ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹೇಳದೇ ಹೋಗದಿರು

ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನ‌ದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು ************

ಹೇಳದೇ ಹೋಗದಿರು Read Post »

ಕಾವ್ಯಯಾನ

ಕಾವ್ಯ ಕನ್ನಿಕೆ

ಸರಿತಾ ಮಧು ನನ್ನೊಳು ಕಾವ್ಯವೋ?ಕಾವ್ಯದೊಳಗೆ ನಾನೋ?ಅಭಿಮಾನದ ಆಲಿಂಗನವೋ?ಪದಪುಂಜಗಳ ಆರಾಧನೆಯೋ?ಶೃಂಗಾರದ ವರ್ಣನೆಯೋ?ಮನವ ಕಾಡುವ ಭಾವನೆಯೋ?ಅರಿಯದೇ ನನ್ನೊಳು ಬೆರೆತಕವಿ ಹೃದಯವೋ? ಮನದೊಳಡಗಿದ ಕಾವ್ಯಕನ್ನಿಕೆಯೋನಿನಗಾರಿದ್ದಾರು ಹೋಲಿಕೆ? ರತಿಸೌಂದರ್ಯ ಹೆಚ್ಚಿಸುವ ಲಾಲಿತ್ಯಸಹೃದಯ ಓದುಗನ ಮೆಚ್ಚಿಸುವ ಪಾಂಡಿತ್ಯಕರ್ಣಾನಂದ ನೀಡುವ ಸುಂದರ ಸಾಹಿತ್ಯನಿನಗಾರಿದ್ದಾರು ಹೋಲಿಕೆ? ಯತಿ, ಪ್ರಾಸ, ಅಲಂಕಾರಗಳನುತೊಟ್ಟಿರುವ ಆಭರಣ ಪ್ರಿಯೆನಿನಗಾರಿದ್ದಾರು ಹೋಲಿಕೆ? ಹರಿವ ಝರಿಯಂತೆ ನಿರಂತರಪ್ರವಹಿಸುವೆ ಪ್ರತಿ ಮನ್ವಂತರಕವಿ ಹೃದಯಗಳ ವಿರಾಜಿತೆನಿನಗಾರಿದ್ದಾರು ಹೋಲಿಕೆ? *********

ಕಾವ್ಯ ಕನ್ನಿಕೆ Read Post »

ಕಾವ್ಯಯಾನ

ಪತ್ರ ಬರೆಯಬೇಕಿದೆ ಮಳೆಗೆ

ಪ್ರಜ್ಞಾ ಮತ್ತಿಹಳ್ಳಿ ಯಾರಿಗೂ ಹೇಳದೇ ಊರು ಬಿಟ್ಟಿದೆ ಮಳೆಹುಡುಕಿ ಕಂಗೆಟ್ಟ ಆಷಾಢ ಭುಸುಗುಡುತಿದೆಗಾಳಿಯ ಗಂಟಲಲಿ ವಿರಹದ ಶಹನಾಯಿಹಲಿವುಳಿದ ಮೋಡಕ್ಕೆ ಬಿಕ್ಕಲಾರದ ಬಾಯಿ ಎಲ್ಲಿ ಅಡಗಿದೆಯೊ ಮಳೆರಾಯಾಮುಖಗವಸಿನ ಜಗಕೆ ಹೆದರಿದೆಯಾಕಾಡು-ಕಣಿವೆ ಹೊಲ-ತೋಟಕ್ಕೆಹಸಿರುಗವಸು ತೊಡಿಸಲಾರೆಯಾಮುಟ್ಟುವುದನ್ನೇ ಬಿಟ್ಟು ಒಳಗೋಡಿಮುಚ್ಚಿದ ಕದದ ಹಿಂದೆ ಗುಟ್ಟಾಗಿದ್ದೇವೆ ಬಾಲ್ಯದಂಗಳದ ಸಿಹಿ ಒಗರಿನ ಗೇರು ಬೇಣಗೆಲ್ಲು ಗೆಲ್ಲಿಗೂ ತೂಗುವ ಹಣ್ಣು ಹಳದಿ ಕೆಂಪುಹೋದಷ್ಟೂ ಮುಗಿಯದ ತಂಪು ಕಾಲ್ದಾರಿಮುಗಿದದ್ದು ತಿಳಿವ ಮೊದಲೇ ಕವಲೊಡೆದ ಉರಿ ಶಂಕೆಯ ರಾವಣ ಕಾವಲಿದ್ದಾನೆಅಳುವೇ ನಿಲ್ಲುವುದಿಲ್ಲ ಸೀತೆಗೆ ಕದವಿಕ್ಕಿದ ರಾಮನರಮನೆಗೆ ವೈರಾಣು ಭೀತಿಮನದ ಗೆಲ್ಲು ಗೆಲ್ಲುಗಳಲೂಕುಣಿದು ಕುಪ್ಪಳಿಸುವ ಕಪಿಸೈನ್ಯತಾವೇ ಹಚ್ಚಿಕೊಂಡ ಉರಿಯ ಹಬ್ಬದಂತೆ ಹಬ್ಬಿಸುತ್ತಿದ್ದಾವೆ ಊರಿಗೆಲ್ಲ ಎಷ್ಟು ಬೈದರೂ ಸಿಟ್ಟಿಗೇಳುವುದಿಲ್ಲಪಟದೊಳಗಿನ ದೊಡ್ಡಪ್ಪಕನಸಿನ ಕಲ್ಯಾಣಿಯೊಳಗೆ ತಣ್ಣಗಿದ್ದಾನೆಸಣ್ಣ ತುಣುಕಿನ ಚಂದ್ರಾಮಕನಸು ನೇಯಬೇಕು ಹೊರ ಬರಲಿಕ್ಕೆಪತ್ರ ಬರೆಯ ಬೇಕು ಮಳೆಗೆ ಬೀಳಲಿಕ್ಕೆ *************

ಪತ್ರ ಬರೆಯಬೇಕಿದೆ ಮಳೆಗೆ Read Post »

ಕಾವ್ಯಯಾನ

ಎದುರೇ ಪ್ರೀತಿ ಇರುವಾಗ

ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು‌ ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ‌ ಹೇಳುವುದುಒಂದೇಉಸಿರಾಟದ ಏರಿಳಿತಎದೆ‌ ಬಡಿತ ನೀನು‌ -೯-ಎದೆಯ ಮೇಲೆ‌ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********

ಎದುರೇ ಪ್ರೀತಿ ಇರುವಾಗ Read Post »

ಕಾವ್ಯಯಾನ

ಸಂಮಿಶ್ರಣ

ಡಾ.ಪ್ರತಿಭಾ ಅಬ್ಬರಿಸುವ ಕಡಲಿಗೆಯಾವತ್ತೂ ಶಾಂತವಾಗಿಹರಿಯುವ ನದಿಗಳು ಸಾಕ್ಷಿ ಖಾಲಿಯಾಯಿತೆ ಸಿಹಿನೀರಿನ ಒರತೆಹಾಕಿಕೊಂಡು ತನಗೆತಾನೇ ಪ್ರಶ್ನೆಗಳ ಸ್ವಂತಿಕೆಯ ಕಳೆದುಕೊಳ್ಳುವಅಪಾಯ ಇದ್ದರೂಒಂದು ನೆಮ್ಮದಿ ಯ ಭಾವ. ಅಬ್ಬರದ ಅಲೆಗಳುಸದ್ದು ಮಾಡಿ ಸುಮ್ಮನಾಗಲುಮೂಡಿತು ನೆಮ್ಮದಿಯಭಾವ ಶಾಶ್ವತವೇನಲ್ಕ ಈ ಬದುಕುನೋವು, ನಲಿವುಸುಖ,ದುಃಖಗಳ ಸಂಮ್ಮಿಶ್ರಣ ********

ಸಂಮಿಶ್ರಣ Read Post »

ಕಾವ್ಯಯಾನ, ಗಝಲ್

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು ಕಂಡು ಹರಿದು ತಿನ್ನುವ ಹದ್ದು ಮೌನವಾಗಿಸುತ್ತಿವೆರಟ್ಟೆ ತಟ್ಟಿದ ತವೆಯಲಿ ಕರಕಲು ರೊಟ್ಟಿಗಳು ಹೊಟ್ಟಿಗೆ ಪ್ರಶ್ನಿಸುತಿವೆ *********

ಗಝಲ್ Read Post »

ಕಾವ್ಯಯಾನ

ಕುಟುಕು

ಲಕ್ಷ್ಮೀ ಪಾಟೀಲ್ ನರ‍್ವಾತ ವಲಯದಿಂದಪೋನಾಯಿಸಿದಾತನೊಬ್ಬ”ಹಲೋ ನಿಮ್ಮಮನೆಯಲ್ಲಿ ದೀಪಾ ಇದ್ದಾರೆಯೇ? “ಎಂದುಮಾತಿಗೆ ಪೀಠಿಕೆಯಾದಕೆಂಪಾದ ನಾನು “ಈ ಮನೆಯಲ್ಲಿದೀಪವಾಗಿ ಉರಿಯುವವಳು ನಾನೇ”ಎಂದು ಕುಕ್ಕಿದೆ ಪಾಪ ಆತನ ಬದುಕುಕತ್ತಲಲ್ಲಿ ಕೂತಿರುವುದಕ್ಕೆ ಕೊರಗಿದೆನನ್ನ ಕಣ್ಣ ಕೆಳಗಿನ ಕಪ್ಪಿಗೂ ಬೆದರಿದೆ ಆಗಂತುಕನೊಬ್ಬ ಫೋನಾಯಿಸಿಏರು ದನಿಯಲ್ಲಿ ಭಾವ ಬಣ್ಣ ಬದಲಿಸಿ” ನಾಗಮ್ಮನವರು ಇದ್ದಾರಾ? “ಎಂದಅವನ ಕುಟುಕುವ ದನಿಗೆ ಕಟಕಿ ಬೆರಸಿ“ಮೊಬೈಲ್ ನಾಗಪ್ಪಗಳೆಲ್ಲಭೂಮಿಯ ತುಂಬಾ ಹರಡಿವಿಷ ಬಿಡುತ್ತಿರುವಾಗ ಮನೆಯನಾಗಮ್ಮನವರೆಲ್ಲ ರಸಾತಳ ಸೇರಿನಾಗನೃತ್ಯಕ್ಕೆ ಅಣಿಯಾಗಿದ್ದಾರೆ” ಎಂದೆಹಿಡಿದ ಫೊನೀಗ ನೆಗೆದು ಬಿದ್ದುಸೂತಕ ಹರಡಿದೆ ಈ ಮೊಬೈಲ್ ವಿಚಿತ್ರ ರೀತಿಯಚಕ್ರವ್ಯೂಹಗಳನ್ನು ಕಟ್ಟುತ್ತದೆಒಂದನ್ನು ಭೇದಿಸಿದರೆಮತ್ತೊಂದು ತೆರೆಯುತ್ತದೆಎದುರಿಸಿ ಕಲಿಯಾಗದೇಎಗರಿಸಿ ಕವಿಯಾದೆಕಲಿಯಾಗಿದ್ದರೆ ಯುಗದ ಭಾರ ಹರ‍್ತಿದ್ದೆಕವಿಯಾಗಿ ಹೊತ್ತ ಭಾರಯುಗಕ್ಕೆ ರ‍್ಗಾಯಿಸಿದೆಮೊಬೈಲ್ ಯುಗಭಾರ ಹೊತ್ಕೊಂಡು ನೇತಾಡುತ್ತಿದೆ

ಕುಟುಕು Read Post »

ಕಾವ್ಯಯಾನ

ಶರಣಾಗಿ ಬಿಡಲೆ

ವಸುಂಧರಾ ಕದಲೂರು ನಿನ್ನ ಕಂಗಳ ಪ್ರಾಮಾಣಿಕತೆನನ್ನನು ಹಿಂಬಾಲಿಸುತ್ತಿದೆ.ಭದ್ರ ಕೋಟೆ ಗಟ್ಟಿ ಬೇಲಿಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡುನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆಇನ್ನೆಷ್ಟು ಕಾಲ ಕಿವುಡಾಗಿರಲಿಹಾದಿ ಮರೆವ ಮುನ್ನ ನಾಕುಹೆಜ್ಜೆ ನಡೆದು ಬರಲೆ ಹನಿಮುತ್ತು ಜಲಗರ್ಭದಚಿಪ್ಪೊಳಗೆ ಕಾಣೆಯಾಗಲುಬಿಡಬೇಡ ಮುಳುಗಿ ತೆಗೆಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿಹೃದಯದಲಿ ನಯವಾಗಿನವುರಾಗಿ ಲಯವಾಗಿಕಂಪನ ಎಬ್ಬಿಸುತ್ತಿವೆ. ******* ಕಾಲ ದುಬಾರಿ ತಾನೆಂದುಸಾಬೀತು ಪಡಿಸುತ್ತಿದೆಜಾರಿಹೋದ ನೆನಪುಗಳಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆನಾನೂ ಶರಣಾಗಿ ಬಿಡಲೆ

ಶರಣಾಗಿ ಬಿಡಲೆ Read Post »

ಕಾವ್ಯಯಾನ

ಮನಸು ಅರಳುವ ಕನಸು

ಕವಿತಾ ಜಿ.ಸಾರಂಗಮಠ ನಗುವ ಮನ ಹೊಂದಿದ ನೋವಿನ ಕತೆಜೀವನದ ದುಗುಡಗಳ ನೂರೆಂಟು ವ್ಯಥೆನಗು ಮೊಗದಿ ನೋವನೇ ಸೋಲಿಸುವ ನೀರೆಕರುಳ ಕುಡಿಗೂ ಅದನ್ನೇ ಬೋಧಿಸಿದ ತಾಯೆ! ಆಶಾ ಭಾವನೆಗಳ ಹೊತ್ತ ನಗುನೂರು ಕನಸಿನ ಭಾವಗಳ ಹೊತ್ತುಅದೆಷ್ಟೋ ಆಸೆಗಳ ಹತ್ತಿಕ್ಕಿನಾಳೆಗಳ ಸ್ವಾಗತಕೆ ನಗು ಬೀರುವಳು! ಹಗಲಿರುಳು ದುಡಿದು ಬಡತನ ಸೋಲಿಸುವ ಆಸೆ ಧೀರೆಗೆಛಲಬಿಡದ ದೋಣಿಯ ನಾವಿಕಳುಇಂದಲ್ಲ ನಾಳೆ ಗೆಲುವ ಹಠ ಅವಳಿಗೆ! ಅಂದಂದೇ ದುಡಿದು ಅಂದೇ ತಿಂದರೂಸ್ವಾಭಿಮಾನದ ನೆಲೆಗಟ್ಟು ಬಿಡದಾಕೆನಗುನಗುತ ಜೀವನ ಸವೆಸಿನಗುವ ಹೂ ಮಳೆ ಸುತ್ತ ಹರಡುವಾಕೆ! ಅವಳ ತೆರೆದ ಮನದ ನಗುವಿಗೊಂದು ನಮನ!! *****

ಮನಸು ಅರಳುವ ಕನಸು Read Post »

ಕಾವ್ಯಯಾನ

ನಿತ್ಯ ಮುನ್ನುಡಿ ಕವಿತೆ

ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ. ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡ ಹೋದರೆಹೆಪ್ಪು ಹಾಕಿದ ಪಾತ್ರೆಯ ಧಡಾರ್ ಎಂಬ ಸದ್ದುಸಿಕ್ಕ ಸಾಲನ್ನೂ ಬೆಕ್ಕು ಕದ್ದುಕೈಗೂ ಸಿಗದೇ ಓಟ ಕಿತ್ತಿದೆ. ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. **********

ನಿತ್ಯ ಮುನ್ನುಡಿ ಕವಿತೆ Read Post »

You cannot copy content of this page

Scroll to Top