ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಧಾ ಕೃಷ್ಣ

ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ ನೋಟಕ್ಕೆ ನೂರು ರಂಗಾಗಿಕೈಗೆ ಸಿಗಲಾರದ ಕನಸುಗಳಿಗೆಲ್ಲ ರೆಕ್ಕೆ ಬರಿಸಿಮುಟ್ಟಾಗದೆ ಉಳಿವ ರಾಧೆಗೆ ಜೀವ ಕಾವ್ಯದ ವೇಷ ತೊಟ್ಟ ರಾಧೆಗೊಂದು ದ್ವಾರಕೆ ಕಟ್ಟಿಪ್ರೀತಿಸುವ ಜೀವಕ್ಕೆ ಅರ್ಪಿತಗೊಂಡರಾಧಾ ಕೃಷ್ಣನಾಗಿ ಲೋಕಾರ್ಪಣಗೊಂಡ ಪ್ರೀತಿ ರೂಪದ ಮಾದರಿ ನೀ ಮುಕುಂದಯುಗಾಂತರಿಸು ಸುರಿಸು ಪ್ರೀತಿ ಸಿಂಚನಯುಗ ಭಾರವನಿಳಿಸಿ ತಣಿಸು ಉದ್ಧರಿಸುಹಂಚು ವಿಶ್ವರೂಪ ಜೀವಕುಲಕೆಲ್ಲ ಸ್ನೇಹಸಿಂಚನಗೋಪಿ ರಾಧೆಯರಿಗೊಂದಿಷ್ಟು ಪ್ರೇಮ ಕಂಪಣ *********************

ರಾಧಾ ಕೃಷ್ಣ Read Post »

ಕಾವ್ಯಯಾನ

ದೇವರು

ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************

ದೇವರು Read Post »

ಕಾವ್ಯಯಾನ

ಕವಿತೆ

ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. ಚಂದ್ರ ನಗುತ್ತಾನೆಹೀಗೇಕೆ ಮಾಡಿದೆ ತರುಣೆ.. ಕೇಳುತ್ತಾನೆಕನಸುಕಂಗಳಿಗೆ ಹರಿದ ಮಬ್ಬುಕಗ್ಗತ್ತಲೆನೀನಾಗು ನನ್ನ ನಗುವಿನ ತಿಳಿನೊರೆ.. ಬೆಳ್ನೊರೆ.ಅಪ್ಪಿಬಿಡು ಮನಸಾರೆ.. ಸಂಗತಿಗಳೇನು ಘಟಿಸಿಲ್ಲವಿಲ್ಲಿ.. ಅಸಂಗತವೂಸುಸಂಗತವೋ.. ಅರಿಯುವ ತವಕದೊಳಗೆಇದ್ದವರ್ಯಾರು..?ಬೆಚ್ಚಿ ಓಡುವ ಕುದುರೆ ಹಿಡಿದವರ್ಯಾರು..ಬಂದು ಬಿಡೆ ನನ ಮನದೊಳಗೆ ನುಗ್ಗಿಬಿಡೆತಡೆಯುವರ್ಯಾರು.. ನನ್ನ ಪದನುಡಿಯಪ್ರೀತಿಥೇರಿಗೆ ಅಡ್ಡ ನಿಲ್ಲುವರಾರು…??!! ಇರಬೇಕು ನೀನು.. ನಕ್ಷತ್ರಗಳ ನಗುವಾಗಿ..ಹೊಳಪಾಗಿ ಇಳಿಸಂಜೆ ಸೂರ್ಯನ ಹೊನಲಾಗೀ. .ಚಂದ್ರನ ತಂಪಾಗಿ.. ನನ್ನೊಲವ ಇಂಪಾಗಿ.. ಕಾವ್ಯಕನ್ನಿಕೆಯಾಗಿ ಏದೆಯಾಳದಿ ಸೊಂಪಾಗಿಕೊರಳ ಹಾಡಿನ ಪದವಾಗಿ.. ಕಿವಿ ತಣಿಸೋ ಮಾಧುರ್ಯವಾಗಿ.. ನನ್ನ ಪ್ರೀತಿಯರಮನೆಯ ಅರಸಿಯಾಗಿ.. ಇರಬೇಕು ನೀನು..ನನ್ನೊಲವ ಸಿರಿಯಾಗಿ ಬಿಸಿ ಬಯಕೆಯಉಸಿರಾಗಿ.. **********************

ಕವಿತೆ Read Post »

ಕಾವ್ಯಯಾನ

ಕವಿತೆ

ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.

ಕವಿತೆ Read Post »

ಕಾವ್ಯಯಾನ

ಕವಿತೆ

ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************

ಕವಿತೆ Read Post »

ಕಾವ್ಯಯಾನ

ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ‌ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–

ಕವಿತೆ Read Post »

ಕಾವ್ಯಯಾನ

ಕವಿತೆ

ಸಂಗಾತಿ ಅರುಣಾ ರಾವ್ ಎನ್ನ ಮನ ದೇಗುಲದಗಂಟೆಯನು ಬಾರಿಸಿಪ್ರೀತಿಯ ಬಡಿದೆಬ್ಬಿಸಿದಇನಿಯ ನೀ ಯಾರು? ಆ ನಾದವನು ಕೇಳಿತಲೆದೂಗುವ ಹಾವಂತೆಎನ್ನ ನಿನ್ನೆಡೆಗೆ ಸೆಳೆದಿಹಸಖ ನೀ ಯಾರು? ಬತ್ತಿದ್ದ ಎನ್ನ ಬಾಳಲ್ಲಿಪ್ರೀತಿ ಹನಿಗಳ ಚಿಮುಕಿಸಿಒಲವ ಹೊಳೆ ಹರಿಸಿದಗೆಳೆಯ ನೀ ಯಾರು? ಮುಚ್ಚಿದ್ದ ಎದೆ ಬಾಗಿಲಿನಚಿಲಕವನು ಅತ್ತ ಸರಿಸಿಒಳ ಹೊಕ್ಕು ನಿಂತಿಹಸಂಗಾತಿ ನೀ ಯಾರು? ನೀ ಯಾರಾದರೇನುಈಗಂತೂ ನನ್ನವ ನೀನುಎನ್ನ ಬಾಳ ದೇಗುಲಕೆಹೊನ್ನ ಕಳಶ| *******************************

ಕವಿತೆ Read Post »

ಕಾವ್ಯಯಾನ

ಕವಿತೆ

ಎಷ್ಟೊಂದು ಕಾಳಜಿ..!? ರುಕ್ಮಿಣಿ ನಾಗಣ್ಣವರ ಹರವಾದ ಎದೆಯನೀಳ ತೋಳುಗಳಬರಿ ಮೈಯ ಮಹಾಭುಜನೇಬಾಣ ಹೆದೆಗೇರಿಸಿಸಂಚು ಹೂಡಿದನಿನ್ನ ಕಣ್ಣೋಟದ ಮೊನಚಿಗೆನಾನೆಂದೂ ಒಲಿದವಳಲ್ಲ ರದ್ದಿ ಸಾಲದೆಕಿಂಗುಸೈಜು ಪುಸ್ತಕಗಳೆದೆ ತುಂಬಅದೆಷ್ಟು ಕೈಗಳುಎಷ್ಟೋ ನಮೂನೆಯನಿನ್ನ ಹೆಸರು ಬರೆದುಜೈಕಾರ ಗೈದುಉಸಿರ ಹಿಡಿದು ಜಪಿಸಿದರೂನೀನು ಒಲಿದವನಲ್ಲ ಕಾಡಿನಲಿ ಆಡಿಕೊಂಡಿದ್ದಮೊಲದ ಮರಿಗಳುನಿನ್ನವೇ ಬೀಜಗಳು ಎಂಬ-ಸಬೂಬು ದೊರೆತುಲೋಕವನುಗೆದ್ದೆನೆಂದು ಬೀಗಿದವ ನೀನು ಮರ್ಯಾದೆ ಪುರುಷೋತ್ತಮನೇನಿನ್ನ ಅಸಲಿತನದಖಾತರಿ ಮಾಡಿಕೊಂಡೇಮತ್ತೆಂದೂ ನಿನ್ನ ಬಯಸದೆಮೂಲ ನೆಲೆಗೆ ಮರಳಿದವಳಿಗೆತನ್ನತನದ ಹುಡುಕಾಟವಿತ್ತು ತನ್ನನ್ನು ಮಾತ್ರ ಭಜಿಸಿನನ್ನನ್ನು ನನ್ನಜ್ಜಿ, ಮುತ್ತಜ್ಜಿಯರನ್ನುಹೀನರೆಂದು ಬಗೆದತರತಮಗಳನು ತೂಗುವನಿನ್ನವರ ಕಣ್ಣೋಟಮೊದಲು ಸರಿಪಡಿಸು ನನಗೆ ನಂಬಿಕೆಸಮತೆಯನುಯೋಗವೆಂದು ಸಾಧಿಸುವರಕ್ತ ಮಾಂಸ ತುಂಬಿರುವದೇಹಗಳ ಮೇಲೆಯಾವೊಂದರಲೂಆದರ್ಶವಾಗದವರಆರಾಧಿಸುವ ಮೂಢತನನನ್ನಲ್ಲಿಲ್ಲ ಕ್ಷಮಿಸು ಇಲ್ಲೀಗಯಕಶ್ಚಿತ ಕ್ಷುದ್ರ ಜೀವಿಯೊಂದುಶ್ವಾಸಕೋಶಗಳಲಿ ಮನೆಮಾಡಿಅಟ್ಟಹಾಸ ಮೆರೆದಿದೆಸಂಬಂಧಿ ಇಲ್ಲದ ಶವಗಳ ಮೇಲೆಅನಾಥತೆ ಹೊದ್ದು ಮಲಗಿಮನುಷ್ಯತ್ವದ ಪರೀಕ್ಷೆ ನಡೆಸಿದೆ ದುಡಿಯುವ ಕೈಗಳ ಕಟ್ಟಿಹಸಿವುಗಳದೇ ರಣಕೇಕೆಮಾಮೂಲಿಯಾಗಿದೆ ಕೇಳಿಸಿಕೊಳ್ಳುವುದುಈ ನಡುವೆಬಂಡವಾಳ ಬಡಾವಣೆ ಜನರಿಗೆ ಹಬ್ಬವಂತೆ ಮನೆಮನೆಯಿಂದ ಹೊರಟುನಿಂತಿವೆಕೆಜಿಗಟ್ಟಲೇ ತೂಗುವಅರಿಷಿಣ, ಬಿಳಿ ಲೋಹಗಳುಹಸಿದೊಡಲಗಳ ಕೂಗು ಕೇಳದ ಇವರಿಗೆಉಣ್ಣದ ಲಿಂಗದ ಮೇಲೆಎಷ್ಟೊಂದು ಭಕುತಿಎಷ್ಟೊಂದು ಕಾಳಜಿ!? **********************************

ಕವಿತೆ Read Post »

ಕಾವ್ಯಯಾನ

ಕವಿತೆ

ಆ – ಲಯ ಡಾ. ಅಜಿತ್ ಹರೀಶಿ ಆ ಕಲ್ಲುಗಳುಭೂಕಂಪಕ್ಕೆ ಸಿಲುಕಿನಡುಗಿ ಅಡಿಗಡಿಗೆಕುಸಿದು ಬಿದ್ದುದು ಅಲ್ಲ ಆಕಸ್ಮಿಕವಾಗಿಅದೇನೋ ತಾಗಿಅಲುಗಾಡಿನೆಲಕ್ಕುರುಳಿದ್ದೂ ಅಲ್ಲ..! ಏಕಶಿಲೆಯಂತೆಭದ್ರವಾಗಿದ್ದವುಗಳಬಡಿ-ಬಡಿದುಕೆಡವಿದ್ದು ನಾನೇ.. ಪಥ ಬದಲಿಸಿಸಮಯದಿಬಂಧಿಸುವ ಧನ್ಯನಾದಮೊಳಗಲೇ ಬೇಕಿದೆಕ್ರೀಯಾಶೀಲ ನಿನಾದ ಉರುಳಿ ಹೋದಕಲ್ಲುಗಳ ಆಯ್ದುಮತ್ತೆ ಕಟ್ಟಬೇಕಿದೆಅಡಿಯಿಂದಮುಡಿಯವರೆಗೂ..! * *

ಕವಿತೆ Read Post »

ಕಾವ್ಯಯಾನ

ಕವಿತೆ

ಖಾಲಿ ಬೆಂಚುಗಳ ಪ್ರಶ್ನೆ ದೇವು ಮಾಕೊಂಡ ನರೇಂದ್ರ, ನರೇಂದ್ರ!ಆಗ ಕೂಗಿನಲಿಏಕನಾದವಿತ್ತು ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವುಕವಿತೆಯಾಗಿಹಾಡಾಗಿ ಈಗಆತಕಥೆಯಾಗಿದ್ದಾನೆಉಪಮೇಯಗಳ ನಡುವೆ ಸಿಲುಕಿಅಂತೆಕಂತೆಗಳ ಸಾಲು ಸೇರಿ ಅವನು ಕಟ್ಟಿ ಮೇಯಿಸಿದ ಧರ್ಮಹಗ್ಗ ಹರಿದುಕೊಂಡುಗೂಟ ಬದಲಿಸಿಕೊಂಡಿದೆಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳುಹಸಿಮಣ್ಣಿನ ಹುಸಿ ಬೀಜಗಳಾಗಿವೆ ನಾವೀಗ ಖಾಲಿ ಮೇಜುಗಳ ಹಿಂದೆ ನಿಂತುಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲಸಂತನೆಂದುಸನಾತನ ಪರಿಚಾರಕನೆಂದು ಈಗಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆಅವನ ಮನೆಗೆ ಬಾಗಿಲುಗಳು ಎಷ್ಟೆಂದುಹಾಗಾಗಿನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ ************************

ಕವಿತೆ Read Post »

You cannot copy content of this page

Scroll to Top