ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” ಜಂಭದಿಂದ , ಗತ್ತು ತೋರಿದ್ದ ,ಡೊಳ್ಳು , ನಗಾರಿಯ ಸದ್ದುಮೂಲೆ ಸೇರಿತ್ತು. ಹಗಲು , ರಾತ್ರಿ ಗಂಟಲುಅರಚಿಕೊಂಡ ಧ್ವನಿವರ್ಧಕ ,ತಣ್ಣಗಾಗಿದ್ದವು. ತಮ್ಮ ಸರಕಿಗೆ ಬೆಲೆ ಕೂಗಿದಮಾರಾಟಗಾರರು , ಹುರುಪಿನಿಂದಲಾಭ ನಷ್ಟದ ಲೆಕ್ಕದಲ್ಲಿದ್ದರು. ಮನೆ , ಮನೆಗಳಲ್ಲಿ ತುಂಬಿದನೆಂಟರು , ನಕ್ಕು ನಲಿದುಸ್ವ ಊರಿಗೆ ಮುಖ ಮಾಡಿದರು. ಊರಿನ ಹಾದಿ , ಬೀದಿಯಲಿಕಸದ ರಾಶಿ ಸಣ್ಣಗೆ ಕೊಳೆತುಗಬ್ಬು ನಾರಲು ಶುರುವಾಯಿತು . ದಣಿವರಿಯದೇ ಹುರುಪಿನಿಂದಸಿಂಗರಿಸಿಕೋಂಡು , ಅತ್ತಿತ್ತ ಸುಳಿದತರುಣ , ತರುಣೀಯರು ಸುಸ್ತಾಗಿದ್ದರು ಉತ್ಸವದಲ್ಲಿ ಪಲ್ಲಕ್ಕಿ ಹೊತ್ತವರುಪುನೀರಾದೆವೆಂದು ಬೀಗಿದ್ದರು ,ಮೂರ್ತಿ ಮಾತ್ರಾ ಶಾಂತವಾಗಿತ್ತು. ಗುಡಿಯಲ್ಲಿರುವ ದೇವರುಜಾತ್ರೆಗೆ ಬಂದ ಭಕ್ತರಪಾಪ – ಪುಣ್ಯಗಳ ಲೆಕ್ಕಾಚಾರದಲ್ಲಿದ್ದ. ಮುಗಿದಿದ್ದ ಜಾತ್ರೆ ಬರೀ ದೇವರದ್ದಲ್ಲ , ಮುಂದೊಂದು ದಿನ,ನಮ್ಮ ಬದುಕಿನದ್ದೂ ಸಹ . ಇದ್ದಾಗಿನ ಸದ್ದು ಗದ್ದಲ ಒಮ್ಮೆಗೆನಿಶ್ಯಬ್ದವಾಗುತ್ತದೆ , ಆತ್ಮವೆಂಬ ದೇವರುಪಾಪ – ಪುಣ್ಯಗಳ ತೂಕ ಹಾಕುವುದು…. ಪರವಿನಬಾನು ಯಲಿಗಾರ