ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು ಕ “ನರಕಾಗ್ನಿ” ಸಾವಿಲ್ಲ….ಆತ್ಮಕ್ಕೂ ಸಾವಿಲ್ಲಪರಮಾತ್ಮನಿಗೂ ಸಾವಿಲ್ಲ,! ಸಾವು ಶರೀರಕ್ಕಷ್ಟೇಆತ್ಮವು ಶರೀರ ತ್ಯಜಿಸಿ ಸೇರುತ್ತೇಪರಮಾತ್ಮನ ಪಾವನ ಸನ್ನಿದಾನಕ್ಕೆ,! ಪಾಪದ ಕೊಡ ತುಂಬಿದಆತ್ಮವನು ಒಲ್ಲೆನು ಪರಮಾತ್ಮನುನರಕವೆಂಬ ಆಗ್ನಿಯ ನೀ ಬಾಯೊಳಗೆ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” ಜಂಭದಿಂದ , ಗತ್ತು ತೋರಿದ್ದ ,ಡೊಳ್ಳು , ನಗಾರಿಯ ಸದ್ದುಮೂಲೆ ಸೇರಿತ್ತು. ಹಗಲು , ರಾತ್ರಿ ಗಂಟಲುಅರಚಿಕೊಂಡ ಧ್ವನಿವರ್ಧಕ ,ತಣ್ಣಗಾಗಿದ್ದವು. ತಮ್ಮ ಸರಕಿಗೆ ಬೆಲೆ ಕೂಗಿದಮಾರಾಟಗಾರರು , ಹುರುಪಿನಿಂದಲಾಭ ನಷ್ಟದ ಲೆಕ್ಕದಲ್ಲಿದ್ದರು. ಮನೆ , ಮನೆಗಳಲ್ಲಿ ತುಂಬಿದನೆಂಟರು , ನಕ್ಕು ನಲಿದುಸ್ವ ಊರಿಗೆ ಮುಖ ಮಾಡಿದರು. ಊರಿನ ಹಾದಿ , ಬೀದಿಯಲಿಕಸದ ರಾಶಿ ಸಣ್ಣಗೆ ಕೊಳೆತುಗಬ್ಬು ನಾರಲು ಶುರುವಾಯಿತು . ದಣಿವರಿಯದೇ ಹುರುಪಿನಿಂದಸಿಂಗರಿಸಿಕೋಂಡು ,  ಅತ್ತಿತ್ತ ಸುಳಿದತರುಣ , ತರುಣೀಯರು ಸುಸ್ತಾಗಿದ್ದರು ಉತ್ಸವದಲ್ಲಿ ಪಲ್ಲಕ್ಕಿ ಹೊತ್ತವರುಪುನೀರಾದೆವೆಂದು ಬೀಗಿದ್ದರು ,ಮೂರ್ತಿ ಮಾತ್ರಾ ಶಾಂತವಾಗಿತ್ತು. ಗುಡಿಯಲ್ಲಿರುವ ದೇವರುಜಾತ್ರೆಗೆ ಬಂದ ಭಕ್ತರಪಾಪ – ಪುಣ್ಯಗಳ ಲೆಕ್ಕಾಚಾರದಲ್ಲಿದ್ದ. ಮುಗಿದಿದ್ದ ಜಾತ್ರೆ ಬರೀ ದೇವರದ್ದಲ್ಲ , ಮುಂದೊಂದು ದಿನ,ನಮ್ಮ ಬದುಕಿನದ್ದೂ ಸಹ . ಇದ್ದಾಗಿನ ಸದ್ದು ಗದ್ದಲ ಒಮ್ಮೆಗೆನಿಶ್ಯಬ್ದವಾಗುತ್ತದೆ , ಆತ್ಮವೆಂಬ ದೇವರುಪಾಪ – ಪುಣ್ಯಗಳ ತೂಕ  ಹಾಕುವುದು…. ಪರವಿನಬಾನು ಯಲಿಗಾರ    

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” Read Post »

ಕಾವ್ಯಯಾನ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ

ಕಾವ್ಯ ಸಂಗಾತಿ “ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ ಕಟ್ಟಬೇಕಿದೆ ನಾವು ನಾಡೊಂದನಸರಿ ಸಮಾನತೆಯ ಬಿಡೊಂದನ.!!ಪ!! ಬಿತ್ತರಿಸುತಿಹರಿಂದು ಆ ಜಾತಿ ನಂದೆಂದುಕತ್ತರಿಸಿ ಹಾಕೋಣ ಜಾತಿಯ ಗಿಡವಿಂದುಎಚ್ಚರಿಸಿ ನಡೆ ನೀ ಮೌಢ್ಯತೆಯ ಕೊಂದುಉಚ್ಚರಿಸು ನಾವೆಲ್ಲ ಭಾರತೀಯರೆಂದು ಕಟ್ಟಿಹರು ನಾಡ ಬಿಸಿಲು ಬೇವರಲಿ ಬೆಂದುಕೊಟ್ಟಿಹರು ಸ್ವಾತಂತ್ರ್ಯ ಲಕ್ಷ ಬಲಿದಾನ ಗೈದುಬರೆದರು ಸಂವಿಧಾನ ಸಮಪಾಲಿರಲೆಂದುಕರೆ ಕೊಟ್ಟರು ಅಸ್ಪೃಶ್ಯತೆ ತೊಲಗಲಿ ಎಂದು ಸ್ಮರಿಸೋಣ ನಮ್ಮವರ ತ್ಯಾಗ ಬಲಿದಾನವನ್ನುಕೊರೋಣ ಹಿರಿ ಜೀವಗಳಿಗೆ ಶಾಂತಿಯನ್ನುತೊರೆಯೋಣ ನಾವು ಜಾತಿ ಮತ ಪಂಥಗಳನ್ನಮರೆಯೋಣ ಅಸೂಯೆ ಬೇಧ ಭಾವಗಳನ್ನು ಕಿತ್ತೋಣ ಜಾತಿ ಧರ್ಮದ ಜಾಲಿಯ ಮುಳ್ಳುಬಿತ್ತೋಣ ಮನುಜ ಮತದ ಪ್ರೀತಿ ಬಿಳಿ ಎಳ್ಳುಹಚ್ಚೋಣ ಅನ್ಯೋನ್ಯತೆಯ ಅಮೃತ ಬಳ್ಳಿಬಿಚ್ಚೋಣ ಕಟ್ಟಿರುವ ಕೋಮುವಾದದ ಸರಪಳಿ ಬಸವರಾಜ್ ಚೌಡ್ಕಿ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ ಗಜಲ್ ನಿನ್ನ ಪಥದಲಿ ನಾನಿರುವೆ ಎಂದು ನಂಬುವುದು ಹುಸಿ ಮಾತುನನ್ನ ದಾರಿಯಲಿ ನಿನ್ನ ಹೆಜ್ಜೆಗಳಿವೆ ಎಂದು ತಿಳಿಯುವುದು ಹುಸಿಮಾತು ನೀನಾಡಿದ ಮಾತುಗಳಲಿ ಮಿಥ್ಯದ ನರ್ತನ ವಿಜೃಂಭಿಸಿರಬಹುದುನಿನ್ನೊಂದಿಗಿದ್ದ ಸಮಯದಲಿ  ಮುಖವಾಡ ಧರಿಸಿಲ್ಲವೆನ್ನುವುದು ಹುಸಿಮಾತು ಯಾವ ಕೋನದಿಂದ ನೋಡಿದರೂ ಸಂಪೂರ್ಣ ಕೇಂದ್ರ ಸೆಳೆಯದುಕಣ್ಣೆರಡು ನೋಟ ಅದೇ ಆದರೂ ಗ್ರಹಿಕೆ ಒಂದೇ ಆದೀತೆನ್ನುವುದು ಹುಸಿ ಮಾತು ಒಂದೇ ದೋಣಿಯ ಪಯಣಿಗರು ನಿಜವದು ಇಲ್ಲವೆನ್ನಲಾಗದುಜಗದ ಕಟು ವಾಸ್ತವದ ಜೊತೆ ನಿನ್ನನ್ನೂ ಲೋಕ ಒಪ್ಪಿಕೊಳ್ಳುವುದು ಹುಸಿಮಾತು ಹಕ್ಕುಗಳನ್ನು ಚಲಾಯಿಸುತ್ತಲೇ ನಡೆದಲ್ಲಿ ಪ್ರೀತಿ ಗೆ ಅಲ್ಲಿ ಜಾಗವಿಲ್ಲ #ಅನುಕೇಳಿ ಯಾಚಿಸಿ ಕಾಡಿಸಿ ಪಡೆವ ಸುಖ ಸಂತಸ ನಿಜವೆನ್ನುವುದು ಹುಸಿಮಾತು ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು”

ಕಾವ್ಯ ಸಂಗಾತಿ ಸಿ.ಎಚ್.ಮಧುಕುಮಾರ “ಕವಿಪತ್ನಿಯ ಅಳಲು” ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದುಊರೂರು ಸುತ್ತುವ ಅರೆಜೋಗಿಯೇಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳನೆನೆನೆನೆದು ಹಣ್ಣಾಗಿರುವೆಈ ಹೆಣ್ಣಿಗಾಗಿ ಚೂರು ಸಮಯವಿದೆಯೆ? ನೀನಿತ್ತ ಆ ಎರಡು ಮಕ್ಕಳೋನಿನ್ನದೇ ಅಪರಾವತಾರ ಎಂಬಂತೆಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು? ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!ಅರ್ಥೈಸಿಕೊಳ್ಳಲಾಗುತ್ತಿಲ್ಲ ಚೂರೇ ಚೂರು ಸಮಯವಿದ್ದರೆಬಂದು ಬಿಡಿ ಒಂದು ಬಾರಿ ನನ್ನೊಂದಿಗೆ. ಅರಿಸಿನ ಕುಂಕುಮ ತೆಗೆದುಕೊಳ್ಳಲುಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನುನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿಹೊರಟು ಬನ್ನಿ ಮನೆಗೆನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ! – ಸಿ.ಎಚ್.ಮಧುಕುಮಾರ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು” Read Post »

ಕಾವ್ಯಯಾನ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ

ಕಾವ್ಯ ಸಂಗಾತಿ ಡಾ ಬಿ ಎನ್‌ ತಾರಾ ಧಾರವಾಡ “ಸಾವ ತುಟಿಯೂ ನಗು ಹೊತ್ತಿರಬೇಕು” ಬದುಕು ಹೆಂಗಿರಬೇಕು,ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕು.ಹಸಿವು ಅಸಾಧ್ಯವಾದರೂಆಸೆಯ ದೀಪವೊಂದುಎದೆಯಲಿ ಹೊತ್ತಿರಬೇಕು.ಬಿದ್ದೆವೆಂದು ಭಯಪಟ್ಟು ಮೌನವಾದರೆ,ಬದುಕು ಪಾಠಕಲಿಸೋದಿಲ್ಲ.ಕಣ್ಣೀರ ಹನಿಗಳು ನೆಲ ಸೇರುವ ಮುನ್ನ, ಮುತ್ತಾಗುವಷ್ಟುಮೌಲ್ಯವಿರಬೇಕು.ಹಾರದೆ ಮುರಿದ ಕನಸುಗಳ  ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.ನೋವಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ,ಅರ್ಥವುಮೌನವಾಗಿ ನಗಬೇಕು.ಸೋಲಿನ ನೆರಳು ಮೇಲೆ ಬಿದ್ದರೂ,ಕಾಲದ ಹೊಡೆತಎದೆ ಚೂರಿದರೂಧೈರ್ಯವೆಂಬ ಬೇರು ಇರಬೇಕು. ನಗು  ನಗುತಿರಬೇಕು ಸಾವಿರ ನೋವಿಗೆಉತ್ತರವಾಗಬೇಕು.ಕೊನೆಯ ಉಸಿರಿನ ಕ್ಷಣದಲ್ಲೂ,ಜೀವನ ಜಯಿಸಿದತೃಪ್ತಿಯಿರಬೇಕು.ಸಾವ ಬಂದಾಗದೇಹ ಮೌನವಾದರೂ,ಮನಸ್ಸು ಮಾತ್ರ ರಾಗ ಹಾಡುತ್ತಿರಬೇಕು. ಬದುಕಿದ ಜೀವಕ್ಕೆಸಾವ ತುಟಿಯೂನಗುವ ಹೊತ್ತಿರಬೇಕು.ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕ,ಕಣ್ಣೀರ ಹನಿಗಳುನೆಲ ಸೇರುವ ಮುನ್ನ,ಮುತ್ತಾಗುವಷ್ಟ ಮೌಲ್ಯವಿರಬೇಕು.ಆಕಾಶಕ್ಕೆ ಹಾರದೆ ,ಹೊಸ ಕನಸಿನ ಬೀಜನೋವಿನ ಪ್ರತಿಯೊಂದುಹೆಜ್ಜೆಯ ಹಿಂದೆಯೂ,ಅರ್ಥ ಮೌನವಾಗಿ ನಗಬೇಕು.ಭ್ರಮಿಸಬಾರದು.ಕಾಲದ ಹೊಡೆತ ಎದೆ ಚೂರಿದರೂ ಸಹ,ಧೈರ್ಯವೆಂಬ ನಡುಗದ ಬೇರು ಇರಬೇಕು. ನಗು ಸಣ್ಣದಾದರೂ ಸಾಕು,ಅದು ಸಾವಿರ ನೋವಿಗೆ ಉತ್ತರವಾಗಬೇಕು. ಉಸಿರಿನ  ಕ್ಷಣದಲ್ಲೂ,ಜೀವನ ಜಯಿಸಿದೆವೆಂಬ ತೃಪ್ತಿಯಿರಬೇಕು.ಮನಸ್ಸು  ಹಾಡುತ್ತಿರಬೇಕು.ಸಾವ ತುಟಿಯೂನಗುವ ಹೊತ್ತಿರಬೇಕು. ಡಾ ತಾರಾ ಬಿ ಎನ್ ಧಾರವಾಡ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನೆನಪಾಗುತ್ತಾರೆ” ಗೆಳೆಯರೆಸತ್ಯ ಶುದ್ಧತೆಗೆಇಲ್ಲ ಬೆಲೆ ಗೌರವಉಪ್ಪಿನಲ್ಲಿ ಕಾಣದ ಇರುವೆಗಳುಸಕ್ಕರೆಯಲ್ಲಿ ಮುಕ್ಕುತ್ತವೆ.ಹಾಲು ಮಾರುವವನುಓಣಿ ಕೇರಿ ತಿರುಗಬೇಕುಹಾಲು ಕೊಳ್ಳುವವರು ಕೇಳುತ್ತಾರೆನೀರೆಷ್ಟು ಬೆರೆಸಿದೆಯೆಂದುಆಲ್ಕೊಹಾಲ್ ಮಾರುವವನಅಂಗಡಿಯಲ್ಲಿ ಜನ ಜಂಗುಳಿಅವರೆ ಸಾರಾಯಿಯಲ್ಲಿನೀರು ಸೋಡಾ ಬೆರೆಸಿ ಸಂಭ್ರಮಿಸುತ್ತಾರೆಮನುಷ್ಯನಿಗೆ ಪಶುವೆಂದರೆಎಲ್ಲಿಲ್ಲದ ಕೋಪಸಿಂಹ ಹುಲಿಯೆಂದರೆಹಿಗ್ಗಿ ಕುಣಿಯುತ್ತಾನೆ.ಪಾಪ ಅವನಿಗೆ ಗೊತ್ತಿಲ್ಲಅವುಗಳು ಪಶುವೆಂದುತಿಳಿ ನೀರಿನಲ್ಲಿ ಎಂದೂ ಮೀನು ವಾಸಿಸುವುದಿಲ್ಲಕೊಳಚೆಯಲ್ಲಿ ಅವುಗಳ ಸಂತೆಸತ್ಯ ಹೇಳುವವನಿಂದುಒಂಟಿಯಾಗುತ್ತಿದ್ದಾನೆಸುಳ್ಳಿಗೆ ಸನ್ಮಾನದ  ಪಟ್ಟನೆನಪಾಗುತ್ತಾರೆಬುದ್ಧ ಬಸವ ಬಾಪುಸತ್ಯ ಹೇಳಿ ಬಿಟ್ಟು ಹೋದರು ಜಗವ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ” Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ ಅನಂತತೆಯ ಹರವಿನಲಿ ನಾನೊಂದು ಬಿಂದುಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದುಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಶರಣಾಗಿರುವೆ ನಿನಗೀಗ” ಓ ಮೌನವೇ! ಮಹಾಮೌನವೇ!ನೀರವ ನಿರಾಳ ಮೌನವೇ!ಬಾ ನನ್ನೆದೆಯಾಳದಲಿನಿಶ್ಚಲವಾಗಿ ನೆಲೆಸುಶರಣಾಗಿರುವೆ ನಿನಗೀಗಸೋತು ಬಂದಿರುವೆ ನಿನ್ನ ಬಳಿಗೀಗಕರುಣೆದೋರು ದಯೆತೋರಿ|| ಓ!ಅನಂತ ಮಹಾಮೌನವೇ!ನಿನ್ನ ಮೌನಗರ್ಭದಲಿ ಮಿಸುಕಾಡುತಿರುವಭಾವಕೂಸುಗಳೆಲ್ಲ ಸುಂದರ ಪದಗಳೇಒಂದೊಂದು ಮೌನ ಮಹಾಕಾವ್ಯಗಳೇ|| ತೀಡಿ ಬಂದ ತಂಗಾಳಿಯುತೂಗಿ ತಂದ ಮಣ್ಣ ಗಂಧವೆಲ್ಲಬಾಳ ಗಂಧವೇlತುಂಬಿ ಬಂದ ತಾಯ್ ಮಮತೆಯೆಲ್ಲಮಡಿಲ ಮಗುವಿಗೆ ಜೋಗುಳವೇ lಮೌನದ ಬಿಸಿ ಅಪ್ಪುಗೆಯದುಸುಂದರ ಭಾಷೆಯೇ ll ಪ್ರಕೃತಿಯ ಭಾಷೆಯೆಲ್ಲವೂ ಮೌನವೇlಮೊಗ್ಗೆಯೊಡೆದು ಅರಳುವ ಅರಳೇ!ಒಲವಿನ ಬೆಳಕೇ!ಸದ್ದಿಲ್ಲದೇ ನಡೆಯುವ ಸಂಭ್ರಮವೇ! ಓ ಮೌನವೇ!ಸೂರ್ಯೋದಯ ಚಂದ್ರೋದಯನಿನ್ನ ಪದ ಲಾಲಿತ್ಯವೇ lದಣಿದ ಮನಗಳಿಗೆ ನಿನ್ನ ಮಡಿಲದುಹೂವಿನ ಹಾಸಿಗೆಯೇ ll ಗಾಳಿಯ ಮೃದು ಸ್ಪರ್ಶಕೆ ತೂಗುವಸಸ್ಯ ಕುಲವೇ ಭೂ ದೇವಿಯ ದಣಿವಿಗೆಬೀಸಿದ ಮೌನ ಚಾಮರವೇ llಅಯ್ಯೋ!ಗಳಿಗೆಗೊಂದು ತೆರೆ ಬಂದುಕಲಕುತಿದೆ ಕಡಲ ಧ್ಯಾನವನೆ lಹಕ್ಕಿಗಳಿಂಚರವದು ತೇಲಿ ಬಂದುಕದಡುತಿದೆ ಅನಂತಕಾಲದ ಬನದ ತಪವನೆ lನೀರವತೆಯಲೂ ಮೌನವೇಸದ್ದಿನಲ್ಲೂ ನಿದ್ದೆಯೇ lಮೌನವೇ ಇದೆಲ್ಲ ನಿನ್ನ ಲೀಲೆಯೇ ll ಋಷಿಮುನಿಗಳ ಕವಿಪುಂಗವರೆದೆಯಲಿವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!ಜಗದ ಸುಂದರ ಭಾಷಿಣಿ ನೀನೆಯೇ llಕರುಣೆದೋರಿ ಬಾ ನನ್ನೊಳಗೆ ತಾಯಿಯೇ lಮೌನದೇವಿಯೇ!ಅನಂತಯಾನಕೆ ಮೌನದಲಿಕೈಹಿಡಿದು ನಡೆಸೆನ್ನನುl ಶರಣಾಗಿರುವೆ ನಾನೀಗ ನಿನಗೆಓ!ಮೌನದೇವತೆಯೇನಾನೀಗ ಶರಣಾಗಿರುವೆ ನಿನ್ನಡಿಗಳಿಗೆಓ!ಮೌನ ದೇವತೆಯೇಶರಣಾಗಿರುವೆ ನಿನಗೀಗ ಶರಣಾಗಿರುವೆ. ಡಾ. ಪುಷ್ಪಾವತಿ ಶಲವಡಿಮಠ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಜಾತಿಭೂತ” ಹಿಡ್ಕೊಂಡದ ಬಡ್ಕೊಂಡದಹಾಳು ಜಾತಿಯ ಭೂತ,ಅದರ ಬೆನ್ನು ಹತ್ತಿ ಹತ್ತಿಯೇಈ ಮನುಷ್ಯಾ ಸೋತ ಮ್ಯಾಲ ಮ್ಯಾಲಂತ ಇವ್ರುತುಂಬಾ ಮೆರಿಲಾಕತ್ತಾರ,ಕೀಳ ಕೀಳ ಅಂತ ಅವ್ರನತುಂಬ ತುಳಿಲಾಕತ್ತಾರ ಖೊಟ್ಟಿ ಮಂದಿ ಎಲ್ಲ ಸೇರಿಗಟ್ಟ್ಯಾನ ಗ್ವಾಡಿ ಕಟ್ಟ್ಯಾರ,ಆರಕ ಜೋತ ಬಿದ್ದ ಮ್ಯಾಲಇದ್ದ ಮೂರನ್ನೂ ಬಿಟ್ಟಾರ ಜಾತಿಯ ಹೆಸರಲ್ಲಿ ಎಷ್ಟೋಜೀವಗಳ ಬಲಿ ಕೊಟ್ಟಾರ,ದೇವ್ರು ದಿಂಡ್ರೆಲ್ಲವು ಕೂಡಜಾತಿಗಿ ಸೇರಿಸಿ ಬಿಟ್ಟಾರ ಭೂಮಿ ಮ್ಯಾಲ ಏನಂತಇಂತವರೆಲ್ಲ ಹುಟ್ಟ್ಯಾರ,ಜಾತಿ ಜಾತಿ ಅಂತಾ ಹೇಳಿಮನುಷ್ಯತ್ವವ ಸುಟ್ಟಾರ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ” Read Post »

You cannot copy content of this page

Scroll to Top