ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಖಾದಿ ಮತ್ತು ಕಾವಿ

ಎಮ್. ಟಿ. ನಾಯ್ಕ.                         ಜನ ಸೇವಕನೆಂದಿತು ಖಾದಿ ಧರ್ಮ ರಕ್ಷಕನೆಂದಿತು ಕಾವಿ ಇಂಚಿಂಚಾಗಿ ಮಾನವ ಕುಲವ ನುಂಗಿ, ನೀರು ಕುಡಿಯುತ್ತಿರುವ ಗೋಮುಖ ವ್ಯಾಘ್ರಗಳು     ವಿಷಯ ಲಂಪಟತೆಗೆ     ಇನ್ನೊಂದು ಹೆಸರು     ಖಾದಿ ಮತ್ತು  ಕಾವಿ ಇವುಗಳ ಹೆಸರೆತ್ತಿದರೆ ಸಾಕು ಬೀದಿ ನಾಯಿಗಳೂ ಕೂಡ ಮೂಗು ಮುಚ್ಚುತ್ತವೆ ಹಸಿ ಹಾದರದ ಕತೆಗೆ ನಸು  ನಾಚುತ್ತವೆ! ಹೊನ್ನು ಹೆಣ್ಣು ಮಣ್ಣಿನ ವಾಸನೆ ಗರ್ಭಗುಡಿಯೊಳಗೆ……! ಎಷ್ಟೆಲ್ಲಾ  ಸತ್ಯಗಳು ಕತ್ತಲೆಯ  ಗರ್ಭದೊಳು ….. !? ಖಾದಿಯದೋ……ರಾಜಕುಲ ಕಾವಿಯದೋ ……ದೇವಕುಲ ಇಬ್ಬರಿಗೂ ಬೇಕಂತೆ ಝಡ್ ಪ್ಲಸ್ ರಕ್ಷಣೆ ಇಬ್ಬರದೂ ಒಂದೇ ಮುಖ ಸದಾ ನಗುಮುಖ ಆದರೆ .. ಅನಾವರಣಗೊಳ್ಳುವುದೊಮ್ಮೊಮ್ಮೆ ಇವರ  ಬಹುಮುಖ! *************

ಖಾದಿ ಮತ್ತು ಕಾವಿ Read Post »

ಕಾವ್ಯಯಾನ

ಮತ್ತೆ ಮತ್ತೆ ಹೇಗೆ ಹಾಡಲಿ

ಸಂತೆಬೆನ್ನೂರು ಫೈಜ್ನಟ್ರಾಜ್ ಹಾಡಿದ ಹಾಡನೆ ಮರಳಿ ನಾನುಮತ್ತೆ ಮತ್ತೆ ಹೇಗೆ ಹಾಡಲಿಕಡಲೊಳಗೆ ಬೆರೆತ ಆ ನದಿಯಯಾವ ಕಣ್ಣಿನಿಂದ ನಾನು ನೋಡಲಿ೧ ಬಂದವರು ಹೋದವರು ಇದನೆ ತಾನೆಹಾಡಿ ಹೋದರು ಬಿದಿರ ಸೀಳಿದಂತೆತೂತ ಕೊರೆದು ಎದೆಯ ತೆರೆದುಹಾಡಿದರೂ ನಾ ಹೋದರು ಕೇಳದಂತೆ೨ ಕಾಡ ಕರುಣೆ ಹೂವ ಪ್ರೀತಿಜೋಲಿಯ ಲಾಲಿ ಪಿಸ ಮಾತಿನೊಲುಮೆಒಲ್ಲೆನೆಂದರು ಮತ್ತೆ ಮನಕಿಳಿದುತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ೩ ನಮ್ಮವರು ನಿಮ್ಮವರು ಎಂದಿಗೂಹಾಡಿದುದನೆ  ಹಾಡಿ ದಣಿದ ಕಥೆಯೂಹಾಡೊಂದೆ ಇಲ್ಲಿ ಭಾವ ಬೇರೆಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ! **************

ಮತ್ತೆ ಮತ್ತೆ ಹೇಗೆ ಹಾಡಲಿ Read Post »

ಕಾವ್ಯಯಾನ

ರುಬಾಯಿ

ಶಾಲಿನಿ ಆರ್. ೧.  ಮುಂಗಾರಿನ ಮಳೆಹನಿ      ಇಳೆಗೆ ಇಳಿದ ದನಿ      ನನ್ನ ರಮಿಸುವ ಪ್ರೀತಿ,      ಒಡಲ ಸೋಕಿ ಜೇನ್ಹನಿ… ೨.   ಮಳೆ ಬಂತು ನಾಡಿಗೆ       ತೆನೆ ತಂತು ಬೀಡಿಗೆ       ಅಚ್ಚ ಪಚ್ಚ ಪಯರು,       ಹೊನ್ನೂತ್ತಿ ಸೊಬಗಿಗೆ… ೩.   ಮಳೆಯಿದು ಮಮತೆ ಸೆರಗು       ಭುವಿಯಲೆಲ್ಲ ಹಾಸಿ ಬೆರಗು       ಧಾತ್ರಿ ತಂದಿತು ಒಸೆದು ಪ್ರೀತಿ,       ಮೊಗೆದು ತುಂಬಿ ಸಿರಿ ಸೊಬಗು… ೪.   ಮುಂಗಾರು ಮಳೆ ತಂದ ಒಲವ       ಭಾವ       ಒಡಮೂಡಿದೆ ಇಳೆಯಲೆಲ್ಲ ಜೀವ       ಸುತ್ತಮುತ್ತ ಹಸಿರ ಹೊನಲ ಗಾಳಿ,       ಮೂಡಿತಲ್ಲಿ ನಾಳಿನ ನಂಬಿಕೆ ದೈವ… ೫.   ಮುಂಗಾರಿನ ಕರಿಮುಗಿಲ ಕಾನನ       ಸುರಿಯುತಿದೆ ಜೀವಹನಿ ತಾನನ       ಚೆಂದದೊಡಲ ಇಳೆಗದು ಸಂಭ್ರಮ       ಬಾಳಿನಂದದಲಿ ಉಸಿರ ನರ್ತನ… ***********

ರುಬಾಯಿ Read Post »

ಕಾವ್ಯಯಾನ

ಅವನು ಗಂಡು

ಚೇತನಾ ಕುಂಬ್ಳೆ ಬೆಳಕು ಹರಿದೊಡನೆ ಹೊಸ್ತಿಲ ದಾಟುವನುಕತ್ತಲಾವರಿಸಿದೊಡನೆ ಮನೆಯ ಕದವ ತಟ್ಟುವನುಉರಿವ ಬಿಸಿಲು, ಕೊರೆವ ಚಳಿ, ಸುರಿವ ಮಳೆಯನ್ನದೆಹಗಲಿರುಳೂ ದುಡಿಯುವನುಯಾಕೆಂದರೆ, ಅವನು ಗಂಡು…ಜವಾಬ್ದಾರಿಗಳ ಭಾರವನ್ನು ಹೆಗಲಲ್ಲಿ ಹೊತ್ತವನು ಮಡದಿಯ ಪ್ರೀತಿಯಲ್ಲಿ ಅಮ್ಮನ ವಾತ್ಸಲ್ಯವನ್ನರಸುವನುಮಕ್ಕಳ ತುಂಟಾಟಗಳಲ್ಲಿ ಕಳೆದ ಬಾಲ್ಯವನ್ನು ಕಂಡು ಸಂಭ್ರಮಿಸುವನುಮುಗಿಯದ ಹಾದಿಯುದ್ಧಕ್ಕೂ ಕನಸ ಬಿತ್ತುತ್ತಾ ನಡೆಯುವನುಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಾಯಾಕೆಂದರೆ,ಅವನು ಗಂಡುಬೆವರ ಹನಿಯ ಬೆಲೆ ಎಷ್ಟೆಂದುಅರಿತವನು ಸ್ವಭಾವ ಸ್ವಲ್ಪ ಒರಟು,ಆದರೂ ಮೃದು ಹೃದಯಮಾತು ಬಲ್ಲವನೇ ಆದರೂ ಮಿತಭಾಷಿಎದೆಯೊಳಗೆ ಹರಿವ ಒಲವ ಝರಿಕೋಪದೊಳಗೆ ಪ್ರೀತಿಯ ಬಚ್ಚಿಟ್ಟವನುಮನದೊಳಗೆ ಮಧುರ ಭಾವನೆಗಳಿದ್ದರೂಮೌನದಲ್ಲಿಯೇ ಎಲ್ಲವನ್ನೂ ಅರ್ಥಮಾಡಿಸುವನುಯಾಕೆಂದರೆ , ಅವನು ಗಂಡುಮನದ ತುಡಿತಗಳೆಲ್ಲವನ್ನು ಅಕ್ಷರಗಳಲ್ಲಿ ಹಿಡಿದಿಡಲರಿಯದವನು ಅನುಭವದ ಬೆಳಕಿನಲ್ಲಿಸರಿತಪ್ಪುಗಳನ್ನು ಹೇಳಿಕೊಟ್ಟುಬಾಳಿನುದ್ಧಕ್ಕೂ ದಾರಿದೀಪವಾದವನುಕಷ್ಟ ಸುಖಗಳಲ್ಲಿ ಹೆಗಲಾದವನುಎದೆ ಹೊತ್ತಿ ಉರಿಯುತ್ತಿದ್ದರೂತುಟಿಗಳಿಗೆ ನಗುವ ಲೇಪಿಸಿಕೊಂಡವನುನೋವಿನಲ್ಲೂ ಅಳಲು ಮರೆತವನುಯಾಕೆಂದರೆ, ಅವನು ಗಂಡುಭಾವನೆಗಳನ್ನು ತೋರ್ಪಡಿಸಲರಿಯದೆ ಎಲ್ಲವನ್ನೂ ಒಳಗೊಳಗೇ ಅದುಮಿಟ್ಟುಕೊಂಡವನು. ********

ಅವನು ಗಂಡು Read Post »

ಕಾವ್ಯಯಾನ

ಗಝಲ್

ಜಯಶ್ರೀ.ಜೆ. ಅಬ್ಬಿಗೇರಿ ಬೀಳುಗಳಲ್ಲೇ ಬೀಳುವುದಕ್ಕಿಂತ ಬೀಳುಗಳಿಂದ ಮೇಲೇಳುವುದು ಮೇಲುಆಸೆ ಹೊತ್ತ ಮನಗಳಿಗೆ ದಾರಿ ತಪ್ಪಿಸುವುದಕ್ಕಿಂತ ದಾರಿಯಾಗುವುದು ಮೇಲು ನೆರೆಮನೆಯ ಗೋಡೆಗಳಿಗೆ ಕಿವಿಯಾಗುವುದಕ್ಕಿಂತ ಮನಗಳಿಗೆ ಕಿವಿಯಾಗುವುದು ಮೇಲುಇತರರ ನೋಡಿ ನಗುವುದಕ್ಕಿಂತ ಇತರರ ಕೂಡಿ ನಗುವುದು ಮೇಲು ಗಾಳಿಗೆ ಮಾತೆಸೆದು ಇರಿಯುವುದಕ್ಕಿಂತ ಮಸಿಯಾಗಿಸದೇ ಹಸಿರಾಗಿಸುವುದು ಮೇಲುಅಳೆದಳೆದು ಆಳುವುದಕ್ಕಿಂತ ಆಳಾಗಿ ಅರಸನಾಗುವುದು ಮೇಲು ನಿನ್ನ ಕೊಲುವೆ ಗೆಲುವೆ ಎನ್ನುವದಕ್ಕಿಂತ ಒಲವೇ ಗೆಲುವೆಂಬುದು ಮೇಲುತುಳಿದು ಬೆಳೆಯುವುದಕ್ಕಿಂತ ಬೆಳೆಯುತ್ತ ಬೆಳೆಸುವುದು ಮೇಲು ಅತ್ತು ಸತ್ತು ಬೇಸತ್ತು ಬದುಕುವುದಕ್ಕಿಂತ ಸತ್ತ ಮೇಲೂ ಬದುಕುವುದು ಮೇಲುಮಣ್ಣಲ್ಲಿ ಮಣ್ಣಾದ ಮೇಲೂ ಜನರ ಹಲ್ಲಿನಲ್ಲಿರುವುದಕ್ಕಿಂತ ನಾಲಿಗೆಯಲ್ಲಿರುವುದು ಮೇಲು **************

ಗಝಲ್ Read Post »

ಕಾವ್ಯಯಾನ

ಇಳಿ ಸಂಜೆ

ಫಾಲ್ಗುಣ ಗೌಡ ಅಚವೆ ಸುತ್ತಲೂ ಹರಡಿರುವ ತಂಪು ಬೆಳಕನು ಕಂಡುಸಣ್ಣ ಅಲೆ ಅಲೆಯುತಿದೆ ಇಳಿ ಸಂಜೆಯಲ್ಲಿನದಿದಡದ ಮೌನಕ್ಕೆ ಶರಣಾಗಿದೆ ಜಗವುತಂಬೆಲರು ಕೇಳುತಿದೆ ಹಿರಿ ಜೀವವೆಲ್ಲಿ? ಎಲ್ಲಿ ಹೋದನೋ ಅವನು? ದಾರಿ ಯಾವುದೋ ಎನೋ?ಕಾಣದೂರಿನ ಕಾಡು ಇನ್ನೂ ಕಂಡೆ ಇಲ್ಲದಿನದಿನವೂ ಬಂದಿಲ್ಲಿ ಕೂತು ಹರಟುವ ಜೀವಕತ್ತಲಾದರೂ ಇನ್ನೂ ಬಂದೇ ಇಲ್ಲ. ಹೊರಟ ದಾರಿಯ ದಿಕ್ಕು ಅವನ ಮನಸಿಗೆ ಗೊತ್ತುನಡೆದಷ್ಟು ದೂರದ ದಾರಿ ಅವನ ಜಗತ್ತುಸಂಸಾರ ಸಾಗರ ದಾಟಿ ಸಪ್ತ ಸಾಗರ ತಲುಪಿಖುರ್ಚಿ ಖಾಲಿ ಮಾಡುವ ವೇಳೆ ಅವಗೂ ಗೊತ್ತು. ಎಷ್ಟೆಲ್ಲಾ ದಿನದಿಂದ ಅಲೆಯ ಜೊತೆ ಸಂವಾದನಡೆಸಿದ್ದ ಅನುದಿನವು ಖುರ್ಚಿಯಲ್ಲಿಮನೆ ಮಂದಿ ಜನಕೆಲ್ಲ ಬೇಡವಾಗುವುದಕಿಂತಸುಮ್ಮನೆ ಹೊರಡುವುದು ಯೋಗ್ಯವೆಂದು. **********

ಇಳಿ ಸಂಜೆ Read Post »

ಕಾವ್ಯಯಾನ

ಗಝಲ್

ಮಾಲತಿ ಹೆಗಡೆ ಚಿಕ ಚಿಂವ್, ಕುಹೂ ಕುಹೂ,ಪೆಕ್ ಪೆಕ್ ನಿತ್ಯವೂ ಕೂಗುತ್ತವೆ ಹಕ್ಕಿಗಳು ಪೆಕ್ ಪೆಕ್, ಟುವ್ವಿಟುವ್ವಿ ಕಂಠ ಸೋಲುವವರೆಗೂ ಹಾಡುತ್ತವೆ ಹಕ್ಕಿಗಳು ಹುಳ-ಹುಪ್ಪಡಿ ಹುಡುಕುತ್ತಲೇ ವಿಹಾರವನ್ನೂ ಮಾಡಿಬಿಡುತ್ತವೆ! ಆಗಸದೆತ್ತರಕ್ಕೆ ಹಾರುತ್ತ, ತೇಲುತ್ತ ಬೆರಗ ಮೂಡಿಸುತ್ತವೆ ಹಕ್ಕಿಗಳು ಈ ಅಲ್ಪಾಯುಷಿ ಅನಂತಸುಖಿಗಳಿಗೆ ರಂಗುರಂಗಿನ ಬೆಡಗು ಕಸ ಕಡ್ಡಿ ಸೇರಿಸಿ ಕೌಶಲವ ಬೆರೆಸಿ ಗೂಡು ಕಟ್ಟುತ್ತವೆ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲಿ ಕ್ರಮಿಸುವುದೂ ಉಂಟು! ಕಾಳ ಹೆಕ್ಕಿ, ತುತ್ತನಿಕ್ಕಿ ಮರಿಗಳ ಜೋಪಾನವಾಗಿ ಬೆಳೆಸುತ್ತವೆ ಹಕ್ಕಿಗಳು ಹೂವು ಹಣ್ಣುಗಳನು ಕುಕ್ಕಿ, ಬೀಜವಗಳನು ಕಕ್ಕಿ ಕಾಡನ್ನುಳಿಸುತ್ತವೆ ಪ್ರಕೃತಿಯಲ್ಲಿ ಎಲ್ಲವೂ ಮುಖ್ಯವೆಂಬ ಸಂದೇಶ ಸಾರುತ್ತವೆ ಹಕ್ಕಿಗಳು ********* **********

ಗಝಲ್ Read Post »

ಕಾವ್ಯಯಾನ

ಅವನಿ

ನಾಗಲಕ್ಷ್ಮೀ ಕಡೂರು ರಾಸಾಯನಿಕ ಗೊಬ್ಬರಗಳಿಂದ ಬೆಂದು ಬಸವಳಿದ ವೃದ್ಧೆಯಂತಾಗುತ್ತಿದ್ದಾಳೆ… ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಭೂರಮೆಯ ಹಸಿರುಡುಗೆ ಹರಿದಂತೆ ಆ ವಸತಿಗಳಿಗೆ ನೀರುಪೂರೈಸುವಲ್ಲಿ ಭೂತಾಯಿಯೊಡಲಿಗೇ ಕನ್ನಹಾಕಿದಂತೆ 🙁 ಮನುಜರ ದಾಹಕ್ಕೆ ಕೊನೆಮೊದದಿಲ್ಲ ಅಂತರ್ಜಲ ಅಭಿವೃದ್ಧಿ ಮರೆತಿಹೆವಲ್ಲ ವೃಕ್ಷಗಳನ್ನು ಧರಾಶಾಯಿಯನ್ನಾಗಿಸುವುದೇ ನಿತ್ಯದ ಕಾಯಕ ಕಿತ್ತುಹೋಗಿರುವ ರಸ್ತೆಗಳ ಅಗಲಮಾಡೋದಕ್ಕ… ಕಾಡುಗಳೆಲ್ಲ ನಾಡಾಗುತ್ತಿದೆ ನೋಡ ಅದಕಂಡು ಓಟಕಿತ್ತಿದೆ ಕಾರ್ಮೋಡ ನಡೆದರೆ ತಾಯಿಗೆ ನೋವಾದೀತೆಂದು ಕ್ಷಮೆಯಾಚಿಸುತ್ತಿದ್ದರು ಹಿರಿಯರು ಐಷಾರಾಮಿ ಬದುಕಿನಲ್ಲಿ ಅವಳನ್ನು ಮರೆತೇಬಿಟ್ಟಿದ್ದಾರೆ ಈಗಿನವರು! ಬೆಟ್ಟಕಡಿದು ಇಲಿಹಿಡಿದಂತೆ ನಮ್ಮ ಪ್ರಯತ್ನ ಪ್ರಕೃತಿಯ ಮುಂದೆ ಎಂದಿಗೂ ಸಾಗದು ಮಾನುಷಯತ್ನ ಕೆರೆಕಟ್ಟೆ ಮುಚ್ಚಿ ಜಾನುವಾರುಗಳಿಗೂ ಪಡಬಾರದ ಪಾಡು ಹಕ್ಕಿಪಕ್ಷಿಗಳಿಗೆ ತಾವಿಲ್ಲ ಕಟ್ಟಲು ಗೂಡು! ಮಾಲಿನ್ಯಗಳ ಸುರಿಮಳೆಯಲ್ಲಿ ಮಾಯವಾಗುತ್ತಿದೆ ಮಳೆ ಕಾದು ಕನಲಿ ಕೆಂಪಾಗಿ ಬಾಯ್ದೆರೆದು ಹಪಹಪಿಸುತ್ತಿದ್ದಾಳೆ ಇಳೆ ಬತ್ತಿ ಬರಡಾಗುತ್ತಿರುವ ಕಾನನದಿಂದ ಸಾಧ್ಯವೇ ಹಸಿರು ಬೆಳೆ ಮಳೆಯಿಲ್ಲದ ಇಳೆಯಲ್ಲಿ ಬೇಕೆಂದರೂ ಕಾಣದಾಗಿದೆ ಸಮೃದ್ಧವಾದ ಕಳೆ… ಈಗಲಾದರೂ ಎಚ್ಚೆತ್ತುಕೊಂಡರೆ ನಾವು ಪಾರು ಕೊಂಚ ಮೈಮರೆತರೂ ಕಾಪಾಡುವವರಿಲ್ಲ ಯಾರೂ ಈಗಲೇ ಸಹಿಸಲಸಾಧ್ಯ ಧಗೆ, ನೀರಿಗಾಗಿ ಹಾಹಾಕಾರ ಮುಂದಿನ ಪೀಳಿಗೆಗೆ ಬಹುಶಃ ಪ್ರಾಕೃತಿಕ ಸಂಪತ್ತನ್ನು ರಚಿಸಿಡಬೇಕು ಚಿತ್ರಕಾರ!

ಅವನಿ Read Post »

ಕಾವ್ಯಯಾನ

ಗಝಲ್

ರತ್ನರಾಯ ಮಲ್ಲ ನಿನ್ನ ಆಶೀರ್ವಾದದಿಂದಲೇ ಸಂಪತ್ತನ್ನು ಗಳಿಸಿದೆ ಮಾ ಆ ದುಡ್ಡು ನನ್ನೆಲ್ಲ ಮನದ ಶಾಂತಿಯನ್ನು ಕಳೆದಿದೆ ಮಾ ಹಣದ ಮುಂದೆ ಪ್ರೀತಿ-ಪ್ರೇಮಗಳು ಗೌಣವಾಗಿದ್ದವು ಅಂದು ಜೇಬು ಭಾರವಾಗಿದ್ದರೂ ಇಂದು ನೆಮ್ಮದಿ ಗತಿಸಿ ಹೋಗಿದೆ ಮಾ ಸಾವಿನ ಸುದ್ದಿಯು ನನ್ನನ್ನು ಮತಿಭ್ರಮಣೆಗೆ ನೂಕುತ್ತಿದೆ ಕಣ್ಮುಂದಿನ ಅಂತರದಿಂದ ಹೃದಯಬಡಿತ ನಿಂತಿದೆ ಮಾ ಕರೆಗಳ ಕರತಾಡನ ನನ್ನ ಕರುಳನ್ನು ಕಿತ್ತು ತಿನ್ನುತಿದೆ ದೃಶ್ಯ ಕರೆಯಲ್ಲಿ ದರುಶನವ ಪಡೆದ ಪಾಪಿ ನಾನು ಹುಚ್ಚಾದೆ ಮಾ ವಾಹನಗಳ ಸಂಖ್ಯೆಗೆ ಮಿತಿಯಿಲ್ಲ ಮನೆಯ ಆವರಣದಲ್ಲಿ ಸಂಚಾರದ ದಟ್ಟಣೆಯು ನಿನ್ನಿಂದ ದೂರ ಮಾಡಿದೆ ಮಾ ಕಂಬನಿಯು ಮಳೆಯನ್ನು ನಾಚಿಸುತಿದ್ದರೂ ಅವನಿ ಒದ್ದೆಯಾಗಲಿಲ್ಲ ಹತ್ತಿರ ಬರಲಾಗದೆ ನಿಂತಲ್ಲಿಯೆ ಉಸಿರು ನಿಲ್ಲುತಿದೆ ಮಾ ಹಸಿ ಮಾಂಸದ ಮುದ್ದೆಯನ್ನು ಕಂಡು ಖುಷಿ ಪಟ್ಟವಳು ನೀನು ನಿನ್ನ ಋಣ ತೀರಿಸಲಾಗದೆ ‘ಮಲ್ಲಿ’ಯ ಮನವು ಗೋರಿಯನ್ನು ಅಗೆಯುತಿದೆ ಮಾ **********

ಗಝಲ್ Read Post »

ಕಾವ್ಯಯಾನ

ಗಝಲ್

ಎ.ಹೇಮಗಂಗಾ ಸ್ವಾರ್ಥದ ಭದ್ರಕೋಟೆಯಿಂದ ಎಂದೂ ಹೊರಗೆ ಬರಲಿಲ್ಲ ನೀನು ಅನರ್ಥಕೆ ಎಡೆ ಮಾಡಿದ ನಡೆಗೆ ಎಂದೂ ಪರಿತಪಿಸಲಿಲ್ಲ ನೀನು ಒಂಟಿ ಪಥಿಕಳ ಪಯಣಕೆ ಕೊನೆತನಕ ಜೊತೆ ನೀನೆಂದೆಣಿಸಿದ್ದೆ ಜನ್ಮ ಕೊಟ್ಟ ಜೀವಕೆ ಬೊಗಸೆಯಷ್ಟೂ ಪ್ರೀತಿ ನೀಡಲಿಲ್ಲ ನೀನು ಹಮ್ಮು ಬಿಮ್ಮಿನ ನಿನ್ನ ಅಧೀನದಿ ನೋವ ಸಹಿಸಿದ್ದು ಅದೆಷ್ಟು ಬಾರಿ ಕಟುವರ್ತನೆಗೆ ಕರುಳು ಕೊರಗಿದುದನು ಅರಿಯಲಿಲ್ಲ ನೀನು ತಾಯ್ತನದ ಬಳ್ಳಿಯಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚಾದವೇಕೆ ಸಾಂಗತ್ಯ ಬೇಡಿ ಹರಿಸಿದ ಕಂಬನಿಧಾರೆಗೂ ಕರಗಲಿಲ್ಲ ನೀನು ಮಾತಿನ ಕೂರಂಬುಗಳ ಕ್ರೂರ ಇರಿತಕೆ ಹೃದಯ ನೆತ್ತರು ಸುರಿಸಿತು ಮಾಯದ ಗಾಯಕೆ ಮಮತೆಯ ಮದ್ದನು ಲೇಪಿಸಲಿಲ್ಲ ನೀನು ತುತ್ತಿಟ್ಟವಳ ತೊರೆದು ಮುತ್ತಿಟ್ಟವಳ ಸಂಗವೇ ಸಗ್ಗವೆಂದುಕೊಂಡೆ ಹೆತ್ತೊಡಲಿಗೆ ಹಚ್ಚಿದ ಕಿಚ್ಚನು ಕೊಂಚವೂ ತಣಿಸಲಿಲ್ಲ ನೀನು ಬೇಡದ ಹೊರೆಯಾದ ಹೇಮ ಳ ಬಾಳಯಾತ್ರೆಯೀಗ ಮುಗಿದಿದೆ ಚಿರಶಾಂತಿ ಕಂಡವಳಿಗೆ ಅಂತಿಮ ವಿದಾಯವನೂ ಹೇಳಲಿಲ್ಲ ನೀನು *************

ಗಝಲ್ Read Post »

You cannot copy content of this page

Scroll to Top