ನಿತ್ಯ ಮುನ್ನುಡಿ ಕವಿತೆ
ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ. ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡ ಹೋದರೆಹೆಪ್ಪು ಹಾಕಿದ ಪಾತ್ರೆಯ ಧಡಾರ್ ಎಂಬ ಸದ್ದುಸಿಕ್ಕ ಸಾಲನ್ನೂ ಬೆಕ್ಕು ಕದ್ದುಕೈಗೂ ಸಿಗದೇ ಓಟ ಕಿತ್ತಿದೆ. ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. **********
ನಿತ್ಯ ಮುನ್ನುಡಿ ಕವಿತೆ Read Post »









