ಕಾವ್ಯಯಾನ
ಅಪ್ಪ ಬಿದಲೋಟಿ ರಂಗನಾಥ್ ವಾತ್ಸಲ್ಯದ ಕೆನೆಕಟ್ಟಿಅಪ್ಪನ ಕರಳು ಅರಳಿಕಿರುಬೆರಳಿಡಿದು ನಡೆದ ಸ್ಪರ್ಶದ ಸುಖಮೀಸೆ ಬಲಿತರೂ ಕಾಡುವ ನೆನಪು ಊರ ಜಾತ್ರೆಯಲಿಕನ್ನಡಕದೊಳಗಿನ ಕಣ್ಣು ಬರೆದ ಕವನಮೌನದ ಮೆದು ಭಾಷೆಯಲಿಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು ದುಡ್ಡಿಲ್ಲದ ಅಪ್ಪನ ಜೇಬಿನಲಿನೋವಿನ ಜೇಡರ ಬಲೆ ಕಟ್ಟಿದರೂಬಿಡಿಸುತ್ತಾನೆ ಎಳೆ ಎಳೆಯಾಗಿಕಾಲದ ನೆರಳ ಮೇಲೆ ಕುಳಿತು ಅಪ್ಪನ ಹೇಗಲ ಮೇಲೆಎರಡೂ ಕಾಲುಗಳು ಇಳಿಬಿಟ್ಟುಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡುನಡೆಯುವಾಗಿನ ದಾರಿಯ ಬದಿಯಲಿಗರಿಕೆ ಚಿಗುರುವ ಪರಿಗೆಸೂರ್ಯನಿಗೂ ಹೊಟ್ಟೆಕಿಚ್ಚು ಗುಡಿಸಲ ಕವೆಗೆ ನೇತಾಕಿದ್ದತಮಟೆಯ ಸದ್ದಿನಲಿಕತ್ತಲೆಯ ಬೆನ್ನು ಮುರಿವ ಗತ್ತುಬೀಡಿ ಹೊಗೆಯು ಬರೆಯುವ ಚಿತ್ರ ಮಗನೆಂದು ಬೀಗುವ ಎದೆಯಲಿಎಷ್ಟೊಂದು ದಾರಿದೀಪದ ಬೆಳಕುಜೀವನದುದ್ದಕ್ಕೂ ಕಾವಲುಗಾರನಾಗಿಬೆನ್ನಿಗೆ ಬಿದ್ದವನುದೇವರಿಗಿಂತಲೂ ಮಿಗಿಲು *******









