ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾನೂ ರಾಧೆ

ನಾನೂ ರಾಧೆ ಕವಿತೆ ಪೂರ್ಣಿಮಾ ಸುರೇಶ್ ನಮ್ಮೂರಿನ ತುಂಬೆಲ್ಲಾಅವರದೇ ಮಾತು- ಕತೆಕಾಡಿದೆ ಅವರ ಕಾಣುವತವಕದ ವ್ಯಥೆ ಆ ಹಾಲು ತುಳುಕುವ ಕೊಡಮೊಸರ ಮಡಕೆಅವಳ ಅರ್ಧ ಬಿಚ್ಚಿದ ಮುಡಿನವಿಲು ನಡಿಗೆಯ ಅಡಿಅವಳ ಮಿದುನುಡಿಯ ಚೆದುರುಆ ವಿಜನ ಬೀದಿದಟ್ಟನೆ ಬಿದಿರ ಮೆಳೆ ಯಮುನೆಯ ಕಚಗುಳಿ ಇಡುವಆ ಮೆಲ್ಲೆಲರುಅವನ ಗುನುಗಿನ ಬೆರಳುಅವಳ ಕಣ್ಣವೀಣೆಯ ಮೇಲೆಅವಳ ಅಕ್ಷತ ಬಿಂಬಅವನ ದಿಟ್ಟಿಯನು ತೊಳಗುವಬೆಳಕಿನ ಕಂಬ ಎಲ್ಲವನೂ ಇಣುಕಿಕಾಣುವ ಬಯಕೆಈ ಕಾತರ ದಗ್ಧ ಮನಕೆ,ಗೋಕುಲದ ಬಾಗಿಲಲ್ಲೆಒಲವ ಘಮಲುಪರಿಸರದ ತುಂಬರಾಸಲೀಲೆಯ ಅಮಲುಒಳಗೆ ಸುಳಿದಾಡಿದೆಅಲ್ಲಲ್ಲಿ ಎಡತಾಕಿದೆರಾಧಾಕೃಷ್ಣರ ಅರಸುತ ಸಿಕ್ಕಿದ ಕೃಷ್ಣ ಮುಗುಳ್ನಕ್ಕಹಾಡ ಜೇನಾಗಿಎದೆಯ ಒಳಹೊಕ್ಕಹಾಯೆನಿಸಿದೆ ಮನದೊಳಗೆಪ್ರೇಮ ಕೊಡೆ ಆಸರೆ ಮಳೆಯೊಳಗೆ ಈಗ ಕೃಷ್ಣನಪ್ರೇಮ ಕಾವ್ಯಕ್ಕೆನಾನೂ ರಾಧೆ. **************************

ನಾನೂ ರಾಧೆ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ನಾಲ್ಕು ಹೆಜ್ಜೆ ನಡೆಯಬಹುದಿತ್ತು ಪ್ಯಾರಿಸುತ ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನುಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿಮೆಚ್ಚಿಕೊಂಡಿದ್ದೆ ನಾನುಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನುನಾನು ನೀನು ಮತ್ತು ಭವಿಷತ್ತಿನ ನಮ್ಮೆರಡುಮುದ್ದು ಮಕ್ಕಳಿಗೆ ನೀತಿಯನ್ನುನೀಡಬಹುದಿತ್ತು ನಾವು…ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆಪುಟ ಹಿಮ್ಮುಖವಾಗಿ ಹಾರಿದಂತೆಲ್ಲಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆಕೆಲವು ಪುಟಗಳು ಮಾಸಿ ಹರಿದು ಹೋಗಿವೆಅದರಲ್ಲೇನಾದರೂ ದಾಖಲಿಸಿದ್ದುಉಳಿದಿರಬಹುದೇನೋ…?! ನಾಲ್ಕು ಹೆಜ್ಜೆ ಮುಂದೆ ಹೋಗಿ,ತಿರುಗಿ ನೋಡಿದೆ ನಾನುನನ್ನ ಹೆಜ್ಜೆ ಅಳಿಸಿ,ಗುರುತು ಸಿಗದೆ ಹಲ್ಲು ತೋರಿದೆ ನೀನುನೀನು ನಿಂತ ಜಾಗದಲ್ಲಿ ಬೇರೊರಿದ್ದ ನೆನಪುಗಳು ನನ್ನವುಪಡೆದ ಪ್ರೇಮ ಮಂಜುಗಡ್ಡೆ ಅನಿಸಿ ಕರುಗಿತುಆಗ ಇನ್ನೇನು ಇರುತ್ತೆ ಬಾಳಲಿ…ಒಂದಷ್ಟು ಹಸಿ ಸುಳ್ಳುಗಳುಮತ್ತಷ್ಟು ಕಹಿ ನೆನಪುಗಳುಮಲ್ಲಿಗೆ ಬಳ್ಳಿಯ ಸುತ್ತಗಿರಿಕಿ ಹೊಡೆಯುತ್ತಾ ನೆರಳುಸೂಸುವ ನೆಪದಲ್ಲಿ ಕಾಡಲು ಅಣಿಗೊಳ್ಳುತ್ತಿವೆಯಾವ ಬಿಸಿಲಿಗೆ ಮೈ ಮನಸು ದಣಿಯುತ್ತಿತ್ತೋಅದೇ ಬಿಸಿಲು ಮುದಿ ವಯಸ್ಸಿಗೆ ಬೆನ್ನುಬಿದ್ದಂತಿದೆಯಾವ ಹಾಡುಗಳಿಗೆ ಮೈ ಮನಸು ಕುಣಿಸುತ್ತಿದ್ದೇವೋಅದೇ ಹಾಡಿಗೆ ಕೈಬೆರಳು ಮಾತ್ರ ನರ್ತಿಸುವಂತಾಗಿದೆಕಣ್ಣುಗಳಲ್ಲಿ ಕಣ್ಣನಿಟ್ಟು ಕಾಣುತ್ತಿದ್ದಕನಸುಗಳು ರೆಕ್ಕೆ ಕತ್ತರಿಸಿಕೊಂಡಿವೆಮೆತ್ತನೆ ಎದೆಯ ಮೇಲೆ ಹತ್ತುತ್ತಿದ್ದಸೊಂಪಾದ ನಿದಿರೆ ಬೇಸರ ತಂದಿದೆಸದಾಕಾಲ ಮೂಲೆ ಸೇರಿ ತುಕಡಿಸುತ್ತಿದ್ದವಾಲುವ ಕುರ್ಚಿಅಂಗಳದಲ್ಲಿ ಬಂದು ಕುಳಿತು ಪುರಾಣ ಪ್ರಕಟಿಸಿದೆಇಷ್ಟೆಲ್ಲ ಘಟಿಸಿದರೂ ಮೇಲೂನಾಲ್ಕು ಹೆಜ್ಜೆ ಜೊತೆಗೂಡಬೇಕಿತ್ತು ನೀನು *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೀನವಾಗುವೆ ಕವಿತೆ ಸರಿತಾ ಮಧು ದಟ್ಟ ಕಾನನದ ನಡುವೆದಿಟ್ಟ ಹೆಜ್ಜೆಯನಿಟ್ಟು ನಡೆವೆಸುತ್ತಲೂ ಜೀಂಗುಡುವ ಸದ್ದು‌ಕತ್ತನೆತ್ತಲು ಕಾರ್ಮೋಡಗಳ ಕತ್ತಲುಅಡಿಇಡಲು ಕಲ್ಲು ಮುಳ್ಳಿನ ಹಾದಿಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ ಭಯ , ಹಾ ! ಭಯದಣಿವ ಲೆಕ್ಕಿಸದೇ ಓಡಿದೆ ಮತ್ತೆನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆಅದು ಮಾತ್ರ ಎಂದಿಗೂ ನನ್ನದೇನಾನಲ್ಲಿ , ನಾನು ನನಗಾಗಿ ಮಾತ್ರಏಕಾಂತತೆಯ ಮೌನದೊಳಗೆಲೀನವಾಗುವುದೆನ್ನ ಮನ.. ******************************

ಕಾವ್ಯಯಾನ Read Post »

ಕಾವ್ಯಯಾನ

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ‌ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ ,ಹಾದಿಗಳಲಿಅವು ಹಾದಿಬೀದಿಗಳ ಹಾಡಾಗಲಿ ಗೋಮುಖ ವ್ಯಾಘ್ರಗಳುಖೆಡ್ಡತೋಡಿ ಸಹೋದರಿಯರಮೆದುಳಿಗೆ ವಿಷಉಣಿಸಲು ಸಜ್ಜಾದರೆಹೆಣ್ಣಿಂದಲೇ ಹೆಣ್ಣ ಹಣಿಯಲು ಬಲೆ ಎಣೆದರೆ ನಾ ಸುಮ್ಮನೇ ಕುಳಿತಿರಲೇ ? ವಿಷ ಕಂಡು ನಾನು ಮೌನಿಯಾಗಲೇ ??ನೀ ತಿಳಿದವಳು ; ಮರಳಿ ಬಂದಾಳು …ಹುಸಿ ನಕ್ಕು , ಹೂ ನಗೆ ಚೆಲ್ಲಿಯೆಂದು ಅಂದುಕೊಳ್ಳಲೇ ?? ನೀ ಅಲ್ಲಿನ ಆಸೆ ಅಮಿಷ ಪ್ರಶಸ್ತಿಗಳ ಕಾಲಿಂದ ಒದೆಯುವೆ ಎಂಬುದು ಗೊತ್ತು ನನಗೆ ;ಆದರೆ ಲೋಕಾಪಾವಾದವ ಪರಿವಾರ ಹುಟ್ಟಿಸದೇ ಬಿಡದು….ಹೂಮಾಲೆಯ ಹಗ್ಗ ಮಾಡಿ ಉರುಲು ಹಾಕಿಯೇ ಸಿದ್ಧ ಸನಾತನಿಗಳು ,ಅದು ಅವುಗಳ ಜಾಯಮಾನ ನೀ ಅಲ್ಲಿ ಸೌಜನ್ಯವನ್ನೇ ಬಿತ್ತಿದರೂ ಸಂಕೋಲೆ ತಪ್ಪದು ಅಲ್ಲಿ ಆ ಸಂಘ ಸಮೂಹದಲ್ಲಿ ಇರದಿದ್ದರೂ ತಪ್ಪದು ಅಪವಾದ ಖಚಿತ :ಸ್ತ್ರೀ ಕುಲಕೆ ಅವಮಾನಗಳ ಹೊರಿಸಿ‌ ಬಂಧಿಸಿದ ಜಗತ್ತಿದು ಸೀತೆಯನ್ನೇ ಆಗ್ನಿ ಪ್ರವೇಶ ಮಾಡಿಸಿದ ಪರಿವಾರದ ದಂಡಿದುಬೇಡ ಗೆಳತಿಬಂಗಾರದ ಕಿರಣದಿಂದ ನಿನ್ನ ಸುಟ್ಟಾರುಧಿಕ್ಕರಿಸು, ಧಿಕ್ಕರಿಸಿ‌ ಬಾ ಪರಿವಾರವಒಂಟಿಯಾಗಿ ನಿಲ್ಲು, ಬಾಳ ಗೆಲ್ಲು ಪರಿವಾರದ ವಿಷವ ಕಂಡವ ನಾನುಗೌರಿ ಕೊಂದವರ ಜೊತೆ ಎಂಥ ಮಾತು ಗೆಳತಿ??ಬಾ , ಬಂದು ಬಿಡುನೀ ಈ ನೆಲದ ಕಾವ್ಯವಾಗುಪ್ರಶ್ನಿಸು, ಪ್ರಶ್ನಿಸುತ್ತಲೇ ಇರು **********************************

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು Read Post »

ಕಾವ್ಯಯಾನ

ಶಾಮ

ಕವಿತೆ ಅರ್ಪಣಾ ಮೂರ್ತಿ ಮರೆತು ಮರೆತುನೆನಪಾಗುವನಿನ್ನ ನೆನಪುಗಳು ನೆನಪಾಗಲೆಂದೆಮರೆವು ಮರೆಸಿನೆನಪಿಸಿದೆ ಈಗ, ಗೋಕುಲದಸಂಜೆಗಳುಹೀಗೆ ನಿನ್ನನೆನಪಿನ ನೆಪದಿಂದಕೆಂಪೇರಿಹಗಲಮರೆಸಿದಾಗೆಲ್ಲನೀನಿಲ್ಲಿ ನನ್ನನೆನಪಿಗಿಳಿದಿರುತ್ತಿನೋಡು, ಬಿಗಿದ ಗಂಟಲಬಿಕ್ಕುನಿನ್ನ ನೆನಪಿಗೆ ನಾನಿಳಿದಿರುವೆನೆಂಬುದ ನೆನಪಿಸಿಬಿಡುವುದುಮರೆಯದಂತೆ, ನೀನೆಂದರೆ ಹೀಗೆನೆನಪಾಗದನೆನಪುಮರೆಯಲಾರದಮರೆವು. *******************************

ಶಾಮ Read Post »

ಕಾವ್ಯಯಾನ

ನಿನದೇ ನೆನಪು

ಕವಿತೆ ಮಾಲತಿ ಶಶಿಧರ್ ಈಗೀಗ ದಾರಿಯಲಿ ಒಬ್ಬಳೇಸ್ಕೂಟಿ ಬಿಡುವಾಗ ಹಿಂದೆಯಾರೋ ಕೂತು ನನ್ನನೆಚ್ಚಿನ ಗೀತೆ ಗುನುಗಿದಂತೆ,ತಿರುಗಿ ನೋಡಿದರೆ ಖಾಲಿಸೀಟುಕನ್ನಡಿಯ ಸರಿಪಡಿಸಿಗಮನಿಸಿದರೆ ಕಣ್ಮನಸೆಳೆವ ರೂಪವೊಂದುನಸುನಕ್ಕನಂತೆ.. ಇತ್ತ ಮನೆಯ ಮುಂದಿನರಂಗೋಲಿಯ ಚುಕ್ಕಿಯೊಂದುತಪ್ಪಿಸಿಕೊಂಡಂತೆಎಷ್ಟೇ ಗೆರೆ ಎಳೆದರುರಂಗೋಲಿ ಅಪೂರ್ಣವಾದಂತೆ.. ಮನೆಯ ಸೂರಿನ ಮೇಲೆಕಡಜವೊಂದು ಕಟ್ಟಿದ್ದಮಣ್ಣಿನ ಗೂಡು ಕುಸಿದುಬಿದ್ದಂತೆ,ಮನೆಗಾಗಿ ಹುಡುಕಾಡಿಏಕಾಂಗಿಯಾಗಿ ಬಿಕ್ಕಿದಂತೆ.. ಸ್ನೇಹಿತೆ ನೀಡಿದಗಿಳಿಮರಿ ಜೋಡಿಗಳುಪಂಜರದಲ್ಲಿಬಂಧಿಯಾದಂತೆ,ಲೋಕವನೇ ಮರೆತುಕೊಕ್ಕಿಗೆ ಕೊಕ್ಕುಅಂಟಿಸಿಕೊಂಡು ಅದೇನೊಮಾತಾಡಿದಂತೆ ಹಾಡಿನಲ್ಲೂ, ಕನ್ನಡಿಯಲ್ಲೂಅಪೂರ್ಣತೆಯಲ್ಲೂ,ಅಸಹಾಯಕತೆಯಲ್ಲೂ,ಪಂಜರದಲ್ಲೂಮಾತಿನಲ್ಲೂ,ನೋವಲ್ಲು ನಲಿವಿನಲ್ಲೂಬರೀ ನಿನದೇ ನೆನಪು.. ******************************

ನಿನದೇ ನೆನಪು Read Post »

ಕಾವ್ಯಯಾನ

ಕುದಿವೆಸರ ಅಗುಳಾಗಬೇಕು

ಕವಿತೆ ಪ್ರೇಮಾ ಟಿ ಎಮ್ ಆರ್ ತನ್ನ ಹೀಗಿಟ್ಟವರನ್ನೆಲ್ಲಶಾಪ ಹಾಕಬೇಕೆಂದುಕೊಂಡಿದ್ದುಅದೆಷ್ಟುಬಾರಿಯೋತನಗಿಷ್ಟಬಂದಂತೆಇರಬಹುದಾಗಿದ್ದರೂಅವರಿಟ್ಟ ಪಾತ್ರೆಯೊಳಗೇತುಂಬಿಕೊಂಡಂತೆಬದುಕಿದ್ದು ತನ್ನದೂತಪ್ಪಲ್ಲವಾ?ಮತ್ತೆ ಈ ಮನೆಅಪ್ಪ ಅಮ್ಮ ಅತ್ತೆಮಾವಈ ಮಗಳ ಅಪ್ಪಎಲ್ಲರೂ ತನ್ನವರಲ್ಲವೇಎಂದುಕೊಳ್ಳುತ್ತಲೇಅವಳು ಅವಳಂತಿರದೇಅಮ್ಮನಂತೆ ಅಕ್ಕನಂತೆಬದುಕ ಬದುಕುತ್ತಲೇಇದ್ದಾಳೆ ಎಗರಿಬೀಳಬೇಕಾದಲ್ಲೆಲ್ಲತಣ್ಣೆ ಅಂಬಲಿಯಂತೆಹಳ್ಳೆಣ್ಣೆಯಂತೆಹಂದಾಡುತ್ತಾಳೆ ಮಂದಮಂದವಾಗಿಮನೆಮುಂದೆ ಬಿದ್ದುಕೊಂಡಪೆದ್ದಮುಂಡೆಯಂಥಕಾಲ್ದಾರಿಯೇ ತಾನೆಂದುಕೊಂಡಿದ್ದುಅದೆಷ್ಟು ಬಾರಿಯೋಉಗುಳಿ ಉಚ್ಚೆ ಹೊಯ್ದರೂಹೊದ್ದು ಮಲಗಿಕೊಂಡ ಬೀದಿ ತಡೆಯಲಾರದೇ ಗುಡಗುಡಿಸಿದ್ದೂಇದೆಯಾದರೂ ಮತ್ತೆಪಶ್ಚಾತ್ತಾಪದ ಉರಿಯೂಅವಳ ಉಡಿಗೇಕುದಿವೆಸರೊಳಗಿನ ಅಗುಳಾಗಿಮುಚ್ಚಳ ಕೊಡವಿ ಉಕ್ಕಬೇಕುಸಿಡಿಯಬೇಕು ಬಿಡಿಯಾಗಿ ಹಿಡಿಯಾಗಿಒಟ್ಟಿದ ಒಲೆ ಆರುವ ತನಕಹುದುಗದೇ ಬುದುಗಬೇಕುಒಮ್ಮೆಗಾದರೂ ಅಂದುಕೊಳ್ಳುತ್ತಾಳೆ

ಕುದಿವೆಸರ ಅಗುಳಾಗಬೇಕು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************

ಗಝಲ್ Read Post »

ಕಾವ್ಯಯಾನ

ಕವಿತೆ.

ಕವಿತೆ ವಾಯ್.ಜೆ.ಮಹಿಬೂಬ ನೀ ಬರುವಾ ಹಾದಿಯೊಳಗೆಗಿರಿಮಲ್ಲೆ ಹಾಸಲೇನ ?ನಾ ನೆರಳಾಗಿ ನಿಲ್ಲಲೇನ !? ನೀ ಹಾಡೋ ರಾಗದಲ್ಲಿಧ್ವನಿಯಾಗಿ ಕೇಳಲೇನ ?ನಾ ರಸವಾಗಿ ಸುರಿಯಲೇನ ? ನೀ ಕುಡಿವ ಪ್ರಾಣ ಹನಿಗೂಮದುವಾಗಿ ಬೆರೆಯಲೇನ ?ನಾ ತತ್ರಾಣಿಯಾಗಲೇನ ? ನಿನ್ನ ನವಿಲುಗರಿಕೆ ಜಡೆಗೆಪಚ್ಚೆ ಮಲ್ಲೆ ತೊಡಿಸಲೇನ-?ದಳ ಕಮಲ ಹೊದಿಸಲೇನ-? ಕರುನಾಡ ಕಣ್ಣ ಹೆಣ್ಣೆಮಗುವಾಗಿ ಪಡೆಯಲೇನನಾ ಗುರುವಾಗಿ ಕರೆಯಲೇನ ? *****************************

ಕವಿತೆ. Read Post »

You cannot copy content of this page

Scroll to Top