ಗಾರ ಮಾತಿನಲಿ ಪರನಿಂದೆ ಗೈದವರು ನೀವಲ್ಲವೇ. ನೀ ನುಡಿದುದಂ ನಡೆಯಬೇಕೆನುತಲಿ ಅಡ್ಡಡ್ಡ ದಾರಿಗಳಂ ತುಳಿದವರು ನೀವು ಸರಿ ಮಾರ್ಗದ ದಾರಿಹೊಕನಂ ಕರೆದು ಗೊಟರಿನೊಳಗೆ ನೂಕಿದವರು ನೀವು ಅಹಂ ಜ್ಞಾನವಂ ಮೈತುಂಬಿದವರು ನೀವಲ್ಲವೆ. ಗಳಿಸಿದ ಹೆಸರಂ ಬಳಸಿ ಆತ್ಮದೊಳು ಕಸವಂ ತುಂಬಿ ಅಮಾಯಕರ ನೋವಾಗಿ ಕುಳಿದು ಕುಪ್ಪಳಿದವರು ನೀವು ಅವರಿವರ ಅವಮಾನಗಳಂ ಕಿರೀಟ ಮಾಡಿ ಮೇರೆದವರು ಭೂಮಿಯೊಳು ನೀವಲ್ಲವೆ. ಸತ್ತ ಹೆಣವಂ ಕಾಡುವವರು ನೀವು ನಿಮ್ಮ ನಂಬಿ ನಿಮ್ಮಿಂದೆ ಬಂದವರು ನಾವು ನಮಗಿಲ್ಲವಂ ನಿಮ್ಮಗಳ ಸಹಾಯ ಹಸ್ತ ಸ್ವಾರ್ಥ ತುಂಬಿರುವ ಜ್ಞಾನಿಗಳಂತೆ ನಿಸ್ವಾರ್ಥವಂ ಬಿಟ್ಟ ಅಜ್ಞಾನಿಗಳು ನೀವಲ್ಲವೆ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆನಿ ಜಯಾ ಮೂರ್ತಿ ಪಂಜರದ ಹಕ್ಕಿ ಅಲ್ಲ ನೀನು ಸ್ವತಂತ್ರ ಹಕ್ಕಿ ನೀ ಹಾರುವೆ ಎಲ್ಲಿಬೇಕಲ್ಲಿ ಒಡೆಯ ನ ಭುಜದಲ್ಲಿ ಒಡತಿಯ ಕೈಯಲ್ಲಿ ಮನೆಯ ಮೂಲೆಯಲ್ಲಿ ನೀನು ಸಾಮಾನ್ಯ ಹಕ್ಕಿಯಲ್ಲ ಎಲ್ಲಿಂದ ಧರೆಗಿಳಿದೆ ವಾಸಿಸಲು ಇಲ್ಲಿ? ಇಂದ್ರನ ಸ್ವರ್ಗದಿಂದ ಇಳಿದೆಯಾ? ಅಪ್ಸರೆ ಗಂಧರ್ವರಿಂದ ಹಾಡಲು ಕಲಿತೆಯ? ನಾರದರ ತಂಬೂರಿ ಶ್ರುತಿ  ಜೊತೆಯ? ನಿನ್ನ ಹಾಡಿನ ಶೈಲಿ ಪುರಂದರ ತ್ಯಾಗರಾಜ ಶಯ್ಲಿ ನಿನ್ನ ಸ್ವರ ಹೋಲುವುದಿಲ್ಲಿ ಆಲಾಪನೆ, ಪಲ್ಲವಿ, ಚರಣ ದಲ್ಲಿ ಸ್ವರ ಆ ದೇವನ ಪ್ರಾರ್ಥನೆ ರೀತಿಯಲ್ಲಿ ಒಮ್ಮೊಮ್ಮೆ ಹಾಡುವೆ ದೊ, ರೆ, ಮಿ, ಫಾ, ಸೊಲ್, ಲ, ಸಿ ಪಾಶ್ಚತ್ಯ ಸಂಗೀತ ಶ್ಯಲಿಯಲ್ಲಿ ಹೌದು, ಎಲ್ಲಿದೆ ಸಂಗೀತಕ್ಕೆ ಎಲ್ಲೆ ನಿನ್ನ ಮಧುರ ಕೋಗಿಲೆ ಕಂಠ ಹೋಲುವುದು ಲತಾ, ಸುಬ್ಬಲಕ್ಷ್ಮಿಯರ ನೀನು ಸರಸ್ವತಿಯ ವರಪುತ್ರಿ, ನಿನ್ನ ಏಳು ಬಣ್ಣಗಳು ಸಪ್ತ ಸ್ವರಗಳಂತೆ ಆ ಕನಕಾಂಬರಿ ಚಿಹ್ನೆ ನಿನ್ನ ಪವಿ ತ್ರತೆಯ ಚಿಹ್ನೆ    ಒಡೆಯ ಒಡತಿಯರ ಮುದ್ದಿನ ಗಿಳಿ ನೀನು       ನಿನ್ನ ದನಿ ಕೇಳುವ ಸೌಭಾಗ್ಯ ನಮಗೂ ನೀಡು ‘ ಆನಿ ‘ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗ್ರಹಣಕ್ಕೆ ಮುನ್ನ ಪ್ರಮಿಳಾ ಎಸ್.ಪಿ ಗ್ರಹಣಕ್ಕೆ ಮುನ್ನ ಕೋಣೆ ಕಿಟಕಿಯ ಸರಳುಗಳ ನಡುವೆ ಚಂದ್ರಮನ ಚಿತ್ರ ಮನದಲ್ಲಿ ಆತುರದ ಕಾವು… ಗ್ರಹಣ ಪ್ರಾರಂಭ ಆಗುವುದಕ್ಕೆ ಮುನ್ನ ಮನೆ ಮಂದಿಗೆಲ್ಲಾ ಊಟ ಬಡಿಸಬೇಕಿದೆ.. ಎದೆಯೊಳಗಿನ ನೋವುಗಳ ಬಚ್ಚಿಟ್ಟು…ಪರದೆ ಮುಂದೆ ಕುಳಿತು ಪುಂಗಿ ಮಾತು ಆಲಿಸಿ ಆಕಳಿಸುವ ಅರಮನೆಯ ಮನಸ್ಸುಗಳ ನಡುವೆ ಆತುರಕ್ಕೆ ಆಟ ವಾಡ ಬೇಕಿದೆ ನಾನು… ಬಳಲಿದ ಕಾಲುಗಳ… ಮೇಲೆ ನಿಂತು ನಿಟ್ಟುಸಿರು ಸೆರಗು ಸುತ್ತಿ ಪ್ರತಿ ಕ್ಷಣಕ್ಕೂ ಬೇಡುತಿದ್ದೇನೆ ಹೊರಗೆ ಹೋದವರು ಹುಷಾರಾಗಿ ವಪಸ್ಸಾಗಲಿ.. ಪರದೆಯಲ್ಲಿ ಕಂಡ ರಾಶಿ ಭವಿಷ್ಯ ದ ಮಾತುಗಳು ಮಂಕಾಗಲಿ… ಅವನಿತ್ತ ಆಯಸ್ಸು ಇಮ್ಮಡಿಗೊಳ್ಳಲಿ .. ಕರುಳಕುಡಿಗಳಿಗೆ ಮಂತ್ರದ ಸೋಕು ತಾಗದಿರಲೆಂದು… ಬಡಿಸಬೇಕಿದೆ ಅನ್ನ ಗ್ರಹಣ ಕ್ಕೆ ಮುನ್ನ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಭದ ಕೌತುಕದ ಕಡೆಗೆ ನಾರಾಯಣಸ್ವಾಮಿ ವಿ ನಭದ ಕೌತುಕದ ಕಡೆಗೆ ಮನವ್ಯಾಕೋ ಯೋಚನಲಹರಿಯ ಕಡೆಗೆ ತಿರುಗುತಿದೆ, ಅಜ್ಞಾನದಿಂದ ವಿಜ್ಞಾನದ ಕಡೆ ಸಾಗಿದ ಮನುಜ ಮತ್ತೆಕೊ ಮರಳಿ ಅಜ್ಞಾನದ ಗೂಡಿನ ಸುತ್ತ ಸುಳಿಯುತಿರುವನೆಂದು…….. ಪ್ರಕೃತಿಯ ವಿಸ್ಮಯಕ್ಕೆ ಹೆದರಿ ದೇಗುಲ-ಗೃಹಗಳ ಕದವನೆ ಮುಚ್ಚಿ,ದೂರದರ್ಶನದ ಪರದೆಯೊಳಗೆ ನಭದ ಕೌತುಕವನು ವೀಕ್ಷಣೆ ಮಾಡುತಿಹನು……. ಆಗಸದಲಿ ಘಟಿಸುವ ಸೂರ್ಯಚಂದ್ರರ ವಿಸ್ಮಯ ರೂಪವನು ಕನ್ನಡಿಯೊಳಗಿಂದ ನೋಡಬಹುದೆಂದು,ವಿಜ್ಞಾನಿಗಳು ಸಾರಿ ಸಾರಿ ಹೇಳಿದರೂ ನಂಬಲೇ ಇಲ್ಲ ವಿಜ್ಞಾನವನು…… ಟಿವಿ ಪರದೆಯೊಳಗೆ ಕುಳಿತು ಕಟ್ಟುಕಥೆ ಸಾರುವ ಮಾತಿನಮಲ್ಲರ ಭಾಷಣವು ಹುಟ್ಟಿಸಿತು ನಿನ್ನ ಮನದೊಳಗೆ ಭಯವನು ಹುಡುಕುತಲಿರುವೆ ದಬೆ೯ಗರಿಕೆಯ ಹುಲ್ಲನು….. ಭಾನಾಡಿಯಲಿ ಹಾರುವ ಹಕ್ಕಿಗೆ ಹರಿಯುತಿರುವ ಜಲಧಾರೆಗೆ ಹೊಲದೊಳಗೆ ದುಡಿಯುತಿರುವ ರೈತನಿಗೆ ಮಣ್ಣು ಹೊರುತಿರುವ ಶ್ರಮ ಜೀವಿಗೆ ತಾಕಲಿಲ್ಲವೇಕೆ ಗ್ರಹಣ ……. ಜ್ಞಾನವ ಪಡೆದು ಅಂಧಕಾರದೊಳಗೆ ಮನವನೆಟ್ಟು,ಮೂಢಚಾರಣೆಗೆ ಬೆಂಬಲವಿತ್ತು ಸಾಗುತಿರುವ ಮನುಜನೇ,ಮುಂದಿನ ಪೀಳಿಗೆಗೆ ಯಾವುದು ನಿನ್ನ ಸಂದೇಶ ?….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ತ್ರೀ ಹೆಜ್ಜೆ ಕವಿತಾ ಸಾರಂಗಮಠ ಸ್ತ್ರೀ ಹೆಜ್ಜೆ ಲಂಗ ದಾವಣಿ ತೊಟ್ಟ ಬಾಲೆಯರು ವಿರಳ.. ಹಿಡಿದಿದೆ ಫ್ಯಾಶನ್ನಿನ ಮರುಳ.. ಮಾಯವಾಗಿವೆ ಉದ್ದ ಜಡೆ ಮೊಗ್ಗುಗಳ.. ಕೇಶ ಕತ್ತರಿಸಿ ನಡೆಯುವರು ಸರಳ..! ಅನುಕರಣೆ ಹೆಸರಲಿ ನಡೆದಿದೆ ಅಂಧರ ಆಟ.. ತೋರುತಿದೆ ತೆಳು ಧಿರಿಸಿನಲಿ ಅವಳ ಮೈಮಾಟ.‌. ಹಗಲಿರುಳೂ ಅವಳ ಪೀಡಿಸುತ್ತಿದೆ ಕಾಮುಕರ ಕೂಟ..! ಮಾಧ್ಯಮಗಳಲ್ಲಿ ಜಾಹಿರಾತುಗಳ ದರಬಾರು.. ಮಹಿಳೆಯರ ಮನೆ-ಮನಗಳಲ್ಲಿ ಅವುಗಳದ್ದೇ ಸಂಚಾರು.. ಹೋಗುತಿರುವ ಅವಳದೇ ಮಾನಕೆ ಇಲ್ಲವೇ ಇಲ್ಲ ಕೊಂಚ ವಿಚಾರ..! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೀರೆಯ ಸಹವಾಸ ತ್ರಿವೇಣಿ ಜಿ.ಹೆಚ್ ಸೀರೆಯ ಸಹ ವಾಸ. ಸೆರಗು ನಿರಿಗೆಗಳ ಸಮೀಕರಿಸಿ ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ ನಡುವೆ ‌”ನಡು”ವಿನ ಆಕಾರವ ಅಂದಗಾಣಿಸಿದರೂ ಜಗ್ಗುವ ಬೊಜ್ಜು. ಒಂದೊಂದು ಸೀರೆ ಉಟ್ಟಾಗಲೂ ಮತ್ತೆಷ್ಟೋ ನೆನಪುಗಳ ಕದ ಬಡಿದು ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು… ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು… ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ ಹೂಬಳ್ಳಿಯಂಚು, ನವಿರು ಭಾವ ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ. ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ. ಅಷ್ಟೊಂದು ಸುಲಭವಲ್ಲ ಸೆರಗ ತುದಿಯಲ್ಲಿ ಕನಸು ಕಟ್ಟಿಕೊಂಡೇ ಸಾಗುವುದು, ಅತ್ತಿತ್ತ ಓಲಾಡುವ ನಿರಿಗೆಗಳ ಸಂಭಾಳಿಸುತ್ತಲೇ ನಡೆಯವುದು, ಅಷ್ಟಕ್ಕೇ ಮುಗಿಯುವುದಿಲ್ಲ, ಊಹೂಂ ಸೀರೆಗೊಪ್ಪುವ ರವಿಕೆ, ಕುಚ್ಚು, ಬಿಂದಿ ಫಾಲು, ಕೇಶ ವಿನ್ಯಾಸ , ಪಿನ್ನು, ಚಪ್ಪಲಿ, ಉಫ್ ಒಂದೇ ಎರಡೇ ಸಾಲು ಸಾಲು ಸಾಲದು. ಮೊದಲ ಸಲ ಸೀರೆಯುಟ್ಟು ಮುಗ್ಗರಿಸಿದ್ದು ಅಮ್ಮನ ಕಣ್ಣು ತಪ್ಪಿಸಿ ಕ್ಲಾಸ್ ಮೇಟಿಗೆ ಸೀರೆ ಕೊಟ್ಟದ್ದು ವಾರ್ಡ್ರೋಬಿನ ತುಂಬ ತುಂಬಿರುವ ಥರಾವರಿ ಕಂಡು ತುಟಿಯಲ್ಲಿ ಮಂದಹಾಸ ಮೂಡಿದ್ದು… ಈಗಲೂ ಅಷ್ಟೇ ಅಮ್ಮನ ತಬ್ಬಿದ ಕಂದನಂತೆ ನಿರಿಗೆಗಳು ಅಪ್ಪಿವೆ. ಅದೆಂತಹ ಕಚಗುಳಿ, ಒಳಗೊಳಗೇ ಪುಳಕ. ನಿನ್ನೆಗಳ ಕಳೆದದ್ದು , ನಲ್ಲನ ಜೊತೆಗೆ ಸಾಗಿದ್ದು, ಭ್ರಮೆಯಲ್ಲಿ ತೇಲಿದ್ದು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಾಳಿಯ ಉತ್ಸವ ಪ್ರೇಮಶೇಖರ ಗಕ್ಕನೆ ಹಾರಿ ಗಬಕ್ಕನೆ ಹಿಡಿದು ನುಂಗೇಬಿಟ್ಟಿತು ನಮ್ಮೂರ ಕೆರೆಯ ಮೀನೊಂದನು ಸಾವಿರ ಸಾವಿರ ಮೈಲು ದೂರದ ಸೈಬೀರಿಯಾ ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ ಮೇಲಿನ ಅರಳೀಮರದ ಕೊಂಬೆಯೇರಿ ಕೂತ ಸ್ವಾಲೋ ಹಕ್ಕಿಯೊಂದು. ಇಂದು ನವೆಂಬರ್ ಒಂದು. ತುರ್ತಾಗಿ ಹೋಗ ಬೇಕಿದೆ ನಾನೀಗ ರಾಜ್ಯೋತ್ಸವದಾಚರಣೆಗೆ, ನನಗಾಗಿ ಕಾದು ನಿಂತಿದೆ ಕಾರ್ಯಕರ್ತನ ಬೈಕು, ಕೂಗಿ ಕರೆಯುತ್ತಲೂ ಇದೆ ಮೈಕು. ಭದ್ರವಾಗಿದೆ ನನ್ನ ಜೇಬಿನಲಿ ಭಾಷಣದ ಹಾಳೆ, ಸಿಕ್ಕಿನಿಂತಿದೆ ನನ್ನ ಗಂಟಲಲಿ ಸ್ವಾಲೋ ನುಂಗಿದ ಮೀನು ಮೂಳೆ. ಇದೇರೀ ಯುಗಯುಗದ ಕತೆ ಅನ್ನುತ್ತಿದ್ದಾಳೆ ಅರಳೀಮರ ಸುತ್ತಿಬಂದ ಲಲಿತೆ. ಹೌದು, ನೀರಲೊಂದು ಮೀನು ಆಡುತಿದೆ, ಮೇಲೊಂದು ಸ್ವಾಲೋ ಹೊಂಚು ಹಾಕುತಿದೆ ಅರಳೀಮರ ನಿಂತು ನೋಡುತಿದೆ. ಗಾಳಿ…? ಅದು ತನ್ನ ಪಾಡಿಗೆ ತಾನು ಬೀಸುತ್ತಿದೆ, ಇಂದಿಲ್ಲಿ, ನಾಳೆ ಇನ್ನೆಲ್ಲೋ. **********

ಕಾವ್ಯಯಾನ Read Post »

You cannot copy content of this page

Scroll to Top