ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎದುರೇ ಪ್ರೀತಿ ಇರುವಾಗ

ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು‌ ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ‌ ಹೇಳುವುದುಒಂದೇಉಸಿರಾಟದ ಏರಿಳಿತಎದೆ‌ ಬಡಿತ ನೀನು‌ -೯-ಎದೆಯ ಮೇಲೆ‌ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********

ಎದುರೇ ಪ್ರೀತಿ ಇರುವಾಗ Read Post »

ಕಾವ್ಯಯಾನ

ಸಂಮಿಶ್ರಣ

ಡಾ.ಪ್ರತಿಭಾ ಅಬ್ಬರಿಸುವ ಕಡಲಿಗೆಯಾವತ್ತೂ ಶಾಂತವಾಗಿಹರಿಯುವ ನದಿಗಳು ಸಾಕ್ಷಿ ಖಾಲಿಯಾಯಿತೆ ಸಿಹಿನೀರಿನ ಒರತೆಹಾಕಿಕೊಂಡು ತನಗೆತಾನೇ ಪ್ರಶ್ನೆಗಳ ಸ್ವಂತಿಕೆಯ ಕಳೆದುಕೊಳ್ಳುವಅಪಾಯ ಇದ್ದರೂಒಂದು ನೆಮ್ಮದಿ ಯ ಭಾವ. ಅಬ್ಬರದ ಅಲೆಗಳುಸದ್ದು ಮಾಡಿ ಸುಮ್ಮನಾಗಲುಮೂಡಿತು ನೆಮ್ಮದಿಯಭಾವ ಶಾಶ್ವತವೇನಲ್ಕ ಈ ಬದುಕುನೋವು, ನಲಿವುಸುಖ,ದುಃಖಗಳ ಸಂಮ್ಮಿಶ್ರಣ ********

ಸಂಮಿಶ್ರಣ Read Post »

ಕಾವ್ಯಯಾನ, ಗಝಲ್

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು ಕಂಡು ಹರಿದು ತಿನ್ನುವ ಹದ್ದು ಮೌನವಾಗಿಸುತ್ತಿವೆರಟ್ಟೆ ತಟ್ಟಿದ ತವೆಯಲಿ ಕರಕಲು ರೊಟ್ಟಿಗಳು ಹೊಟ್ಟಿಗೆ ಪ್ರಶ್ನಿಸುತಿವೆ *********

ಗಝಲ್ Read Post »

ಕಾವ್ಯಯಾನ

ಕುಟುಕು

ಲಕ್ಷ್ಮೀ ಪಾಟೀಲ್ ನರ‍್ವಾತ ವಲಯದಿಂದಪೋನಾಯಿಸಿದಾತನೊಬ್ಬ”ಹಲೋ ನಿಮ್ಮಮನೆಯಲ್ಲಿ ದೀಪಾ ಇದ್ದಾರೆಯೇ? “ಎಂದುಮಾತಿಗೆ ಪೀಠಿಕೆಯಾದಕೆಂಪಾದ ನಾನು “ಈ ಮನೆಯಲ್ಲಿದೀಪವಾಗಿ ಉರಿಯುವವಳು ನಾನೇ”ಎಂದು ಕುಕ್ಕಿದೆ ಪಾಪ ಆತನ ಬದುಕುಕತ್ತಲಲ್ಲಿ ಕೂತಿರುವುದಕ್ಕೆ ಕೊರಗಿದೆನನ್ನ ಕಣ್ಣ ಕೆಳಗಿನ ಕಪ್ಪಿಗೂ ಬೆದರಿದೆ ಆಗಂತುಕನೊಬ್ಬ ಫೋನಾಯಿಸಿಏರು ದನಿಯಲ್ಲಿ ಭಾವ ಬಣ್ಣ ಬದಲಿಸಿ” ನಾಗಮ್ಮನವರು ಇದ್ದಾರಾ? “ಎಂದಅವನ ಕುಟುಕುವ ದನಿಗೆ ಕಟಕಿ ಬೆರಸಿ“ಮೊಬೈಲ್ ನಾಗಪ್ಪಗಳೆಲ್ಲಭೂಮಿಯ ತುಂಬಾ ಹರಡಿವಿಷ ಬಿಡುತ್ತಿರುವಾಗ ಮನೆಯನಾಗಮ್ಮನವರೆಲ್ಲ ರಸಾತಳ ಸೇರಿನಾಗನೃತ್ಯಕ್ಕೆ ಅಣಿಯಾಗಿದ್ದಾರೆ” ಎಂದೆಹಿಡಿದ ಫೊನೀಗ ನೆಗೆದು ಬಿದ್ದುಸೂತಕ ಹರಡಿದೆ ಈ ಮೊಬೈಲ್ ವಿಚಿತ್ರ ರೀತಿಯಚಕ್ರವ್ಯೂಹಗಳನ್ನು ಕಟ್ಟುತ್ತದೆಒಂದನ್ನು ಭೇದಿಸಿದರೆಮತ್ತೊಂದು ತೆರೆಯುತ್ತದೆಎದುರಿಸಿ ಕಲಿಯಾಗದೇಎಗರಿಸಿ ಕವಿಯಾದೆಕಲಿಯಾಗಿದ್ದರೆ ಯುಗದ ಭಾರ ಹರ‍್ತಿದ್ದೆಕವಿಯಾಗಿ ಹೊತ್ತ ಭಾರಯುಗಕ್ಕೆ ರ‍್ಗಾಯಿಸಿದೆಮೊಬೈಲ್ ಯುಗಭಾರ ಹೊತ್ಕೊಂಡು ನೇತಾಡುತ್ತಿದೆ

ಕುಟುಕು Read Post »

ಕಾವ್ಯಯಾನ

ಶರಣಾಗಿ ಬಿಡಲೆ

ವಸುಂಧರಾ ಕದಲೂರು ನಿನ್ನ ಕಂಗಳ ಪ್ರಾಮಾಣಿಕತೆನನ್ನನು ಹಿಂಬಾಲಿಸುತ್ತಿದೆ.ಭದ್ರ ಕೋಟೆ ಗಟ್ಟಿ ಬೇಲಿಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡುನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆಇನ್ನೆಷ್ಟು ಕಾಲ ಕಿವುಡಾಗಿರಲಿಹಾದಿ ಮರೆವ ಮುನ್ನ ನಾಕುಹೆಜ್ಜೆ ನಡೆದು ಬರಲೆ ಹನಿಮುತ್ತು ಜಲಗರ್ಭದಚಿಪ್ಪೊಳಗೆ ಕಾಣೆಯಾಗಲುಬಿಡಬೇಡ ಮುಳುಗಿ ತೆಗೆಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿಹೃದಯದಲಿ ನಯವಾಗಿನವುರಾಗಿ ಲಯವಾಗಿಕಂಪನ ಎಬ್ಬಿಸುತ್ತಿವೆ. ******* ಕಾಲ ದುಬಾರಿ ತಾನೆಂದುಸಾಬೀತು ಪಡಿಸುತ್ತಿದೆಜಾರಿಹೋದ ನೆನಪುಗಳಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆನಾನೂ ಶರಣಾಗಿ ಬಿಡಲೆ

ಶರಣಾಗಿ ಬಿಡಲೆ Read Post »

ಕಾವ್ಯಯಾನ

ಮನಸು ಅರಳುವ ಕನಸು

ಕವಿತಾ ಜಿ.ಸಾರಂಗಮಠ ನಗುವ ಮನ ಹೊಂದಿದ ನೋವಿನ ಕತೆಜೀವನದ ದುಗುಡಗಳ ನೂರೆಂಟು ವ್ಯಥೆನಗು ಮೊಗದಿ ನೋವನೇ ಸೋಲಿಸುವ ನೀರೆಕರುಳ ಕುಡಿಗೂ ಅದನ್ನೇ ಬೋಧಿಸಿದ ತಾಯೆ! ಆಶಾ ಭಾವನೆಗಳ ಹೊತ್ತ ನಗುನೂರು ಕನಸಿನ ಭಾವಗಳ ಹೊತ್ತುಅದೆಷ್ಟೋ ಆಸೆಗಳ ಹತ್ತಿಕ್ಕಿನಾಳೆಗಳ ಸ್ವಾಗತಕೆ ನಗು ಬೀರುವಳು! ಹಗಲಿರುಳು ದುಡಿದು ಬಡತನ ಸೋಲಿಸುವ ಆಸೆ ಧೀರೆಗೆಛಲಬಿಡದ ದೋಣಿಯ ನಾವಿಕಳುಇಂದಲ್ಲ ನಾಳೆ ಗೆಲುವ ಹಠ ಅವಳಿಗೆ! ಅಂದಂದೇ ದುಡಿದು ಅಂದೇ ತಿಂದರೂಸ್ವಾಭಿಮಾನದ ನೆಲೆಗಟ್ಟು ಬಿಡದಾಕೆನಗುನಗುತ ಜೀವನ ಸವೆಸಿನಗುವ ಹೂ ಮಳೆ ಸುತ್ತ ಹರಡುವಾಕೆ! ಅವಳ ತೆರೆದ ಮನದ ನಗುವಿಗೊಂದು ನಮನ!! *****

ಮನಸು ಅರಳುವ ಕನಸು Read Post »

ಕಾವ್ಯಯಾನ

ನಿತ್ಯ ಮುನ್ನುಡಿ ಕವಿತೆ

ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ. ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡ ಹೋದರೆಹೆಪ್ಪು ಹಾಕಿದ ಪಾತ್ರೆಯ ಧಡಾರ್ ಎಂಬ ಸದ್ದುಸಿಕ್ಕ ಸಾಲನ್ನೂ ಬೆಕ್ಕು ಕದ್ದುಕೈಗೂ ಸಿಗದೇ ಓಟ ಕಿತ್ತಿದೆ. ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. **********

ನಿತ್ಯ ಮುನ್ನುಡಿ ಕವಿತೆ Read Post »

ಕಾವ್ಯಯಾನ, ಗಝಲ್

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಗಝಲ್ Read Post »

ಕಾವ್ಯಯಾನ

ಶೂನ್ಯದುಂಗುರ….

ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ‌ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ ಸಾವೇನಿರಾಂತಕ,ನಿರಾಕಾರಕ್ಕೆ ಮುನ್ನುಡಿದಿಕ್ಕುಗಳ ಒಗ್ಗೂಡಿಸಿ ಐಕ್ಯವಾದಂತೆಶೂನ್ಯದುಂಗುರವ ತೊಡಿಸಿದಂತೆ *******

ಶೂನ್ಯದುಂಗುರ…. Read Post »

ಕಾವ್ಯಯಾನ

ನಾನೋರ್ವ ಕವಿ

ಪ್ರಕಾಶ್ ಕೋನಾಪುರ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಅಕ್ಷರಗಳ ಅಭ್ಯಾಸದಲಿ ರೂಪಕಗಳಮೋಹಪಾಶದಲಿ ಪ್ರತಿಮೆಗಳ ಪೇರಿಸಿಭಾವಸನ್ನೀಯಲ್ಲೀ ತೇಲಾಡುವ ಕವಿ ಮೊಗ್ಗು ಹೂ ಹಣ್ಣು ದುಂಬಿ ತರುಲತೆಕಾಗೆ ಗುಬ್ಬಿ ಗಿಳಿವಿಂಡು ಪಾರಿವಾಳಮೊಲ ಹಸು ಕರು ನಾಯಿ ನರಿ ಕುರಿ ತೋಳನದಿ ಬೆಟ್ಟ ಕಾನನ ಸೂರ್ಯ ಚಂದ್ರ ಆಕಾಶಬೈಗು ಬೆಳಗು ಸೃಷ್ಟಿಯ ಸೊಬಗು ವರ್ಣಿಸಿ ವರ್ಣಿಸಿಕವಿತೆಗಳ ಮಹಾಪೂರವೇ ಹರಿಸಿಯಾಯ್ತು ಹೆಣ್ಣಿನ ಮೂಗು ತುಟಿ ಕಟಿ ಕದಪು ಮುಂಗುರುಳುಎದೆಕಳಸ ನಾಭಿ ನಡ ನೀತಂಬ ಕೋಮಲ ಪಾದಪಡುವ ಪಾಡು ತ್ಯಾಗ ಸಹನೆ ಬಾಳುಗೋಳುಹೆರಳು ತುರುಬು ಮುಡಿಗೆ ಮುಡಿಪ ಹೂಸೌಂದರ್ಯ ಬಣ್ಣಿಸಿ ಬರೆದ ಕವಿತೆಗಳ ಸಾಲುಬತ್ತದ ಕಾವ್ಯದ ಒರತೆ ನಿತ್ಯ ಹರಿಯುತಿರುವ ಝರಿ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಎಲ್ಲರೂ ಇರುವಂತೆ ಮೂಕನೂ ಅಲ್ಲಾಕಣ್ಣಿದ್ದೂ ಕಾಣದ ಹಗಲು ಕುರುಡನೂ ಅಲ್ಲಾ ಕಂಡದ್ದನ್ನು ಕಂಡ ಹಾಗೇಕಣ್ಣಿದ್ದ ಕುರುಡರೂ ನಾಚುವಂತೆಹೇಳಬೇಕೆನ್ನಿಸಿದ್ದನ್ನು ಭಿಡೇ ಭಿಟ್ಟುಹರಿತಕತ್ತಿ ಇರಿದಂತೆ ಹೇಳದೇಇರುವನಂತೂ ನಾನಲ್ಲ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಪ್ರಭುತ್ವವನ್ನು ಆರೋಪಿಸಿ ಕಟಕಟೆಯಲ್ಲಿ ನಿಲ್ಲಿಸಿಹಸಿವಿನ ನ್ಯಾಯ ಪದಗಳ ಸಂಯೋಜನೆಯಲ್ಲಿ ಕಾವ್ಯದ ಶಬ್ಧಾಡಂಗುರದಲ್ಲಿಅಲಂಕಾರ ಪ್ರತಿಮೆಗಳಲ್ಲಿತಿವಿದು ತಿವಿದು ಪ್ರಶ್ನಿಸುತ್ತೇನೆಕಾವ್ಯಾತ್ಮಕ ಲಯಲಾವಣ್ಯದಲಿಪ್ರಜೆಪ್ರಭುಗಳಿಬ್ಬರನ್ನೂ ಎಚ್ಚರಿಸುತ್ತೇನೆ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಕೈಕೋಳ ತೊಡಿಸಿ ಜೈಲಿಗಟ್ಟಿದರೂ ಬಿಡದ ಕಾಯಕನನ್ನ ಮುಂಗೈ ಕತ್ತರಿಸಿದರೂ ಹಿಡಿದ ಪೆನ್ನು ಬಿಡೆನು ಕವಿತೆ ಬರೆಯಲು ಜೈಲು ಗೋಡೆಯಾದರೇನುಕಲ್ಲು ಬಂಡೆಯಾದರೇನು ಯಾವುದೇನುಯಾರಾಜ್ಞೆಗೂ ನಿಲುಕದ ಕವಿಸಮಯಪೆನ್ನೇ ನನ್ನ ಗನ್ನು ಬರೆಯುತ್ತೇನೆ ಕವಿತೆಯನ್ನು ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕ *********

ನಾನೋರ್ವ ಕವಿ Read Post »

You cannot copy content of this page

Scroll to Top