ವಿವೇಕ ವಾಣಿ
ಕವಿತೆ ವಿವೇಕ ವಾಣಿ ಬಾಗೇಪಲ್ಲಿ ಕೃಷ್ಣಮೂರ್ತಿ ಬೆಳಕು ಮೂಡುವಮುನ್ನ ನಡಿಗೆಗೆ ಹೊರಟೆಬಿಳುಪಿಗೆ ಪರಿಕಲಿತ ಸೌಂದರ್ಯದ ಆಕಾಶ ಮಲ್ಲಿಗೆ ಹೂ ಕಂಡೆ ಮರದ ಎತ್ತರದಿಆನಂದಿಸಲು ಬಿಡದ ಮನ ಹೇಳಿತುಆಕೆ ಇಷ್ಟೇ ಅಲ್ಲವೆ ನಿನಗೆ? ಮುನ್ನಡೆದು ಹಾದಿಬದಿಯ ಗಿಡದ ಹೂ ಮೇಲೆ ಕುಂತ ಬಣ್ಣದಚಿಟ್ಟೆ ಕಂಡೆಪ್ರಯಾಸದಿ ಹಿಡಿದೆ ಪಾಪವೆನಿಸೆ ಬದುಕಲ ಬಿಟ್ಟೆಹಿಡಿದ ಬೆರಳಿಗೆ ಹತ್ತಿತ್ತು ರೆಕ್ಕೆಯ ಬಣ್ಣಸಂತೋಷಿಪ ಮೊದಲೇ ಮನ ಹೇಳಿತು ಪುನಃಆಕೆ ಇಷ್ಟೇ ಅಲ್ಲವೆ ನಿನಗೆ! ಯೋಚನೆ ಹರಿವನು ಬದಲಿಸ ಲೆತ್ನಿಸಿಮುಂದಿನ ಮರದ ರೆಂಬೆಯಲಿ ಕುಂತ ಹಕ್ಕಿಕಂಡೆರಾತ್ರಿ ಓದಿದ ನೆನಪು ಇವು ನೈಲ್ ನದಿಯನು ಬಳಸಿ ವಲಸೆ ಬರವುದಂತೆಮೂಬೈಲಿಗೆ ಕ್ಲಿಕ್ಕಿಸಿ ಕೊಂಡೆ ಚಿತ್ರ ಚನ್ನಾಗಿಯೇ ಮೂಡಿತ್ತುಸಂತೋಷಿಪ ಮುನ್ನ ಮನ ಹೇಳಿತು ಮತ್ತೊಮ್ಮೆಆಕೆ ಇಷ್ಟೇ ಅಲ್ಲವೆ ನಿನಗೆ? ಮನವ ಕೇಳಿದೆ ಹೀಗೇಕೆ ಹಿಂಸಿಸುತಿರುವೆ ಮನ ಹೇಳಿತುನಿನ್ನ ಪ್ರಙ್ಞೆಯೊಂದಿಗೆ ನೀನೇ ಕಣ್ಣುಮುಚ್ಚಾಲೆ ಆಡಬೇಡ. ಇಂದು ಬೇಗನೆ ನಡಿಗೆಗೆ ಬಂದುದೇಕೆನೆನ್ನೆ ಕಂಡು ಮಾತನಾಡಿದ ಸುಂದರ ಗರತಿಯ ಕಾಣಲಲ್ಲವೇ?ಅದಕೇ ಎಚ್ಚರಿಸುತಿರುವೆ ಸಭ್ಯನಾಗು ಆಕೆ ಗರತಿ! ಎಟುಕದ ಹೂ ದಕ್ಕದ ಪಾತರಗಿತ್ತಿಚಿತ್ರದೊಳಗಿನ ಸುಂದರ ಹೆಣ್ಣು ಆಕೆಯ ಗುಂಗನು ಬಿಡುನಿರ್ಮಲ ಚಿತ್ತದಿ ನಡಿಗೆ ನಡಿ!ನಾನೂ ಸಹಕರಿಸುವೆ ಅಂದಿತು. ************************









